Homeಅಂತರಾಷ್ಟ್ರೀಯಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

ಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

- Advertisement -
- Advertisement -

ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ದೀರ್ಘಕಾಲದ ಸಂಘರ್ಷ ಸದ್ಯಕ್ಕೆ ಒಂದು ಶಾಂತಿಯುತ ನಿಲುಗಡೆಗೆ ಬಂದಿದೆ. ಆದರೆ ಎರಡು ನೆರೆ ಹೊರೆಯ ದೇಶಗಳ ನಡುವಿನ ಅಸ್ತಿತ್ವದ ಈ ಹೋರಾಟ ಬೂದಿ ಮುಚ್ಚಿದ ಕೆಂಡವಿದ್ದಂತೆ. ಮತ್ತೆ ಯಾವಾಗ ಬೇಕಿದ್ದರೂ ಬಿಕ್ಕಟ್ಟು ಉಲ್ಬಣಿಸಿ ಪರಸ್ಪರ ಕಚ್ಚಾಟಗಳಿಗೆ ಮತ್ತು ಅಮಾಯಕರ ಸಾವಿಗೆ ಕಾರಣವಾಗಬಹುದು.

ವಿಶ್ವಸಂಸ್ಥೆ ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ಸಂಬಂಧವನ್ನು ಸರಿಪಡಿಸಲು ಇದುವರೆಗೆ ಹಲವು ಸುತ್ತಿನ ಮಾತುಕತೆಯನ್ನು ಮತ್ತು ಸಂಧಾನ ಯತ್ನವನ್ನು ನಡೆಸಿವೆ. ಆದರೆ ಯಾವ ಪ್ರಯತ್ನಗಳೂ ಇದುವರೆಗೆ ಸಫಲವಾಗಿಲ್ಲ. ಇದರ ನಡುವೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ಯಾಲಿಸ್ತೇನ್ ಮೇಲೆ ನಡೆದ ಇಸ್ರೇಲ್ ಧಾಳಿಯಲ್ಲಿ ಸಾವಿರಾರು ಪ್ಯಾಲಿಸ್ತೇನಿಗಳ ಮಾನವ ಹಕ್ಕನ್ನು ನಿಗ್ರಹಿಸಲಾಗಿದೆ ಎಂಬ ರೆಸಲ್ಯೂಶನ್ ಒಂದನ್ನು  ಮಂಡಿಸಲಾಗಿದ್ದು 24 ರಲ್ಲಿ 15 ಪರವಾದ ಮತಗಳಿಂದ ಈ ರೆಸಲ್ಯೂಶನ್ ಅಂಗೀಕಾರಗೊಂಡಿದೆ. ಆದರೆ ಭಾರತ ಮಾನವ ಹಕ್ಕುಗಳ ಆಯೋಗದ ಈ ರೆಸಲ್ಯೂಶನ್ ಪ್ರಕ್ರಿಯೆಗೆ ಗೈರು ಹಾಜರಾಗುವ ಮೂಲಕ ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವವಾದ ಬದಲಾವಣೆಗಳಾಗಿರುವ ಕುರಿತು ಅನುಮಾನ ಮೂಡಿಸಿದೆ.

