HomeUncategorizedಆತಂಕದ ಸುಳಿಯಲ್ಲಿದೆ ಗೇರು ಹಣ್ಣಿನ ಪೆನ್ನಿ ನಂಬಿ ಬದುಕಿದ್ದ ಕುಟುಂಬಗಳ ಬದುಕು!

ಆತಂಕದ ಸುಳಿಯಲ್ಲಿದೆ ಗೇರು ಹಣ್ಣಿನ ಪೆನ್ನಿ ನಂಬಿ ಬದುಕಿದ್ದ ಕುಟುಂಬಗಳ ಬದುಕು!

- Advertisement -
- Advertisement -

ಗೇರು ಬೀಜ ಅಥವಾ ಗೋಡಂಬಿ ಹಣ್ಣಿಗೆ ಜಗತ್ತಿನ ಮೂಲೆ ಮೂಲೆಯಲ್ಲಿ ಅಪಾರ ಬೇಡಿಕೆಯಿದೆ. 500 ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ತಂದ ಈ ಗೋಡಂಬಿ ಅಥವಾ ಗೇರು ಹಣ್ಣು ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೂ ಹಬ್ಬಿದೆ. ಗೋವಾದ ಉತ್ತರ ತುದಿಯಿಂದ ಕೇರಳದ ದಕ್ಷಿಣ ತುದಿಯವರೆಗೆ ಕರಾವಳಿಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಅಪಾರ ಪ್ರಮಾಣದ ಗೇರು ಹಣ್ಣನ್ನು ಬೆಳೆಯಲಾಗುತ್ತದೆ.

ಯಾವುದೇ ಪೋಷಣೆಯಿಲ್ಲದೇ ಬಿದ್ದಲ್ಲಿ ಬೇರೂರಿ ಕೃಷಿಕರಿಗೆ ಕೈತುಂಬ ವರಮಾನ ನೀಡುವ ಗೇರು ಹಣ್ಣಿನ ಬೆಳೆ ಇತ್ತೀಚೆಗೆ ನಶಿಸಿ ಹೋಗುತ್ತಿದೆ. ಮಂಗಳೂರು, ಕೊಚ್ಚಿ, ಪಣಜಿಂಗಳಲ್ಲೂ ಗೋಡಂಬಿ ಫ್ಯಾಕ್ಟರಿಗಳು ಕಡಿಮೆಯಾಗುತ್ತಿವೆ. ಜೊತೆಗೆ ಗೇರು ಹಣ್ಣಿನ ಇನ್ನೊಂದು ವಿಶೇಷ ಪಾನೀಯವಾದ ಸಾಂಪ್ರದಾಯಿಕ ಕ್ಯಾಶ್ಯೂ ಪೆನ್ನಿ (ಮದ್ಯ) ಉತ್ಪಾದನೆಯೂ ಕುಸಿಯ ತೊಡಗಿದೆ.

ನೀವು ಸಾಂಪ್ರದಾಯಿಕ ಉಡುಗೆ ತೊಟ್ಟು ಕಚೇರಿಗೆ (ಆಫೀಸ್) ಹೋಗಲು ಇಚ್ಚಿಸುವಿರೇ? - Quora

ಮೊದಲೇ ಹೇಳಿದಂತೆ ಗೇರು ಹಣ್ಣು ಬಹು ಉಪಯೋಗದ ವಸ್ತು. ಗೇರು ಹಣ್ಣಿನ ಗೋಡಂಬಿ ಬೀಜವು  ಅಡಿಗೆಗಳಿಗೆ, ಖಾದ್ಯಗಳಿಗೆ ಬಳಕೆಯಾದರೆ, ಗೇರು ಹಣ್ಣು ದನಗಳಿಗೆ, ಪಶು ಪಕ್ಷಿಗಳಿಗೆ ಆಹಾರವಾಗಿ, ತೋಟಕ್ಕೆ ಗೊಬ್ಬರವಾಗಿ ಹಾಗೂ ಮದ್ಯ ತಯಾರಿಕೆಗೂ ಬಳಕೆಯಾಗುತ್ತದೆ. ಈ ಗೇರು ಹಣ್ಣಿನ ಪೆನ್ನಿ ಹೆಚ್ಚಾಗಿ ಕೇರಳದಲ್ಲಿ ಮಾತ್ರ ತಯಾರಾಗುತ್ತದೆ. ಕರ್ನಾಟಕ ಹಾಗೂ ಕೇರಳದ ಕೆಲವು ಕಡೆ ಮನೆಯಲ್ಲಿ ಸ್ವಂತ ಬಳಕೆಗಾಗಿಯೂ ಗೇರು ಹಣ್ಣಿನ ಪಾನೀಯವನ್ನು ತಯಾರಿಸಲಾಗುತ್ತದೆ. ಆದರೆ ಗೇರು ಹಣ್ಣಿನ ಪೆನ್ನಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಸ್ಥಳ ಗೋವಾ. ಇಲ್ಲಿ ಲೆಕ್ಕವಿಲ್ಲದಷ್ಟು ಸ್ವಾದಿಷ್ಟವಾದ ದೇಸಿ ಫೆನಿಗಳು ತಯಾರಾಗುತ್ತವೆ.

