Homeಮುಖಪುಟಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

ಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

- Advertisement -
- Advertisement -

ಸುಖಪಡಲು ಎಲ್ಲ ಸವಲತ್ತುಗಳೂ ಚಾಚಿಕೊಂಡು ಬಂದಾಗ ಫಲಾನುಭವಿಯೇ ಪೈಸಲ್ ಎಂಬಂತೆ ನಮ್ಮ ಮಹದೇವ ಪ್ರಕಾಶ್ ಕೊರೊನಾಕ್ಕೆ ಬಲಿಯಾದರು!

ಹಿರಿಯ ಮತ್ತು ಗೌರವಾನ್ವಿತ ಪತ್ರಕರ್ತರಾಗಿದ್ದ ಮಹದೇವ ಪ್ರಕಾಶ್ ಈ ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ರಾಜಕಾರಣಿಯಾಗಿದ್ದ ವಿರೇಂದ್ರಪಾಟೀಲರು ಆರಂಭಿಸಿದ್ದ ಲೋಕವಾಣಿ ಎಂಬ ಪತ್ರಿಕೆಯಲ್ಲಿದ್ದಾಗ ಪ್ರಾಮಾಣಿಕ ಅಭಿವ್ಯಕ್ತಿಗೆ ಹೆಸರಾಗಿದ್ದರು. ಆದರೂ ಲಂಕೇಶ್ ಬದುಕಿರುವವರೆಗೆ ಪತ್ರಿಕೆ ಆಫೀಸಿಗೆ ಬರಲಾಗಿರಲಿಲ್ಲ. ಲಂಕೇಶ್ ಏನಾದರೂ ಬೈದರೆ ಎಂಬ ಅಳುಕಿತ್ತು. ಈ ಅಳುಕು ಸಕಾರಣವಾಗಿತ್ತು.

ಲಂಕೇಶ್ ತೀರಿಕೊಂಡ ನಂತರ ಅವರ ಮಗಳು ಗೌರಿ ಸಂಪಾದಕಿಯಾದ ಮೇಲೆ ಮಹದೇವ ಪ್ರಕಾಶ್ ಪ್ರಭುದ್ಧ ಸಲಹೆಗಾರರಾಗಿ ಬಂದು ಸೇರಿಕೊಂಡರು. ಆಗ ಗೌರಿ, ಮಹದೇವ ಪ್ರಕಾಶ್ ಹೇಳಿದಂಗೆ ಎಂಬ ಉಪಮೆಯಿಂದ ಮಾತು ಆರಂಭಿಸುತ್ತಿದ್ದರು. ಮಹದೇವ ಪ್ರಕಾಶ್ ಬರವಣಿಗೆ ಕೂಡ ತಣ್ಣನೆ ಶೈಲಿಯ ಸಂಯುಕ್ತ ಕರ್ನಾಟಕದ ಲೇಖನದಂತಿದ್ದವು. ಆದ್ದರಿಂದ ಗೌರಿಯ ತಾತ್ಸಾರಕ್ಕೆ ಒಳಗಾದರು.

ನಂತರ ಈ ಭಾನುವಾರ ಎಂಬ ವಾರಪತ್ರಿಕೆ ನಡೆಸತೊಡಗಿದರು. ಇದೂ ಕೂಡ ಸುಧಾರಿತ ವೈಕುಂಟರಾಜುರವರ ವಾರಪತ್ರಿಕೆಯಂತಿತ್ತು. ಜನ ಕೊಂಡು ಓದದಿದ್ದರೂ, ಪತ್ರಿಕೆ ನಡೆಸುವ ಕುಶಲಕಲೆ ಮಹದೇವ ಪ್ರಕಾಶರಿಗಿತ್ತು. ಸಿದ್ದರಾಮಯ್ಯನವರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಲೇಖನ ಬರತೊಡಗಿದವು. ಮಹದೇವ ಪ್ರಕಾಶ್ ಬರೆದ ಮೇಲೆ ಅದರಲ್ಲಿ ಸತ್ಯಾಂಶಗಳಿರುತ್ತವೆ ಎಂದು ಕೆಲವರು ಓದುತ್ತಿದ್ದರು. ಮುಖ್ಯವಾಗಿ ಯಡಿಯೂರಪ್ಪನವರ ಕಡೆಯವರ ನಡುವೆ ಪತ್ರಿಕೆ ಹೆಚ್ಚು ಚರ್ಚೆಯಾಗುತ್ತಿತ್ತು. ಅದೇ ಸಮಯದಲ್ಲಿ ಮಹದೇವ ಪ್ರಕಾಶ್ ಟಿವಿಯೊಳಗೆ ರಾಜಕೀಯ ವಿಶ್ಲೇಷಕರಾಗಿ ಬಂದು ಕುಳಿತರು. ಅಲ್ಲಿ ಬಂದು ಕುಳಿತ ಮೇಲೆ ನಿರಂತರವಾಗಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಪೂರ್ವಾಗ್ರಹಗಳಿದ್ದರೆ ಸಾಕು, ಸುಳ್ಳುಗಳು ತಾನಾಗಿಯೇ ಹರಿದು ಬರುತ್ತವೆ.

