Homeಮುಖಪುಟಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

ಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

- Advertisement -
- Advertisement -

ಜೀವನ ಕಲೆಗಳು ಲೇಖನ: 5

ವ್ಯಕ್ತಿತ್ವ ವಿಕಸನ 4  ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ)ಬಗ್ಗೆ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ್ದೆ. ಇದು ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಎಂಬಿಟಿಐ ಸೂಚ್ಯಾಂಕ ತಿಳಿದುಕೊಳ್ಳುವ ಆಸಕ್ತಿ ಉಳ್ಳವರು ಈ ಲಿಂಕ್ ಕ್ಲಿಕ್ಕಿಸಿ:

ಎಂಬಿಟಿಐ ಸೂಚ್ಯಾಂಕದಲ್ಲಿ, ಕಾರ್ಲ್ ಜಂಗ್ ಪ್ರಕಾರ, ವ್ಯಕ್ತಿಯ ಪ್ರಮುಖವಾದ ನಾಲ್ಕು ಗುಣಲಕ್ಷಣಗಳಾದ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬವನ್ನು ವಿಂಗಡಿಸಿ, ಅದರ ತದ್ವಿರುದ್ದಗಳೊಂದಿಗೆ ಸಂಯೋಗಪೂರ್ವಕವಾಗಿ ಜೋಡಿಸಿ, ಹದಿನಾರು ಸಂಯೋಗ ಸೂಚಕ ಅಕ್ಷರದ ಗುಂಪುಗಳನ್ನಾಗಿ ಮಾಡಲಾಗಿದೆ. ಅದರಂತೆ ಬಂದ ಹದಿನಾರು ಸಂಯೋಗಗಳು ಹೀಗಿವೆ:

ESTJ, ISTJ, ENTJ, INTJ, ESTP, ISTP, ENTP, INTP, ESFJ, ISFJ, ENFJ, INFJ, ESFP, ISFP, ENFP & INFP.

ನಿಮ್ಮ ಟೈಪ್ ಇಂಡಿಕೇಟರ್ ಮೇಲಿನ ಹದಿನಾರ ಪೈಕಿ ಯಾವುದೇ ಆಗಿದ್ದಲ್ಲಿ ಅದಕ್ಕೆ ಜನ್ಮ ಕುಂಡಲಿ (ಜಾತಕ) ರೀತಿಯ ಸಂಪೂರ್ಣ ವಿಶ್ಲೇಷಣೆ, ಮೇಲೆ ನೀಡಿರುವ ಅಂತರ್ಜಾಲತಾಣದಲ್ಲಿ ಲಭ್ಯವಿದೆ. ಹೆಚ್ಚಿನ ಆಸಕ್ತಿ ಇರುವವರು ಅದನ್ನು ಆಳವಾಗಿ ಅಧ್ಯಯನ ಮಾಡಬಹುದು. ಸಂಕ್ಷಿಪ್ತವಾಗಿ ತಿಳಿಸುವುದಾದರೆ:

ಇ.ಎಸ್.ಟಿ.ಜೆ. (ESTJ): ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ತೀರ್ಪುಗಾರಿಕೆ ಸ್ವಭಾವದ ನೈಸರ್ಗಿಕ ನಾಯಕತ್ವದ ವ್ಯಕ್ತಿಗಳು, ತಮಗೆ ಯಾವುದು ಸರಿಯೋ ಅದನ್ನು ಶಕ್ತಿಯುತವಾಗಿ ಪ್ರತಿಪಾದಿಸುವವರು, ಪರಿಣಾಮವನ್ನು ಎದುರಿಸುವವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಶಿಕ್ಷಣ, ತರಬೇತಿ, ಬ್ಯಾಂಕಿಂಗ್, ರಾಜಕೀಯ, ಮತ್ತು ಎಲ್ಲಾ ಸ್ತರದ ವ್ಯವಸ್ಥಾಪಕ ಹುದ್ದೆ.