ಇತ್ತೀಚೆಗೆ ಯಂತ್ರ ಆಧಾರಿತ ಮಧ್ಯ ತಯಾರಿಕಾ ಘಟಕಗಳ ಸ್ಥಾಪನೆಯ ಕಾರಣದಿಂದ ಮನೆಯಲ್ಲಿಯೇ ತಯಾರಾಗುತ್ತಿದ್ದ ರಾಸಾಯನಿಕ ಮುಕ್ತ ಸಾವಯವ ಪೆನ್ನಿಗೆ ಈಗ ಬೇಡಿಕೆ ಕಡಿಮೆಯಾಗಿದೆ. ಗೇರು ಹಣ್ಣನ್ನು ಕಾಡಿನಿಂದ ಸಂಗ್ರಹಿಸಿ, ಅದರಿಂದ ಹಣ್ಣಿನ ರಸವನ್ನು ತಯಾರಿಸಿ, ಅದನ್ನು ಭಟ್ಟಿ ಇಳಿಸಿ ಮದ್ಯ ತಯಾರಿಸುವ ಪದ್ಧತಿ ಈಗ ನಶಿಸುತ್ತಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ ಭವಿಷ್ಯವೂ ಆತಂಕಕ್ಕೆ ಸಿಲುಕಿದೆ.

ಗೋವಾದಲ್ಲಿ ದಶಕಗಳಿಂದ ದೇಸಿ ಮದ್ಯವನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದ ಕುಟುಂಬ ಗಾಂವಕರ್ ಫ್ಯಾಮಿಲಿ. ಕಟ್ಟಿಗೆಯ ಕಡ್ಡಿಯನ್ನು ಬಳಸಿ ಕಾಡಿನಿಂದ ಹಣ್ಣನ್ನು ಆರಿಸಿ ತಂದು ಫೆನಿಯನ್ನು ತಯಾರಿಸುತ್ತಿದ್ದರು. ಆದರೆ ಸರ್ಕಾರ ಗೇರು ಹಣ್ಣುಗಳನ್ನು ಕಟಾವು ಮಾಡಲು ದೊಡ್ಡ ದೊಡ್ಡ ಮಾಲೀಕರಿಗೆ ಟೆಂಡರ್‌ ನೀಡುತ್ತಿದೆ. ಹೀಗಾಗಿ ನಮಗೆ ಏನೂ ಸಿಗುತ್ತಿಲ್ಲ ಎಂದು ಗಾಂವಕರ್ ಕುಟುಂಬದ ದೃಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಾಡಿನಿಂದ ಗೇರು ಹಣ್ಣು ಆರಿಸಲು ಮಕ್ಕಳು ದೃಪತಿ ಅವರಿಗೆ ಸಹಾಯ ಮಾಡುತ್ತಾರೆ. ಕಾಡಿನಿಂದ ತಂದ ಹಣ್ಣಿನಿಂದ ಕುಟುಂಬಸ್ಥರು ಸೇರಿ ಬೀಜವನ್ನು ಬೇರ್ಪಡಿಸುತ್ತಾರೆ. ನಂತರ ಗೇರು ಹಣ್ಣನ್ನು ತುಳಿದು ಅದರಿಂದ ರಸ ತೆಗೆಯುವ ಕಾರ್ಯ. ದೃಪತಿ ಗಾಂವಕಾರ್ ಅವರ ಮಕ್ಕಳು ಒಂದು ತೊಟ್ಟು ಗೇರು ಹಣ್ಣಿನ ರಸವನ್ನೂ ವ್ಯರ್ಥ ಮಾಡುವುದಿಲ್ಲ. ಉಳಿಕೆ ತ್ಯಾಜ್ಯ ಹಣ್ಣನ್ನು ಕುಟುಂಬಸ್ಥರು ರೈತರಿಗೆ ನೀಡುತ್ತಾರೆ. ಗೇರು ಹಣ್ಣಿನ ತ್ಯಾಜ್ಯ ಹಸು ಕುರಿಗಳಿಗೆ ಒಳ್ಳೆಯ ಆಹಾರವಾಗಿದೆ. ಹಾಗೇ ರೈತರ ತೋಟಕ್ಕೆ ಒಳ್ಲೆಯ ಗೊಬ್ಬರವೂ ಹೌದು.

