Homeಕರ್ನಾಟಕಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಬಸವಣ್ಣನವರ ವಚನಗಳಿಗೆ ಸಿ.ಅಶ್ವತ್ ವಿಶಿಷ್ಟ ಶೈಲಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದಕ್ಕೆ ನಿರಂತರ ರಂಗತಂಡ 'ಕೂಡಲಸಂಗಮ' ದೃಶ್ಯರೂಪಕವನ್ನು ಕಟ್ಟಿ, ಬಸವಣ್ಣನ ಕನಸಿನ ಕಲ್ಯಾಣವನ್ನು ಕಣ್ಣಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ.

- Advertisement -
- Advertisement -

ಕೆಲವರದ್ದು ದೇಶಕಾಲಗಳನ್ನು ಮೀರಿದ ವ್ಯಕ್ತಿತ್ವ. ಅಂತಹವರಲ್ಲಿ ಕರ್ನಾಟಕದ ಬಸವಣ್ಣನವರೂ ಒಬ್ಬರು. ಸಾಹಿತ್ಯವನ್ನು ಸಶಕ್ತವಾಗಿ ಬಳಸಿ ಸಾಮಾಜಿಕ ಪರಿವರ್ತನೆ ತರಲು ಪ್ರಯತ್ನಿಸಿ, ‘ವಚನ ಕ್ರಾಂತಿ, ವಚನ ಚಳುವಳಿ’ಯನ್ನು ಆರಂಭಿಸಿದ್ದು ಬಸವಣ್ಣನವರ ಕಾಲಘಟ್ಟದಲ್ಲಿ. ಕರ್ನಾಟಕದಲ್ಲಿ ಘಟಿಸಿದ ಈ ವಿನೂತನ ಚಳವಳಿ ಜಗತ್ತಿನಲ್ಲಿಯೇ ಮೊಟ್ಟಮೊದಲನೆಯದ್ದು. ಅನುಭವ ಮಂಟಪ ಅಥವಾ ಮಹಾಮನೆಯನ್ನು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು ಎನ್ನಲಾಗುತ್ತದೆ. ಆದರೆ ಇಂತಹ ವೈಶಿಷ್ಟಪೂರ್ಣ ಆದರ್ಶ ಎಷ್ಟು ಬೇಗ ಪ್ರವರ್ಧಮಾನಕ್ಕೆ ಬಂತೋ ಅಷ್ಟೇ ಬೇಗ ಹಳ್ಳಹಿಡಿಯಿತು.

ನಿರಂತರ ಫೌಂಡೇಶನ್ ಅಭಿನಯಿಸಿರುವ “ಕೂಡಲಸಂಗಮ” ದೃಶ್ಯರೂಪಕ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಸವಣ್ಣ ಮಾಡಿಸಿದ ಮೊದಲ ವರ್ಣಸಂಕರವನ್ನು ತಡೆದುಕೊಳ್ಳಲಾಗದ ಅಂದಿನ ಸನಾತನವಾದಿಗಳು ಬಿಜ್ಜಳನ ಆಸ್ಥಾನದಿಂದ ಬಸವಣ್ಣನವರನ್ನು ಹೊರಗೋಡಿಸಿ, ಕೊಂದು, ಅವರು ಐಕ್ಯವಾದರು ಎಂಬ ಸುಳ್ಳನ್ನು ಹಬ್ಬಿಸಿದರು. ನಂತರ ಹರಳಯ್ಯ ಮಧುವರಸರ ಕಣ್ಣು ಕೀಳಿಸಿ, ಎಳೆಹೂಟೆ ಎಳೆಸಿ, ಶೂಲಕ್ಕೇರಿಸಿ ಕೊಂದರು. ಅಂದಿನಿಂದ ಬಸವಣ್ಣನ ಆಶಯ, ಆದರ್ಶ ತಳಹಿಡಿಯಲು ಆರಂಭಿಸಿತ್ತು. ಯಾವ ಜಾತಿಯೂ ಇಲ್ಲ ಎಂದಿದ್ದ ಬಸವಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗುವಂತೆ ಮಾಡಲು ವೈದಿಕರ ಕೈವಾಡಕ್ಕೆ ಸಾಧ್ಯವಾಗಿತ್ತು. ಪರ್ಯಾಯ ವ್ಯವಸ್ಥೆ ಕಟ್ಟಲು ಮುಂದಾಗಿದ್ದ ಬಸವಣ್ಣ ಮತ್ತು ಅವನ ಕನಸಿನ ಕಲ್ಯಾಣವನ್ನು ಇದೇ ಅನಿಷ್ಟ ವ್ಯವಸ್ಥೆಯ ಭಾಗವನ್ನಾಗಿಸಲಾಯಿತು.

