Homeಕರ್ನಾಟಕನೋಡಿ ಸ್ವಾಮಿ ನಮ್ಮ ಸ್ಥಿತಿನಾ..! ನಮಗೆ ಬಂದಿರುವ ಕಷ್ಟ ಮತ್ಯಾರಿಗೂ ಬರಬೇಡಪ್ಪ

ನೋಡಿ ಸ್ವಾಮಿ ನಮ್ಮ ಸ್ಥಿತಿನಾ..! ನಮಗೆ ಬಂದಿರುವ ಕಷ್ಟ ಮತ್ಯಾರಿಗೂ ಬರಬೇಡಪ್ಪ

- Advertisement -
- Advertisement -

ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಮಾಹಿತಿ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ನಗರ. ಭಾರತದ ಅತ್ಯುತ್ತಮ ಜೀವನಯೋಗ್ಯ ನಗರಗಳಲ್ಲೊಂದು. ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ನಗರವೂ ಹೌದು.  ಅದ್ರೆ ಇಲ್ಲಿರುವ ನಮ್ಮ ಸ್ಥಿತಿ ನೋಡಿದರೆ ಜನರು ಮುಂದಕ್ಕೆ ಹೆಜ್ಜೆ ಹಾಕಲು ಭಯಪಡುವಂತಾಗಿದೆ. ಅವರನ್ನು ನಾನೇ ಅಪೋಶನ ತೆಗೆದುಕೊಳ್ಳುವಂತಾಗಿರುವುದು ದುರಂತ.

ಅಂದ ಹಾಗೆ ನಮ್ಮ ಹೆಸರು ಪುಟ್ಪಾತ್, ಕನ್ನಡದಲ್ಲಿ ಪಾದಚಾರಿ ಮಾರ್ಗ ಎಂದು ಕರೆಯುತ್ತಾರೆ. ಪ್ರತಿ ಮುಖ್ಯ ರಸ್ತೆಯ ಪಕ್ಕದಲ್ಲಿ ನಾವಿರುತ್ತೇವೆ. ವಾಹನಗಳಿಂದ ಸುರಕ್ಷಿತವಾಗಿ ಜನ ನಮ್ಮನ್ನು ಬಳಸವಹುದಾಗಿದೆ. ಆದರೆ ನಮ್ಮ ಪರಿಸ್ಥಿತಿಯೋ ತೀರಾ ಹದಗೆಟ್ಟಿದೆ.

ಇತ್ತೀಚಿಗೆ ಅಷ್ಟೇ ಕಾಮಗಾರಿ ನಡೆಸಿದ್ದಾರೆ ಆಗಲೇ ಸಿಮೆಂಟ್ ಬ್ಲಾಕ್‍ಗಳು ಕಿತ್ತು ಹೋಗಿವೆ. ಹಾಸಿರುವ ಬಂಡೆಗಳು  ಮುರಿದು ಬಿದ್ದಿದೆ. ನಮ್ಮ ಮೇಲೆ ಬಿದ್ದಿರುವ ಮರದ ರೆಂಬೆ ಕೊಂಬೆಗಳನ್ನು ತೆರೆವುಗೊಳಿಸಿಲ್ಲ. ಕೆಲವೊಂದು ವಾರ್ಡ್‍ಗಳಲ್ಲಿ ನಾವೇ ಕಸದ ಬುಟ್ಟಿಗಳಾಗಿದ್ದೇವೆ. ಹೇಗಿದೆ ನೋಡಿ ಸ್ವಾಮಿ ನಮ್ಮ ಪರಿಸ್ಥಿತಿ. ನಮ್ಮ ಮೇಲೆ ಖುಷಿಯಿಂದ ಹೆಜ್ಜೆ ಹಾಕಬೇಕಾದವರು ಕಸದ ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಹೋಗುವ ದುಸ್ಥಿತಿ ಬಂದಿದೆ. ಇದಕ್ಕೆಲ್ಲಾ ಮುಕ್ತಿ ಯಾವಾಗಪ್ಪಾ…..

 

ನಮ್ಮನ್ನ ಸರಿಯಾಗಿ ನೋಡಕೊಳ್ಳಬೇಕು, ಜನರು ಸುಖಕರವಾಗಿ ನಮ್ಮನ್ನು ಬಳಸಬೇಕು ಎಂದು ನಮ್ಮನ್ನು ಬಿಬಿಎಂಪಿಗೆ ಒಪ್ಪಿಸಿದ್ದಾರೆ. ಆದರೆ, ನಮ್ಮ ಪರಿಸ್ಥಿತಿಯನ್ನು ಕಂಡರೆ ಅವರು ಏನು ಕಾರ್ಯನಿರ್ವಹಿಸುತ್ತಿದ್ದರೋ ಎಂಬ ಅನುಮಾನ ಕಾಡ್ತಿದೆ.

