Homeಕ್ರೀಡೆಒಲಂಪಿಕ್ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

- Advertisement -
- Advertisement -

ಆಗಸ್ಟ್ 6, 2021 ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥ ದಿನ. ಸುವರ್ಣಾಕ್ಷರ ಏಕೆ ಎಂದು ನೀವು ಕೇಳಬಹುದು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪಡೆದ ಕಂಚಿಗೆ ಚಿನ್ನದಷ್ಟೇ ಬೆಲೆಯಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಹಲವು ವರ್ಷಗಳಿಂದ ಆದ ಹಿನ್ನಡೆ. ಸುದೀರ್ಘ 41 ವರ್ಷಗಳ ನಂತರ ಈಗ ಭಾರತ ಹಾಕಿ ತಂಡ ಪದಕ ಪಡೆದುಕೊಂಡಿದೆ. ನಾಲ್ಕು ದಶಕಗಳ ನಿರಾಸೆ, ಹತಾಶೆ, ಕಣ್ಣೀರಿನ ನಂತರ ಕೋವಿಡ್ ಪಿಡುಗಿನ ಮಧ್ಯದಲ್ಲಿಯೇ, ಪ್ರೇಕ್ಷಕರಿಲ್ಲದ
ಟೋಕಿಯೋದ ಕ್ರೀಡಾಂಗಣದಲ್ಲಿ ಬಿಸಿಲಿನ ನಡುವೆಯೇ ಅತೀವ ಆರ್ದ್ರತೆಯಲ್ಲಿ ಬೆವರು ಸುರಿಸಿ, ಪಣತೊಟ್ಟು ನಂತರ ಆನಂದಬಾಷ್ಪ ಹೊರಸೂಸಿ ಇಡೀ ಭಾರತ ಮತ್ತೆ ಹಾಕಿಯತ್ತ ಗಮನಹರಿಸುವಂತೆ ಸದ್ಯದ ಹಾಕಿ ತಂಡ ಕಾರ್ಯನಿರ್ವಹಿಸಿದೆ.

ಎರಡು ವರ್ಷಗಳಿಂದ ಬೆಂಗಳೂರಿನ ’ಸಾಯಿ’ ತರಬೇತಿ ಶಿಬಿರದಲ್ಲಿ ಬಸವಳಿದು, ಬೆಂಡಾಗಿ ಕೋವಿಡ್ ನಡುವೆಯೂ ಶ್ರಮವಹಿಸಿ ಒಲಿಂಪಿಕ್ಸ್ ಪದಕ ಗಳಿಸುವ ಛಲದಿಂದ ತಮಗಿಂತ ಕೆಳಗಿನ ರ್‍ಯಾಂಕಿಂಗ್‌ನಲ್ಲಿರುವ ಯಾವುದೇ ತಂಡದ ವಿರುದ್ಧ ಸೋಲದೇ ಕಂಚಿಗಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ರಿಯೋ 2016ರಲ್ಲಿ ಕಂಚಿನ ಪದಕ ಪಡೆದಿದ್ದ ಜರ್ಮನಿಯ ವಿರುದ್ಧ ಗಳಿಸಿದ ಅತ್ಯಂತ ರೋಚಕ ಜಯ ಎಲ್ಲ ಹಾಕಿ ಪ್ರೇಮಿಗಳು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿತು. ಈ ಒಲಿಂಪಿಕ್ಸ್ ಪದಕದಿಂದ ಮತ್ತೆ ಭಾರತೀಯ ಹಾಕಿ ದಶಕಗಳ ನಂತರ ಮೈಕೊಡವಿ ಪುಟಿದೇಳುವಂತೆ ಮಾಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪೂಲ್ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಇತ್ತು. ಆ ಪಂದ್ಯದಲ್ಲಿ ಗಳಿಸಿದ ರೋಚಕ 3-2 ಅಂತರದ ಜಯ ಅತ್ಯಂತ ಮಹತ್ವಪೂರ್ಣವಾಗಿತ್ತು. ಎರಡು ಗುಂಪುಗಳಲ್ಲಿ ಇದ್ದ 8 ತಂಡಗಳಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಅವಕಾಶವಿತ್ತು. ಸದ್ಯದ ಭಾರತೀಯ ತಂಡದಲ್ಲಿ ಅನುಭವಿ ಹಾಗೂ ಯುವಪ್ರತಿಭೆಗಳ ಮಿಶ್ರಣ ಅಪರೂಪವಾಗಿತ್ತು. 10 ಯುವಕರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುತ್ತಿದ್ದರು. ಗೋಡೆಯಂತಿದ್ದು 15 ವರ್ಷಗಳಿಂದ ಭಾರತದ ಗೋಲ್ ಕಾಯುತ್ತಿರುವ ಶ್ರೀಜೇಶ್, ಡ್ರ್ಯಾಗ್ ಫ್ಲಿಕ್ ಪರಿಣಿತರಾದ ರುಪಿಂದರ್ ಪಾಲ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್, ನಾಯಕ ಮನಪ್ರೀತ್ ಸಿಂಗ್ ಹಾಗೂ ಸುರಿಂದರ್ ಸಿಂಗ್ ಹೊಸ ಆಟಗಾರರಿಗೆ ತಮ್ಮ ಅನುಭವವನ್ನು ಧಾರೆಯೆರೆದರು.

