Homeಅಂಕಣಗಳುನಾಗಸುಧೆ ಜಗಲಿಯಿಂದಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ತಮ್ಮ 37 ನೇ ವಯಸ್ಸಿಗೆ ವಿದೇಶದಲ್ಲಿ ನೆಲೆಸಿದರೂ ಇವರ ಕನ್ನಡ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಬಹುಶಃ ಡಾ. ಶಿವರಾಮ ಕಾರಂತರ ಕೋಟದ ಮಣ್ಣಿನ ಸೆಳೆತವೇ ಹೀಗಿತ್ತೋ ಏನೋ!

- Advertisement -
- Advertisement -

ಉಡುಪಿ ಜಿಲ್ಲೆಯ ಕೋಟದ ನಾಗಪ್ಪಯ್ಯ ತಮ್ಮ 37 ನೆಯ ವಯಸ್ಸಿನಲ್ಲಿ ಅಮೇರಿಕಾ ದೇಶಕ್ಕೆ ಬಂದು “ನಾಗ ಐತಾಳ” ಆಗಿ ಸಪ್ತ ಸಾಗರದಾಚೆಯ ಆ ನಾಡಲ್ಲಿ ಕನ್ನಡದ ಕಹಳೆಯೂದುತ್ತಿರುವದು ನಿಜವಾಗಿಯೂ ಬೆರಗಿನ ವಿಷಯವೇ! ತಮ್ಮ ತೊಂಬತ್ತನೆಯ ಈ ವಯಸ್ಸಿನಲ್ಲಿಯೂ ಅದೇ ಹರಯ ಲವಲವಿಕೆ; ಜೀವನ ಪ್ರೀತಿ.

1932 ರಲ್ಲಿ ಹುಟ್ಟಿದ ನಾಗಪ್ಪಯ್ಯ ಭಾರತದಲ್ಲಿ ಪಿಎಚ್ಡಿ ಪಡೆದು ನಂತರ ಬಯೋಕೆಮೆಸ್ಟ್ರಿಯಲ್ಲಿ ಹೆಚ್ಚಿನ ತರಬೇತಿ ಪಡೆಯಲು ಅಮೇರಿಕಾ, ಕೆನಡಾಕೆ ಬಂದು 27 ವರ್ಷ ಶಿಕಾಗೋ ಯುನಿವರ್ಸಿಟಿಯಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತಿಹೊಂದಿದ್ದಾರೆ. ಇಂದು ಮಡದಿ, ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ತುಂಬು ಸಂಸಾರದಲ್ಲಿ ಆ ನೆಲದಲಿ ನೆಲೆಸಿ ಎಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆ ಹವ್ಯಾಸಕೆ ಕನ್ನಡದ ಬರಹದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ತಾವೂ ಬೆಳೆದು, ಕಿರಿಯರಿಗೂ ಬೆನ್ನೆಲುವಾಗಿ ಈ ಉತ್ಸಾಹೀ ಯುವಕ ತಾಯ್ನೆಲ ಬಿಟ್ಟು ಕಡಲಾಚೆ ನೆಲೆಸಿ ಇಂದಿಗೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದರೂ, ಇವರ ಎದೆಯಲ್ಲಿ ಊರ ನೆನಪು ಸದಾ ಹಚ್ಚ ಹಸಿರು.