ವಾಹನಗಳ ಪಾರ್ಕಿಂಗ್ ಸ್ಥಳ: ಪಾದಚಾರಿಗಳಿಗೆ ಮಾರ್ಗವಾಗಬೇಕಾದ ನಾವು ವಾರ್ಡ್‍ಗಳ ಒಳಗಡೆ ಹೇಗೆ ಬೇಕೋ ಹಾಗೇ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸ್ಥಳವಾಗಿದ್ದೇವೆ. ಹಾಗಾಗಿ ಇವರ ಹಾವಳಿ ಹೆಚ್ಚಾದಾಗ ಜನರು ನಮ್ಮನ್ನು ಹೇಗೆ ಬಳಸಲು ಸಾಧ್ಯ ಹೇಳಿ.

ಉದ್ಯಮ ನಗರಿಗೆ ವಾಹನ ದಟ್ಟಣೆ ಸಾಮಾನ್ಯ ಪದ. ಅದು ಗೊತ್ತಿದ್ದು ಸಹ ಈ ದ್ವಿಚಕ್ರ ವಾಹನ ಸವಾರರು ವಾಹನ ದಟ್ಟಣೆ ಉಂಟಾದಾಗ ನಮ್ಮ ಮೇಲೆಯೇ ಸವಾರಿ ನಡೆಸ್ತಾರೆ. ಒಮ್ಮೊಮ್ಮೆ ಸವಾರಿಯಲ್ಲಿ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿರುವ ಉದಾಹರಣೆಗಳು ಇವೆ. ಹಾಗಾಗಿ ಇದನ್ನು ತಪ್ಪಿಸಬೇಕು ಎಂದು ಅಲ್ಲಿಲ್ಲ ಬಿಬಿಎಂಪಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ. ಆದರೂ ಸಹ ನಮ್ಮ ಮೇಲೆ ವಾಹನಗಳನ್ನು ಓಡಿಸುತ್ತಾರೆ ಏನು ಮಾಡೋಣ.

ನಮ್ಮ ಸ್ಥಿತಿ ಹೇಗಿದೆ ಅಂದರೆ ಯಾರಾದರೂ ನಮ್ಮ ಮಾರ್ಗದಲ್ಲಿ ಸಾಗುತ್ತಾ ಮೊಬೈಲ್ ಏನಾದರೂ ನೋಡಿಕೊಂಡು ಹೋದರಂತೂ
ಮುಖ ಮೂತಿ ಕಿತ್ತುಹೋಗುವುದಂತೂ ಗ್ಯಾರಂಟಿ.

ಇನ್ನು ಯಾರಾದರೂ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಂಡರಂತೂ ನಾವೇ ಕಾಮಾಗಾರಿಗೆ ಬೇಕಾದ ಕಲ್ಲು, ಮರಳು, ಜಲ್ಲಿ ಸಂಗ್ರಹಿಸುವ ಗೋದಾಮುಗಳು. ಅವರಿಗೆ ಹೇಳುವವರಿಲ್ಲ ಕೇಳುವವರಿಲ್ಲ. ಜನರು ಅಷ್ಟೇ ಯಾರೂ ಪ್ರಶ್ನಿಸದೆ ನಮಗ್ಯಾಕಪ್ಪ ನಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಂಡು ಹೋಗೋಣ ಎಂದು ಮುಂದುವರೆಯುತ್ತಾರೆ.

ಬಯಲು ಶೌಚಾಲಯ: ಪಾವತಿಸಿ ನಮ್ಮನ್ನು ಬಳಸಿ ಎಂದು ದೊಡ್ಡ ದೊಡ್ಡ ಬೋರ್ಡ್‍ಗಳನ್ನು ಹಾಕಿಕೊಂಡು ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಆದರೆ, ಅದನ್ನು ಬಳಸದೇ ಎಲ್ಲಾದರೂ ಗೋಡೆ ಸಿಕ್ಕರೆ ಸಾಕು, ನನ್ನ ಮೇಲೆ ನಿಂತು ಮಜ್ಜನ ಮಾಡಿಸುವ ಪುಣ್ಯಾತ್ಮರು ಇದ್ದಾರೆ. ಆ ವಾಸನೆ ಕುಡಿದು ಅಲ್ಲಿ ಯಾರಾದರೂ ಓಡಾಡಲು ಸಾಧ್ಯವೇ ನೀವೇ ಹೇಳಿ.

