Homeಅಂತರಾಷ್ಟ್ರೀಯಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

ಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

- Advertisement -
- Advertisement -

ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ದೀರ್ಘಕಾಲದ ಸಂಘರ್ಷ ಸದ್ಯಕ್ಕೆ ಒಂದು ಶಾಂತಿಯುತ ನಿಲುಗಡೆಗೆ ಬಂದಿದೆ. ಆದರೆ ಎರಡು ನೆರೆ ಹೊರೆಯ ದೇಶಗಳ ನಡುವಿನ ಅಸ್ತಿತ್ವದ ಈ ಹೋರಾಟ ಬೂದಿ ಮುಚ್ಚಿದ ಕೆಂಡವಿದ್ದಂತೆ. ಮತ್ತೆ ಯಾವಾಗ ಬೇಕಿದ್ದರೂ ಬಿಕ್ಕಟ್ಟು ಉಲ್ಬಣಿಸಿ ಪರಸ್ಪರ ಕಚ್ಚಾಟಗಳಿಗೆ ಮತ್ತು ಅಮಾಯಕರ ಸಾವಿಗೆ ಕಾರಣವಾಗಬಹುದು.

ವಿಶ್ವಸಂಸ್ಥೆ ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ಸಂಬಂಧವನ್ನು ಸರಿಪಡಿಸಲು ಇದುವರೆಗೆ ಹಲವು ಸುತ್ತಿನ ಮಾತುಕತೆಯನ್ನು ಮತ್ತು ಸಂಧಾನ ಯತ್ನವನ್ನು ನಡೆಸಿವೆ. ಆದರೆ ಯಾವ ಪ್ರಯತ್ನಗಳೂ ಇದುವರೆಗೆ ಸಫಲವಾಗಿಲ್ಲ. ಇದರ ನಡುವೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ಯಾಲಿಸ್ತೇನ್ ಮೇಲೆ ನಡೆದ ಇಸ್ರೇಲ್ ಧಾಳಿಯಲ್ಲಿ ಸಾವಿರಾರು ಪ್ಯಾಲಿಸ್ತೇನಿಗಳ ಮಾನವ ಹಕ್ಕನ್ನು ನಿಗ್ರಹಿಸಲಾಗಿದೆ ಎಂಬ ರೆಸಲ್ಯೂಶನ್ ಒಂದನ್ನು  ಮಂಡಿಸಲಾಗಿದ್ದು 24 ರಲ್ಲಿ 15 ಪರವಾದ ಮತಗಳಿಂದ ಈ ರೆಸಲ್ಯೂಶನ್ ಅಂಗೀಕಾರಗೊಂಡಿದೆ. ಆದರೆ ಭಾರತ ಮಾನವ ಹಕ್ಕುಗಳ ಆಯೋಗದ ಈ ರೆಸಲ್ಯೂಶನ್ ಪ್ರಕ್ರಿಯೆಗೆ ಗೈರು ಹಾಜರಾಗುವ ಮೂಲಕ ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವವಾದ ಬದಲಾವಣೆಗಳಾಗಿರುವ ಕುರಿತು ಅನುಮಾನ ಮೂಡಿಸಿದೆ.

