Homeಕರ್ನಾಟಕಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಬಸವಣ್ಣನವರ ವಚನಗಳಿಗೆ ಸಿ.ಅಶ್ವತ್ ವಿಶಿಷ್ಟ ಶೈಲಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದಕ್ಕೆ ನಿರಂತರ ರಂಗತಂಡ 'ಕೂಡಲಸಂಗಮ' ದೃಶ್ಯರೂಪಕವನ್ನು ಕಟ್ಟಿ, ಬಸವಣ್ಣನ ಕನಸಿನ ಕಲ್ಯಾಣವನ್ನು ಕಣ್ಣಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ.

- Advertisement -
- Advertisement -

ಕೆಲವರದ್ದು ದೇಶಕಾಲಗಳನ್ನು ಮೀರಿದ ವ್ಯಕ್ತಿತ್ವ. ಅಂತಹವರಲ್ಲಿ ಕರ್ನಾಟಕದ ಬಸವಣ್ಣನವರೂ ಒಬ್ಬರು. ಸಾಹಿತ್ಯವನ್ನು ಸಶಕ್ತವಾಗಿ ಬಳಸಿ ಸಾಮಾಜಿಕ ಪರಿವರ್ತನೆ ತರಲು ಪ್ರಯತ್ನಿಸಿ, ‘ವಚನ ಕ್ರಾಂತಿ, ವಚನ ಚಳುವಳಿ’ಯನ್ನು ಆರಂಭಿಸಿದ್ದು ಬಸವಣ್ಣನವರ ಕಾಲಘಟ್ಟದಲ್ಲಿ. ಕರ್ನಾಟಕದಲ್ಲಿ ಘಟಿಸಿದ ಈ ವಿನೂತನ ಚಳವಳಿ ಜಗತ್ತಿನಲ್ಲಿಯೇ ಮೊಟ್ಟಮೊದಲನೆಯದ್ದು. ಅನುಭವ ಮಂಟಪ ಅಥವಾ ಮಹಾಮನೆಯನ್ನು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು ಎನ್ನಲಾಗುತ್ತದೆ. ಆದರೆ ಇಂತಹ ವೈಶಿಷ್ಟಪೂರ್ಣ ಆದರ್ಶ ಎಷ್ಟು ಬೇಗ ಪ್ರವರ್ಧಮಾನಕ್ಕೆ ಬಂತೋ ಅಷ್ಟೇ ಬೇಗ ಹಳ್ಳಹಿಡಿಯಿತು.

ನಿರಂತರ ಫೌಂಡೇಶನ್ ಅಭಿನಯಿಸಿರುವ “ಕೂಡಲಸಂಗಮ” ದೃಶ್ಯರೂಪಕ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಸವಣ್ಣ ಮಾಡಿಸಿದ ಮೊದಲ ವರ್ಣಸಂಕರವನ್ನು ತಡೆದುಕೊಳ್ಳಲಾಗದ ಅಂದಿನ ಸನಾತನವಾದಿಗಳು ಬಿಜ್ಜಳನ ಆಸ್ಥಾನದಿಂದ ಬಸವಣ್ಣನವರನ್ನು ಹೊರಗೋಡಿಸಿ, ಕೊಂದು, ಅವರು ಐಕ್ಯವಾದರು ಎಂಬ ಸುಳ್ಳನ್ನು ಹಬ್ಬಿಸಿದರು. ನಂತರ ಹರಳಯ್ಯ ಮಧುವರಸರ ಕಣ್ಣು ಕೀಳಿಸಿ, ಎಳೆಹೂಟೆ ಎಳೆಸಿ, ಶೂಲಕ್ಕೇರಿಸಿ ಕೊಂದರು. ಅಂದಿನಿಂದ ಬಸವಣ್ಣನ ಆಶಯ, ಆದರ್ಶ ತಳಹಿಡಿಯಲು ಆರಂಭಿಸಿತ್ತು. ಯಾವ ಜಾತಿಯೂ ಇಲ್ಲ ಎಂದಿದ್ದ ಬಸವಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗುವಂತೆ ಮಾಡಲು ವೈದಿಕರ ಕೈವಾಡಕ್ಕೆ ಸಾಧ್ಯವಾಗಿತ್ತು. ಪರ್ಯಾಯ ವ್ಯವಸ್ಥೆ ಕಟ್ಟಲು ಮುಂದಾಗಿದ್ದ ಬಸವಣ್ಣ ಮತ್ತು ಅವನ ಕನಸಿನ ಕಲ್ಯಾಣವನ್ನು ಇದೇ ಅನಿಷ್ಟ ವ್ಯವಸ್ಥೆಯ ಭಾಗವನ್ನಾಗಿಸಲಾಯಿತು.

