Homeಅನುವಾದಿತ ಲೇಖನರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯಲ್ಲಿ ಬಿಜೆಪಿ ಜಾಹೀರಾತು: ವಿವಿಗಳಿಗೆ ಪುಸ್ತಕ ಖರೀದಿಸುವಂತೆ ತಾಕೀತು

ರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯಲ್ಲಿ ಬಿಜೆಪಿ ಜಾಹೀರಾತು: ವಿವಿಗಳಿಗೆ ಪುಸ್ತಕ ಖರೀದಿಸುವಂತೆ ತಾಕೀತು

'ನವ ಭಾರತ ನಿರ್ಮಾಣದ ಅಭಿಯಾನ ಬೆಂಬಲಿಸೋಣ, ಪಕ್ಷ ಸೇರಿ ಮತ್ತು ಈ ಅಭಿಯಾನದಲ್ಲಿ ಕೈಜೋಡಿಸಿ. ಒಂದೇ ಭಾರತ ಶ್ರೇಷ್ಠ ಭಾರತ' ಎಂಬ ಸಾಲುಗಳು ಜಾಹೀರಾತಿನಲ್ಲಿವೆ.

- Advertisement -
- Advertisement -

ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರ ಜೀವನಚರಿತ್ರೆ ‘ನಿಮಿತ್ತ ಮಾತ್ರ ಹೂಂ ಮೇ’ ಪುಸ್ತಕವು ಜುಲೈ 1 ರಂದು ಅವರ 80 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನ ಸ್ಪೀಕರ್ ಸಿ.ಪಿ.ಜೋಶಿಯವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮವೇನೋ ಚೆನ್ನಾಗಿ ನಡೆಯಿತು. ಅತಿಥಿಗಳು ಕಲ್ರಾಜ್ ಮಿಶ್ರಾ ಜೀವನದ ಪುಟಗಳನ್ನೊಮ್ಮೆ ತಿರುವಿಹಾಕಿದರು. ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಬರಹಕ್ಕೆ ಇಳಿದ ಮಿಶ್ರಾ ಸಾಹೇಬರ ಬದುಕನ್ನು ಕೊಂಡಾಡಿದರು. ಕಾರ್ಯಕ್ರಮ ಇಷ್ಟಕ್ಕೆ ಮುಗಿಯಲಿಲ್ಲ.

ಕಾರ್ಯಕ್ರಮದಲ್ಲಿ ನೆರೆದಿದ್ದ ವಿಶ್ವವಿದ್ಯಾಲಯದ ಕುಲಪತಿಗಳು ಕಾರ್ಯಕ್ರಮದಿಂದ ಹೊರಡುವ ಹೊತ್ತಿಗೆ ಅವರಿಗೆಲ್ಲ ಆಶ್ಚರ್ಯ ಕಾದಿತ್ತು. ಸುಮಾರು 27 ವಿಶ್ವವಿದ್ಯಾಲಯಗಳ ಕುಲಪತಿಗಳು ಒಮ್ಮೆಲೆ ಚಕಿತರಾದರು. ಕಾರಣವಿಷ್ಟೆ ರಾಜಭವನದ ಸಿಬ್ಬಂದಿಯೊಬ್ಬರು ಕುಲಪತಿಗಳ ಕಾರಿಗೆ ರಾಜ್ಯಪಾಲರ ಜೀವನಚರಿತ್ರೆ ಪುಸ್ತಕಗಳ 2 ದೊಡ್ಡ ಬಾಕ್ಸ್‌ಗಳನ್ನು ತಂದಿಟ್ಟರು. ಜೊತೆಗೆ 68,383 ರೂಪಾಯಿ ಮೊತ್ತದ ಬಿಲ್‌ಗಳನ್ನು ಕೂಡ. ಹೀಗೆ ಆ ಪುಸ್ತಕಗಳನ್ನು ಖರೀದಿಸುವಂತೆ ತಾಕೀತು ಮಾಡಲಾಗಿದೆ.

ಇದನ್ನೂ ಓದಿ: 3 ನೇ ಬಾರಿ ಸದನ ನಡೆಸುವ ಪ್ರಸ್ತಾಪ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ!

