Homeಚಳವಳಿಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

ಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

- Advertisement -
- Advertisement -

ಹೇಳಬೇಕಾದ ಮಾತು
ಗಂಟಲಲ್ಲೇ ಉಳಿದಿದೆ..
ಕಣ್ಣಂಚಿಂದ ಜಾರಿದ ಹನಿಗಳು
ನೆನಪುಗಳ ಒತ್ತರಿಸಿ ತಂದಿವೆ..
ಬರೆದು ಕಳೆದುಕೊಳ್ಳಲಾಗದ ನೋವಿದು..
ಪ್ರಿಯ ಸಂಗಾತಿ,
ಹೀಗೆ ಎದ್ದು ನಡೆದರೆ ಹೇಗೆ?
ನಾವಾದರೂ ಎಳೆಯರು
ಸಹಿಸೋದು ಹೇಗೆ?

ಸುಮಾರು ಒಂಭತ್ತು ವರ್ಷಗಳಿಂದ ಸಹಯಾನದ ಪರಿವಾರದಲ್ಲಿ ಮನೆ ಮಗನಂತೆ ಬೆಳೆದವನು ನಾನು. ವಿಠ್ಠಲ ಸರ್ ಎಂದರೆ ಸದಾ ಅಚ್ಚರಿ ನನಗೆ. ಅವರ ಸಂಘಟನಾ ಶಕ್ತಿ, ಅಪಾರ ಶಿಸ್ತು, ಅಗಾಧ ಓದು ಮತ್ತು ಚಳುವಳಿಯ ಕುಲುಮೆಯಲಿ ಹದಗೊಂಡ ಚಿಂತನೆ, ಆ ಚಿಂತನೆಗಳನ್ನು ತೆರೆದಿಡುವ ಮಾತಿನ ಕೌಶಲ್ಯ, ಎದೆ ತುಂಬಿ ಹಂಚುತ್ತಿದ್ದ ಪ್ರೀತಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಮಹತ್ವ ನೀಡುತ್ತಿದ್ದ ಅವರ ವಿಶಾಲ ಗುಣ ನನ್ನನ್ನು ಸದಾ ಬೆರಗುಗೊಳಿಸುತ್ತಿತ್ತು. ಅವರ ಇನ್ನೊಂದು ವಿಶೇಷತೆಯೆಂದರೆ ಇಷ್ಟೆಲ್ಲಾ ಎತ್ತರಕ್ಕೆ ಬೆಳೆದಿದ್ದರೂ ತಮ್ಮೊಳಗಿನ ಮುಗ್ಧತೆಯನ್ನು ಹಾಗೆಯೇ ಕಾಪಿಟ್ಟುಕೊಂಡು ಬಂದಿದ್ದರು. ಮಕ್ಕಳ ರಜಾ ಶಿಬಿರಗಳಲ್ಲಿ ತಾವೂ ಒಬ್ಬ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತಿದ್ದರು, ನಮ್ಮಂತ ಯುವಜನರೊಡನೆ ಉತ್ಸಾಹದ ಚಿಲುಮೆಯಂತೆ ಬೆರೆತು ಹೋಗುತ್ತಿದ್ದರು. ಅವರ ವಿಧ್ಯಾರ್ಥಿಗಳು ನೆನೆಯುವಂತೆ ಅವರೊಬ್ಬ ಆಪ್ತ ಗೆಳೆಯನಂತಹ ಗುರು. ಸಹಯಾನದ ಅಂಗಳದಲ್ಲಿ ನಾವೆಲ್ಲಾ ಯುವಕರು ನಡುರಾತ್ರಿಯವರೆಗೆ ವಿಠ್ಠಲ ಸರ್ ಸುತ್ತ ಕುಳಿತು ಅವರ ಆಪ್ತವಾದ ಮಾತುಗಳಿಗೆ ಕಿವಿಯಾಗುತ್ತಿದ್ದೆವು. ಅವರೂ ಅಷ್ಟೇ ಆಸಕ್ತಿಯಿಂದ ನಮ್ಮ ಮಾತುಗಳನ್ನ ಆಲಿಸುತ್ತಿದ್ದರು. ಹೀಗೆಲ್ಲಾ ನಮ್ಮ ನಡುವೆ ಚೈತನ್ಯದ ಚಿಲುಮೆಯಂತಿದ್ದ ಅವರು ಈಗ ಇಲ್ಲವೆಂಬುದನ್ನ ಮನಸ್ಸು ಒಪ್ಪುತ್ತಲೇ ಇಲ್ಲ!

