Homeಅಂತರಾಷ್ಟ್ರೀಯಆರ್‌ಎಸ್‌ಎಫ್‌ 'ಪತ್ರಿಕಾ ಸ್ವಾತಂತ್ರ್ಯ ಹರಣಗಾರರ' ಪಟ್ಟಿಯಲ್ಲಿ ಅದಾನಿ ಗ್ರೂಪ್, ಒಪ್‌ಇಂಡಿಯಾ

ಆರ್‌ಎಸ್‌ಎಫ್‌ ‘ಪತ್ರಿಕಾ ಸ್ವಾತಂತ್ರ್ಯ ಹರಣಗಾರರ’ ಪಟ್ಟಿಯಲ್ಲಿ ಅದಾನಿ ಗ್ರೂಪ್, ಒಪ್‌ಇಂಡಿಯಾ

- Advertisement -
- Advertisement -

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 151ನೇ ಸ್ಥಾನ ಪಡೆದಿದೆ. ಕಳೆದ ತಿಂಗಳು (ನೆವಂಬರ್ 2) ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಹರಣಗಾರರ ಪಟ್ಟಿಯಲ್ಲಿ ಭಾರತದ ಎರಡು ಸಂಸ್ಥೆಗಳ ಹೆಸರಿದೆ.

ಪತ್ರಿಕಾ ಸ್ವಾತಂತ್ರ್ಯ ಹರಣಗಾರರ ಪಟ್ಟಿಯಲ್ಲಿ ಪತ್ರಕರ್ತರನ್ನು ಕೊಲ್ಲುವ, ಸೆನ್ಸಾರ್ ಮಾಡುವ, ಜೈಲಿಗೆ ಹಾಕುವ, ಹಲ್ಲೆ ಮಾಡುವ, ಸುದ್ದಿ ಮಾಧ್ಯಮವನ್ನು ಹತ್ತಿಕ್ಕುವ, ಪತ್ರಿಕೋದ್ಯಮವನ್ನು ಅವಹೇಳನ ಮಾಡುವ ಅಥವಾ ಪ್ರಚಾರದ ಉದ್ದೇಶಗಳಿಗಾಗಿ ಮಾಹಿತಿಯನ್ನು ತಿರುಚಲು ಅದರ ಸಂಕೇತಗಳನ್ನು ಬಳಸುವ ಜನರು, ಸಂಸ್ಥೆಗಳು, ನಿಗಮಗಳು ಮತ್ತು ಸರ್ಕಾರಗಳು ಸೇರಿವೆ.

ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ ಮತ್ತು ಬಲಪಂಥೀಯ ಸುದ್ದಿ ವೆಬ್‌ಸೈಟ್ ಒಪ್ ಇಂಡಿಯಾವನ್ನು ‘ಪತ್ರಿಕಾ ಸ್ವಾತಂತ್ರ್ಯ ಹರಣಗಾರರು’ ಎಂದು ಆರ್‌ಎಸ್‌ಎಫ್ ಗುರುತಿಸಿದೆ.

ಜಾಗತಿಕವಾಗಿ ಪ್ರಬಲವಾಗಿರುವ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಕ್ಷ, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಹಾಗೂ ಗೂಗಲ್ ಮಾತೃಸಂಸ್ಥೆ ಆಲ್ಪಾಬೆಟ್ ಮತ್ತು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಹೆಸರುಗಳೂ ಪಟ್ಟಿಯಲ್ಲಿ ಇದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇತೃತ್ವದಲ್ಲಿ ಸುಮಾರು 220 ಪತ್ರಕರ್ತರ ಸಾವಿಗೆ ಕಾರಣರಾದ ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್‌), ಮ್ಯಾನ್ಮಾರ್‌ ಸ್ಟೇಟ್ ಪೀಸ್ ಅಂಡ್ ಸೆಕ್ಯೂರಿಟಿ ಕಮಿಷನ್, ಕ್ಯಾಪ್ಟನ್ ಇಬ್ರಾಹಿಂ ಟ್ರೊರೆ ನೇತೃತ್ವದ ಬುರ್ಕಿನಾ ಫಾಸೊದ ಮಿಲಿಟರಿ ಜುಂಟಾ ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಲು ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ಅನ್ನು ಬಳಸುವ ಬಿಲಿಯನೇರ್ ಎಲೋನ್ ಮಸ್ಕ್ ಕೂಡ ಪಟ್ಟಿಯಲ್ಲಿದ್ದಾರೆ.

