Homeಅಂತರಾಷ್ಟ್ರೀಯಆರ್‌ಎಸ್‌ಎಫ್‌ 'ಪತ್ರಿಕಾ ಸ್ವಾತಂತ್ರ್ಯ ಹರಣಗಾರರ' ಪಟ್ಟಿಯಲ್ಲಿ ಅದಾನಿ ಗ್ರೂಪ್, ಒಪ್‌ಇಂಡಿಯಾ

ಆರ್‌ಎಸ್‌ಎಫ್‌ ‘ಪತ್ರಿಕಾ ಸ್ವಾತಂತ್ರ್ಯ ಹರಣಗಾರರ’ ಪಟ್ಟಿಯಲ್ಲಿ ಅದಾನಿ ಗ್ರೂಪ್, ಒಪ್‌ಇಂಡಿಯಾ

- Advertisement -
- Advertisement -

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 151ನೇ ಸ್ಥಾನ ಪಡೆದಿದೆ. ಕಳೆದ ತಿಂಗಳು (ನೆವಂಬರ್ 2) ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಹರಣಗಾರರ ಪಟ್ಟಿಯಲ್ಲಿ ಭಾರತದ ಎರಡು ಸಂಸ್ಥೆಗಳ ಹೆಸರಿದೆ.

ಪತ್ರಿಕಾ ಸ್ವಾತಂತ್ರ್ಯ ಹರಣಗಾರರ ಪಟ್ಟಿಯಲ್ಲಿ ಪತ್ರಕರ್ತರನ್ನು ಕೊಲ್ಲುವ, ಸೆನ್ಸಾರ್ ಮಾಡುವ, ಜೈಲಿಗೆ ಹಾಕುವ, ಹಲ್ಲೆ ಮಾಡುವ, ಸುದ್ದಿ ಮಾಧ್ಯಮವನ್ನು ಹತ್ತಿಕ್ಕುವ, ಪತ್ರಿಕೋದ್ಯಮವನ್ನು ಅವಹೇಳನ ಮಾಡುವ ಅಥವಾ ಪ್ರಚಾರದ ಉದ್ದೇಶಗಳಿಗಾಗಿ ಮಾಹಿತಿಯನ್ನು ತಿರುಚಲು ಅದರ ಸಂಕೇತಗಳನ್ನು ಬಳಸುವ ಜನರು, ಸಂಸ್ಥೆಗಳು, ನಿಗಮಗಳು ಮತ್ತು ಸರ್ಕಾರಗಳು ಸೇರಿವೆ.

ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ ಮತ್ತು ಬಲಪಂಥೀಯ ಸುದ್ದಿ ವೆಬ್‌ಸೈಟ್ ಒಪ್ ಇಂಡಿಯಾವನ್ನು ‘ಪತ್ರಿಕಾ ಸ್ವಾತಂತ್ರ್ಯ ಹರಣಗಾರರು’ ಎಂದು ಆರ್‌ಎಸ್‌ಎಫ್ ಗುರುತಿಸಿದೆ.

ಜಾಗತಿಕವಾಗಿ ಪ್ರಬಲವಾಗಿರುವ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಕ್ಷ, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಹಾಗೂ ಗೂಗಲ್ ಮಾತೃಸಂಸ್ಥೆ ಆಲ್ಪಾಬೆಟ್ ಮತ್ತು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಹೆಸರುಗಳೂ ಪಟ್ಟಿಯಲ್ಲಿ ಇದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇತೃತ್ವದಲ್ಲಿ ಸುಮಾರು 220 ಪತ್ರಕರ್ತರ ಸಾವಿಗೆ ಕಾರಣರಾದ ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್‌), ಮ್ಯಾನ್ಮಾರ್‌ ಸ್ಟೇಟ್ ಪೀಸ್ ಅಂಡ್ ಸೆಕ್ಯೂರಿಟಿ ಕಮಿಷನ್, ಕ್ಯಾಪ್ಟನ್ ಇಬ್ರಾಹಿಂ ಟ್ರೊರೆ ನೇತೃತ್ವದ ಬುರ್ಕಿನಾ ಫಾಸೊದ ಮಿಲಿಟರಿ ಜುಂಟಾ ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಲು ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ಅನ್ನು ಬಳಸುವ ಬಿಲಿಯನೇರ್ ಎಲೋನ್ ಮಸ್ಕ್ ಕೂಡ ಪಟ್ಟಿಯಲ್ಲಿದ್ದಾರೆ.

