Homeಕರ್ನಾಟಕಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಬಸವಣ್ಣನವರ ವಚನಗಳಿಗೆ ಸಿ.ಅಶ್ವತ್ ವಿಶಿಷ್ಟ ಶೈಲಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದಕ್ಕೆ ನಿರಂತರ ರಂಗತಂಡ 'ಕೂಡಲಸಂಗಮ' ದೃಶ್ಯರೂಪಕವನ್ನು ಕಟ್ಟಿ, ಬಸವಣ್ಣನ ಕನಸಿನ ಕಲ್ಯಾಣವನ್ನು ಕಣ್ಣಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ.

- Advertisement -
- Advertisement -

ಕೆಲವರದ್ದು ದೇಶಕಾಲಗಳನ್ನು ಮೀರಿದ ವ್ಯಕ್ತಿತ್ವ. ಅಂತಹವರಲ್ಲಿ ಕರ್ನಾಟಕದ ಬಸವಣ್ಣನವರೂ ಒಬ್ಬರು. ಸಾಹಿತ್ಯವನ್ನು ಸಶಕ್ತವಾಗಿ ಬಳಸಿ ಸಾಮಾಜಿಕ ಪರಿವರ್ತನೆ ತರಲು ಪ್ರಯತ್ನಿಸಿ, ‘ವಚನ ಕ್ರಾಂತಿ, ವಚನ ಚಳುವಳಿ’ಯನ್ನು ಆರಂಭಿಸಿದ್ದು ಬಸವಣ್ಣನವರ ಕಾಲಘಟ್ಟದಲ್ಲಿ. ಕರ್ನಾಟಕದಲ್ಲಿ ಘಟಿಸಿದ ಈ ವಿನೂತನ ಚಳವಳಿ ಜಗತ್ತಿನಲ್ಲಿಯೇ ಮೊಟ್ಟಮೊದಲನೆಯದ್ದು. ಅನುಭವ ಮಂಟಪ ಅಥವಾ ಮಹಾಮನೆಯನ್ನು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು ಎನ್ನಲಾಗುತ್ತದೆ. ಆದರೆ ಇಂತಹ ವೈಶಿಷ್ಟಪೂರ್ಣ ಆದರ್ಶ ಎಷ್ಟು ಬೇಗ ಪ್ರವರ್ಧಮಾನಕ್ಕೆ ಬಂತೋ ಅಷ್ಟೇ ಬೇಗ ಹಳ್ಳಹಿಡಿಯಿತು.

ನಿರಂತರ ಫೌಂಡೇಶನ್ ಅಭಿನಯಿಸಿರುವ “ಕೂಡಲಸಂಗಮ” ದೃಶ್ಯರೂಪಕ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಸವಣ್ಣ ಮಾಡಿಸಿದ ಮೊದಲ ವರ್ಣಸಂಕರವನ್ನು ತಡೆದುಕೊಳ್ಳಲಾಗದ ಅಂದಿನ ಸನಾತನವಾದಿಗಳು ಬಿಜ್ಜಳನ ಆಸ್ಥಾನದಿಂದ ಬಸವಣ್ಣನವರನ್ನು ಹೊರಗೋಡಿಸಿ, ಕೊಂದು, ಅವರು ಐಕ್ಯವಾದರು ಎಂಬ ಸುಳ್ಳನ್ನು ಹಬ್ಬಿಸಿದರು. ನಂತರ ಹರಳಯ್ಯ ಮಧುವರಸರ ಕಣ್ಣು ಕೀಳಿಸಿ, ಎಳೆಹೂಟೆ ಎಳೆಸಿ, ಶೂಲಕ್ಕೇರಿಸಿ ಕೊಂದರು. ಅಂದಿನಿಂದ ಬಸವಣ್ಣನ ಆಶಯ, ಆದರ್ಶ ತಳಹಿಡಿಯಲು ಆರಂಭಿಸಿತ್ತು. ಯಾವ ಜಾತಿಯೂ ಇಲ್ಲ ಎಂದಿದ್ದ ಬಸವಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗುವಂತೆ ಮಾಡಲು ವೈದಿಕರ ಕೈವಾಡಕ್ಕೆ ಸಾಧ್ಯವಾಗಿತ್ತು. ಪರ್ಯಾಯ ವ್ಯವಸ್ಥೆ ಕಟ್ಟಲು ಮುಂದಾಗಿದ್ದ ಬಸವಣ್ಣ ಮತ್ತು ಅವನ ಕನಸಿನ ಕಲ್ಯಾಣವನ್ನು ಇದೇ ಅನಿಷ್ಟ ವ್ಯವಸ್ಥೆಯ ಭಾಗವನ್ನಾಗಿಸಲಾಯಿತು.

