Homeಕರ್ನಾಟಕಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಬಸವಣ್ಣನವರ ವಚನಗಳಿಗೆ ಸಿ.ಅಶ್ವತ್ ವಿಶಿಷ್ಟ ಶೈಲಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದಕ್ಕೆ ನಿರಂತರ ರಂಗತಂಡ 'ಕೂಡಲಸಂಗಮ' ದೃಶ್ಯರೂಪಕವನ್ನು ಕಟ್ಟಿ, ಬಸವಣ್ಣನ ಕನಸಿನ ಕಲ್ಯಾಣವನ್ನು ಕಣ್ಣಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ.

- Advertisement -
- Advertisement -

ಕೆಲವರದ್ದು ದೇಶಕಾಲಗಳನ್ನು ಮೀರಿದ ವ್ಯಕ್ತಿತ್ವ. ಅಂತಹವರಲ್ಲಿ ಕರ್ನಾಟಕದ ಬಸವಣ್ಣನವರೂ ಒಬ್ಬರು. ಸಾಹಿತ್ಯವನ್ನು ಸಶಕ್ತವಾಗಿ ಬಳಸಿ ಸಾಮಾಜಿಕ ಪರಿವರ್ತನೆ ತರಲು ಪ್ರಯತ್ನಿಸಿ, ‘ವಚನ ಕ್ರಾಂತಿ, ವಚನ ಚಳುವಳಿ’ಯನ್ನು ಆರಂಭಿಸಿದ್ದು ಬಸವಣ್ಣನವರ ಕಾಲಘಟ್ಟದಲ್ಲಿ. ಕರ್ನಾಟಕದಲ್ಲಿ ಘಟಿಸಿದ ಈ ವಿನೂತನ ಚಳವಳಿ ಜಗತ್ತಿನಲ್ಲಿಯೇ ಮೊಟ್ಟಮೊದಲನೆಯದ್ದು. ಅನುಭವ ಮಂಟಪ ಅಥವಾ ಮಹಾಮನೆಯನ್ನು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು ಎನ್ನಲಾಗುತ್ತದೆ. ಆದರೆ ಇಂತಹ ವೈಶಿಷ್ಟಪೂರ್ಣ ಆದರ್ಶ ಎಷ್ಟು ಬೇಗ ಪ್ರವರ್ಧಮಾನಕ್ಕೆ ಬಂತೋ ಅಷ್ಟೇ ಬೇಗ ಹಳ್ಳಹಿಡಿಯಿತು.

ನಿರಂತರ ಫೌಂಡೇಶನ್ ಅಭಿನಯಿಸಿರುವ “ಕೂಡಲಸಂಗಮ” ದೃಶ್ಯರೂಪಕ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಸವಣ್ಣ ಮಾಡಿಸಿದ ಮೊದಲ ವರ್ಣಸಂಕರವನ್ನು ತಡೆದುಕೊಳ್ಳಲಾಗದ ಅಂದಿನ ಸನಾತನವಾದಿಗಳು ಬಿಜ್ಜಳನ ಆಸ್ಥಾನದಿಂದ ಬಸವಣ್ಣನವರನ್ನು ಹೊರಗೋಡಿಸಿ, ಕೊಂದು, ಅವರು ಐಕ್ಯವಾದರು ಎಂಬ ಸುಳ್ಳನ್ನು ಹಬ್ಬಿಸಿದರು. ನಂತರ ಹರಳಯ್ಯ ಮಧುವರಸರ ಕಣ್ಣು ಕೀಳಿಸಿ, ಎಳೆಹೂಟೆ ಎಳೆಸಿ, ಶೂಲಕ್ಕೇರಿಸಿ ಕೊಂದರು. ಅಂದಿನಿಂದ ಬಸವಣ್ಣನ ಆಶಯ, ಆದರ್ಶ ತಳಹಿಡಿಯಲು ಆರಂಭಿಸಿತ್ತು. ಯಾವ ಜಾತಿಯೂ ಇಲ್ಲ ಎಂದಿದ್ದ ಬಸವಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗುವಂತೆ ಮಾಡಲು ವೈದಿಕರ ಕೈವಾಡಕ್ಕೆ ಸಾಧ್ಯವಾಗಿತ್ತು. ಪರ್ಯಾಯ ವ್ಯವಸ್ಥೆ ಕಟ್ಟಲು ಮುಂದಾಗಿದ್ದ ಬಸವಣ್ಣ ಮತ್ತು ಅವನ ಕನಸಿನ ಕಲ್ಯಾಣವನ್ನು ಇದೇ ಅನಿಷ್ಟ ವ್ಯವಸ್ಥೆಯ ಭಾಗವನ್ನಾಗಿಸಲಾಯಿತು.

