Homeಮುಖಪುಟರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

ರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

- Advertisement -
- Advertisement -

(ಇದು ಹೊಸ ಬರಹದಲ್ಲಿದೆ, ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

ನಿಜದ ಪ್ರಜಾಪ್ರಬುತ್ವ ಎಂಬುದು ನಿದಾನ ಪ್ರಕ್ರಿಯೆ. ಅದು ಎಡವುತ್ತದೆ, ತೆವಳುತ್ತದೆ, ಕುಂಟುತ್ತದೆ. ನೇರವಾಗಿ ಸಾಗುವುದು ಪ್ರಜಾಪ್ರಬುತ್ವ ಎನಿಸಿಕೊಳ್ಳುವುದಿಲ್ಲ.
ಪ್ರಜಾಪ್ರಬುತ್ವ ಸಮಾಜದಲ್ಲಿ (ಅದು ತನ್ನ ಮೌಲ್ಯ ಕಳೆದುಕೊಂಡಿದ್ದರೂ ಸಹ) ಒಂದು ಹೋರಾಟ ಮತ್ತೊಂದು ಹೋರಾಟಕ್ಕೆ ಇದು ಮಗದೊಂದಕ್ಕೆ ಸ್ಪೂರ್ತಿಯಾಗುತ್ತಾ ಹೋಗುತ್ತದೆ. ಇದು ಪ್ರಜಾಪ್ರಬುತ್ವದ ಅಡಿಪಾಯವನ್ನು ಶಿಥಿಲಗೊಳಿಸದಂತೆ ಕಾಪಾಡುತ್ತದೆ.

ಇತ್ತೀಚಿನ ಉದಾಹರಣೆ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಕೃಶಿ ಬಿಕ್ಕಟ್ಟಿಗೆ ಕಾರಣವಾದ ರಾಜ್ಯ ಸರಕಾರದ ನೀತಿಗಳ ವಿರುದ್ದ ರೂಪುಗೊಂಡ aikss (all india kisan sangharsh samiti) ಸಂಘಟನೆ.

ಮಾರ್ಚ್ 2018ರಲ್ಲಿ ಭೂರಹಿತ ಕೂಲಿ ಕಾರ್ಮಿಕರ ಹೋರಾಟ ಸಂಘಟಿಸಿದ್ದ aikssನ ಸಾವಿರಾರು ಕೂಲಿ ಕಾರ್ಮಿಕರು ನಾಸಿಕ್ ನಿಂದ ಮುಂಬೈವರೆಗಿನ 750 ಕಿ. ಮೀ. ನ ಆ ಆಭೂತಪೂರ್ವ ಕಾಲ್ನಡಿಗೆ ಹೊಸ ಇತಿಹಾಸವನ್ನೇ ಬರೆಯಿತು. ‘ಜನರಿಂದ ಜನರಿಗಾಗಿ’ ರೂಪುಗೊಂಡಿದ್ದ ಆ ಹೋರಾಟ ಫ್ಯಾಸಿಸ್ಟ್ ಕಾಲದಲ್ಲಿಯೂ ಸಹ ನೂರಾರು ನದಿಗಳು ಸೇರಿಕೊಳ್ಳುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿತು.

ನಾಸಿಕ್ ನಿಂದ ಮುಂಬೈವರೆಗಿನ ರೈತರ ಬಹುದೊಡ್ಡ ಪಾದಯಾತ್ರೆ

ಇದರಿಂದಾಗಿ ಸ್ಪೂರ್ತಿ ಪಡೆದ ದೆಹಲಿ ರೈತ ಹೋರಾಟ ಮತ್ತೊಂದು ಚಾರಿತ್ರಿಕ ಘಟನೆಯಾಗಿದೆ. ಇದು ಮುಂದಿನ ರಚನಾತ್ಮಕ ಸಂಘಟನೆಗೆ ಚಿಮ್ಮು ಹಲಗೆಯಾಗಿದೆ.
ಪ್ರಜಾಪ್ರಬುತ್ವದಲ್ಲಿ ‘ಹೋರಾಟ ಮತ್ತು ಸಂಘಟನೆ’ ಬಿತ್ತಿದ ಬೀಜಗಳನ್ನು ರಚನಾತ್ಮಕ ಕಾರ್ಯಯೋಜನೆಗಳು ಗಿಡವಾಗಿ ಬೆಳೆಸುತ್ತವೆ. ಅದು ಕೊಂಬೆಗಳಾಗಿ ಟಿಸಿಲೊಡೆಯುತ್ತದೆ. ಇದು ಪ್ರಜಾಪ್ರಬುತ್ವದ ಆತ್ಮದಂತೆ.

ಪ್ರತಿಕ್ರಿಯೆ ಮತ್ತು ಕ್ರಿಯಾತ್ಮಕ ಎರಡೂ ಪೂರಕವಾಗಿ ಸಂಘಟಿತವಾಗುವುದರಿಂದಲೇ ಪ್ರಜಾಪ್ರಬುತ್ವವು ಉಸಿರಾಡುತ್ತದೆ.

