Homeಮುಖಪುಟಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

ಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

- Advertisement -
- Advertisement -

ಜೀವನ ಕಲೆಗಳು ಲೇಖನ: 5

ವ್ಯಕ್ತಿತ್ವ ವಿಕಸನ 4  ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ)ಬಗ್ಗೆ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ್ದೆ. ಇದು ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಎಂಬಿಟಿಐ ಸೂಚ್ಯಾಂಕ ತಿಳಿದುಕೊಳ್ಳುವ ಆಸಕ್ತಿ ಉಳ್ಳವರು ಈ ಲಿಂಕ್ ಕ್ಲಿಕ್ಕಿಸಿ:

ಎಂಬಿಟಿಐ ಸೂಚ್ಯಾಂಕದಲ್ಲಿ, ಕಾರ್ಲ್ ಜಂಗ್ ಪ್ರಕಾರ, ವ್ಯಕ್ತಿಯ ಪ್ರಮುಖವಾದ ನಾಲ್ಕು ಗುಣಲಕ್ಷಣಗಳಾದ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬವನ್ನು ವಿಂಗಡಿಸಿ, ಅದರ ತದ್ವಿರುದ್ದಗಳೊಂದಿಗೆ ಸಂಯೋಗಪೂರ್ವಕವಾಗಿ ಜೋಡಿಸಿ, ಹದಿನಾರು ಸಂಯೋಗ ಸೂಚಕ ಅಕ್ಷರದ ಗುಂಪುಗಳನ್ನಾಗಿ ಮಾಡಲಾಗಿದೆ. ಅದರಂತೆ ಬಂದ ಹದಿನಾರು ಸಂಯೋಗಗಳು ಹೀಗಿವೆ:

ESTJ, ISTJ, ENTJ, INTJ, ESTP, ISTP, ENTP, INTP, ESFJ, ISFJ, ENFJ, INFJ, ESFP, ISFP, ENFP & INFP.

ನಿಮ್ಮ ಟೈಪ್ ಇಂಡಿಕೇಟರ್ ಮೇಲಿನ ಹದಿನಾರ ಪೈಕಿ ಯಾವುದೇ ಆಗಿದ್ದಲ್ಲಿ ಅದಕ್ಕೆ ಜನ್ಮ ಕುಂಡಲಿ (ಜಾತಕ) ರೀತಿಯ ಸಂಪೂರ್ಣ ವಿಶ್ಲೇಷಣೆ, ಮೇಲೆ ನೀಡಿರುವ ಅಂತರ್ಜಾಲತಾಣದಲ್ಲಿ ಲಭ್ಯವಿದೆ. ಹೆಚ್ಚಿನ ಆಸಕ್ತಿ ಇರುವವರು ಅದನ್ನು ಆಳವಾಗಿ ಅಧ್ಯಯನ ಮಾಡಬಹುದು. ಸಂಕ್ಷಿಪ್ತವಾಗಿ ತಿಳಿಸುವುದಾದರೆ:

ಇ.ಎಸ್.ಟಿ.ಜೆ. (ESTJ): ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ತೀರ್ಪುಗಾರಿಕೆ ಸ್ವಭಾವದ ನೈಸರ್ಗಿಕ ನಾಯಕತ್ವದ ವ್ಯಕ್ತಿಗಳು, ತಮಗೆ ಯಾವುದು ಸರಿಯೋ ಅದನ್ನು ಶಕ್ತಿಯುತವಾಗಿ ಪ್ರತಿಪಾದಿಸುವವರು, ಪರಿಣಾಮವನ್ನು ಎದುರಿಸುವವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಶಿಕ್ಷಣ, ತರಬೇತಿ, ಬ್ಯಾಂಕಿಂಗ್, ರಾಜಕೀಯ, ಮತ್ತು ಎಲ್ಲಾ ಸ್ತರದ ವ್ಯವಸ್ಥಾಪಕ ಹುದ್ದೆ.