ವಿಠ್ಠಲ ಸರ್ ಅಗಲುವಿಕೆಯಿಂದ ನಿಜಕ್ಕೂ ತುಂಬಲಾರದ ನಷ್ಟವಾದದ್ದು ಹೊಸ ತಲೆಮಾರಿಗೆ. ಬಹುಶಃ ಇವರಷ್ಟು ಹೊಸ ತಲೆಮಾರನ್ನು ಪ್ರೀತಿಸಿದ, ಭರವಸೆ ಇಟ್ಟ ಮತ್ತು ಅವರಿಗಾಗಿ ಶ್ರಮಿಸಿದ ಮತ್ತೊಬ್ಬ ಸಂಘಟಕರನ್ನು ಕಾಣುವುದು ಕಷ್ಟ. ಸಹಯಾನದ ವೇದಿಕೆಯಲ್ಲಿ ನಡೆವ ಪ್ರತಿಯೊಂದು ಕಾರ್ಯಕ್ರಮವೂ ಹೊಸ ತಲೆಮಾರನ್ನು, ವಿಧ್ಯಾರ್ಥಿಗಳನ್ನು, ಮಕ್ಕಳನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡೇ ನಡೆಯುತ್ತಿದ್ದವು. ಸಂವಿಧಾನ ಓದು ಎಂಬ ಚಳುವಳಿ ರೂಪದ ಅಭಿಯಾನವೂ ಕೂಡ ರಾಜ್ಯದ ಮೂಲೆ ಮೂಲೆ ಸಂಚರಿಸಿ ಲಕ್ಷಾಂತರ ವಿಧ್ಯಾರ್ಥಿಗಳನ್ನು ತಲುಪಲು ಸಾಧ್ಯವಾದದ್ದು ಕೂಡ, ಅವರ ಹೊಸತಲೆಮಾರಿನ ಬಗೆಗಿನ ಅಗಾಧವಾದ ಕಾಳಜಿಯಿಂದಲೇ. ಅಧ್ಯಯನ ಶಿಬಿರಗಳಲ್ಲಿ ಯುವಜನರು ವಿಠ್ಠಲ ಸರ್ ಮಾತುಗಳನ್ನು ಗಂಟೆಗಟ್ಟಲೆ ಆಲಿಸುತ್ತಿದ್ದರು, ಅಪಾರ ಒಳನೋಟಗಳನ್ನು ತೆರೆದಿಡುತ್ತಿದ್ದ ಅವರ ಮಾತುಗಳಲ್ಲಿ ಯುವಜನರು ತಮ್ಮ ವೈಚಾರಿಕತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದರು. ತಾವು ಸಾಗಬೇಕಾದ ದಾರಿಯನ್ನು ನಿಚ್ಚಳಗೊಳಿಸಿಕೊಳ್ಳುತ್ತಿದ್ದರು. ನನ್ನನ್ನು ಸೇರಿ ಅವರಿಂದ ಪ್ರಭಾವಿತರಾದ ದೊಡ್ಡ ಯುವಸಮುದಾಯವೇ ಈ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹರಡಿಕೊಂಡಿವೆ. ಮುಂದೆ ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಕೂಡ ಈ ಹೊಸತಲೆಮಾರಿನ ಮೇಲಿದೆ.