ತಾಮ್ರದ ದೊಡ್ಡ ಹಂಡೆಗೆ ಗೇರು ಹಣ್ಣಿನ ರಸವನ್ನು ಸುರಿದು, ಹುತ್ತದ ಮಣ್ಣಿನಿಂದ ಹಂಡೆಯನ್ನು ಭದ್ರ ಪಡಿಸಿದೆರೆ ಪೆನ್ನಿ ತಯಾರಿಸುವ ಅರ್ಧ ಕೆಲಸ ಮುಗಿಯುತ್ತದೆ. ನಂತರ ಎಂಟುಗಂಟೆಗಳ ಕಾಲ ಸಮನಾದ ಶಾಖದಲ್ಲಿ ಗೇರು ಹಣ್ಣಿನ ರಸವನ್ನು ಕುದಿಸಿದರೆ ನೀರಿನ ಅಂಶ ಆವಿಯಾಗಿ ಪೆನ್ನಿ ಮಾತ್ರ ಹಂಡೆಗೆ ಜೋಡಿಸಿದ ಪೈಪ್ ಮೂಲಕ ಹೊರ ಬರುತ್ತದೆ. ಆಗ 40-45% ಆಲ್ಕೋಹಾಲ್ ಹೊಂದಿದ ಗೇರು ಹಣ್ಣಿನ ದೇಸಿ ಪೆನ್ನಿ ಸಿದ್ದವಾಗುತ್ತದೆ.

ಇದನ್ನೂ ಓದಿ : ಭದ್ರಾ  ಮೇಲ್ದಂಡೆ ಯೋಜನೆ ಭ್ರಷ್ಟಾಚಾರ: ಬಾಂಬ್ ಸಿಡಿಸಿದ ಹೆಚ್‌. ವಿಶ್ವನಾಥ್‌!

ದೃಪತಿ ಗಾಂವಕಾರ್ ಕುಟುಂಬ ವರ್ಷಕ್ಕೆ 175 ಲೀಟರ್ ಮಧ್ಯವನ್ನು ತಯಾರಿಸುತ್ತಾರೆ. ಆದರೆ ಇತ್ತೀಚೆಗೆ ಹಳ್ಳಿಗರೆಲ್ಲರೂ ಪಟ್ಟಣ ಸೇರಿರುವುದರಿಂದ ಗಾಂವಕಾರ್ ಕುಟುಂಬದ ದೇಸಿ ಪೆನ್ನಿಗೆ ಬೇಡಿಕೆಯೇ ಇಲ್ಲ.

ಮನೆಯಲ್ಲಿ ತಯಾರಿಸದ ಪೆನ್ನಿಗೆ ಯಾವುದೇ ರಾಸಾಯನಿಕೆ ಸೇರುವುದಿಲ್ಲ. ಅತ್ಯಂತ ಸಾವಯವವಾದ ಈ ಪೆನ್ನಿಗೆ  ಸ್ವಾದಿಷ್ಟ ರುಚಿ ಇದೆ. ಹಿಂದೆ ಸುತ್ತ ಮುತ್ತ ಹಳ್ಳಿಗರೆಲ್ಲ ನಮ್ಮಲ್ಲಿಯೇ ಪೆನ್ನಿ ಖರೀದಿಸುತ್ತಿದ್ದರು. ಈಗ ನಮಗೆ ಬೇಡಿಕೆಯೇ ಇಲ್ಲ. ಮಾರ್ಚ್‌-ಜೂನ್ ಸೀಸನ್‌ನಲ್ಲಿ ದಿನಕ್ಕೆ 300 ರೂಪಾಯಿ ಸಂಪಾದನೆಯೂ ಕಷ್ಟವಾಗಿದೆ. ಹಿಂದೆಲ್ಲ ಒಂದು ಸೀಸನ್‌ನಲ್ಲಿ 50,000 ರೂಪಾಯಿ ಸಂಪಾದಿಸುತ್ತಿದ್ದೆವು ಎಂದು ಗಾಂವಕಾರ್ ಕುಟುಂಬಸ್ಥರು ಹೇಳುತ್ತಾರೆ.

