Homeಕರ್ನಾಟಕಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

ಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

- Advertisement -
- Advertisement -

ಕರ್ನಾಟಕ ಸರ್ಕಾರ ಈ ಶ್ರಾವಣದ ಒಂದು ಮಂಗಳವಾರ ಒಂದು ವಿಚಿತ್ರವಾದ ಆದೇಶವನ್ನು ಹೊರಡಿಸಿತು. ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ನಡೆಸುವ ಯಾವುದೇ  ಸಭೆ ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ನೆನಪಿನ ಕಾಣಿಕೆ ನೀಡಬಾರದಾಗಿ, ಅದರ ಬದಲಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದೆಂದು ಮತ್ತು ಇದನ್ನು ಬಹಳ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು ಆ ಆದೇಶ ಆಗ್ರಹಿಸಿದೆ. ಇದರಿಂದ ಹೂ ಮತ್ತು ಹಣ್ಣು ಬೆಳೆಗಾರರು ಹಾಗೂ ಮಾರಾಟಗಾರರಿಗೆ ಸಮಸ್ಯೆ ಆಗುವುದೆಂಬ ಆತಂಕ- ಆಕ್ರೋಶ ಕೂಡ ವ್ಯಕ್ತವಾಗಿದೆ. ಅದರ ಬಗ್ಗೆ ಸರ್ಕಾರ ಗಮನಹರಿಸಿ ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂಬು ನಮ್ಮ ಆಶಯವೂ ಕೂಡ.

ಆದರೆ ಈ ಸಮಯದಲ್ಲಿ ಶಾಸಕರಿಗೆ-ಸಚಿವರಿಗೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ನೀಡಲು ಪುಸ್ತಕಗಳನ್ನು ಆಯ್ದು ಕೊಂಡುಕೊಳ್ಳಲು ರಾಜ್ಯಾದ್ಯಂತ ಪುಸ್ತಕದ ಅಂಗಡಿಗಳಿಗೆ ಭಾರಿ ಸಂಖ್ಯೆಯಲ್ಲಿ, ನೂಕುನುಗ್ಗಲಿನಲ್ಲಿ ಜನ ಹೋಗುತ್ತಿದ್ದಾರೆ ಎಂಬ ಅನಧಿಕೃತ ವರದಿಗಳು ಇವೆ. ಅದರ ಸತ್ಯಾಸತ್ಯತೆ ಏನೇ ಇರಲಿ, ಉಡುಗೊರೆ ತರಲು ಪುಸ್ತಕ ಅಂಗಡಿಗೆ ಹೋದವನಿಗೆ ಏನು ಕೊಳ್ಳಬೇಕು ಎಂಬ ಗೊಂದಲ ಮೂಡುವುದು ಸರ್ವೇ ಸಾಮಾನ್ಯ. ಮತ್ತು ಈ ಕಾಲಘಟ್ಟದಲ್ಲಿ ಶಾಸಕರು-ಸಚಿವರು ಆರೋಗ್ಯಕರವಾದದ್ದನ್ನೇ ಓದಬೇಕು ಎಂಬ ಕಾಳಜಿ ಎಲ್ಲರಿಗೂ ಇದ್ದೇ ಇರುತ್ತದಲ್ಲವೇ! ಸಾಂಕ್ರಾಮಿಕದ ಸಮಯದಲ್ಲಿ ಆರೋಗ್ಯದ ಪುಸ್ತಕಗಳ ಬಗ್ಗೆ ಮಾತಾಡ್ತಾ ಇದ್ದೀನಿ ಅಂದುಕೊಳ್ಳಬೇಡಿ. ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪುಸ್ತಕಗಳನ್ನು ಜನಪ್ರತಿನಿಧಿಗಳು ಓದುವುದು ಅತಿ ಮುಖ್ಯ. ಆ ನಿಟ್ಟಿನಲ್ಲಿ ಉಡುಗೊರೆ ಹುಡುಕಲು ಸಮಸ್ತ ಜನತೆಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಸಲಹೆಗಳನ್ನು ಹಲವು ಕಂತುಗಳಲ್ಲಿ ಇಲ್ಲಿ ನೀಡಲಾಗುವುದು. ಸಾಮಾನ್ಯವಾಗಿ ಯಾರಿಗಾದರೂ ಕೊಡಬಹುದಾದ ಪುಸ್ತಕಗಳ ಸಲಹೆಗಳ ಜೊತೆಗೆ ನಿರ್ದಿಷ್ಟವಾಗಿ ಕೆಲವು ಶಾಸಕರಿಗೆ, ಸಚಿವರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಉಡುಗೊರೆ ನೀಡುವಾಗ ಯಾವ ಪುಸ್ತಕ ನೀಡಿದರೆ ಒಳ್ಳೆಯದು ಎಂಬುದರ ಬಗ್ಗೆಯೂ ಇಲ್ಲಿ ವಿವರಣೆ ಇರಲಿದೆ. ನೀವೂ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಸಜೆಶನ್‌ಗಳನ್ನ ಹಾಕುವುದಕ್ಕೆ ಮರೆಯಬೇಡಿ!

