Homeಕರ್ನಾಟಕನೋಡಿ ಸ್ವಾಮಿ ನಮ್ಮ ಸ್ಥಿತಿನಾ..! ನಮಗೆ ಬಂದಿರುವ ಕಷ್ಟ ಮತ್ಯಾರಿಗೂ ಬರಬೇಡಪ್ಪ

ನೋಡಿ ಸ್ವಾಮಿ ನಮ್ಮ ಸ್ಥಿತಿನಾ..! ನಮಗೆ ಬಂದಿರುವ ಕಷ್ಟ ಮತ್ಯಾರಿಗೂ ಬರಬೇಡಪ್ಪ

- Advertisement -
- Advertisement -

ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಮಾಹಿತಿ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ನಗರ. ಭಾರತದ ಅತ್ಯುತ್ತಮ ಜೀವನಯೋಗ್ಯ ನಗರಗಳಲ್ಲೊಂದು. ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ನಗರವೂ ಹೌದು.  ಅದ್ರೆ ಇಲ್ಲಿರುವ ನಮ್ಮ ಸ್ಥಿತಿ ನೋಡಿದರೆ ಜನರು ಮುಂದಕ್ಕೆ ಹೆಜ್ಜೆ ಹಾಕಲು ಭಯಪಡುವಂತಾಗಿದೆ. ಅವರನ್ನು ನಾನೇ ಅಪೋಶನ ತೆಗೆದುಕೊಳ್ಳುವಂತಾಗಿರುವುದು ದುರಂತ.

ಅಂದ ಹಾಗೆ ನಮ್ಮ ಹೆಸರು ಪುಟ್ಪಾತ್, ಕನ್ನಡದಲ್ಲಿ ಪಾದಚಾರಿ ಮಾರ್ಗ ಎಂದು ಕರೆಯುತ್ತಾರೆ. ಪ್ರತಿ ಮುಖ್ಯ ರಸ್ತೆಯ ಪಕ್ಕದಲ್ಲಿ ನಾವಿರುತ್ತೇವೆ. ವಾಹನಗಳಿಂದ ಸುರಕ್ಷಿತವಾಗಿ ಜನ ನಮ್ಮನ್ನು ಬಳಸವಹುದಾಗಿದೆ. ಆದರೆ ನಮ್ಮ ಪರಿಸ್ಥಿತಿಯೋ ತೀರಾ ಹದಗೆಟ್ಟಿದೆ.

ಇತ್ತೀಚಿಗೆ ಅಷ್ಟೇ ಕಾಮಗಾರಿ ನಡೆಸಿದ್ದಾರೆ ಆಗಲೇ ಸಿಮೆಂಟ್ ಬ್ಲಾಕ್‍ಗಳು ಕಿತ್ತು ಹೋಗಿವೆ. ಹಾಸಿರುವ ಬಂಡೆಗಳು  ಮುರಿದು ಬಿದ್ದಿದೆ. ನಮ್ಮ ಮೇಲೆ ಬಿದ್ದಿರುವ ಮರದ ರೆಂಬೆ ಕೊಂಬೆಗಳನ್ನು ತೆರೆವುಗೊಳಿಸಿಲ್ಲ. ಕೆಲವೊಂದು ವಾರ್ಡ್‍ಗಳಲ್ಲಿ ನಾವೇ ಕಸದ ಬುಟ್ಟಿಗಳಾಗಿದ್ದೇವೆ. ಹೇಗಿದೆ ನೋಡಿ ಸ್ವಾಮಿ ನಮ್ಮ ಪರಿಸ್ಥಿತಿ. ನಮ್ಮ ಮೇಲೆ ಖುಷಿಯಿಂದ ಹೆಜ್ಜೆ ಹಾಕಬೇಕಾದವರು ಕಸದ ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಹೋಗುವ ದುಸ್ಥಿತಿ ಬಂದಿದೆ. ಇದಕ್ಕೆಲ್ಲಾ ಮುಕ್ತಿ ಯಾವಾಗಪ್ಪಾ…..

 

ನಮ್ಮನ್ನ ಸರಿಯಾಗಿ ನೋಡಕೊಳ್ಳಬೇಕು, ಜನರು ಸುಖಕರವಾಗಿ ನಮ್ಮನ್ನು ಬಳಸಬೇಕು ಎಂದು ನಮ್ಮನ್ನು ಬಿಬಿಎಂಪಿಗೆ ಒಪ್ಪಿಸಿದ್ದಾರೆ. ಆದರೆ, ನಮ್ಮ ಪರಿಸ್ಥಿತಿಯನ್ನು ಕಂಡರೆ ಅವರು ಏನು ಕಾರ್ಯನಿರ್ವಹಿಸುತ್ತಿದ್ದರೋ ಎಂಬ ಅನುಮಾನ ಕಾಡ್ತಿದೆ.

