Homeಮುಖಪುಟಮುಕ್ತ ಸಂವಾದಕ್ಕೆ 'ಕ್ಲಬ್ ಹೌಸ್‌' ವೇದಿಕೆ ಸೂಕ್ತ: ವ್ಯಸನವಾಗಬಾರದು ಅಷ್ಟೇ

ಮುಕ್ತ ಸಂವಾದಕ್ಕೆ ‘ಕ್ಲಬ್ ಹೌಸ್‌’ ವೇದಿಕೆ ಸೂಕ್ತ: ವ್ಯಸನವಾಗಬಾರದು ಅಷ್ಟೇ

- Advertisement -
- Advertisement -

ನಮ್ಮೆಲ್ಲರ ದುಃಖ, ಖುಷಿ, ನಗು, ಮಾತು, ಮಂಥನ, ಚಿಂತನೆ, ಪೋಟೋ, ವಿಡಿಯೋ ಸೇರಿದಂತೆ ಬದುಕಿನ ಪ್ರತಿಕ್ಷಣದ ಆಗುಹೋಗುಗಳನ್ನು ನಾವು ಸಾಮಾಜಿಕವಾಗಿ ಹಂಚಿಕೊಳ್ಳುವ ತುಡಿತಕ್ಕೆ ಒಳಗಾಗಿದ್ದೇವೆ.

ಅಷ್ಟೇ ಅಲ್ಲದೆ ಕಥೆ, ಕವನ, ಲೇಖನ, ಹಾಸ್ಯ, ಚಿತ್ರಕಲೆ, ಸಂಗೀತ ಸೇರಿ ನಮ್ಮ ಹವ್ಯಾಸಗಳು ಇತರರಿಗೆ ತಲುಪಿಸುವ ಪ್ರಯತ್ನ, ತುಡಿತ, ಕಾತುರ ನಮ್ಮನ್ನು ಕಾಡುತ್ತಿದೆ. ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿದುಕೊಳ್ಳುವ ಕುತೂಹಲವನ್ನು ಕೂಡ ಸಾಮಾಜಿಕ ಜಾಲತಾಣ ವೇಗವಾಗಿ ಪೂರೈಸಿದೆ. ಹೀಗಾಗಿ ಎಲ್ಲದಕ್ಕೂ ಸಾಮಾಜಿಕ ಜಾಲತಾಣಗಳು ನಮಗೆ ಸೂಕ್ತ ವೇದಿಕೆಯಾಗಿವೆ. ಸಾಮಾಜಿಕ ಜೀವನಕ್ಕೆ ಸಾಮಾಜಿಕ ಜಾಲತಾಣಗಳು ಅದೆಷ್ಟು ಉಪಯುಕ್ತವಾಗಿಯೋ ಅಷ್ಟೇ ಅಪಾಯಕಾರಿ ಕೂಡ ಆಗಿವೆ. ಆದರೆ ದೈಹಿಕವಾಗಿ ಅದೆಷ್ಟೇ ದೂರವಿದ್ದವರೂ ಬೌದ್ಧಿಕವಾಗಿ ಹತ್ತಿರವಾಗಿ ಗಾಢವಾದ ಪ್ರೀತಿ ತೋರುತ್ತಾರೆ, ಆಪ್ತರಾಗಿ, ಸ್ನೇಹ, ಸಂಬಂಧ ಮತ್ತಷ್ಟು ಗಟ್ಟಿಯಾಗಿ ಕಾಪಿಟ್ಟುಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣಗಳು ನಮ್ಮ ದೈನಂದಿನ ಬದುಕಿನಲ್ಲಿ ಹೊಸ ಚೈತನ್ಯ ತುಂಬುತ್ತಿವೆ, ಭರವಸೆ ಮೂಡಿಸುತ್ತಿವೆ, ಸ್ಫೂರ್ತಿ ನೀಡುವ ಗೈಡ್ ಎಂದು ಹೇಳಿದರೂ ತಪ್ಪಾಗಲಾರದು. ಇಂಥ ಸೋಶಿಯಲ್ ಮೀಡಿಯಾ  ಪಟ್ಟಿಯಲ್ಲಿ ಈಗ ಇನ್ನೊಂದು ‘ಆಡಿಯೋ ತಾಣ’ ಸೇರ್ಪಡೆಯಾಗಿದೆ. ಈಗಾಗಲೇ ಇದರ ಬಗ್ಗೆ ನಿಮಗೆ ತಿಳಿದಿರಬಹುದು. ಇನ್ನುಳಿದ ಅಪ್ಲಿಕೇಶನ್ ಗಿಂತ ಹೆಚ್ಚು  ಜನಪ್ರಿಯವಾಗುತ್ತಿರುವ ಕ್ಲಬ್ ಹೌಸ್ ಆ್ಯಪ್ ಈಗಿರುವ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಜಗತ್ತಿನಾದ್ಯಂತ ಹೆಚ್ಚು ಸುದ್ದಿಯಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಜನ್ಮತಾಳಿದ ‘ಕ್ಲಬ್ ಹೌಸ್’ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಇದು ದಿನದಿಂದ ದಿನಕ್ಕೆ ತನ್ನ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಮೊದ ಮೊದಲಿಗೆ ‘ಕ್ಲಬ್ ಹೌಸ್’ ಎಂದರೆ ಬಹಳಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಕ್ಲಬ್ ಹೌಸ್ ಎಂದರೆ ಯಾವುದಾದರೂ ಒಂದು ವಿಷಯದ ಕುರಿತು ಚರ್ಚಿಸುವ ಪ್ರತ್ಯೇಕ ಸ್ಥಳವಾಗಿರಬಹುದು, ಬಾರ್, ರೆಸ್ಟೋರೆಂಟ್ ಅಥವಾ ಮೋಜು ಮಸ್ತಿ ಮಾಡುವ ಪಾರ್ಕ್ ತಾಣವಾಗಿರಬಹುದು ಎಂದೇ ತಿಳಿದಿದ್ದು ನಿಜ. ಮೊದಲಿಗೆ ಈ ರೀತಿಯ ಗೊಂದಲ ಆಗುವುದು ಸಹಜ. ಆದರೆ ನಾವು ಅರ್ಥೈಸಿಕೊಂಡಷ್ಟು ಮಾಮೂಲಿ ‘ಆ್ಯಪ್’ ಇದಲ್ಲ, ಎಲ್ಲಾ ಸಾಮಾಜಿಕ ಜಾಲತಾಣಗಳಿಗಿಂದ ಇದು ಒಂದು ತುಸು ವಿಭಿನ್ನ ರೀತಿಯ ಜಾಲ-ತಾಣವಾಗಿದೆ ಎಂದು ತಿಳಿಯಬೇಕಾದರೆ ನೀವೂ ‘ಕ್ಲಬ್ ಹೌಸ್‌’ಗೆ ಬರಬೇಕು.