ಅಂದಿನಿಂದ ಬಸವಣ್ಣ ಕಾಣೆಯಾಗಿದ್ದಾನೆ. ಕಾಣೆಯಾಗಿರುವ ಬಸವಣ್ಣನನ್ನು ಇಂದಿಗೂ ನಾನಾ ರೂಪಗಳಲ್ಲಿ ಕಂಡುಕೊಳ್ಳುತ್ತಿರುವ ಅನೇಕರು, ಅವನ ಆಶಯದ ಕಾಯಕ ಮತ್ತು ಭಕ್ತಿಯ ಅನುಭವಮಂಟಪವನ್ನು ಸಾಕಾರಗೊಳಿಸಲು ನಮ್ಮ ನಡುವೆಯೇ ಪ್ರಯತ್ನಿಸುತ್ತಿದ್ದಾರೆ. ಈ ಸಾಲಿಗೆ ಸೇರುವ ನಿರಂತರ ರಂಗತಂಡದ ಕೆಲಸ ಕೂಡ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಮೈಸೂರಿನ ಪ್ರಖ್ಯಾತ ಹವ್ಯಾಸಿ ತಂಡ ‘ನಿರಂತರ ಫೌಂಡೇಶನ್, ಮೈಸೂರು’ ಹೆಸರಿಗೆ ಮಾತ್ರ ಹವ್ಯಾಸಿ ತಂಡವಾಗಿದ್ದು, ತನ್ನ ಚಟುವಟಿಕೆಗಳಲ್ಲಿ ಸಂಪೂರ್ಣ ವೃತ್ತಿಪರತೆಯನ್ನು ಕಂಡುಕೊಂಡಿದೆ. ಸಮಾಜ ಮತ್ತು ಯುವಮನಸ್ಸುಗಳೊಟ್ಟಿಗೆ ಮುಖಾಮುಖಿಯಾಗಲು ರಂಗಭೂಮಿಯನ್ನು ಸಾಧನವಾಗಿಸಿಕೊಂಡು ಕಳೆದ 30 ವರ್ಷಗಳಿಂದ ಕನ್ನಡ ರಂಗಭೂಮಿಗೆ ಕೊಡುಗೆ ನೀಡುತ್ತಾ, ಪ್ರಸ್ತುತ ಸಮಾಜದ ವಿದ್ಯಮಾನಗಳು ಮತ್ತು ತಲ್ಲಣಗಳನ್ನೂ ಸಂವೇದನಾಶೀಲತೆಯಿಂದ ಜನರಿಗೆ ತಲುಪಿಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ನೂರಾರು ನಾಟಕಗಳು, ಜಾಥಗಳು, ಸಾಕ್ಷ್ಯಚಿತ್ರಗಳು, ಕಾವ್ಯಕಮ್ಮಟಗಳು, ಓದು, ಚರ್ಚೆ, ಹೋರಾಟ ಮುಂತಾದವುಗಳಲ್ಲಿ ಕ್ರಿಯಾತ್ಮಕವಾಗಿ ಈ ತಂಡ ತೊಡಗಿಸಿಕೊಂಡಿದೆ. ಇಷ್ಟೇ ಅಲ್ಲದೇ, ಕಳೆದ 13 ವರ್ಷಗಳಿಂದ ಪ್ರತಿ ವರ್ಷವೂ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಜರಂಗ’ ಎನ್ನುವ ಒಂದು ತಿಂಗಳ ಉಚಿತ ರಂಗತರಬೇತಿ ಶಿಬಿರವನ್ನು ನಡೆಸುತ್ತಿದೆ. ಜೊತೆಗೆ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಭಾಗವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದ 5 ದಿನಗಳ ‘ನಿರಂತರ ರಂಗ ಉತ್ಸವ’ವನ್ನು ಹಮ್ಮಿಕೊಂಡುಬರುತ್ತಿದೆ.

ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಇಂತಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯುಳ್ಳ ಚಿಂತನೆಯನ್ನು ಪಸರಿಸುವ ಸಲುವಾಗಿ ನಿರಂತರ ಹತ್ತಾರು ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದರ ಭಾಗವಾಗಿಯೇ ಕಳೆದ 13 ವರ್ಷಗಳ ಹಿಂದೆ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ಎನ್ನುವ ದೃಶ್ಯರೂಪಕ ಹುಟ್ಟಿಕೊಂಡಿತು.

ಬಸವಣ್ಣನವರ ವಚನಗಳಿಗೆ ಡಾ. ಸಿ.ಅಶ್ವಥ್ ಮಾಂತ್ರಿಕ ಸ್ಪರ್ಶ ನೀಡಿ, ಜನಪದ ಶೈಲಿಯಲ್ಲಿ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ನಿರಂತರದ ಪ್ರಸಾದ್ ಕುಂದೂರು ಮತ್ತು ಎಂ.ಎಂ.ಸುಗುಣ ಸೇರಿ ಈ ವಚನಗಳಿಗೆ ದೃಶ್ಯ ಮತ್ತು ನೃತ್ಯವನ್ನು ಹದವಾಗಿ ಬೆರೆಸಿದ ಪರಿಣಾಮ 13 ವರ್ಷಗಳ ನಂತರ ಇಂದಿಗೂ ಜನಪ್ರಿಯ ಪ್ರದರ್ಶನವಾಗಿಯೇ ಉಳಿದುಕೊಂಡಿದೆ. ಇದುವರೆಗೂ ಸುಮಾರು 110ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ದೃಶ್ಯರೂಪಕ ದೆಹಲಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ದೃಶ್ಯರೂಪಕದಲ್ಲಿ, ಕಳೆದುಹೋಗಿರುವ 12ನೇ ಶತಮಾನದ ಬಸವಣ್ಣನನ್ನು ಶರಣರು ಹುಡುಕುತ್ತಾ ಸಾಗುತ್ತಾರೆ. ಇವರಿಗೆ ಎದುರಾಗುವ ಬಸವಣ್ಣನ ಅಂಕಿತ ಮತ್ತು ಆದರ್ಶವಾದ ‘ಕೂಡಲಸಂಗಮದೇವ’ನೂ ಬಸವಣ್ಣನನ್ನೇ ಹುಡುಕುತ್ತಿರುವುದನ್ನು ಕಂಡು ಪರಸ್ಪರ ಚಕಿತರಾಗುತ್ತಾರೆ. ಶರಣರು ಮತ್ತು ಕೂಡಲಸಂಗಮದೇವರು ಒಟ್ಟಿಗೆ ಸೇರಿ ಬಸವಣ್ಣನನ್ನು ಹುಡುಕುತ್ತಾ ಹೋಗುವ ದಾರಿಯಲ್ಲಿ, ನಮ್ಮ ಸಮಾಜದ ನೀಚ, ಅನಿಷ್ಠ, ಅನಾಚಾರ, ಡಾಂಭಿಕತೆ, ಶೋಷಣೆಗಳು ದೃಶ್ಯವಾಗಿ ಕಟ್ಟಿಕೊಳ್ಳುತ್ತದೆ. ಇದನ್ನು ಪ್ರಸಾದ್ ಕುಂದೂರು ತಮ್ಮ ತೀಕ್ಷ್ಣವಾದ ಸಾಹಿತ್ಯ ಮತ್ತು ಸಂಭಾಷಣೆಯ ಮೂಲಕ ಮತ್ತಷ್ಟು ಪ್ರಖರಗೊಳಿಸಿದ್ದಾರೆ.

