Homeನ್ಯಾಯ ಪಥಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 14/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಜಾಕೊ ವಂಡೊಮಾಲ್

ಮಿಸ್ಟರ್ ನೋಬಡಿ (MR. Nobody, ಇಂಗ್ಲಿಷ್, 2009)

ವಿಚ್ಛೇದನೆಗೊಂಡಿರುವ ತಂದೆತಾಯಿಗಳು ಬೇರೆಯಾಗುತ್ತಿದ್ದಾರೆ. ಅವರ ಹತ್ತು ವರ್ಷದ ಮಗ ನಿಮೋ ನೋಬಡಿ ಯಾರೊಂದಿಗೆ ಹೋಗಬೇಕೆನ್ನುವ ಗೊಂದಲದಲ್ಲಿರುತ್ತಾನೆ. ರೈಲ್ವೆ ನಿಲ್ದಾಣದಲ್ಲಿ ತಾಯಿ ಮಾತ್ರ ರೈಲು ಹತ್ತುತ್ತಾಳೆ. ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ, ತಾಯಿ ಮಗನನ್ನು ತನ್ನೊಂದಿಗೆ ಬರಲು ಕರೆಯುತ್ತಾಳೆ. ರೈಲಿನ ಹಿಂದೆ ಓಡುತ್ತಿರುವ ಬಾಲಕನನ್ನು ನಿಲ್ದಾಣದಲ್ಲಿ ನಿಂತಿರುವ ತಂದೆಯೂ ಅವನ ಬಳಿಗೆ ಬರಲು ಕರೆಯುತ್ತಾನೆ. ಈಗ ಯಾರ ಜೊತೆ ಹೋಗಬೇಕೆಂಬ ಆಯ್ಕೆಯಿಂದ ಪ್ರಾರಂಭವಾಗಿ, ಭವಿಷತ್ತಿನ ವಿವಿಧ ಸಂಭವನೀಯ ಬದುಕುಗಳೇ ಈ ಸಿನಿಮಾ.

ಸಿನಿಮಾದ ಮೊದಲ ದೃಶ್ಯ: ಅದು 2092ನೇ ಇಸವಿ, ಮನುಕುಲ ಸಾವನ್ನು ಜಯಿಸಿರುತ್ತದೆ. ಆಗ ಭೂಮಿಯ ಮೇಲೆ ಕೊನೆಯದಾಗಿ ಸಾಯುವವನು ನೂರ ಹದಿನೆಂಟು ವರ್ಷಗಳು ತುಂಬಿದ ವೃದ್ಧ ನೋಬಡಿ. ಕೋಮಾದಿಂದ ಹೊರಬಂದ ಮಿಸ್ಟರ್ ನೋಬಡಿಯ ಬದುಕಿನ ಬಗ್ಗೆ ಅಲ್ಲಿಗೆ ಬಂದ ಯುವ ಪತ್ರಕರ್ತನೊಬ್ಬ ಕೇಳುತ್ತಾನೆ. ಬಾಲಕನ ವಾಯ್ಸ್ ಓವರ್‌ನಿಂದ ಮುಂದುವರಿಯುವ ಕಥೆಯಲ್ಲಿ ಬಟರ್‌ಫ್ಲೈ ಎಫೆಕ್ಟ್
ಕುರಿತು ಹೇಳುತ್ತಾನೆ. ಚಿಟ್ಟೆಯೊಂದು ಹಾರುವಾಗ ಒಣಗಿದ ಎಲೆಯೊಂದು ಹಾರಿ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ನಡೆದುಬರುತ್ತಿರುವ ಇಬ್ಬರು ಭೇಟಿಯಾಗಲು ಸಹಾಯ ಮಾಡುತ್ತದೆ. ಹೀಗೆ ಒಂದಾದ ಜೋಡಿಗೆ ಮಗನಾಗಿ ನಿಮೋ ಹುಟ್ಟುತ್ತಾನೆ.

ಹತ್ತು ವರ್ಷವಿರುವಾಗ ಸಿಹಿ ತಿಂಡಿಯ ಅಂಗಡಿಗೆ ಹೋಗುವ ನಿಮೋ ಎರಡು ಬಗೆಯ ತಿಂಡಿಯನ್ನು ನೋಡಿ ಆಯ್ಕೆ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ವಾಪಸ್ಸಾಗುತ್ತಾನೆ. ಬರುವ ದಾರಿಯಲ್ಲಿ ನಿಮೋ ತನ್ನ ಮೂವರು ಗೆಳತಿಯರನ್ನು ನೋಡುತ್ತಾನೆ. ಅವರು ಅನ್ನಾ, ಎಲ್ಲಿಸ್ಸಾ ಮತ್ತು ಜೀನ್. ಅವರಲ್ಲಿ ಅನ್ನಾ ಅವನಿಗೆ ಅತಿ ಅಚ್ಚು ಮೆಚ್ಚು.