ಆದರೆ ಎರಡನೆಯ ಪಂದ್ಯದಲ್ಲೇ ವಿಶ್ವಚಾಂಪಿಯನ್ ಆಸ್ಟೇಲಿಯಾ ವಿರುದ್ಧ 7-1ರ ಸೋಲು ಅನಿರೀಕ್ಷಿತವಾಗಿತ್ತು. ಈ ಭಾರಿ ಸೋಲಿನ ಆಘಾತದಿಂದ ಬೇಗನೇ ಚೇತರಿಸಿಕೊಂಡು, ಅಮೋಘ ಧೈರ್ಯದಿಂದ ಪುಟಿದೆದ್ದು ಬಂದ ಭಾರತ ಸ್ಪೇನ್, 2016ರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಮತ್ತು ಜಪಾನ್ ತಂಡಗಳಿಗೆ ಸೋಲುಣಿಸಿ 2016ರಲ್ಲಿ ನಡೆದಂತೆಯೇ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಗಳಿಸಿದ ೩-೧ರ ಜಯ ಮನಮೋಹಕವಾಗಿತ್ತು.

ಆದರೆ ಸೆಮಿಫೈನಲ್ ಪ್ರವೇಶಿಸಿದರೆ ಪದಕದ ಒತ್ತಡ ಹೆಚ್ಚಾಗಿರುತ್ತದೆ ಅಲ್ಲದೆ ವಿಶ್ವಚಾಂಪಿಯನ್ ಬೆಲ್ಜಿಯಂ ಸೋಲು ಅತಿ ಕಠಿಣವೆಂಬ ಮಾತೂ ಪ್ರಚಲಿತದಲ್ಲಿತ್ತು. ಆದರೂ ಇಡೀ ಭಾರತ ಎಚ್ಚೆತ್ತು ನೋಡುವಂತೆ ಆಡಿ, 5-2ರ ಅಂತರದ ಸೋತರೂ ನಿಜವಾದ ಹೋರಾಟವನ್ನು ಭಾರತ ಹಾಕಿ ತಂಡ ಎತ್ತಿ ತೋರಿಸಿತ್ತು. ಭಾರತ ತಂಡ ಸೋತರೂ ಕಂಚಿನ ಆಸೆ ಇನ್ನೂ ಜೀವಂತವಾಗಿತ್ತು.