ಸಾಮಾನ್ಯವಾಗಿ ಯಾರಿಗೂ ಕೊಡಬಹುದಾದ ಪುಸ್ತಕ ಉಡುಗೊರೆಗಳು!

  1. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು

ಇವತ್ತು ಎಲ್ಲಾ ಜನಪ್ರತಿನಿಧಿಗಳು ಓದಲೇಬೇಕಾದದ್ದು ಎಂದರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸಮಗ್ರ ಬರಹಗಳನ್ನು. ಭಾರತಕ್ಕೆ ಪ್ರಜಾಪ್ರಭುತ್ವದ ಅಗತ್ಯ ಏಕಿದೆ ಎಂಬುದರಿಂದ ಹಿಡಿದು, ಹಿಂದೂ ಧರ್ಮದಲ್ಲಿ ಅಡಗಿರುವ ಅಪಸವ್ಯಗಳು, ಸಂವಿಧಾನದ ಬಗ್ಗೆ, ಬೌದ್ಧ ಧರ್ಮದ ಬಗ್ಗೆ, ಭಾರತದ ಇತಿಹಾಸದ ಸಂಗತಿಗಳ ಬಗ್ಗೆ – ಒಟ್ಟಿನಲ್ಲಿ ಭಾರತೀಯ ಸಮಾಜ ಆರೋಗ್ಯಪೂರ್ಣವಾಗಿ ಮುನ್ನಡೆಯಲು ಬೇಕಿರುವ ಎಲ್ಲಾ ಸಂಗತಿಗಳು ಇದರಲ್ಲಿ ಅಡಕವಾಗಿವೆ. ಕುವೆಂಪು ಭಾಷಾ ಪ್ರಾಧಿಕಾರ ಇದನ್ನು ಪ್ರಕಟಿಸಿದ್ದು ಈಗ ಪ್ರತಿಗಳ ಲಭ್ಯತೆ ಬಗ್ಗೆ ಗೊಂದಲಗಳಿವೆ. ಶೀಘ್ರದಲ್ಲಿಯೇ ಮರುಮುದ್ರಣ ಮಾಡುವಂತೆ ಒತ್ತಡ ಹಾಕಬೇಕಿದೆ.

  1. ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ

ಸ್ವಾತಂತ್ರ್ಯ ದಿನಾಚರಣೆ ಬೇರೆ ಹತ್ತಿರ ಬರುತ್ತಿದೆ. ರಾಜಕಾರಣಿಗಳು, ಶಾಸಕರು ಸ್ವಾತಂತ್ರ್ಯದ ಬಗ್ಗೆ, ಅದಕ್ಕೆ ಮಹಾತ್ಮ ಗಾಂಧಿಯವರು ನೀಡಿದ ಕೊಡುಗೆ ಬಗ್ಗೆ ಬಹಳಷ್ಟು ಮಾತನಾಡಲಿದ್ದಾರೆ. ಅವರು ಮಹಾತ್ಮ ಗಾಂಧೀಜಿಯ ಬಗ್ಗೆ ಇನ್ನಷ್ಟು ಓದಿಕೊಳ್ಳಲಿ. ಗಾಂಧಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮು ಸೌಹಾರ್ದಕ್ಕೆ ಯಾಕಷ್ಟು ಶ್ರಮಿಸಿದರು ಎಂಬುದನ್ನು ಹೆಚ್ಚು ಅರ್ಥ ಮಾಡಿಕೊಳ್ಳಲಿ. ಈ ದೃಷ್ಟಿಯಿಂದ ಗಾಂಧಿಯವರ ಆತ್ಮಕತೆಯನ್ನು ಅಗತ್ಯವಾಗಿ ಗಿಫ್ಟ್ ಕೊಡಿ. ಕನ್ನಡಕ್ಕೆ ಹಲವು ಬಾರಿ ಗಾಂಧಿ ಆತ್ಮಕತೆ ಅನುವಾದವಾಗಿದ್ದರೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅನುವಾದಿಸಿರುವ ಆವೃತ್ತಿ ಬಹಳ ಜನಪ್ರಿವಾಗಿದ್ದು, ಸುಲಭವಾಗಿ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ.

