Homeಮುಖಪುಟಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

ಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

- Advertisement -
- Advertisement -

ಸುಖಪಡಲು ಎಲ್ಲ ಸವಲತ್ತುಗಳೂ ಚಾಚಿಕೊಂಡು ಬಂದಾಗ ಫಲಾನುಭವಿಯೇ ಪೈಸಲ್ ಎಂಬಂತೆ ನಮ್ಮ ಮಹದೇವ ಪ್ರಕಾಶ್ ಕೊರೊನಾಕ್ಕೆ ಬಲಿಯಾದರು!

ಹಿರಿಯ ಮತ್ತು ಗೌರವಾನ್ವಿತ ಪತ್ರಕರ್ತರಾಗಿದ್ದ ಮಹದೇವ ಪ್ರಕಾಶ್ ಈ ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ರಾಜಕಾರಣಿಯಾಗಿದ್ದ ವಿರೇಂದ್ರಪಾಟೀಲರು ಆರಂಭಿಸಿದ್ದ ಲೋಕವಾಣಿ ಎಂಬ ಪತ್ರಿಕೆಯಲ್ಲಿದ್ದಾಗ ಪ್ರಾಮಾಣಿಕ ಅಭಿವ್ಯಕ್ತಿಗೆ ಹೆಸರಾಗಿದ್ದರು. ಆದರೂ ಲಂಕೇಶ್ ಬದುಕಿರುವವರೆಗೆ ಪತ್ರಿಕೆ ಆಫೀಸಿಗೆ ಬರಲಾಗಿರಲಿಲ್ಲ. ಲಂಕೇಶ್ ಏನಾದರೂ ಬೈದರೆ ಎಂಬ ಅಳುಕಿತ್ತು. ಈ ಅಳುಕು ಸಕಾರಣವಾಗಿತ್ತು.

ಲಂಕೇಶ್ ತೀರಿಕೊಂಡ ನಂತರ ಅವರ ಮಗಳು ಗೌರಿ ಸಂಪಾದಕಿಯಾದ ಮೇಲೆ ಮಹದೇವ ಪ್ರಕಾಶ್ ಪ್ರಭುದ್ಧ ಸಲಹೆಗಾರರಾಗಿ ಬಂದು ಸೇರಿಕೊಂಡರು. ಆಗ ಗೌರಿ, ಮಹದೇವ ಪ್ರಕಾಶ್ ಹೇಳಿದಂಗೆ ಎಂಬ ಉಪಮೆಯಿಂದ ಮಾತು ಆರಂಭಿಸುತ್ತಿದ್ದರು. ಮಹದೇವ ಪ್ರಕಾಶ್ ಬರವಣಿಗೆ ಕೂಡ ತಣ್ಣನೆ ಶೈಲಿಯ ಸಂಯುಕ್ತ ಕರ್ನಾಟಕದ ಲೇಖನದಂತಿದ್ದವು. ಆದ್ದರಿಂದ ಗೌರಿಯ ತಾತ್ಸಾರಕ್ಕೆ ಒಳಗಾದರು.

ನಂತರ ಈ ಭಾನುವಾರ ಎಂಬ ವಾರಪತ್ರಿಕೆ ನಡೆಸತೊಡಗಿದರು. ಇದೂ ಕೂಡ ಸುಧಾರಿತ ವೈಕುಂಟರಾಜುರವರ ವಾರಪತ್ರಿಕೆಯಂತಿತ್ತು. ಜನ ಕೊಂಡು ಓದದಿದ್ದರೂ, ಪತ್ರಿಕೆ ನಡೆಸುವ ಕುಶಲಕಲೆ ಮಹದೇವ ಪ್ರಕಾಶರಿಗಿತ್ತು. ಸಿದ್ದರಾಮಯ್ಯನವರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಲೇಖನ ಬರತೊಡಗಿದವು. ಮಹದೇವ ಪ್ರಕಾಶ್ ಬರೆದ ಮೇಲೆ ಅದರಲ್ಲಿ ಸತ್ಯಾಂಶಗಳಿರುತ್ತವೆ ಎಂದು ಕೆಲವರು ಓದುತ್ತಿದ್ದರು. ಮುಖ್ಯವಾಗಿ ಯಡಿಯೂರಪ್ಪನವರ ಕಡೆಯವರ ನಡುವೆ ಪತ್ರಿಕೆ ಹೆಚ್ಚು ಚರ್ಚೆಯಾಗುತ್ತಿತ್ತು. ಅದೇ ಸಮಯದಲ್ಲಿ ಮಹದೇವ ಪ್ರಕಾಶ್ ಟಿವಿಯೊಳಗೆ ರಾಜಕೀಯ ವಿಶ್ಲೇಷಕರಾಗಿ ಬಂದು ಕುಳಿತರು. ಅಲ್ಲಿ ಬಂದು ಕುಳಿತ ಮೇಲೆ ನಿರಂತರವಾಗಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಪೂರ್ವಾಗ್ರಹಗಳಿದ್ದರೆ ಸಾಕು, ಸುಳ್ಳುಗಳು ತಾನಾಗಿಯೇ ಹರಿದು ಬರುತ್ತವೆ.