ಜರ್ಮನಿ ಒಲಿಂಪಿಕ್ಸ್‌ನಲ್ಲಿ ಒಂದು ಬಾರಿ ಚಿನ್ನ ಪಡೆದ ತಂಡ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನೋಡುತ್ತಿದ್ದಂತೆ ಜರ್ಮನಿ 2-0 ಲೀಡ್ ಪಡೆದಾಗಲೂ ಭಾರತ ಹಾಕಿ ತಂಡ ಧೃತಿಗೆಡಲಿಲ್ಲ. ಮೂರನೇ ಕ್ವಾರ್ಟರ್ ಸಮಯಕ್ಕೆ ಸ್ಕೋರ್ 3-3 ರಲ್ಲಿ ಸಮವಾಗಿತ್ತು. ರುಪಿಂದರ್, ಗುರ್ಜಂತ್, ಸಿಮ್ರನ್‌ಜೀತ್ ಮತ್ತು ಹಾರ್ದಿಕ್ ಇವರುಗಳ ಪ್ರತಿಭೆಯ ಮೂಲಕ 5-3 ಲೀಡ್ ಪಡೆದಾಗ ಕೂಡ ಕಂಚಿನ ಪದಕ ನಿಶ್ಚಿತವಾಗಿರಲಿಲ್ಲ. ನಾಲ್ಕನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲ್ ಹೊಡೆದು ಸ್ಕೋರ್ 5-4 ಆದಾಗ ನಿಜವಾದ ಒತ್ತಡ ಭಾರತದ ಮೇಲಿತ್ತು. ಈ ಲೀಡ್ ಉಳಿಸಿಕೊಳ್ಳಲು ಭಾರತ ಪಟ್ಟಪಾಡು ನೋಡಲಿಕ್ಕಾಗಲಿಲ್ಲ. ಆ ಪಂದ್ಯದ ಕೊನೆಯ ಹತ್ತು ನಿಮಿಷಗಳು ಒಂದು ಯುಗದಂತೆ ಅನ್ನಿಸಿತ್ತು. ಇನ್ನೂ 6 ನಿಮಿಷ ಇದೆ ಎನ್ನುವಾಗ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿ ಹೃದಯ ಬಾಯಿಗೆಬಂದಿತ್ತು. ತಮ್ಮ ಹಾಕಿ ಜೀವನದ ಅತ್ಯಂತ ಮಹೋನ್ನತ ಸೇವ್ ಮಾಡಿದ ಶ್ರೀಜೇಶ ಭಾರತಕ್ಕೆ ಕಂಚು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಲ್ಲ ಆಟಗಾರರು, ಸಹಾಯಕ ಸಿಬ್ಬಂದಿ, ಆಸ್ಟ್ರೇಲಿಯಾ ಮೂಲದ ಕೋಚ್ ಗ್ರಹಾಂ ರೀಡ್ ಅವರುಗಳ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೆ ಇಡೀ ಭಾರತ ಸಂಭ್ರಮಿಸಿತು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದ ಅಂಶವೆಂದರೆ ಭಾರತೀಯ ಆಟಗಾರರು ತೋರಿದ ಹೋರಾಟದ ಮನೋಭಾವ ಹಾಗೂ ಟೀಮ್ ವರ್ಕ್. ಪದಕ ವಿತರಣಾ ಸಮಯದಲ್ಲಿ ಕೋವಿಡ್ ನಿಯಮದಿಂದ ಆಟಗಾರರೇ ತಟ್ಟೆಯಿಂದ ಪದಕ ತೆಗೆದುಕೊಂಡು ಪಕ್ಕದಲ್ಲಿದ್ದ ಗೋಲ್‌ಕೀಪರ್ ಶ್ರೀಜೇಶ್ ಅವರ ಕೊರಳಿಗೆ ಹಾಕಿ ಗೌರವಿಸಿದರು. ಈ ದೃಶ್ಯ ಅತ್ಯಂತ ಅವಿಸ್ಮರಣೀಯವಾಗಿತ್ತು. ನಂತರ ಉಳಿದ ಎಲ್ಲ ತಂಡಗಳ ಆಟಗಾರರು ಅದನ್ನೇ ಅನುಸರಿಸಿದರು.