ಅಂದಿನಿಂದ ಬಸವಣ್ಣ ಕಾಣೆಯಾಗಿದ್ದಾನೆ. ಕಾಣೆಯಾಗಿರುವ ಬಸವಣ್ಣನನ್ನು ಇಂದಿಗೂ ನಾನಾ ರೂಪಗಳಲ್ಲಿ ಕಂಡುಕೊಳ್ಳುತ್ತಿರುವ ಅನೇಕರು, ಅವನ ಆಶಯದ ಕಾಯಕ ಮತ್ತು ಭಕ್ತಿಯ ಅನುಭವಮಂಟಪವನ್ನು ಸಾಕಾರಗೊಳಿಸಲು ನಮ್ಮ ನಡುವೆಯೇ ಪ್ರಯತ್ನಿಸುತ್ತಿದ್ದಾರೆ. ಈ ಸಾಲಿಗೆ ಸೇರುವ ನಿರಂತರ ರಂಗತಂಡದ ಕೆಲಸ ಕೂಡ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಮೈಸೂರಿನ ಪ್ರಖ್ಯಾತ ಹವ್ಯಾಸಿ ತಂಡ ‘ನಿರಂತರ ಫೌಂಡೇಶನ್, ಮೈಸೂರು’ ಹೆಸರಿಗೆ ಮಾತ್ರ ಹವ್ಯಾಸಿ ತಂಡವಾಗಿದ್ದು, ತನ್ನ ಚಟುವಟಿಕೆಗಳಲ್ಲಿ ಸಂಪೂರ್ಣ ವೃತ್ತಿಪರತೆಯನ್ನು ಕಂಡುಕೊಂಡಿದೆ. ಸಮಾಜ ಮತ್ತು ಯುವಮನಸ್ಸುಗಳೊಟ್ಟಿಗೆ ಮುಖಾಮುಖಿಯಾಗಲು ರಂಗಭೂಮಿಯನ್ನು ಸಾಧನವಾಗಿಸಿಕೊಂಡು ಕಳೆದ 30 ವರ್ಷಗಳಿಂದ ಕನ್ನಡ ರಂಗಭೂಮಿಗೆ ಕೊಡುಗೆ ನೀಡುತ್ತಾ, ಪ್ರಸ್ತುತ ಸಮಾಜದ ವಿದ್ಯಮಾನಗಳು ಮತ್ತು ತಲ್ಲಣಗಳನ್ನೂ ಸಂವೇದನಾಶೀಲತೆಯಿಂದ ಜನರಿಗೆ ತಲುಪಿಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ನೂರಾರು ನಾಟಕಗಳು, ಜಾಥಗಳು, ಸಾಕ್ಷ್ಯಚಿತ್ರಗಳು, ಕಾವ್ಯಕಮ್ಮಟಗಳು, ಓದು, ಚರ್ಚೆ, ಹೋರಾಟ ಮುಂತಾದವುಗಳಲ್ಲಿ ಕ್ರಿಯಾತ್ಮಕವಾಗಿ ಈ ತಂಡ ತೊಡಗಿಸಿಕೊಂಡಿದೆ. ಇಷ್ಟೇ ಅಲ್ಲದೇ, ಕಳೆದ 13 ವರ್ಷಗಳಿಂದ ಪ್ರತಿ ವರ್ಷವೂ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಜರಂಗ’ ಎನ್ನುವ ಒಂದು ತಿಂಗಳ ಉಚಿತ ರಂಗತರಬೇತಿ ಶಿಬಿರವನ್ನು ನಡೆಸುತ್ತಿದೆ. ಜೊತೆಗೆ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಭಾಗವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದ 5 ದಿನಗಳ ‘ನಿರಂತರ ರಂಗ ಉತ್ಸವ’ವನ್ನು ಹಮ್ಮಿಕೊಂಡುಬರುತ್ತಿದೆ.

ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಇಂತಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯುಳ್ಳ ಚಿಂತನೆಯನ್ನು ಪಸರಿಸುವ ಸಲುವಾಗಿ ನಿರಂತರ ಹತ್ತಾರು ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದರ ಭಾಗವಾಗಿಯೇ ಕಳೆದ 13 ವರ್ಷಗಳ ಹಿಂದೆ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ಎನ್ನುವ ದೃಶ್ಯರೂಪಕ ಹುಟ್ಟಿಕೊಂಡಿತು.

ಬಸವಣ್ಣನವರ ವಚನಗಳಿಗೆ ಡಾ. ಸಿ.ಅಶ್ವಥ್ ಮಾಂತ್ರಿಕ ಸ್ಪರ್ಶ ನೀಡಿ, ಜನಪದ ಶೈಲಿಯಲ್ಲಿ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ನಿರಂತರದ ಪ್ರಸಾದ್ ಕುಂದೂರು ಮತ್ತು ಎಂ.ಎಂ.ಸುಗುಣ ಸೇರಿ ಈ ವಚನಗಳಿಗೆ ದೃಶ್ಯ ಮತ್ತು ನೃತ್ಯವನ್ನು ಹದವಾಗಿ ಬೆರೆಸಿದ ಪರಿಣಾಮ 13 ವರ್ಷಗಳ ನಂತರ ಇಂದಿಗೂ ಜನಪ್ರಿಯ ಪ್ರದರ್ಶನವಾಗಿಯೇ ಉಳಿದುಕೊಂಡಿದೆ. ಇದುವರೆಗೂ ಸುಮಾರು 110ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ದೃಶ್ಯರೂಪಕ ದೆಹಲಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ದೃಶ್ಯರೂಪಕದಲ್ಲಿ, ಕಳೆದುಹೋಗಿರುವ 12ನೇ ಶತಮಾನದ ಬಸವಣ್ಣನನ್ನು ಶರಣರು ಹುಡುಕುತ್ತಾ ಸಾಗುತ್ತಾರೆ. ಇವರಿಗೆ ಎದುರಾಗುವ ಬಸವಣ್ಣನ ಅಂಕಿತ ಮತ್ತು ಆದರ್ಶವಾದ ‘ಕೂಡಲಸಂಗಮದೇವ’ನೂ ಬಸವಣ್ಣನನ್ನೇ ಹುಡುಕುತ್ತಿರುವುದನ್ನು ಕಂಡು ಪರಸ್ಪರ ಚಕಿತರಾಗುತ್ತಾರೆ. ಶರಣರು ಮತ್ತು ಕೂಡಲಸಂಗಮದೇವರು ಒಟ್ಟಿಗೆ ಸೇರಿ ಬಸವಣ್ಣನನ್ನು ಹುಡುಕುತ್ತಾ ಹೋಗುವ ದಾರಿಯಲ್ಲಿ, ನಮ್ಮ ಸಮಾಜದ ನೀಚ, ಅನಿಷ್ಠ, ಅನಾಚಾರ, ಡಾಂಭಿಕತೆ, ಶೋಷಣೆಗಳು ದೃಶ್ಯವಾಗಿ ಕಟ್ಟಿಕೊಳ್ಳುತ್ತದೆ. ಇದನ್ನು ಪ್ರಸಾದ್ ಕುಂದೂರು ತಮ್ಮ ತೀಕ್ಷ್ಣವಾದ ಸಾಹಿತ್ಯ ಮತ್ತು ಸಂಭಾಷಣೆಯ ಮೂಲಕ ಮತ್ತಷ್ಟು ಪ್ರಖರಗೊಳಿಸಿದ್ದಾರೆ.