ಮೂಲ ಸೌಕರ್ಯಗಳೇ ತಲುಪಿರದ ಕೆರೆಕೋಣದಂತಹ ಒಂದು ಪುಟ್ಟ ಹಳ್ಳಿಯಲ್ಲಿ, ಸಹಯಾನವನ್ನು ಚಳುವಳಿಯ ರೂಪದಲ್ಲಿ ಹುಟ್ಟುಹಾಕಿ, ಇಂದಿಗೆ ಅದು ರಾಜ್ಯದಲ್ಲೇ ಮಾದರಿಯಾಗಬಲ್ಲ ಒಂದು ಸಂಘಟನೆಯಾಗಿ ರೂಪುಗೊಳ್ಳುವಲ್ಲಿ ವಿಠ್ಠಲ್ ಭಂಡಾರಿಯವರ ಶ್ರಮ, ದೂರದೃಷ್ಟಿ ಮತ್ತು ಪ್ರಖರ ಚಿಂತನೆಗಳ ದೊಡ್ಡ ಕೊಡುಗೆಯೇ ಇದೆ. ಜೊತೆ ಜೊತೆಗೆ ಚಿಂತನ, ಸಮುದಾಯ, ಬಂಡಾಯ, ಸಂಘಟನೆ, ಸಂವಿಧಾನ ಓದು ಹೀಗೇ ಬೇರೇ ಬೇರೆ ರಾಜ್ಯಮಟ್ಟದ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ವಿಠ್ಠಲ್ ಸರ್ ತಮ್ಮದೇ ಆದ ಸಂಘಟನಾ ಕೌಶಲ್ಯದಿಂದ ಆ ಎಲ್ಲಾ ಸಂಘಟನೆಗಳಲ್ಲೂ ಮಹತ್ವದ ಒಡನಾಡಿಯಾಗಿದ್ದರು. ಆ ನಿಟ್ಟಿನಲ್ಲಿ ಅವರ ಅಗಲುವಿಕೆ ಈ ರಾಜ್ಯದ ಒಟ್ಟಾರೆ ಪ್ರಗತಿಪರ, ಜನಪರ ಚಳುವಳಿಗೆ ದೊಡ್ಡ ಹಿನ್ನೆಡೆಯೇ ಹೌದು.

ಇತ್ತೀಚಿನ ಎರಡು ಮೂರು ವರುಷಗಳಲ್ಲಿ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ತೀವ್ರವಾಗಿ ವಿರಾಮವೇ ಇಲ್ಲದೆ ತೊಡಗಿಸಿಕೊಂಡಿದ್ದರು. ದಣಿವರಿಯದೇ ದುಡಿಯುತ್ತಿದ್ದ ಅವರನ್ನ ಈಗ ನೆನೆದರೆ ಬಹುಶಃ ಈ ಅವಸರದ ಅರಿವಿದ್ದೇ ಎಲ್ಲವನ್ನೂ ತ್ವರಿತವಾಗಿ ಕೈಗೊಳ್ಳುತ್ತಿದರೋ ಎಂಬಂತೆ ಭಾಸವಾಗುತ್ತದೆ. ಕಳೆದ ಕೆಲವು ದಿನಗಳವರೆಗೂ ಅವರು ಸಹಯಾನದಲ್ಲಿ ಹೊಸ ಬರಹಗಾರರಿಗಾಗಿ ಕಾವ್ಯ ಕಮ್ಮಟವನ್ನು ಏರ್ಪಡಿಸುವ ಕುರಿತು ಹಾಗೂ ಮುಂದಿನ ಸಹಯಾನ ಸಾಹಿತ್ಯೋತ್ಸವವನ್ನು ಉತ್ತರ ಕನ್ನಡ ಜಿಲ್ಲೆಯ ಯುವ ಬರಹಗಾರರನ್ನು ಕೇಂದ್ರವಾಗಿರಿಸಿಕೊಂಡೇ ಹಮ್ಮಿಕೊಳ್ಳುವ ಕುರಿತು ಸಾಕಷ್ಟು ಯೋಜನೆಗಳನ್ನ ಹಂಚಿಕೊಂಡಿದ್ದರು. ಆ ಕೆಲಸಗಳಿಗಾಗಿ ತಯಾರಿಯನ್ನೂ ಮಾಡಿಕೊಳ್ಳೋಣ ಎಂದು ನನ್ನೊಡನೆ ಮಾತನಾಡಿದ್ದು ಈಗ ಮಾಸದ ನೆನಪು.

