Homeಮುಖಪುಟರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

ರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

- Advertisement -
- Advertisement -

(ಇದು ಹೊಸ ಬರಹದಲ್ಲಿದೆ, ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

ನಿಜದ ಪ್ರಜಾಪ್ರಬುತ್ವ ಎಂಬುದು ನಿದಾನ ಪ್ರಕ್ರಿಯೆ. ಅದು ಎಡವುತ್ತದೆ, ತೆವಳುತ್ತದೆ, ಕುಂಟುತ್ತದೆ. ನೇರವಾಗಿ ಸಾಗುವುದು ಪ್ರಜಾಪ್ರಬುತ್ವ ಎನಿಸಿಕೊಳ್ಳುವುದಿಲ್ಲ.
ಪ್ರಜಾಪ್ರಬುತ್ವ ಸಮಾಜದಲ್ಲಿ (ಅದು ತನ್ನ ಮೌಲ್ಯ ಕಳೆದುಕೊಂಡಿದ್ದರೂ ಸಹ) ಒಂದು ಹೋರಾಟ ಮತ್ತೊಂದು ಹೋರಾಟಕ್ಕೆ ಇದು ಮಗದೊಂದಕ್ಕೆ ಸ್ಪೂರ್ತಿಯಾಗುತ್ತಾ ಹೋಗುತ್ತದೆ. ಇದು ಪ್ರಜಾಪ್ರಬುತ್ವದ ಅಡಿಪಾಯವನ್ನು ಶಿಥಿಲಗೊಳಿಸದಂತೆ ಕಾಪಾಡುತ್ತದೆ.

ಇತ್ತೀಚಿನ ಉದಾಹರಣೆ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಕೃಶಿ ಬಿಕ್ಕಟ್ಟಿಗೆ ಕಾರಣವಾದ ರಾಜ್ಯ ಸರಕಾರದ ನೀತಿಗಳ ವಿರುದ್ದ ರೂಪುಗೊಂಡ aikss (all india kisan sangharsh samiti) ಸಂಘಟನೆ.

ಮಾರ್ಚ್ 2018ರಲ್ಲಿ ಭೂರಹಿತ ಕೂಲಿ ಕಾರ್ಮಿಕರ ಹೋರಾಟ ಸಂಘಟಿಸಿದ್ದ aikssನ ಸಾವಿರಾರು ಕೂಲಿ ಕಾರ್ಮಿಕರು ನಾಸಿಕ್ ನಿಂದ ಮುಂಬೈವರೆಗಿನ 750 ಕಿ. ಮೀ. ನ ಆ ಆಭೂತಪೂರ್ವ ಕಾಲ್ನಡಿಗೆ ಹೊಸ ಇತಿಹಾಸವನ್ನೇ ಬರೆಯಿತು. ‘ಜನರಿಂದ ಜನರಿಗಾಗಿ’ ರೂಪುಗೊಂಡಿದ್ದ ಆ ಹೋರಾಟ ಫ್ಯಾಸಿಸ್ಟ್ ಕಾಲದಲ್ಲಿಯೂ ಸಹ ನೂರಾರು ನದಿಗಳು ಸೇರಿಕೊಳ್ಳುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿತು.

ನಾಸಿಕ್ ನಿಂದ ಮುಂಬೈವರೆಗಿನ ರೈತರ ಬಹುದೊಡ್ಡ ಪಾದಯಾತ್ರೆ

ಇದರಿಂದಾಗಿ ಸ್ಪೂರ್ತಿ ಪಡೆದ ದೆಹಲಿ ರೈತ ಹೋರಾಟ ಮತ್ತೊಂದು ಚಾರಿತ್ರಿಕ ಘಟನೆಯಾಗಿದೆ. ಇದು ಮುಂದಿನ ರಚನಾತ್ಮಕ ಸಂಘಟನೆಗೆ ಚಿಮ್ಮು ಹಲಗೆಯಾಗಿದೆ.
ಪ್ರಜಾಪ್ರಬುತ್ವದಲ್ಲಿ ‘ಹೋರಾಟ ಮತ್ತು ಸಂಘಟನೆ’ ಬಿತ್ತಿದ ಬೀಜಗಳನ್ನು ರಚನಾತ್ಮಕ ಕಾರ್ಯಯೋಜನೆಗಳು ಗಿಡವಾಗಿ ಬೆಳೆಸುತ್ತವೆ. ಅದು ಕೊಂಬೆಗಳಾಗಿ ಟಿಸಿಲೊಡೆಯುತ್ತದೆ. ಇದು ಪ್ರಜಾಪ್ರಬುತ್ವದ ಆತ್ಮದಂತೆ.

ಪ್ರತಿಕ್ರಿಯೆ ಮತ್ತು ಕ್ರಿಯಾತ್ಮಕ ಎರಡೂ ಪೂರಕವಾಗಿ ಸಂಘಟಿತವಾಗುವುದರಿಂದಲೇ ಪ್ರಜಾಪ್ರಬುತ್ವವು ಉಸಿರಾಡುತ್ತದೆ.