ಭಾರತದ ಗೈರು ಹಾಜರಾತಿಯ ಸಂಬಂಧ ಪ್ಯಾಲಿಸ್ತೇನ್ ನ ವಿದೇಶಾಂಗ ಮಂತ್ರಿ ರೈದ್ ಮಲ್ಕಿ ಭಾರತದ ವಿದೇಶಾಂಗ ಮಂತ್ರಿ  ಎಸ್. ಜೈಶಂಕರ್ ಅವರಿಗೆ ವಿಷಾದದ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ “ಭಾರತ ಗಣತಂತ್ರವು  ದೀರ್ಘಾವಧಿಯ ಮತ್ತು ಬಹು ಮುಖ್ಯವಾದ ಒಂದು ಸಂದರ್ಭದಲ್ಲಿ ನ್ಯಾಯ ಮತ್ತು ಶಾಂತಿಯ ಸಲುವಾಗಿ ಅಂತರಾಷ್ಟ್ರೀಯ ಸಮುದಾಯದ ಜೊತೆ ನಿಲ್ಲುವ ಅವಕಾಶನ್ನು ಕಳೆದುಕೊಂಡಿದೆ” ಎನ್ನುವ ಮೂಲಕ ಭಾರತದ ಇಂದಿನ ನಡೆ ದೀರ್ಘಾವಧಿಯ ಭಾರತ ಪ್ಯಾಲಿಸ್ತೇನ್ ಸಂಬಂಧವನ್ನು ದುರ್ಬಲಗೊಳಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಈ ರೆಸಲ್ಯೂಶನ್ ಬಹುರಾಷ್ಟ್ರಗಳ ವ್ಯಾಪಕ ಮಾತುಕತೆಯ ಫಲವಾಗಿ ಹುಟ್ಟಿಕೊಂಡಿದೆ. ಈ ರೆಸಲ್ಯೂಶನ್ ನಲ್ಲಿ ಭಾರತದ ಗೈರು ಹಾಜರಾತಿ ಪ್ಯಾಲಿಸ್ತೇನಿಯರ ಮತ್ತು ಜಗತ್ತಿನ ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ  ಮಹತ್ವದ ಪ್ರಕ್ರಿಯೆಯನ್ನು ನಿಗ್ರಹಿಸುವಂತಹ ನಡೆಯಾಗಿದೆ ಎಂದು ರೈದ್ ಮಲ್ಕಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಶ್ವ ಮಾನವ ಹಕ್ಕುಗಳ ಆಯೋಗ ಕೈಗೊಂಡ ಈ ರೆಸಲ್ಯೂಶನ್ ಇಸ್ರೇಲ್ ನಡೆಸಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯ ತನಿಖೆ ನಡೆಸಲು ದಾರಿ ಮಾಡಿಕೊಡುವ ಪ್ರಯತ್ನವಾಗಿದೆ. ಇದುವರೆಗೆ ಇಸ್ರೇಲ್ ಪ್ಯಾಲಿಸ್ತೇನ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾವುದೇ ಸ್ವತಂತ್ರ ತನಿಖಾ ಆಯೋಗದಿಂದ ಅವಕಾಶ ನೀಡಿಲ್ಲ. ಹೊಸ ರೆಸಲ್ಯೂಶನ್ ಇಸ್ರೇಲ್ ನಡೆಸುತ್ತಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಕುರಿತಾಗಿ ಸ್ವತಂತ್ರ ನಿಯೋಗದಿಂದ ತನಿಖೆಗೆ ಇಸ್ರೇಲ್ ಮೇಲೆ ಒತ್ತಡ ಹೇರಲಿದೆ.

ಭಾರತದ ಬೆಂಬಲ ಸಂಪೂರ್ಣ ಇಸ್ರೇಲ್ ಕಡೆ ವಾಲಿದೆಯೇ? 

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ ಅಲ್ ಅಕ್ಸಾ ಮಸೀದಿಯ ಮೇಲೆ ರಂಜಾನ್ ಪ್ರಾರ್ಥನೆಯ ವೇಳೆ ಇಸ್ರೇಲ್  ಅತಿಕ್ರಮವಾದ ಒತ್ತುವರಿಯನ್ನು ಮಾಡಲು ಮುಂದಾಗಿದ್ದೇ ಈ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ  ಭಂಗಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. ಆದರೆ 3 ದಿನಗಳ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ (General Assembly) ಯಲ್ಲಿ ಭಾರತ ಭದ್ರತಾ ಮಂಡಳಿಯಲ್ಲಿ ಹೇಳಿದ ಈ ಹೇಳಿಕೆಯನ್ನು ಹಿಂಪಡೆದಿದೆ. ಮತ್ತು ಸಾಮಾನ್ಯ ಸಭೆಯಲ್ಲಿ ಭಾರತ ಪ್ಯಾಲಿಸ್ತೇನಿಯರಿಗೆ ಕೇವಲ ಸಿಂಪತಿಯನ್ನು ಅಷ್ಟೇ ವ್ಯಕ್ತಪಡಿಸಿದೆ.

ಪ್ಯಾಲಿಸ್ತೇನ್ ಗೆ ತನ್ನ ಪ್ರಬಲ ಬೆಂಬಲ ಮತ್ತು ತನ್ನ ದೀರ್ಘಕಾಲದ ನಿಲುವು ‘ಎರಡು ದೇಶ ನೀತಿ’  ಬದ್ಧತೆಯನ್ನು ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೇಳಿತ್ತು. ಆದರೆ ತನ್ನ ಈ ನಿಲುವನ್ನು ಭಾರತ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬದಲಾಯಿಸಿದೆ.

ಇಸ್ರೇಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ನರ್ಸ್‌ ಸೌಮ್ಯ ಸಂತೋಶ್‌ ಹಮಾಸ್‌ ರಾಕೇಟ್‌ ದಾಳಿಗೆ ಮೃತಪಟ್ಟಿದ್ದಾರೆ. ಅವರ ಸಾವಿಗೆ ವಿಷಾಧ ವ್ಯಕ್ತಪಡಿಸಿದೆಯಷ್ಟೇ. ಆದರೆ ಇಸ್ರೇಲ್‌ ಪ್ಯಾಲಿಸ್ತೇನ್‌ ಮೇಲೆ ನಡೆಸಿದ ವ್ಯವಸ್ಥಿತ ಮಿಲಿಟರಿ ದಾಲಿಯ ಬಗ್ಗೆ ಭಾರತ ಯಾವುದೇ ಆಕ್ಷೇಪವನ್ನಾಗಲಿ ತನ್ನ ನಿಲುವನ್ನಾಗಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿಲ್ಲ. ಇದರಿಂದ ಭಾರತ ಇಷ್ಟು ದಿನ ವಿಶ್ವ ಸಂಸ್ಥೆಯಲ್ಲಿ ಪ್ಯಾಲಿಸ್ತೇನ್‌ ಗೆ ನೀಡಿದ್ದ ಬೆಂಬಲವನ್ನು ಮುಂದುವರೆಸಿಲ್ಲ. ಬದಲಾಗಿ ಈಗ ಭಾರತದ ಆದ್ಯತೆ ಇಸ್ರೇಲ್‌ ಕಡೆಗೆ ಹೊರಳಿರುವುದು ವಿಶ್ವ ಸಂಸ್ಥೆಯಲ್ಲಿ ಬಹಿರಂಗವಾಗಿದೆ.

ಪ್ಯಾಲಿಸ್ತೇನ್‌ ನೊಂದಿಗೆ ಇಸ್ರೇಲ್‌ ನಡವಳಿಕೆ ಮತ್ತು ಭಾರತದ ಮೌನ ಸಮ್ಮತಿ

ಮೇ 27 ರಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ಯಾಲಿಸ್ತೇನ್‌ ರೆಸಲ್ಯೂಶನ್‌ ನಲ್ಲಿ ಗೈರಾಗುವುದೊರೊಂದಿಗೆ ಭಾರತ ಈಗ ಮೊದಲಿನ ಇಸ್ರೇಲ್‌-ಪ್ಯಾಲಿಸ್ತೇನ್‌ ನಡುವೆ ಸಮತೋಲನದ ವಿದೇಶಾಂಗ ಸಂಬಂಧ ನೀತಿಗೆ ತಿಲಾಂಜಲಿ ಹಾಡಿ ಸದ್ಯ ಭಾರತದ ಬೆಂಬಲ ಇಸ್ರೇಲ್‌ ಕಡೆಗೆ ವಾಲಿದೆ.

ಕಳೆದ ಕೆಲವು ವರ್ಷಗಳಿಂದ ಭಾರತ ಇಸ್ರೇಲ್‌ ಪ್ಯಾಲಿಸ್ತೇನ್‌ ಕುರಿತಾದ ಹೇಳಿಕೆಗೆ ಚಿಕ್ಕ ಅಸಮ್ಮತಿಯನ್ನು ಸೂಚಿಸುತ್ತಿತ್ತು. ಹಾಗೇ ಪ್ಯಾಲಿಸ್ತೇನ್‌ ನಡೆಗೂ ವಿರೋಧವನ್ನು ಆಕ್ಷೇಪವನ್ನು ವ್ಯಕ್ತಪಡಿಸುತ್ತ ಬಂದಿದೆ. ಹಿಂದೆ ಪ್ಯಾಲಿಸ್ತೇನ್‌ ನ ಚಟುವಟಿಕೆಗಳು ಇಸ್ರೇಲ್‌ ವಿರುದ್ಧದ ಪ್ರತಿರೋಧ ಎಂದು ಹೇಳಿ ಸಮರ್ಥಿಸುತ್ತಿದ್ದ ಭಾರತ ಈಗ ಆ ನಡೆಯನ್ನು ಕೈ ಬಿಟ್ಟಿದೆ. ಕೆಲವು ಕಾಲ ಪ್ಯಾಲಿಸ್ತೇನ್‌ ಪರವಾಗಿ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸುತ್ತಿದ್ದ ಭಾರತ ಮುಂದೆ ಯಾವ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಿದೆ ಎನ್ನುವುದು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿರ್ಧರಿಸಲಿದೆ.