ಐ.ಎಸ್.ಟಿ.ಜೆ. (ISTJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ, ತೀರ್ಪುಗಾರಿಕೆ ಮತ್ತು ಸ್ವತಂತ್ರ ಸ್ವಭಾವದ ನಿರೀಕ್ಷಕ ವ್ಯಕ್ತಿಗಳು, ಸಮಯ ಪರಿಪಾಲಕರು, ತಪ್ಪು-ಸರಿ ತಿಳಿದವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಮಿಲಿಟರಿ, ಪೋಲಿಸ್ ಅಧಿಕಾರಿ, ವೈದ್ಯರು, ಸನದು ಲೆಕ್ಕಿಗರು, ವಕೀಲರು, ಅಭಿಯಂತರು, ಮಧ್ಯಮ ಸ್ತರದ ವ್ಯವಸ್ಥಾಪಕ ಹುದ್ದೆ.

ಇ.ಎನ್.ಟಿ.ಜೆ. (ENTJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ ಸಂಸ್ಥೆ ಕಟ್ಟುವ ನಾಯಕರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲವರು. ಇವರಿಗೆ ಸೂಕ್ತ ವೃತ್ತಿಗಳು: ಕಂಪನಿಯ ಮುಖ್ಯಸ್ಥರು, ಉದ್ಯೋಗಶೀಲರು, ಕಂಪ್ಯೂಟರ್ ಸಲಹೆಗಾರರು, ವಿಶ್ವವಿದ್ಯಾಲಯದ ಆಡಳಿತಗಾರರು, ಇತ್ಯಾದಿ

ಐ.ಎನ್.ಟಿ.ಜೆ. (INTJ):ವ್ಯಕ್ತಿಗಳುಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ “ಮಾಸ್ಟರ್ ಮೈಂಡ್”. ಯಾವುದೇ ಸಂಕೀರ್ನ ಸಮಸ್ಯೆ ಅರ್ಥ ಮಾಡಿಕೊಳ್ಳಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಅಭಿಯಂತರು, ವೈದ್ಯರು, ರಣನೀತಿ ತಯಾರಕರು ಇತ್ಯಾದಿ.

ಇ.ಎಸ್.ಟಿ.ಪಿ. (ESTP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಕ್ರಿಯಾಶೀಲರು. ಇನ್ನೊಬ್ಬರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ಸಲಹೆ ನೀಡಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಮಾರ್ಕೆಟಿಂಗ್, ಕಂಪ್ಯೂಟರ್/ವೈದ್ಯಕೀಯ ಸಪೋರ್ಟ್ ತಂಡ, ಇತ್ಯಾದಿ.

ಐ.ಎಸ್.ಟಿ.ಪಿ. (ISTP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಇವರಿಗೆ ಸೂಕ್ತ ವೃತ್ತಿಗಳು: ಪೋಲಿಸ್ ತನಿಖಾ ದಳ, ಅಭಿಯಂತರು, ಮೆಕ್ಯಾನಿಕ್, ಪೈಲಟ್ ಇತ್ಯಾದಿ. ಆದರೆ ಎಲ್ಲ ಕೆಲಸಕ್ಕೆ ಸುಲಭವಾಗಿ ಹೊಂದಿಕೊಳ್ಳುವರು.

ಇ.ಎನ್.ಟಿ.ಪಿ. (ENTP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವಕೀಲಿ, ಮನೋವಿಜ್ಞಾನಿ, ಸಿನಿಮಾ/ನಾಟಕ ನಟನೆ, ಇತ್ಯಾದಿ.

ಐ.ಎನ್.ಟಿ.ಪಿ. (INTP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಫೋಟೋಗ್ರಾಫಿ, ಗಣಿತ ತಜ್ಞರು, ನ್ಯಾಯಾಧೀಶರು, ಇತ್ಯಾದಿ.

ಇ.ಎಸ್.ಎಫ್.ಜೆ. (ESFJ):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ನರ್ಸಿಂಗ್, ಶಿಕ್ಷಣ, ಧಾರ್ಮಿಕ ಕೆಲಸ, ಇತ್ಯಾದಿ.

