Homeಮುಖಪುಟಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

ಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

- Advertisement -
- Advertisement -

ಜೀವನ ಕಲೆಗಳು ಲೇಖನ: 5

ವ್ಯಕ್ತಿತ್ವ ವಿಕಸನ 4  ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ)ಬಗ್ಗೆ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ್ದೆ. ಇದು ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಎಂಬಿಟಿಐ ಸೂಚ್ಯಾಂಕ ತಿಳಿದುಕೊಳ್ಳುವ ಆಸಕ್ತಿ ಉಳ್ಳವರು ಈ ಲಿಂಕ್ ಕ್ಲಿಕ್ಕಿಸಿ:

ಎಂಬಿಟಿಐ ಸೂಚ್ಯಾಂಕದಲ್ಲಿ, ಕಾರ್ಲ್ ಜಂಗ್ ಪ್ರಕಾರ, ವ್ಯಕ್ತಿಯ ಪ್ರಮುಖವಾದ ನಾಲ್ಕು ಗುಣಲಕ್ಷಣಗಳಾದ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬವನ್ನು ವಿಂಗಡಿಸಿ, ಅದರ ತದ್ವಿರುದ್ದಗಳೊಂದಿಗೆ ಸಂಯೋಗಪೂರ್ವಕವಾಗಿ ಜೋಡಿಸಿ, ಹದಿನಾರು ಸಂಯೋಗ ಸೂಚಕ ಅಕ್ಷರದ ಗುಂಪುಗಳನ್ನಾಗಿ ಮಾಡಲಾಗಿದೆ. ಅದರಂತೆ ಬಂದ ಹದಿನಾರು ಸಂಯೋಗಗಳು ಹೀಗಿವೆ:

ESTJ, ISTJ, ENTJ, INTJ, ESTP, ISTP, ENTP, INTP, ESFJ, ISFJ, ENFJ, INFJ, ESFP, ISFP, ENFP & INFP.

ನಿಮ್ಮ ಟೈಪ್ ಇಂಡಿಕೇಟರ್ ಮೇಲಿನ ಹದಿನಾರ ಪೈಕಿ ಯಾವುದೇ ಆಗಿದ್ದಲ್ಲಿ ಅದಕ್ಕೆ ಜನ್ಮ ಕುಂಡಲಿ (ಜಾತಕ) ರೀತಿಯ ಸಂಪೂರ್ಣ ವಿಶ್ಲೇಷಣೆ, ಮೇಲೆ ನೀಡಿರುವ ಅಂತರ್ಜಾಲತಾಣದಲ್ಲಿ ಲಭ್ಯವಿದೆ. ಹೆಚ್ಚಿನ ಆಸಕ್ತಿ ಇರುವವರು ಅದನ್ನು ಆಳವಾಗಿ ಅಧ್ಯಯನ ಮಾಡಬಹುದು. ಸಂಕ್ಷಿಪ್ತವಾಗಿ ತಿಳಿಸುವುದಾದರೆ:

ಇ.ಎಸ್.ಟಿ.ಜೆ. (ESTJ): ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ತೀರ್ಪುಗಾರಿಕೆ ಸ್ವಭಾವದ ನೈಸರ್ಗಿಕ ನಾಯಕತ್ವದ ವ್ಯಕ್ತಿಗಳು, ತಮಗೆ ಯಾವುದು ಸರಿಯೋ ಅದನ್ನು ಶಕ್ತಿಯುತವಾಗಿ ಪ್ರತಿಪಾದಿಸುವವರು, ಪರಿಣಾಮವನ್ನು ಎದುರಿಸುವವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಶಿಕ್ಷಣ, ತರಬೇತಿ, ಬ್ಯಾಂಕಿಂಗ್, ರಾಜಕೀಯ, ಮತ್ತು ಎಲ್ಲಾ ಸ್ತರದ ವ್ಯವಸ್ಥಾಪಕ ಹುದ್ದೆ.