ಅಂದಿನಿಂದ ಬಸವಣ್ಣ ಕಾಣೆಯಾಗಿದ್ದಾನೆ. ಕಾಣೆಯಾಗಿರುವ ಬಸವಣ್ಣನನ್ನು ಇಂದಿಗೂ ನಾನಾ ರೂಪಗಳಲ್ಲಿ ಕಂಡುಕೊಳ್ಳುತ್ತಿರುವ ಅನೇಕರು, ಅವನ ಆಶಯದ ಕಾಯಕ ಮತ್ತು ಭಕ್ತಿಯ ಅನುಭವಮಂಟಪವನ್ನು ಸಾಕಾರಗೊಳಿಸಲು ನಮ್ಮ ನಡುವೆಯೇ ಪ್ರಯತ್ನಿಸುತ್ತಿದ್ದಾರೆ. ಈ ಸಾಲಿಗೆ ಸೇರುವ ನಿರಂತರ ರಂಗತಂಡದ ಕೆಲಸ ಕೂಡ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಮೈಸೂರಿನ ಪ್ರಖ್ಯಾತ ಹವ್ಯಾಸಿ ತಂಡ ‘ನಿರಂತರ ಫೌಂಡೇಶನ್, ಮೈಸೂರು’ ಹೆಸರಿಗೆ ಮಾತ್ರ ಹವ್ಯಾಸಿ ತಂಡವಾಗಿದ್ದು, ತನ್ನ ಚಟುವಟಿಕೆಗಳಲ್ಲಿ ಸಂಪೂರ್ಣ ವೃತ್ತಿಪರತೆಯನ್ನು ಕಂಡುಕೊಂಡಿದೆ. ಸಮಾಜ ಮತ್ತು ಯುವಮನಸ್ಸುಗಳೊಟ್ಟಿಗೆ ಮುಖಾಮುಖಿಯಾಗಲು ರಂಗಭೂಮಿಯನ್ನು ಸಾಧನವಾಗಿಸಿಕೊಂಡು ಕಳೆದ 30 ವರ್ಷಗಳಿಂದ ಕನ್ನಡ ರಂಗಭೂಮಿಗೆ ಕೊಡುಗೆ ನೀಡುತ್ತಾ, ಪ್ರಸ್ತುತ ಸಮಾಜದ ವಿದ್ಯಮಾನಗಳು ಮತ್ತು ತಲ್ಲಣಗಳನ್ನೂ ಸಂವೇದನಾಶೀಲತೆಯಿಂದ ಜನರಿಗೆ ತಲುಪಿಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ನೂರಾರು ನಾಟಕಗಳು, ಜಾಥಗಳು, ಸಾಕ್ಷ್ಯಚಿತ್ರಗಳು, ಕಾವ್ಯಕಮ್ಮಟಗಳು, ಓದು, ಚರ್ಚೆ, ಹೋರಾಟ ಮುಂತಾದವುಗಳಲ್ಲಿ ಕ್ರಿಯಾತ್ಮಕವಾಗಿ ಈ ತಂಡ ತೊಡಗಿಸಿಕೊಂಡಿದೆ. ಇಷ್ಟೇ ಅಲ್ಲದೇ, ಕಳೆದ 13 ವರ್ಷಗಳಿಂದ ಪ್ರತಿ ವರ್ಷವೂ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಜರಂಗ’ ಎನ್ನುವ ಒಂದು ತಿಂಗಳ ಉಚಿತ ರಂಗತರಬೇತಿ ಶಿಬಿರವನ್ನು ನಡೆಸುತ್ತಿದೆ. ಜೊತೆಗೆ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಭಾಗವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದ 5 ದಿನಗಳ ‘ನಿರಂತರ ರಂಗ ಉತ್ಸವ’ವನ್ನು ಹಮ್ಮಿಕೊಂಡುಬರುತ್ತಿದೆ.

ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಇಂತಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯುಳ್ಳ ಚಿಂತನೆಯನ್ನು ಪಸರಿಸುವ ಸಲುವಾಗಿ ನಿರಂತರ ಹತ್ತಾರು ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದರ ಭಾಗವಾಗಿಯೇ ಕಳೆದ 13 ವರ್ಷಗಳ ಹಿಂದೆ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ಎನ್ನುವ ದೃಶ್ಯರೂಪಕ ಹುಟ್ಟಿಕೊಂಡಿತು.

ಬಸವಣ್ಣನವರ ವಚನಗಳಿಗೆ ಡಾ. ಸಿ.ಅಶ್ವಥ್ ಮಾಂತ್ರಿಕ ಸ್ಪರ್ಶ ನೀಡಿ, ಜನಪದ ಶೈಲಿಯಲ್ಲಿ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ನಿರಂತರದ ಪ್ರಸಾದ್ ಕುಂದೂರು ಮತ್ತು ಎಂ.ಎಂ.ಸುಗುಣ ಸೇರಿ ಈ ವಚನಗಳಿಗೆ ದೃಶ್ಯ ಮತ್ತು ನೃತ್ಯವನ್ನು ಹದವಾಗಿ ಬೆರೆಸಿದ ಪರಿಣಾಮ 13 ವರ್ಷಗಳ ನಂತರ ಇಂದಿಗೂ ಜನಪ್ರಿಯ ಪ್ರದರ್ಶನವಾಗಿಯೇ ಉಳಿದುಕೊಂಡಿದೆ. ಇದುವರೆಗೂ ಸುಮಾರು 110ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ದೃಶ್ಯರೂಪಕ ದೆಹಲಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ದೃಶ್ಯರೂಪಕದಲ್ಲಿ, ಕಳೆದುಹೋಗಿರುವ 12ನೇ ಶತಮಾನದ ಬಸವಣ್ಣನನ್ನು ಶರಣರು ಹುಡುಕುತ್ತಾ ಸಾಗುತ್ತಾರೆ. ಇವರಿಗೆ ಎದುರಾಗುವ ಬಸವಣ್ಣನ ಅಂಕಿತ ಮತ್ತು ಆದರ್ಶವಾದ ‘ಕೂಡಲಸಂಗಮದೇವ’ನೂ ಬಸವಣ್ಣನನ್ನೇ ಹುಡುಕುತ್ತಿರುವುದನ್ನು ಕಂಡು ಪರಸ್ಪರ ಚಕಿತರಾಗುತ್ತಾರೆ. ಶರಣರು ಮತ್ತು ಕೂಡಲಸಂಗಮದೇವರು ಒಟ್ಟಿಗೆ ಸೇರಿ ಬಸವಣ್ಣನನ್ನು ಹುಡುಕುತ್ತಾ ಹೋಗುವ ದಾರಿಯಲ್ಲಿ, ನಮ್ಮ ಸಮಾಜದ ನೀಚ, ಅನಿಷ್ಠ, ಅನಾಚಾರ, ಡಾಂಭಿಕತೆ, ಶೋಷಣೆಗಳು ದೃಶ್ಯವಾಗಿ ಕಟ್ಟಿಕೊಳ್ಳುತ್ತದೆ. ಇದನ್ನು ಪ್ರಸಾದ್ ಕುಂದೂರು ತಮ್ಮ ತೀಕ್ಷ್ಣವಾದ ಸಾಹಿತ್ಯ ಮತ್ತು ಸಂಭಾಷಣೆಯ ಮೂಲಕ ಮತ್ತಷ್ಟು ಪ್ರಖರಗೊಳಿಸಿದ್ದಾರೆ.