ಅದಾನಿ

ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರ ಎಂದು ಆರ್‌ಎಸ್‌ಎಫ್ ಉಲ್ಲೇಖಿಸಿದೆ. ಗ್ಯಾಗ್ ಸೂಟ್ (ಬಾಯಿ ಮುಚ್ಚಿಸುವ ಪ್ರಕರಣಗಳು) ಎಂಬ ಯೋಜಿತ ತಂತ್ರದ ಭಾಗವಾಗಿ ಆದಾನಿ ಗ್ರೂಪ್ ಮತ್ತು ಅದರ ಅಂಗ ಸಂಸ್ಥೆಗಳು 2017ರಿಂದ ಇಲ್ಲಿಯವರೆಗೆ 15ಕ್ಕೂ ಹೆಚ್ಚು ವಿಮರ್ಶಾತ್ಮಕ ಪತ್ರಕರ್ತರ ಮತ್ತು ಸುದ್ದಿ ಮಾಧ್ಯಮಗಳ ವಿರುದ್ಧ ಸುಮಾರು 10 ಕಾನೂನು ಮೊಕದ್ದಮೆಗಳನ್ನು ಹೂಡಿವೆ. ಇವುಗಳಲ್ಲಿ ಹಣದ ಪರಿಹಾರ ಕೇಳುವ ಮೊಕದ್ದೆಮೆಗಳು (ಸಿವಿಲ್ ಡಿಫಾಮೇಷನ್ ಕೇಸ್) ಮತ್ತು ಜೈಲು ಶಿಕ್ಷೆಯ ಬೆದರಿಕೆ ಇರುವ ಮೊಕದ್ದೆಮೆಗಳು (ಕ್ರಿಮಿನಲ್ ಡಿಫಾಮೇಷನ್ ಕೇಸ್) ಸೇರಿವೆ. ಈ ಮೂಲಕ ಸ್ವತಂತ್ರ ಪತ್ರಿಕೆಗಳ ಧ್ವನಿಯನ್ನು ಅಡಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದೆ.

ಆದಾನಿ ಗ್ರೂಪ್‌ನ 2025ರ ‘ಹಿಟ್ ಲಿಸ್ಟ್‌ನಲ್ಲಿ (ಟಾರ್ಗೆಟ್ ಪಟ್ಟಿ) 8 ಪತ್ರಕರ್ತರ ಮತ್ತು 3 ಸುದ್ದಿ ಮಾಧ್ಯಮಗಳ ವಿರುದ್ಧ ಆದಾನಿ ಹೂಡಿರುವ ಒಂದು ಸಿವಿಲ್ ಡಿಫಾಮೇಷನ್ (ಹಣದ ಪರಿಹಾರ) ಮತ್ತು ಒಂದು ಕ್ರಿಮಿನಲ್ ಡಿಫಾಮೇಷನ್ (ಜೈಲು ಶಿಕ್ಷೆಯ ಬೆದರಿಕೆ) ಪ್ರಕರಣ ಸೇರಿ ಎರಡು ಮೊಕದ್ದೆಮೆಗಳು ಸೇರಿವೆ. ಈ ಪ್ರಕರಣಗಳಲ್ಲಿ ನ್ಯಾಯಾಲಯವು ‘ಎಕ್ಸ್‌ಪಾರ್ಟೆ ಇಂಜಂಕ್ಷನ್’ (ಒಂದು ಪಕ್ಷದ ವಾದ ಆಲಿಸಿ ತಾತ್ಕಾಲಿಕ ತಡೆಯಾಜ್ಞೆ) ನೀಡಿದೆ. ಆದಾನಿ ಗ್ರೂಪ್‌ಗೆ ತಾವೇ ಯಾವ ಸುದ್ದಿ/ಲೇಖನ ತನಗೆ ‘ಅಪಖ್ಯಾತಿ’ ತರುವಂತದ್ದು ಎಂದು ನಿರ್ಧರಿಸುವ ಅಧಿಕಾರ ಸಿಕ್ಕಿದೆ. ಪತ್ರಕರ್ತರಿಗೆ ಅಥವಾ ಮಾಧ್ಯಮಕ್ಕೆ ಅವರ ವಾದ ಆಲಿಸದೇ ಆ ವಿಷಯಗಳನ್ನು ತೆಗೆದುಹಾಕುವಂತೆ ಆದೇಶವಾಗಿದೆ. ಪ್ರಕರಣವನ್ನು ಗುರುತಿಸಲಾಗದ ಮೂರನೇ ವ್ಯಕ್ತಿಗಳಿಗೆ ವಿಸ್ತರಿಸಲಾಗಿದೆ ಮತ್ತು ಅನಿಯಮಿತ ಸೆನ್ಸಾರ್‌ಶಿಪ್‌ಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.