ನಾಗ ಐತಾಳರ “ಸ್ಮರಣೆ ಸಾಲದೆ” ಎಂಬ ಅವರ ಬದುಕಿನ ಅನುಭವಗಳ ಪುಸ್ತಕ ಓದುತ್ತಿದ್ದಂತೆಯೇ ಅವರಿಗೆ ಎರಡು ಜಗತ್ತುಗಳಿವೆ ಎಂಬ ವಿಷಯ ಅರಿವಿಗೆ ಬರುತ್ತದೆ. ಒಂದು ಬಾಲ್ಯದ ಕೋಟದ ಜಗತ್ತು. ಇದು ಅವರ ವ್ಯಕ್ತಿತ್ವವನ್ನು ರೂಪಿಸಿದ್ದು. ಎಳೆಯ ಮನಸ್ಸು ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸುತ್ತಲೇ ತನ್ನ ಗುರಿ ದಾರಿಗಳನ್ನು ಗುರುತಿಸಿಕೊಳ್ಳಲು ಇದು ನೆರವು ನೀಡಿದೆ. ಚಿಕ್ಕಂದಿನಲಿ ಎದುರಿಸಿದ ಅನೇಕ ಬಿಕ್ಕಟ್ಟುಗಳು ಇದರಲ್ಲಿ ಒಳಗೊಂಡಿದೆ. ಮತ್ತೊಂದು ಅವರ ವೃತ್ತಿ ಬದುಕನ್ನು ರೂಪಿಸಿದ ಅಮೇರಿಕೆಯ ಜಗತ್ತು. ಕನ್ನಡ ಕರಾವಳಿಯ ಹುಡುಗನೊಬ್ಬ ಕಡಲನ್ನು ದಾಟಿ ಅಪರಿಚಿತ ಖಂಡ ಪ್ರವೇಶಿಸಿ ತನ್ನ ಬದುಕನ್ನು ಕಟ್ಟಿಕೊಂಡ ಅನೇಕ ಸಂದರ್ಭಗಳಲ್ಲಿ ಇವರ ಕೆಲಸ ಕಾರ್ಯಗಳ ಕಂಡು ಇಲ್ಲಿಯ ಜನರಿಂದಲೂ ಭೇಷ್ ಎನಿಸಿ ಕೊಂಡ ರೋಮಾಂಚಕ ಸಂಗತಿಗಳಿಗೆ ನಿಜವಾಗಿಯೂ ನಾಗ್ ಅಭಿನಂದನಾರ್ಹರು. 2001 ರಲ್ಲಿ ನಿವೃತ್ತರಾದ ಇವರು ಅಂದಿನಿಂದ ಇಂದಿನ ತನಕವೂ ಆ ನೆಲದಲ್ಲಿ ಕನ್ನಡ ಕಟ್ಟುವ ಅಪೂರ್ವ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ.

“ಸ್ಮರಣೆ ಸಾಲದೆ” ಈ ನೆನಪಿನ ಹೊತ್ತಿಗೆಯನ್ನು ಬೆಂಗಳೂರಿನ “ಅಭಿನವ” ಹಾಗೂ ಕೆಲಿಫೋರ್ನಿಯಾದ ‘ಸಾಹಿತ್ಯಾಂಜಲಿ’ ಪ್ರಕಾಶಿಸಿದ್ದು 172 ಪುಟದೊಳಗೆ 50 ನೆನಪಿನ ಅಧ್ಯಾಯಗಳು ಹೊಳೆಯುತ್ತಿವೆ. ನಾಗ ಐತಾಳರು ಈ ಪುಸ್ತಕವನ್ನು ಕನ್ನಡದ ಪ್ರಮುಖ ಬರಹಗಾರ್ತಿ ಸುನಂದಾ ಬೆಳಗಾಂವಕಾರ ಇವರ ದಿವ್ಯ ಸ್ಮರಣೆಗೆ ಅರ್ಪಿಸಿದ್ದು, ನಾಮಾಂಕಿತ ಬರಹಗಾರರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರು ಪ್ರಬುದ್ಧ ಮುನ್ನುಡಿಯ ಕಳಸವಿಟ್ಟಿರುವರು. ಇಲ್ಲಿಯ ನೆನಪಿನ ಬುತ್ತಿಯನ್ನು ಒಂದೊಂದೇ ಬಿಚ್ಚುತ್ತಾ ಹೋದಂತೆ ಐವತ್ತೂ ಅಧ್ಯಾಯಗಳಲ್ಲಿ ನಾಗ್ ಐವತ್ತು ಸೊಗಸು ಬೆರಗು ಅದ್ಭುತಗಳನ್ನು ನಮಗೆ ಉಣಬಡಿಸಿರುವರು.