ಗೋವಾದ ದೊಡ್ಡ ಪೆನ್ನಿ ಬ್ರಾಂಡ್ ಖಜೂಲೋ ಈಗ ದೇಸಿ ಪೆನ್ನಿಗಳ ಸಹಾಯಕ್ಕೆ ಮುಂದೆ ಬಂದಿದೆ. ಗಂವಕಾರ್ ತರಹದ ನೂರಾರು ಕುಟುಂಬಗಳಿಂದ ಪೆನ್ನಿಯನ್ನು ಖರೀದಿಸಿ ದೊಡ್ಡ ಮಾರುಕಟ್ಟೆಯಲ್ಲಿ ಅದನ್ನು ಖಜೂಲೊ ಕಂಪನಿಯವರು ಮಾರುತ್ತಿದ್ದಾರೆ. ಆದರೆ ಪೆನ್ನಿ ದೇಸಿ ಮಧ್ಯದ ಅಡಿಯಲ್ಲಿ ಬರುವ ಕಾರಣ ಗೋವಾದ ಆಚೆಗೆ ಅದಕ್ಕೆ ಪ್ರವೇಶವಿಲ್ಲ. ಜೊತೆಗೆ ವರ್ಷದಿಂದ ವರ್ಷಕ್ಕೆ ದೇಸಿ ಪೆನ್ನಿ ಬೇಡಿಕೆ ಇಳಿಕೆಯಾಗುತ್ತಿದೆ. ಹಿಂದೆ ಗೋವಾದ ಆಕರ್ಷಣೆಗಳಲ್ಲಿ ಕ್ಯಾಷ್ಯೂ ಪೆನ್ನಿ ಕೂಡ ಒಂದಾಗಿತ್ತು ಎಂದು ಖಜೂಲೊ ಸಂಸ್ಥೆಯ ಮಾಲೀಕರು ತಿಳಿಸುತ್ತಾರೆ.

ಸರ್ಕಾರದ ಗೇರುಹಣ್ಣು ಕೀಳುವ ಟೆಂಡರ್ ದೊಡ್ಡ ದೊಡ್ಡ ಕಂಪನಿಗಳಿಗೆ ಪಾಲಾಗುತ್ತಿರುವುದರಿಂದ ಸಣ್ಣ ಸಣ್ಣ ಕುಟುಂಬಗಳಿಗೆ ಇಂದು ಏನೂ ಸಿಗುತ್ತಿಲ್ಲ. ಜೊತೆಗೆ ದೊಡ್ಡ ದೊಡ್ಡ ಮಧ್ಯ ತಯಾರಿಕರು ಡಿಸ್ಟಿಲರಿಯಲ್ಲಿ ಪೆನ್ನಿಯನ್ನು ತಯಾರಿಸಿ ಅಗ್ಗದ ಬೆಲೆಗೆ ಮಾರುತ್ತಿದ್ದಾರೆ. ದೊಡ್ಡ ಕಂಪನಿಗಳ ಜೊತೆ ದೃಪತಿ ಗಾಂವಕಾರ್ ತರಹದವರು ಸ್ಪರ್ಧಿಸಲು ಸಾಧ್ಯವಿಲ್ಲ. ಸರ್ಕಾರ ದೇಸಿ ಪೆನ್ನಿಯ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಪೆನ್ನಿ ತಯಾರಕ ಕುಟುಂಬಗಳ ಜೊತೆ ನಿಲ್ಲಬೇಕಿದೆ. ಗೇರು ಹಣ್ಣಿನ ಟೆಂಡರ್ ಬೆಲೆಯನ್ನು ತಗ್ಗಿಸಿ ಪೆನ್ನಿ ತಯಾರಕರ ಬದುಕು ಬೀದಿಗೆ ಬೀಳದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಕೊರೋನಾ ಕಾರಣದಿಂದ ಗೋವಾ ಮತ್ತು ಪಶ್ಚಿಮ ಕರಾವಳಿಯಲ್ಲಿ ಪ್ರವಾಸೋದ್ಯಮ ನಿಂತು ಹೋಗಿದೆ. ಮತ್ತೊಮ್ಮೆ ಪ್ರವಾಸಿಗರನ್ನು ಗೋವಾದತ್ತ ಆಕರ್ಷಿಸಲು ಗೇರುಹಣ್ಣಿನ ಸಾವಯವ ಪೆನ್ನಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಸ್ವಾದಿಷ್ಟ ಮತ್ತು ಸುರಕ್ಷಿತ ವಾದ 500 ವರ್ಷ ಇತಿಹಾಸವಿರುವ ಪೋರ್ಚುಗೀಸ್ ಮೂಲದ ಪೆನ್ನಿಯ ಭವಿಷ್ಯ ಸರ್ಕಾರಗಳ ಕೈಯಲ್ಲಿ ನರಳಾಡುತ್ತಿದೆ.

-ರಾಜೇಶ್ ಹೆಬ್ಬಾರ್

ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...