ಈ ಪ್ರಕ್ರಿಯೆ ಎಶ್ಚೇ ಹಿನ್ನಡೆ ಅನುಬವಿಸಿದರೂ ಸಹ ಇವೆರಡರ ಕಾರಣದಿಂದ ಕನಿಶ್ಟ ಅಬಿವ್ಯಕ್ತಿ ಸ್ವಾತಂತ್ರ್ಯವಂತೂ ಖಾತರಿಯಾಗಿರುತ್ತದೆ. ಇಂದು ಬೀದಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವಶ್ಟು ಸ್ವಾತಂತ್ರವಿದೆ ಎಂದರೆ ಅದಕ್ಕೆ ಈ ಹೋರಾಟಗಳು ಕಾರಣ. ಇದರ ಮೇಲೆ ಮುಂದಿನ ಬವಿಶ್ಯವನ್ನು ಕಟ್ಟಬೇಕಿರುವುದು ಪ್ರಜ್ಞಾವಂತರ ಜವಬ್ದಾರಿ.

ಪ್ರಜಾಪ್ರಬುತ್ವದ ಈ ಆಯಾಮಗಳು, ಕೈ ದೀವಿಗೆಗಳು ಮತ್ತು ಆದಾರಸ್ತಂಬಗಳು ಒಂದೆಡೆಯಾದರೆ ‘ಚುನಾವಣಾ ಪ್ರಜಾಪ್ರಬುತ್ವ’ ಮತ್ತೊಂದು ಮಗ್ಗಲು. ಅದಿಕಾರ ರಾಜಕಾರಣ ಮಹತ್ವದ ಕಾರಣಕ್ಕೆ ಇದರ ಗೆಲುವು ಸೋಲುಗಳು ಮುಖ್ಯವಾಗುತ್ತದೆ.

ಆದರೆ ಬಿಜೆಪಿಯಂತಹ ಸರ್ವಾದಿಕಾರಿ ಪಕ್ಷವು ಅದಿಕಾರದ ಹಿಂದೆ ಬಿದ್ದಾಗ ಮಿಕ್ಕಿದೆಲ್ಲವನ್ನು ಬಿಟ್ಟು ಕೇವಲ ಚುನಾವಣಾ ರಾಜಕಾರಣವನ್ನು ಪ್ರಜಾಪ್ರಬುತ್ವದ ಮೌಲ್ಯಮಾಪನವಾಗಿಸಿಬಿಡುತ್ತದೆ. ಇದೊಂದು ಬೋನು.

680 ರೈತರು ಪ್ರಾಣಬಿಟ್ಟರೂ ತಲೆ ಕೆಡಿಸಿಕೊಳ್ಳದ ಸರ್ವಾದಿಕಾರಿಗಳು ಚುನಾವಣೆಗೋಸ್ಕರ ನಿರ್ದಾರ ತೆಗೆದುಕೊಳ್ಳುವಂತಹ ಒತ್ತಡಕ್ಕೆ ಒಳಗಾಗುತ್ತಾರೆ.

ಆದರೆ ನಿರಂತರ ಹೋರಾಟಗಳು ಇಂತಹ ನಿರಂಕುಶ ಪ್ರಬುತ್ವವನ್ನು ಬಗ್ಗಿಸಿ ಚುನಾವಣಾ ಗಿಮಿಕ್ ಮಾಡುವ ಅನಿವಾರ್ಯತೆಯನ್ನು ಸೃಶ್ಟಿ ಮಾಡುತ್ತವೆ ಎಂಬುದೇ ಪ್ರಜಾಪ್ರಬುತ್ವದ ಹಿರಿಮೆ. ಇಲ್ಲಿ ದೆಹಲಿ ರೈತ ಹೋರಾಟದ ಗೆಲುವಿದೆ.

ಆದರೆ ಭಾರತದಂತಹ ದುರ್ಬಲ ಪ್ರಜಾಪ್ರಬುತ್ವದಲ್ಲಿ ಮುನ್ನಡೆಯು ಈ ರೀತಿಯ ಪ್ಯಾಕೇಜ್ ಗಳ ರೀತಿಯಿರುತ್ತದೆ.

ಪ್ರಜಾಪ್ರಬುತ್ವವು ಡೈನಮಿಕ್ ಆಗಿರುವಂತೆ ಎಚ್ಚರ ವಹಿಸುವುದು ನಮ್ಮ ಹೊಣೆಗಾರಿಕೆ. ಅದು ಎರಡು ಹೆಜ್ಜೆ ಮುಂದೆ, ಮೂರು ಹೆಜ್ಜೆ ಹಿಂದೆ ರೀತಿ ಆಗಿದ್ದರೂ ಪರವಾಗಿಲ್ಲ, ಚಲನಶೀಲವಾಗಿರಬೇಕು. ಇದನ್ನು ದೆಹಲಿ ರೈತ ಹೋರಾಟ ಸಾದಿಸಿದೆ

ನಾನು ಎಡ ಚಳುವಳಿಯಲ್ಲಿದ್ದಾಗ ನಾವೆಲ್ಲ ಹಾಡುತ್ತಿದ್ದ ಸಾಲುಗಳು ಈಗಲೂ ಬೀಜ ವಾಕ್ಯಗಳು

“ಎಲ್ಲಿಂದ ಬಂದಿರಿ ಎಂದು ಕೇಳುತೀರಿ ನೀವು
ಜನರ ನಡುವಿಂದ ಬಂದೆವು ಎಂದು ಹೇಳುತೇವೆ ನಾವು
ಎಲ್ಲಿಗೆ ಹೋಗುವಿರಿ ಎಂದು ಕೇಳುವಿರಿ ನೀವು
ಮರಳಿ ಜನರ ಬಳಿಗೆ ಎಂದು ಹೇಳುತೇವೆ ನಾವು”

  • ಶ್ರೀಪಾದ್ ಭಟ್

ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...