ದಿ ವೈರ್, ನ್ಯೂಸ್‌ಲಾಂಡ್ರಿ, ಹೆಚ್‌ಡಬ್ಲ್ಯೂ ನ್ಯೂಸ್ ಮತ್ತು ಸ್ವತಂತ್ರ ಪತ್ರಕರ್ತ ರವೀಶ್ ಕುಮಾರ್‌ನಂತಹ ಮಾಧ್ಯಮಗಳಿಗೆ ವಿಷಯಗಳನ್ನು ತೆಗೆದುಹಾಕುವ ಆದೇಶಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ಹೇಳಿರುವುದಾಗಿ ದಿ ವೈರ್ ತಿಳಿಸಿದೆ.

ವರದಿಯು ಗ್ಯಾಗ್ ಸೂಟ್‌ಗಳ ಬಳಕೆಯನ್ನು ಅದಾನಿಯ ಮಾರಕ ಆಯುಧವಾಗಿ ಗುರುತಿಸಿದೆ.

ಒಪ್‌ಇಂಡಿಯಾ

ಬಲಪಂಥೀಯಾ ಸುದ್ದಿ ವೆಬ್‌ಸೈಟ್ ಒಪ್‌ಇಂಡಿಯಾವನ್ನು ಪಿತೂರಿ ಸಿದ್ಧಾಂತಗಳ ಮಾರಕ ಆಯುಧ ಎಂದು ವರದಿ ಹೇಳಿದೆ. 2025ರಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಒಪ್‌ಇಂಡಿಯಾವನ್ನು ಹೆಸರಿಸಿದೆ.

“ಹಿಂದೂ ರಾಷ್ಟ್ರೀಯತಾವಾದಿ ವೆಬ್‌ಸೈಟ್ ಒಪ್‌ಇಂಡಿಯಾ ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಮೇಲೆ ಪದೇ ಪದೇ ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಒಪ್‌ಇಂಡಿಯಾದ ವಿಷಯವು ‘ಲಿಬರಲ್ ಮೀಡಿಯಾ ಕಾರ್ಟೆಲ್’ ವಿರುದ್ಧದ ಹೋರಾಟದ ಭಾಗವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಟ್ರೋಲ್ ನೆಟ್‌ವರ್ಕ್‌ಗಳ ಸಹಾಯದಿಂದ, ಇದು ನಿರ್ಣಾಯಕ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಗುರಿಯನ್ನು ಹೊಂದಿರುವ ನಿರೂಪಣೆಗಳನ್ನು ಪ್ರಸಾರ ಮಾಡುತ್ತದೆ, ಆಗಾಗ್ಗೆ ಅವರು ಯುಎಸ್ ಬಿಲಿಯನೇರ್ ಲೋಕೋಪಕಾರಿ ಅಥವಾ ಭಾರತ ವಿರೋಧಿ ಲಾಬಿ ಯ ಭಾಗವಾಗಿದ್ದಾರೆ ಎಂದು ಆರೋಪಿಸುತ್ತದೆ” ಎಂದು ವರದಿ ಹೇಳಿದೆ.

