Homeಚಳವಳಿಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

ಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

- Advertisement -
- Advertisement -

ಹೇಳಬೇಕಾದ ಮಾತು
ಗಂಟಲಲ್ಲೇ ಉಳಿದಿದೆ..
ಕಣ್ಣಂಚಿಂದ ಜಾರಿದ ಹನಿಗಳು
ನೆನಪುಗಳ ಒತ್ತರಿಸಿ ತಂದಿವೆ..
ಬರೆದು ಕಳೆದುಕೊಳ್ಳಲಾಗದ ನೋವಿದು..
ಪ್ರಿಯ ಸಂಗಾತಿ,
ಹೀಗೆ ಎದ್ದು ನಡೆದರೆ ಹೇಗೆ?
ನಾವಾದರೂ ಎಳೆಯರು
ಸಹಿಸೋದು ಹೇಗೆ?

ಸುಮಾರು ಒಂಭತ್ತು ವರ್ಷಗಳಿಂದ ಸಹಯಾನದ ಪರಿವಾರದಲ್ಲಿ ಮನೆ ಮಗನಂತೆ ಬೆಳೆದವನು ನಾನು. ವಿಠ್ಠಲ ಸರ್ ಎಂದರೆ ಸದಾ ಅಚ್ಚರಿ ನನಗೆ. ಅವರ ಸಂಘಟನಾ ಶಕ್ತಿ, ಅಪಾರ ಶಿಸ್ತು, ಅಗಾಧ ಓದು ಮತ್ತು ಚಳುವಳಿಯ ಕುಲುಮೆಯಲಿ ಹದಗೊಂಡ ಚಿಂತನೆ, ಆ ಚಿಂತನೆಗಳನ್ನು ತೆರೆದಿಡುವ ಮಾತಿನ ಕೌಶಲ್ಯ, ಎದೆ ತುಂಬಿ ಹಂಚುತ್ತಿದ್ದ ಪ್ರೀತಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಮಹತ್ವ ನೀಡುತ್ತಿದ್ದ ಅವರ ವಿಶಾಲ ಗುಣ ನನ್ನನ್ನು ಸದಾ ಬೆರಗುಗೊಳಿಸುತ್ತಿತ್ತು. ಅವರ ಇನ್ನೊಂದು ವಿಶೇಷತೆಯೆಂದರೆ ಇಷ್ಟೆಲ್ಲಾ ಎತ್ತರಕ್ಕೆ ಬೆಳೆದಿದ್ದರೂ ತಮ್ಮೊಳಗಿನ ಮುಗ್ಧತೆಯನ್ನು ಹಾಗೆಯೇ ಕಾಪಿಟ್ಟುಕೊಂಡು ಬಂದಿದ್ದರು. ಮಕ್ಕಳ ರಜಾ ಶಿಬಿರಗಳಲ್ಲಿ ತಾವೂ ಒಬ್ಬ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತಿದ್ದರು, ನಮ್ಮಂತ ಯುವಜನರೊಡನೆ ಉತ್ಸಾಹದ ಚಿಲುಮೆಯಂತೆ ಬೆರೆತು ಹೋಗುತ್ತಿದ್ದರು. ಅವರ ವಿಧ್ಯಾರ್ಥಿಗಳು ನೆನೆಯುವಂತೆ ಅವರೊಬ್ಬ ಆಪ್ತ ಗೆಳೆಯನಂತಹ ಗುರು. ಸಹಯಾನದ ಅಂಗಳದಲ್ಲಿ ನಾವೆಲ್ಲಾ ಯುವಕರು ನಡುರಾತ್ರಿಯವರೆಗೆ ವಿಠ್ಠಲ ಸರ್ ಸುತ್ತ ಕುಳಿತು ಅವರ ಆಪ್ತವಾದ ಮಾತುಗಳಿಗೆ ಕಿವಿಯಾಗುತ್ತಿದ್ದೆವು. ಅವರೂ ಅಷ್ಟೇ ಆಸಕ್ತಿಯಿಂದ ನಮ್ಮ ಮಾತುಗಳನ್ನ ಆಲಿಸುತ್ತಿದ್ದರು. ಹೀಗೆಲ್ಲಾ ನಮ್ಮ ನಡುವೆ ಚೈತನ್ಯದ ಚಿಲುಮೆಯಂತಿದ್ದ ಅವರು ಈಗ ಇಲ್ಲವೆಂಬುದನ್ನ ಮನಸ್ಸು ಒಪ್ಪುತ್ತಲೇ ಇಲ್ಲ!

