Homeಮುಖಪುಟ‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

- Advertisement -
- Advertisement -

ನವೆಂಬರ್‌ 2ರಂದು ಬಹು ನಿರೀಕ್ಷಿತ ‘ಜೈ ಭೀಮ್‌’ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿದೆ. ನಿರೀಕ್ಷೆಯನ್ನು ಹುಸಿಗೊಳಿಸದೆ ಸಮತಾ ಸಮಾಜದ ನಿರ್ಮಾಣಕ್ಕೆ ಮಿಡಿದಿದೆ.

ಜ್ಯೋತಿಕಾ-ಸೂರಿಯ ಅವರ 2ಡಿ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್‌ನಲ್ಲಿ ತಯಾರಾದ, ನಿಜ ಘಟನೆಯನ್ನು ಆಧರಿಸಿದ ತಮಿಳು ಸಿನಿಮಾ ‘ಜೈ ಭೀಮ್‌’, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗೂ ಡಬ್‌ ಆಗಿರುವುದರಿಂದ ಅದ್ಭುತ ಕಥನವೊಂದು ಬಹುಭಾಷಾ ಸಮುದಾಯವನ್ನು ಪರಿಣಾಮಕಾರಿಯಾಗಿ ತಲುಪಲು ಕಾರಣವಾಗಿದೆ.

ಟಿ.ಜೆ.ಜ್ಞಾನವೇಲ್‌ ನಿರ್ದೇಶನಕ್ಕೆ ಸಂವೇದನಾಶೀಲ ಮನಸ್ಸುಗಳು ಮಿಡಿದಿವೆ. ಸೂರಿಯ, ಪ್ರಕಾಶ್‌ ರಾಜ್‌, ಕೆ.ಮಣಿಕಂದನ್‌, ಲಿಜೊಮೊಲ್‌ ಜೋಸ್‌‌, ರಾವ್‌ ರಮೇಶ್‌, ರಜಿಶಾ ವಿಜಯನ್‌ ಮೊದಲಾದವರು ನಟಿಸಿರುವ ಜೈ ಭೀಮ್‌, ನ್ಯಾಯಾಂಗದ ಸುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ. ಅಧಿಕಾರಶಾಹಿ ಕ್ರೌರ್ಯವನ್ನು ಬಿಚ್ಚಿಡುತ್ತಾ ನ್ಯಾಯಾಂಗದ ಮೇಲಿನ ಭರವಸೆಯನ್ನು ಎತ್ತಿ ಹಿಡಿಯುತ್ತದೆ. ಸಿನಿಮಾ ನೋಡಿದವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಮೂಡಿಬರಬೇಕೆಂದು ಪ್ರೋತ್ಸಾಹಿಸಿದ್ದಾರೆ.

ಅಲಕ್ಷಿತ ಸಮುದಾಯಗಳ ಕುರಿತು ತಮಿಳು ಚಿತ್ರದಲ್ಲಿ ಮೂಡಿಬರುತ್ತಿರುವ ಸಾಲು ಸಾಲು ಸಿನಿಮಾಗಳ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪ.ರಂಜಿತ್‌ ಅವರ ‘ಕಾಲಾ’, ‘ಮದ್ರಾಸ್‌’, ‘ಸರಪಟ್ಟ ಪರಂಬರೈ’, ವೆಟ್ಟಿಮಾರನ್‌ ಅವರ ‘ಅಸುರನ್‌’, ‘ವಿಸಾರಣೈ’, ಮಾರಿ ಸೆಲ್ವರಾಜ್‌ ಅವರ ‘ಪೆರಿಯೇರುಮ್‌ ಪೆರುಮಾಳ್‌’, ‘ಕರ್ಣ‌ನ್‌’ ಸಾಲಿಗೆ ಟಿ.ಜೆ.ಜ್ಞಾನವೇಲ್‌‌ ಅವರ ‘ಜೈಭೀಮ್‌’ ಸೇರಿದೆ ಎಂದು ಕನ್ನಡದ ಮನಸ್ಸುಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿದ್ದು, ಸಾಂಕೇತಿಕವಾಗಿ ಕೆಲವು ಲೇಖಕರ ಟಿಪ್ಪಣಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿರಿ: ‘ಜೈ ಭೀಮ್‌’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ

ಜಗದೀಶ್‌ ಕೊಪ್ಪ ಅವರ ಅಭಿಪ್ರಾಯ

“…. ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಜೈ ಭೀಮ್ ನಾಯಕ ನಟ ಸೂರ್ಯನ ಪ್ರತಿಭೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ತಮಿಳು ಚಿತ್ರರಂಗದಲ್ಲಿ ದುಬಾರಿ ಎನಿಸಬಹುದಾದ ಸಂಭಾವನೆ ಪಡೆಯುವ ನಟರಲ್ಲಿ ಧನುಷ್ ಮತ್ತು ಸೂರ್ಯ ಮುಖ್ಯರಾದವರು. ಆದರೆ, ಚಿತ್ರಕಥೆಗೆ ಸರಿ ಸಮಾನರಾಗಿ ತಮ್ಮ ಸ್ಟಾರ್ ಗಿರಿಯ ಇಮೇಜ್ ಅನ್ನು ಪಕ್ಕಕ್ಕೆ ಇಟ್ಟು ಅಭಿನಯಿಸುವುದರಲ್ಲಿ ಈ ಇಬ್ಬರು ನಾಯಕರು ಇಡೀ ದಕ್ಷಿಣ ಭಾರತಕ್ಕೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ವಿಜಯ್ ಸೇತುಪತಿ ಹೆಸರನ್ನು ಸಹ ಸೇರಿಸಬಹುದು.”

ನಿನ್ನೆ ಬೆಳಿಗ್ಗೆ ಚೆನ್ನೈ ನಗರದಲ್ಲಿ ನಡೆದ ಪ್ರೀಮಿಯರ್ ಷೋ ನಂತರ ಸಂಜೆ ವೇಳೆಗೆ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್‌ ಹಾಗೂ ಎನ್.ಡಿ.ಟಿ.ವಿ. ಮಾಧ್ಯಮಗಳ ಜಾಲತಾಣಗಳಲ್ಲಿ ಹರಿದು ಬಂದ ವಿಮರ್ಶೆ ನೋಡಿ ಆಶ್ಚರ್ಯಪಟ್ಟೆ. ಇತ್ತೀಚಿನ ದಿನಗಳಲ್ಲಿ ಬಂದ ಶ್ರೇಷ್ಠ ಮಟ್ಟದ ವಿಮರ್ಶೆ ಅದಾಗಿತ್ತು. ಕಳೆದ ವರ್ಷ ನಮ್ಮ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಕಥೆ ಆದರಿಸಿದ ಸಿನಿಮಾ ನಿರ್ಮಿಸಿ ಯಶಸ್ವಿಯಾಗಿದ್ದ ಸೂರಿಯ, ಈಗ 1995ರ ನೈಜ ಘಟನೆ ಆದರಿಸಿದ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರಶಂಸೆಗೆ ಪಾತ್ರನಾಗಿದ್ದಾನೆ. ನಮ್ಮ ಅಪ್ಪುವಿನ ವಯಸ್ಸು ಸೂರ್ಯನದು. (46) ಆದರೆ, ಪೇರಳಗನ್ ಹಾಗೂ ಸಿಂಘಂ ಸರಣಿಯ ಚಿತ್ರಗಳ ಮೂಲಕ ತಮಿಳು ರಸಿಕರ ಮನಗೆದ್ದ ನಟ.

ಇಲಿ, ಹಾವು ಹಿಡಿದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಟಿಗೆ ಸಿಲುಕಿ ನರಳಿದ ಇತಿಹಾಸವನ್ನು ಈ ಚಿತ್ರದಲ್ಲಿ ನಿರ್ದೇಶಕ ಜ್ಞಾನವೇಲ್ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಈ ಹಿಂದೆ ರಾಷ್ಟ್ರಪ್ರಶಸ್ತಿ ಪಡೆದ ವಿಸಾರಣೈ ಸಿನಿಮಾದ ಹಾಗೆ ಈ ಸಿನಿಮಾ ಕೂಡ ಪ್ರೇಕ್ಷರನ್ನು ಗಂಭೀರ ಚಿಂತನೆಗೆ ದೂಡುತ್ತದೆ.