ಈ ಪ್ರಕ್ರಿಯೆ ಎಶ್ಚೇ ಹಿನ್ನಡೆ ಅನುಬವಿಸಿದರೂ ಸಹ ಇವೆರಡರ ಕಾರಣದಿಂದ ಕನಿಶ್ಟ ಅಬಿವ್ಯಕ್ತಿ ಸ್ವಾತಂತ್ರ್ಯವಂತೂ ಖಾತರಿಯಾಗಿರುತ್ತದೆ. ಇಂದು ಬೀದಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವಶ್ಟು ಸ್ವಾತಂತ್ರವಿದೆ ಎಂದರೆ ಅದಕ್ಕೆ ಈ ಹೋರಾಟಗಳು ಕಾರಣ. ಇದರ ಮೇಲೆ ಮುಂದಿನ ಬವಿಶ್ಯವನ್ನು ಕಟ್ಟಬೇಕಿರುವುದು ಪ್ರಜ್ಞಾವಂತರ ಜವಬ್ದಾರಿ.

ಪ್ರಜಾಪ್ರಬುತ್ವದ ಈ ಆಯಾಮಗಳು, ಕೈ ದೀವಿಗೆಗಳು ಮತ್ತು ಆದಾರಸ್ತಂಬಗಳು ಒಂದೆಡೆಯಾದರೆ ‘ಚುನಾವಣಾ ಪ್ರಜಾಪ್ರಬುತ್ವ’ ಮತ್ತೊಂದು ಮಗ್ಗಲು. ಅದಿಕಾರ ರಾಜಕಾರಣ ಮಹತ್ವದ ಕಾರಣಕ್ಕೆ ಇದರ ಗೆಲುವು ಸೋಲುಗಳು ಮುಖ್ಯವಾಗುತ್ತದೆ.

ಆದರೆ ಬಿಜೆಪಿಯಂತಹ ಸರ್ವಾದಿಕಾರಿ ಪಕ್ಷವು ಅದಿಕಾರದ ಹಿಂದೆ ಬಿದ್ದಾಗ ಮಿಕ್ಕಿದೆಲ್ಲವನ್ನು ಬಿಟ್ಟು ಕೇವಲ ಚುನಾವಣಾ ರಾಜಕಾರಣವನ್ನು ಪ್ರಜಾಪ್ರಬುತ್ವದ ಮೌಲ್ಯಮಾಪನವಾಗಿಸಿಬಿಡುತ್ತದೆ. ಇದೊಂದು ಬೋನು.

680 ರೈತರು ಪ್ರಾಣಬಿಟ್ಟರೂ ತಲೆ ಕೆಡಿಸಿಕೊಳ್ಳದ ಸರ್ವಾದಿಕಾರಿಗಳು ಚುನಾವಣೆಗೋಸ್ಕರ ನಿರ್ದಾರ ತೆಗೆದುಕೊಳ್ಳುವಂತಹ ಒತ್ತಡಕ್ಕೆ ಒಳಗಾಗುತ್ತಾರೆ.

ಆದರೆ ನಿರಂತರ ಹೋರಾಟಗಳು ಇಂತಹ ನಿರಂಕುಶ ಪ್ರಬುತ್ವವನ್ನು ಬಗ್ಗಿಸಿ ಚುನಾವಣಾ ಗಿಮಿಕ್ ಮಾಡುವ ಅನಿವಾರ್ಯತೆಯನ್ನು ಸೃಶ್ಟಿ ಮಾಡುತ್ತವೆ ಎಂಬುದೇ ಪ್ರಜಾಪ್ರಬುತ್ವದ ಹಿರಿಮೆ. ಇಲ್ಲಿ ದೆಹಲಿ ರೈತ ಹೋರಾಟದ ಗೆಲುವಿದೆ.

ಆದರೆ ಭಾರತದಂತಹ ದುರ್ಬಲ ಪ್ರಜಾಪ್ರಬುತ್ವದಲ್ಲಿ ಮುನ್ನಡೆಯು ಈ ರೀತಿಯ ಪ್ಯಾಕೇಜ್ ಗಳ ರೀತಿಯಿರುತ್ತದೆ.

ಪ್ರಜಾಪ್ರಬುತ್ವವು ಡೈನಮಿಕ್ ಆಗಿರುವಂತೆ ಎಚ್ಚರ ವಹಿಸುವುದು ನಮ್ಮ ಹೊಣೆಗಾರಿಕೆ. ಅದು ಎರಡು ಹೆಜ್ಜೆ ಮುಂದೆ, ಮೂರು ಹೆಜ್ಜೆ ಹಿಂದೆ ರೀತಿ ಆಗಿದ್ದರೂ ಪರವಾಗಿಲ್ಲ, ಚಲನಶೀಲವಾಗಿರಬೇಕು. ಇದನ್ನು ದೆಹಲಿ ರೈತ ಹೋರಾಟ ಸಾದಿಸಿದೆ

ನಾನು ಎಡ ಚಳುವಳಿಯಲ್ಲಿದ್ದಾಗ ನಾವೆಲ್ಲ ಹಾಡುತ್ತಿದ್ದ ಸಾಲುಗಳು ಈಗಲೂ ಬೀಜ ವಾಕ್ಯಗಳು

“ಎಲ್ಲಿಂದ ಬಂದಿರಿ ಎಂದು ಕೇಳುತೀರಿ ನೀವು
ಜನರ ನಡುವಿಂದ ಬಂದೆವು ಎಂದು ಹೇಳುತೇವೆ ನಾವು
ಎಲ್ಲಿಗೆ ಹೋಗುವಿರಿ ಎಂದು ಕೇಳುವಿರಿ ನೀವು
ಮರಳಿ ಜನರ ಬಳಿಗೆ ಎಂದು ಹೇಳುತೇವೆ ನಾವು”

  • ಶ್ರೀಪಾದ್ ಭಟ್

ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...