ಭಾರತದ ಗೈರು ಹಾಜರಾತಿಯ ಸಂಬಂಧ ಪ್ಯಾಲಿಸ್ತೇನ್ ನ ವಿದೇಶಾಂಗ ಮಂತ್ರಿ ರೈದ್ ಮಲ್ಕಿ ಭಾರತದ ವಿದೇಶಾಂಗ ಮಂತ್ರಿ  ಎಸ್. ಜೈಶಂಕರ್ ಅವರಿಗೆ ವಿಷಾದದ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ “ಭಾರತ ಗಣತಂತ್ರವು  ದೀರ್ಘಾವಧಿಯ ಮತ್ತು ಬಹು ಮುಖ್ಯವಾದ ಒಂದು ಸಂದರ್ಭದಲ್ಲಿ ನ್ಯಾಯ ಮತ್ತು ಶಾಂತಿಯ ಸಲುವಾಗಿ ಅಂತರಾಷ್ಟ್ರೀಯ ಸಮುದಾಯದ ಜೊತೆ ನಿಲ್ಲುವ ಅವಕಾಶನ್ನು ಕಳೆದುಕೊಂಡಿದೆ” ಎನ್ನುವ ಮೂಲಕ ಭಾರತದ ಇಂದಿನ ನಡೆ ದೀರ್ಘಾವಧಿಯ ಭಾರತ ಪ್ಯಾಲಿಸ್ತೇನ್ ಸಂಬಂಧವನ್ನು ದುರ್ಬಲಗೊಳಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಈ ರೆಸಲ್ಯೂಶನ್ ಬಹುರಾಷ್ಟ್ರಗಳ ವ್ಯಾಪಕ ಮಾತುಕತೆಯ ಫಲವಾಗಿ ಹುಟ್ಟಿಕೊಂಡಿದೆ. ಈ ರೆಸಲ್ಯೂಶನ್ ನಲ್ಲಿ ಭಾರತದ ಗೈರು ಹಾಜರಾತಿ ಪ್ಯಾಲಿಸ್ತೇನಿಯರ ಮತ್ತು ಜಗತ್ತಿನ ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ  ಮಹತ್ವದ ಪ್ರಕ್ರಿಯೆಯನ್ನು ನಿಗ್ರಹಿಸುವಂತಹ ನಡೆಯಾಗಿದೆ ಎಂದು ರೈದ್ ಮಲ್ಕಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಶ್ವ ಮಾನವ ಹಕ್ಕುಗಳ ಆಯೋಗ ಕೈಗೊಂಡ ಈ ರೆಸಲ್ಯೂಶನ್ ಇಸ್ರೇಲ್ ನಡೆಸಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯ ತನಿಖೆ ನಡೆಸಲು ದಾರಿ ಮಾಡಿಕೊಡುವ ಪ್ರಯತ್ನವಾಗಿದೆ. ಇದುವರೆಗೆ ಇಸ್ರೇಲ್ ಪ್ಯಾಲಿಸ್ತೇನ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾವುದೇ ಸ್ವತಂತ್ರ ತನಿಖಾ ಆಯೋಗದಿಂದ ಅವಕಾಶ ನೀಡಿಲ್ಲ. ಹೊಸ ರೆಸಲ್ಯೂಶನ್ ಇಸ್ರೇಲ್ ನಡೆಸುತ್ತಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಕುರಿತಾಗಿ ಸ್ವತಂತ್ರ ನಿಯೋಗದಿಂದ ತನಿಖೆಗೆ ಇಸ್ರೇಲ್ ಮೇಲೆ ಒತ್ತಡ ಹೇರಲಿದೆ.

ಭಾರತದ ಬೆಂಬಲ ಸಂಪೂರ್ಣ ಇಸ್ರೇಲ್ ಕಡೆ ವಾಲಿದೆಯೇ? 

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ ಅಲ್ ಅಕ್ಸಾ ಮಸೀದಿಯ ಮೇಲೆ ರಂಜಾನ್ ಪ್ರಾರ್ಥನೆಯ ವೇಳೆ ಇಸ್ರೇಲ್  ಅತಿಕ್ರಮವಾದ ಒತ್ತುವರಿಯನ್ನು ಮಾಡಲು ಮುಂದಾಗಿದ್ದೇ ಈ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ  ಭಂಗಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. ಆದರೆ 3 ದಿನಗಳ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ (General Assembly) ಯಲ್ಲಿ ಭಾರತ ಭದ್ರತಾ ಮಂಡಳಿಯಲ್ಲಿ ಹೇಳಿದ ಈ ಹೇಳಿಕೆಯನ್ನು ಹಿಂಪಡೆದಿದೆ. ಮತ್ತು ಸಾಮಾನ್ಯ ಸಭೆಯಲ್ಲಿ ಭಾರತ ಪ್ಯಾಲಿಸ್ತೇನಿಯರಿಗೆ ಕೇವಲ ಸಿಂಪತಿಯನ್ನು ಅಷ್ಟೇ ವ್ಯಕ್ತಪಡಿಸಿದೆ.

ಪ್ಯಾಲಿಸ್ತೇನ್ ಗೆ ತನ್ನ ಪ್ರಬಲ ಬೆಂಬಲ ಮತ್ತು ತನ್ನ ದೀರ್ಘಕಾಲದ ನಿಲುವು ‘ಎರಡು ದೇಶ ನೀತಿ’  ಬದ್ಧತೆಯನ್ನು ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೇಳಿತ್ತು. ಆದರೆ ತನ್ನ ಈ ನಿಲುವನ್ನು ಭಾರತ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬದಲಾಯಿಸಿದೆ.

ಇಸ್ರೇಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ನರ್ಸ್‌ ಸೌಮ್ಯ ಸಂತೋಶ್‌ ಹಮಾಸ್‌ ರಾಕೇಟ್‌ ದಾಳಿಗೆ ಮೃತಪಟ್ಟಿದ್ದಾರೆ. ಅವರ ಸಾವಿಗೆ ವಿಷಾಧ ವ್ಯಕ್ತಪಡಿಸಿದೆಯಷ್ಟೇ. ಆದರೆ ಇಸ್ರೇಲ್‌ ಪ್ಯಾಲಿಸ್ತೇನ್‌ ಮೇಲೆ ನಡೆಸಿದ ವ್ಯವಸ್ಥಿತ ಮಿಲಿಟರಿ ದಾಲಿಯ ಬಗ್ಗೆ ಭಾರತ ಯಾವುದೇ ಆಕ್ಷೇಪವನ್ನಾಗಲಿ ತನ್ನ ನಿಲುವನ್ನಾಗಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿಲ್ಲ. ಇದರಿಂದ ಭಾರತ ಇಷ್ಟು ದಿನ ವಿಶ್ವ ಸಂಸ್ಥೆಯಲ್ಲಿ ಪ್ಯಾಲಿಸ್ತೇನ್‌ ಗೆ ನೀಡಿದ್ದ ಬೆಂಬಲವನ್ನು ಮುಂದುವರೆಸಿಲ್ಲ. ಬದಲಾಗಿ ಈಗ ಭಾರತದ ಆದ್ಯತೆ ಇಸ್ರೇಲ್‌ ಕಡೆಗೆ ಹೊರಳಿರುವುದು ವಿಶ್ವ ಸಂಸ್ಥೆಯಲ್ಲಿ ಬಹಿರಂಗವಾಗಿದೆ.

ಪ್ಯಾಲಿಸ್ತೇನ್‌ ನೊಂದಿಗೆ ಇಸ್ರೇಲ್‌ ನಡವಳಿಕೆ ಮತ್ತು ಭಾರತದ ಮೌನ ಸಮ್ಮತಿ

ಮೇ 27 ರಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ಯಾಲಿಸ್ತೇನ್‌ ರೆಸಲ್ಯೂಶನ್‌ ನಲ್ಲಿ ಗೈರಾಗುವುದೊರೊಂದಿಗೆ ಭಾರತ ಈಗ ಮೊದಲಿನ ಇಸ್ರೇಲ್‌-ಪ್ಯಾಲಿಸ್ತೇನ್‌ ನಡುವೆ ಸಮತೋಲನದ ವಿದೇಶಾಂಗ ಸಂಬಂಧ ನೀತಿಗೆ ತಿಲಾಂಜಲಿ ಹಾಡಿ ಸದ್ಯ ಭಾರತದ ಬೆಂಬಲ ಇಸ್ರೇಲ್‌ ಕಡೆಗೆ ವಾಲಿದೆ.

ಕಳೆದ ಕೆಲವು ವರ್ಷಗಳಿಂದ ಭಾರತ ಇಸ್ರೇಲ್‌ ಪ್ಯಾಲಿಸ್ತೇನ್‌ ಕುರಿತಾದ ಹೇಳಿಕೆಗೆ ಚಿಕ್ಕ ಅಸಮ್ಮತಿಯನ್ನು ಸೂಚಿಸುತ್ತಿತ್ತು. ಹಾಗೇ ಪ್ಯಾಲಿಸ್ತೇನ್‌ ನಡೆಗೂ ವಿರೋಧವನ್ನು ಆಕ್ಷೇಪವನ್ನು ವ್ಯಕ್ತಪಡಿಸುತ್ತ ಬಂದಿದೆ. ಹಿಂದೆ ಪ್ಯಾಲಿಸ್ತೇನ್‌ ನ ಚಟುವಟಿಕೆಗಳು ಇಸ್ರೇಲ್‌ ವಿರುದ್ಧದ ಪ್ರತಿರೋಧ ಎಂದು ಹೇಳಿ ಸಮರ್ಥಿಸುತ್ತಿದ್ದ ಭಾರತ ಈಗ ಆ ನಡೆಯನ್ನು ಕೈ ಬಿಟ್ಟಿದೆ. ಕೆಲವು ಕಾಲ ಪ್ಯಾಲಿಸ್ತೇನ್‌ ಪರವಾಗಿ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸುತ್ತಿದ್ದ ಭಾರತ ಮುಂದೆ ಯಾವ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಿದೆ ಎನ್ನುವುದು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿರ್ಧರಿಸಲಿದೆ.