ಅಂದಿನಿಂದ ಬಸವಣ್ಣ ಕಾಣೆಯಾಗಿದ್ದಾನೆ. ಕಾಣೆಯಾಗಿರುವ ಬಸವಣ್ಣನನ್ನು ಇಂದಿಗೂ ನಾನಾ ರೂಪಗಳಲ್ಲಿ ಕಂಡುಕೊಳ್ಳುತ್ತಿರುವ ಅನೇಕರು, ಅವನ ಆಶಯದ ಕಾಯಕ ಮತ್ತು ಭಕ್ತಿಯ ಅನುಭವಮಂಟಪವನ್ನು ಸಾಕಾರಗೊಳಿಸಲು ನಮ್ಮ ನಡುವೆಯೇ ಪ್ರಯತ್ನಿಸುತ್ತಿದ್ದಾರೆ. ಈ ಸಾಲಿಗೆ ಸೇರುವ ನಿರಂತರ ರಂಗತಂಡದ ಕೆಲಸ ಕೂಡ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಮೈಸೂರಿನ ಪ್ರಖ್ಯಾತ ಹವ್ಯಾಸಿ ತಂಡ ‘ನಿರಂತರ ಫೌಂಡೇಶನ್, ಮೈಸೂರು’ ಹೆಸರಿಗೆ ಮಾತ್ರ ಹವ್ಯಾಸಿ ತಂಡವಾಗಿದ್ದು, ತನ್ನ ಚಟುವಟಿಕೆಗಳಲ್ಲಿ ಸಂಪೂರ್ಣ ವೃತ್ತಿಪರತೆಯನ್ನು ಕಂಡುಕೊಂಡಿದೆ. ಸಮಾಜ ಮತ್ತು ಯುವಮನಸ್ಸುಗಳೊಟ್ಟಿಗೆ ಮುಖಾಮುಖಿಯಾಗಲು ರಂಗಭೂಮಿಯನ್ನು ಸಾಧನವಾಗಿಸಿಕೊಂಡು ಕಳೆದ 30 ವರ್ಷಗಳಿಂದ ಕನ್ನಡ ರಂಗಭೂಮಿಗೆ ಕೊಡುಗೆ ನೀಡುತ್ತಾ, ಪ್ರಸ್ತುತ ಸಮಾಜದ ವಿದ್ಯಮಾನಗಳು ಮತ್ತು ತಲ್ಲಣಗಳನ್ನೂ ಸಂವೇದನಾಶೀಲತೆಯಿಂದ ಜನರಿಗೆ ತಲುಪಿಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ನೂರಾರು ನಾಟಕಗಳು, ಜಾಥಗಳು, ಸಾಕ್ಷ್ಯಚಿತ್ರಗಳು, ಕಾವ್ಯಕಮ್ಮಟಗಳು, ಓದು, ಚರ್ಚೆ, ಹೋರಾಟ ಮುಂತಾದವುಗಳಲ್ಲಿ ಕ್ರಿಯಾತ್ಮಕವಾಗಿ ಈ ತಂಡ ತೊಡಗಿಸಿಕೊಂಡಿದೆ. ಇಷ್ಟೇ ಅಲ್ಲದೇ, ಕಳೆದ 13 ವರ್ಷಗಳಿಂದ ಪ್ರತಿ ವರ್ಷವೂ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಜರಂಗ’ ಎನ್ನುವ ಒಂದು ತಿಂಗಳ ಉಚಿತ ರಂಗತರಬೇತಿ ಶಿಬಿರವನ್ನು ನಡೆಸುತ್ತಿದೆ. ಜೊತೆಗೆ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಭಾಗವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದ 5 ದಿನಗಳ ‘ನಿರಂತರ ರಂಗ ಉತ್ಸವ’ವನ್ನು ಹಮ್ಮಿಕೊಂಡುಬರುತ್ತಿದೆ.

ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಇಂತಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯುಳ್ಳ ಚಿಂತನೆಯನ್ನು ಪಸರಿಸುವ ಸಲುವಾಗಿ ನಿರಂತರ ಹತ್ತಾರು ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದರ ಭಾಗವಾಗಿಯೇ ಕಳೆದ 13 ವರ್ಷಗಳ ಹಿಂದೆ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ಎನ್ನುವ ದೃಶ್ಯರೂಪಕ ಹುಟ್ಟಿಕೊಂಡಿತು.

ಬಸವಣ್ಣನವರ ವಚನಗಳಿಗೆ ಡಾ. ಸಿ.ಅಶ್ವಥ್ ಮಾಂತ್ರಿಕ ಸ್ಪರ್ಶ ನೀಡಿ, ಜನಪದ ಶೈಲಿಯಲ್ಲಿ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ನಿರಂತರದ ಪ್ರಸಾದ್ ಕುಂದೂರು ಮತ್ತು ಎಂ.ಎಂ.ಸುಗುಣ ಸೇರಿ ಈ ವಚನಗಳಿಗೆ ದೃಶ್ಯ ಮತ್ತು ನೃತ್ಯವನ್ನು ಹದವಾಗಿ ಬೆರೆಸಿದ ಪರಿಣಾಮ 13 ವರ್ಷಗಳ ನಂತರ ಇಂದಿಗೂ ಜನಪ್ರಿಯ ಪ್ರದರ್ಶನವಾಗಿಯೇ ಉಳಿದುಕೊಂಡಿದೆ. ಇದುವರೆಗೂ ಸುಮಾರು 110ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ದೃಶ್ಯರೂಪಕ ದೆಹಲಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ದೃಶ್ಯರೂಪಕದಲ್ಲಿ, ಕಳೆದುಹೋಗಿರುವ 12ನೇ ಶತಮಾನದ ಬಸವಣ್ಣನನ್ನು ಶರಣರು ಹುಡುಕುತ್ತಾ ಸಾಗುತ್ತಾರೆ. ಇವರಿಗೆ ಎದುರಾಗುವ ಬಸವಣ್ಣನ ಅಂಕಿತ ಮತ್ತು ಆದರ್ಶವಾದ ‘ಕೂಡಲಸಂಗಮದೇವ’ನೂ ಬಸವಣ್ಣನನ್ನೇ ಹುಡುಕುತ್ತಿರುವುದನ್ನು ಕಂಡು ಪರಸ್ಪರ ಚಕಿತರಾಗುತ್ತಾರೆ. ಶರಣರು ಮತ್ತು ಕೂಡಲಸಂಗಮದೇವರು ಒಟ್ಟಿಗೆ ಸೇರಿ ಬಸವಣ್ಣನನ್ನು ಹುಡುಕುತ್ತಾ ಹೋಗುವ ದಾರಿಯಲ್ಲಿ, ನಮ್ಮ ಸಮಾಜದ ನೀಚ, ಅನಿಷ್ಠ, ಅನಾಚಾರ, ಡಾಂಭಿಕತೆ, ಶೋಷಣೆಗಳು ದೃಶ್ಯವಾಗಿ ಕಟ್ಟಿಕೊಳ್ಳುತ್ತದೆ. ಇದನ್ನು ಪ್ರಸಾದ್ ಕುಂದೂರು ತಮ್ಮ ತೀಕ್ಷ್ಣವಾದ ಸಾಹಿತ್ಯ ಮತ್ತು ಸಂಭಾಷಣೆಯ ಮೂಲಕ ಮತ್ತಷ್ಟು ಪ್ರಖರಗೊಳಿಸಿದ್ದಾರೆ.

