Homeಕರ್ನಾಟಕಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

ಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

- Advertisement -
- Advertisement -

ಕರ್ನಾಟಕ ಸರ್ಕಾರ ಈ ಶ್ರಾವಣದ ಒಂದು ಮಂಗಳವಾರ ಒಂದು ವಿಚಿತ್ರವಾದ ಆದೇಶವನ್ನು ಹೊರಡಿಸಿತು. ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ನಡೆಸುವ ಯಾವುದೇ  ಸಭೆ ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ನೆನಪಿನ ಕಾಣಿಕೆ ನೀಡಬಾರದಾಗಿ, ಅದರ ಬದಲಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದೆಂದು ಮತ್ತು ಇದನ್ನು ಬಹಳ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು ಆ ಆದೇಶ ಆಗ್ರಹಿಸಿದೆ. ಇದರಿಂದ ಹೂ ಮತ್ತು ಹಣ್ಣು ಬೆಳೆಗಾರರು ಹಾಗೂ ಮಾರಾಟಗಾರರಿಗೆ ಸಮಸ್ಯೆ ಆಗುವುದೆಂಬ ಆತಂಕ- ಆಕ್ರೋಶ ಕೂಡ ವ್ಯಕ್ತವಾಗಿದೆ. ಅದರ ಬಗ್ಗೆ ಸರ್ಕಾರ ಗಮನಹರಿಸಿ ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂಬು ನಮ್ಮ ಆಶಯವೂ ಕೂಡ.

ಆದರೆ ಈ ಸಮಯದಲ್ಲಿ ಶಾಸಕರಿಗೆ-ಸಚಿವರಿಗೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ನೀಡಲು ಪುಸ್ತಕಗಳನ್ನು ಆಯ್ದು ಕೊಂಡುಕೊಳ್ಳಲು ರಾಜ್ಯಾದ್ಯಂತ ಪುಸ್ತಕದ ಅಂಗಡಿಗಳಿಗೆ ಭಾರಿ ಸಂಖ್ಯೆಯಲ್ಲಿ, ನೂಕುನುಗ್ಗಲಿನಲ್ಲಿ ಜನ ಹೋಗುತ್ತಿದ್ದಾರೆ ಎಂಬ ಅನಧಿಕೃತ ವರದಿಗಳು ಇವೆ. ಅದರ ಸತ್ಯಾಸತ್ಯತೆ ಏನೇ ಇರಲಿ, ಉಡುಗೊರೆ ತರಲು ಪುಸ್ತಕ ಅಂಗಡಿಗೆ ಹೋದವನಿಗೆ ಏನು ಕೊಳ್ಳಬೇಕು ಎಂಬ ಗೊಂದಲ ಮೂಡುವುದು ಸರ್ವೇ ಸಾಮಾನ್ಯ. ಮತ್ತು ಈ ಕಾಲಘಟ್ಟದಲ್ಲಿ ಶಾಸಕರು-ಸಚಿವರು ಆರೋಗ್ಯಕರವಾದದ್ದನ್ನೇ ಓದಬೇಕು ಎಂಬ ಕಾಳಜಿ ಎಲ್ಲರಿಗೂ ಇದ್ದೇ ಇರುತ್ತದಲ್ಲವೇ! ಸಾಂಕ್ರಾಮಿಕದ ಸಮಯದಲ್ಲಿ ಆರೋಗ್ಯದ ಪುಸ್ತಕಗಳ ಬಗ್ಗೆ ಮಾತಾಡ್ತಾ ಇದ್ದೀನಿ ಅಂದುಕೊಳ್ಳಬೇಡಿ. ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪುಸ್ತಕಗಳನ್ನು ಜನಪ್ರತಿನಿಧಿಗಳು ಓದುವುದು ಅತಿ ಮುಖ್ಯ. ಆ ನಿಟ್ಟಿನಲ್ಲಿ ಉಡುಗೊರೆ ಹುಡುಕಲು ಸಮಸ್ತ ಜನತೆಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಸಲಹೆಗಳನ್ನು ಹಲವು ಕಂತುಗಳಲ್ಲಿ ಇಲ್ಲಿ ನೀಡಲಾಗುವುದು. ಸಾಮಾನ್ಯವಾಗಿ ಯಾರಿಗಾದರೂ ಕೊಡಬಹುದಾದ ಪುಸ್ತಕಗಳ ಸಲಹೆಗಳ ಜೊತೆಗೆ ನಿರ್ದಿಷ್ಟವಾಗಿ ಕೆಲವು ಶಾಸಕರಿಗೆ, ಸಚಿವರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಉಡುಗೊರೆ ನೀಡುವಾಗ ಯಾವ ಪುಸ್ತಕ ನೀಡಿದರೆ ಒಳ್ಳೆಯದು ಎಂಬುದರ ಬಗ್ಗೆಯೂ ಇಲ್ಲಿ ವಿವರಣೆ ಇರಲಿದೆ. ನೀವೂ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಸಜೆಶನ್‌ಗಳನ್ನ ಹಾಕುವುದಕ್ಕೆ ಮರೆಯಬೇಡಿ!