ಒಂದು ಕಥಾ ಎಳೆಯಲ್ಲಿ ತಾಯಿಯೊಂದಿಗೆ ಹೋದ ನಿಮೋ ಬೇರೆ ಊರಿನಲ್ಲಿ ಬೆಳೆದು ಹದಿನಾಲ್ಕು ವಯಸ್ಸಿನವನಾಗುತ್ತಾನೆ. ಅವನ ಶಾಲೆಗೆ ಅನ್ನಾ ಬರುತ್ತಾಳೆ. ಅನ್ನಾಳತ್ತ ಆಕರ್ಷಿತಗೊಳ್ಳುತ್ತಾನೆ. ಒಮ್ಮೆ ನದಿಯ ದಡದಲ್ಲಿ ಕುಳಿತಿರುವ ನಿಮೋನನ್ನು ಈಜಲು ಅನ್ನಾ ಕರೆಯುತ್ತಾಳೆ. ತನಗೆ ಈಜು ಬಾರದನ್ನು ಮುಚ್ಚಿಡಲು ಅವಳಿಗೆ ಕೋಪದಿಂದ ಬರುವುದಿಲ್ಲವೆನ್ನುತ್ತಾನೆ. ಅಲ್ಲಿಂದ ಅವನು ಒಂಟಿಯಾಗಿಯೇ ಬದುಕುತ್ತಾನೆ. ಇನ್ನೊಂದು ಆಯ್ಕೆಯಲ್ಲಿ ತನಗೆ ಈಜು ಬಾರದ ವಿಷಯವನ್ನು ಅನ್ನಾಗೆ ಹೇಳುತ್ತಾನೆ. ಅನ್ನಾ ನಿಮೋನ ನಡುವೆ ಪ್ರೀತಿಯಾಗುತ್ತದೆ. ಇಲ್ಲಿಂದ ಕಥೆ ಎರಡು ಭಾಗಗಳಾಗುತ್ತದೆ. ಮೊದಲನೆಯದು ಇಬ್ಬರು ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿ ಬದುಕುತ್ತಿರುವಾಗ, ನಿಮೋನ ಕಾರು ನದಿಗೆ ಹಾರಿ ಬಾಗಿಲು ತೆಗೆಯಲಾಗದೆ ನಿಮೋ ಸಾಯುವುದು ಕಥೆಯ ಕೊನೆ.

ಇನ್ನೊಂದು ಕಥಾ ಎಳೆಯಲ್ಲಿ ನಿಮೋನ ತಾಯಿಯ ಹೊಸ ಗಂಡನ ಮುಂಚಿನ ಮದುವೆಯಿಂದ ಹುಟ್ಟಿರುವ ಮಗಳು ಅನ್ನಾ ನಿಮೋನ ಮನೆಗೆ ಬರುತ್ತಾಳೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅವರಿಬ್ಬರೂ ಪರಸ್ಪರ ಹತ್ತಿರವಾಗುತ್ತಾರೆ. ಸಮಯ ಕಳೆದಂತೆ ನಿಮೋ ತಾಯಿಗೂ, ಅನ್ನಾಳ ತಂದೆಗೂ ಹೊಂದಾಣಿಕೆಯಾಗದೆ, ಅವರಿಬ್ಬರೂ ಬೇರೆಯಾಗುತ್ತಾರೆ. ನಿಮೋ ಬೆಳೆದು ಯುವಕನಾಗಿ ಅನ್ನಾಳ ಕಾಯುವಿಕೆಯಲ್ಲೇ ಇರಬೇಕಾದಾಗ, ಆಕಸ್ಮಿಕವಾಗಿ ಅನ್ನಾಳನ್ನು ಭೇಟಿಯಾಗುತ್ತಾನೆ. ಆಗ ಅನ್ನಾ ತನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟು ಅಲ್ಲಿಂದ ಹೋಗುತ್ತಾಳೆ. ಆಕಾಶದಿಂದ ಬಿದ್ದ ಮೊದಲ ಮಳೆ ಹನಿ ಅನ್ನಾಳ ದೂರವಾಣಿ ಸಂಖ್ಯೆಯನ್ನು ಅಳಿಸಿಬಿಡುತ್ತದೆ. ಅವಳಿಗಾಗಿ ಜೀವನಪೂರ್ತಿ ಕಾದರೂ ಅನ್ನಾ ಬರದಿರುವುದು ಈ ಕಥೆಯ ಕೊನೆ.