ಇದನ್ನೂ ಓದಿ: ಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ವಚನಗಳಿಗೆ ಭಾರತದ ಜನಪದ, ಬುಡಕಟ್ಟು ಸಂಗೀತ ಶೈಲಿಯನ್ನು ಅಳವಡಿಸಿ ಅಶ್ವಥ್ ಅವರು ವಿಶಿಷ್ಟವಾದ ಸಂಗೀತ ಪ್ರಯೋಗವನ್ನು ಮಾಡಿದ್ದಾರೆ. ಇವೆರಡಕ್ಕೂ ಹೊಂದುವಂತೆ ಕಂಸಾಳೆ, ಬುಡಕಟ್ಟು ನೃತ್ಯ, ಗುಜರಾತ್‍ನ ದಾಂಡಿಯಾ ನೃತ್ಯ, ಕೋಲಾಟ ಮುಂತಾದ ಭಾರತೀಯ ಜನಪದ ಶೈಲಿಗಳ ನೃತ್ಯವನ್ನು ಸಂಯೋಜಿಸಿ ವಚನಗಳಿಗೆ ಹೊಸ ರೂಪಕವನ್ನು ಎಂ.ಎಂ.ಸುಗುಣ ಕಟ್ಟಿಕೊಟ್ಟಿದ್ದಾರೆ. ಸುಮಾರು 1 ಗಂಟೆ 15 ನಿಮಿಷದ ಈ ಪ್ರದರ್ಶನ ವಿನೂತನ ವಸ್ತ್ರಾಲಂಕಾರ, ಬೆಳಕು, ಸಂಗೀತ, ನೃತ್ಯ, ದೃಶ್ಯ ಮತ್ತು ಸಂಭಾಷಣೆಗಳೊಂದಿಗೆ ನೋಡುಗರನ್ನು ಏಕಾಗ್ರಾಚಿತ್ತರನ್ನಾಗಿ ಮಾಡಿ ಮೂಕವಿಸ್ಮಿತರನ್ನಾಗಿಸುವ ಜೊತೆಗೆ ಅವರೊಳಗೆ ಒಂದು ಸಣ್ಣ ಸಂವೇದನೆಯನ್ನು ಚಿಗುರಿಸುತ್ತದೆ.

ಹೀಗೆ, ಕಳೆದು ಹೋಗಿರುವ ಬಸವಣ್ಣನನ್ನು ನಿರಂತರ ತಂಡ ಇಂದಿಗೂ ಹುಡುಕುತ್ತಾ ಬಸವಣ್ಣನವರ ಆದರ್ಶದ ಸಮಾಜದ ಕನಸು ಕಾಣುತ್ತಾ ಸಾಗುತ್ತಿದೆ. ‘ಮಾನವತೆಯ ಏಕತೆಗಾಗಿ’ ನಿರಂತರ ಕೈಗೊಂಡ ಈ ಕೂಡಲಸಂಗಮ ಪಯಣ, ಇಂದಿನ ಸಮಾಜಕ್ಕೆ ಬಸವಣ್ಣ ಮತ್ತು ಆ ಕಾಲಘಟ್ಟದ ಸಾಮಾಜಿಕ ಪರಿವರ್ತನೆಯ ಮಹತ್ವವನ್ನು ತಿಳಿಸುವ ಸಲುವಾಗಿ ಆರಂಭಗೊಂಡು ಆಧುನಿಕ ರಂಗಭೂಮಿಯ ಅನ್ವಯಿಕತೆಯ ಪ್ರಯೋಗವಾಗಿ ಇಂದಿಗೂ ಮುಂದುವರಿಯುತ್ತಲೇ ಇದೆ.


ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...