Homeಕರ್ನಾಟಕಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯ ಕೋಮು ಸೂಕ್ಷ್ಮ ಊರುಗಳೆಂಬ ಆತಂಕ ಎರಡು-ಮೂರು ದಶಕದಿಂದ ಕಾಡುತ್ತಿದೆ. ವೈಯಕ್ತಿಕ ಸಣ್ಣ-ಪುಟ್ಟ ಗಲಾಟೆ ನೋಡು-ನೋಡುತ್ತಿದ್ದಂತೆ ಕೋಮು ಕಲಹವಾಗಿ ಊರೂರೆ ಹೊತ್ತಿ ಉರಿವ ಸ್ವಭಾವದ ತಾಲೂಕುಗಳಿವು! ಇಲ್ಲಿ ನಡೆದ ದೊಂಬಿ-ಗಲಭೆಗೆ ಲೆಕ್ಕವೇ ಇಲ್ಲ. ಇಂಥ ಹಿನ್ನಲೆಯ ಪುತ್ತೂರು-ಸುಳ್ಯದಲ್ಲಿ ಇದ್ದಕ್ಕಿದ್ದಂತೆ ಅನೈತಿಕ ಪೊಲೀಸ್‌ಗಿರಿ ಬಿರುಸುಗೊಂಡಿರುವುದು ಜನಸಾಮಾನ್ಯರನ್ನು ಕಂಗಾಲಾಗಿಸಿಬಿಟ್ಟಿದೆ. ಹತ್ತಿರದಲ್ಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ರಂಗತಾಲೀಮು ಇದೆಂಬ ಶಂಕೆ ಶುರುವಾಗಿದೆ. ಕೋವಿಡ್-19ರ ಸತತ ಲಾಕ್‌ಡೌನ್‌ನಿಂದ ತುತ್ತು ಕೂಳಿಗೂ ತತ್ವಾರ ಬಂದಿರುವ ಈ ಸಂದರ್ಭದಲ್ಲಿ ಕೋಮು ಗಲಭೆಯೆನಾದರೂ ಆಗಿಬಿಟ್ಟರೆ ಬದುಕು ಬರ್ಬಾದ್ ಎಂಬ ಆತಂಕದಲ್ಲಿವೆ ದುಡಿದು ತಿನ್ನುವ ಜೀವಗಳು..

ಪುತ್ತೂರು ಮತ್ತು ಸುಳ್ಯದಲ್ಲಿ ಕಳೆದೊಂದು ವಾರದಲ್ಲಿ ಒಂದರ ಹಿಂದೊಂದರಂತೆ ಎರಡು ಮತಾಂಧ ಸಂಘರ್ಷಗಳು ಆಗಿಹೋಗಿವೆ. ಈ ದುರ್ಘಟನೆ ನಂತರ ಮುಂದೇನು ಕಾದಿದೆಯೋ ಎಂಬ ಭಯಕ್ಕೆ ಜನರು ಬಿದ್ದಿದ್ದಾರೆ. ಆಗಸ್ಟ್ 15ರಂದು ಪುತ್ತೂರಿನ ಕಬಕ ಎಂಬಲ್ಲಿ ಸಂಘಪರಿವಾರಿಗಳು ಹಾಗು ಎಸ್‌ಡಿಪಿಐ ಬಳಗದ ನಡುವೆ ಗಲಾಟೆಯಾಗಿದೆ. ಕಬಕದ ಬಿಜೆಪಿ ಆಡಳಿತದ ಗ್ರಾಮ ಪಂಚಾಯತ್ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ-ಮನೆಗೆ ಸ್ವಾತಂತ್ರ್ಯ ಸಂದೇಶ ತಲುಪಿಸುವ ಹೆಸರಲ್ಲಿ ರಥಯಾತ್ರೆ ಆಯೋಜಿಸಿತ್ತು. ಈ ರಥದಲ್ಲಿ ಆರ್‌ಎಸ್‌ಎಸ್ ದಿಗ್ಗಜನಾಗಿದ್ದ ಸಾರ್ವರ್ಕರ್ ಪೋಟೋ ಇಡಲಾಗಿತ್ತು. ಈ ರಥ ಯಾತ್ರೆ ಕಬಕದಾಚೆಯ ಪುತ್ತೂರು ನಗರದಲ್ಲೂ ಸುತ್ತಾಡಿಸುವ ಪ್ಲಾನು ಸಂಘಪರಿವಾರದವರು ಹಾಕಿಕೊಂಡಿದ್ದರು.