ಇದನ್ನೂ ಓದಿ: ಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ವಚನಗಳಿಗೆ ಭಾರತದ ಜನಪದ, ಬುಡಕಟ್ಟು ಸಂಗೀತ ಶೈಲಿಯನ್ನು ಅಳವಡಿಸಿ ಅಶ್ವಥ್ ಅವರು ವಿಶಿಷ್ಟವಾದ ಸಂಗೀತ ಪ್ರಯೋಗವನ್ನು ಮಾಡಿದ್ದಾರೆ. ಇವೆರಡಕ್ಕೂ ಹೊಂದುವಂತೆ ಕಂಸಾಳೆ, ಬುಡಕಟ್ಟು ನೃತ್ಯ, ಗುಜರಾತ್‍ನ ದಾಂಡಿಯಾ ನೃತ್ಯ, ಕೋಲಾಟ ಮುಂತಾದ ಭಾರತೀಯ ಜನಪದ ಶೈಲಿಗಳ ನೃತ್ಯವನ್ನು ಸಂಯೋಜಿಸಿ ವಚನಗಳಿಗೆ ಹೊಸ ರೂಪಕವನ್ನು ಎಂ.ಎಂ.ಸುಗುಣ ಕಟ್ಟಿಕೊಟ್ಟಿದ್ದಾರೆ. ಸುಮಾರು 1 ಗಂಟೆ 15 ನಿಮಿಷದ ಈ ಪ್ರದರ್ಶನ ವಿನೂತನ ವಸ್ತ್ರಾಲಂಕಾರ, ಬೆಳಕು, ಸಂಗೀತ, ನೃತ್ಯ, ದೃಶ್ಯ ಮತ್ತು ಸಂಭಾಷಣೆಗಳೊಂದಿಗೆ ನೋಡುಗರನ್ನು ಏಕಾಗ್ರಾಚಿತ್ತರನ್ನಾಗಿ ಮಾಡಿ ಮೂಕವಿಸ್ಮಿತರನ್ನಾಗಿಸುವ ಜೊತೆಗೆ ಅವರೊಳಗೆ ಒಂದು ಸಣ್ಣ ಸಂವೇದನೆಯನ್ನು ಚಿಗುರಿಸುತ್ತದೆ.

ಹೀಗೆ, ಕಳೆದು ಹೋಗಿರುವ ಬಸವಣ್ಣನನ್ನು ನಿರಂತರ ತಂಡ ಇಂದಿಗೂ ಹುಡುಕುತ್ತಾ ಬಸವಣ್ಣನವರ ಆದರ್ಶದ ಸಮಾಜದ ಕನಸು ಕಾಣುತ್ತಾ ಸಾಗುತ್ತಿದೆ. ‘ಮಾನವತೆಯ ಏಕತೆಗಾಗಿ’ ನಿರಂತರ ಕೈಗೊಂಡ ಈ ಕೂಡಲಸಂಗಮ ಪಯಣ, ಇಂದಿನ ಸಮಾಜಕ್ಕೆ ಬಸವಣ್ಣ ಮತ್ತು ಆ ಕಾಲಘಟ್ಟದ ಸಾಮಾಜಿಕ ಪರಿವರ್ತನೆಯ ಮಹತ್ವವನ್ನು ತಿಳಿಸುವ ಸಲುವಾಗಿ ಆರಂಭಗೊಂಡು ಆಧುನಿಕ ರಂಗಭೂಮಿಯ ಅನ್ವಯಿಕತೆಯ ಪ್ರಯೋಗವಾಗಿ ಇಂದಿಗೂ ಮುಂದುವರಿಯುತ್ತಲೇ ಇದೆ.


ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...