Homeಮುಖಪುಟರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

ರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

- Advertisement -
- Advertisement -

(ಇದು ಹೊಸ ಬರಹದಲ್ಲಿದೆ, ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

ನಿಜದ ಪ್ರಜಾಪ್ರಬುತ್ವ ಎಂಬುದು ನಿದಾನ ಪ್ರಕ್ರಿಯೆ. ಅದು ಎಡವುತ್ತದೆ, ತೆವಳುತ್ತದೆ, ಕುಂಟುತ್ತದೆ. ನೇರವಾಗಿ ಸಾಗುವುದು ಪ್ರಜಾಪ್ರಬುತ್ವ ಎನಿಸಿಕೊಳ್ಳುವುದಿಲ್ಲ.
ಪ್ರಜಾಪ್ರಬುತ್ವ ಸಮಾಜದಲ್ಲಿ (ಅದು ತನ್ನ ಮೌಲ್ಯ ಕಳೆದುಕೊಂಡಿದ್ದರೂ ಸಹ) ಒಂದು ಹೋರಾಟ ಮತ್ತೊಂದು ಹೋರಾಟಕ್ಕೆ ಇದು ಮಗದೊಂದಕ್ಕೆ ಸ್ಪೂರ್ತಿಯಾಗುತ್ತಾ ಹೋಗುತ್ತದೆ. ಇದು ಪ್ರಜಾಪ್ರಬುತ್ವದ ಅಡಿಪಾಯವನ್ನು ಶಿಥಿಲಗೊಳಿಸದಂತೆ ಕಾಪಾಡುತ್ತದೆ.

ಇತ್ತೀಚಿನ ಉದಾಹರಣೆ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಕೃಶಿ ಬಿಕ್ಕಟ್ಟಿಗೆ ಕಾರಣವಾದ ರಾಜ್ಯ ಸರಕಾರದ ನೀತಿಗಳ ವಿರುದ್ದ ರೂಪುಗೊಂಡ aikss (all india kisan sangharsh samiti) ಸಂಘಟನೆ.

ಮಾರ್ಚ್ 2018ರಲ್ಲಿ ಭೂರಹಿತ ಕೂಲಿ ಕಾರ್ಮಿಕರ ಹೋರಾಟ ಸಂಘಟಿಸಿದ್ದ aikssನ ಸಾವಿರಾರು ಕೂಲಿ ಕಾರ್ಮಿಕರು ನಾಸಿಕ್ ನಿಂದ ಮುಂಬೈವರೆಗಿನ 750 ಕಿ. ಮೀ. ನ ಆ ಆಭೂತಪೂರ್ವ ಕಾಲ್ನಡಿಗೆ ಹೊಸ ಇತಿಹಾಸವನ್ನೇ ಬರೆಯಿತು. ‘ಜನರಿಂದ ಜನರಿಗಾಗಿ’ ರೂಪುಗೊಂಡಿದ್ದ ಆ ಹೋರಾಟ ಫ್ಯಾಸಿಸ್ಟ್ ಕಾಲದಲ್ಲಿಯೂ ಸಹ ನೂರಾರು ನದಿಗಳು ಸೇರಿಕೊಳ್ಳುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿತು.

ನಾಸಿಕ್ ನಿಂದ ಮುಂಬೈವರೆಗಿನ ರೈತರ ಬಹುದೊಡ್ಡ ಪಾದಯಾತ್ರೆ

ಇದರಿಂದಾಗಿ ಸ್ಪೂರ್ತಿ ಪಡೆದ ದೆಹಲಿ ರೈತ ಹೋರಾಟ ಮತ್ತೊಂದು ಚಾರಿತ್ರಿಕ ಘಟನೆಯಾಗಿದೆ. ಇದು ಮುಂದಿನ ರಚನಾತ್ಮಕ ಸಂಘಟನೆಗೆ ಚಿಮ್ಮು ಹಲಗೆಯಾಗಿದೆ.
ಪ್ರಜಾಪ್ರಬುತ್ವದಲ್ಲಿ ‘ಹೋರಾಟ ಮತ್ತು ಸಂಘಟನೆ’ ಬಿತ್ತಿದ ಬೀಜಗಳನ್ನು ರಚನಾತ್ಮಕ ಕಾರ್ಯಯೋಜನೆಗಳು ಗಿಡವಾಗಿ ಬೆಳೆಸುತ್ತವೆ. ಅದು ಕೊಂಬೆಗಳಾಗಿ ಟಿಸಿಲೊಡೆಯುತ್ತದೆ. ಇದು ಪ್ರಜಾಪ್ರಬುತ್ವದ ಆತ್ಮದಂತೆ.

ಪ್ರತಿಕ್ರಿಯೆ ಮತ್ತು ಕ್ರಿಯಾತ್ಮಕ ಎರಡೂ ಪೂರಕವಾಗಿ ಸಂಘಟಿತವಾಗುವುದರಿಂದಲೇ ಪ್ರಜಾಪ್ರಬುತ್ವವು ಉಸಿರಾಡುತ್ತದೆ.