ರಾಜ್ಯಪಾಲರ ಜೀವನ ಚರಿತ್ರೆಯನ್ನು ಗೋವಿಂದ ರಾಮ್ ಜೈಸ್ವಾಲ್ ಮತ್ತು IIME ಜೈಪುರದ ಸಂಶೋದಕ ಡಾ.ಡಿ.ಕೆ. ಟಕ್ನೆಟ್ ರಚಿಸಿದ್ದಾರೆ.

ರಾಜ್ಯಪಾಲರ ಸಿಬ್ಬಂದಿ ನೀಡಿದ ಬಿಲ್‌ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಲಭ್ಯವಾಗಿದ್ದು 5 ವಿವಿಧ ಶೀರ್ಷಿಕೆಗಳ ಪುಸ್ತಕದ ಹೆಸರನ್ನು ಬಿಲ್‌ನಲ್ಲಿ ನಮೂದಿಸಲಾಗಿತ್ತು. 10% ರಿಯಾಯತಿ ಜೊತೆಗೆ ಹೆಚ್ಚುವರಿ ಉಚಿತ ಪ್ರತಿಗಳನ್ನು ನೀಡಿರುವ ಮಾಹಿತಿ ರಶೀದಿಯಲ್ಲಿದೆ. ಕುಲಪತಿಗಳೆಲ್ಲ ತಮ್ಮ ನಿವಾಸವನ್ನು ಸೇರಿದ ಮೇಲೆ ಇನ್ನೂ ಒಂದು ಆಶ್ಚರ್ಯ ಅವರಿಗೆ ಕಾದಿತ್ತು. ಅದೇನೆಂದರೆ ರಾಜ್ಯಪಾಲರ ಜೀವನ ಚರಿತ್ರೆಯನ್ನು ಹೊರತುಪಡಿಸಿ ಬಿಲ್‌ನಲ್ಲಿ ನಮೂದಿಸಲಾದ ಯಾವ ಪುಸ್ತಕವೂ ಬಾಕ್ಸ್‌ನಲ್ಲಿ ಇರಲಿಲ್ಲ. 3999/- ಬೆಲೆಯ ಕಲರಾಜ್‌ ಮಿಶ್ರಾ ಜೀವನ ಚರಿತ್ರೆಯ ಪ್ರತಿಗಳು ಮಾತ್ರ ಕಾರ್ಟ್‌ನಲ್ಲಿ ಇದ್ದವು.

ಇದನ್ನೂ ಓದಿ: ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…

ರಾಜಸ್ಥಾನ ಪಬ್ಲಿಕ್‌ ಪ್ರೊಕ್ಯುರ್‌ಮೆಂಟ್‌ (RTPP) ಆಕ್ಟ್‌, 2012 ಪುಸ್ತಕ ಖರೀದಿಗೆ ಸ್ಪಷ್ಟ ಮಾರ್ಗಸೂಚಿ ಮತ್ತು ನಿಬಂಧನೆಗಳನ್ನು ವಿಧಿಸಿದೆ. ಹಾಗಿದ್ದರೆ ಏಕಪಕ್ಷೀಯವಾಗಿ ಹೇಗೆ ವಿಶ್ವವಿದ್ಯಾಲಯಗಳು ರಾಜ್ಯಪಾಲರ ಪುಸ್ತಕವನ್ನು ನೇರವಾಗಿ ಖರೀದಿಸಲು ಸಾಧ್ಯ? ತಂತ್ರಜ್ಞಾನ, ವೈದ್ಯಕೀಯ, ಸಂಗೀತ, ಕೃಷಿ ಸೇರಿದಂತೆ ಭಿನ್ನ ಭಿನ್ನ ವಿಷಯಗಳಿಗೆ ಸ್ಥಾಪಿತವಾದ ಈ ವಿಶ್ವವಿದ್ಯಾಲಯಗಳು ದೊಡ್ಡ ಪ್ರಮಾಣದಲ್ಲಿ ರಾಜ್ಯಪಾಲರ ಜೀವನಚರಿತ್ರೆಯನ್ನು ಏಕೆ ಖರೀದಿಸಬೇಕು ಎಂಬ ಚರ್ಚೆ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಆರಂಭವಾಗಿದೆ.

ರಾಜಭವನ ಅಧಿಕಾರಿಗಳು ಮತ್ತು ಕಲರಾಜ್ ಮಿಶ್ರಾ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಪುಸ್ತಕ ಮಾರಾಟದಿಂದ ಬಂದ ಹಣವನ್ನು ಸಂಶೋಧನೆಗೆ ವಿನಿಯೋಗಿಸಲಾಗುತ್ತದೆಯೇ ಹೊರತು ವಯಕ್ತಿಕ ಬಳಕೆಗಾಗಿ ಅಲ್ಲ ಎಂದು ರಾಜ್ಯಪಾಲರು ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕಲರಾಜ್‌ ಮಿಶ್ರಾ ಅವರ ಜೀವನ ಚರಿತ್ರೆಯ ಪುಸ್ತಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗಿನ ಸುದೀರ್ಘ ಜೀವನ ಪ್ರಯಾಣವನ್ನು ಕಲರಾಜ್‌ ಮಿಶ್ರಾ ಅವರು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಮತ್ತು ಭಾರತೀಯ ಜನಸಂಘದ ಅಧ್ಯಾಯಗಳು ಅಲ್ಲಲ್ಲಿ ಬಂದು ಹೋಗುತ್ತವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುಸ್ತಕದ ಕುರಿತಾಗಿ ಮೆಚ್ಚುಗೆಯ ವಿಮರ್ಶೆಯನ್ನು ಬರೆದಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಶಾಂದಾರ್‌ ಕೃತಿ (wonderful book) ಎನ್ನುವ ಮೂಲಕ ಪುಸ್ತಕದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ರಾಜ್ಯಪಾಲರ ಜೀವನ  ಕೃತಿ ರಾಜಕೀಯದಿಂದ ಹೊರತಾಗಿಲ್ಲ. ಅವರ ಜೀವನದ ಅನುಭವಗಳಿಗೆ ಮಾತ್ರ ಸೀಮಿತಿವಾಗಿಲ್ಲ. ಪುಸ್ತಕದ 116 ನೇ ಪುಟದಲ್ಲಿ ಬಿಜೆಪಿಯ ಜಾಹೀರಾತನ್ನು ಸೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಯಾಗಿ ನಿಂತು ನವ ಭಾರತ ಕಟ್ಟಲು ಕೈಜೋಡಿಸಿ ಎಂದು ಮನವಿ ಮಾಡುವ ಚಿತ್ರದಲ್ಲಿ ಬಿಜೆಪಿಯ ಕಮಲದ ಗುರುತು ದೊಡ್ಡದಾಗಿ ಅಚ್ಚಾಗಿದೆ.

‘ನವ ಭಾರತ ನಿರ್ಮಾಣದ ಅಭಿಯಾನ ಬೆಂಬಲಿಸೋಣ, ಪಕ್ಷ ಸೇರಿ ಮತ್ತು ಈ ಅಭಿಯಾನದಲ್ಲಿ ನಮ್ಮ ಕೈಜೋಡಿಸಿ. ಒಂದೇ ಭಾರತ ಶ್ರೇಷ್ಠ ಭಾರತ’ ಎಂಬ ಸಾಲುಗಳು ಜಾಹೀರಾತಿನಲ್ಲಿ ಕಂಡು ಬರುತ್ತದೆ.

ರಾಜಸ್ಥಾನ ರಾಜ್ಯಪಾಲರ ಜೀವನ ಚರಿತ್ರೆಯ ಪುಟ ಸಂಖ್ಯೆ 116 ರಲ್ಲಿ ನೀಡಲಾದ ಬಿಜೆಪಿ ಜಾಹೀರಾತು

ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವ ವ್ಯಕ್ತಿ ರಾಜ್ಯಪಾಲರ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ ಎಂಬ ಆರೋಪ ವಿಶ್ವವಿದ್ಯಾಲಯಗಳಿಂದ ಕೇಳಿಬಂದಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಯದ್ದು ಅಸ್ಥಿರ ಮತ್ತು ಅಪಕ್ವ ಗುಣ: ಆತ್ಮಚರಿತ್ರೆಯಲ್ಲಿ ಒಬಾಮ