ಅದಾನಿ

ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರ ಎಂದು ಆರ್‌ಎಸ್‌ಎಫ್ ಉಲ್ಲೇಖಿಸಿದೆ. ಗ್ಯಾಗ್ ಸೂಟ್ (ಬಾಯಿ ಮುಚ್ಚಿಸುವ ಪ್ರಕರಣಗಳು) ಎಂಬ ಯೋಜಿತ ತಂತ್ರದ ಭಾಗವಾಗಿ ಆದಾನಿ ಗ್ರೂಪ್ ಮತ್ತು ಅದರ ಅಂಗ ಸಂಸ್ಥೆಗಳು 2017ರಿಂದ ಇಲ್ಲಿಯವರೆಗೆ 15ಕ್ಕೂ ಹೆಚ್ಚು ವಿಮರ್ಶಾತ್ಮಕ ಪತ್ರಕರ್ತರ ಮತ್ತು ಸುದ್ದಿ ಮಾಧ್ಯಮಗಳ ವಿರುದ್ಧ ಸುಮಾರು 10 ಕಾನೂನು ಮೊಕದ್ದಮೆಗಳನ್ನು ಹೂಡಿವೆ. ಇವುಗಳಲ್ಲಿ ಹಣದ ಪರಿಹಾರ ಕೇಳುವ ಮೊಕದ್ದೆಮೆಗಳು (ಸಿವಿಲ್ ಡಿಫಾಮೇಷನ್ ಕೇಸ್) ಮತ್ತು ಜೈಲು ಶಿಕ್ಷೆಯ ಬೆದರಿಕೆ ಇರುವ ಮೊಕದ್ದೆಮೆಗಳು (ಕ್ರಿಮಿನಲ್ ಡಿಫಾಮೇಷನ್ ಕೇಸ್) ಸೇರಿವೆ. ಈ ಮೂಲಕ ಸ್ವತಂತ್ರ ಪತ್ರಿಕೆಗಳ ಧ್ವನಿಯನ್ನು ಅಡಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದೆ.

ಆದಾನಿ ಗ್ರೂಪ್‌ನ 2025ರ ‘ಹಿಟ್ ಲಿಸ್ಟ್‌ನಲ್ಲಿ (ಟಾರ್ಗೆಟ್ ಪಟ್ಟಿ) 8 ಪತ್ರಕರ್ತರ ಮತ್ತು 3 ಸುದ್ದಿ ಮಾಧ್ಯಮಗಳ ವಿರುದ್ಧ ಆದಾನಿ ಹೂಡಿರುವ ಒಂದು ಸಿವಿಲ್ ಡಿಫಾಮೇಷನ್ (ಹಣದ ಪರಿಹಾರ) ಮತ್ತು ಒಂದು ಕ್ರಿಮಿನಲ್ ಡಿಫಾಮೇಷನ್ (ಜೈಲು ಶಿಕ್ಷೆಯ ಬೆದರಿಕೆ) ಪ್ರಕರಣ ಸೇರಿ ಎರಡು ಮೊಕದ್ದೆಮೆಗಳು ಸೇರಿವೆ. ಈ ಪ್ರಕರಣಗಳಲ್ಲಿ ನ್ಯಾಯಾಲಯವು ‘ಎಕ್ಸ್‌ಪಾರ್ಟೆ ಇಂಜಂಕ್ಷನ್’ (ಒಂದು ಪಕ್ಷದ ವಾದ ಆಲಿಸಿ ತಾತ್ಕಾಲಿಕ ತಡೆಯಾಜ್ಞೆ) ನೀಡಿದೆ. ಆದಾನಿ ಗ್ರೂಪ್‌ಗೆ ತಾವೇ ಯಾವ ಸುದ್ದಿ/ಲೇಖನ ತನಗೆ ‘ಅಪಖ್ಯಾತಿ’ ತರುವಂತದ್ದು ಎಂದು ನಿರ್ಧರಿಸುವ ಅಧಿಕಾರ ಸಿಕ್ಕಿದೆ. ಪತ್ರಕರ್ತರಿಗೆ ಅಥವಾ ಮಾಧ್ಯಮಕ್ಕೆ ಅವರ ವಾದ ಆಲಿಸದೇ ಆ ವಿಷಯಗಳನ್ನು ತೆಗೆದುಹಾಕುವಂತೆ ಆದೇಶವಾಗಿದೆ. ಪ್ರಕರಣವನ್ನು ಗುರುತಿಸಲಾಗದ ಮೂರನೇ ವ್ಯಕ್ತಿಗಳಿಗೆ ವಿಸ್ತರಿಸಲಾಗಿದೆ ಮತ್ತು ಅನಿಯಮಿತ ಸೆನ್ಸಾರ್‌ಶಿಪ್‌ಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.

