Homeಮುಖಪುಟಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ `ನಾನು ಗೌರಿ’ ಮೀಡಿಯಾದೊಂದಿಗೆ ಮಾತನಾಡಿದ ಬೂದಾಳು ಅವರು, ಸರಹಪಾದನ ತಾತ್ವಿಕತೆಯ ಪ್ರಸ್ತುತತೆ, ಶ್ರಮಣ ಪರಂಪರೆಯ ವೈಶಿಷ್ಟ್ಯತೆ ಹಾಗೂ ಕೃತಿಯ ಅನುವಾದದ ಹಿಂದಿನ ಶ್ರಮವನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ಕನ್ನಡದ ಪ್ರಮುಖ ಸಾಂಸ್ಕೃತಿಕ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್‌ ಬೂದಾಳು ಅವರು ಅನುವಾದಿಸಿರುವ ‘ಸರಹಪಾದ’ ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಶ್ರಮಣ ಪರಂಪರೆಯ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲುತ್ತಿರುವ ನಟರಾಜ ಬೂದಾಳು ಅವರು ಹೊರ ತಂದಿರುವ ವಿಶೇಷ ಕೃತಿಗಳಲ್ಲಿ ‘ಸರಹಪಾದ’ವೂ ಒಂದು. ಶ್ರಮಣ ಪರಂಪರೆಗಳಾದ ಸಿದ್ಧ, ನಾಥ, ಆರೂಢ, ಬೌದ್ಧ, ತತ್ವಪದ ಮೊದಲಾದವುಗಳ ತಾತ್ವಿಕತೆಗಳನ್ನು ಚರ್ಚೆಗೆ ತಂದಿರುವವರಲ್ಲಿ ಬೂದಾಳು ಪ್ರಮುಖರು.

ಎಲ್ಲ ಮಿಥ್ಯಾವಾದಗಳನ್ನು ದಾಟುವುದನ್ನು ಕಲಿಸಿದ ಮಹಾಬೌದ್ಧ ಸಿದ್ಧ ಸರಹಪಾದನ ವಿಚಾರಗಳನ್ನು ಬೂದಾಳು ವಿಶಿಷ್ಟವಾಗಿ ಕನ್ನಡಕ್ಕೆ ತಂದಿದ್ದಾರೆ. ಲೋಕಾನುಭವವೇ ಮುಖ್ಯವೆಂದ ಅನುಭಾವ ಪರಂಪರೆಯಲ್ಲಿ ಬರುವ ಬೌದ್ಧಸಿದ್ಧ ಸರಹಪಾದ. ಬೌದ್ಧ ತಾತ್ವಿಕತೆಯಲ್ಲಿ ಪ್ರಧಾನವಾಗಿರುವ ‘ಮೂಲಮಾಧ್ಯಮಕಕಾರಿಕೆ’ ಕೃತಿಯ ರಚನಾಕಾರನಾದ ನಾಗಾರ್ಜುನನ ಗುರು ಸರಹಪಾದ.

ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

‘ನಾಗಾರ್ಜುನ ಅಲ್ಲಮಪ್ರಭು ಒಂದು ತೌಲನಿಕ ಅಧ್ಯಯನ’, ‘ನಾಗಾರ್ಜುನ ಮಧ್ಯಮಮಾರ್ಗ’, ‘ಬುದ್ಧನೆಂಬ ಜ್ಞಾನಪೂರ್ಣ ಜಗಂಜ್ಯೋತಿ’, ‘ಬುದ್ಧಗುರುವಿನ ಮಧ್ಯಮಮಾರ್ಗ’, ‘ಪ್ರತ್ಯೇಕ ಬುದ್ಧ ಅಲ್ಲಮಪ್ರಭು’, ‘ಹಿಂದಣ ಹೆಜ್ಜೆಯನರಿತನಲ್ಲದೆ’, ‘ಪ್ರಜ್ಞಾ ಪಾರಮಿತ ಹೃದಯ ಸೂತ್ರ’, ‘ಬೌದ್ಧ ಮಧ್ಯಮ ಮಾರ್ಗ’, ‘ಮಾತಿನ ಮೊದಲು’, ‘ಶಂಕರಾನಂದಯೋಗಿ ಮತ್ತು ಶಂಕರಾರ್ಯರ ತತ್ವಪದಗಳು’, ‘ದಾವ್ ದೆ ಚಿಂಗ್’, ‘ಮನಮಗ್ನತೆ’ ಸೇರಿದಂತೆ ಹಲವು ಕೃತಿಗಳನ್ನುಅವರು ರಚಿಸಿದ್ದಾರೆ. ತತ್ವಪದ ಕ್ಷೇತ್ರದಲ್ಲಿ ಬೂದಾಳು ಅವರು ಮಾಡಿರುವ ಕಾರ್ಯಗಳು ಅವಿಸ್ಮರಣೀಯ.