ಭಾರತದ ವಿದೇಶಾಂಗ ನೀತಿಯು ಕೇವಲ ಅಂತರಾಷ್ಟೀಯ ಸಂಬಂಧವನ್ನು ಮಾತ್ರ ಅವಲಂಬಿಸಿಲ್ಲ. ಬದಲಾಗಿ ದೇಶದ ಆಂತರಿಕ ವಿಷಯಗಳ ಮೇಲೂ ಪ್ಯಾಲಿಸ್ತೇನ್‌ ವಿಷಯ ಪರಿಣಾಮ ಬೀರಲಿದೆ. ಭಾರತದ 30 ಕೋಟಿಗೂ ಮೀರಿದ ಮುಸ್ಲೀಂ ಸಮುದಾಯದ ಹಿತಾಸಕ್ತಿಯ ಮೇಲೆ ಭಾರತದ ಬದಲಾದ ಇಸ್ರೇಲ್‌ ಪರವಾದ ನಿಲುವು ಪರಿಣಾಮ ಬೀರಲಿದೆ. ಜೊತೆಗೆ ಆಂತರಿಕವಾಗಿ ಭಾರತದಲ್ಲಿರು ದೊಡ್ಡ ಪ್ರಮಾಣದ ಮುಸ್ಲೀಂ ಸಮುದಾಯದಲ್ಲಿ ಅಭದ್ರತೆಯನ್ನು ಹುಟ್ಟಿಸುವ ಸಾಧ್ಯತೆ ಕೂಡ ಇದೆ. ಇದರ ಜತೆಗೆ  ಮಧ್ಯ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಾರತದ 60 ಲಕ್ಷ ಉದ್ಯೋಗಿಗಳ ಮೇಲೂ ಇದರ ಪರಿಣಾಮಗಳು ಉಂಟಾಗಲಿವೆ.

ಅರಬ್‌ ರಾಷ್ಟ್ರಗಳ ಇದುವರೆಗಿನ ಇಸ್ರೇಲ್‌ ಕುರಿತಾದ ದ್ವೇಷ ಕಡಿಮೆಯಾಗುತ್ತಿದೆ. ಯುಎಇ ಜೋರ್ಡಾನ್‌ ಮುಂತಾದ ರಾಷ್ಟ್ರಗಳು ಈಗ ಈಜಿಪ್ಟ್‌ ಜೊತೆಗೆ ಕೈಜೋಡಿಸಿದ್ದು ಇಸ್ರೇಲ್‌ ಬಗೆಗಿನ ತಮ್ಮ ನಿಲುವನ್ನು ಬದಲಿಸಿಕೊಂಡಿವೆ. ಅರಬ್‌ ವಲಯದಲ್ಲಿ ಹೆಚ್ಚುತ್ತಿರುವ ಐಎಸ್‌ಐಎಸ್‌ ಮತ್ತು ಹಮಾಸ್‌ ಪ್ರಭಾವವನ್ನು ತಗ್ಗಿಸಲು ಈಗ ಅರಬ್‌ ರಾಷ್ಟ್ರಗಳು ಇಸ್ರೇಲ್‌ ಕಡೆ ನಿಧಾನಕ್ಕೆ ವಾಲುತ್ತಿವೆ. ಜೊತೆಗೆ ಅಮೆರಿಕ ಪ್ರಭಾವವನ್ನು ಇದರಲ್ಲಿ ಅಲ್ಲಗಳೆಯುವಂತಿಲ್ಲ.

ಪಶ್ಚಿಮ ಏಷ್ಯಾದ ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ ಇಸ್ರೇಲ್ ಕಡೆ ವಾಲುತ್ತಿರುವ ಬೆಳವಣಿಗೆ ಮುಂದಿನ ದಿನಗಳಲ್ಲಿ  ಹಲವಾರು ಬಿಕ್ಕಟ್ಟುಗಳಿಗೆ ಮತ್ತು ಇರಾನ್‌ ಮತ್ತು ಭಾರತ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಮಿಲಿಟರಿ ತಂತ್ರಜ್ಞಾನ ಮತ್ತು ಉಪಕರಣಗಳಿಗೆ ಇಸ್ರೇಲ್‌ ಮೇಲಿನ ಅತಿಯಾದ ಅವಲಂಬನೆ ಕೂಡ ಭಾರತದ ಅಂತಾಷ್ಟ್ರೀಯ ಸಂಬಂಧಗಳ ಮೇಲೆ ದೀರ್ಘಕಾಲದ  ಪರಿಣಾಮವನ್ನು ಬೀರಲಿದೆ.