ಮತ್ತೊಂದು ಎಳೆಯಲ್ಲಿ ತಂದೆಯೊಂದಿಗೆ ಹೋದಾಗ ತಂದೆ ಅಪಘಾತವೊಂದರಿಂದ ಅಂಗವಿಕಲನಾಗುತ್ತಾನೆ. ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮೋಗೆ ಬರುತ್ತದೆ. ಇಲ್ಲಿ ಇನ್ನೊಬ್ಬ ಗೆಳತಿಯಾದ ಎಲ್ಲಿಸ್ಸಾಳನ್ನು ಪ್ರೀತಿಸಿ ಅವಳಿಗೆ ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಹೋಗುತ್ತಾನೆ. ಎಲ್ಲಿಸ್ಸಾ ಬೇಡವೆಂದಾಗ ಈ ಕಥೆ ಇನ್ನೆರಡಾಗಿ ಸೀಳುತ್ತದೆ. ಒಂದರಲ್ಲಿ ಬೈಕ್ ಅಪಘಾತವಾಗಿ ಆತ ಕೋಮಾಕ್ಕೆ ಹೋದರೆ. ಇನ್ನೊಂದರಲ್ಲಿ ಜೀನ್‌ಳನ್ನು ಮದುವೆಯಾಗಿ ಶ್ರೀಮಂತನಾಗಿ ಬದುಕಿದರೂ ನಿರುತ್ಸಾಹದಲ್ಲಿದ್ದು, ಕೊಲೆಯಾಗುತ್ತಾನೆ. ಎಲ್ಲಿಸ್ಸಾ ಒಪ್ಪಿಕೊಂಡಾಗ ಇಲ್ಲಿಂದ ಕಥೆ ಇನ್ನೆರಡು ಭಾಗಗಳಾಗುತ್ತವೆ. ಎಲ್ಲಿಸ್ಸಾಳನೊಂದಿಗೆ ಮದುವೆಯಾಗಿ ಕಾರು ಅಪಘಾತದಲ್ಲಿ ಎಲ್ಲಿಸ್ಸಾ ಸಾಯುತ್ತಾಳೆ. ಇನ್ನೊಂದು ಕಥಾಭಾಗದಲ್ಲಿ ಎಲ್ಲಿಸ್ಸಾ ಮದುವೆಯಾದರೂ ಸುಖವಾಗಿರದೆ ಎಲ್ಲಿಸ್ಸಾ ನಿಮೋನನ್ನು ಬಿಟ್ಟುಹೋಗುತ್ತಾಳೆ.

ಹೀಗೆ ಅನೇಕ ಕಥೆಗಳನ್ನು ಕೇಳಿದ ಪತ್ರಕರ್ತ, ವೃದ್ಧ ನಿಮೋನನ್ನು ನಿಜವಾಗಿ ನಡೆದ
ಕಥೆಯಾವುದೆಂದು ಕೇಳಿದಾಗ, ವೃದ್ಧ ನಿಮೋ ಇದೆಲ್ಲ ಹತ್ತು ವರ್ಷದ ಬಾಲಕನ ಕಲ್ಪನೆ ಎನ್ನುತ್ತಾನೆ. ತಂದೆ ಅಥವಾ ತಾಯಿಯ ಜೊತೆ ಹೋಗುವ ಆಯ್ಕೆಯಲ್ಲಿರುವ ಬಾಲಕ ನಿಮೋ ಬೇರೆಯದ್ದೇ ದಾರಿ ಆರಿಸಿಕೊಳ್ಳುವುದರ ಮೂಲಕ ಸಿನಿಮಾ ಮುಗಿಯುತ್ತದೆ.

ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟ್ (The Brand New Testament,, ಫ್ರೆಂಚ್, 2015):

ಸಾಮಾನ್ಯವಾಗಿ ಬದುಕುತ್ತಿರುವ ಜನರ ಮೊಬೈಲ್ ಫೋನ್‌ಗಳಿಗೆ ಅವರವರ ಸಾವಿನ ದಿನಾಂಕ ಬಂದು, ಬದುಕು ಕೊನೆಯಾಗುವ ದಿನ ಖಚಿತವಾಗಿಬಿಟ್ಟರೆ? ಸಾವಿನ ಭಯವೇ ಇಲ್ಲವಾದರೆ ದೇವರ ಮೌಲ್ಯವೇನಾಗುತ್ತದೆ?
ದೇವರಾದವನು ಬ್ರಸಲ್ಸ್ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಿಧೇಯಳಾಗಿರುವ ಹೆಂಡತಿ ಮತ್ತು ಒಂಭತ್ತು ವರ್ಷಗಳ ಮಗಳೊಂದಿಗೆ ವಾಸವಾಗಿರುತ್ತಾನೆ. ದೇವರು ಜಗಳಗಂಟ, ಸ್ಯಾಡಿಸ್ಟ್ ಆಗಿರುತ್ತಾನೆ. ದೇವರ ಹೆಂಡತಿ ಮುಗ್ಧೆ. ಸದಾ ಮೌನವಾಗಿ ಮನೆ ಕೆಲಸಗಳನ್ನು ಮಾಡುತ್ತಾ ತನ್ನ ಹೊಲಿಗೆ ಕೆಲಸದಲ್ಲಿ ನಿರತಳಾಗಿರುತ್ತಾಳೆ ಮತ್ತು ಅವಳಿಗೆ ಸುಂದರ ಹೂಗಳ ಚಿತ್ತಾರ ಬಿಡಿಸುವುದೆಂದರೆ ಅತಿ ಇಷ್ಟದ ಕೆಲಸ. ದೇವರು ಅವನ ರೂಮಿನ ಕಂಪ್ಯೂಟರಿನ ಮೂಲಕ ಮನುಷ್ಯರ ಹಣೆಬರಹವನ್ನು ನಿರ್ಧಾರಿಸುತ್ತಾನೆ. ಮನುಷ್ಯರು ದೇವರು ಮಾಡಿರುವ ನಿಯಮಗಳಿಂದ ಒದ್ದಾಡುವಾಗ ದೇವರು ನೋಡಿ ಖುಷಿ ಪಡುತ್ತಾನೆ. ರೈಲು, ವಿಮಾನ ಅಪಘಾತಗಳನ್ನು ಅವನ ಮನೋರಂಜನೆಗೋಸ್ಕರ ಅವನು ಮಾಡುತ್ತಿರುತ್ತಾನೆ.

ದೇವರ ಮಗಳಾದ ಈಯಾ ತಂದೆಯ ನಡತೆಯಿಂದ ಬೇಸತ್ತು, ದೇವರ ಕಂಪ್ಯೂಟರ್‌ನಿಂದ ಭೂಮಿಯಲ್ಲಿರುವ ಎಲ್ಲ ಮನುಷ್ಯರಿಗೆ ಅವರವರ ಸಾವಿನ ದಿನಾಂಕವನ್ನು ಅವರುಗಳ ಮೊಬೈಲ್ ಫೋನ್‌ಗಳಿಗೆ ಕಳುಹಿಸಿಬಿಡುತ್ತಾಳೆ. ದೇವರ ಹೆಂಡತಿ ಕಂಪ್ಯೂಟರಿನ ರೂಮನ್ನು ಒರೆಸುವಾಗ ಕಂಪ್ಯೂಟರಿನ ವೈರ್‌ಅನ್ನು ತೆಗೆದುಬಿಡುತ್ತಾಳೆ. ಸಾವಿನ ದಿನಾಂಕ ತಿಳಿದ ಜನರೆಲ್ಲ ಇಷ್ಟವಿಲ್ಲದ ಸಂಗಾತಿಗಳಿಂದ, ಕೆಲಸಗಳಿಂದ ದೂರವಾಗಿ ಅವರವರಿಗೆ ಇಷ್ಟದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ದೇವರ ಬಗ್ಗೆ ನೆನೆಯುವರೇ ಇರುವುದಿಲ್ಲ. ಇತ್ತ ಈಯಾ ಮನೆಯಿಂದ ಹೊರಬಂದು ನಿಜವಾದ ಪ್ರಪಂಚಕ್ಕೆ ಹೋಗಿ, ಅತಿ ನವೀನ ಒಡಂಬಡಿಕೆಯನ್ನು ಮಾಡುವುದಕ್ಕಾಗಿ, ಅಣ್ಣಾ ಜೆಸಿಯ (ಜೀಸಸ್ ಕ್ರೈಸ್ತ್) ಬಳಿ ಸಲಹೆ ಕೇಳುತ್ತಾಳೆ. ಶಿಲೆಯಾಗಿರುವ ಜೆಸಿ, ಈಯಾಳಿಗೆ ವಾಷಿಂಗ್ ಮಿಷನಿನಿಂದ ಹೊರ ಪ್ರಪಂಚಕ್ಕೆ ಹೋಗಿ, ಈಗಿರುವ ಹನ್ನೆರಡು ಮಂದಿ ಧರ್ಮ ಪ್ರಚಾರಕರ (ಅಪೊಸ್ತಲ್) ಜೊತೆಗೆ, ಹೆಚ್ಚುವರಿ ಆರು ಜನರನ್ನು ಹುಡುಕಾಟ ಮಾಡಿ, ಅವರಿಂದಲೇ ಬರೆಸುವಂತೆ ಹೇಳುತ್ತಾನೆ.

