Homeನ್ಯಾಯ ಪಥಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 14/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಜಾಕೊ ವಂಡೊಮಾಲ್

ಮಿಸ್ಟರ್ ನೋಬಡಿ (MR. Nobody, ಇಂಗ್ಲಿಷ್, 2009)

ವಿಚ್ಛೇದನೆಗೊಂಡಿರುವ ತಂದೆತಾಯಿಗಳು ಬೇರೆಯಾಗುತ್ತಿದ್ದಾರೆ. ಅವರ ಹತ್ತು ವರ್ಷದ ಮಗ ನಿಮೋ ನೋಬಡಿ ಯಾರೊಂದಿಗೆ ಹೋಗಬೇಕೆನ್ನುವ ಗೊಂದಲದಲ್ಲಿರುತ್ತಾನೆ. ರೈಲ್ವೆ ನಿಲ್ದಾಣದಲ್ಲಿ ತಾಯಿ ಮಾತ್ರ ರೈಲು ಹತ್ತುತ್ತಾಳೆ. ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ, ತಾಯಿ ಮಗನನ್ನು ತನ್ನೊಂದಿಗೆ ಬರಲು ಕರೆಯುತ್ತಾಳೆ. ರೈಲಿನ ಹಿಂದೆ ಓಡುತ್ತಿರುವ ಬಾಲಕನನ್ನು ನಿಲ್ದಾಣದಲ್ಲಿ ನಿಂತಿರುವ ತಂದೆಯೂ ಅವನ ಬಳಿಗೆ ಬರಲು ಕರೆಯುತ್ತಾನೆ. ಈಗ ಯಾರ ಜೊತೆ ಹೋಗಬೇಕೆಂಬ ಆಯ್ಕೆಯಿಂದ ಪ್ರಾರಂಭವಾಗಿ, ಭವಿಷತ್ತಿನ ವಿವಿಧ ಸಂಭವನೀಯ ಬದುಕುಗಳೇ ಈ ಸಿನಿಮಾ.

ಸಿನಿಮಾದ ಮೊದಲ ದೃಶ್ಯ: ಅದು 2092ನೇ ಇಸವಿ, ಮನುಕುಲ ಸಾವನ್ನು ಜಯಿಸಿರುತ್ತದೆ. ಆಗ ಭೂಮಿಯ ಮೇಲೆ ಕೊನೆಯದಾಗಿ ಸಾಯುವವನು ನೂರ ಹದಿನೆಂಟು ವರ್ಷಗಳು ತುಂಬಿದ ವೃದ್ಧ ನೋಬಡಿ. ಕೋಮಾದಿಂದ ಹೊರಬಂದ ಮಿಸ್ಟರ್ ನೋಬಡಿಯ ಬದುಕಿನ ಬಗ್ಗೆ ಅಲ್ಲಿಗೆ ಬಂದ ಯುವ ಪತ್ರಕರ್ತನೊಬ್ಬ ಕೇಳುತ್ತಾನೆ. ಬಾಲಕನ ವಾಯ್ಸ್ ಓವರ್‌ನಿಂದ ಮುಂದುವರಿಯುವ ಕಥೆಯಲ್ಲಿ ಬಟರ್‌ಫ್ಲೈ ಎಫೆಕ್ಟ್
ಕುರಿತು ಹೇಳುತ್ತಾನೆ. ಚಿಟ್ಟೆಯೊಂದು ಹಾರುವಾಗ ಒಣಗಿದ ಎಲೆಯೊಂದು ಹಾರಿ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ನಡೆದುಬರುತ್ತಿರುವ ಇಬ್ಬರು ಭೇಟಿಯಾಗಲು ಸಹಾಯ ಮಾಡುತ್ತದೆ. ಹೀಗೆ ಒಂದಾದ ಜೋಡಿಗೆ ಮಗನಾಗಿ ನಿಮೋ ಹುಟ್ಟುತ್ತಾನೆ.

ಹತ್ತು ವರ್ಷವಿರುವಾಗ ಸಿಹಿ ತಿಂಡಿಯ ಅಂಗಡಿಗೆ ಹೋಗುವ ನಿಮೋ ಎರಡು ಬಗೆಯ ತಿಂಡಿಯನ್ನು ನೋಡಿ ಆಯ್ಕೆ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ವಾಪಸ್ಸಾಗುತ್ತಾನೆ. ಬರುವ ದಾರಿಯಲ್ಲಿ ನಿಮೋ ತನ್ನ ಮೂವರು ಗೆಳತಿಯರನ್ನು ನೋಡುತ್ತಾನೆ. ಅವರು ಅನ್ನಾ, ಎಲ್ಲಿಸ್ಸಾ ಮತ್ತು ಜೀನ್. ಅವರಲ್ಲಿ ಅನ್ನಾ ಅವನಿಗೆ ಅತಿ ಅಚ್ಚು ಮೆಚ್ಚು.