ಭಾರತದ ವಿದೇಶಾಂಗ ನೀತಿಯು ಕೇವಲ ಅಂತರಾಷ್ಟೀಯ ಸಂಬಂಧವನ್ನು ಮಾತ್ರ ಅವಲಂಬಿಸಿಲ್ಲ. ಬದಲಾಗಿ ದೇಶದ ಆಂತರಿಕ ವಿಷಯಗಳ ಮೇಲೂ ಪ್ಯಾಲಿಸ್ತೇನ್‌ ವಿಷಯ ಪರಿಣಾಮ ಬೀರಲಿದೆ. ಭಾರತದ 30 ಕೋಟಿಗೂ ಮೀರಿದ ಮುಸ್ಲೀಂ ಸಮುದಾಯದ ಹಿತಾಸಕ್ತಿಯ ಮೇಲೆ ಭಾರತದ ಬದಲಾದ ಇಸ್ರೇಲ್‌ ಪರವಾದ ನಿಲುವು ಪರಿಣಾಮ ಬೀರಲಿದೆ. ಜೊತೆಗೆ ಆಂತರಿಕವಾಗಿ ಭಾರತದಲ್ಲಿರು ದೊಡ್ಡ ಪ್ರಮಾಣದ ಮುಸ್ಲೀಂ ಸಮುದಾಯದಲ್ಲಿ ಅಭದ್ರತೆಯನ್ನು ಹುಟ್ಟಿಸುವ ಸಾಧ್ಯತೆ ಕೂಡ ಇದೆ. ಇದರ ಜತೆಗೆ  ಮಧ್ಯ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಾರತದ 60 ಲಕ್ಷ ಉದ್ಯೋಗಿಗಳ ಮೇಲೂ ಇದರ ಪರಿಣಾಮಗಳು ಉಂಟಾಗಲಿವೆ.

ಅರಬ್‌ ರಾಷ್ಟ್ರಗಳ ಇದುವರೆಗಿನ ಇಸ್ರೇಲ್‌ ಕುರಿತಾದ ದ್ವೇಷ ಕಡಿಮೆಯಾಗುತ್ತಿದೆ. ಯುಎಇ ಜೋರ್ಡಾನ್‌ ಮುಂತಾದ ರಾಷ್ಟ್ರಗಳು ಈಗ ಈಜಿಪ್ಟ್‌ ಜೊತೆಗೆ ಕೈಜೋಡಿಸಿದ್ದು ಇಸ್ರೇಲ್‌ ಬಗೆಗಿನ ತಮ್ಮ ನಿಲುವನ್ನು ಬದಲಿಸಿಕೊಂಡಿವೆ. ಅರಬ್‌ ವಲಯದಲ್ಲಿ ಹೆಚ್ಚುತ್ತಿರುವ ಐಎಸ್‌ಐಎಸ್‌ ಮತ್ತು ಹಮಾಸ್‌ ಪ್ರಭಾವವನ್ನು ತಗ್ಗಿಸಲು ಈಗ ಅರಬ್‌ ರಾಷ್ಟ್ರಗಳು ಇಸ್ರೇಲ್‌ ಕಡೆ ನಿಧಾನಕ್ಕೆ ವಾಲುತ್ತಿವೆ. ಜೊತೆಗೆ ಅಮೆರಿಕ ಪ್ರಭಾವವನ್ನು ಇದರಲ್ಲಿ ಅಲ್ಲಗಳೆಯುವಂತಿಲ್ಲ.

ಪಶ್ಚಿಮ ಏಷ್ಯಾದ ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ ಇಸ್ರೇಲ್ ಕಡೆ ವಾಲುತ್ತಿರುವ ಬೆಳವಣಿಗೆ ಮುಂದಿನ ದಿನಗಳಲ್ಲಿ  ಹಲವಾರು ಬಿಕ್ಕಟ್ಟುಗಳಿಗೆ ಮತ್ತು ಇರಾನ್‌ ಮತ್ತು ಭಾರತ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಮಿಲಿಟರಿ ತಂತ್ರಜ್ಞಾನ ಮತ್ತು ಉಪಕರಣಗಳಿಗೆ ಇಸ್ರೇಲ್‌ ಮೇಲಿನ ಅತಿಯಾದ ಅವಲಂಬನೆ ಕೂಡ ಭಾರತದ ಅಂತಾಷ್ಟ್ರೀಯ ಸಂಬಂಧಗಳ ಮೇಲೆ ದೀರ್ಘಕಾಲದ  ಪರಿಣಾಮವನ್ನು ಬೀರಲಿದೆ.

