Homeಮುಖಪುಟಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

ಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

- Advertisement -
- Advertisement -

ಸುಖಪಡಲು ಎಲ್ಲ ಸವಲತ್ತುಗಳೂ ಚಾಚಿಕೊಂಡು ಬಂದಾಗ ಫಲಾನುಭವಿಯೇ ಪೈಸಲ್ ಎಂಬಂತೆ ನಮ್ಮ ಮಹದೇವ ಪ್ರಕಾಶ್ ಕೊರೊನಾಕ್ಕೆ ಬಲಿಯಾದರು!

ಹಿರಿಯ ಮತ್ತು ಗೌರವಾನ್ವಿತ ಪತ್ರಕರ್ತರಾಗಿದ್ದ ಮಹದೇವ ಪ್ರಕಾಶ್ ಈ ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ರಾಜಕಾರಣಿಯಾಗಿದ್ದ ವಿರೇಂದ್ರಪಾಟೀಲರು ಆರಂಭಿಸಿದ್ದ ಲೋಕವಾಣಿ ಎಂಬ ಪತ್ರಿಕೆಯಲ್ಲಿದ್ದಾಗ ಪ್ರಾಮಾಣಿಕ ಅಭಿವ್ಯಕ್ತಿಗೆ ಹೆಸರಾಗಿದ್ದರು. ಆದರೂ ಲಂಕೇಶ್ ಬದುಕಿರುವವರೆಗೆ ಪತ್ರಿಕೆ ಆಫೀಸಿಗೆ ಬರಲಾಗಿರಲಿಲ್ಲ. ಲಂಕೇಶ್ ಏನಾದರೂ ಬೈದರೆ ಎಂಬ ಅಳುಕಿತ್ತು. ಈ ಅಳುಕು ಸಕಾರಣವಾಗಿತ್ತು.

ಲಂಕೇಶ್ ತೀರಿಕೊಂಡ ನಂತರ ಅವರ ಮಗಳು ಗೌರಿ ಸಂಪಾದಕಿಯಾದ ಮೇಲೆ ಮಹದೇವ ಪ್ರಕಾಶ್ ಪ್ರಭುದ್ಧ ಸಲಹೆಗಾರರಾಗಿ ಬಂದು ಸೇರಿಕೊಂಡರು. ಆಗ ಗೌರಿ, ಮಹದೇವ ಪ್ರಕಾಶ್ ಹೇಳಿದಂಗೆ ಎಂಬ ಉಪಮೆಯಿಂದ ಮಾತು ಆರಂಭಿಸುತ್ತಿದ್ದರು. ಮಹದೇವ ಪ್ರಕಾಶ್ ಬರವಣಿಗೆ ಕೂಡ ತಣ್ಣನೆ ಶೈಲಿಯ ಸಂಯುಕ್ತ ಕರ್ನಾಟಕದ ಲೇಖನದಂತಿದ್ದವು. ಆದ್ದರಿಂದ ಗೌರಿಯ ತಾತ್ಸಾರಕ್ಕೆ ಒಳಗಾದರು.

ನಂತರ ಈ ಭಾನುವಾರ ಎಂಬ ವಾರಪತ್ರಿಕೆ ನಡೆಸತೊಡಗಿದರು. ಇದೂ ಕೂಡ ಸುಧಾರಿತ ವೈಕುಂಟರಾಜುರವರ ವಾರಪತ್ರಿಕೆಯಂತಿತ್ತು. ಜನ ಕೊಂಡು ಓದದಿದ್ದರೂ, ಪತ್ರಿಕೆ ನಡೆಸುವ ಕುಶಲಕಲೆ ಮಹದೇವ ಪ್ರಕಾಶರಿಗಿತ್ತು. ಸಿದ್ದರಾಮಯ್ಯನವರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಲೇಖನ ಬರತೊಡಗಿದವು. ಮಹದೇವ ಪ್ರಕಾಶ್ ಬರೆದ ಮೇಲೆ ಅದರಲ್ಲಿ ಸತ್ಯಾಂಶಗಳಿರುತ್ತವೆ ಎಂದು ಕೆಲವರು ಓದುತ್ತಿದ್ದರು. ಮುಖ್ಯವಾಗಿ ಯಡಿಯೂರಪ್ಪನವರ ಕಡೆಯವರ ನಡುವೆ ಪತ್ರಿಕೆ ಹೆಚ್ಚು ಚರ್ಚೆಯಾಗುತ್ತಿತ್ತು. ಅದೇ ಸಮಯದಲ್ಲಿ ಮಹದೇವ ಪ್ರಕಾಶ್ ಟಿವಿಯೊಳಗೆ ರಾಜಕೀಯ ವಿಶ್ಲೇಷಕರಾಗಿ ಬಂದು ಕುಳಿತರು. ಅಲ್ಲಿ ಬಂದು ಕುಳಿತ ಮೇಲೆ ನಿರಂತರವಾಗಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಪೂರ್ವಾಗ್ರಹಗಳಿದ್ದರೆ ಸಾಕು, ಸುಳ್ಳುಗಳು ತಾನಾಗಿಯೇ ಹರಿದು ಬರುತ್ತವೆ.