ಸಾಮಾನ್ಯವಾಗಿ ಯಾರಿಗೂ ಕೊಡಬಹುದಾದ ಪುಸ್ತಕ ಉಡುಗೊರೆಗಳು!

  1. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು

ಇವತ್ತು ಎಲ್ಲಾ ಜನಪ್ರತಿನಿಧಿಗಳು ಓದಲೇಬೇಕಾದದ್ದು ಎಂದರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸಮಗ್ರ ಬರಹಗಳನ್ನು. ಭಾರತಕ್ಕೆ ಪ್ರಜಾಪ್ರಭುತ್ವದ ಅಗತ್ಯ ಏಕಿದೆ ಎಂಬುದರಿಂದ ಹಿಡಿದು, ಹಿಂದೂ ಧರ್ಮದಲ್ಲಿ ಅಡಗಿರುವ ಅಪಸವ್ಯಗಳು, ಸಂವಿಧಾನದ ಬಗ್ಗೆ, ಬೌದ್ಧ ಧರ್ಮದ ಬಗ್ಗೆ, ಭಾರತದ ಇತಿಹಾಸದ ಸಂಗತಿಗಳ ಬಗ್ಗೆ – ಒಟ್ಟಿನಲ್ಲಿ ಭಾರತೀಯ ಸಮಾಜ ಆರೋಗ್ಯಪೂರ್ಣವಾಗಿ ಮುನ್ನಡೆಯಲು ಬೇಕಿರುವ ಎಲ್ಲಾ ಸಂಗತಿಗಳು ಇದರಲ್ಲಿ ಅಡಕವಾಗಿವೆ. ಕುವೆಂಪು ಭಾಷಾ ಪ್ರಾಧಿಕಾರ ಇದನ್ನು ಪ್ರಕಟಿಸಿದ್ದು ಈಗ ಪ್ರತಿಗಳ ಲಭ್ಯತೆ ಬಗ್ಗೆ ಗೊಂದಲಗಳಿವೆ. ಶೀಘ್ರದಲ್ಲಿಯೇ ಮರುಮುದ್ರಣ ಮಾಡುವಂತೆ ಒತ್ತಡ ಹಾಕಬೇಕಿದೆ.

  1. ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ

ಸ್ವಾತಂತ್ರ್ಯ ದಿನಾಚರಣೆ ಬೇರೆ ಹತ್ತಿರ ಬರುತ್ತಿದೆ. ರಾಜಕಾರಣಿಗಳು, ಶಾಸಕರು ಸ್ವಾತಂತ್ರ್ಯದ ಬಗ್ಗೆ, ಅದಕ್ಕೆ ಮಹಾತ್ಮ ಗಾಂಧಿಯವರು ನೀಡಿದ ಕೊಡುಗೆ ಬಗ್ಗೆ ಬಹಳಷ್ಟು ಮಾತನಾಡಲಿದ್ದಾರೆ. ಅವರು ಮಹಾತ್ಮ ಗಾಂಧೀಜಿಯ ಬಗ್ಗೆ ಇನ್ನಷ್ಟು ಓದಿಕೊಳ್ಳಲಿ. ಗಾಂಧಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮು ಸೌಹಾರ್ದಕ್ಕೆ ಯಾಕಷ್ಟು ಶ್ರಮಿಸಿದರು ಎಂಬುದನ್ನು ಹೆಚ್ಚು ಅರ್ಥ ಮಾಡಿಕೊಳ್ಳಲಿ. ಈ ದೃಷ್ಟಿಯಿಂದ ಗಾಂಧಿಯವರ ಆತ್ಮಕತೆಯನ್ನು ಅಗತ್ಯವಾಗಿ ಗಿಫ್ಟ್ ಕೊಡಿ. ಕನ್ನಡಕ್ಕೆ ಹಲವು ಬಾರಿ ಗಾಂಧಿ ಆತ್ಮಕತೆ ಅನುವಾದವಾಗಿದ್ದರೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅನುವಾದಿಸಿರುವ ಆವೃತ್ತಿ ಬಹಳ ಜನಪ್ರಿವಾಗಿದ್ದು, ಸುಲಭವಾಗಿ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ.