ಈ ನೆನಪುಗಳೇ ಹೀಗೆ: ಅವು ಸಿಹಿಯಾಗಿರಲಿ ಕಹಿಯಾಗಿರಲೀ ಅವೆಲ್ಲವೂ ಬದುಕನ್ನು ರೂಪಿಸಲು ಸಹಾಯಕವಾಗುವುದು. ‘ತುಂಗ್ರು ಮೇಷ್ಟ್ರು’ ಎಂಬ ಸೌಜನ್ಯ ತುಂಬಿದ ಗುರುಗಳನ್ನು ನೆನೆಯುತ್ತ ಅವರು ಎರಡು ಮೂರು ದಿನ ರಜೆಯಲ್ಲಿದ್ದಾಗಿನ ಅವಾಂತರವನ್ನು ಮನ ಬಿಚ್ಚಿ ಹೇಳಿಕೊಂಡಿರುವರು. ಊರ ನೆಲದಲ್ಲಿಯ ‘ತಿರಿ’ ‘ಮುಡಿ’ಗಳನ್ನು ಮನಸಾರೆ ನೆನಯುತ್ತ ಅಂದಿನ ಕೆಲ ಸಂಪ್ರದಾಯಿಕಗಳು ಇಂದು ಮಾಯವಾಗುತ್ತಿದೆ ಎಂದು ಮಮ್ಮಲ ಮರುಗಿರುವರು. ‘ನಂ ಸೆಪರೇಷನ್’ ವೃತ್ತಾಂತದಲ್ಲಿ ಮೊಮ್ಮಗನ ಆಗಮನಕ್ಕಾಗಿ ತಾವಿಬ್ಬರೂ ಒಂದು ವರ್ಷ ದೂರವಿದ್ದಾಗಿನ ಸುದ್ದಿ ಆಫೀಸಿಗೆಲ್ಲ ಹರಡಿ, ಸತ್ಯ ತಿಳಿದ ನಂತರ ಎಲ್ಲರೂ ನಗೆಗಡಲಲ್ಲಿ ತಿಳಿಹಾಸ್ಯ ಘಟನೆಯ ವಿವರ ಸೊಗಸಾಗಿ ಮೂಡಿಬಂದಿದೆ. ಐತಾಳರ ‘ಬಾತ್ರೂಮ ಸಂಗೀತ’ ‘ಗೂಟದ ಜನಿವಾರ’ದ ಪ್ರಸಂಗಗಳು ಇವರ ಮನೋವೈಶಾಲ್ಯತೆಯ ಸಂಕೇತವಾಗಿದೆ. ಎಂಥ ವಿಪರ್ಯಾಸ! ಒಂದೆಡೆ ಇಂಗ್ಲೀಷ್ ಮಾದ್ಯಮದ ಅಮೇರಿಕೆಯಲ್ಲಿ ಕನ್ನಡಿಗರೊಬ್ಬರು ನಾಯಿಯ ಜೊತೆಗೂ ಕನ್ನಡದಲ್ಲೇ ಸಂಭಾಷಿಸುವ ಅಭ್ಯಾಸ ಮಾಡಿಕೊಂಡಿದ್ದರೆ, ಇನ್ನೊಂದೆಡೆ ಕನ್ನಡವೇ ಮಾತೃಭಾಷೆಯಾಗಿರುವ ಬೆಂಗಳೂರಿನಲ್ಲಿ ನಾಯಿಗಳಿಗೂ ಕನ್ನಡವೇ ಅರ್ಥವಾಗದಿರುವ ಸಂದರ್ಭ ನಮ್ಮ ಮನಸ್ಸಾಕ್ಷಿಯ ದುರಂತಕ್ಕೆ ಕೈಗನ್ನಡಿಯಾಗಿದೆ.