ಹಾಗಾದರೆ ‘ಕ್ಲಬ್ ಹೌಸ್‌’ ಅಪ್ಲಿಕೇಶನ್ ವೈಶಿಷ್ಟ್ಯತೆ ಏನು? ಎಂದರೆ ಇನ್ನಿತರೆ ಸಾಮಾಜಿಕ ಜಾಲತಾಣಗಳಂತೆ ಇಲ್ಲಿ ಫೋಟೋ, ವಿಡಿಯೋ ಪೋಸ್ಟ್ ಹಾಗೂ ಟೈಪ್ ಮಾಡಲು ಯಾವುದೇ ಆಯ್ಕೆಗಳಿಲ್ಲ, ಕಾಲ್ ಮಾಡುವ ಹಾಗಿಲ್ಲ. ಬದಲಾಗಿ ‘ವಾಯ್ಸ್ ಚಾಟ್’ ಮುಖಾಂತರ ಸಂಭಾಷಣೆ ಮಾಡಬಹುದು. ಒಬ್ಬರು ‘ಆಡಿಯೋ ಸಂಭಾಷಣೆ’ ಮಾಡುವಾಗ ಉಳಿದವರು ಕಿವಿಯಾಗಿ ಕೇಳಬೇಕು. ನಂತರ ಅನ್‌ಮ್ಯೂಟ್ ಮಾಡಿ ನಾವು ಮಾತಾಡಬಹುದು. ಜಗತ್ತಿನ ಯಾವುದೇ ಸ್ಥಳದಲ್ಲಿದ್ದರೂ ‘ಕ್ಲಬ್ ಹೌಸ್‌’ ಬಳಸಬಹುದು, ಅಲ್ಲಿಯ ಎಲ್ಲಾ ಚರ್ಚೆಯಲ್ಲಿ ಭಾಗವಹಿಸಬಹುದು.