  1. ಭಾರತ ದರ್ಶನ

ಮೊನ್ನೆ ಮೊನ್ನೆ ಬಿಜೆಪಿ ಶಾಸಕರಾದ ಸಿ ಟಿ ರವಿಯವರು ಭಾರತದ ಪ್ರಥಮ ಮುಖ್ಯಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜವಾಹರ್ ಲಾಲ್ ನೆಹರು ಅವರ ಬಗೆಗಿನ ತಮ್ಮ ಅನುಚಿತ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಇನ್ನು ಪೋಸ್ಟ್ ಕಾರ್ಡ್ ನಂತಹ ಸುಳ್ಳುಸುದ್ದಿ ಹರಡುವ ತಾಣಗಳಿಗೆ ನೆಹರೂ ಬಗೆಗೆ ಫೇಕ್ ಸುದ್ದಿಗಳನ್ನು ಸೃಷ್ಟಿ ಮಾಡಿ ಹಂಚುವ ಕೆಲಸ ಅಚ್ಚುಮೆಚ್ಚು. ಜನಪ್ರತಿನಿಧಿಗಳು ಸುಳ್ಳು ಸುದ್ದಿಯಿಂದ ಪ್ರೇರೇಪಿತರಾಗಬಾರದಲ್ಲವೇ? ಅದಕ್ಕೆ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ದ ಅನುವಾದ ‘ಭಾರತ ದರ್ಶನ’ವನ್ನು ಅಗತ್ಯವಾಗಿ ಉಡುಗೊರೆ ನೀಡಿ. ಮುಂದಿನ ಬಾರಿ ಸಿಕ್ಕಾಗ ‘ಓದಿ ಮುಗಿಸಿದ್ರಾ’ ಅಂತ ಕೇಳುವುದನ್ನು ಮಾತ್ರ ಮರೆಯಬೇಡಿ!

  1. ಬಸವಣ್ಣನವರ ವಚನಗಳು

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವೈದಿಕ ಧರ್ಮದ ವಿರುದ್ಧ ಆದ ಶರಣ ಕ್ರಾಂತಿಯನ್ನು ಇಂದಿನ ಜನಪ್ರತಿನಿಧಿಗಳು ತಿಳಿದುಕೊಳ್ಳುವುದು ಅತಿ ಮುಖ್ಯ ಸಂಗತಿ. ಅಂದಿನ ಅನುಭವ ಮಂಟಪ ಜಗತ್ತಿನ ಮೊದಲ ಪ್ರಜಾಸತ್ತೀಯವಾದ ವ್ಯವಸ್ಥೆಯಾಗಿತ್ತು ಅನ್ನುತ್ತಾರೆ. ಈ ನಿಟ್ಟಿನಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಪ್ರಾಥಮಿಕವಾಗಿ ಬಸವಣ್ಣನವರ ವಚನಗಳನ್ನು ಓದುವುದು ಒಳ್ಳೆಯ ಪ್ರಾರಂಭವಾದೀತು. ವಿದ್ವಾಂಸರಾದ ಎಲ್ ಬಸವರಾಜು, ಡಾ. ಎಚ್ ತಿಪ್ಪೇರುದ್ರಸ್ವಾಮಿ ಹೀಗೆ ಹಲವರು ಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಪ್ರಸ್ತಾವನೆಗಳನ್ನು ಬರೆದು ಜನಪ್ರಿಯಗೊಳಿಸಿದ್ದಾರೆ. ಯಾವುದಾದರೂ ಆವೃತ್ತಿಯನ್ನು ಉಡುಗೊರೆ ನೀಡಿ!