ಇವರ ನೇತೃತ್ವ ಮತ್ತು ಸಂಘಟನೆಯಲ್ಲಿ “ಕನ್ನಡ ಸಾಹಿತ್ಯ ರಂಗ” ಅಮೇರಿಕೆಯ ಕನ್ನಡಿಗರ ಜೀವನಾಡಿಯಾಗಿದೆ. ಅಮೇರಿಕೆಯಲ್ಲಿ ಸಾಹಿತ್ಯಕ್ಕೆಂದೇ ಮೀಸಲಾದ ಕನ್ನಡದ ನಾಡಿ ಮಿಡಿತ ಇದು. ಇದರ ಸ್ಥಾಪಕ ಸದಸ್ಯರು ಮತ್ತು ಈಗಿನ ಆಡಳಿತ ಮಂಡಳಿಯ ಅಧ್ಯಕ್ಷರೂ ಐತಾಳರೇ. 2003 ರಲ್ಲಿ ಕನ್ನಡ ಸಾಹಿತ್ಯ ರಂಗ ಶುರುವಾಗಿ ಪ್ರತೀ ಎರಡು ವರ್ಷಕ್ಕೊಮ್ಮೆ ಕನ್ನಡದ ಕಂಪು ಅಮೇರಿಕೆಯ ತುಂಬಾ ಸೊಂಪಾಗಿ ಘಮ ಘಮಿಸುತ್ತದೆ. ಫಿಲಡೆಲ್ಫಿಯಾ, ಲಾಸ್ ಏಂಜಲೀಸ್, ಶಿಕಾಗೊ, ವಾಷಿಂಗ್ಟನ್ ಡಿಸಿ, ಸ್ಯಾನ್ ಫ್ರಾನ್ಸಿಸ್ಕೋ, ಹ್ಯೂಸ್ಟನ್, ಸೈಂಟ್ ಯೂಯಿಸ್, ಬಾಸ್ಟನ್ ಮತ್ತು 2019 ರಲ್ಲಿ ನ್ಯೂಜೆರ್ಸಿಯಲ್ಲಿ ಅತ್ಯಂತ ಶಿಸ್ತುಬದ್ದವಾಗಿ ಸಮರ್ಪಕವಾಗಿ ಕನ್ನಡದ ಕಾರ್ಯಕ್ರಮ ನಡೆಸಿದ ಕೀರ್ತಿಯಲ್ಲಿ ಇವರ ಪಾಲೂ ಹೆಚ್ಚಿನದೇ. ಪ್ರಭುಶಂಕರ್, ಬರಗೂರು ರಾಮಚಂದ್ರಪ್ಪ, ಎನ್.ಎಸ್. ಲಕ್ಷ್ಮಿನಾರಾಯಣಭಟ್ಟ, ಅ.ರಾ.ಮಿತ್ರ, ಎಚ್.ಎಸ್. ರಾಘವೇಂದ್ರರಾವ್, ವೈದೇಹಿ, ವೀಣಾ ಶಾಂತೇಶ್ವರ, ಸುಮತೀಂದ್ರ ನಾಡಿಗ್, ಭುವನೇಶ್ವರಿ ಹೆಗಡೆ, ಕೆ ವಿ.ತಿರುಮಲೇಶ್, ಪ್ರಧಾನ ಗುರುದತ್ತ, ಲಕ್ಷ್ಮೀಶ ತೋಳ್ಪಾಡಿ ಹೀಗೆ ಅನೇಕಾನೇಕ ಕನ್ನಡದ ದಿಗ್ಗಜರು ಈ ಕನ್ನಡ ಸಾಹಿತ್ಯ ರಂಗದ ಮೂಲಕ ಕನ್ನಡದ ರಂಗನ್ನು ಕಡಲಾಚೆಯಲಿ ಭಿತ್ತರಿಸಿದರು.