ಮತ್ತೊಂದೆಡೆ ಭಾರತೀಯ ವನಿತೆಯರು ತೋರಿದ ಪ್ರದರ್ಶನ ಕೂಡ ಎಲ್ಲರ ಗಮನ ಸೆಳೆಯಿತು. 1980 ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಆಹ್ವಾನದ ಮೇರೆಗೆ ಆಡಿದ ಭಾರತೀಯ ಮಹಿಳೆಯರು ನಂತರ ಹಲವು ವರ್ಷಗಳ ಕಾಲ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆಯಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೂ ಒಂದೂ ಪಂದ್ಯ ಗೆಲ್ಲದೇ 12ನೆಯವರಾಗಿ ಉಳಿದರು. ಆದರೆ ಈ ಬಾರಿ ಎಲ್ಲರನ್ನು ತಮ್ಮ ಹೋರಾಟದ ಮನೋಭಾವದಿಂದ ಚಕಿತಗೊಳಿಸಿ ಮನಸೂರೆಗೊಂಡರು. ಮೊದಲು ನೆದರ್‍ಲ್ಯಾಂಡ್, ಜರ್ಮನಿ, ಗ್ರೇಟ್ ಬ್ರಿಟನ್ ತಂಡಗಳ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಆದರೆ ಬಸವಳಿಯದೇ ಗೆಲ್ಲಲಿವೆ ಎಂದು ನಿರೀಕ್ಷಿಸಿದ್ದ ವಿಶ್ವಚಾಂಪಿಯನ್ ಐರ್‍ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೇಲೆ ಮಿಂಚಿ ಮೊಟ್ಟ ಮೊದಲ ಬಾರಿಗೆ ನಾಕ್‌ಐಟ್ ಹಂತ ಪ್ರವೇಶ ಮಾಡಿದಾಗ ರಾಶಿ ರಾಶಿ ಅಭಿನಂದನೆಗಳ ಸುರಿಮಳೆಯೇ ಬಂದಿತು.

ನಂತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆದ ಆಸ್ಟ್ರೇಲಿಯಾ ಮೇಲೆ ಸಾಧಿಸಿದ ಐತಿಹಾಸಿಕ ಜಯ ಅಂತಾರಾಷ್ಟ್ರೀಯ ಮಹಿಳಾ ಹಾಕಿಯಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿತು. ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-1ರಿಂದ ಸೋತರೂ ಕಂಚಿನ ಹೋರಾಟದಲ್ಲಿ ಧೃತಿಗೆಡದೆ ಹೋರಾಡಿದರು. ಆದರೆ ಕಂಚಿನ ಹೋರಾಟದ ಪಂದ್ಯ ಕೈಹಿಡಿಯಲಿಲ್ಲ. ರೋಚಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 4-3 ಅಂತರದಿಂದ ಗೆದ್ದಿತು. ಭಾರತೀಯ ಹಾಕಿ ತಂಡದ ವನಿತೆಯರ ಆಕ್ರಂದನ ದೆಹಲಿಗೆ ಕೇಳಿಸುವಂತಿತ್ತು. ಕಠಿಣ ಪರಿಶ್ರಮಪಟ್ಟ ಭಾರತೀಯ ಮಹಿಳೆಯರಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ವಂದನಾ ಕಟಾರಿಯಾ, ತಡವಾಗಿ ಸ್ಥಾನ ಪಡೆದ ಗುರ್ಜಿತ್ ಕೌರ್, ನಾಯಕಿ ರಾಣಿ ರಾಂಪಾಲ್, ಸಲೀಮಾ ಟೇಟೆ, ದೀಪ್ ಗ್ರೇಸ್ ಎಕ್ಕಾ, ಗೋಲ್ ಕೀಪರ್ ಸವಿತಾ ಎಲ್ಲರ ಗಮನ ಸೆಳೆದರು.

ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ಏಕೆ ಪ್ರಾಮುಖ್ಯತೆ ಪಡೆದಿದೆಯೆಂದರೆ, 1928ರಿಂದ 1996ರವರೆಗೆ ಭಾರತ ಪಡೆದ 12 ಪದಕಗಳಲ್ಲಿ ಹಾಕಿ ತಂಡ ಗಳಿಸಿದ್ದು 11 ಪದಕಗಳು. ಅದರಲ್ಲಿ 8 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿತ್ತು.
ಮತ್ತೆ ಈ ಗತಕಾಲದ ವೈಭವ ಮರುಕಳಿಸಲು ಕಠಿಣ ಪರಿಶ್ರಮದ ಅಗತ್ಯ ಇತ್ತು. ಅದು ಟೋಕಿಯೋ ಸಾಧನೆಯ ಮೂಲಕ ಸಾಕಾರಗೊಂಡಿದೆ. ಮಿಕ್ಕ ಯುರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬದಲಾದ ನಿಯಮಗಳಿಗೆ ಮತ್ತು ಕೃತಕ ಹುಲ್ಲಿನ ಅಂಗಳಕ್ಕೆ ಬೇಗ ಒಗ್ಗಿಕೊಂಡರೆ ಭಾರತಕ್ಕೆ ನಾಲ್ಕು ದಶಕ ಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತೀಯ ಪುರುಷರ ತಂಡ ಅರ್ಹತೆ ಪಡೆಯದೇ ಇದ್ದಾಗ, ಆಗಲೇ ಎಲ್ಲರೂ ಭಾರತೀಯ ಹಾಕಿಯ ಶ್ರದ್ಧಾಂಜಲಿ ಬರೆದುಬಿಟ್ಟಿದ್ದರು. ಆದರೆ ನಂತರ ಭಾರತ ವಿದೇಶಿ ತರಬೇತುದಾರರು ಮತ್ತು ತಂತ್ರಜ್ಞಾನ ತಂಡಗಳ ನೆರವಿನಿಂದ ಬಹಳಷ್ಟು ಹೂಡಿಕೆ ಮಾಡಿ ಈಗ ಈ ಮಟ್ಟದ ಸುಧಾರಣೆ ತೋರಲಾಗಿದೆ.

ಕಳೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಈಗ ಟೋಕಿಯೋದಲ್ಲಿ ಕಂಚು ಗಳಿಸಿಯಾಗಿದೆ. ಆದರೆ ಮುಂದೇನು? ಸತತ ಪ್ರಯತ್ನ ಮುಂದುವರೆಯಬೇಕು ಹಾಗೂ ಹಲವು ಬದಲಾವಣೆಗಳನ್ನು ಮಾಡಲೇಬೇಕು. ಮಂದಿನ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈವರೆಗೆ ಭಾರತದ ಹಾಕಿಯನ್ನು ಭದ್ರವಾಗಿ ಕಾಪಾಡಿದ 35 ವರ್ಷದ ಶ್ರೀಜೇಶ್ ಹಾಗೂ 31 ವರ್ಷದ ಸವಿತಾ ಇರುವರೇ? ಟೋಕಿಯೋದಲ್ಲಿ ಪಡೆದ ಹುಮ್ಮಸ್ಸು ಮತ್ತು ಮೊಮೆಂಟಮ್ ಮುಂದುವರೆಯಬೇಕೆಂದರೆ ಶತಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಪುರುಷರು, ಮಹಿಳೆಯರು ತೋರಿದ ಪ್ರದರ್ಶನದಿಂದ ಹೆಚ್ಚಿನ ಮಟ್ಟದ ನಿರೀಕ್ಷೆ ಮತ್ತು ಒತ್ತಡ ಸ್ವಾಭಾವಿಕವಾಗಿ ಇದ್ದೇ ಇರುತ್ತದೆ. ಇದನ್ನು ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಹೇಗೆ ನಿಭಾಯಿಸುತ್ತವೆ ಕಾದು ನೋಡಬೇಕು.

ಚಂದ್ರಮೌಳಿ ಕಣವಿ

ಚಂದ್ರಮೌಳಿ ಕಣವಿ
ಖ್ಯಾತ ಕವಿ ಚೆನ್ನವೀರ ಕಣವಿಯವರ ಮಗನಾದ ಚಂದ್ರಮೌಳಿ ಕಣವಿಯವರು ಸ್ವತಃ ಕ್ರೀಡಾಪಟು. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾಗಿರುವ ಕಣವಿಯವರು ಪ್ರವೃತ್ತಿಯಲ್ಲಿ ಕ್ರೀಡಾ ಬರಹಗಾರರು ಮತ್ತು ವೀಕ್ಷಕವಿವರಣೆಗಾರರು.


ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...