ನತದೃಷ್ಟರಿಗೆ ನ್ಯಾಯ ದೊರಕಿಸಿಕೊಡುವ ವಕೀಲನ ಪಾತ್ರದಲ್ಲಿ ಸೂರಿಯ ಅಭಿನಯ ಬಹುಕಾಲ ನಮ್ಮಲ್ಲಿ ಉಳಿಯುವಂತಹದ್ದು. ನಾಯಕಿ, ಹಾಡು, ಡ್ಯಾನ್ಸ್ , ಪೈಟಿಂಗ್ ಗಳಿಲ್ಲದ ಚಿತ್ರಗಳಲ್ಲಿ ಸ್ಟಾರ್ ನಟರು ಅಭಿನಯಿಸಬಲ್ಲರೆ? ಎಂಬ ಪ್ರಶ್ನೆಗೆ ಈ ಸಿನಿಮಾ ಸಾಕ್ಷಿಯಾಗಿದೆ.

ಧನುಷ್ ಅಭಿನಯದ ಅಸುರನ್ ಸಿನಿಮಾ ನಂತರ ನಾನು ನೋಡಿದ ಅತ್ಯುತ್ತಮ ತಮಿಳು ಚಿತ್ರಗಳಲ್ಲಿ ಜೈ ಭೀಮ್ ಒಂದು. ತಪ್ಪದೇ ಪ್ರಜ್ಞಾವಂತರು ನೋಡಬೇಕಾದ ಸಿನಿಮಾ ಇದು.

ಇದನ್ನೂ ಓದಿರಿ: ಪುನೀತ್‌ ನಿಧನ: ಅರ್ಧಕ್ಕೆ ನಿಂತು ಹೋಯಿತು ಸಾಲು ಸಾಲು ಸಿನಿಮಾ

ರಘೋತ್ತಮ ಹೋ.ಬ. ಅವರ ಅಭಿಪ್ರಾಯ

“…ಬುಡಕಟ್ಟು ಸಮುದಾಯದ ಆ ವ್ಯಕ್ತಿಯ ಹತ್ಯೆಯ ಆ ಪ್ರಕರಣವನ್ನು ಚಿತ್ರದುದ್ದಕ್ಕು ವಕೀಲ ಚಂದ್ರು ಎತ್ತಿಕೊಂಡು ಸಾಗುವ ಪರಿ ಸಿಂಪ್ಲಿ ಥ್ರಿಲ್ಲಿಂಗ್, ನ್ಯಾಯಾಲಯದ ಹೋರಾಟದ ಜೊತೆಗೆ ಕಮ್ಯುನಿಸ್ಟ್ ಪಕ್ಷವೊಂದರ ಅಡಿಯಲ್ಲು ಚಂದ್ರು ಹೋರಾಟಕ್ಕೆ ಅಣಿಯಾಗುತ್ತಾರೆ ಎಂದರೆ ಚಿತ್ರದ ಬಿರುಸು ಎಂತಹದ್ದು ಎಂಬುದನ್ನು ಯಾರಾದರೂ ಊಹಿಸಬಹುದು. ಈ ನಡುವೆ ಹಾದಿ ತಪ್ಪುತ್ತಿದ್ದ ತನಿಖೆಯನ್ನು ಸರಿ ದಾರಿಗೆ ತರುವ ಮೂಲಕ ಚಂದ್ರು ತನಿಖೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಉನ್ನತ ಅಧಿಕಾರಿಯ ಪಾತ್ರ ನಮ್ಮ ಕನ್ನಡದ ಪ್ರಕಾಶ್ ರೈ ರದ್ದು ಎಂದರೆ ಅದರ ಕಟ್ಟುವಿಕೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ…”

***

ವಿ.ಎಲ್‌.ನರಸಿಂಹಮೂರ್ತಿಯವರ ಅಭಿಪ್ರಾಯ

“Felt ashamed and guilty after watching this movie. Hats off to ‘Jai Bhim’ team. ಇಂತಹ ಎಷ್ಟು ತಬ್ಬಲಿ ಸಮುದಾಯಗಳ ಅಸಹಾಯಕತೆಯ ನಿಟ್ಟುಸಿರನ್ನ ಉಸಿರಾಡಿಕೊಂಡು ಬದುಕಿದೆ ಈ ದೇಶ !”

