Homeಅಂಕಣಗಳುಜನಪರ ಹೋರಾಟಗಾರರ ಅಕ್ರಮ ಬಂಧನ

ಜನಪರ ಹೋರಾಟಗಾರರ ಅಕ್ರಮ ಬಂಧನ

- Advertisement -
- Advertisement -

| ಗೌರಿ ಲಂಕೇಶ್
ಜೂನ್ 3, 2009 (ಸಂಪಾದಕೀಯದಿಂದ) |

ಮಾನವತಾವಾದಿ ಬಿನಾಯಕ್ ಸೇನ್‍ರವರ ಅಕ್ರಮ ಬಂಧನ ಕುರಿತಂತೆ ಬರಹಗಾರ ಅಸೀಮ್ ಶ್ರೀವಾಸ್ತವ ಅವರು ಇತ್ತೀಚೆಗೆ ಬರೆದಿರುವ ಲೇಖನದಲ್ಲಿ ಹಲವು ಸ್ವಾರಸ್ಯಕರವಾದ ಸಂಗತಿಗಳಿವೆ. ಅವನ್ನು ಇಲ್ಲಿ ನೀಡಬೇಕೆನಿಸುತ್ತಿದೆ.
ಮೊದಲನೆಯದು ಇಬ್ಬರು ಖ್ಯಾತ ಅಮೆರಿಕನ್ನರ ನಡುವೆ ಸಂಭವಿಸಿದ್ದು.
ಮೆಕ್ಸಿಕೋ ದೇಶದ ಮೇಲೆ ಅಮೆರಿಕ ದಾಳಿ ಮಾಡಿದಾಗ ಖ್ಯಾತ ನಿಸರ್ಗವಾದಿ ಹೆನ್ರಿ ಥೋರೊ ಅದನ್ನು ಪ್ರತಿಭಟಿಸಿದರಲ್ಲದೆ, ತಮ್ಮ ಸರ್ಕಾರದ ನಿಲುವಿನ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ತೆರಿಗೆಗಳನ್ನು ಕಟ್ಟಲು ನಿರಾಕರಿಸಿದ್ದರು. ಆಗ ಅಮೆರಿಕನ್ ಸರ್ಕಾರ ಥೋರೊ ಅವರನ್ನು ಬಂಧಿಸಿ ಜೈಲಿಗಟ್ಟಿತು.
ಥೋರೊ ಅವರ ಸ್ನೇಹಿತ ಮತ್ತು ಹಿತೈಷಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಬರಹಗಾರ ರಾಲ್ಫನಾಲ್ವ ಎಮರ್ಸನ್ ಥೋರೊರನ್ನು ನೋಡಲು ಜೈಲಿಗೆ ಬಂದರು. ಜೈಲಿನ ಸರಳುಗಳ ಹಿಂದಿದ್ದ ಥೋರೊ ಅವರನ್ನು ಕಂಡು ಎಮರ್ಸನ್ ಅವರು “ನೀನು ಇದರೊಳಗೆ ಏನು ಮಾಡುತ್ತಿದ್ದೀಯಾ?” ಎಂದು ಕೇಳಿದರು. ಆಗ ಥೋರೊ “ನೀನು ಹೊರಗಡೆ ಏನು ಮಾಡುತ್ತಿದ್ದೀಯಾ?” ಎಂದು ಮರುಪ್ರಶ್ನೆ ಹಾಕುವ ಮೂಲಕ ಉತ್ತರಿಸಿದರು. ಅದನ್ನು ಕೇಳಿ ಎಮರ್ಸನ್‍ರವರ ಮುಖ ನಾಚಿಕೆಯಿಂದ ಕೆಂಪೇರಿತು.
ಅಂದರೆ, ತನ್ನಂಥವರನ್ನೇ ಸರ್ಕಾರ ಬಂಧಿಸಿರುವಾಗ ಎಮರ್ಸನ್ ಥರದ ಜನ ಹೊರಗಡೆ ಏನು ಮಾಡುತ್ತಿದ್ದಾರೆ ಎಂಬುದೇ ಥೋರೊ ಅವರ ಪ್ರಶ್ನೆಯಾಗಿತ್ತು.
ಎರಡನೆ ಸಂಗತಿ ಎರಡು ರೀತಿಯ ಜನರ ಪಟ್ಟಿಗಳಿಗೆ ಸಂಬಂಧಪಟ್ಟಿದ್ದು.
ಮೊದಲನೆ ಪಟ್ಟಿಯಲ್ಲಿ ಸಾಕ್ರೆಟೀಸ್, ನೆಲ್ಸನ್ ಮಂಡೇಲ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಜಯಪ್ರಕಾಶ್ ನಾರಾಯಣ್, ಫೈಜ್ ಅಹಮ್ಮದ್ ಫೈಜ್, ಬಿನಾಯಕ್ ಸೇನ್, ಇರೋಮ್ ಶರ್ಮಿಳಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಹೆನ್ರಿ ಥೋರೊ ಮತ್ತು ಫ್ರೆಡೋರ್ ದಸ್ತೋವಸ್ಕಿ ತರಹದ ಜನ ಇದ್ದಾರೆ. ಅವರೆಲ್ಲರ ನಡುವೆ ಒಂದು ಸಾಮ್ಯತೆ ಇದೆ. ಆ ಸಾಮ್ಯತೆ ಏನು?