ಒಂದು ಕಥಾ ಎಳೆಯಲ್ಲಿ ತಾಯಿಯೊಂದಿಗೆ ಹೋದ ನಿಮೋ ಬೇರೆ ಊರಿನಲ್ಲಿ ಬೆಳೆದು ಹದಿನಾಲ್ಕು ವಯಸ್ಸಿನವನಾಗುತ್ತಾನೆ. ಅವನ ಶಾಲೆಗೆ ಅನ್ನಾ ಬರುತ್ತಾಳೆ. ಅನ್ನಾಳತ್ತ ಆಕರ್ಷಿತಗೊಳ್ಳುತ್ತಾನೆ. ಒಮ್ಮೆ ನದಿಯ ದಡದಲ್ಲಿ ಕುಳಿತಿರುವ ನಿಮೋನನ್ನು ಈಜಲು ಅನ್ನಾ ಕರೆಯುತ್ತಾಳೆ. ತನಗೆ ಈಜು ಬಾರದನ್ನು ಮುಚ್ಚಿಡಲು ಅವಳಿಗೆ ಕೋಪದಿಂದ ಬರುವುದಿಲ್ಲವೆನ್ನುತ್ತಾನೆ. ಅಲ್ಲಿಂದ ಅವನು ಒಂಟಿಯಾಗಿಯೇ ಬದುಕುತ್ತಾನೆ. ಇನ್ನೊಂದು ಆಯ್ಕೆಯಲ್ಲಿ ತನಗೆ ಈಜು ಬಾರದ ವಿಷಯವನ್ನು ಅನ್ನಾಗೆ ಹೇಳುತ್ತಾನೆ. ಅನ್ನಾ ನಿಮೋನ ನಡುವೆ ಪ್ರೀತಿಯಾಗುತ್ತದೆ. ಇಲ್ಲಿಂದ ಕಥೆ ಎರಡು ಭಾಗಗಳಾಗುತ್ತದೆ. ಮೊದಲನೆಯದು ಇಬ್ಬರು ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿ ಬದುಕುತ್ತಿರುವಾಗ, ನಿಮೋನ ಕಾರು ನದಿಗೆ ಹಾರಿ ಬಾಗಿಲು ತೆಗೆಯಲಾಗದೆ ನಿಮೋ ಸಾಯುವುದು ಕಥೆಯ ಕೊನೆ.

ಇನ್ನೊಂದು ಕಥಾ ಎಳೆಯಲ್ಲಿ ನಿಮೋನ ತಾಯಿಯ ಹೊಸ ಗಂಡನ ಮುಂಚಿನ ಮದುವೆಯಿಂದ ಹುಟ್ಟಿರುವ ಮಗಳು ಅನ್ನಾ ನಿಮೋನ ಮನೆಗೆ ಬರುತ್ತಾಳೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅವರಿಬ್ಬರೂ ಪರಸ್ಪರ ಹತ್ತಿರವಾಗುತ್ತಾರೆ. ಸಮಯ ಕಳೆದಂತೆ ನಿಮೋ ತಾಯಿಗೂ, ಅನ್ನಾಳ ತಂದೆಗೂ ಹೊಂದಾಣಿಕೆಯಾಗದೆ, ಅವರಿಬ್ಬರೂ ಬೇರೆಯಾಗುತ್ತಾರೆ. ನಿಮೋ ಬೆಳೆದು ಯುವಕನಾಗಿ ಅನ್ನಾಳ ಕಾಯುವಿಕೆಯಲ್ಲೇ ಇರಬೇಕಾದಾಗ, ಆಕಸ್ಮಿಕವಾಗಿ ಅನ್ನಾಳನ್ನು ಭೇಟಿಯಾಗುತ್ತಾನೆ. ಆಗ ಅನ್ನಾ ತನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟು ಅಲ್ಲಿಂದ ಹೋಗುತ್ತಾಳೆ. ಆಕಾಶದಿಂದ ಬಿದ್ದ ಮೊದಲ ಮಳೆ ಹನಿ ಅನ್ನಾಳ ದೂರವಾಣಿ ಸಂಖ್ಯೆಯನ್ನು ಅಳಿಸಿಬಿಡುತ್ತದೆ. ಅವಳಿಗಾಗಿ ಜೀವನಪೂರ್ತಿ ಕಾದರೂ ಅನ್ನಾ ಬರದಿರುವುದು ಈ ಕಥೆಯ ಕೊನೆ.