ಭಾರತ ಬಹಿರಂಗವಾಗಿ ಇಸ್ರೇಲ್‌ ಗೆ ಬೆಂಬಲವನ್ನು ನೀಡುತ್ತಿದ್ದರೂ ಇಸ್ರೇಲ್‌ ಮಾತ್ರ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಯಾಕೆಂದರೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಸಂಘರ್ಷದ ನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜಗತ್ತಿನ ಇಪ್ಪತ್ತು ರಾಷ್ಟ್ರಗಳಿಗೆ ಇಸ್ರೇಲ್‌ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಆದರೆ ಆ ಇಪ್ಪತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇರಲಿಲ್ಲ. ಇದು ಇಸ್ರೇಲ್‌ ಭಾರತವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಹೇಳುತ್ತದೆ.

ಸಮತೋಲದ ಅಂತರಾಷ್ಟ್ರೀಯ ನೀತಿಯ ಅಗತ್ಯತೆ

ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಬಿಕ್ಕಟ್ಟಿನ ನಂತರ ವಿಶ್ವ ಸಂಸ್ಥೆಯಲ್ಲಿ ನಡೆದ ಮೂರು ಸಭೆಗಳು ಭಾರತ ಇಸ್ರೇಲ್‌ ಪರವಾದ ನಿಲುವನ್ನು ತಾಳಿರುವುದನ್ನು ಬಹಿರಂಗಗೊಳಿಸಿದೆ. ಆದರೆ ಇಸ್ರೇಲ್‌ ಪರವಾದ ಭಾರತ ನಿಲುವು ಹೆಚ್ಚು ಅಪಾಯಕಾರಿಯಾಗಿದೆ. ಜೊತೆಗೆ ಭಾರತದ ಒಳಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುತ್ವದ ಪ್ರೊಪಗೆಂಡಾದ ಕುರಿತು ಹಲವು ದೇಶಗಳು ಕಳವಳವನ್ನು ವ್ಯಕ್ತಪಡಿಸಿವೆ. ಇಸ್ರೇಲ್‌ ಜೊತೆಗಿನ ಅತಿಯಾದ ನಿಕಟತೆ ಮುಸ್ಲೀಮ್‌ ರಾಷ್ಟ್ರಗಳಿಗೆ ಮತ್ತು ತೈಲ ಸಂಪದ್ಭರಿತವಾದ ಅರಬ್‌ ರಾಷ್ಟ್ರಗಳಿಗೆ ಮುಸ್ಲೀಂ ವಿರೋಧಿ ಜೂವ್ಸ್-ಹಿಂದು ಒಕ್ಕೂಟದಂತೆ ಬಿಂಬಿತವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಭಾರತ ಇಷ್ಟು ವರ್ಷದವರೆಗೆ ಇಸ್ರೇಲ್‌ ಪ್ಯಾಲಿಸ್ತೇನ್ ವಿಚಾರದಲ್ಲಿ ಪಾಲಿಸಿಕೊಂಡು ಬಂದ ಸಮತೋಲನ ನಡೆಯನ್ನೇ ಮುಂದುವರೆಸಿಕೊಂಡು ಹೋಗುವುದು ಭಾರತದ‌ ದೃಷ್ಟಿಯಿಂದ ಅನುಕೂಲಕರ ವಿದೇಶಾಂಗ ನೀತಿಯಾಗಿರಲಿದೆ.