ಕೋಪಗೊಂಡ ತನ್ನ ತಂದೆ/ದೇವರ ಕೈಗೆ ಸಿಗದಂತೆ ಈಯಾ ವಾಷಿಂಗ್ ಮಿಷನಿನಿಂದ ನಿಜವಾದ ಪ್ರಪಂಚಕ್ಕೆ ಹೋಗುತ್ತಾಳೆ. ವಿವಿಧ ಬಗೆಯ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ವಿಭಾಗಗಳಲ್ಲಿ ಆರು ಮಂದಿಯನ್ನು ಹುಡುಕಲು ಈಯಾ ಮುಂದಾಗುತ್ತಿರುವಾಗಲೇ, ಅತ್ತ ಅದೇ ವಾಷಿಂಗ್ ಮಿಷನಿನಿಂದ ದೇವರು ತಾನು ಸೃಷ್ಟಿಸಿದ ಪ್ರಪಂಚಕ್ಕೆ ಮಗಳನ್ನು ಹುಡುಕಿಕೊಂಡು ಕೋಪದಲ್ಲಿ ಬರುತ್ತಾನೆ.

ಇಲ್ಲಿ ದೇವರು ಮಾಡಿದ ಎಲ್ಲ ರೀತಿ ರಿವಾಜುಗಳು ಮತ್ತು ನಿಯಮಗಳು ಅವನಿಗೂ ಅನ್ವಯವಾಗುತ್ತದೆ. ಅವನು ಸಾಮಾನ್ಯ ಮನುಷ್ಯನಂತೆ ಒದ್ದಾಡುತ್ತಾನೆ. ಚರ್ಚಿನಲ್ಲಿ ಊಟಕ್ಕಾಗಿ ಕಾಯುವಾಗ ಏಸುವಿನ ಬಗ್ಗೆ ಅವಹೇಳನಕಾರಿ ಟಿಪ್ಪಣಿ ಮಾಡಿ, ಅಲ್ಲಿ ಒದೆಯನ್ನೂ ತಿನ್ನುತ್ತಾನೆ. ದೇವರಿಗೆ ಗುರುತಿನ ಚೀಟಿ ಇಲ್ಲದ ಕಾರಣ ಅವನನ್ನು ಬೇರೆ ದೇಶಕ್ಕೆ ಕಳುಹಿಸಲಾಗುತ್ತದೆ. ದೇವರು ವಾಷಿಂಗ್ ಮಿಷನಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಮತ್ತೆ ತನ್ನ ಮನೆಗೆ ವಾಪಸಾಗುವ ದಾರಿಯನ್ನು ಹುಡುಕುತ್ತಾನೆ.

ಇತ್ತ ಪ್ರಪಂಚವೇ ಮುಗಿಯುವ ಹಂತಕ್ಕೆ ಬಂದಾಗ ದೇವರ ಹೆಂಡತಿ ಕಂಪ್ಯೂಟರಿನ ವೈರ್‌ಅನ್ನು ಮತ್ತೆ ಕನೆಕ್ಟ್ ಮಾಡಿ, ಆಗುವ ಅನಾಹುತವನ್ನು ನಿಲ್ಲಿಸುತ್ತಾಳೆ. ನೀಲಿ ಆಕಾಶ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ವಿವಿಧ ಬಗೆಯ ಹೂಗಳ ವಿನ್ಯಾಸಗಳು ಭೂಮಿಯಲ್ಲೆಲ್ಲಾ ಕಾಣುತ್ತವೆ. ಅದನ್ನೆಲ್ಲ ನೋಡಿ ಈಯಾ ಇದು ತಾಯಿಯ ಕೆಲಸವೆಂದು ನಗುತ್ತಾಳೆ.