ಮತ್ತೊಂದು ಎಳೆಯಲ್ಲಿ ತಂದೆಯೊಂದಿಗೆ ಹೋದಾಗ ತಂದೆ ಅಪಘಾತವೊಂದರಿಂದ ಅಂಗವಿಕಲನಾಗುತ್ತಾನೆ. ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮೋಗೆ ಬರುತ್ತದೆ. ಇಲ್ಲಿ ಇನ್ನೊಬ್ಬ ಗೆಳತಿಯಾದ ಎಲ್ಲಿಸ್ಸಾಳನ್ನು ಪ್ರೀತಿಸಿ ಅವಳಿಗೆ ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಹೋಗುತ್ತಾನೆ. ಎಲ್ಲಿಸ್ಸಾ ಬೇಡವೆಂದಾಗ ಈ ಕಥೆ ಇನ್ನೆರಡಾಗಿ ಸೀಳುತ್ತದೆ. ಒಂದರಲ್ಲಿ ಬೈಕ್ ಅಪಘಾತವಾಗಿ ಆತ ಕೋಮಾಕ್ಕೆ ಹೋದರೆ. ಇನ್ನೊಂದರಲ್ಲಿ ಜೀನ್‌ಳನ್ನು ಮದುವೆಯಾಗಿ ಶ್ರೀಮಂತನಾಗಿ ಬದುಕಿದರೂ ನಿರುತ್ಸಾಹದಲ್ಲಿದ್ದು, ಕೊಲೆಯಾಗುತ್ತಾನೆ. ಎಲ್ಲಿಸ್ಸಾ ಒಪ್ಪಿಕೊಂಡಾಗ ಇಲ್ಲಿಂದ ಕಥೆ ಇನ್ನೆರಡು ಭಾಗಗಳಾಗುತ್ತವೆ. ಎಲ್ಲಿಸ್ಸಾಳನೊಂದಿಗೆ ಮದುವೆಯಾಗಿ ಕಾರು ಅಪಘಾತದಲ್ಲಿ ಎಲ್ಲಿಸ್ಸಾ ಸಾಯುತ್ತಾಳೆ. ಇನ್ನೊಂದು ಕಥಾಭಾಗದಲ್ಲಿ ಎಲ್ಲಿಸ್ಸಾ ಮದುವೆಯಾದರೂ ಸುಖವಾಗಿರದೆ ಎಲ್ಲಿಸ್ಸಾ ನಿಮೋನನ್ನು ಬಿಟ್ಟುಹೋಗುತ್ತಾಳೆ.

ಹೀಗೆ ಅನೇಕ ಕಥೆಗಳನ್ನು ಕೇಳಿದ ಪತ್ರಕರ್ತ, ವೃದ್ಧ ನಿಮೋನನ್ನು ನಿಜವಾಗಿ ನಡೆದ
ಕಥೆಯಾವುದೆಂದು ಕೇಳಿದಾಗ, ವೃದ್ಧ ನಿಮೋ ಇದೆಲ್ಲ ಹತ್ತು ವರ್ಷದ ಬಾಲಕನ ಕಲ್ಪನೆ ಎನ್ನುತ್ತಾನೆ. ತಂದೆ ಅಥವಾ ತಾಯಿಯ ಜೊತೆ ಹೋಗುವ ಆಯ್ಕೆಯಲ್ಲಿರುವ ಬಾಲಕ ನಿಮೋ ಬೇರೆಯದ್ದೇ ದಾರಿ ಆರಿಸಿಕೊಳ್ಳುವುದರ ಮೂಲಕ ಸಿನಿಮಾ ಮುಗಿಯುತ್ತದೆ.

ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟ್ (The Brand New Testament,, ಫ್ರೆಂಚ್, 2015):

ಸಾಮಾನ್ಯವಾಗಿ ಬದುಕುತ್ತಿರುವ ಜನರ ಮೊಬೈಲ್ ಫೋನ್‌ಗಳಿಗೆ ಅವರವರ ಸಾವಿನ ದಿನಾಂಕ ಬಂದು, ಬದುಕು ಕೊನೆಯಾಗುವ ದಿನ ಖಚಿತವಾಗಿಬಿಟ್ಟರೆ? ಸಾವಿನ ಭಯವೇ ಇಲ್ಲವಾದರೆ ದೇವರ ಮೌಲ್ಯವೇನಾಗುತ್ತದೆ?
ದೇವರಾದವನು ಬ್ರಸಲ್ಸ್ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಿಧೇಯಳಾಗಿರುವ ಹೆಂಡತಿ ಮತ್ತು ಒಂಭತ್ತು ವರ್ಷಗಳ ಮಗಳೊಂದಿಗೆ ವಾಸವಾಗಿರುತ್ತಾನೆ. ದೇವರು ಜಗಳಗಂಟ, ಸ್ಯಾಡಿಸ್ಟ್ ಆಗಿರುತ್ತಾನೆ. ದೇವರ ಹೆಂಡತಿ ಮುಗ್ಧೆ. ಸದಾ ಮೌನವಾಗಿ ಮನೆ ಕೆಲಸಗಳನ್ನು ಮಾಡುತ್ತಾ ತನ್ನ ಹೊಲಿಗೆ ಕೆಲಸದಲ್ಲಿ ನಿರತಳಾಗಿರುತ್ತಾಳೆ ಮತ್ತು ಅವಳಿಗೆ ಸುಂದರ ಹೂಗಳ ಚಿತ್ತಾರ ಬಿಡಿಸುವುದೆಂದರೆ ಅತಿ ಇಷ್ಟದ ಕೆಲಸ. ದೇವರು ಅವನ ರೂಮಿನ ಕಂಪ್ಯೂಟರಿನ ಮೂಲಕ ಮನುಷ್ಯರ ಹಣೆಬರಹವನ್ನು ನಿರ್ಧಾರಿಸುತ್ತಾನೆ. ಮನುಷ್ಯರು ದೇವರು ಮಾಡಿರುವ ನಿಯಮಗಳಿಂದ ಒದ್ದಾಡುವಾಗ ದೇವರು ನೋಡಿ ಖುಷಿ ಪಡುತ್ತಾನೆ. ರೈಲು, ವಿಮಾನ ಅಪಘಾತಗಳನ್ನು ಅವನ ಮನೋರಂಜನೆಗೋಸ್ಕರ ಅವನು ಮಾಡುತ್ತಿರುತ್ತಾನೆ.

ದೇವರ ಮಗಳಾದ ಈಯಾ ತಂದೆಯ ನಡತೆಯಿಂದ ಬೇಸತ್ತು, ದೇವರ ಕಂಪ್ಯೂಟರ್‌ನಿಂದ ಭೂಮಿಯಲ್ಲಿರುವ ಎಲ್ಲ ಮನುಷ್ಯರಿಗೆ ಅವರವರ ಸಾವಿನ ದಿನಾಂಕವನ್ನು ಅವರುಗಳ ಮೊಬೈಲ್ ಫೋನ್‌ಗಳಿಗೆ ಕಳುಹಿಸಿಬಿಡುತ್ತಾಳೆ. ದೇವರ ಹೆಂಡತಿ ಕಂಪ್ಯೂಟರಿನ ರೂಮನ್ನು ಒರೆಸುವಾಗ ಕಂಪ್ಯೂಟರಿನ ವೈರ್‌ಅನ್ನು ತೆಗೆದುಬಿಡುತ್ತಾಳೆ. ಸಾವಿನ ದಿನಾಂಕ ತಿಳಿದ ಜನರೆಲ್ಲ ಇಷ್ಟವಿಲ್ಲದ ಸಂಗಾತಿಗಳಿಂದ, ಕೆಲಸಗಳಿಂದ ದೂರವಾಗಿ ಅವರವರಿಗೆ ಇಷ್ಟದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ದೇವರ ಬಗ್ಗೆ ನೆನೆಯುವರೇ ಇರುವುದಿಲ್ಲ. ಇತ್ತ ಈಯಾ ಮನೆಯಿಂದ ಹೊರಬಂದು ನಿಜವಾದ ಪ್ರಪಂಚಕ್ಕೆ ಹೋಗಿ, ಅತಿ ನವೀನ ಒಡಂಬಡಿಕೆಯನ್ನು ಮಾಡುವುದಕ್ಕಾಗಿ, ಅಣ್ಣಾ ಜೆಸಿಯ (ಜೀಸಸ್ ಕ್ರೈಸ್ತ್) ಬಳಿ ಸಲಹೆ ಕೇಳುತ್ತಾಳೆ. ಶಿಲೆಯಾಗಿರುವ ಜೆಸಿ, ಈಯಾಳಿಗೆ ವಾಷಿಂಗ್ ಮಿಷನಿನಿಂದ ಹೊರ ಪ್ರಪಂಚಕ್ಕೆ ಹೋಗಿ, ಈಗಿರುವ ಹನ್ನೆರಡು ಮಂದಿ ಧರ್ಮ ಪ್ರಚಾರಕರ (ಅಪೊಸ್ತಲ್) ಜೊತೆಗೆ, ಹೆಚ್ಚುವರಿ ಆರು ಜನರನ್ನು ಹುಡುಕಾಟ ಮಾಡಿ, ಅವರಿಂದಲೇ ಬರೆಸುವಂತೆ ಹೇಳುತ್ತಾನೆ.