ಒಮ್ಮೆ ಅವರು ಟಿವಿಯಲ್ಲಿ ಮಾತಾನಾಡುತ್ತ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಯತೀಂದ್ರನನ್ನು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡುತ್ತ ಶಾಂತವೇರಿ ಗೋಪಾಲಗೌಡರು ತಾವು ಅನಾರೋಗ್ಯಕ್ಕೆ ತುತ್ತಾದಾಗ ತಮ್ಮ ಮಗಳನ್ನು ಅಭ್ಯರ್ಥಿಯನ್ನಾಗಿ ಮಾಡುವುದರ ಬದಲು ಬೆಸ್ತ ಜನಾಂಗದ ಕೊಣಂದೂರು ಲಿಂಗಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಅಂತಹ ತ್ಯಾಗಮಯಿ ರಾಜಕಾರಣಿ ಎಲ್ಲಿ, ಈ ಸಿದ್ದರಾಮಯ್ಯನೆಲ್ಲಿ ಎಂದರು. ಆಗ ನಾನು ಗೌರಿ ಎದುರು ಕುಳಿತಿದ್ದೆ. ಅವರು ಹೇಳಿದ ಸುಳ್ಳನ್ನು ಗೌರಿಗೆ ಹೇಳಿದೆ. ಫೋನ್ ಮಾಡಲು ನಂಬರ್ ಕೊಟ್ಟಳು. ತುಸು ಹೊತ್ತಾದ ನಂತರ ಮಹದೇವ ಪ್ರಕಾಶ್‌ಗೆ ಫೋನ್ ಮಾಡಿ:

ಏನ್ ಸಾರ್ ಈ ತರ ಸುಳ್ಳು ಹೇಳ್ತಾ ಇದ್ದೀರಿ ಎಂದೆ.

ನಾನ್ಯಾವ ಸುಳ್ಳು ಹೇಳಿದೆ ಅಂದ್ರು.

ನೋಡಿ ಗೋಪಾಲಗೌಡ್ರು ಅನಾರೋಗ್ಯದಲ್ಲಿದ್ದು, ತೀರ್ಥಹಳ್ಳಿ ಕ್ಷೇತ್ರ ಬಿಟ್ಟುಕೊಟ್ಟಾಗ, ಅವರ ಮಗಳಿಗೆ ಐದಾರು ವರ್ಷ ಇರಬಹುದು. ಇನ್ನು ಕೊಣಂದೂರು ಲಿಂಗಪ್ಪ ಬೆಸ್ತರ ಪೈಕಿ ಅಲ್ಲ, ಬೋವಿ ಪೈಕಿ. ನಿಮ್ಮಂಥವರು ಟಿವಿ ಒಳಗಡೆ ಕುಂತುಗಂಡು ಚೆಡ್ಡಿಗಳ ತರ ಸುಳ್ಳು ಹೇಳಬಾರ್ದು ಎಂದೆ.

ಚಂದ್ರೇಗೌಡ್ರೆ ತಪ್ಪಿದ್ರೆ ಹೇಳಿ ತಿದ್ದಿಕೊಳ್ಳೋಣ ಆದ್ರೆ ಚೆಡ್ಡಿಗಳು ಅನ್ನಬೇಡಿ ಎಂದರು.