ಈ ವರ್ಷ ಒಪ್ಇಂಡಿಯಾ ಒಟ್ಟು 96 ಲೇಖನಗಳ ಮೂಲಕ ಪತ್ರಕರ್ತರು ಹಾಗೂ ಸ್ವತಂತ್ರ ಮಾಧ್ಯಮಗಳ ಮೇಲೆ ನೇರ ದಾಳಿ ನಡೆಸಿದೆ. 200 ಪುಟಗಳ ಒಂದು ವರದಿ ಪ್ರಕಟಿಸಿ, ಕೆಲವು ಪತ್ರಕರ್ತರು ಮತ್ತು ಮಾಧ್ಯಮಗಳು ಒಂದು ಗುಪ್ತ ಜಾಲ ರಚಿಸಿ ಮೋದಿ ಸರ್ಕಾರದ ವಿರುದ್ಧ ‘ನರೇಟಿವ್ ವಾರ್’ ನಡೆಸುತ್ತಿದ್ದಾರೆ ಮತ್ತು ಭಾರತದಲ್ಲಿ ‘ರೆಜೀಮ್ ಚೇಂಜ್’ (ಸರ್ಕಾರ ಉರುಳಿಸುವ ಯೋಜನೆ) ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಪೂರ್ತಿ ಕುಮ್ಮಕ್ಕು ಸಿದ್ಧಾಂತಗಳನ್ನು ಹರಡಿದೆ. ಈ ಲೇಖನಗಳು ಪ್ರಕಟವಾದ ತಕ್ಷಣ ಯೋಜಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ, ಬೆದರಿಕೆ ಮತ್ತು ಆನ್‌ಲೈನ್ ದೌರ್ಜನ್ಯದ ಬೃಹತ್ ಅಲೆಗಳು ಆ ಪತ್ರಕರ್ತರ ಮೇಲೆ ಬೀಳುವಂತೆ ಮಾಡಿದೆ. ಈ ಎಲ್ಲಾ ಕೃತ್ಯಗಳ ಮೂಲಕ ಸ್ವತಂತ್ರ ಪತ್ರಿಕೋದ್ಯಮವನ್ನು ಭಯಭೀತಿಗೊಳಿಸುವ ಮತ್ತು ಮೌನಗೊಳಿಸುವ ಉದ್ದೇಶ ಹೊಂದಿವೆ ಎಂಬುದು ಆರ್‌ಎಸ್‌ಎಫ್‌ ವರದಿಯ ಮುಖ್ಯ ಆತಂಕವಾಗಿದೆ.

ಸ್ವತಂತ್ರ ಮಾಧ್ಯಮ ಸಂಸ್ಥೆ ದಿ ನ್ಯೂಸ್ ಮಿನಿಟ್‌ನ ಸಹ-ಸಂಸ್ಥಾಪಕಿ ಮತ್ತು ಸಂಪಾದಕಿ ಧನ್ಯಾ ರಾಜೇಂದ್ರನ್ ಅವರನ್ನು ಪ್ರೈಝ್ ಫಾರ್ ಇಂಪ್ಯಾಕ್ಟ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಾನು ಘೋಷಿಸಿದ ನಂತರ, ಅಕ್ಟೋಬರ್ 23ರಂದು ಒಪ್‌ಇಂಡಿಯಾದಲ್ಲಿ ಅವರು ಮಾನಹಾನಿಕರ ವಿಷಯಕ್ಕೆ ಗುರಿಯಾಗಿದ್ದರು ಎಂದು ಆರ್‌ಎಸ್‌ಎಫ್‌ ತಿಳಿಸಿದೆ.

ಆರ್‌ಎಸ್‌ಎಫ್‌ ವರದಿಯನ್ನು ಇಲ್ಲಿ ನೋಡಬಹುದು

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ರಾಜಕೀಯದ ಬ್ರ್ಯಾಂಡ್ ನೇರವಾದದ್ದು, ಯಾರ ಬೆನ್ನಿಗೂ ಚೂರಿ ಹಾಕಲ್ಲ’: ಡಿ.ಕೆ. ಶಿವಕುಮಾರ್ 

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ಕದನ ವಿರಾಮದ ನಂತರ ಸಿಎಂ ಜೊತೆಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನ್ನ ಇತಿಮಿತಿ ತಿಳಿದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ...

ದಕ್ಷಿಣ ಭಾರತೀಯರಲ್ಲಿ ಹೃದಯ ಕಾಯಿಲೆಗಳ ಅಪಾಯ ಹೆಚ್ಚು: ಸಂಶೋಧನಾ ವರದಿಯಲ್ಲಿ ಬಹಿರಂಗ

ಬೆಂಗಳೂರಿನಲ್ಲಿ ನಡೆಸಿದ ಹೊಸ ಅಧ್ಯಯನವೊಂದರಲ್ಲಿ ದಕ್ಷಿಣ ಭಾರತೀಯರು ಹೈಪರ್ಟ್ರೋಫಿಕ್ ಕಾರ್ಡಿಯೊಮಯೋಪತಿಯ ಅಪಾಯವನ್ನು ಹೆಚ್ಚಿಸುವ ಹಾನಿಕಾರಕ ಆನುವಂಶಿಕ ರೂಪಾಂತರಗಳನ್ನು ಹೊಂದಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್‌ ಮತ್ತು ಹಿಂದೂಸ್ತಾನ್ ಟೈಮ್ಸ್...