ಕ್ಲಬ್ ಹೌಸ್‌ ಸಂವಾದದಲ್ಲಿ ಭಾಗಿಯಾಗಲು ನೀವು ಯಾರಿಗೂ ನಿಮ್ಮ ಮೊಬೈಲ್ ನಂಬರ್ ಕೊಡುವ ಅಗತ್ಯವಿಲ್ಲ. ಯಾವುದೇ ಗ್ರೂಪ್ ಸೇರುವ ಜರೂರಿ ಇಲ್ಲ, ಒಮ್ಮೆ ಪ್ಲೇ ಸ್ಟೋರ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಸೇರಿಸಿ ಕ್ಲಬ್ ಹೌಸ್‌ ಸೇರಿದರೆ ಸಾಕು. ಅಲ್ಲಿರುವ ಯಾವುದೇ ಗ್ರೂಪ್ ಗೆ ನೀವೇ ಸೇರಬಹುದು. ಕ್ಲಬ್ ಹೌಸ್ ನ ಇನ್ನೊಂದು ವಿಶೇಷವೆಂದರೆ ಅಲ್ಲಿ ನಡೆಯುವ ಯಾವುದೇ ಸಂವಾದದಲ್ಲಿ ನೀವು ಸೇರಲು ಮುಕ್ತ ಅವಕಾಶವಿದೆ. ಬಹುಶಃ ನಿಮಗೆ ಅದು ಇಷ್ಟ ಆಗಲಿಲ್ಲ ಎಂದರೆ ಗ್ರೂಪ್ ದಿಂದ ಹೊರಬರಲು ಅವಕಾಶವಿದೆ. ಬೇರೆ ವಿಷಯಗಳ ಚರ್ಚೆಯಲ್ಲಿ ಮತ್ತೆ ಸೇರಬಹುದು. ಇದು ನಮಗಿಷ್ಟದಂತೆ ಬಳಸುವ ಅಪರೂಪದ ತಾಣವಾಗಿದೆ.

ಫೋಟೊ, ವಿಡಿಯೋ, ಮೆಸೇಜ್ ಗಳ ಮೂಲಕ ಸಂಪರ್ಕಿಸಲು ನಮಗೆ ಹಲವು ಸಾಮಾಜಿಕ ಜಾಲತಾಣಗಳಿವೆ, ಆದರೆ ವಾಯ್ಸ್ ಚಾಟ್ ಮೂಲಕ ಚರ್ಚೆ ನಡೆಸಲು ಯಾವುದೇ ಆ್ಯಪ್ ಗಳಿರಲಿಲ್ಲ. ಕೆಲವು ಇದ್ದರೂ ಅಷ್ಟು ಮುನ್ನೆಲೆಗೆ ಬಂದಿರಲಿಲ್ಲ. ಹೀಗಾಗಿ ಕ್ಲಬ್ ಹೌಸ್ ಆ್ಯಪ್ ಎಲ್ಲಕಿಂತ ಹೆಚ್ಚು ವಿಶಿಷ್ಟವಾಗಿ ಕಾಣುತ್ತದೆ. ಕ್ಲಬ್ ಹೌಸ್ ನಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಕ್ಲಬ್ ಹೌಸ್ ಚರ್ಚೆ ಕೇವಲ ಲೈವ್ ನಲ್ಲೇ ಮಾತ್ರ ನಡೆಸಬಹುದು. ಅಲ್ಲಿ ರೆಕಾರ್ಡ್ ಮಾಡಬಾರದೆಂಬ ನಿಯಮವಿದೆ. ಇದು ಇನ್ನೊಂದು ವಿಭಿನ್ನ. ಕ್ಲಬ್ ಹೌಸ್ ಚರ್ಚೆಯಲ್ಲಿ ನಮಗೆ ಭಾಗಿಯಾಗಲು ಸಾಧ್ಯವಾಗದೇ ಆಮೇಲೆ ಅದರ ರೆಕಾರ್ಡ್ ಕೇಳಬೇಕೆಂದರೆ ಸಾಧ್ಯವಿಲ್ಲ. ಲೈವ್ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ಮಾತ್ರ ಇದೆ. ಆದರೆ ನಮಗೆ ಅಗತ್ಯವಾದ ಸಮಯಕ್ಕೆ ಚರ್ಚೆ ಸಂವಾದ, ಗೋಷ್ಠಿ ನಡೆಸುವ ಬಗ್ಗೆ ಮೊದಲೇ ನಿಗದಿಪಡಿಸಬೇಕು. ಇದರಿಂದ ಹೆಚ್ಚಿನ ಜನರು ಚರ್ಚೆಯಲ್ಲಿ ಭಾಗಯಾಗಲು ಸಾಧ್ಯ. ಚರ್ಚೆಯ ವಿಷಯ, ಸಮಯ, ದಿನಾಂಕ ಕುರಿತು ಇತರೇ ತಾಣಗಳಲ್ಲಿ ಲಿಂಕ್ ಶೇರ್ ಮಾಡಬಹುದು.