ಈ ಪ್ರಕ್ರಿಯೆ ಎಶ್ಚೇ ಹಿನ್ನಡೆ ಅನುಬವಿಸಿದರೂ ಸಹ ಇವೆರಡರ ಕಾರಣದಿಂದ ಕನಿಶ್ಟ ಅಬಿವ್ಯಕ್ತಿ ಸ್ವಾತಂತ್ರ್ಯವಂತೂ ಖಾತರಿಯಾಗಿರುತ್ತದೆ. ಇಂದು ಬೀದಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವಶ್ಟು ಸ್ವಾತಂತ್ರವಿದೆ ಎಂದರೆ ಅದಕ್ಕೆ ಈ ಹೋರಾಟಗಳು ಕಾರಣ. ಇದರ ಮೇಲೆ ಮುಂದಿನ ಬವಿಶ್ಯವನ್ನು ಕಟ್ಟಬೇಕಿರುವುದು ಪ್ರಜ್ಞಾವಂತರ ಜವಬ್ದಾರಿ.

ಪ್ರಜಾಪ್ರಬುತ್ವದ ಈ ಆಯಾಮಗಳು, ಕೈ ದೀವಿಗೆಗಳು ಮತ್ತು ಆದಾರಸ್ತಂಬಗಳು ಒಂದೆಡೆಯಾದರೆ ‘ಚುನಾವಣಾ ಪ್ರಜಾಪ್ರಬುತ್ವ’ ಮತ್ತೊಂದು ಮಗ್ಗಲು. ಅದಿಕಾರ ರಾಜಕಾರಣ ಮಹತ್ವದ ಕಾರಣಕ್ಕೆ ಇದರ ಗೆಲುವು ಸೋಲುಗಳು ಮುಖ್ಯವಾಗುತ್ತದೆ.

ಆದರೆ ಬಿಜೆಪಿಯಂತಹ ಸರ್ವಾದಿಕಾರಿ ಪಕ್ಷವು ಅದಿಕಾರದ ಹಿಂದೆ ಬಿದ್ದಾಗ ಮಿಕ್ಕಿದೆಲ್ಲವನ್ನು ಬಿಟ್ಟು ಕೇವಲ ಚುನಾವಣಾ ರಾಜಕಾರಣವನ್ನು ಪ್ರಜಾಪ್ರಬುತ್ವದ ಮೌಲ್ಯಮಾಪನವಾಗಿಸಿಬಿಡುತ್ತದೆ. ಇದೊಂದು ಬೋನು.

680 ರೈತರು ಪ್ರಾಣಬಿಟ್ಟರೂ ತಲೆ ಕೆಡಿಸಿಕೊಳ್ಳದ ಸರ್ವಾದಿಕಾರಿಗಳು ಚುನಾವಣೆಗೋಸ್ಕರ ನಿರ್ದಾರ ತೆಗೆದುಕೊಳ್ಳುವಂತಹ ಒತ್ತಡಕ್ಕೆ ಒಳಗಾಗುತ್ತಾರೆ.

ಆದರೆ ನಿರಂತರ ಹೋರಾಟಗಳು ಇಂತಹ ನಿರಂಕುಶ ಪ್ರಬುತ್ವವನ್ನು ಬಗ್ಗಿಸಿ ಚುನಾವಣಾ ಗಿಮಿಕ್ ಮಾಡುವ ಅನಿವಾರ್ಯತೆಯನ್ನು ಸೃಶ್ಟಿ ಮಾಡುತ್ತವೆ ಎಂಬುದೇ ಪ್ರಜಾಪ್ರಬುತ್ವದ ಹಿರಿಮೆ. ಇಲ್ಲಿ ದೆಹಲಿ ರೈತ ಹೋರಾಟದ ಗೆಲುವಿದೆ.

ಆದರೆ ಭಾರತದಂತಹ ದುರ್ಬಲ ಪ್ರಜಾಪ್ರಬುತ್ವದಲ್ಲಿ ಮುನ್ನಡೆಯು ಈ ರೀತಿಯ ಪ್ಯಾಕೇಜ್ ಗಳ ರೀತಿಯಿರುತ್ತದೆ.

ಪ್ರಜಾಪ್ರಬುತ್ವವು ಡೈನಮಿಕ್ ಆಗಿರುವಂತೆ ಎಚ್ಚರ ವಹಿಸುವುದು ನಮ್ಮ ಹೊಣೆಗಾರಿಕೆ. ಅದು ಎರಡು ಹೆಜ್ಜೆ ಮುಂದೆ, ಮೂರು ಹೆಜ್ಜೆ ಹಿಂದೆ ರೀತಿ ಆಗಿದ್ದರೂ ಪರವಾಗಿಲ್ಲ, ಚಲನಶೀಲವಾಗಿರಬೇಕು. ಇದನ್ನು ದೆಹಲಿ ರೈತ ಹೋರಾಟ ಸಾದಿಸಿದೆ

ನಾನು ಎಡ ಚಳುವಳಿಯಲ್ಲಿದ್ದಾಗ ನಾವೆಲ್ಲ ಹಾಡುತ್ತಿದ್ದ ಸಾಲುಗಳು ಈಗಲೂ ಬೀಜ ವಾಕ್ಯಗಳು

“ಎಲ್ಲಿಂದ ಬಂದಿರಿ ಎಂದು ಕೇಳುತೀರಿ ನೀವು
ಜನರ ನಡುವಿಂದ ಬಂದೆವು ಎಂದು ಹೇಳುತೇವೆ ನಾವು
ಎಲ್ಲಿಗೆ ಹೋಗುವಿರಿ ಎಂದು ಕೇಳುವಿರಿ ನೀವು
ಮರಳಿ ಜನರ ಬಳಿಗೆ ಎಂದು ಹೇಳುತೇವೆ ನಾವು”

  • ಶ್ರೀಪಾದ್ ಭಟ್

ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...