HomeUncategorizedವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು! ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು! ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ತ್ಯತ್ಯಾಸ ಕಂಡು ಬರುತ್ತಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಕಲಬುರ್ಗಿಯಲ್ಲಿ ಮತ ಏಣಿಕೆ ಮುಗಿದ ನಂತರ ಲೆಕ್ಕ ಹಾಕಿದಾಗ, ಮತದಾನ ಆಗಿದ್ದಕ್ಕಿಂತ ಎಣಿಕೆ ಆದ ಮತಗಳು ಹೆಚ್ಚಿದ್ದವು! ಇದನ್ನು ಅಲ್ಲಿನ ‘ಪ್ರಜಾವಾಣಿ’ ವಿಸ್ತಾರವಾಗಿ ವರದಿ ಮಾಡಿತ್ತು. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಉತ್ತರ ಭಾರತದ ಎಂಟು ಆಯ್ದ ಕ್ಷೇತ್ರಗಳಲ್ಲಿ ತನಿಖೆ ನಡೆಸಿದ್ದು, ಎಲ್ಲ ಕಡೆ ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಜಾಸ್ತಿ ಇವೆ! ಈ ಕುರಿತು ಚುನಾವಣಾ ಆಯೋಗ ಉತ್ತರಿಸಲೇಬೇಕು ಎಂದು ಮೂವರು ಮಾಜಿ ಚುನಾವಣಾ ಆಯುಕ್ತರು ಒತ್ತಾಯಿಸಿದ್ದಾರೆ….

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗದು. ಸರಿ ಒಪ್ಪೋಣ. ಆದರೆ ನಿರ್ದಿಷ್ಠ ಪಕ್ಷವೊಂದಕ್ಕೆ ಮೊದಲೇ ಮತ ಚಲಾಯಿಸಿದ ಮತಯಂತ್ರಗಳನ್ನು ತಂದು ತುರುಕಲು ಸಾಧ್ಯವೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಮಾಡಿರುವ ತನಿಖೆ ಈ ಪ್ರಶ್ನೆಗಳನ್ನು ಎತ್ತಿದೆ ಮತ್ತು ಈ ಕುರಿತು ಧ್ವನಿ ಎತ್ತಿರುವ ಮೂವರು ಮಾಜಿ ಚುನಾವಣಾ ಆಯುಕ್ತರು ಆಯೋಗ ಈ ಕುರಿತು ಗೊಂದಲಗಳನ್ನು ಕೂಡಲೇ ಬಹೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೌಂಟಿಂಗ್‍ನಲ್ಲಿ ಹೆಚ್ಚಾಗಿದ್ದು ಹೇಗೆ?
ಈ ಪ್ರಶ್ನೆಯನ್ನು ಪ್ರಜಾಪ್ರಭುತ್ವ ಗೌರವಿಸುವ ಎಲ್ಲರೂ ಕೇಳಲೇಬೇಕಾಗಿದೆ. ಉತ್ತರಪ್ರದೇಶ, ಬಿಹಾರ್, ದೆಹಲಿ ಮತ್ತು ಮಧ್ಯಪ್ರದೇಶದ ಹಲವಾರು ಕ್ಷೇತ್ರಗಳಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಅವುಗಳಲ್ಲಿ ಎಂಟು ಕ್ಷೇತ್ರಗಳ ತನಿಖೆ ಮಾಡಿದಾಗ ಇದು ಸತ್ಯ ಎಂಬುದು ಸಾಬೀತಾಗಿದೆ. ಅದರಲ್ಲಿ ಪ್ರತಿಷ್ಠಿತ ಎನಿಸಿದ್ದ ಪಾಟ್ನಾ ಸಾಹೀಬ್, ಜೆಹಲ್ನಾಬಾದ್ ಮತ್ತು ಬೇಗುಸರಾಯ್ ಕ್ಷೇತ್ರಗಳೂ ಸೇರಿವೆ. ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತಗಳು ಹೆಚ್ಚಿವೆ, ಒಂದು ಕಡೆ ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತ ಕಡಿಮೆಯೂ ಇದೆ. ಈ ವ್ಯತ್ಯಾಸವೇ ಗೋಲ್‍ಮಾಲ್ ನಡೆದಿರಬಹುದು ಎಂಬ ದಟ್ಟ ಸಂಶಯಕ್ಕೆ ಕಾರಣವಾಗಿದೆ.

