ಥಾಣೆಯ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ (ಎಂಎಸಿಟಿ) 2019 ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಉದ್ಯಮಿಗೆ ₹ 31.39 ಲಕ್ಷ ಪರಿಹಾರವನ್ನು ನೀಡಿದೆ.
ಗೋಪಿಚಂದ್ ಶಂಕರ್ ಪಾಟೀಲ್ (38) ಅವರು ಮಾರ್ಚ್ 13, 2019 ರಂದು ಘೋಡ್ಬಂದರ್ ರಸ್ತೆಯಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರು ತೀವ್ರವಾಗಿ ಗಾಯಗೊಂಡರು. ಕಾರು ಚಾಲಕನು ಸ್ಥಳದಿಂದ ಪರಾರಿಯಾಗಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಜಾಗರೂಕ ಚಾಲನೆ ಹಾಗೂ ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ.
ಆಗ ವಾರ್ಷಿಕ ₹5 ಲಕ್ಷ ಆದಾಯ ಹೊಂದಿದ್ದ ಪಾಟೀಲ್, ಅಪಘಾತದಿಂದ ಶೇ 40ರಷ್ಟು ಅಂಗವೈಕಲ್ಯ ಹೊಂದಿರುವುದಾಗಿ ಹೇಳಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ನವೆಂಬರ್ 12ರ ಆದೇಶದಲ್ಲಿ ಎಸ್.ಎನ್.ಷಾ ಅವರ ನೇತೃತ್ವದಲ್ಲಿ ಎಂಎಸಿಟಿಯು ಪಾಟೀಲ್ ಅವರಿಗೆ ಭವಿಷ್ಯದ ಆದಾಯ ನಷ್ಟಕ್ಕೆ ₹25.65 ಲಕ್ಷ ಹಾಗೂ ವೈದ್ಯಕೀಯ ವೆಚ್ಚಕ್ಕೆ ₹3.74 ಲಕ್ಷ ಸೇರಿದಂತೆ ₹31.39 ಲಕ್ಷ ನೀಡಿದೆ.
ಇದನ್ನೂ ಓದಿ; ಚುನಾವಣೆ ಹೊತ್ತಿನಲ್ಲಿ ‘ಎಎಪಿ’ಗೆ ಭಾರೀ ಹಿನ್ನಡೆ; ಪಕ್ಷ ತೊರೆದ ದೆಹಲಿ ಸಚಿವ ಕೈಲಾಶ್ ಗಹ್ಲೋಟ್