ವಿಠ್ಠಲ ಸರ್ ಅಗಲುವಿಕೆಯಿಂದ ನಿಜಕ್ಕೂ ತುಂಬಲಾರದ ನಷ್ಟವಾದದ್ದು ಹೊಸ ತಲೆಮಾರಿಗೆ. ಬಹುಶಃ ಇವರಷ್ಟು ಹೊಸ ತಲೆಮಾರನ್ನು ಪ್ರೀತಿಸಿದ, ಭರವಸೆ ಇಟ್ಟ ಮತ್ತು ಅವರಿಗಾಗಿ ಶ್ರಮಿಸಿದ ಮತ್ತೊಬ್ಬ ಸಂಘಟಕರನ್ನು ಕಾಣುವುದು ಕಷ್ಟ. ಸಹಯಾನದ ವೇದಿಕೆಯಲ್ಲಿ ನಡೆವ ಪ್ರತಿಯೊಂದು ಕಾರ್ಯಕ್ರಮವೂ ಹೊಸ ತಲೆಮಾರನ್ನು, ವಿಧ್ಯಾರ್ಥಿಗಳನ್ನು, ಮಕ್ಕಳನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡೇ ನಡೆಯುತ್ತಿದ್ದವು. ಸಂವಿಧಾನ ಓದು ಎಂಬ ಚಳುವಳಿ ರೂಪದ ಅಭಿಯಾನವೂ ಕೂಡ ರಾಜ್ಯದ ಮೂಲೆ ಮೂಲೆ ಸಂಚರಿಸಿ ಲಕ್ಷಾಂತರ ವಿಧ್ಯಾರ್ಥಿಗಳನ್ನು ತಲುಪಲು ಸಾಧ್ಯವಾದದ್ದು ಕೂಡ, ಅವರ ಹೊಸತಲೆಮಾರಿನ ಬಗೆಗಿನ ಅಗಾಧವಾದ ಕಾಳಜಿಯಿಂದಲೇ. ಅಧ್ಯಯನ ಶಿಬಿರಗಳಲ್ಲಿ ಯುವಜನರು ವಿಠ್ಠಲ ಸರ್ ಮಾತುಗಳನ್ನು ಗಂಟೆಗಟ್ಟಲೆ ಆಲಿಸುತ್ತಿದ್ದರು, ಅಪಾರ ಒಳನೋಟಗಳನ್ನು ತೆರೆದಿಡುತ್ತಿದ್ದ ಅವರ ಮಾತುಗಳಲ್ಲಿ ಯುವಜನರು ತಮ್ಮ ವೈಚಾರಿಕತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದರು. ತಾವು ಸಾಗಬೇಕಾದ ದಾರಿಯನ್ನು ನಿಚ್ಚಳಗೊಳಿಸಿಕೊಳ್ಳುತ್ತಿದ್ದರು. ನನ್ನನ್ನು ಸೇರಿ ಅವರಿಂದ ಪ್ರಭಾವಿತರಾದ ದೊಡ್ಡ ಯುವಸಮುದಾಯವೇ ಈ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹರಡಿಕೊಂಡಿವೆ. ಮುಂದೆ ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಕೂಡ ಈ ಹೊಸತಲೆಮಾರಿನ ಮೇಲಿದೆ.