ಐ.ಎಸ್.ಟಿ.ಜೆ. (ISTJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ, ತೀರ್ಪುಗಾರಿಕೆ ಮತ್ತು ಸ್ವತಂತ್ರ ಸ್ವಭಾವದ ನಿರೀಕ್ಷಕ ವ್ಯಕ್ತಿಗಳು, ಸಮಯ ಪರಿಪಾಲಕರು, ತಪ್ಪು-ಸರಿ ತಿಳಿದವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಮಿಲಿಟರಿ, ಪೋಲಿಸ್ ಅಧಿಕಾರಿ, ವೈದ್ಯರು, ಸನದು ಲೆಕ್ಕಿಗರು, ವಕೀಲರು, ಅಭಿಯಂತರು, ಮಧ್ಯಮ ಸ್ತರದ ವ್ಯವಸ್ಥಾಪಕ ಹುದ್ದೆ.

ಇ.ಎನ್.ಟಿ.ಜೆ. (ENTJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ ಸಂಸ್ಥೆ ಕಟ್ಟುವ ನಾಯಕರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲವರು. ಇವರಿಗೆ ಸೂಕ್ತ ವೃತ್ತಿಗಳು: ಕಂಪನಿಯ ಮುಖ್ಯಸ್ಥರು, ಉದ್ಯೋಗಶೀಲರು, ಕಂಪ್ಯೂಟರ್ ಸಲಹೆಗಾರರು, ವಿಶ್ವವಿದ್ಯಾಲಯದ ಆಡಳಿತಗಾರರು, ಇತ್ಯಾದಿ

ಐ.ಎನ್.ಟಿ.ಜೆ. (INTJ):ವ್ಯಕ್ತಿಗಳುಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ “ಮಾಸ್ಟರ್ ಮೈಂಡ್”. ಯಾವುದೇ ಸಂಕೀರ್ನ ಸಮಸ್ಯೆ ಅರ್ಥ ಮಾಡಿಕೊಳ್ಳಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಅಭಿಯಂತರು, ವೈದ್ಯರು, ರಣನೀತಿ ತಯಾರಕರು ಇತ್ಯಾದಿ.

ಇ.ಎಸ್.ಟಿ.ಪಿ. (ESTP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಕ್ರಿಯಾಶೀಲರು. ಇನ್ನೊಬ್ಬರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ಸಲಹೆ ನೀಡಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಮಾರ್ಕೆಟಿಂಗ್, ಕಂಪ್ಯೂಟರ್/ವೈದ್ಯಕೀಯ ಸಪೋರ್ಟ್ ತಂಡ, ಇತ್ಯಾದಿ.

ಐ.ಎಸ್.ಟಿ.ಪಿ. (ISTP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಇವರಿಗೆ ಸೂಕ್ತ ವೃತ್ತಿಗಳು: ಪೋಲಿಸ್ ತನಿಖಾ ದಳ, ಅಭಿಯಂತರು, ಮೆಕ್ಯಾನಿಕ್, ಪೈಲಟ್ ಇತ್ಯಾದಿ. ಆದರೆ ಎಲ್ಲ ಕೆಲಸಕ್ಕೆ ಸುಲಭವಾಗಿ ಹೊಂದಿಕೊಳ್ಳುವರು.

ಇ.ಎನ್.ಟಿ.ಪಿ. (ENTP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವಕೀಲಿ, ಮನೋವಿಜ್ಞಾನಿ, ಸಿನಿಮಾ/ನಾಟಕ ನಟನೆ, ಇತ್ಯಾದಿ.

ಐ.ಎನ್.ಟಿ.ಪಿ. (INTP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಫೋಟೋಗ್ರಾಫಿ, ಗಣಿತ ತಜ್ಞರು, ನ್ಯಾಯಾಧೀಶರು, ಇತ್ಯಾದಿ.

ಇ.ಎಸ್.ಎಫ್.ಜೆ. (ESFJ):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ನರ್ಸಿಂಗ್, ಶಿಕ್ಷಣ, ಧಾರ್ಮಿಕ ಕೆಲಸ, ಇತ್ಯಾದಿ.