ಇದನ್ನೂ ಓದಿ: ಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ವಚನಗಳಿಗೆ ಭಾರತದ ಜನಪದ, ಬುಡಕಟ್ಟು ಸಂಗೀತ ಶೈಲಿಯನ್ನು ಅಳವಡಿಸಿ ಅಶ್ವಥ್ ಅವರು ವಿಶಿಷ್ಟವಾದ ಸಂಗೀತ ಪ್ರಯೋಗವನ್ನು ಮಾಡಿದ್ದಾರೆ. ಇವೆರಡಕ್ಕೂ ಹೊಂದುವಂತೆ ಕಂಸಾಳೆ, ಬುಡಕಟ್ಟು ನೃತ್ಯ, ಗುಜರಾತ್‍ನ ದಾಂಡಿಯಾ ನೃತ್ಯ, ಕೋಲಾಟ ಮುಂತಾದ ಭಾರತೀಯ ಜನಪದ ಶೈಲಿಗಳ ನೃತ್ಯವನ್ನು ಸಂಯೋಜಿಸಿ ವಚನಗಳಿಗೆ ಹೊಸ ರೂಪಕವನ್ನು ಎಂ.ಎಂ.ಸುಗುಣ ಕಟ್ಟಿಕೊಟ್ಟಿದ್ದಾರೆ. ಸುಮಾರು 1 ಗಂಟೆ 15 ನಿಮಿಷದ ಈ ಪ್ರದರ್ಶನ ವಿನೂತನ ವಸ್ತ್ರಾಲಂಕಾರ, ಬೆಳಕು, ಸಂಗೀತ, ನೃತ್ಯ, ದೃಶ್ಯ ಮತ್ತು ಸಂಭಾಷಣೆಗಳೊಂದಿಗೆ ನೋಡುಗರನ್ನು ಏಕಾಗ್ರಾಚಿತ್ತರನ್ನಾಗಿ ಮಾಡಿ ಮೂಕವಿಸ್ಮಿತರನ್ನಾಗಿಸುವ ಜೊತೆಗೆ ಅವರೊಳಗೆ ಒಂದು ಸಣ್ಣ ಸಂವೇದನೆಯನ್ನು ಚಿಗುರಿಸುತ್ತದೆ.

ಹೀಗೆ, ಕಳೆದು ಹೋಗಿರುವ ಬಸವಣ್ಣನನ್ನು ನಿರಂತರ ತಂಡ ಇಂದಿಗೂ ಹುಡುಕುತ್ತಾ ಬಸವಣ್ಣನವರ ಆದರ್ಶದ ಸಮಾಜದ ಕನಸು ಕಾಣುತ್ತಾ ಸಾಗುತ್ತಿದೆ. ‘ಮಾನವತೆಯ ಏಕತೆಗಾಗಿ’ ನಿರಂತರ ಕೈಗೊಂಡ ಈ ಕೂಡಲಸಂಗಮ ಪಯಣ, ಇಂದಿನ ಸಮಾಜಕ್ಕೆ ಬಸವಣ್ಣ ಮತ್ತು ಆ ಕಾಲಘಟ್ಟದ ಸಾಮಾಜಿಕ ಪರಿವರ್ತನೆಯ ಮಹತ್ವವನ್ನು ತಿಳಿಸುವ ಸಲುವಾಗಿ ಆರಂಭಗೊಂಡು ಆಧುನಿಕ ರಂಗಭೂಮಿಯ ಅನ್ವಯಿಕತೆಯ ಪ್ರಯೋಗವಾಗಿ ಇಂದಿಗೂ ಮುಂದುವರಿಯುತ್ತಲೇ ಇದೆ.


ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...