Homeಅಂಕಣಗಳುಜನಪರ ಹೋರಾಟಗಾರರ ಅಕ್ರಮ ಬಂಧನ

ಜನಪರ ಹೋರಾಟಗಾರರ ಅಕ್ರಮ ಬಂಧನ

- Advertisement -
- Advertisement -

| ಗೌರಿ ಲಂಕೇಶ್
ಜೂನ್ 3, 2009 (ಸಂಪಾದಕೀಯದಿಂದ) |

ಮಾನವತಾವಾದಿ ಬಿನಾಯಕ್ ಸೇನ್‍ರವರ ಅಕ್ರಮ ಬಂಧನ ಕುರಿತಂತೆ ಬರಹಗಾರ ಅಸೀಮ್ ಶ್ರೀವಾಸ್ತವ ಅವರು ಇತ್ತೀಚೆಗೆ ಬರೆದಿರುವ ಲೇಖನದಲ್ಲಿ ಹಲವು ಸ್ವಾರಸ್ಯಕರವಾದ ಸಂಗತಿಗಳಿವೆ. ಅವನ್ನು ಇಲ್ಲಿ ನೀಡಬೇಕೆನಿಸುತ್ತಿದೆ.
ಮೊದಲನೆಯದು ಇಬ್ಬರು ಖ್ಯಾತ ಅಮೆರಿಕನ್ನರ ನಡುವೆ ಸಂಭವಿಸಿದ್ದು.
ಮೆಕ್ಸಿಕೋ ದೇಶದ ಮೇಲೆ ಅಮೆರಿಕ ದಾಳಿ ಮಾಡಿದಾಗ ಖ್ಯಾತ ನಿಸರ್ಗವಾದಿ ಹೆನ್ರಿ ಥೋರೊ ಅದನ್ನು ಪ್ರತಿಭಟಿಸಿದರಲ್ಲದೆ, ತಮ್ಮ ಸರ್ಕಾರದ ನಿಲುವಿನ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ತೆರಿಗೆಗಳನ್ನು ಕಟ್ಟಲು ನಿರಾಕರಿಸಿದ್ದರು. ಆಗ ಅಮೆರಿಕನ್ ಸರ್ಕಾರ ಥೋರೊ ಅವರನ್ನು ಬಂಧಿಸಿ ಜೈಲಿಗಟ್ಟಿತು.
ಥೋರೊ ಅವರ ಸ್ನೇಹಿತ ಮತ್ತು ಹಿತೈಷಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಬರಹಗಾರ ರಾಲ್ಫನಾಲ್ವ ಎಮರ್ಸನ್ ಥೋರೊರನ್ನು ನೋಡಲು ಜೈಲಿಗೆ ಬಂದರು. ಜೈಲಿನ ಸರಳುಗಳ ಹಿಂದಿದ್ದ ಥೋರೊ ಅವರನ್ನು ಕಂಡು ಎಮರ್ಸನ್ ಅವರು “ನೀನು ಇದರೊಳಗೆ ಏನು ಮಾಡುತ್ತಿದ್ದೀಯಾ?” ಎಂದು ಕೇಳಿದರು. ಆಗ ಥೋರೊ “ನೀನು ಹೊರಗಡೆ ಏನು ಮಾಡುತ್ತಿದ್ದೀಯಾ?” ಎಂದು ಮರುಪ್ರಶ್ನೆ ಹಾಕುವ ಮೂಲಕ ಉತ್ತರಿಸಿದರು. ಅದನ್ನು ಕೇಳಿ ಎಮರ್ಸನ್‍ರವರ ಮುಖ ನಾಚಿಕೆಯಿಂದ ಕೆಂಪೇರಿತು.
ಅಂದರೆ, ತನ್ನಂಥವರನ್ನೇ ಸರ್ಕಾರ ಬಂಧಿಸಿರುವಾಗ ಎಮರ್ಸನ್ ಥರದ ಜನ ಹೊರಗಡೆ ಏನು ಮಾಡುತ್ತಿದ್ದಾರೆ ಎಂಬುದೇ ಥೋರೊ ಅವರ ಪ್ರಶ್ನೆಯಾಗಿತ್ತು.
ಎರಡನೆ ಸಂಗತಿ ಎರಡು ರೀತಿಯ ಜನರ ಪಟ್ಟಿಗಳಿಗೆ ಸಂಬಂಧಪಟ್ಟಿದ್ದು.
ಮೊದಲನೆ ಪಟ್ಟಿಯಲ್ಲಿ ಸಾಕ್ರೆಟೀಸ್, ನೆಲ್ಸನ್ ಮಂಡೇಲ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಜಯಪ್ರಕಾಶ್ ನಾರಾಯಣ್, ಫೈಜ್ ಅಹಮ್ಮದ್ ಫೈಜ್, ಬಿನಾಯಕ್ ಸೇನ್, ಇರೋಮ್ ಶರ್ಮಿಳಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಹೆನ್ರಿ ಥೋರೊ ಮತ್ತು ಫ್ರೆಡೋರ್ ದಸ್ತೋವಸ್ಕಿ ತರಹದ ಜನ ಇದ್ದಾರೆ. ಅವರೆಲ್ಲರ ನಡುವೆ ಒಂದು ಸಾಮ್ಯತೆ ಇದೆ. ಆ ಸಾಮ್ಯತೆ ಏನು?