ಭಾರತ ಬಹುದೀರ್ಘ ಕಾಲದಿಂದಲೂ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಹಿಂಸೆ ಮತ್ತು ಸಂಘರ್ಷಗಳನ್ನು ತ್ಯಜಿಸಿ ಮಾತುಕತೆಯ ಮೂಲಕ ಭೌಗೋಳಿಕ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು. ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಇರಡು ದೇಶಗಳು ಸಮಾನ ಸಾರ್ವಭೌಮ ರಾಷ್ಟ್ರಗಳೆಂದು ಎರಡೂ ಕಡೆಯವರು ಒಪ್ಪಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ. ಭಾರತದ ಈ ವಿದೇಶಾಂಗ ನೀತಿ ಅತ್ಯಂತ ಜಾಣ್ಮೆಯದು ಮತ್ತು ಅಮೆರಿಕ ಮುಂತಾದ ದೇಶಗಳ ನಿಲುವಿಗಿಂತ ಹೆಚ್ಚು ಸಮತೋಲನದಿಂದ ಕೂಡಿದೆ. ಭಾರತ ಇಸ್ರೇಲ್‌ ಕಡೆಗೆ ವಾಲುವುದಕ್ಕಿಂತ ಇಸ್ರೇಲ್‌ ಪ್ಯಾಲಿಸ್ತೇನ್‌ ನಡುವೆ ಸಮತೋಲನದ ಸಂಬಂಧ ಮುಂದುವರೆಸಿಕೊಂಡು ಹೋಗುವುದು ಭಾರತದ ವಿದೇಶಾಂಗ ನೀತಿಯನ್ನು ಹೆಚ್ಚು ಆರೋಗ್ಯಕರವಾಗಿ ಇಡಲಿದೆ.

ಇಸ್ರೇಲ್‌ ಪ್ಯಾಲಿಸ್ತೇನ್‌ ಎರಡನ್ನೂ ನಿರಾಶೆಗೊಳಿಸಿದ ಭಾರತ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಟ್ವೀಟ್‌ ಮತ್ತು ಪ್ಯಾಲಿಸ್ತೇನ್‌ ವಿದೇಶಾಂಗ ಮಂತ್ರಿ ರೈದ್‌ ಮಲ್ಕಿ ಅವರು ಎಸ್‌ ಜೈಶಂಕರ್‌ ಅವರಿಗೆ ಬರೆದ ವಿಷಾದದ ಪತ್ರದಿಂದ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿರುವುದು ಕಾಣುತ್ತದೆ. ಇಂತ ಸಂಪೂರ್ಣವಾಗಿ ಇಸ್ರೇಲ್‌ ಪರ ನಿಲುವನ್ನು ತಾಳಲಾಗದೇ ಅತ್ತ ತನ್ನ ಹಿಂದಿನ ಟು ಸ್ಟೇಟ್‌ ಪಾಲಿಸಿಯನ್ನು ಮುಂದುವರೆಸಿಕೊಂಡು ಹೋಗಲಾಗದೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಎರಡೂ ದೇಶಗಳಿಗೂ ನಿರಾಸೆಯನ್ನುಂಟುಮಾಡಿದೆ.

ಭಾರತದ ತನ್ನ ಈ ಹೊಸ ವಿದೇಶಾಂಗ ನೀತಿಯನ್ನು ಕೈಬಿಟ್ಟು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ವಿಶೇಷ ರಾಯಭಾರಿಯನ್ನು ನೇಮಿಸಿ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ನಡುವೆ ಹಳಸಿರುವ ಭಾರತದ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವಂತೆ ನೋಡಿಕೊಳ್ಳುವುದೊಂದೇ ಭಾರತದ ಮುಂದಿರುವ ಸದ್ಯದ ಆಯ್ಕೆಯಾಗಿದೆ.

ಮೂಲ : ದಿ ವೈರ್‌ – ಶಶಿ ತರೂರ್

ಅನುವಾದ: ರಾಜೇಶ್ ಹೆಬ್ಬಾರ್


ಇದನ್ನೂ ಓದಿ: 20 ಸಾವಿರ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮ್ಮ ವಿದೇಶಾ0ಗ ಸ್ವಲ್ಪ ಮಟ್ಟಿಗೆ ಅಮೇರಿಕಾ ದತ್ತ ವಾಳಿದಂತೆ ಕಂಡರೂ, ಈಗಲೂ ಸಮತೋಲನ ಮತ್ತು ಜಾಣ್ಮೆಯ ನೆಲೆಗತ್ತಿನಲ್ಲೇ ರೂಪಿತವಾಗಿದೆ.

    ಭಾರತೀಯ ಮುಸ್ಲಿಮರು ಅಭದ್ರತೆಗೆ ಒಳಗಾಗುತ್ತಾರೆ ಎನ್ನುವದಂತೂ ಶುದ್ಧ ಸುಳ್ಳು ಮತ್ತು ಅವಿವೇಕಿತನದ ಉತೃಷ್ಟಾತೆ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...