***

ಹರ್ಷಕುಮಾರ್‌ ಕುಗ್ವೆ ಹೀಗೆ ಬರೆಯುತ್ತಾರೆ:

“ಬುಡಕಟ್ಟು ಅಲೆಮಾರಿ ಜನರಿಗೂ ಸುಂದರವಾದ ಕನಸುಗಳಿರುತ್ತವೆ ಮತ್ತು ಆ ಕನಸುಗಳನ್ನು ನಮ್ಮ ಸೋ ಕಾಲ್ಡ್ ನಾಗರಿಕ ವ್ಯವಸ್ಥೆ ಮತ್ತು ಪ್ರಭುತ್ವಗಳು ಕ್ರೂರವಾಗಿ ಹೊಸಕಿ ಹಾಕುತ್ತವೆ ಎಂಬ ಸಾಮಾಜಿಕ ವಾಸ್ತವವನ್ನು ತೋರಿಸುವ ಸಿನಿಮಾ. ಬಹುದಿನಗಳ ವರೆಗೆ ನಮ್ಮನ್ನು ಕಾಡಬಲ್ಲ ಸಿನಿಮಾ ಇದು.

ಸಿನಿಮೀಯ ಹೀರೋಯಿಸಂನಿಂದಾಚೆಗೆ ನಿಜ ಜೀವನದ ನಿಜವಾದ ಹೀರೋ ಒಬ್ಬನ ಕೆಚ್ಚೆದೆಯ ಹೋರಾಟವನ್ನು ತಮಿಳು ಸೂಪರ್ ಸ್ಟಾರ್ ಸೂರ್ಯ ತೆರೆಯ ಮೇಲೆ ಅಭಿನಯಿಸಿ ತೋರಿಸಿರುವ ರೀತಿಯೂ ಅನನ್ಯ. ನಿರ್ದೇಶಕ ಟಿ ಜೆ ಜ್ಞಾನವೇಲುಗೆ ಕೋಟಿ ವಂದನೆ. ಪರಭಾಷೆಯ ಅದ್ಭುತ ಸಿನಿಮಾವೊಂದನ್ನು ಅಷ್ಟೇ ಒರಿಜಿನಲ್ ಆದ ರೀತಿಯಲ್ಲಿ ಡಬ್ಬಿಂಗ್ ನಿಂದಾಗಿ ಕನ್ನಡದಲ್ಲೇ ನೋಡುವಂತಾಗಿದ್ದು ಬಹಳ ಖುಷಿ. ಅಮೇಜಾನ್ ಪ್ರೈಂ ನಲ್ಲಿ JAI BHIM ಸಿನಿಮಾವನ್ನು ಕನ್ನಡದಲ್ಲೇ ನೋಡಿ. (Audio Language – ಕನ್ನಡ ಆಯ್ಕೆ ಮಾಡಿಕೊಳ್ಳಬೇಕು) ಇಂದು ಸಂಜೆ 6.30 ಕ್ಕೆ ಈ ಸಿನಿಮಾ ಕುರಿತು ಒಂದು ಕ್ಲಬ್ ಹೌಸ್ ಚರ್ಚೆ ಇದೆ. ಭಾಗವಹಿಸಿ.

***

ನಾಗೇಗೌಡ ಕೀಲಾರ ಅವರ ಅಭಿಪ್ರಾಯ

ಕನ್ನಡ ಪಿಚ್ಚರ್ ಬಂದರೆ ಮೂಗು ಮುರಿಯುತ್ತಾರೆ ಅದೇ ತಮಿಳು, ಮಲಯಾಳಂ ಪಿಚ್ಚರ್ ಬರಲಿ ಅಪ್ಪಿ ಮುದ್ದಾಡುತ್ತಾರೆ ಅಂತ ಒಂದು ಕಂಪ್ಲೈಂಟ್ ಇದೆ. ಹಿಂಗೇ ಕಂಪ್ಲೈಂಟ್ ಮಾಡುವವರು ಈ ಸಿನಿಮಾ ನೋಡ್ರಪ್ಪಾ ಆಮೇಲೆ ಅರ್ಥ ಆಗುತ್ತೆ ಕನ್ನಡ ಸಿನಿಮಾ ಮೇಲೆ ಕಂಪ್ಲೈಂಟ್ ಮಾಡುವವರು ನಮ್ಮ ಕನ್ನಡದಲ್ಲೂ ಏಕೆ ಇಂತಹ ಸಿನಿಮಾಗಳು ಬರುತ್ತಿಲ್ಲ ಅನ್ನುವ ನೋವು ಹತಾಶೆಯಿಂದ ಕಂಪ್ಲೈಂಟ್ ಮಾಡುತ್ತಾರೆ ಅನ್ನುವುದು.


ಇದನ್ನೂ ಓದಿರಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...