‘ಸರಹಪಾದ ಕನ್ನಡಕ್ಕೇ ಯಾವತ್ತೋ ಬರಬೇಕಿತ್ತು’

ಪ್ರಶಸ್ತಿ ಲಭಿಸಿದ ಈ ಸಂದರ್ಭದಲ್ಲಿ ‘ನಾನು ಗೌರಿ’ ಮಾಧ್ಯಮದೊಂದಿಗೆ ಮಾತನಾಡಿದ ನಟರಾಜ ಬೂದಾಳು ಅವರು, “ಭಾರತದ ಬಹಳ ಮುಖ್ಯವಾದ ಸಾಧಕ ಪರಂಪರೆ ಎಂದರೆ ಶ್ರಮಣ ಪರಂಪರೆ. ಈ ಪರಂಪರೆಯ ಮಹಾಗುರು ಸರಹಪಾದ. ಆತನ ತಾತ್ವಿಕತೆಗಳು ಕನ್ನಡಕ್ಕೆ ಯಾವತ್ತೋ ಬರಬೇಕಿತ್ತು. ತಡವಾಗಿಯಾದರೂ ಬಂತು. ಅದನ್ನು ಓದುಗರು ಗುರುತಿಸಿದ್ದು ಸಂತೋಷ ತಂದಿದೆ” ಎಂದರು.

“ಸರಹಪಾದನ ತಾತ್ವಿಕತೆಗಳು ದೇವನಾಗರಿ ಲಿಪಿಯಲ್ಲಿ, ಅಪಭ್ರ೦ಶ ಭಾಷೆಯಲ್ಲಿ ಇವೆ. ಅಪಭ್ರಂಶ ಭಾಷೆಯಲ್ಲಿನ ಕೃತಿ, ಸಂಸ್ಕೃತಿಗೆ ಆಗಿರುವ ಅನುವಾದ ಹಾಗೂ ಮೂರು ಇಂಗ್ಲಿಷ್ ಭಾಷಾಂತರಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡಕ್ಕೆ ‘ಸರಹಪಾದ’ ಕೃತಿಯನ್ನು ತಂದೆ. ದೇವನಾಗರಿ ಲಿಪಿಯಲ್ಲಿರುವ ಕೃತಿಯು ಅಪಭ್ರಂಶ ಆವೃತ್ತಿಯಲ್ಲೇ ಇದೆ. ಅಪಭ್ರಂಶ ಈಗ ಇಲ್ಲ. ಆದರೆ ಆ ಕೃತಿ ಇದೆ. ಇಂಗ್ಲಿಷ್‌ಗಿಂತ, ಸಂಸ್ಕೃತಕ್ಕಿಂತ ಕನ್ನಡಕ್ಕೆ ಹತ್ತಿರವಾದ ಭಾಷೆ ‘ಅಪಭ್ರಂಶ’. ಮೂರು ಭಾಷೆಗಳಲ್ಲಿ ಬಂದಿರುವ ಕೃತಿಗಳನ್ನು ಅಧ್ಯಯನ ಮಾಡಿ ಅನುವಾದ ಮಾಡಿರುವೆ” ಎಂದು ಬೂದಾಳು ತಿಳಿಸಿದರು.