ಈ ಆ್ಯಪ್ ಎಲ್ಲಾ ಅಂಡ್ರಾಯ್ಡ್ ನಲ್ಲೂ ದೊರೆಯುತ್ತದೆ. ಇದರ ಫೀಚರ್ ಗಳು ಹೆಚ್ಚು ವಿಶೇಷವಾಗಿದ್ದು ಡೌನ್ ಲೋಡ್ ಸಂಖ್ಯೆಯೂ ಅತ್ಯಧಿಕವಾಗಿದೆ. ಕ್ಲಬ್ ಹೌಸ್ ನಲ್ಲಿ ಯಾವುದೇ ಒಂದು ಟಾಪಿಕ್ ನಲ್ಲಿ ಗ್ರೂಪ್ ರಚಿಸಬಹುದು. ಅದರ ಕೆಳಗೆ ಹಾಡು, ಹರಟೆ, ಸಂವಾದ, ಸಂಗೀತ, ಕಥೆ ಸೇರಿದಂತೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಬಹುದು. ಚರ್ಚೆಯಲ್ಲಿ ವಿಷಯ ಮಂಡಿಸಲು ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಬಹುದು. ಚರ್ಚೆಯಲ್ಲಿ ಆಗುವ ವಿಷಯಗಳಿಗೆ ನಾವು ಕಿವಿಯಾಗಬಹುದು. ಗ್ರೂಪ್ ಮಾಡರೇಟರ್ ಅವಕಾಶ ನೀಡಿದರೆ ನಮಗೆ ಮಾತನಾಡಲು ಅವಕಾಶ ಸಿಗುತ್ತದೆ.
ಅಪರಿಚಿತ, ಪರಿಚಿತರಾದ ಹೆಸರಾಂತ ವ್ಯಕ್ತಿಗಳ ಜೊತೆಗೆ ನಮ್ಮ ಸಂವಾದ ನಡೆಸಲು ಕ್ಲಬ್ ಹೌಸ್ ಸೂಕ್ತ ವೇದಿಕೆ ಒದಗಿಸಿದೆ.

ಕ್ಲಬ್ ಹೌಸ್‌ ನಲ್ಲಿ ಚಾಟ್ ರೂಮ್ ಮೂಲಕ ಬಳಕೆದಾರರು ಮಾತನಾಡಬಹುದು. ಒಂದೇ ಸಮಯಕ್ಕೆ ಸಾವಿರಾರು ಜನರು ಒಟ್ಟಿಗೆ ಸೇರಿ ಗುಂಪಿನಲ್ಲಿ ವಾಯ್ಸ್ ಚಾಟಿಂಗ್ ಮೂಲಕ ಚರ್ಚಿಸುವ ಸೌಲಭ್ಯವಿದೆ. ಆ ಗ್ರೂಪ್ ಚರ್ಚೆ ಇಷ್ಟವಾಗದಿದ್ದರೆ ಗ್ರೂಪ್‌ನಿಂದ ಲೀವ್ ಆಗಬಹುದು.