ಐ.ಎಸ್.ಎಫ್.ಜೆ. (ISFJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಅಂಗಡಿ/ಮಳಿಗೆ ಮಾಲೀಕರು, ವಾಚನಾಲಯ ನಡೆಸುವುದು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎನ್.ಎಫ್.ಜೆ. (ENFJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಲಹೆಗಾರರು, ಮನೋರೋಗ ತಜ್ಞರು, ಸಮಾಜ ಸೇವಕರು ಇತ್ಯಾದಿ.

ಐ.ಎನ್.ಎಫ್.ಜೆ. (INFJ):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವೈದ್ಯರು, ಸಂಗೀತಗಾರರು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎಸ್.ಎಫ್.ಪಿ. (ESFP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಂಗೀತ/ನೃತ್ಯ ಕಲಾವಿದರು,ಸಿನಿಮಾ/ನಾಟಕ ನಟನೆ,ಇತ್ಯಾದಿ.

ಐ.ಎಸ್.ಎಫ್.ಪಿ. (ISFP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಶಿಕ್ಷಕರು, ಸಲಹೆಗಾರರು, ಅರಣ್ಯಾಧಿಕಾರಿ, ಇತ್ಯಾದಿ.

ಇ.ಎನ್.ಎಫ್.ಪಿ. (ENFP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಲೇಖಕರು, ಪತ್ರಿಕೋದ್ಯಮ, ರಾಯಭಾರಿ ಇತ್ಯಾದಿ.

ಐ.ಎನ್.ಎಫ್.ಪಿ. (INFP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಲೇಖಕರು, ಶಿಕ್ಷಕರು, ಮನೋತಜ್ಞರು, ಇತ್ಯಾದಿ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ:

1. ಎಂಬಿಟಿಐ ಸೂಚ್ಯಾಂಕ ನಿಮ್ಮ ಜನ್ಮಕ್ಕೆ ಅಂಟಿದ ಹಣೆಪಟ್ಟಿ ಅಲ್ಲ. ಇದು ನಿಮ್ಮ ಇಂದಿನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರಲ್ಲಿ ಕಂಡು ಬಂದ ಗುಣಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಸ್ವಲ್ಪ ಪ್ರಯತ್ನದಿಂದ ನೀವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಅಂತರ್ಮುಖಿಗಳು ಬಹಿರ್ಮುಖಿಯಾಗಬಹುದು; ಚಿಂತನಾಶೀಲರು ಕ್ರಿಯಾಶೀಲರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಸೂಚ್ಯಾಂಕ, ಅದರ ವಿಶ್ಲೇಷಣೆ ಮತ್ತು ವೃತ್ತಿ ಸಹ ಬದಲಾಗಬಹುದು.

2. ಎಂಬಿಟಿಐ ಸೂಚ್ಯಾಂಕವನ್ನು ಬಹಳಷ್ಟು ಕಂಪನಿಗಳು, ಜಾಲತಾಣಗಳು, ಸಲಹೆಗಾರರು ವಿಧವಿಧವಾಗಿ ಅರ್ಥೈಸುತ್ತಾರೆ. ನಮ್ಮ ದೇಶದಲ್ಲಿ ಜ್ಯೋತಿಷಿಗಳು ಜಾತಕ ನೋಡಿ ಭವಿಷ್ಯ ಹೇಳುವಂತೆ, ಎಲ್ಲರೂ ತಮ್ಮದೇ ಆದ ವಿಶ್ಲೇಷಣೆ ಮತ್ತು ವೃತ್ತಿಗಳನ್ನು ಸೂಚಿಸುತ್ತಾರೆ. ಆದ್ದರಿಂದ ಇದು ವಿಜ್ಞಾನಿ ಎನಿಸಿಕೊಳ್ಳದೆ ಅರೆ-ವಿಜ್ಞಾನದ ಗುಂಪಿಗೆ ಸೇರಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಿ ಎಂದು ನನ್ನ ಸವಿನಯ ಸಲಹೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...