  1. ಭಾರತ ದರ್ಶನ

ಮೊನ್ನೆ ಮೊನ್ನೆ ಬಿಜೆಪಿ ಶಾಸಕರಾದ ಸಿ ಟಿ ರವಿಯವರು ಭಾರತದ ಪ್ರಥಮ ಮುಖ್ಯಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜವಾಹರ್ ಲಾಲ್ ನೆಹರು ಅವರ ಬಗೆಗಿನ ತಮ್ಮ ಅನುಚಿತ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಇನ್ನು ಪೋಸ್ಟ್ ಕಾರ್ಡ್ ನಂತಹ ಸುಳ್ಳುಸುದ್ದಿ ಹರಡುವ ತಾಣಗಳಿಗೆ ನೆಹರೂ ಬಗೆಗೆ ಫೇಕ್ ಸುದ್ದಿಗಳನ್ನು ಸೃಷ್ಟಿ ಮಾಡಿ ಹಂಚುವ ಕೆಲಸ ಅಚ್ಚುಮೆಚ್ಚು. ಜನಪ್ರತಿನಿಧಿಗಳು ಸುಳ್ಳು ಸುದ್ದಿಯಿಂದ ಪ್ರೇರೇಪಿತರಾಗಬಾರದಲ್ಲವೇ? ಅದಕ್ಕೆ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ದ ಅನುವಾದ ‘ಭಾರತ ದರ್ಶನ’ವನ್ನು ಅಗತ್ಯವಾಗಿ ಉಡುಗೊರೆ ನೀಡಿ. ಮುಂದಿನ ಬಾರಿ ಸಿಕ್ಕಾಗ ‘ಓದಿ ಮುಗಿಸಿದ್ರಾ’ ಅಂತ ಕೇಳುವುದನ್ನು ಮಾತ್ರ ಮರೆಯಬೇಡಿ!

  1. ಬಸವಣ್ಣನವರ ವಚನಗಳು

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವೈದಿಕ ಧರ್ಮದ ವಿರುದ್ಧ ಆದ ಶರಣ ಕ್ರಾಂತಿಯನ್ನು ಇಂದಿನ ಜನಪ್ರತಿನಿಧಿಗಳು ತಿಳಿದುಕೊಳ್ಳುವುದು ಅತಿ ಮುಖ್ಯ ಸಂಗತಿ. ಅಂದಿನ ಅನುಭವ ಮಂಟಪ ಜಗತ್ತಿನ ಮೊದಲ ಪ್ರಜಾಸತ್ತೀಯವಾದ ವ್ಯವಸ್ಥೆಯಾಗಿತ್ತು ಅನ್ನುತ್ತಾರೆ. ಈ ನಿಟ್ಟಿನಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಪ್ರಾಥಮಿಕವಾಗಿ ಬಸವಣ್ಣನವರ ವಚನಗಳನ್ನು ಓದುವುದು ಒಳ್ಳೆಯ ಪ್ರಾರಂಭವಾದೀತು. ವಿದ್ವಾಂಸರಾದ ಎಲ್ ಬಸವರಾಜು, ಡಾ. ಎಚ್ ತಿಪ್ಪೇರುದ್ರಸ್ವಾಮಿ ಹೀಗೆ ಹಲವರು ಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಪ್ರಸ್ತಾವನೆಗಳನ್ನು ಬರೆದು ಜನಪ್ರಿಯಗೊಳಿಸಿದ್ದಾರೆ. ಯಾವುದಾದರೂ ಆವೃತ್ತಿಯನ್ನು ಉಡುಗೊರೆ ನೀಡಿ!