ಆಪ್ ಡೌನ್‌ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿ, ಜಗತ್ತಿನ ಪ್ರಸಿದ್ಧ ವ್ಯಕ್ತಿಗಳಿಗೆ, ನಿಮ್ಮ ಒಡನಾಟದ ದೂರದ ಸ್ನೇಹಿತರನ್ನು ಫಾಲೋ ಮಾಡಬಹುದು. ಕ್ಲಬ್ ಹೌಸ್ ಚರ್ಚೆಯಲ್ಲಿ ಸೇರಿ ಅದನ್ನು ಕೇಳುತ್ತಲೇ ಸೌಂಡ್ ಇಲ್ಲದ ವ್ಯಾಟ್ಸಪ್, ಫೇಸ್ ಬುಕ್ ಸೇರಿದಂತೆ ಇತರೆ ಆಪ್ ಗಳು ಬಳಸಬಹುದು. ಕಿವಿಗೆ ಹೆಡ್ ಫೋನ್ ಹಾಕೊಂಡು ಬೇರೆ ಕೆಲಸ ಮಾಡುತ್ತಲೇ ಕ್ಲಬ್ ಹೌಸ್‌ ಅಲಿಸಬಹುದು. ಇದೀಗ ಕೋಟ್ಯಾಂತರ ಜನರು ಕ್ಲಬ್ ಹೌಸ್‌ ಬಳಸುತ್ತಿದ್ದಾರೆ. ಸ್ಟಾರ್ ನಟ-ನಟಿಯರು, ಉದ್ಯಮಿಗಳು, ವಿದ್ಯಾರ್ಥಿಗಳು, ಲೇಖಕರು, ರಾಜಕೀಯ ನಾಯಕರು ಈ ಆ್ಯಪ್ ಬಳಸುತ್ತಿದ್ದಾರೆ.

ಈ ಕ್ಲಬ್ ಹೌಸ್‌ ಜಗತ್ತಿನ ಹೊಸ ಹೊಸ ವಿಚಾರಗಳನ್ನು ತಿಳಿಸಲು ಉಪಯುಕ್ತವಾಗಿದೆ. ಈ ಹಿಂದೆ ರೇಡಿಯೋ ಮೂಲಕ ನಾವೆಲ್ಲಾ ಸಂಗೀತ ಸಂಭಾಷಣೆ ಕಾರ್ಯಕ್ರಮಗಳು ಕೇಳಿದ್ದೇವೆ. ಆದರೆ ನಮ್ಮ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶ ಇರಲಿಲ್ಲ. ಆದರೆ ಈ ಕ್ಲಬ್ ಹೌಸ್ ಎರಡೂ ಅವಕಾಶ ಒದಗಿಸಿದೆ. ತಡಮಾಡದೇ ಈಗಲೇ ಡೌನ್‌ಲೋಡ್ ಮಾಡಿಕೊಂಡು ಹೆಚ್ಚಿನ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿ. ಆದರೆ ಕ್ಲಬ್ ಹೌಸ್‌ ವ್ಯಸನಿಗಳಾಗದೇ ಮಿತವಾಗಿ ಬಳಸುವ ರೂಢಿ ಮಾಡಿಕೊಳ್ಳಿ. ಹೆಚ್ಚಿನ ಜ್ಞಾನ ಸಂಪಾದನೆ ಜೊತೆಗೆ ಸಾಮಾಜಿಕ ಬದಲಾವಣೆಗೆ ಕ್ಲಬ್ ಹೌಸ್‌ ಬಳಕೆಯಾಗಲಿ ಅಷ್ಟೇ. ಏನಂತೀರಿ?

ಬಾಲಾಜಿ ಕುಂಬಾರ ಚಟ್ನಾಳ 

(ಬೀದರ್‌ನಲ್ಲಿ ವಾಸವಿರುವ ಬಾಲಾಜಿ ಕುಂಬಾರ ಚಟ್ನಾಳರವರು ಶಿಕ್ಷಕರು ಮತ್ತು ಯುವಬರಹಗಾರರು.)


ಇದನ್ನೂ ಓದಿ: ಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...