ಐ.ಎಸ್.ಎಫ್.ಜೆ. (ISFJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಅಂಗಡಿ/ಮಳಿಗೆ ಮಾಲೀಕರು, ವಾಚನಾಲಯ ನಡೆಸುವುದು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎನ್.ಎಫ್.ಜೆ. (ENFJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಲಹೆಗಾರರು, ಮನೋರೋಗ ತಜ್ಞರು, ಸಮಾಜ ಸೇವಕರು ಇತ್ಯಾದಿ.

ಐ.ಎನ್.ಎಫ್.ಜೆ. (INFJ):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವೈದ್ಯರು, ಸಂಗೀತಗಾರರು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎಸ್.ಎಫ್.ಪಿ. (ESFP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಂಗೀತ/ನೃತ್ಯ ಕಲಾವಿದರು,ಸಿನಿಮಾ/ನಾಟಕ ನಟನೆ,ಇತ್ಯಾದಿ.

ಐ.ಎಸ್.ಎಫ್.ಪಿ. (ISFP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಶಿಕ್ಷಕರು, ಸಲಹೆಗಾರರು, ಅರಣ್ಯಾಧಿಕಾರಿ, ಇತ್ಯಾದಿ.

ಇ.ಎನ್.ಎಫ್.ಪಿ. (ENFP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಲೇಖಕರು, ಪತ್ರಿಕೋದ್ಯಮ, ರಾಯಭಾರಿ ಇತ್ಯಾದಿ.

ಐ.ಎನ್.ಎಫ್.ಪಿ. (INFP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಲೇಖಕರು, ಶಿಕ್ಷಕರು, ಮನೋತಜ್ಞರು, ಇತ್ಯಾದಿ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ:

1. ಎಂಬಿಟಿಐ ಸೂಚ್ಯಾಂಕ ನಿಮ್ಮ ಜನ್ಮಕ್ಕೆ ಅಂಟಿದ ಹಣೆಪಟ್ಟಿ ಅಲ್ಲ. ಇದು ನಿಮ್ಮ ಇಂದಿನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರಲ್ಲಿ ಕಂಡು ಬಂದ ಗುಣಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಸ್ವಲ್ಪ ಪ್ರಯತ್ನದಿಂದ ನೀವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಅಂತರ್ಮುಖಿಗಳು ಬಹಿರ್ಮುಖಿಯಾಗಬಹುದು; ಚಿಂತನಾಶೀಲರು ಕ್ರಿಯಾಶೀಲರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಸೂಚ್ಯಾಂಕ, ಅದರ ವಿಶ್ಲೇಷಣೆ ಮತ್ತು ವೃತ್ತಿ ಸಹ ಬದಲಾಗಬಹುದು.

2. ಎಂಬಿಟಿಐ ಸೂಚ್ಯಾಂಕವನ್ನು ಬಹಳಷ್ಟು ಕಂಪನಿಗಳು, ಜಾಲತಾಣಗಳು, ಸಲಹೆಗಾರರು ವಿಧವಿಧವಾಗಿ ಅರ್ಥೈಸುತ್ತಾರೆ. ನಮ್ಮ ದೇಶದಲ್ಲಿ ಜ್ಯೋತಿಷಿಗಳು ಜಾತಕ ನೋಡಿ ಭವಿಷ್ಯ ಹೇಳುವಂತೆ, ಎಲ್ಲರೂ ತಮ್ಮದೇ ಆದ ವಿಶ್ಲೇಷಣೆ ಮತ್ತು ವೃತ್ತಿಗಳನ್ನು ಸೂಚಿಸುತ್ತಾರೆ. ಆದ್ದರಿಂದ ಇದು ವಿಜ್ಞಾನಿ ಎನಿಸಿಕೊಳ್ಳದೆ ಅರೆ-ವಿಜ್ಞಾನದ ಗುಂಪಿಗೆ ಸೇರಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಿ ಎಂದು ನನ್ನ ಸವಿನಯ ಸಲಹೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...