ಎರಡನೆ ಪಟ್ಟಿಯಲ್ಲಿ ಒಸಾಮಾ ಬಿನ್ ಲಾಡನ್, ಜಗದೀಶ್ ಟೈಟ್ಲರ್, ಸಜ್ಜನ ಕುಮಾರ್, ನರೇಂದ್ರ ಮೋದಿ, ಜ್ಯೋತಿ ಬಸು, ಬಾಳಾ ಠಾಕ್ರೆ, ಜಾರ್ಜ್ ಬುಷ್, ಟೋನಿ ಬ್ಲೇರ್, ಡೊನಾಲ್ಡ್ ರಮ್ಸ್‍ಫೆಲ್ಟ್, ಡಿಕ್ ಚೆನಿ, ಹಿಟ್ಲರ್ ಮತ್ತು ಜೋಸೆಫ್ ಸ್ಟಾಲಿನ್ ಥರದವರಿದ್ದಾರೆ. ಇವರೆಲ್ಲರ ನಡುವೆಯೂ ಒಂದು ರೀತಿಯ ಸಾಮ್ಯತೆ ಇದೆ. ಈ ಸಾಮ್ಯತೆ ಏನು?
ಮೊದಲನೆ ಪಟ್ಟಿಯಲ್ಲಿರುವವರೆಲ್ಲರೂ ಸರ್ಕಾರ ನಡೆಸುತ್ತಿದ್ದ ಅನ್ಯಾಯಗಳನ್ನು ಪ್ರತಿಭಟಿಸಿದ್ದಕ್ಕೆ ಜೈಲಿಗೆ ದೂಡಲ್ಪಟ್ಟವರು. ಎರಡನೇ ಪಟ್ಟಿಯಲ್ಲಿರುವವರು ಸಾಮೂಹಿಕ ಮಾರಣಹೋಮಕ್ಕೆ ಕಾರಣೀಭೂತರಾಗಿದ್ದರೂ, ಎಂದೂ ಶಿಕ್ಷೆಗೆ ಗುರಿಯಾಗದೆ ಸಮಾಜದಲ್ಲಿ ಮೆರೆದವರು.
ಶ್ರೀವಾಸ್ತವ ಅವರ ಲೇಖನದಲ್ಲಿನ ಮೂರನೆ ಸಂಗತಿ ದಾಮೋದರ್ ರಥ್ ಎಂಬಾತನನ್ನು ಕುರಿತದ್ದು, ಒರಿಸ್ಸಾದ ಭಿನ್ನಮತೀಯರಾದ ರಥ್ ಅವರು ಕೆಲ ವರ್ಷಗಳ ಹಿಂದೆ ಒಂದು ಜೈಲಿನ ಬಾಗಿಲಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅವರ ಬೇಡಿಕೆ ಏನಾಗಿತ್ತೆಂದರೆ ಒರಿಸ್ಸಾ ಸರ್ಕಾರ ತನ್ನ ಪೆದ್ದುತನದಿಂದಾಗಿ ಹಲವಾರು ಅಮಾಯಕ ಜನರನ್ನು ಅಕ್ರಮಬಾಗಿ ಜೈಲಿನಲ್ಲಿಟ್ಟಿದ್ದರಿಂದ ತನ್ನನ್ನೂ ಜೈಲಿನಲ್ಲಿ ಬಂಧಿಸಬೇಕೆಂಬುದೇ ಆಗಿತ್ತು.
ರಥ್‍ರವರು ಹೀಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಹತ್ತು ದಿನಗಳ ಕಾಲ ಮುಂದುವರೆಸಿದಾಗ ಕೊನೆಗೂ ಜೈಲಧಿಕಾರಿಯೊಬ್ಬ ಬಂದು “ನೀನು ಯಾಕೆ ಇಷ್ಟು ಕಷ್ಟ ಅನುಭವಿಸುತ್ತಿದ್ದೀಯಾ?” ಎಂದು ಕೇಳಿದ. ಆಗ ರಥ್ “ಜೈಲಿನ ಹೊರಗಡೆಗಿಂತ ಜೈಲಿನೊಳಗೇ ಉತ್ತಮ ಜನರಿದ್ದಾರೆ. ಅದಕ್ಕೆ” ಎಂದು ಉತ್ತರಿಸಿದರು. ಮರುಕ್ಷಣವೇ ರಥ್‍ರವರ ಮಿತ್ರರನ್ನು ಬಂಧಮುಕ್ತರನ್ನಾಗಿಸಲಾಯಿತು.
ಶ್ರೀವಾಸ್ತವ ಅವರ ಲೇಖನದ ಸಾರಾಂಶ ಇವತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ನೆಪದಲ್ಲಿ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ತೊಡಗಿದೆ. ಆದರೆ ನಾವು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದ್ದರೆ ಸರ್ಕಾರವೇ ಭಯೋತ್ಪಾದಕನಂತೆ ವರ್ತಿಸುವುದನ್ನು ನಾವೆಲ್ಲರೂ ಜೊತೆಗೂಡಿ ತಡೆಯಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...