ಎರಡನೆ ಪಟ್ಟಿಯಲ್ಲಿ ಒಸಾಮಾ ಬಿನ್ ಲಾಡನ್, ಜಗದೀಶ್ ಟೈಟ್ಲರ್, ಸಜ್ಜನ ಕುಮಾರ್, ನರೇಂದ್ರ ಮೋದಿ, ಜ್ಯೋತಿ ಬಸು, ಬಾಳಾ ಠಾಕ್ರೆ, ಜಾರ್ಜ್ ಬುಷ್, ಟೋನಿ ಬ್ಲೇರ್, ಡೊನಾಲ್ಡ್ ರಮ್ಸ್‍ಫೆಲ್ಟ್, ಡಿಕ್ ಚೆನಿ, ಹಿಟ್ಲರ್ ಮತ್ತು ಜೋಸೆಫ್ ಸ್ಟಾಲಿನ್ ಥರದವರಿದ್ದಾರೆ. ಇವರೆಲ್ಲರ ನಡುವೆಯೂ ಒಂದು ರೀತಿಯ ಸಾಮ್ಯತೆ ಇದೆ. ಈ ಸಾಮ್ಯತೆ ಏನು?
ಮೊದಲನೆ ಪಟ್ಟಿಯಲ್ಲಿರುವವರೆಲ್ಲರೂ ಸರ್ಕಾರ ನಡೆಸುತ್ತಿದ್ದ ಅನ್ಯಾಯಗಳನ್ನು ಪ್ರತಿಭಟಿಸಿದ್ದಕ್ಕೆ ಜೈಲಿಗೆ ದೂಡಲ್ಪಟ್ಟವರು. ಎರಡನೇ ಪಟ್ಟಿಯಲ್ಲಿರುವವರು ಸಾಮೂಹಿಕ ಮಾರಣಹೋಮಕ್ಕೆ ಕಾರಣೀಭೂತರಾಗಿದ್ದರೂ, ಎಂದೂ ಶಿಕ್ಷೆಗೆ ಗುರಿಯಾಗದೆ ಸಮಾಜದಲ್ಲಿ ಮೆರೆದವರು.
ಶ್ರೀವಾಸ್ತವ ಅವರ ಲೇಖನದಲ್ಲಿನ ಮೂರನೆ ಸಂಗತಿ ದಾಮೋದರ್ ರಥ್ ಎಂಬಾತನನ್ನು ಕುರಿತದ್ದು, ಒರಿಸ್ಸಾದ ಭಿನ್ನಮತೀಯರಾದ ರಥ್ ಅವರು ಕೆಲ ವರ್ಷಗಳ ಹಿಂದೆ ಒಂದು ಜೈಲಿನ ಬಾಗಿಲಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅವರ ಬೇಡಿಕೆ ಏನಾಗಿತ್ತೆಂದರೆ ಒರಿಸ್ಸಾ ಸರ್ಕಾರ ತನ್ನ ಪೆದ್ದುತನದಿಂದಾಗಿ ಹಲವಾರು ಅಮಾಯಕ ಜನರನ್ನು ಅಕ್ರಮಬಾಗಿ ಜೈಲಿನಲ್ಲಿಟ್ಟಿದ್ದರಿಂದ ತನ್ನನ್ನೂ ಜೈಲಿನಲ್ಲಿ ಬಂಧಿಸಬೇಕೆಂಬುದೇ ಆಗಿತ್ತು.
ರಥ್‍ರವರು ಹೀಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಹತ್ತು ದಿನಗಳ ಕಾಲ ಮುಂದುವರೆಸಿದಾಗ ಕೊನೆಗೂ ಜೈಲಧಿಕಾರಿಯೊಬ್ಬ ಬಂದು “ನೀನು ಯಾಕೆ ಇಷ್ಟು ಕಷ್ಟ ಅನುಭವಿಸುತ್ತಿದ್ದೀಯಾ?” ಎಂದು ಕೇಳಿದ. ಆಗ ರಥ್ “ಜೈಲಿನ ಹೊರಗಡೆಗಿಂತ ಜೈಲಿನೊಳಗೇ ಉತ್ತಮ ಜನರಿದ್ದಾರೆ. ಅದಕ್ಕೆ” ಎಂದು ಉತ್ತರಿಸಿದರು. ಮರುಕ್ಷಣವೇ ರಥ್‍ರವರ ಮಿತ್ರರನ್ನು ಬಂಧಮುಕ್ತರನ್ನಾಗಿಸಲಾಯಿತು.
ಶ್ರೀವಾಸ್ತವ ಅವರ ಲೇಖನದ ಸಾರಾಂಶ ಇವತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ನೆಪದಲ್ಲಿ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ತೊಡಗಿದೆ. ಆದರೆ ನಾವು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದ್ದರೆ ಸರ್ಕಾರವೇ ಭಯೋತ್ಪಾದಕನಂತೆ ವರ್ತಿಸುವುದನ್ನು ನಾವೆಲ್ಲರೂ ಜೊತೆಗೂಡಿ ತಡೆಯಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...