ಐ.ಎಸ್.ಟಿ.ಜೆ. (ISTJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ, ತೀರ್ಪುಗಾರಿಕೆ ಮತ್ತು ಸ್ವತಂತ್ರ ಸ್ವಭಾವದ ನಿರೀಕ್ಷಕ ವ್ಯಕ್ತಿಗಳು, ಸಮಯ ಪರಿಪಾಲಕರು, ತಪ್ಪು-ಸರಿ ತಿಳಿದವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಮಿಲಿಟರಿ, ಪೋಲಿಸ್ ಅಧಿಕಾರಿ, ವೈದ್ಯರು, ಸನದು ಲೆಕ್ಕಿಗರು, ವಕೀಲರು, ಅಭಿಯಂತರು, ಮಧ್ಯಮ ಸ್ತರದ ವ್ಯವಸ್ಥಾಪಕ ಹುದ್ದೆ.

ಇ.ಎನ್.ಟಿ.ಜೆ. (ENTJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ ಸಂಸ್ಥೆ ಕಟ್ಟುವ ನಾಯಕರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲವರು. ಇವರಿಗೆ ಸೂಕ್ತ ವೃತ್ತಿಗಳು: ಕಂಪನಿಯ ಮುಖ್ಯಸ್ಥರು, ಉದ್ಯೋಗಶೀಲರು, ಕಂಪ್ಯೂಟರ್ ಸಲಹೆಗಾರರು, ವಿಶ್ವವಿದ್ಯಾಲಯದ ಆಡಳಿತಗಾರರು, ಇತ್ಯಾದಿ

ಐ.ಎನ್.ಟಿ.ಜೆ. (INTJ):ವ್ಯಕ್ತಿಗಳುಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ “ಮಾಸ್ಟರ್ ಮೈಂಡ್”. ಯಾವುದೇ ಸಂಕೀರ್ನ ಸಮಸ್ಯೆ ಅರ್ಥ ಮಾಡಿಕೊಳ್ಳಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಅಭಿಯಂತರು, ವೈದ್ಯರು, ರಣನೀತಿ ತಯಾರಕರು ಇತ್ಯಾದಿ.

ಇ.ಎಸ್.ಟಿ.ಪಿ. (ESTP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಕ್ರಿಯಾಶೀಲರು. ಇನ್ನೊಬ್ಬರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ಸಲಹೆ ನೀಡಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಮಾರ್ಕೆಟಿಂಗ್, ಕಂಪ್ಯೂಟರ್/ವೈದ್ಯಕೀಯ ಸಪೋರ್ಟ್ ತಂಡ, ಇತ್ಯಾದಿ.

ಐ.ಎಸ್.ಟಿ.ಪಿ. (ISTP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಇವರಿಗೆ ಸೂಕ್ತ ವೃತ್ತಿಗಳು: ಪೋಲಿಸ್ ತನಿಖಾ ದಳ, ಅಭಿಯಂತರು, ಮೆಕ್ಯಾನಿಕ್, ಪೈಲಟ್ ಇತ್ಯಾದಿ. ಆದರೆ ಎಲ್ಲ ಕೆಲಸಕ್ಕೆ ಸುಲಭವಾಗಿ ಹೊಂದಿಕೊಳ್ಳುವರು.

ಇ.ಎನ್.ಟಿ.ಪಿ. (ENTP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವಕೀಲಿ, ಮನೋವಿಜ್ಞಾನಿ, ಸಿನಿಮಾ/ನಾಟಕ ನಟನೆ, ಇತ್ಯಾದಿ.

ಐ.ಎನ್.ಟಿ.ಪಿ. (INTP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಫೋಟೋಗ್ರಾಫಿ, ಗಣಿತ ತಜ್ಞರು, ನ್ಯಾಯಾಧೀಶರು, ಇತ್ಯಾದಿ.

ಇ.ಎಸ್.ಎಫ್.ಜೆ. (ESFJ):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ನರ್ಸಿಂಗ್, ಶಿಕ್ಷಣ, ಧಾರ್ಮಿಕ ಕೆಲಸ, ಇತ್ಯಾದಿ.