PC : The Quint

ಇದು ಕಬಕ-ಪುತ್ತೂರು ಭಾಗದಲ್ಲಿ ಒಂದಿಷ್ಟು ಬೇರು ಬಿಟ್ಟಿರುವ ಎಸ್‌ಡಿಪಿಐ ಕಾರ್ಯಕರ್ತರನ್ನು ಕೆರಳಿಸಿದೆ. ಸಾರ್ವರ್ಕರ್ ಪೋಟೋ ರಥದಿಂದ ತೆಗೆಯುವಂತೆ ಹಠಹಿಡಿದಿದ್ದಾರೆ. “ಸಾರ್ವರ್ಕರ್ ಬ್ರಿಟೀಶರಿಗೆ ಶರಣಾಗಿದ್ದ ಹೇಡಿ. ಇಂಥವನ ಬದಲಿಗೆ ದೇಶ ಭಕ್ತ ಟಿಪ್ಪುಸುಲ್ತಾನ್ ಭಾವಚಿತ್ರ ಹಾಕುವಂತೆ” ಒತ್ತಾಯಿಸಿದ್ದಾರೆ. ಎರಡು ಕಡೆಯವರಿಗೆ ಕೈಕೈ ಮಿಲಾಯಿಸುವ ಜಗಳ ನಡೆದಿದೆ. ಪೊಲೀಸರ ಪ್ರವೇಶವಾಗಿ ಎರಡು -ಮೂರು ಎಸ್‌ಡಿಪಿಐ ಮುಂದಾಳುಗಳ ಬಂಧಿಸಲಾಯಿತು. ಆ ಬಳಿಕ ಆ ರಥ ಊರೆಲ್ಲ ಸುತ್ತು ಹಾಕಿ ಪುತ್ತೂರು ಪೇಟೆಯಲ್ಲಿ ಸಂಚಾರ ನಡೆಸಿದೆ. ಇತ್ತ ಎಸ್‌ಡಿಪಿಐ ಪೊಲೀಸ್ ಠಾಣೆಗೆ ಮತ್ತಿಗೆ ಹಾಕಿತು. ಸಂಸದ-ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರ್ ಎಸ್‌ಡಿಪಿಐಗೆ ಬುದ್ದಿ ಕಲಿಸುವುದಾಗಿ ಹೇಳಿಕೆ ಕೊಟ್ಟರು. ಬಿಜೆಪಿಗರು ಎಸ್‌ಡಿಪಿಐ ನಿಶೇಧಿಸುವಂತೆ ಆಗ್ರಹಿಸಿದರು. ಕೇಂದ್ರ-ರಾಜ್ಯ ಎರಡು ಬಿಜೆಪಿಯೇ ಅಧಿಕಾರದಲ್ಲಿರುವಾಗ ಆ ಪಾರ್ಟಿಯ ದೊಡ್ಡವರೆ ಎಸ್‌ಡಿಪಿಐ ನಿಷೇಧಿಸವಂತೆ ಹೇಳುವುದು ಹಾಸ್ಯಾಸ್ಪದವೆಂದು ಜನರು ನಗುತ್ತಿದ್ದಾರೆ.

ಬಂಧಿತ ಎಸ್‌ಡಿಪಿಐ ನಾಯಕರು ಒಂದೇ ದಿನದಲ್ಲಿ ಜಾಮೀನಲ್ಲಿ ಹೋರಬಂದರು; ಅವರಿಗೆ ಎಸ್‌ಡಿಪಿಐ ಸಂಘಟನೆ ವೀರೋಚಿತ ಸ್ವಾಗತ ನೀಡಿತು; ಎಸ್‌ಡಿಪಿಐ ಪ್ರತಿಭಟನಾ ಮೆರವಣಿಗೆ ಮಾಡಿತು. ಕೆಲ ಖಟ್ಟರ್ ಹಿಂದೂತ್ವವಾದಿಗಳು ತಮ್ಮ ನಾಯಕರ ದೌರ್ಬಲ್ಯದಿಂದ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದುರ್ಬಲ ಕೇಸು ಬೀಳುವಂತಾಯಿತೆಂದು ಟ್ರೋಲ್ ಮಾಡಿ ಆಕ್ರೋಶ ಹೊರಹಾಕಿದರು. ಇಲ್ಲಿ ಸಹಜವಾದ ಎರಡು ಪ್ರಶ್ನೆಗಳೆದ್ದು ಪ್ರಜ್ಞಾವಂತರ ತಲೆತಿನ್ನುತ್ತಿದೆ! ಗಡಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕೋವಿಡ್ ಶಿಷ್ಟಾಚಾರದ ನಿರ್ಬಂಧವಿರುವಾಗ ಬಿಜೆಪಿಗರಿಗೆ ರಥ ಸಂಚಾರಕ್ಕೆ ಪರವಾನಗಿ ಕೊಟ್ಟಿದ್ಯಾರು? ಅದು ಕಬಕ ದಾಟಿ ಪುತ್ತೂರು ಪ್ರವೇಶಿಸಲು ಪೊಲೀಸರು ಅವಕಾಶ ಹೇಗೆ ಕೊಟ್ಟರು? ಎಸ್‌ಡಿಪಿಐ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಸಿಕಿದ್ದು ಹೇಗೆ? ಈ ಪ್ರಶ್ನೆಗಳೆಲ್ಲ ಉತ್ತರವಿಲ್ಲದೆ ಹಾಗೆ ಉಳಿದುಕೊಂಡಿದ್ದು, ಜಿಲ್ಲಾಡಳಿತದ ವೈಫಲ್ಯ ಪತ್ತೂರಿಗೆ ಗಂಡಾಂತಕಾರಿಯಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ!