ಎಡಪಂಥೀಯ ಚಳುವಳಿಗೆ ಒಂದು ಸಶಕ್ತ ಮಾಧ್ಯಮ ಬೇಕು, ಸುಳ್ಳನ್ನೇ ಭಿತ್ತರಿಸುವ, ಆಡಳಿತದ ಪರವಾಗಿ ವಕಾಲತ್ತು ವಹಿಸುವ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಜನಪರವಾಗಿರುವ ಒಂದು ಮಾಧ್ಯಮವನ್ನ ಹುಟ್ಟು ಹಾಕಬೇಕೆಂಬುದೂ ಅವರ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಜನಶಕ್ತಿ ಮೀಡಿಯಾ ಆರಂಭವಾದಾಗ ಅಲ್ಲಿ ತಮ್ಮ ಕನಸಿನ ‘ವಾರದ ಕವಿತೆ’, ‘ಪಿಚ್ಚರ್ ಪಯಣ’ದಂತಹ ಅಂಕಣಗಳನ್ನು ನಿರಂತರವಾಗಿ ಪ್ರಕಟಿಸಲು ಸಾಕಷ್ಟು ಪರಿಶ್ರಮವಹಿಸಿದ್ದರು.

ಹೀಗೇ ಅವಿರತವಾಗಿ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ವಿಠ್ಠಲ್ ಸರ್ ಅಗಲುವಿಕೆ ದೊಡ್ಡ ಆಘಾತ. ಇದು ಖಾಲಿತನವನ್ನ ಸೃಷ್ಟಿಸಿದೆ. ಆದರೆ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತಿದ್ದರೂ ಸಹ ತಮ್ಮ ಜೊತೆಗೆ ಅಷ್ಟೇ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಒಂದು ದೊಡ್ಡ ಪಡೆಯನ್ನೇ ಸೃಷ್ಟಿಸಿದ್ದಾರೆ ಕೂಡ. ತಾವೆಂದೂ ಏಕಪಕ್ಷೀಯವಾಗಿರದೆ ಎಲ್ಲರನ್ನೂ ಒಳಗೊಳ್ಳುತ್ತಾ, ಹೊಸ ತಲೆಮಾರಿನ ಲೇಖಕರನ್ನು, ಕಲಾವಿದರನ್ನು, ಸಂಘಟಕರನ್ನು ಮುನ್ನೆಲೆಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.. ಅಪಾರ ಸಂಖ್ಯೆಯ ವಿಧ್ಯಾರ್ಥಿಗಳನ್ನ ಪ್ರಭಾವಿಸಿದ ನೆಚ್ಚಿನ ಗುರು ಅವರು. ಹಾಗಾಗಿ ಅಪೂರ್ಣವಾಗಿರುವ ವಿಠ್ಠಲ್ ಸರ್ ಯೋಜನೆಗಳನ್ನು, ಶೋಷಣೆಯಿರದ ಸಮಸಮಾಜದ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಯಶಸ್ವಿಗೊಳಿಸಲು ಈ ಪಡೆಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂಬುದೂ ಕೂಡ ಅಷ್ಟೇ ಸತ್ಯದ ಸಂಗತಿ.

ಸಹಪಯಣವನ್ನು ಮುಂದುವರೆಸೋಣ. ವಿಠ್ಠಲ್ ಸರ್ ಎಂಬ ದಣಿವರಿಯದ ಕ್ರಾಂತಿಯೋಧನನ್ನ ಸದಾ ನಮ್ಮೊಳಗೆ ಜೀವಂತವಾಗಿರಿಸಿಕೊಳ್ಳೋಣ, ಅವರ ಚಿಂತನೆಗಳನ್ನು ಈ ನೆಲದ ಉದ್ದಗಲಕ್ಕೂ ಬಿತ್ತೋಣ…

ಕ್ರಾಂತಿ ಚಿರಾಯುವಾಗಲಿ. ಕಾಮ್ರೇಡ್ ವಿಠ್ಠಲ್ ಭಂಡಾರಿ ಲಾಲ್ ಸಲಾಮ್.


ಇದನ್ನೂ ಓದಿ:  ಕೊರೊನಾ ವೈಫಲ್ಯ: ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರ ತಲೆದಂಡ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...