ಈ ಎಂಟು ಕ್ಷೇತ್ರಗಳ ಪೈಕಿ ಕನಿಷ್ಠ ಒಂದರಲ್ಲಿ, ಗೆಲುವಿನ ಅಂತರಕ್ಕಿಂತ ಮತ ವ್ಯತ್ಯಾಸ (ಕೌಂಟ್ ಆದ ಮತಗಳು ಮೈನಸ್ ವೋಟ್ ಆದ ಮತಗಳು)ವೇ ದೊಡ್ಡದಿದ್ದು ಬಹುಪಾಲು ಕ್ಷೇತ್ರಗಳಲ್ಲಿ ಇದು ಸಂಭವಿಸಿರಬಹುದು ಎಂದು ತನಿಖೆ ಉಲ್ಲೇಖಿಸಿದೆ. ಮೇ 23ರ ಏಣಿಕೆಗೂ ಮೊದಲು ಅಕ್ರಮವಾಗಿ ಎವಿಎಂಗಳನ್ನು ಸಾಗಿಸಿದ ವರದಿ ಮತ್ತು ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಇಲ್ಲೇನೋ ಮಸಲತ್ತು ನಡೆದಿದೆ ಎಂಬ ಸಂಶಯವನ್ನು ಈ ತನಿಖೆ ಇನ್ನಷ್ಟು ಗಟ್ಟಿಗೊಳಿಸಿದೆ.

ಮಾಜಿ ಆಯುಕ್ತರ ಆಗ್ರಹ
ಮೂವರು ಮಾಜಿ ಆಯುಕ್ತರು ಇದರ ವಿರುದ್ಧ ಧ್ವನಿ ಎತ್ತಿ ಆಯೋಗ ಕೂಡಲೇ ಈ ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ. 2011-12ರಲ್ಲಿ ಆಯುಕ್ತರಾಗಿದ್ದ ಖುರೇಶಿ, ಇದಕ್ಕೆ ಆಯೋಗದ ಬಳಿ ಕಾರಣಗಳಿರಬಹುದು. ಆದರೆ ಈ ವಿಷಯವಾಗಿ ಯಾರಾದರೂ ಕೋರ್ಟಿಗೆ ಹೋಗೋದು ಒಳ್ಳೆಯದು ಎಂದು ಹೇಳಿದ್ದಾರೆ.

ಖುರೇಷಿ

2006-09ರಲ್ಲಿ ಆಯುಕ್ತರಾಗಿದ್ದ ಗೋಪಾಲಸ್ವಾಮಿ, 2015ರಲ್ಲಿ ಆಯುಕ್ತರಾಗಿದ್ದ ಎಚ್.ಎಸ್ ಬ್ರಹ್ಮ ಕೂಡ ಇದೇ ತರಹದ ಪ್ರಶ್ನೆ ಎತ್ತುವ ಮೂಲಕ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!
ಪಾಟ್ನಾ ಸಾಹೀಬ್ ಕ್ಷೇತ್ರದಲ್ಲಿ ಬಿಜೆಪಿಯಿಂದ ರವಿಶಂಕರ ಪ್ರಸಾದ್ ಮತ್ತು ಕಾಂಗ್ರೆಸ್‍ನಿಂದ ಶತ್ರುಘನ ಸಿನ್ಹಾ ಸ್ಪರ್ಧಿಸಿದ್ದರು. ಅಲ್ಲಿ 20, 51, 905 ಅರ್ಹ ಮತದಾರರಿದ್ದು, ಮೇ 18ರಂದು ಶೇ 46.34ರಷ್ಟು ಮತದಾನವಾಗಿತ್ತು. ಆದರೆ ಮೇ 23ರಂದು ಏಣಿಕೆ ಮಾಡಿದಾಗ ಅಂಚೆಮತ ಸೇರಿ ರವಿಶಂಕರ ಪ್ರಸಾದ್‍ಗೆ 6,07,506, ಶತ್ರುಘ್ನ ಸಿನ್ಹಾಗೆ 3,22, 849 ಮತ್ತು ನೋಟಾ ಸೇರಿ ಇತರೆ 45,709 ಮತ ಲಭಿಸಿವೆ.

ಅಂದರೆ ಆಯೋಗದ ಪ್ರಕಾರ 9,82,285 ಮತಗಳು ದಾಖಲಾಗಿವೆ. ಶೆಕಡಾವಾರು ಮತದಾನದ ಪ್ರಕಾರ, 9,50,852 ಮತಗಳು ಹಾಕಲ್ಪಟ್ಟಿವೆ. ಈ ಹೆಚ್ಚುವರಿ 31,433 ಮತಗಳು ಎಲ್ಲಿಂದ ಬಂದವು?

ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ಯತ್ಯಾಸ ಕಂಡು ಬರುತ್ತಿದೆ.

ಇದು ಕೇವಲ ಅಂಕಗಣಿತದ ತಪ್ಪಾಗಿರಲಾರದು. ಏಕೆಂದರೆ ದೇಶದ ನಾನಾ ಕಡೆಯಿಂದ ಈ ಸಂಶಯಗಳು ಕೇಳಿ ಬಂದಿವೆ. ರಾಜ್ಯದ ಪ್ರತಿಷ್ಠಿತ ಕಲಬುರ್ಗಿ ಕ್ಷೇತ್ರದಲ್ಲೂ ಅಪರಾ ತಪರಾ ಕಂಡುಬಂದಿದೆ.

ಈಗಲಾದರೂ ಚುನಾವಣಾ ಆಯೋಗ ಈ ವ್ಯತ್ಯಾಸಗಳಿಗೆ ಕಾರಣ ನೀಡಲೇಬೇಕು. ಹೆಚ್ಚುವರಿ ಮತಗಳು ಹೇಗೆ ಬಂದವು ಎಂಬುದನ್ನೂ ವಿವರಿಸಬೇಕು….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಆದರೆ ಆಗಲಿ ಬಿಡಿ. ಗೆದ್ದು ಬಂದರೂ ಅವರು ಮಾಡೋದು ಅಷ್ಟರಲ್ಲೇ ಇದೆ. ಆಯ್ಕೆ ಆದವರೆಲ್ಲ ಖಜಾನೆ ದರೋಡೆ ಮಾಡಿಯೇ ಸಿದ್ಧ. ಮತದಾನ ಮಾಡಿದವರಿಗೆ ನಯಾ ಪೈಸೆ ಲಾಭ ಆಗಿದೆಯೇ. ಮತ ದಾನ ಮಾಡಿ ಮಾಡಿ ಮತದಾರ ಕೆಟ್ಟ.. ಮತ ದಾನ ಮಾಡಿಸಿಕೊಂಡಾವ ಲೂಟಿ ಮಾಡಿ ಮಾಡಿ ಅವನ ವಂಶವೃಕ್ಷ ತಿಂದು ತೇಗಿದರೂ ಹತ್ತಾರು ತಲೆಮಾರುಗಳು ಸುಖವಾಗಿರಬಹುದು ಅಷ್ಟು ದರೋಡೆ ಮಾಡಿ ಪ್ರಜಾಪ್ರಭುತ್ವ ಕೆಟ್ಟ ಹಾಳಾಗೋ ಹಾಗೆ ಮಾಡಿದ. ಯಾವಾನ್ ಗೆದ್ದರೂ ಕಳ್ಳತನ ಮಾಡೋದ್ ತಾನೆ. ಒಬ್ಬನಿಗಾದರೂ ದೇಶದ ಅಭಿವೃದ್ಧಿ ಅಂದರೇನು ಅಂತಾ ಗೊತ್ತಾ..? ಅವರ ಕುಟುಂಬದವರೆಲ್ಲರ ನವರಂಧ್ರಗಳು ಸುಖ ಪಡಬೇಕು. ರೈತರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕು. ವಿಷ ಕುಡಿದು ಸಾಯಬೇಕು. ನಿರುದ್ಯೋಗಿಗಳು ಕೆಲಸ ಇಲ್ಲದೇ ಹುಚ್ಚರಂಥೆ ಅಲೆಯಬೇಕು. ಇದನ್ನು ಬಿಟ್ಟು ಈ ದೇಶದ ಚುನಾವಣೆಯ ನಂತರ ದೇಶ ಬದಲಾಗಿದೆಯೇ..? ಎಲ್ಲಾ ಖಧೀಮರು, ಭ್ರಷ್ಟರು. ಎಂಟು ದಶಕಗಳು ಕಳೆದರೂ ಜನರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಚುನಾವಣೆ ನೆಪಕ್ಕೆ ಮಾತ್ರ. ಇಷ್ಟು ದಶಕಗಳಲ್ಲಿ ಆಯ್ಕೆ ಆಗಿದ್ದವರಲ್ಲಿ ಒಬ್ಬನಾದರೂ ಸಾಚಾ ಇದ್ದರೆ ಎದಿ ಮುಟ್ಟಿ ಕೊಂಡು ಹೇಳಲಿ ನೋಡೋಣ.

  2. ಈ ಸುದ್ದಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳದೇ ನಂಬುವುದು ಕಷ್ಟ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...