ಐ.ಎಸ್.ಎಫ್.ಜೆ. (ISFJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಅಂಗಡಿ/ಮಳಿಗೆ ಮಾಲೀಕರು, ವಾಚನಾಲಯ ನಡೆಸುವುದು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎನ್.ಎಫ್.ಜೆ. (ENFJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಲಹೆಗಾರರು, ಮನೋರೋಗ ತಜ್ಞರು, ಸಮಾಜ ಸೇವಕರು ಇತ್ಯಾದಿ.

ಐ.ಎನ್.ಎಫ್.ಜೆ. (INFJ):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವೈದ್ಯರು, ಸಂಗೀತಗಾರರು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎಸ್.ಎಫ್.ಪಿ. (ESFP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಂಗೀತ/ನೃತ್ಯ ಕಲಾವಿದರು,ಸಿನಿಮಾ/ನಾಟಕ ನಟನೆ,ಇತ್ಯಾದಿ.

ಐ.ಎಸ್.ಎಫ್.ಪಿ. (ISFP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಶಿಕ್ಷಕರು, ಸಲಹೆಗಾರರು, ಅರಣ್ಯಾಧಿಕಾರಿ, ಇತ್ಯಾದಿ.

ಇ.ಎನ್.ಎಫ್.ಪಿ. (ENFP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಲೇಖಕರು, ಪತ್ರಿಕೋದ್ಯಮ, ರಾಯಭಾರಿ ಇತ್ಯಾದಿ.

ಐ.ಎನ್.ಎಫ್.ಪಿ. (INFP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಲೇಖಕರು, ಶಿಕ್ಷಕರು, ಮನೋತಜ್ಞರು, ಇತ್ಯಾದಿ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ:

1. ಎಂಬಿಟಿಐ ಸೂಚ್ಯಾಂಕ ನಿಮ್ಮ ಜನ್ಮಕ್ಕೆ ಅಂಟಿದ ಹಣೆಪಟ್ಟಿ ಅಲ್ಲ. ಇದು ನಿಮ್ಮ ಇಂದಿನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರಲ್ಲಿ ಕಂಡು ಬಂದ ಗುಣಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಸ್ವಲ್ಪ ಪ್ರಯತ್ನದಿಂದ ನೀವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಅಂತರ್ಮುಖಿಗಳು ಬಹಿರ್ಮುಖಿಯಾಗಬಹುದು; ಚಿಂತನಾಶೀಲರು ಕ್ರಿಯಾಶೀಲರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಸೂಚ್ಯಾಂಕ, ಅದರ ವಿಶ್ಲೇಷಣೆ ಮತ್ತು ವೃತ್ತಿ ಸಹ ಬದಲಾಗಬಹುದು.

2. ಎಂಬಿಟಿಐ ಸೂಚ್ಯಾಂಕವನ್ನು ಬಹಳಷ್ಟು ಕಂಪನಿಗಳು, ಜಾಲತಾಣಗಳು, ಸಲಹೆಗಾರರು ವಿಧವಿಧವಾಗಿ ಅರ್ಥೈಸುತ್ತಾರೆ. ನಮ್ಮ ದೇಶದಲ್ಲಿ ಜ್ಯೋತಿಷಿಗಳು ಜಾತಕ ನೋಡಿ ಭವಿಷ್ಯ ಹೇಳುವಂತೆ, ಎಲ್ಲರೂ ತಮ್ಮದೇ ಆದ ವಿಶ್ಲೇಷಣೆ ಮತ್ತು ವೃತ್ತಿಗಳನ್ನು ಸೂಚಿಸುತ್ತಾರೆ. ಆದ್ದರಿಂದ ಇದು ವಿಜ್ಞಾನಿ ಎನಿಸಿಕೊಳ್ಳದೆ ಅರೆ-ವಿಜ್ಞಾನದ ಗುಂಪಿಗೆ ಸೇರಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಿ ಎಂದು ನನ್ನ ಸವಿನಯ ಸಲಹೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...