ಒಮ್ಮೆ ಅವರು ಟಿವಿಯಲ್ಲಿ ಮಾತಾನಾಡುತ್ತ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಯತೀಂದ್ರನನ್ನು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡುತ್ತ ಶಾಂತವೇರಿ ಗೋಪಾಲಗೌಡರು ತಾವು ಅನಾರೋಗ್ಯಕ್ಕೆ ತುತ್ತಾದಾಗ ತಮ್ಮ ಮಗಳನ್ನು ಅಭ್ಯರ್ಥಿಯನ್ನಾಗಿ ಮಾಡುವುದರ ಬದಲು ಬೆಸ್ತ ಜನಾಂಗದ ಕೊಣಂದೂರು ಲಿಂಗಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಅಂತಹ ತ್ಯಾಗಮಯಿ ರಾಜಕಾರಣಿ ಎಲ್ಲಿ, ಈ ಸಿದ್ದರಾಮಯ್ಯನೆಲ್ಲಿ ಎಂದರು. ಆಗ ನಾನು ಗೌರಿ ಎದುರು ಕುಳಿತಿದ್ದೆ. ಅವರು ಹೇಳಿದ ಸುಳ್ಳನ್ನು ಗೌರಿಗೆ ಹೇಳಿದೆ. ಫೋನ್ ಮಾಡಲು ನಂಬರ್ ಕೊಟ್ಟಳು. ತುಸು ಹೊತ್ತಾದ ನಂತರ ಮಹದೇವ ಪ್ರಕಾಶ್‌ಗೆ ಫೋನ್ ಮಾಡಿ:

ಏನ್ ಸಾರ್ ಈ ತರ ಸುಳ್ಳು ಹೇಳ್ತಾ ಇದ್ದೀರಿ ಎಂದೆ.

ನಾನ್ಯಾವ ಸುಳ್ಳು ಹೇಳಿದೆ ಅಂದ್ರು.

ನೋಡಿ ಗೋಪಾಲಗೌಡ್ರು ಅನಾರೋಗ್ಯದಲ್ಲಿದ್ದು, ತೀರ್ಥಹಳ್ಳಿ ಕ್ಷೇತ್ರ ಬಿಟ್ಟುಕೊಟ್ಟಾಗ, ಅವರ ಮಗಳಿಗೆ ಐದಾರು ವರ್ಷ ಇರಬಹುದು. ಇನ್ನು ಕೊಣಂದೂರು ಲಿಂಗಪ್ಪ ಬೆಸ್ತರ ಪೈಕಿ ಅಲ್ಲ, ಬೋವಿ ಪೈಕಿ. ನಿಮ್ಮಂಥವರು ಟಿವಿ ಒಳಗಡೆ ಕುಂತುಗಂಡು ಚೆಡ್ಡಿಗಳ ತರ ಸುಳ್ಳು ಹೇಳಬಾರ್ದು ಎಂದೆ.

ಚಂದ್ರೇಗೌಡ್ರೆ ತಪ್ಪಿದ್ರೆ ಹೇಳಿ ತಿದ್ದಿಕೊಳ್ಳೋಣ ಆದ್ರೆ ಚೆಡ್ಡಿಗಳು ಅನ್ನಬೇಡಿ ಎಂದರು.

ನೀವು ಇದುವರಿಗೂ ಹೇಳಿರೋ ಸುಳ್ಳುಗಳ ಲೆಕ್ಕಹಾಕಿದ್ರೆ ಚೆಡ್ಡಿಗಳು ಮಾತ್ರ ಇಷ್ಟು ಸುಳ್ಳೇಳಕ್ಕೆ ಸಾಧ್ಯ. ಮುಂದಿನ ವಾರ ಹೈಕಮಾಂಡು ಬಂದು ಸಿದ್ದರಾಮಯ್ಯನ್ನ ಇಳಸತ್ತೆ ಅಂತ ಮೂರು ತಿಂಗಳಿಂದ ಹೇಳ್ತ ಇದ್ದೀರಿ ಎಂದು ಆ ಕಡೆಯ ಯಾವ ವಿವರವನ್ನ ಕೇಳಿಸಿಕೊಳ್ಳದೆ ದಾಳಿ ಮಾಡಿದೆ. ಗೌರಿ ನಗುತ್ತ ಹೋಗ್ಲಿ ಬುಡ್ರಿ ಎಂದಳು. ಆಗ ಮನಸ್ಸಿಗೆ ಎಂತದೊ ಸಮಾಧಾನವಾಯ್ತು!

ಮಹದೇವ ಪ್ರಕಾಶರ ಟಿವಿ ವಿಶ್ಲೇಷಣೆ ಮತ್ತು ಭಾನುವಾರ ಪತ್ರಿಕೆ ಸತತವಾಗಿ ಸಿದ್ದರಾಮಯ್ಯನ ಸರಕಾರವನ್ನು ಟೀಕಿಸಿದ್ದು ಫಲ ಕೊಟ್ಟಿತ್ತು. ಯೆಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡರು. ಎಂದಿನಂತೆ ಯಡಿಯೂರಪ್ಪ ಯಾರ್‍ಯಾರಿಗೆ ಆಶ್ವಾಸನೆ ಕೊಟ್ಟಿದ್ದರೋ ಏನೋ ಸಲಹೆಗಾರನಾಗಿ ಮಹದೇವ ಪ್ರಕಾಶರ ಅಲ್ಪ ಅವಧಿ ಮುಗಿಯಿತು.

ತೀರಿಕೊಂಡವರ ಬಗ್ಗೆ ಹಗುರವಾಗಿ ಮಾತನಾಡಬಾರದಂತೆ. ಆದರೂ ಒಂದು ಕಾಲದ ಗೌರವಾನ್ವಿತ ವ್ಯಕ್ತಿಯಾಗಿದ್ದ ಮಹದೇವರು ಹೀಗಾಗುವ ಅಗತ್ಯವಿರಲಿಲ್ಲ ಎಂಬುದು ಹಗುರವಾದ ಮಾತಲ್ಲ.


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...