ಬೀದಿ ಬದಿ ವ್ಯಾಪಾರಿಗಳು: ಹೊಟ್ಟೆ ಪಾಡಿಗಾಗಿ ಅನೇಕ ವರ್ಷಗಳಿಂದ ನನ್ನ ಮೇಲೆಯೇ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಹೋಗಲಿ ಹೇಗೋ ಮಾಡಿಕೊಂಡು ಹೋಗಲಿ ಎಂದರೆ ಕೆಲವು ಜನರ ಓಡಾಡಕ್ಕೂ ತೊಂದರೆ ಮಾಡುತ್ತಿದ್ದಾರೆ. ಬಿಬಿಎಂಪಿ ಅನೇಕ ವರ್ಷಗಳಿಂದ ಬೀದಿ ವ್ಯಾಪಾರಿಗಳಿಗೆ ಮತ್ತೊಂದು ವ್ಯವಸ್ಥೆ ಮಾಡಿಕೊಟ್ಟಿದ್ದರು ಈ ಜನರಿಗೆ ಅಲ್ಲಿಗೆ ಹೋಗುವ ಮನಸ್ಸಿಲ್ಲ. ಅವರು ನನ್ನ ಮೇಲೆನೆ ವ್ಯಾಪಾರ ಮಾಡಬ್ಬೇಕು ಎಂದು ಕೂರ್ತಾರೆ. ನಂತರ ಕಸವನ್ನೆಲ್ಲಾ ಅಲ್ಲೇ ಹಾಕಿ ಹೋಗುತ್ತಾರೆ. ಅದನ್ನು ಒಮ್ಮೊಮ್ಮೆ ಬಿಬಿಎಂಪಿ ಅವರು ಕಸ ಎತ್ತುತ್ತಾರೆ ಇನ್ನೊಂದು ಸಲ ಎತ್ತುವುದಿಲ್ಲ. ಹಾಗಾಗಿ ನಮ್ಮ ಮೇಲೆ ಜನರು ಹೇಗೆ ಎಲ್ಲಾ ಕಡೆ ಸುಲಲಿತವಾಗಿ ಓಡಾಡಲು ಸಾಧ್ಯ ಹೇಳಿ.

ಒಟ್ಟಾರೆಯಾಗಿ ಬಿಬಿಎಂಪಿ ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನಹರಿಸಿದರೆ, ನೀವು ಪಾದಾಚಾರಿಗಳು ಎಚ್ಚೆತ್ತುಕೊಂಡು ಕಸ ಬಿಸಾಡದೇ, ಗಲೀಜು ಮಾಡದೆ ನಮ್ಮನ್ನು ಶುಚಿಯಾಗಿಟ್ಟುಕೊಂಡರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂಬುದು ನಮ್ಮ ಪಾದಚಾರಿ ಮಾರ್ಗದ ಆಶಯ.

ಬನ್ನಿ ನಮ್ಮ ಕುರಿತು ಜನಸಾಮಾನ್ಯರು ಏನು ಹೇಳಿದ್ದಾರೆ ಎಂದು ನೋಡೋಣ.

ಪಾದಚಾರಿ ಮಾರ್ಗವನ್ನು ಗಾಡಿಗಳು ಮತ್ತು ಬೀದಿ ವ್ಯಾಪಾರಿಗಳು ಆವರಿಸಿಕೊಂಡು ಜನರಿಗೆ ಓಡಾಡಲು ರಸ್ತೆ ಇಲ್ಲದಾಗಿದೆ. ಜೊತೆಗೆ ವ್ಯಾಪಾರಿಗಳು ಸುರಿಯುವ ಕಸವು ಕೊಳೆತು ಆರೋಗ್ಯ ಕೆಡುವಂತಾಗಿದೆ.
– ಸೌಮ್ಯ, ಬನಶಂಕರಿ ನಿವಾಸಿ.
=========
ವಾರ್ಡ್ ಒಳಗಿರುವ ಪಾದಚಾರಿ ಮಾರ್ಗಗಳು ಕಸದಿಂದಲೇ ರಾರಾಜಿಸಿತ್ತಿರುವೆ. ಜೊತೆಗೆ ಪಾದಚಾರಿ ಮಾರ್ಗದಲ್ಲಿರುವ ಮ್ಯಾನ್‍ಹೋಲ್‍ಗಳಿಂದ ನೀರು ಸುರಿದು ಸುರಿದು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ.
– ಮಂಜುನಾಥ್, ಶ್ರೀರಾಮಪುರ ನಿವಾಸಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಎಲೆಮರೆ-೨ ಅಂತ ಹಾಕಿದ್ದೀರಿ.

    ಎಲೆಮರೆ-೧ಹುಡುಕಿದೆ. ಇಲ್ಲ ಅಂದಿರಿ.ಏನಿದರ ಅರ್ಥ?

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...