ವಾಹನಗಳ ಪಾರ್ಕಿಂಗ್ ಸ್ಥಳ: ಪಾದಚಾರಿಗಳಿಗೆ ಮಾರ್ಗವಾಗಬೇಕಾದ ನಾವು ವಾರ್ಡ್‍ಗಳ ಒಳಗಡೆ ಹೇಗೆ ಬೇಕೋ ಹಾಗೇ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸ್ಥಳವಾಗಿದ್ದೇವೆ. ಹಾಗಾಗಿ ಇವರ ಹಾವಳಿ ಹೆಚ್ಚಾದಾಗ ಜನರು ನಮ್ಮನ್ನು ಹೇಗೆ ಬಳಸಲು ಸಾಧ್ಯ ಹೇಳಿ.

ಉದ್ಯಮ ನಗರಿಗೆ ವಾಹನ ದಟ್ಟಣೆ ಸಾಮಾನ್ಯ ಪದ. ಅದು ಗೊತ್ತಿದ್ದು ಸಹ ಈ ದ್ವಿಚಕ್ರ ವಾಹನ ಸವಾರರು ವಾಹನ ದಟ್ಟಣೆ ಉಂಟಾದಾಗ ನಮ್ಮ ಮೇಲೆಯೇ ಸವಾರಿ ನಡೆಸ್ತಾರೆ. ಒಮ್ಮೊಮ್ಮೆ ಸವಾರಿಯಲ್ಲಿ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿರುವ ಉದಾಹರಣೆಗಳು ಇವೆ. ಹಾಗಾಗಿ ಇದನ್ನು ತಪ್ಪಿಸಬೇಕು ಎಂದು ಅಲ್ಲಿಲ್ಲ ಬಿಬಿಎಂಪಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ. ಆದರೂ ಸಹ ನಮ್ಮ ಮೇಲೆ ವಾಹನಗಳನ್ನು ಓಡಿಸುತ್ತಾರೆ ಏನು ಮಾಡೋಣ.

ನಮ್ಮ ಸ್ಥಿತಿ ಹೇಗಿದೆ ಅಂದರೆ ಯಾರಾದರೂ ನಮ್ಮ ಮಾರ್ಗದಲ್ಲಿ ಸಾಗುತ್ತಾ ಮೊಬೈಲ್ ಏನಾದರೂ ನೋಡಿಕೊಂಡು ಹೋದರಂತೂ
ಮುಖ ಮೂತಿ ಕಿತ್ತುಹೋಗುವುದಂತೂ ಗ್ಯಾರಂಟಿ.

ಇನ್ನು ಯಾರಾದರೂ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಂಡರಂತೂ ನಾವೇ ಕಾಮಾಗಾರಿಗೆ ಬೇಕಾದ ಕಲ್ಲು, ಮರಳು, ಜಲ್ಲಿ ಸಂಗ್ರಹಿಸುವ ಗೋದಾಮುಗಳು. ಅವರಿಗೆ ಹೇಳುವವರಿಲ್ಲ ಕೇಳುವವರಿಲ್ಲ. ಜನರು ಅಷ್ಟೇ ಯಾರೂ ಪ್ರಶ್ನಿಸದೆ ನಮಗ್ಯಾಕಪ್ಪ ನಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಂಡು ಹೋಗೋಣ ಎಂದು ಮುಂದುವರೆಯುತ್ತಾರೆ.

ಬಯಲು ಶೌಚಾಲಯ: ಪಾವತಿಸಿ ನಮ್ಮನ್ನು ಬಳಸಿ ಎಂದು ದೊಡ್ಡ ದೊಡ್ಡ ಬೋರ್ಡ್‍ಗಳನ್ನು ಹಾಕಿಕೊಂಡು ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಆದರೆ, ಅದನ್ನು ಬಳಸದೇ ಎಲ್ಲಾದರೂ ಗೋಡೆ ಸಿಕ್ಕರೆ ಸಾಕು, ನನ್ನ ಮೇಲೆ ನಿಂತು ಮಜ್ಜನ ಮಾಡಿಸುವ ಪುಣ್ಯಾತ್ಮರು ಇದ್ದಾರೆ. ಆ ವಾಸನೆ ಕುಡಿದು ಅಲ್ಲಿ ಯಾರಾದರೂ ಓಡಾಡಲು ಸಾಧ್ಯವೇ ನೀವೇ ಹೇಳಿ.