ಪುತ್ತೂರಿನ ಸ್ಥಿತಿ ಬೂದಿ ಮಚ್ಚಿದ ಕೆಂಡದಂತಿರುವಾಗಲೆ ಪಕ್ಕದ ಸುಳ್ಯದಲ್ಲಿ ಅನೈತಿಕ ಪೂಲೀಸ್‌ಗಿರಿಯ ಅಟ್ಟಹಾಸ ನಡೆದಿದೆ! ಹಿಂದು ಜಾಗರಣಾ ವೇದಿಕೆಯ ನೈತಿಕ ಪಾಠ ಬೋಧನೆಯ ಆರ್ಭಟಕ್ಕೆ ಅಮಾಯಕ ಹಿಂದು ಹುಡುಗಿಯರಿಬ್ಬರಿಗೆ ಕಿರುಕುಳ ಮತ್ತು ಮುಸ್ಲಿಮ್ ಹುಡುಗನ ಪ್ರಾಣ ಸಂಕಟಕ್ಕೀಡಾಗಿತ್ತೆಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾವುದೋ ಕೆಲಸಕ್ಕೆಂದು ಪುತ್ತೂರಿಗೆ ಬಂದಿದ್ದ ಬೆಂಗಳೂರಿನ ಹುಡುಗಿಯರು ವಾಪಸಾಗುತ್ತಿದ್ದರು. ಪುತ್ತೂರಿಂದ ಬೆಂಗಳೂರಿಗೆ ಹೊರಟಿದ್ದ ಈ ಸರ್ಕಾರಿ ಬಸ್‌ನಲ್ಲಿ ಕುಂಬ್ರಕ್ಕೆ ಮುಸ್ಲಿಂ ಹುಡುನೊಬ್ಬ ಕುಂಬ್ರಕ್ಕೆ ಹೋಗುತ್ತಿದ್ದ. ಬೆಂಗಳೂರಿಂದ ಕರೆಬಂದಿದ್ದರಿಂದ ಆತ ಕುಂಬ್ರದಲ್ಲಿ ಇಳಿಯದೆ ಬೆಂಗಳೂರಿಗೆ ಟಿಕೆಟ್ ಪಡೆದಿದ್ದಾನೆ. ಸಂದರ್ಭೋಚಿತವಾಗಿ ಆ ಹುಡುಗ ಹಾಗು ಹುಡುಗಿಯರ ಒಂದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ.

ಇದನ್ನು ಬಸ್‌ನಲ್ಲಿದ್ದ ಹಿಂದು ಜಾಗರಣಾ ವೇದಿಕೆಯ ಸದಸ್ಯನೊಬ್ಬ ಸಂಶಯದಿಂದಲೇ ನೋಡುತ್ತಿದ್ದ. ತಕ್ಷಣ ಆತ ತನ್ನ ಸಹಚರರಿಗೆ ತಾನು ಅರ್ಥೈಸಿಕೊಡ್ಡದ್ದನ್ನು ಪೋನ್‌ನಲ್ಲಿ ವಿವರಿಸಿದ್ದಾನೆ. ಹಿಂದು ಜಾಗರಣಾ ವೇದಿಕೆ, ಬಜರಂಗದಳದ ಕಾರ್ಯಕರ್ತರು ಆನೆಗುಂಡಿ ಎಂಬಲ್ಲಿ ಬಸ್ ಅಡ್ಡ ಹಾಕಿದ್ದಾರೆ. ಹಿಂದು ಜಾಗರಣಾ ವೇದಿಕೆಯ ದೊಡ್ಡ ಗುಂಪು ಆ ಹುಡುಗ-ಹುಡುಗಿಯರಿಗೆ ಮುತ್ತಿಗೆ ಹಾಕಿ ರಂಪವೆಬ್ಬಿಸಿದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು, ಬಸ್ ಕಂಡಕ್ಟರ್ ಮತ್ತು ಚಾಲಕ ಅವರು ಅಪರಿಚಿತರು, ಒಟ್ಟಾಗಿ ಪ್ರಯಾಣಿಸುತ್ತಿಲ್ಲವೆಂದು ತಿಳಿಹೇಳಿದರು ಆವೇಶದಲ್ಲಿದ್ದ ಹಿಂಜಾವೆ ತಂಡ ಕೇಳಲಿಲ್ಲ. ಇದು ಅನೈತಿಕ ಟ್ರಿಪ್ ಎಂದು ದಾಂಧಲೆ ಎಬ್ಬಿಸಿಬಿಟ್ಟರು ಆ ನಡು ರಾತ್ರಿಯಲ್ಲಿ!ಬಸ್ ಪೊಲೀಸ್ ಠಾಣೆಗೆ ಒಯ್ಯುವಂತೆ ಬಲವಂತಪಡಿಸಿದರು. ಬಸ್ಸು ಠಾಣೆಯತ್ತ ತೆರಳುತ್ತಿದ್ದಾಗ ಹಿಂಜಾವೆ ತಂಡ ಕಾರಲ್ಲಿ ಹಿಂಬಾಲಿಸಿದೆ.