  1. ವಿಚಾರ ಕ್ರಾಂತಿಗೆ ಆಹ್ವಾನ, ಶೂದ್ರ ತಪಸ್ವಿ ಮತ್ತು ಮಲೆಗಳಲ್ಲಿ ಮದುಮಗಳು

ಇನ್ನು ಕನ್ನಡ ಆಧುನಿಕ ಸಾಹಿತ್ಯದ ಮೇರು ಹೆಸರು ಕುವೆಂಪು. ಕನ್ನಡದ ವಿವೇಕವನ್ನು, ತಿಳಿವನ್ನು ಹೆಚ್ಚಿಸುವುದರಲ್ಲಿ ಕುವೆಂಪು ಅವರ ಕವನ, ಕಥೆ-ಕಾದಂಬರಿಗಳು, ವೈಚಾರಿಕ ಬರಹಗಳು, ನಾಟಕ ಮತ್ತು ಮಹಾಕಾವ್ಯ ಶ್ರೀರಾಮಾಯಣಂ ದರ್ಶನಂ ಕೃತಿಗಳು ಅಪಾರ ಕೊಡುಗೆಯನ್ನು ನೀಡಿವೆ. ಈ ನಿಟ್ಟಿನಲ್ಲಿ 12 ಸಂಪುಟಗಳಲ್ಲಿ ಸಿಗುವ ಅವರ ಸಮಗ್ರ ಬರಹ ಅತ್ಯುತ್ತಮ ಉಡುಗೊರೆಯಾದೀತು. ಬಜೆಟ್‌ನ ಕೊರತೆ ಎಂದಾದರೆ, ಪೌರಾಣಿಕ ಕಾವ್ಯ ರಾಮಾಯಣದಲ್ಲಿರುವ ಶೋಷಣೆಯ ಸಂಗತಿಯೊಂದನ್ನು ತಿದ್ದಿ ಬರೆದ ‘ಶೂದ್ರ ತಪಸ್ವಿ’ ನಾಟಕ, ವೈಚಾರಿಕತೆಯನ್ನು ಉದ್ದೀಪಿಸುವ ‘ವಿಚಾರ ಕ್ರಾಂತಿಗೆ ಆಹ್ವಾನ’ ಮತ್ತು ಭಾರತ ಸಮಾಜಿಕ ವ್ಯವಸ್ಥೆಯನ್ನು ಕಥಾ ನಿರೂಪಣೆಯ ಮೂಲಕ ಶೋಧಿಸುವ, ಅದರಲ್ಲಿರುವ ತಾರತಮ್ಯವನ್ನು ಸರಿಪಡಿಸಿ ಉತ್ತಮ ನಾಗರಿಕರಾಗಬೇಕಿರುವ ಉದಾತ್ತತೆಯನ್ನು ಸಾರುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಉಡುಗೊರೆಯಲ್ಲಿ ಒಳಗೊಳ್ಳಿ.

ಇದು ಅಂತಿಮವಾದ ಪಟ್ಟಿಯೇನಲ್ಲ. ಪ್ರಾಥಮಿಕ ಮತ್ತು ಪ್ರಾತಿನಿಧಿಕ ಪಟ್ಟಿ ಮಾತ್ರ. ಮುಂದಿನ ಕಂತಿನಲ್ಲಿ ಪ್ರತಿ ಇಲಾಖೆಯ (ಮುಜರಾಯಿ, ಶಿಕ್ಷಣ, ಆರೋಗ್ಯ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಇತ್ಯಾದಿ) ಕಾರ್ಯಕ್ರಮಗಳಿಗೆ ಹೊಂದುವಂತಹ ನಿರ್ದಿಷ್ಟ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಲಾಗುತ್ತದೆ. ಅಲ್ಲಿಯವರೆಗೆ ನೀವು ನಿಮ್ಮ ಸಲಹೆಗಳನ್ನು ಕಮೆಂಟ್ ಮಾಡುವುದನ್ನು ಮರೆಯಬೇಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಟರಾಜ್ ಹುಳಿಯಾರ್ ಅವರು ರಚಿಸಿರುವ ಶಾಂತವೇರಿ ಗೋಪಾಲಗೌಡರ ಜೀವನ ಚರಿತ್ರೆ ಮತ್ತು ಬಸವರಾಜು ಮೇಗಲಕೇರಿ ಅವರು ಹೊರತಂದ “ನಮ್ಮ ಅರಸು” ಕೃತಿಗಳು ಉತ್ತಮ ರಾಜಕಾರಣಿಗಳಾಗಲು ಸ್ಪೂರ್ತಿ ನೀಡುತ್ತವೆ. ಹೀಗಾಗಿ ಈ ಕೃತಿಗಳನ್ನೂ ಸಹ ಉಡುಗೊರೆಯಾಗಿ ನೀಡಬಹುದು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...