ಒಮ್ಮೆ ಅವರು ಟಿವಿಯಲ್ಲಿ ಮಾತಾನಾಡುತ್ತ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಯತೀಂದ್ರನನ್ನು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡುತ್ತ ಶಾಂತವೇರಿ ಗೋಪಾಲಗೌಡರು ತಾವು ಅನಾರೋಗ್ಯಕ್ಕೆ ತುತ್ತಾದಾಗ ತಮ್ಮ ಮಗಳನ್ನು ಅಭ್ಯರ್ಥಿಯನ್ನಾಗಿ ಮಾಡುವುದರ ಬದಲು ಬೆಸ್ತ ಜನಾಂಗದ ಕೊಣಂದೂರು ಲಿಂಗಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಅಂತಹ ತ್ಯಾಗಮಯಿ ರಾಜಕಾರಣಿ ಎಲ್ಲಿ, ಈ ಸಿದ್ದರಾಮಯ್ಯನೆಲ್ಲಿ ಎಂದರು. ಆಗ ನಾನು ಗೌರಿ ಎದುರು ಕುಳಿತಿದ್ದೆ. ಅವರು ಹೇಳಿದ ಸುಳ್ಳನ್ನು ಗೌರಿಗೆ ಹೇಳಿದೆ. ಫೋನ್ ಮಾಡಲು ನಂಬರ್ ಕೊಟ್ಟಳು. ತುಸು ಹೊತ್ತಾದ ನಂತರ ಮಹದೇವ ಪ್ರಕಾಶ್‌ಗೆ ಫೋನ್ ಮಾಡಿ:

ಏನ್ ಸಾರ್ ಈ ತರ ಸುಳ್ಳು ಹೇಳ್ತಾ ಇದ್ದೀರಿ ಎಂದೆ.

ನಾನ್ಯಾವ ಸುಳ್ಳು ಹೇಳಿದೆ ಅಂದ್ರು.

ನೋಡಿ ಗೋಪಾಲಗೌಡ್ರು ಅನಾರೋಗ್ಯದಲ್ಲಿದ್ದು, ತೀರ್ಥಹಳ್ಳಿ ಕ್ಷೇತ್ರ ಬಿಟ್ಟುಕೊಟ್ಟಾಗ, ಅವರ ಮಗಳಿಗೆ ಐದಾರು ವರ್ಷ ಇರಬಹುದು. ಇನ್ನು ಕೊಣಂದೂರು ಲಿಂಗಪ್ಪ ಬೆಸ್ತರ ಪೈಕಿ ಅಲ್ಲ, ಬೋವಿ ಪೈಕಿ. ನಿಮ್ಮಂಥವರು ಟಿವಿ ಒಳಗಡೆ ಕುಂತುಗಂಡು ಚೆಡ್ಡಿಗಳ ತರ ಸುಳ್ಳು ಹೇಳಬಾರ್ದು ಎಂದೆ.

ಚಂದ್ರೇಗೌಡ್ರೆ ತಪ್ಪಿದ್ರೆ ಹೇಳಿ ತಿದ್ದಿಕೊಳ್ಳೋಣ ಆದ್ರೆ ಚೆಡ್ಡಿಗಳು ಅನ್ನಬೇಡಿ ಎಂದರು.

ನೀವು ಇದುವರಿಗೂ ಹೇಳಿರೋ ಸುಳ್ಳುಗಳ ಲೆಕ್ಕಹಾಕಿದ್ರೆ ಚೆಡ್ಡಿಗಳು ಮಾತ್ರ ಇಷ್ಟು ಸುಳ್ಳೇಳಕ್ಕೆ ಸಾಧ್ಯ. ಮುಂದಿನ ವಾರ ಹೈಕಮಾಂಡು ಬಂದು ಸಿದ್ದರಾಮಯ್ಯನ್ನ ಇಳಸತ್ತೆ ಅಂತ ಮೂರು ತಿಂಗಳಿಂದ ಹೇಳ್ತ ಇದ್ದೀರಿ ಎಂದು ಆ ಕಡೆಯ ಯಾವ ವಿವರವನ್ನ ಕೇಳಿಸಿಕೊಳ್ಳದೆ ದಾಳಿ ಮಾಡಿದೆ. ಗೌರಿ ನಗುತ್ತ ಹೋಗ್ಲಿ ಬುಡ್ರಿ ಎಂದಳು. ಆಗ ಮನಸ್ಸಿಗೆ ಎಂತದೊ ಸಮಾಧಾನವಾಯ್ತು!

ಮಹದೇವ ಪ್ರಕಾಶರ ಟಿವಿ ವಿಶ್ಲೇಷಣೆ ಮತ್ತು ಭಾನುವಾರ ಪತ್ರಿಕೆ ಸತತವಾಗಿ ಸಿದ್ದರಾಮಯ್ಯನ ಸರಕಾರವನ್ನು ಟೀಕಿಸಿದ್ದು ಫಲ ಕೊಟ್ಟಿತ್ತು. ಯೆಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡರು. ಎಂದಿನಂತೆ ಯಡಿಯೂರಪ್ಪ ಯಾರ್‍ಯಾರಿಗೆ ಆಶ್ವಾಸನೆ ಕೊಟ್ಟಿದ್ದರೋ ಏನೋ ಸಲಹೆಗಾರನಾಗಿ ಮಹದೇವ ಪ್ರಕಾಶರ ಅಲ್ಪ ಅವಧಿ ಮುಗಿಯಿತು.

ತೀರಿಕೊಂಡವರ ಬಗ್ಗೆ ಹಗುರವಾಗಿ ಮಾತನಾಡಬಾರದಂತೆ. ಆದರೂ ಒಂದು ಕಾಲದ ಗೌರವಾನ್ವಿತ ವ್ಯಕ್ತಿಯಾಗಿದ್ದ ಮಹದೇವರು ಹೀಗಾಗುವ ಅಗತ್ಯವಿರಲಿಲ್ಲ ಎಂಬುದು ಹಗುರವಾದ ಮಾತಲ್ಲ.


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...