ನೀವು ಇದುವರಿಗೂ ಹೇಳಿರೋ ಸುಳ್ಳುಗಳ ಲೆಕ್ಕಹಾಕಿದ್ರೆ ಚೆಡ್ಡಿಗಳು ಮಾತ್ರ ಇಷ್ಟು ಸುಳ್ಳೇಳಕ್ಕೆ ಸಾಧ್ಯ. ಮುಂದಿನ ವಾರ ಹೈಕಮಾಂಡು ಬಂದು ಸಿದ್ದರಾಮಯ್ಯನ್ನ ಇಳಸತ್ತೆ ಅಂತ ಮೂರು ತಿಂಗಳಿಂದ ಹೇಳ್ತ ಇದ್ದೀರಿ ಎಂದು ಆ ಕಡೆಯ ಯಾವ ವಿವರವನ್ನ ಕೇಳಿಸಿಕೊಳ್ಳದೆ ದಾಳಿ ಮಾಡಿದೆ. ಗೌರಿ ನಗುತ್ತ ಹೋಗ್ಲಿ ಬುಡ್ರಿ ಎಂದಳು. ಆಗ ಮನಸ್ಸಿಗೆ ಎಂತದೊ ಸಮಾಧಾನವಾಯ್ತು!

ಮಹದೇವ ಪ್ರಕಾಶರ ಟಿವಿ ವಿಶ್ಲೇಷಣೆ ಮತ್ತು ಭಾನುವಾರ ಪತ್ರಿಕೆ ಸತತವಾಗಿ ಸಿದ್ದರಾಮಯ್ಯನ ಸರಕಾರವನ್ನು ಟೀಕಿಸಿದ್ದು ಫಲ ಕೊಟ್ಟಿತ್ತು. ಯೆಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡರು. ಎಂದಿನಂತೆ ಯಡಿಯೂರಪ್ಪ ಯಾರ್‍ಯಾರಿಗೆ ಆಶ್ವಾಸನೆ ಕೊಟ್ಟಿದ್ದರೋ ಏನೋ ಸಲಹೆಗಾರನಾಗಿ ಮಹದೇವ ಪ್ರಕಾಶರ ಅಲ್ಪ ಅವಧಿ ಮುಗಿಯಿತು.

ತೀರಿಕೊಂಡವರ ಬಗ್ಗೆ ಹಗುರವಾಗಿ ಮಾತನಾಡಬಾರದಂತೆ. ಆದರೂ ಒಂದು ಕಾಲದ ಗೌರವಾನ್ವಿತ ವ್ಯಕ್ತಿಯಾಗಿದ್ದ ಮಹದೇವರು ಹೀಗಾಗುವ ಅಗತ್ಯವಿರಲಿಲ್ಲ ಎಂಬುದು ಹಗುರವಾದ ಮಾತಲ್ಲ.


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿ ಪ್ರತಿಭಟನೆ ತಡೆಯುವ ಆದೇಶ ವಾಪಸ್: ತೀವ್ರ ವಿರೋಧದ ಬೆನ್ನಲ್ಲೇ ಹಿಂದೆ ಸರಿದ ತಮಿಳುನಾಡು ಸರ್ಕಾರ

ಎಡಪಕ್ಷಗಳು ಹಾಗೂ ತಮಿಳುನಾಡು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಘಟಿಸಿದ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ತಡೆಯುವ ವಿವಾದಾತ್ಮಕ ಆದೇಶವನ್ನು ತೀವ್ರ ವಿರೋಧದ ಬೆನ್ನಲ್ಲೇ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಹಿಂಪಡೆದಿದೆ. ಶಾಲಾ ಶಿಕ್ಷಣ...

“ದಲಿತ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ..’ ಬಿಜೆಪಿಯ ರಾಜೀನಾಮೆ ಬೇಡಿಕೆಗೆ ಸಚಿವ ಬಿ. ನಾಗೇಂದ್ರ ತಿರುಗೇಟು

"ನಾನು ದಲಿತ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ" ಎಂದು ಸಚಿವ ಬಿ. ನಾಗೇಂದ್ರ ಅವರು ತಮ್ಮ ರಾಜೀನಾಮೆ ಪಟ್ಟು ಹಿಡಿದಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. "ಕೇಂದ್ರ ಸಚಿವರು...

ಉತ್ತರ ಪ್ರದೇಶ : ಮಾಜಿ ಸಚಿವ ಆಝಂ ಖಾನ್, ಮೊಹಮ್ಮದ್ ಅಲಿ ಜೌಹರ್ ವಿವಿಗೆ ಸೇರಿದ 10 ಸ್ಥಳಗಳಲ್ಲಿ ಇಡಿ ಶೋಧ

ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ (ಆ.19) ಉತ್ತರ ಪ್ರದೇಶದ ರಾಂಪುರ, ಸಹಾರನ್‌ಪುರ ಮತ್ತು ದೆಹಲಿಯಲ್ಲಿ ಶೋಧ ನಡೆಸಿದೆ. ವರದಿಗಳ ಪ್ರಕಾರ, ಹಣ ಅಕ್ರಮ...