  1. ವಿಚಾರ ಕ್ರಾಂತಿಗೆ ಆಹ್ವಾನ, ಶೂದ್ರ ತಪಸ್ವಿ ಮತ್ತು ಮಲೆಗಳಲ್ಲಿ ಮದುಮಗಳು

ಇನ್ನು ಕನ್ನಡ ಆಧುನಿಕ ಸಾಹಿತ್ಯದ ಮೇರು ಹೆಸರು ಕುವೆಂಪು. ಕನ್ನಡದ ವಿವೇಕವನ್ನು, ತಿಳಿವನ್ನು ಹೆಚ್ಚಿಸುವುದರಲ್ಲಿ ಕುವೆಂಪು ಅವರ ಕವನ, ಕಥೆ-ಕಾದಂಬರಿಗಳು, ವೈಚಾರಿಕ ಬರಹಗಳು, ನಾಟಕ ಮತ್ತು ಮಹಾಕಾವ್ಯ ಶ್ರೀರಾಮಾಯಣಂ ದರ್ಶನಂ ಕೃತಿಗಳು ಅಪಾರ ಕೊಡುಗೆಯನ್ನು ನೀಡಿವೆ. ಈ ನಿಟ್ಟಿನಲ್ಲಿ 12 ಸಂಪುಟಗಳಲ್ಲಿ ಸಿಗುವ ಅವರ ಸಮಗ್ರ ಬರಹ ಅತ್ಯುತ್ತಮ ಉಡುಗೊರೆಯಾದೀತು. ಬಜೆಟ್‌ನ ಕೊರತೆ ಎಂದಾದರೆ, ಪೌರಾಣಿಕ ಕಾವ್ಯ ರಾಮಾಯಣದಲ್ಲಿರುವ ಶೋಷಣೆಯ ಸಂಗತಿಯೊಂದನ್ನು ತಿದ್ದಿ ಬರೆದ ‘ಶೂದ್ರ ತಪಸ್ವಿ’ ನಾಟಕ, ವೈಚಾರಿಕತೆಯನ್ನು ಉದ್ದೀಪಿಸುವ ‘ವಿಚಾರ ಕ್ರಾಂತಿಗೆ ಆಹ್ವಾನ’ ಮತ್ತು ಭಾರತ ಸಮಾಜಿಕ ವ್ಯವಸ್ಥೆಯನ್ನು ಕಥಾ ನಿರೂಪಣೆಯ ಮೂಲಕ ಶೋಧಿಸುವ, ಅದರಲ್ಲಿರುವ ತಾರತಮ್ಯವನ್ನು ಸರಿಪಡಿಸಿ ಉತ್ತಮ ನಾಗರಿಕರಾಗಬೇಕಿರುವ ಉದಾತ್ತತೆಯನ್ನು ಸಾರುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಉಡುಗೊರೆಯಲ್ಲಿ ಒಳಗೊಳ್ಳಿ.

ಇದು ಅಂತಿಮವಾದ ಪಟ್ಟಿಯೇನಲ್ಲ. ಪ್ರಾಥಮಿಕ ಮತ್ತು ಪ್ರಾತಿನಿಧಿಕ ಪಟ್ಟಿ ಮಾತ್ರ. ಮುಂದಿನ ಕಂತಿನಲ್ಲಿ ಪ್ರತಿ ಇಲಾಖೆಯ (ಮುಜರಾಯಿ, ಶಿಕ್ಷಣ, ಆರೋಗ್ಯ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಇತ್ಯಾದಿ) ಕಾರ್ಯಕ್ರಮಗಳಿಗೆ ಹೊಂದುವಂತಹ ನಿರ್ದಿಷ್ಟ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಲಾಗುತ್ತದೆ. ಅಲ್ಲಿಯವರೆಗೆ ನೀವು ನಿಮ್ಮ ಸಲಹೆಗಳನ್ನು ಕಮೆಂಟ್ ಮಾಡುವುದನ್ನು ಮರೆಯಬೇಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಟರಾಜ್ ಹುಳಿಯಾರ್ ಅವರು ರಚಿಸಿರುವ ಶಾಂತವೇರಿ ಗೋಪಾಲಗೌಡರ ಜೀವನ ಚರಿತ್ರೆ ಮತ್ತು ಬಸವರಾಜು ಮೇಗಲಕೇರಿ ಅವರು ಹೊರತಂದ “ನಮ್ಮ ಅರಸು” ಕೃತಿಗಳು ಉತ್ತಮ ರಾಜಕಾರಣಿಗಳಾಗಲು ಸ್ಪೂರ್ತಿ ನೀಡುತ್ತವೆ. ಹೀಗಾಗಿ ಈ ಕೃತಿಗಳನ್ನೂ ಸಹ ಉಡುಗೊರೆಯಾಗಿ ನೀಡಬಹುದು.

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...