ಭಾರತ ಬಹಿರಂಗವಾಗಿ ಇಸ್ರೇಲ್‌ ಗೆ ಬೆಂಬಲವನ್ನು ನೀಡುತ್ತಿದ್ದರೂ ಇಸ್ರೇಲ್‌ ಮಾತ್ರ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಯಾಕೆಂದರೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಸಂಘರ್ಷದ ನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜಗತ್ತಿನ ಇಪ್ಪತ್ತು ರಾಷ್ಟ್ರಗಳಿಗೆ ಇಸ್ರೇಲ್‌ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಆದರೆ ಆ ಇಪ್ಪತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇರಲಿಲ್ಲ. ಇದು ಇಸ್ರೇಲ್‌ ಭಾರತವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಹೇಳುತ್ತದೆ.

ಸಮತೋಲದ ಅಂತರಾಷ್ಟ್ರೀಯ ನೀತಿಯ ಅಗತ್ಯತೆ

ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಬಿಕ್ಕಟ್ಟಿನ ನಂತರ ವಿಶ್ವ ಸಂಸ್ಥೆಯಲ್ಲಿ ನಡೆದ ಮೂರು ಸಭೆಗಳು ಭಾರತ ಇಸ್ರೇಲ್‌ ಪರವಾದ ನಿಲುವನ್ನು ತಾಳಿರುವುದನ್ನು ಬಹಿರಂಗಗೊಳಿಸಿದೆ. ಆದರೆ ಇಸ್ರೇಲ್‌ ಪರವಾದ ಭಾರತ ನಿಲುವು ಹೆಚ್ಚು ಅಪಾಯಕಾರಿಯಾಗಿದೆ. ಜೊತೆಗೆ ಭಾರತದ ಒಳಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುತ್ವದ ಪ್ರೊಪಗೆಂಡಾದ ಕುರಿತು ಹಲವು ದೇಶಗಳು ಕಳವಳವನ್ನು ವ್ಯಕ್ತಪಡಿಸಿವೆ. ಇಸ್ರೇಲ್‌ ಜೊತೆಗಿನ ಅತಿಯಾದ ನಿಕಟತೆ ಮುಸ್ಲೀಮ್‌ ರಾಷ್ಟ್ರಗಳಿಗೆ ಮತ್ತು ತೈಲ ಸಂಪದ್ಭರಿತವಾದ ಅರಬ್‌ ರಾಷ್ಟ್ರಗಳಿಗೆ ಮುಸ್ಲೀಂ ವಿರೋಧಿ ಜೂವ್ಸ್-ಹಿಂದು ಒಕ್ಕೂಟದಂತೆ ಬಿಂಬಿತವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಭಾರತ ಇಷ್ಟು ವರ್ಷದವರೆಗೆ ಇಸ್ರೇಲ್‌ ಪ್ಯಾಲಿಸ್ತೇನ್ ವಿಚಾರದಲ್ಲಿ ಪಾಲಿಸಿಕೊಂಡು ಬಂದ ಸಮತೋಲನ ನಡೆಯನ್ನೇ ಮುಂದುವರೆಸಿಕೊಂಡು ಹೋಗುವುದು ಭಾರತದ‌ ದೃಷ್ಟಿಯಿಂದ ಅನುಕೂಲಕರ ವಿದೇಶಾಂಗ ನೀತಿಯಾಗಿರಲಿದೆ.