ಈ ಸಿನಿಮಾ ಕಾಮಿಡಿಯಾಗಿದ್ದು, ಬದುಕಿನ ವಿವಿಧ ಹಂತಗಳಲ್ಲಿರುವ ಜನಗಳ ಕಥೆಗಳನ್ನು ಹೇಳಿದರೂ ಎಲ್ಲರೂ ಪ್ರೀತಿಗಾಗಿ ಹಂಬಲಿಸುವವರೇ ಆಗಿರುತ್ತಾರೆ.

ಜಾಕೊ ವಂಡೊಮಾಲ್ (Jaco Van Dormel)

ಜಾಕೊರ ಕಥಾವಸ್ತುಗಳು ವಿಚಿತ್ರ ಮತ್ತು ವಿಭಿನ್ನವಾದವು. ಇವರ ಒಂದು ಸಿನಿಮಾದಲ್ಲಿ ಒಂದೇ ಕಥೆಯನ್ನು ಹೇಳದೆ ಕಥೆಯೊಳಗೆ ಹಲವಾರು ಕಥೆಗಳನ್ನು ಹೆಣೆದು ಹೇಳುತ್ತಾ, ವಿವಿಧ ಬಗೆಯ ಭಾವನೆಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಾರೆ.

ಮಿಸ್ಟರ್ ನೋಬಡಿ ಸಿನಿಮಾದಲ್ಲಿ ಒಬ್ಬ ಬಾಲಕನ ಬದುಕಿನ ಹಲವಾರು ಆಯ್ಕೆಗಳು ಮತ್ತು ಆ ಆಯ್ಕೆಗಳಿಂದ ಹೊರಬರುವ ಬದುಕುಗಳನ್ನು ಚಿತ್ರಿಸಿದರೆ, ದಿ ಬ್ರ್ಯಾಂಡ್ ನ್ಯೂ ಟೆಸ್ಟಮೆಂಟಿನಲ್ಲಿ ಬದುಕಿನ ವಿವಿಧ ಹಂತಗಳಲ್ಲಿರುವ ಜನರ ಕಥೆಗಳನ್ನು ಹಿಡಿದಿಟ್ಟಿದ್ದಾರೆ.

ಇವರು ಮೊದಲು ಬೆಲ್ಜಿಯಂನಲ್ಲಿ ಸಿನಿಮಾ ಮಾಡುತ್ತಾ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಅವಕಾಶಗಳನ್ನು ಗಳಿಸಿಕೊಂಡು ಬಂದವರು. ಇವರ ’ದಿ ಶೇಪ್ (2019) ಎನ್ನುವ ಕಿರುಚಿತ್ರ ಎಲ್ಲರೂ ನೋಡಲೇಬೇಕಾದದ್ದು. ಇದರಲ್ಲಿ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ಮಿಡಿಯಾ ಪ್ಲೂರಲಿಸಂನ (ಮಾಧ್ಯಮ ಬಹುತ್ವ) ಕುರಿತು ಸ್ಫುಟವಾಗಿ ಮತ್ತು ಅತಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ನಿರಂಕುಶ ಪ್ರಭುತ್ವಗಳು ಹೇಗೆ ವ್ಯಕ್ತಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಹವಣಿಸುತ್ತವೆ ಹಾಗೂ ನಂತರದಲ್ಲಿ ಎಲ್ಲ ಸುದ್ದಿವಾಹಿನಿಗಳು ಸರ್ಕಾರದ ಕೈಗೊಂಬೆಗಳಾದಾಗ, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಜೆಗಳೇ ಧ್ವನಿ ಎತ್ತಿ ಬಲಿಷ್ಟ ಸರ್ಕಾರಗಳ ವಿರುದ್ಧ ಹೋರಾಡಬಹುದೆಂಬುದನ್ನು ದಿ ಶೇಪ್ ಕಿರುಚಿತ್ರದಲ್ಲಿ ಜಾಕೋ ಕಟ್ಟಿಕೊಟ್ಟಿದ್ದಾರೆ. ವಿಶ್ವದೆಲ್ಲೆಡೆ ಹಲವು ನಿರಂಕುಶ ಪ್ರಭುತ್ವಗಳ ಜೊತೆ ಸೆಣೆಸುತ್ತಿರುವ ಸಾಮಾನ್ಯ ಜನರ ಕಥೆಯಾಗಿದೆ ಇದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...