ಕೋಪಗೊಂಡ ತನ್ನ ತಂದೆ/ದೇವರ ಕೈಗೆ ಸಿಗದಂತೆ ಈಯಾ ವಾಷಿಂಗ್ ಮಿಷನಿನಿಂದ ನಿಜವಾದ ಪ್ರಪಂಚಕ್ಕೆ ಹೋಗುತ್ತಾಳೆ. ವಿವಿಧ ಬಗೆಯ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ವಿಭಾಗಗಳಲ್ಲಿ ಆರು ಮಂದಿಯನ್ನು ಹುಡುಕಲು ಈಯಾ ಮುಂದಾಗುತ್ತಿರುವಾಗಲೇ, ಅತ್ತ ಅದೇ ವಾಷಿಂಗ್ ಮಿಷನಿನಿಂದ ದೇವರು ತಾನು ಸೃಷ್ಟಿಸಿದ ಪ್ರಪಂಚಕ್ಕೆ ಮಗಳನ್ನು ಹುಡುಕಿಕೊಂಡು ಕೋಪದಲ್ಲಿ ಬರುತ್ತಾನೆ.

ಇಲ್ಲಿ ದೇವರು ಮಾಡಿದ ಎಲ್ಲ ರೀತಿ ರಿವಾಜುಗಳು ಮತ್ತು ನಿಯಮಗಳು ಅವನಿಗೂ ಅನ್ವಯವಾಗುತ್ತದೆ. ಅವನು ಸಾಮಾನ್ಯ ಮನುಷ್ಯನಂತೆ ಒದ್ದಾಡುತ್ತಾನೆ. ಚರ್ಚಿನಲ್ಲಿ ಊಟಕ್ಕಾಗಿ ಕಾಯುವಾಗ ಏಸುವಿನ ಬಗ್ಗೆ ಅವಹೇಳನಕಾರಿ ಟಿಪ್ಪಣಿ ಮಾಡಿ, ಅಲ್ಲಿ ಒದೆಯನ್ನೂ ತಿನ್ನುತ್ತಾನೆ. ದೇವರಿಗೆ ಗುರುತಿನ ಚೀಟಿ ಇಲ್ಲದ ಕಾರಣ ಅವನನ್ನು ಬೇರೆ ದೇಶಕ್ಕೆ ಕಳುಹಿಸಲಾಗುತ್ತದೆ. ದೇವರು ವಾಷಿಂಗ್ ಮಿಷನಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಮತ್ತೆ ತನ್ನ ಮನೆಗೆ ವಾಪಸಾಗುವ ದಾರಿಯನ್ನು ಹುಡುಕುತ್ತಾನೆ.

ಇತ್ತ ಪ್ರಪಂಚವೇ ಮುಗಿಯುವ ಹಂತಕ್ಕೆ ಬಂದಾಗ ದೇವರ ಹೆಂಡತಿ ಕಂಪ್ಯೂಟರಿನ ವೈರ್‌ಅನ್ನು ಮತ್ತೆ ಕನೆಕ್ಟ್ ಮಾಡಿ, ಆಗುವ ಅನಾಹುತವನ್ನು ನಿಲ್ಲಿಸುತ್ತಾಳೆ. ನೀಲಿ ಆಕಾಶ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ವಿವಿಧ ಬಗೆಯ ಹೂಗಳ ವಿನ್ಯಾಸಗಳು ಭೂಮಿಯಲ್ಲೆಲ್ಲಾ ಕಾಣುತ್ತವೆ. ಅದನ್ನೆಲ್ಲ ನೋಡಿ ಈಯಾ ಇದು ತಾಯಿಯ ಕೆಲಸವೆಂದು ನಗುತ್ತಾಳೆ.