“ಬೌದ್ಧತಾತ್ವಿಕತೆಯನ್ನು ಪಸರಿಸಿದ ನಾಗಾರ್ಜುನ ಗುರು ಸರಹಪಾದ. ಆತ ದಕ್ಷಿಣ ಭಾರತಕ್ಕೂ ಬಂದಿದ್ದ ಎನ್ನುವವರಿದ್ದಾರೆ. ಆತ ಮಹಾನ್‌ ತಾತ್ವಿಕನೂ ಹೌದು, ಸಾಧಕನೂ ಹೌದು. ಸರಹ ಎಲ್ಲವನ್ನೂ ತಿರಸ್ಕರಿಸಿ ಸುಮ್ಮನಿರುವ ಮಾರ್ಗದ ಕುರಿತು ಮಾತನಾಡುತ್ತಾನೆ. ಅವನ ಎದುರು ನಾಗಾರ್ಜುನ ಸೇರಿದಂತೆ ಯಾವ ತಾತ್ವಿಕರೂ ನಿಲ್ಲಲು ಸಾಧ್ಯವಿಲ್ಲ” ಎಂಬುದು ಬೂದಾಳು ಅವರ ಅಭಿಪ್ರಾಯ.

“ಆತ ಪೊಳ್ಳು ಜಗದ್ಗುರುಗಳನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುತ್ತಾನೆ. ಸರಹನ ಪ್ರಕಾರ ಕುಟುಂಬವೇ ದೊಡ್ಡದು. ಪಾರಲೌಖಿತ ವ್ಯಮೋಹಕ್ಕೆ ಏಕೆ ಬೀಳುತ್ತೀರಾ? ಲೌಕಿಕದಲ್ಲಿ ಚೆನ್ನಾಗಿ ಬಾಳಲು ಸಾಧ್ಯವಿಲ್ಲದನು ಅಲ್ಲೇನು ಮಾಡುತ್ತಾನೆ? ಅಧಿಕಾರ ಕೇಂದ್ರಗಳು, ಸರ್ಕಾರಗಳು ವಿಧೇಯರಾಗಿರಬೇಕಾದದ್ದು ಕುಟುಂಬಗಳಿಗೆ ಹೊರತು ಜಗದ್ಗುರುಗಳಿಗೂ ಅಲ್ಲ, ದೇವಸ್ಥಾನಕ್ಕೂ ಅಲ್ಲ. ಕುಟುಂಬವೇ ಶ್ರೇಷ್ಟ ಎಂದು ಹೇಳಿದವನು ಸರಹ” ಎನ್ನುತ್ತಾರೆ ಅವರು.

“ಶ್ರಮಣ ಪರಂಪರೆಯನ್ನು ಯಾರೂ ಮುನ್ನಲೆ ತರಬೇಕಾಗಿಲ್ಲ. ಅದು ಪ್ರಯೋಗಿಕವಾಗಿ ಈಗಾಗಲೇ ಸಮಾಜದಲ್ಲಿದೆ. ನಮ್ಮ ನಡುವೆ ತತ್ವಪದಕಾರರು ಇದ್ದಾರೆ. ಇಂದಿಗೂ ಶ್ರಮಣ ಪರಂಪರೆ ಜೀವಂತವಾಗಿದೆ. ಆದರೆ ಶೈಕ್ಷಣಿಕ ವಲಯದಲ್ಲಿ ಈ ಕುರಿತು ಗಂಭೀರ ಚರ್ಚೆಗಳಾಗುತ್ತಿಲ್ಲ. ಅಕಾಡೆಮಿಕ್‌ ವಲಯ ಈ ಶ್ರಮಣ ಪರಂಪರೆಯನ್ನು ಕಣ್ಣುಬಿಟ್ಟು ನೋಡಬೇಕಾಗಿದೆ” ಎಂದು ತಿಳಿಸಿದರು ಬೂದಾಳು.


ಇದನ್ನೂ ಓದಿ: ‘ಕುವೆಂಪು ಸಮಗ್ರ ಸಾಹಿತ್ಯ ಸಂಪುಟ 12’ ಮಾರಾಟಕ್ಕೆ ಹೈಕೋರ್ಟ್ ತಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...