ಮೂಲ ಸೌಕರ್ಯಗಳೇ ತಲುಪಿರದ ಕೆರೆಕೋಣದಂತಹ ಒಂದು ಪುಟ್ಟ ಹಳ್ಳಿಯಲ್ಲಿ, ಸಹಯಾನವನ್ನು ಚಳುವಳಿಯ ರೂಪದಲ್ಲಿ ಹುಟ್ಟುಹಾಕಿ, ಇಂದಿಗೆ ಅದು ರಾಜ್ಯದಲ್ಲೇ ಮಾದರಿಯಾಗಬಲ್ಲ ಒಂದು ಸಂಘಟನೆಯಾಗಿ ರೂಪುಗೊಳ್ಳುವಲ್ಲಿ ವಿಠ್ಠಲ್ ಭಂಡಾರಿಯವರ ಶ್ರಮ, ದೂರದೃಷ್ಟಿ ಮತ್ತು ಪ್ರಖರ ಚಿಂತನೆಗಳ ದೊಡ್ಡ ಕೊಡುಗೆಯೇ ಇದೆ. ಜೊತೆ ಜೊತೆಗೆ ಚಿಂತನ, ಸಮುದಾಯ, ಬಂಡಾಯ, ಸಂಘಟನೆ, ಸಂವಿಧಾನ ಓದು ಹೀಗೇ ಬೇರೇ ಬೇರೆ ರಾಜ್ಯಮಟ್ಟದ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ವಿಠ್ಠಲ್ ಸರ್ ತಮ್ಮದೇ ಆದ ಸಂಘಟನಾ ಕೌಶಲ್ಯದಿಂದ ಆ ಎಲ್ಲಾ ಸಂಘಟನೆಗಳಲ್ಲೂ ಮಹತ್ವದ ಒಡನಾಡಿಯಾಗಿದ್ದರು. ಆ ನಿಟ್ಟಿನಲ್ಲಿ ಅವರ ಅಗಲುವಿಕೆ ಈ ರಾಜ್ಯದ ಒಟ್ಟಾರೆ ಪ್ರಗತಿಪರ, ಜನಪರ ಚಳುವಳಿಗೆ ದೊಡ್ಡ ಹಿನ್ನೆಡೆಯೇ ಹೌದು.

ಇತ್ತೀಚಿನ ಎರಡು ಮೂರು ವರುಷಗಳಲ್ಲಿ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ತೀವ್ರವಾಗಿ ವಿರಾಮವೇ ಇಲ್ಲದೆ ತೊಡಗಿಸಿಕೊಂಡಿದ್ದರು. ದಣಿವರಿಯದೇ ದುಡಿಯುತ್ತಿದ್ದ ಅವರನ್ನ ಈಗ ನೆನೆದರೆ ಬಹುಶಃ ಈ ಅವಸರದ ಅರಿವಿದ್ದೇ ಎಲ್ಲವನ್ನೂ ತ್ವರಿತವಾಗಿ ಕೈಗೊಳ್ಳುತ್ತಿದರೋ ಎಂಬಂತೆ ಭಾಸವಾಗುತ್ತದೆ. ಕಳೆದ ಕೆಲವು ದಿನಗಳವರೆಗೂ ಅವರು ಸಹಯಾನದಲ್ಲಿ ಹೊಸ ಬರಹಗಾರರಿಗಾಗಿ ಕಾವ್ಯ ಕಮ್ಮಟವನ್ನು ಏರ್ಪಡಿಸುವ ಕುರಿತು ಹಾಗೂ ಮುಂದಿನ ಸಹಯಾನ ಸಾಹಿತ್ಯೋತ್ಸವವನ್ನು ಉತ್ತರ ಕನ್ನಡ ಜಿಲ್ಲೆಯ ಯುವ ಬರಹಗಾರರನ್ನು ಕೇಂದ್ರವಾಗಿರಿಸಿಕೊಂಡೇ ಹಮ್ಮಿಕೊಳ್ಳುವ ಕುರಿತು ಸಾಕಷ್ಟು ಯೋಜನೆಗಳನ್ನ ಹಂಚಿಕೊಂಡಿದ್ದರು. ಆ ಕೆಲಸಗಳಿಗಾಗಿ ತಯಾರಿಯನ್ನೂ ಮಾಡಿಕೊಳ್ಳೋಣ ಎಂದು ನನ್ನೊಡನೆ ಮಾತನಾಡಿದ್ದು ಈಗ ಮಾಸದ ನೆನಪು.