ಈ ಸಿನಿಮಾ ಕಾಮಿಡಿಯಾಗಿದ್ದು, ಬದುಕಿನ ವಿವಿಧ ಹಂತಗಳಲ್ಲಿರುವ ಜನಗಳ ಕಥೆಗಳನ್ನು ಹೇಳಿದರೂ ಎಲ್ಲರೂ ಪ್ರೀತಿಗಾಗಿ ಹಂಬಲಿಸುವವರೇ ಆಗಿರುತ್ತಾರೆ.

ಜಾಕೊ ವಂಡೊಮಾಲ್ (Jaco Van Dormel)

ಜಾಕೊರ ಕಥಾವಸ್ತುಗಳು ವಿಚಿತ್ರ ಮತ್ತು ವಿಭಿನ್ನವಾದವು. ಇವರ ಒಂದು ಸಿನಿಮಾದಲ್ಲಿ ಒಂದೇ ಕಥೆಯನ್ನು ಹೇಳದೆ ಕಥೆಯೊಳಗೆ ಹಲವಾರು ಕಥೆಗಳನ್ನು ಹೆಣೆದು ಹೇಳುತ್ತಾ, ವಿವಿಧ ಬಗೆಯ ಭಾವನೆಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಾರೆ.

ಮಿಸ್ಟರ್ ನೋಬಡಿ ಸಿನಿಮಾದಲ್ಲಿ ಒಬ್ಬ ಬಾಲಕನ ಬದುಕಿನ ಹಲವಾರು ಆಯ್ಕೆಗಳು ಮತ್ತು ಆ ಆಯ್ಕೆಗಳಿಂದ ಹೊರಬರುವ ಬದುಕುಗಳನ್ನು ಚಿತ್ರಿಸಿದರೆ, ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟಿನಲ್ಲಿ ಬದುಕಿನ ವಿವಿಧ ಹಂತಗಳಲ್ಲಿರುವ ಜನರ ಕಥೆಗಳನ್ನು ಹಿಡಿದಿಟ್ಟಿದ್ದಾರೆ.

ಇವರು ಮೊದಲು ಬೆಲ್ಜಿಯಂನಲ್ಲಿ ಸಿನಿಮಾ ಮಾಡುತ್ತಾ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಅವಕಾಶಗಳನ್ನು ಗಳಿಸಿಕೊಂಡು ಬಂದವರು. ಇವರ ’ದಿ ಶೇಪ್ (2019) ಎನ್ನುವ ಕಿರುಚಿತ್ರ ಎಲ್ಲರೂ ನೋಡಲೇಬೇಕಾದದ್ದು. ಇದರಲ್ಲಿ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ಮಿಡಿಯಾ ಪ್ಲೂರಲಿಸಂನ (ಮಾಧ್ಯಮ ಬಹುತ್ವ) ಕುರಿತು ಸ್ಫುಟವಾಗಿ ಮತ್ತು ಅತಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ನಿರಂಕುಶ ಪ್ರಭುತ್ವಗಳು ಹೇಗೆ ವ್ಯಕ್ತಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಹವಣಿಸುತ್ತವೆ ಹಾಗೂ ನಂತರದಲ್ಲಿ ಎಲ್ಲ ಸುದ್ದಿವಾಹಿನಿಗಳು ಸರ್ಕಾರದ ಕೈಗೊಂಬೆಗಳಾದಾಗ, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಜೆಗಳೇ ಧ್ವನಿ ಎತ್ತಿ ಬಲಿಷ್ಟ ಸರ್ಕಾರಗಳ ವಿರುದ್ಧ ಹೋರಾಡಬಹುದೆಂಬುದನ್ನು ದಿ ಶೇಪ್ ಕಿರುಚಿತ್ರದಲ್ಲಿ ಜಾಕೋ ಕಟ್ಟಿಕೊಟ್ಟಿದ್ದಾರೆ. ವಿಶ್ವದೆಲ್ಲೆಡೆ ಹಲವು ನಿರಂಕುಶ ಪ್ರಭುತ್ವಗಳ ಜೊತೆ ಸೆಣೆಸುತ್ತಿರುವ ಸಾಮಾನ್ಯ ಜನರ ಕಥೆಯಾಗಿದೆ ಇದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...