ರಾಜ್ಯಪಾಲರಿಗೆ ಹಿಂದೆ ಬಿಜೆಪಿ, RSS ಜೊತೆ ದೀರ್ಘ ಒಡನಾಟವಿರಬಹದು. ರಾಜ್ಯಪಾಲರ ಸ್ಥಾನಕ್ಕೇರಿದ ಮೇಲೆ ತಮ್ಮ ರಾಜಕೀಯ ನಂಟನ್ನು ಮುಂದುವರೆಸುವುದು ಒಂದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಚಾರ ಮತ್ತು ಕರ್ತವ್ಯಲೋಪ. ರಾಜ್ಯಪಾಲರಾದವರು ವಿಶ್ವವಿದ್ಯಾಲಯಗಳ ಗೌರವ ಕುಲಪತಿಗಳಾಗಿರುತ್ತಾರೆ. ತಮ್ಮ ಈ ಪುಸ್ತಕದ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಗೌರವ ಕುಲಪತಿಗಳು ಯಾವ ಸಂದೇಶವನ್ನು ನೀಡ ಬಯಸುತ್ತಾರೆ? ಎಂಬ ಪ್ರಶ್ನೆಯನ್ನು ಮತ್ತೊಬ್ಬ ಕುಲಪತಿಗಳು ಕೇಳಿದ್ದಾರೆ.

ಇಂಟರ್‌ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಎಂಟರ್‌ಪ್ರೇನರ್‌ಶಿಪ್ (IIME) ಜೈಪುರದ ಖಾತೆಗೆ ಪುಸ್ತಕದ ಹಣ ಸಂದಾಯ ಮಾಡುವಂತೆ ರಾಜಭವನದ ಅಧಿಕಾರಿಗಳು ಕುಲಪತಿಗಳಿಗೆ ಸೂಚಿಸಿದ್ದಾರೆ. IIME ಜೈಪುರ ವಿಜ್ಞಾನ ತಂತ್ರಜ್ಞಾನ ಇಲಾಖೆಯಡಿಯ ಸ್ವಾಯತ್ತ ಶಿಕ್ಷಣ ಸಂಸ್ಥೆ. ಜೀವನ ಚರಿತ್ರೆಯ ಸಹ ಬರಹಗಾರ ಡಾ. ಡಿ.ಕೆ. ಟಕ್ನೆಟ್ ಹಿಂದೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಡಿ.ಕೆ. ಟಕ್ನೆಟ್‌ ಪತ್ನಿ ಸುಜಾತಾ ಟಕ್ನೆಟ್‌ IIME ಯಲ್ಲಿಯೇ ಮುಖ್ಯ ಸಂಶೋಧಕರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಲಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಗೆ ರಾಜ್ಯಪಾಲರ ಜೀವನ ಚರಿತ್ರೆಯನ್ನು ಪ್ರಕಟಿಸಲು ಸಾಧ್ಯ ಎಂಬುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸ್ವಾರಸ್ಯವೆಂದರೆ ರಾಜಭವನದ ಸಿಬ್ಬಂದಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ನೀಡಿದ ಪುಸ್ತಕದ ರಶೀದಿಯಲ್ಲಿ ಇನ್ನೂ ಎರಡು ಪುಸ್ತಕಗಳು ಸೇರಿವೆ. ಅವು IIME ಜೈಪುರ ಸಂಸ್ಥೆ 2020 ರಲ್ಲಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಿದ್ದ ಪುಸ್ತಕಗಳು. ಒಂದು ಜೈಪುರ್ ಜೆಮ್‌ ಆಫ್ ಇಂಡಿಯಾ ಮತ್ತು ಮಾರ್ವಾಡಿ ಹೆರಿಟೇಜ್ ಪುಸ್ತಕಗಳು ಅವು. ಈ ಪುಸ್ತಕಗಳು 4,950 ರೂಪಾಯಿ ಮತ್ತು 3,200 ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದ್ದು ರಾಜ್ಯಪಾಲರ ಜೀವನಚರಿತ್ರೆಯ ಜೊತೆಗೆ ಉಳಿದ ಪುಸ್ತಕಗಳ ಹಣವನ್ನೂ ಪಾವತಿಸುವಂತೆ ವಿಶ್ವವಿದ್ಯಾಲಯಗಳಿಗೆ ಹೇಳಲಾಗಿದೆ.

ಮೂಲ: ದಿ ವೈರ್‌

ಅನುವಾದ : ರಾಜೇಶ್‌ ಹೆಬ್ಬಾರ್


ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...