ಕಳೆದ ವರ್ಷ ನಮ್ಮ ವಿಸ್ಮಯನ “ವಿಸ್ಮಯ”ದಿಂದಾಗಿ ಆದೇ ಸಮಯಕೆ ನಾವೂ ನ್ಯೂಜೆರ್ಸಿಯಲ್ಲಿಯೇ ಇದ್ದೆವು. ಒಂಬತ್ತನೆಯ ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವದ ಆಡಳಿತ ಮಂಡಳಿಯ ಅಧ್ಯಕ್ಷರೂ ನಾಗ ಐತಾಳರೇ ಇದ್ದು ಕನ್ನಡದ ನಾಮಾಂಕಿತ ಬರಹಗಾರರಾದ ವಸುಧೇಂದ್ರ, ವಸುಂಧರಾ ಭೂಪತಿ ಮತ್ತು ಸುನಂದಾರೊಂದಿಗೆ ನಾನೂ ಅತಿಥಿಯಾದದ್ದು ಬದುಕಿನಲಿ ಮರೆಯದ ಕ್ಷಣಗಳಲ್ಲೊಂದು. ಆ ಅದ್ಭುತ ವೇದಿಕೆಯಲ್ಲಿ ನಾಗ ಐತಾಳರ “ಸ್ಮರಣೆ ಸಾಲದೇ” ಪುಸ್ತಕ ಪರಿಚಯ ಮಾಡಿದ್ದು ನನ್ನ ಸಾಹಿತ್ಯದ ಬದುಕಿನ ಮೈಲಿಗಲ್ಲೆಂದು ಪರಿಗಣಿಸುವೆನು. ಮೈ.ಶ್ರೀ ನಟರಾಜ್, ನಳಿನಿ ಮೈಯ, ಗುರುಪ್ರಸಾದ ಕಾಗಿನೆಲೆ, ಶ್ರೀಕಾಂತ ಬಾಬು, ಗುಂಡು ಶಂಕರ್, ತ್ರಿವೇಣಿ ಶ್ರೀನಿವಾಸರಾವ್, ಮೀರಾ ರಾಜಗೋಪಾಲ್, ವೈಶಾಲಿ ಹೆಗಡೆ, ಪ್ರಕಾಶ ನಾಯಕ, ಶಂಕರ್ ಹೆಗಡೆ ಇವರೆಲ್ಲ ನಾಗ ಐತಾಳರ ನೇತೃತ್ವದಲ್ಲಿ ಹಗಲಿರಳೂ ದುಡಿದು ಈ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು, ಸಪ್ತಸಾಗರದ ಆ ನಾಡಲ್ಲಿ
ನಾಗ ಐತಾಳರ ಕನ್ನಡದ ಕಹಳೆಗೆ ಸಾಕ್ಷಿಯಾಯಿತು.

ಇವರ ಶಿಕ್ಷಣವೆಲ್ಲಾ ಸಂಪೂರ್ಣ ಇಂಗ್ಲಿಷ್‌ಮಯವಾದರೂ, ತಮ್ಮ 37 ನೆಯ ವಯಸ್ಸಿಗೆ ವಿದೇಶಕ್ಕೆ ಬಂದು ನೆಲೆಸಿದರೂ ಇವರ ಕನ್ನಡ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಬಹುಶಃ ಡಾ. ಶಿವರಾಮ ಕಾರಂತರ ಕೋಟದ ಮಣ್ಣಿನ ಸೆಳೆತವೇ ಹೀಗಿತ್ತೋ ಏನೋ! ಬದುಕಿನಲ್ಲಿ ನಡೆದ, ಕಂಡುಂಡ ಅನೇಕ ಸಂಗತಿಗಳು ನೆನಪಿನಿಂದ ಜಾರುವುದು ಸ್ವಾಭಾವಿಕವೇ. ಅವುಗಳಲ್ಲಿ ಕೆಲವು ಮಾಸಿದ್ದರೂ, ಅವುಗಳನ್ನು ನೆನಪಿನಾಳದಿಂದ ಅಗೆದು ದಾಖಲಿಸುವದು ಅತೀ ಅವಶ್ಯ. ಇದಕಾಗಿಯೇ ನಾನು ಬರಹಗಾರನಾದೆ ಎನ್ನುವ ನಾಗ್ ಕನ್ನಡ ಸಾಹಿತ್ಯ ಕಣಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವರು. ಅಮೆರಿಕ ಕನ್ನಡಿಗನೊಬ್ಬನ ದಿನಚರಿಯಿಂದ (ಅಮೇರಿಕದ ಅನುಭವ ಕಥನ) ಕಾದೇ ಇರುವಳು ರಾಧೆ (ಕಿರುಕಾದಂಬರಿ) ಒಂದಾನೊಂದು ಕಾಲದಲ್ಲಿ (ಕಟ್ಟುಕಥೆಗಳ ಸಂಗ್ರಹ) ಕಲಬೆರಕೆ (ಪ್ರಬಂಧ ಸಂಕಲನ) ದೂರ ತೀರದಿಂದ ಹರಿದು ಬಂದ ಕತೆಗಳು (ಕಥಾಸಂಕಲನ) ಜೀವನ ರಹಸ್ಯ (ವೈಜ್ಞಾನಿಕ ಗ್ರಂಥ) ತಲೆಮಾರ ಸೆಲೆ(ಕಾದಂಬರಿ) ಅಮೇರಿಕದಲ್ಲಿ ಕಂಡಕನಸು ಕಟ್ಟಿದ ನೆನಪು (ಅನುಭವ ಕಥನ), ಸಾಹಿತ್ಯ ಸ್ಪಂದನ (ವಿಮರ್ಶಾ ಲೇಖನಗಳು) ಸ್ಮರಣೆ ಸಾಲದೇ (ಕೆಲವು ನೆನಪುಗಳು) ಇವು ಪ್ರಕಟಿತ ಕೃತಿಗಳಾದರೆ ಸುಮಾರು ಹತ್ತಕ್ಕೂ ಹೆಚ್ಚು ಸಂಪಾದಿತ ಪುಸ್ತಕಗಳನ್ನು ಹೊರತಂದಿರುವರು. ಇದಕ್ಕೂ ಹೊರತಾಗಿ ತಮ್ಮ ವೃತ್ತಿ ಜೀವನದಲ್ಲಿ 42 ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳನ್ನು ವಿವಿಧ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿರುತ್ತಾರೆ.