ಇದನ್ನೂ ಓದಿ: ಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ವಚನಗಳಿಗೆ ಭಾರತದ ಜನಪದ, ಬುಡಕಟ್ಟು ಸಂಗೀತ ಶೈಲಿಯನ್ನು ಅಳವಡಿಸಿ ಅಶ್ವಥ್ ಅವರು ವಿಶಿಷ್ಟವಾದ ಸಂಗೀತ ಪ್ರಯೋಗವನ್ನು ಮಾಡಿದ್ದಾರೆ. ಇವೆರಡಕ್ಕೂ ಹೊಂದುವಂತೆ ಕಂಸಾಳೆ, ಬುಡಕಟ್ಟು ನೃತ್ಯ, ಗುಜರಾತ್‍ನ ದಾಂಡಿಯಾ ನೃತ್ಯ, ಕೋಲಾಟ ಮುಂತಾದ ಭಾರತೀಯ ಜನಪದ ಶೈಲಿಗಳ ನೃತ್ಯವನ್ನು ಸಂಯೋಜಿಸಿ ವಚನಗಳಿಗೆ ಹೊಸ ರೂಪಕವನ್ನು ಎಂ.ಎಂ.ಸುಗುಣ ಕಟ್ಟಿಕೊಟ್ಟಿದ್ದಾರೆ. ಸುಮಾರು 1 ಗಂಟೆ 15 ನಿಮಿಷದ ಈ ಪ್ರದರ್ಶನ ವಿನೂತನ ವಸ್ತ್ರಾಲಂಕಾರ, ಬೆಳಕು, ಸಂಗೀತ, ನೃತ್ಯ, ದೃಶ್ಯ ಮತ್ತು ಸಂಭಾಷಣೆಗಳೊಂದಿಗೆ ನೋಡುಗರನ್ನು ಏಕಾಗ್ರಾಚಿತ್ತರನ್ನಾಗಿ ಮಾಡಿ ಮೂಕವಿಸ್ಮಿತರನ್ನಾಗಿಸುವ ಜೊತೆಗೆ ಅವರೊಳಗೆ ಒಂದು ಸಣ್ಣ ಸಂವೇದನೆಯನ್ನು ಚಿಗುರಿಸುತ್ತದೆ.

ಹೀಗೆ, ಕಳೆದು ಹೋಗಿರುವ ಬಸವಣ್ಣನನ್ನು ನಿರಂತರ ತಂಡ ಇಂದಿಗೂ ಹುಡುಕುತ್ತಾ ಬಸವಣ್ಣನವರ ಆದರ್ಶದ ಸಮಾಜದ ಕನಸು ಕಾಣುತ್ತಾ ಸಾಗುತ್ತಿದೆ. ‘ಮಾನವತೆಯ ಏಕತೆಗಾಗಿ’ ನಿರಂತರ ಕೈಗೊಂಡ ಈ ಕೂಡಲಸಂಗಮ ಪಯಣ, ಇಂದಿನ ಸಮಾಜಕ್ಕೆ ಬಸವಣ್ಣ ಮತ್ತು ಆ ಕಾಲಘಟ್ಟದ ಸಾಮಾಜಿಕ ಪರಿವರ್ತನೆಯ ಮಹತ್ವವನ್ನು ತಿಳಿಸುವ ಸಲುವಾಗಿ ಆರಂಭಗೊಂಡು ಆಧುನಿಕ ರಂಗಭೂಮಿಯ ಅನ್ವಯಿಕತೆಯ ಪ್ರಯೋಗವಾಗಿ ಇಂದಿಗೂ ಮುಂದುವರಿಯುತ್ತಲೇ ಇದೆ.


ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...