ಎಡಪಂಥೀಯ ಚಳುವಳಿಗೆ ಒಂದು ಸಶಕ್ತ ಮಾಧ್ಯಮ ಬೇಕು, ಸುಳ್ಳನ್ನೇ ಭಿತ್ತರಿಸುವ, ಆಡಳಿತದ ಪರವಾಗಿ ವಕಾಲತ್ತು ವಹಿಸುವ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಜನಪರವಾಗಿರುವ ಒಂದು ಮಾಧ್ಯಮವನ್ನ ಹುಟ್ಟು ಹಾಕಬೇಕೆಂಬುದೂ ಅವರ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಜನಶಕ್ತಿ ಮೀಡಿಯಾ ಆರಂಭವಾದಾಗ ಅಲ್ಲಿ ತಮ್ಮ ಕನಸಿನ ‘ವಾರದ ಕವಿತೆ’, ‘ಪಿಚ್ಚರ್ ಪಯಣ’ದಂತಹ ಅಂಕಣಗಳನ್ನು ನಿರಂತರವಾಗಿ ಪ್ರಕಟಿಸಲು ಸಾಕಷ್ಟು ಪರಿಶ್ರಮವಹಿಸಿದ್ದರು.

ಹೀಗೇ ಅವಿರತವಾಗಿ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ವಿಠ್ಠಲ್ ಸರ್ ಅಗಲುವಿಕೆ ದೊಡ್ಡ ಆಘಾತ. ಇದು ಖಾಲಿತನವನ್ನ ಸೃಷ್ಟಿಸಿದೆ. ಆದರೆ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತಿದ್ದರೂ ಸಹ ತಮ್ಮ ಜೊತೆಗೆ ಅಷ್ಟೇ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಒಂದು ದೊಡ್ಡ ಪಡೆಯನ್ನೇ ಸೃಷ್ಟಿಸಿದ್ದಾರೆ ಕೂಡ. ತಾವೆಂದೂ ಏಕಪಕ್ಷೀಯವಾಗಿರದೆ ಎಲ್ಲರನ್ನೂ ಒಳಗೊಳ್ಳುತ್ತಾ, ಹೊಸ ತಲೆಮಾರಿನ ಲೇಖಕರನ್ನು, ಕಲಾವಿದರನ್ನು, ಸಂಘಟಕರನ್ನು ಮುನ್ನೆಲೆಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.. ಅಪಾರ ಸಂಖ್ಯೆಯ ವಿಧ್ಯಾರ್ಥಿಗಳನ್ನ ಪ್ರಭಾವಿಸಿದ ನೆಚ್ಚಿನ ಗುರು ಅವರು. ಹಾಗಾಗಿ ಅಪೂರ್ಣವಾಗಿರುವ ವಿಠ್ಠಲ್ ಸರ್ ಯೋಜನೆಗಳನ್ನು, ಶೋಷಣೆಯಿರದ ಸಮಸಮಾಜದ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಯಶಸ್ವಿಗೊಳಿಸಲು ಈ ಪಡೆಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂಬುದೂ ಕೂಡ ಅಷ್ಟೇ ಸತ್ಯದ ಸಂಗತಿ.

ಸಹಪಯಣವನ್ನು ಮುಂದುವರೆಸೋಣ. ವಿಠ್ಠಲ್ ಸರ್ ಎಂಬ ದಣಿವರಿಯದ ಕ್ರಾಂತಿಯೋಧನನ್ನ ಸದಾ ನಮ್ಮೊಳಗೆ ಜೀವಂತವಾಗಿರಿಸಿಕೊಳ್ಳೋಣ, ಅವರ ಚಿಂತನೆಗಳನ್ನು ಈ ನೆಲದ ಉದ್ದಗಲಕ್ಕೂ ಬಿತ್ತೋಣ…

ಕ್ರಾಂತಿ ಚಿರಾಯುವಾಗಲಿ. ಕಾಮ್ರೇಡ್ ವಿಠ್ಠಲ್ ಭಂಡಾರಿ ಲಾಲ್ ಸಲಾಮ್.


ಇದನ್ನೂ ಓದಿ:  ಕೊರೊನಾ ವೈಫಲ್ಯ: ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರ ತಲೆದಂಡ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...