ತನ್ನ 28 ನೆಯ ವಯಸ್ಸಿನಲ್ಲಿ ಸಹ ಧರ್ಮಿಣಿಯಾಗಿ ಬಂದು ಇಂದಿಗೂ ಬದುಕಿನಾಸರೆಯಾಗಿ ನಿಂತ ತಮ್ಮ ಲಕ್ಷ್ಮಿಯನ್ನು ನೆನೆಯುತ್ತಾ “ನನ್ನ ಬದುಕು ರೂಪುಗೊಳ್ಳಲು, ಅವಳ ಸ್ಥಾನ ವಿಶಿಷ್ಟವಾದುದು” ಎನ್ನುವಾಗ ಭಾವುಕ ಪ್ರಪಂಚವೇ ನಮ್ಮೆದಿರು ನಿಲ್ಲುವದು. ಆ ನೆಲದಲ್ಲೇ ನೆಲೆಸಿದ ನಮ್ಮ ಮಗಳು ಕಾವ್ಯಾ, ಈ ಹಿರಿಯ ಜೀವವನ್ನು ಕಂಡಾಗ, ಅವರು ಮಾತನಾಡಿಸುವ ಪರಿಯನ್ನು ನೆನೆದು ನನ್ನ “ಕಡಮೆಯ ಅಜ್ಜ” ಇನ್ನೂ ಇಲ್ಲೇ ಜೀವಂತವಾಗಿರುವರು ಎಂದಾಗ ನಾನೂ ಕ್ಷಣ ಭಾವುಕನಾದೆ.

ಈಗಲೂ ತಮ್ಮ ತಾಯ್ನೆಲದ ಪ್ರೀತಿಯ ತೊಂಬತ್ತರ ನಾಗ ಐತಾಳರಿಗೆ ಬರೆಯುವ ಒಲವಿದೆ; ಛಲವಿದೆ. ಭಾಷೆಯ ಪ್ರೌಢಿಮೆ ಸೊಗಸಾಗಿದೆ. ಅವರ ಬರಹದಲ್ಲಿ ಉಕ್ಕುವ ಹಾಸ್ಯ, ಜೀವನೋತ್ಸಾಹ, ಗ್ರಾಮೀಣ ಶಬ್ದ ಭಂಡಾರ, ಅವರ ನೆನಪಿನ ಶಕ್ತಿ, ಮನುಷ್ಯ ಸಂಬಂಧದ ಆ ಹೊಳೆವ ಕಂಗಳು ನಮಗೆ ಬೆರಗು ಹುಟ್ಟಿಸುತ್ತದೆ. ಸರ್, ತಮ್ಮ ಬದುಕು ಬರಹಕ್ಕೆ ಅಭಿನಂದಿಸುತ್ತಾ ನೂರ್ಕಾಲ ಬಾಳಿ ಎಂದು ಹಾರೈಸುವೆ.

-ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಅಪಸ್ವರ ಇಲ್ಲದ ಆಲಾಪದ ಪದಗಳು – ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...