ಬೀದಿ ಬದಿ ವ್ಯಾಪಾರಿಗಳು: ಹೊಟ್ಟೆ ಪಾಡಿಗಾಗಿ ಅನೇಕ ವರ್ಷಗಳಿಂದ ನನ್ನ ಮೇಲೆಯೇ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಹೋಗಲಿ ಹೇಗೋ ಮಾಡಿಕೊಂಡು ಹೋಗಲಿ ಎಂದರೆ ಕೆಲವು ಜನರ ಓಡಾಡಕ್ಕೂ ತೊಂದರೆ ಮಾಡುತ್ತಿದ್ದಾರೆ. ಬಿಬಿಎಂಪಿ ಅನೇಕ ವರ್ಷಗಳಿಂದ ಬೀದಿ ವ್ಯಾಪಾರಿಗಳಿಗೆ ಮತ್ತೊಂದು ವ್ಯವಸ್ಥೆ ಮಾಡಿಕೊಟ್ಟಿದ್ದರು ಈ ಜನರಿಗೆ ಅಲ್ಲಿಗೆ ಹೋಗುವ ಮನಸ್ಸಿಲ್ಲ. ಅವರು ನನ್ನ ಮೇಲೆನೆ ವ್ಯಾಪಾರ ಮಾಡಬ್ಬೇಕು ಎಂದು ಕೂರ್ತಾರೆ. ನಂತರ ಕಸವನ್ನೆಲ್ಲಾ ಅಲ್ಲೇ ಹಾಕಿ ಹೋಗುತ್ತಾರೆ. ಅದನ್ನು ಒಮ್ಮೊಮ್ಮೆ ಬಿಬಿಎಂಪಿ ಅವರು ಕಸ ಎತ್ತುತ್ತಾರೆ ಇನ್ನೊಂದು ಸಲ ಎತ್ತುವುದಿಲ್ಲ. ಹಾಗಾಗಿ ನಮ್ಮ ಮೇಲೆ ಜನರು ಹೇಗೆ ಎಲ್ಲಾ ಕಡೆ ಸುಲಲಿತವಾಗಿ ಓಡಾಡಲು ಸಾಧ್ಯ ಹೇಳಿ.

ಒಟ್ಟಾರೆಯಾಗಿ ಬಿಬಿಎಂಪಿ ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನಹರಿಸಿದರೆ, ನೀವು ಪಾದಾಚಾರಿಗಳು ಎಚ್ಚೆತ್ತುಕೊಂಡು ಕಸ ಬಿಸಾಡದೇ, ಗಲೀಜು ಮಾಡದೆ ನಮ್ಮನ್ನು ಶುಚಿಯಾಗಿಟ್ಟುಕೊಂಡರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂಬುದು ನಮ್ಮ ಪಾದಚಾರಿ ಮಾರ್ಗದ ಆಶಯ.

ಬನ್ನಿ ನಮ್ಮ ಕುರಿತು ಜನಸಾಮಾನ್ಯರು ಏನು ಹೇಳಿದ್ದಾರೆ ಎಂದು ನೋಡೋಣ.

ಪಾದಚಾರಿ ಮಾರ್ಗವನ್ನು ಗಾಡಿಗಳು ಮತ್ತು ಬೀದಿ ವ್ಯಾಪಾರಿಗಳು ಆವರಿಸಿಕೊಂಡು ಜನರಿಗೆ ಓಡಾಡಲು ರಸ್ತೆ ಇಲ್ಲದಾಗಿದೆ. ಜೊತೆಗೆ ವ್ಯಾಪಾರಿಗಳು ಸುರಿಯುವ ಕಸವು ಕೊಳೆತು ಆರೋಗ್ಯ ಕೆಡುವಂತಾಗಿದೆ.
– ಸೌಮ್ಯ, ಬನಶಂಕರಿ ನಿವಾಸಿ.
=========
ವಾರ್ಡ್ ಒಳಗಿರುವ ಪಾದಚಾರಿ ಮಾರ್ಗಗಳು ಕಸದಿಂದಲೇ ರಾರಾಜಿಸಿತ್ತಿರುವೆ. ಜೊತೆಗೆ ಪಾದಚಾರಿ ಮಾರ್ಗದಲ್ಲಿರುವ ಮ್ಯಾನ್‍ಹೋಲ್‍ಗಳಿಂದ ನೀರು ಸುರಿದು ಸುರಿದು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ.
– ಮಂಜುನಾಥ್, ಶ್ರೀರಾಮಪುರ ನಿವಾಸಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಎಲೆಮರೆ-೨ ಅಂತ ಹಾಕಿದ್ದೀರಿ.

    ಎಲೆಮರೆ-೧ಹುಡುಕಿದೆ. ಇಲ್ಲ ಅಂದಿರಿ.ಏನಿದರ ಅರ್ಥ?

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...