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ರದ್ದು: ಹೈಕೋರ್ಟ್‌ನಿಂದ ಮರುನೇಮಕಕ್ಕೆ ಆದೇಶ

ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ...

ಗೋಡ್ಸೆ ಹೊಗಳಿಕೆ, ದಲಿತದ್ವೇಷ, ಸ್ತ್ರೀದ್ವೇಷ ಮತ್ತು ಮುಸ್ಲಿಂ ದ್ವೇಷ: ತೀವ್ರ ಪರಿಶೀಲನೆಯಲ್ಲಿರುವ ಬಿಜೆಪಿಯ ಹೊಸ ಸಾಮಾಜಿಕ ಮಾಧ್ಯಮ ತಂಡದ ವಿರುದ್ಧ ಜನಾಕ್ರೋಶ

ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಹಳೆಯ ಪೋಸ್ಟ್‌ಗಳು, ಇಸ್ಲಾಮೋಫೋಬಿಕ್ ಹಾಗೂ ಜನಾಂಗೀಯ ಹತ್ಯೆಯ ಹೇಳಿಕೆಗಳು, ದಲಿತ ಹಾಗೂ ಮೀಸಲಾತಿ ವಿರೋಧಿ ಮಾತುಗಳು ಮತ್ತು ಮಹಿಳೆಯರ ವಿರುದ್ಧ ಬಳಸಿರುವ ಸ್ತ್ರೀದ್ವೇಷದ ಭಾಷೆಯ ಕಾರಣಕ್ಕಾಗಿ...

‘ಮಹಾತ್ಮ ಗಾಂಧಿ – ವಾಜಪೇಯಿ ಹಾಡಿದ್ದನ್ನೇ ನಾವು ಹಾಡಿದ್ದೇವೆ..’; ವಂದೇ ಮಾತರಂ ವಿವಾದದ ಕುರಿತು ಖರ್ಗೆ ಸ್ಪಷ್ಟನೆ

ಪಕ್ಷದ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ಬಗ್ಗೆ ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್...

ದೆಹಲಿ ಪೊಲೀಸರಿಂದ AAP ಶಾಸಕನ ಅಪಹರಣ?: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ತುರ್ತು ವಿಚಾರಣೆಗೆ ಅಸ್ತು!

AAP ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಅವರ ಮನೆಯಿಂದ ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಒಪ್ಪಿಗೆ...

ಅದಾನಿ-ಎಲ್‌ಐಸಿ ತನಿಖಾ ವರದಿ: ಪತ್ರಕರ್ತ ರವಿ ನಾಯರ್ ಮನೆಗಳ ಮೇಲೆ ಗುಜರಾತ್ ಪೊಲೀಸರ ದಾಳಿ, ಡಿಜಿಟಲ್ ಉಪಕರಣಗಳ ವಶ

ಅದಾನಿ ಸಮೂಹ ಹಾಗೂ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ನಡುವಿನ ಹೂಡಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ತನಿಖಾ ವರದಿ ಪ್ರಕಟಿಸಿದ್ದ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರ ದೆಹಲಿ ಮತ್ತು ಕೇರಳದಲ್ಲಿರುವ...

ಗುಜರಾತ್ | ನಕಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿ ಸರ್ಕಾರದ ಅನುದಾನ ಲೂಟಿ; ಬೃಹತ್ ಹಗರಣ ಬಯಲು

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಸರಿನಲ್ಲಿ 6 ನಕಲಿ ಸರ್ಕಾರಿ ಕಚೇರಿಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ...

ಎನ್‌ಎಎಲ್‌ಎಸ್‌ಎಆರ್‌ ಘಟಿಕೋತ್ಸವದ ಆಹ್ವಾನವನ್ನು ನಾನು ಸ್ವೀಕರಿಸಿರಲೇ ಇಲ್ಲ: ಸಿಜೆಐ ಸೂರ್ಯ ಕಾಂತ್

ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ಮುಂಬರುವ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ನಾನು ಎಂದಿಗೂ ಒಪ್ಪಿಗೆ ನೀಡಿರಲಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ವಿರೋಧದ ನಡುವೆಯೂ...