ಜಾತಿ ಕಾರಣಕ್ಕೆ ಪ್ರೇಮಿಯ ಮರ್ಯಾದೆಗೇಡು ಹತ್ಯೆ; ಶವವನ್ನೇ ಮದುವೆಯಾದ ಯುವತಿ

ಮಹಾರಾಷ್ಟ್ರದ ನಾಂದೇಡ್‌ನಲ್ಲಿ 20 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ, ಗುಂಡು ಹಾರಿಸಿ, ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಆತನ ಗೆಳತಿ, ಹಣೆಯ ಮೇಲೆ ಸಿಂಧೂರ ಹಚ್ಚಿಕೊಂಡು, ಆತನ ಮನೆಯಲ್ಲಿ ಸೊಸೆಯಾಗಿ...

ಭಾರೀ ಪ್ರವಾಹ, ಭೂಕುಸಿತ : ಸಾವಿರ ದಾಟಿದ ಸಾವಿನ ಸಂಖ್ಯೆ

ದಕ್ಷಿಣ ಏಷ್ಯಾದ ನಾಲ್ಕು ದೇಶಗಳಾದ ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಲ್ಲಿ ಉಂಟಾದ ಭಾರೀ ಪ್ರವಾಹ ಮತ್ತು ಭೂಕುಸಿತ ಘಟನೆಗಳಿಂದ ಸಾವನ್ನಪ್ಪಿದವರ ಸಂಖ್ಯೆ ಒಂದು ಸಾವಿರ ದಾಟಿದೆ ಎಂದು ಸೋಮವಾರ (ಡಿಸೆಂಬರ್ 1)...

ಮಸಾಲಾ ಬಾಂಡ್ ಪ್ರಕರಣ : ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಶೋಕಾಸ್ ನೋಟಿಸ್ ನೀಡಿದ ಇಡಿ

ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕೆ.ಎಂ ಅಬ್ರಹಾಂ ಅವರಿಗೆ ಜಾರಿ ನಿರ್ದೇಶನಾಲ 466 ಕೋಟಿ ರೂ.ಗಳ...

ಸಂಸತ್ತಿನ ಚಳಿಗಾಲದ ಅಧಿವೇಶನ : ಎಸ್‌ಐಆರ್ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್

ಸೋಮವಾರ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ, ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ತುರ್ತು ಚರ್ಚೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ...

ತಮಿಳುನಾಡಿನಲ್ಲಿ ಎರಡು ಬಸ್ಸುಗಳು ಡಿಕ್ಕಿ:10ಕ್ಕೂ ಹೆಚ್ಚು ಜನರ ಸಾವು, 20 ಜನರಿಗೆ ಗಂಭೀರ ಗಾಯಗಳಾಗಿವೆ

ಚೆನ್ನೈ: ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಭಾನುವಾರ ಸಂಜೆ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ | ಸುಗಮ ಕಲಾಪಕ್ಕೆ ಸಹಕಾರ ಕೋರಿದ ಆಡಳಿತ : ಎಸ್‌ಐಆರ್ ಚರ್ಚೆ ಮುಂದಿಟ್ಟ ಪ್ರತಿಪಕ್ಷಗಳು

ನಾಳೆಯಿಂದ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಗೊಳ್ಳಲಿದೆ. ಅದಕ್ಕೂ ಮುನ್ನ ಇಂದು (ನವೆಂಬರ್ 30) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ. ಸಭೆಯಲ್ಲಿ ಸುಗಮ...

ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.  ನವೆಂಬರ್ 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು...

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ: ಮನನೊಂದು 22 ವರ್ಷದ ಯುವತಿ ಆತ್ಮಹತ್ಯೆ 

ಮದುವೆಯಾಗುವುದಾಗಿ ನಂಬಿಸಿದ್ದ ಯುವಕ, ಯುವತಿಗೆ ಮಾನಸಿಕ-ದೈಹಿಕ ಹಲ್ಲೆ ನಡೆಸಿದ್ದು, ಆತನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂಜಿನಿಯರಿಂಗ್ ಪದವೀಧರೆ...