PC : DNA India

ಬಸ್ ನಲ್ಲಿದ್ದ ಮುಸ್ಲಿಂ ಹುಡುಗ ಪೈಜಾರಿನಲ್ಲಿ ಇಳಿದು ತನ್ನವರಿಗೆ ಸುದ್ದಿ ಮುಟ್ಟಿಸಿದ್ದಾನೆ. ಇದ್ದಕ್ಕಿದ್ದಂತೆ ಮುಸ್ಲಿಮರ ದೊಡ್ಡ ಗುಂಪು ಜಮೆಯಾಗಿಬಿಟ್ಟಿತು. ವಾತಾವರಣ ಬಿಗಡಾಯಿಸಿ ಸಂಘರ್ಷ ಶುರುವಾಗಿಯಿತು. ಅಷ್ಟರಲ್ಲಿ ಪೊಲೀಸರಿಗೆ ವಿಷಯ ಗೊತ್ತಾಗಿತ್ತು. ಪೊಲೀಸರು ಬಂದು ಬಸ್ ಠಾಣೆಗೆ ಒಯ್ದರು. ಯುವಕ ಯುವತಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ; ಅವರ ಮೋಬೈಲ್ ಪರಿಶೀಲಿಸಿದ್ದಾರೆ. ಕಂಡಕ್ಟರ್-ಡ್ರೈವರ್‌ರ ಪ್ರಶ್ನಿಸಿದ್ದಾರೆ. ಹುಡುಗ ಮತ್ತು ಯುವತಿಯರಿಗೆ ಯಾವುದೆ ಸ್ನೇಹ-ಸಂಬಂಧ ಇಲ್ಲವೆಂಬುದು ಪಕ್ಕಾ ಆಗಿದೆ. ನಂತರವಷ್ಟೇ ಹುಡುಗಿಯನ್ನು ಅದೇ ಬಸ್ಸಿನಲ್ಲಿ ಮತ್ತು ಹುಡುಗನನ್ನು ಬೇರೆ ಬಸ್ಸಿನಲ್ಲಿ ಬೆಂಗಳೂರಿಗೆ ಕಳಿಸಲಾಯಿತು.

ಇದರಿಂದ ಹಿಂಜಾವೆಯವರಿಗೆ ಸಮಾಧಾನವಾಗಲಿಲ್ಲ. ಹುಡುಗನ ಮೇಲೆ ಕೇಸು ಹಾಕಿ, ನಾಲ್ಕು ಬೆತ್ತ ಹಾಕಲು ಒತ್ತಡ ಹಾಕಲಾಯಿತೆನ್ನಲಾಗಿದೆ. ಆದರೆ ಉದ್ದೇಶ ಈಡೇರದೆ ಹಿಂಜಾವೆಯವರು ಪೊಲೀಸರ ಮೇಲೆಯೆ ತಿರುಗಿಬಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆಡಳಿತ ಪಕ್ಷದ ಬೆಂಬಲಿಗರಾದ್ದರಿಂದ ಮುಲಾಜಿಗೆಬಿದ್ದ ಪೊಲೀಸರು ಮತ್ತೆ ಹಿಂಜಾವೆಯವರನ್ನು ಕರೆದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರು ಹಿಂಜಾವೆ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸುತ್ತ ಹೋದರೆನ್ನಲಾಗಿದ್ದು, ಸಾರ್ವಜನಿಕರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಸಂಘಪರಿವಾರದವರು ವರ್ತಿಸಿದ ರೀತಿ-ನೀತಿಯ ಬಗ್ಗೆ ಅಸಹ್ಯ-ಆಕ್ರೋಶ ಮೂಡಿಸಿದೆ.


ಇದನ್ನೂ ಓದಿ: ಉತ್ತರ ಪ್ರದೇಶ: 18 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...