ಭಾರತ ಬಹುದೀರ್ಘ ಕಾಲದಿಂದಲೂ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಹಿಂಸೆ ಮತ್ತು ಸಂಘರ್ಷಗಳನ್ನು ತ್ಯಜಿಸಿ ಮಾತುಕತೆಯ ಮೂಲಕ ಭೌಗೋಳಿಕ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು. ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಇರಡು ದೇಶಗಳು ಸಮಾನ ಸಾರ್ವಭೌಮ ರಾಷ್ಟ್ರಗಳೆಂದು ಎರಡೂ ಕಡೆಯವರು ಒಪ್ಪಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ. ಭಾರತದ ಈ ವಿದೇಶಾಂಗ ನೀತಿ ಅತ್ಯಂತ ಜಾಣ್ಮೆಯದು ಮತ್ತು ಅಮೆರಿಕ ಮುಂತಾದ ದೇಶಗಳ ನಿಲುವಿಗಿಂತ ಹೆಚ್ಚು ಸಮತೋಲನದಿಂದ ಕೂಡಿದೆ. ಭಾರತ ಇಸ್ರೇಲ್‌ ಕಡೆಗೆ ವಾಲುವುದಕ್ಕಿಂತ ಇಸ್ರೇಲ್‌ ಪ್ಯಾಲಿಸ್ತೇನ್‌ ನಡುವೆ ಸಮತೋಲನದ ಸಂಬಂಧ ಮುಂದುವರೆಸಿಕೊಂಡು ಹೋಗುವುದು ಭಾರತದ ವಿದೇಶಾಂಗ ನೀತಿಯನ್ನು ಹೆಚ್ಚು ಆರೋಗ್ಯಕರವಾಗಿ ಇಡಲಿದೆ.

ಇಸ್ರೇಲ್‌ ಪ್ಯಾಲಿಸ್ತೇನ್‌ ಎರಡನ್ನೂ ನಿರಾಶೆಗೊಳಿಸಿದ ಭಾರತ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಟ್ವೀಟ್‌ ಮತ್ತು ಪ್ಯಾಲಿಸ್ತೇನ್‌ ವಿದೇಶಾಂಗ ಮಂತ್ರಿ ರೈದ್‌ ಮಲ್ಕಿ ಅವರು ಎಸ್‌ ಜೈಶಂಕರ್‌ ಅವರಿಗೆ ಬರೆದ ವಿಷಾದದ ಪತ್ರದಿಂದ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿರುವುದು ಕಾಣುತ್ತದೆ. ಇಂತ ಸಂಪೂರ್ಣವಾಗಿ ಇಸ್ರೇಲ್‌ ಪರ ನಿಲುವನ್ನು ತಾಳಲಾಗದೇ ಅತ್ತ ತನ್ನ ಹಿಂದಿನ ಟು ಸ್ಟೇಟ್‌ ಪಾಲಿಸಿಯನ್ನು ಮುಂದುವರೆಸಿಕೊಂಡು ಹೋಗಲಾಗದೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಎರಡೂ ದೇಶಗಳಿಗೂ ನಿರಾಸೆಯನ್ನುಂಟುಮಾಡಿದೆ.

ಭಾರತದ ತನ್ನ ಈ ಹೊಸ ವಿದೇಶಾಂಗ ನೀತಿಯನ್ನು ಕೈಬಿಟ್ಟು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ವಿಶೇಷ ರಾಯಭಾರಿಯನ್ನು ನೇಮಿಸಿ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ನಡುವೆ ಹಳಸಿರುವ ಭಾರತದ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವಂತೆ ನೋಡಿಕೊಳ್ಳುವುದೊಂದೇ ಭಾರತದ ಮುಂದಿರುವ ಸದ್ಯದ ಆಯ್ಕೆಯಾಗಿದೆ.

ಮೂಲ : ದಿ ವೈರ್‌ – ಶಶಿ ತರೂರ್

ಅನುವಾದ: ರಾಜೇಶ್ ಹೆಬ್ಬಾರ್


ಇದನ್ನೂ ಓದಿ: 20 ಸಾವಿರ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮ್ಮ ವಿದೇಶಾ0ಗ ಸ್ವಲ್ಪ ಮಟ್ಟಿಗೆ ಅಮೇರಿಕಾ ದತ್ತ ವಾಳಿದಂತೆ ಕಂಡರೂ, ಈಗಲೂ ಸಮತೋಲನ ಮತ್ತು ಜಾಣ್ಮೆಯ ನೆಲೆಗತ್ತಿನಲ್ಲೇ ರೂಪಿತವಾಗಿದೆ.

    ಭಾರತೀಯ ಮುಸ್ಲಿಮರು ಅಭದ್ರತೆಗೆ ಒಳಗಾಗುತ್ತಾರೆ ಎನ್ನುವದಂತೂ ಶುದ್ಧ ಸುಳ್ಳು ಮತ್ತು ಅವಿವೇಕಿತನದ ಉತೃಷ್ಟಾತೆ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...