ದಿ ವೈರ್, ನ್ಯೂಸ್‌ಲಾಂಡ್ರಿ, ಹೆಚ್‌ಡಬ್ಲ್ಯೂ ನ್ಯೂಸ್ ಮತ್ತು ಸ್ವತಂತ್ರ ಪತ್ರಕರ್ತ ರವೀಶ್ ಕುಮಾರ್‌ನಂತಹ ಮಾಧ್ಯಮಗಳಿಗೆ ವಿಷಯಗಳನ್ನು ತೆಗೆದುಹಾಕುವ ಆದೇಶಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ಹೇಳಿರುವುದಾಗಿ ದಿ ವೈರ್ ತಿಳಿಸಿದೆ.

ವರದಿಯು ಗ್ಯಾಗ್ ಸೂಟ್‌ಗಳ ಬಳಕೆಯನ್ನು ಅದಾನಿಯ ಮಾರಕ ಆಯುಧವಾಗಿ ಗುರುತಿಸಿದೆ.

ಒಪ್‌ಇಂಡಿಯಾ

ಬಲಪಂಥೀಯಾ ಸುದ್ದಿ ವೆಬ್‌ಸೈಟ್ ಒಪ್‌ಇಂಡಿಯಾವನ್ನು ಪಿತೂರಿ ಸಿದ್ಧಾಂತಗಳ ಮಾರಕ ಆಯುಧ ಎಂದು ವರದಿ ಹೇಳಿದೆ. 2025ರಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಒಪ್‌ಇಂಡಿಯಾವನ್ನು ಹೆಸರಿಸಿದೆ.

“ಹಿಂದೂ ರಾಷ್ಟ್ರೀಯತಾವಾದಿ ವೆಬ್‌ಸೈಟ್ ಒಪ್‌ಇಂಡಿಯಾ ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಮೇಲೆ ಪದೇ ಪದೇ ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಒಪ್‌ಇಂಡಿಯಾದ ವಿಷಯವು ‘ಲಿಬರಲ್ ಮೀಡಿಯಾ ಕಾರ್ಟೆಲ್’ ವಿರುದ್ಧದ ಹೋರಾಟದ ಭಾಗವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಟ್ರೋಲ್ ನೆಟ್‌ವರ್ಕ್‌ಗಳ ಸಹಾಯದಿಂದ, ಇದು ನಿರ್ಣಾಯಕ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಗುರಿಯನ್ನು ಹೊಂದಿರುವ ನಿರೂಪಣೆಗಳನ್ನು ಪ್ರಸಾರ ಮಾಡುತ್ತದೆ, ಆಗಾಗ್ಗೆ ಅವರು ಯುಎಸ್ ಬಿಲಿಯನೇರ್ ಲೋಕೋಪಕಾರಿ ಅಥವಾ ಭಾರತ ವಿರೋಧಿ ಲಾಬಿ ಯ ಭಾಗವಾಗಿದ್ದಾರೆ ಎಂದು ಆರೋಪಿಸುತ್ತದೆ” ಎಂದು ವರದಿ ಹೇಳಿದೆ.

ಈ ವರ್ಷ ಒಪ್ಇಂಡಿಯಾ ಒಟ್ಟು 96 ಲೇಖನಗಳ ಮೂಲಕ ಪತ್ರಕರ್ತರು ಹಾಗೂ ಸ್ವತಂತ್ರ ಮಾಧ್ಯಮಗಳ ಮೇಲೆ ನೇರ ದಾಳಿ ನಡೆಸಿದೆ. 200 ಪುಟಗಳ ಒಂದು ವರದಿ ಪ್ರಕಟಿಸಿ, ಕೆಲವು ಪತ್ರಕರ್ತರು ಮತ್ತು ಮಾಧ್ಯಮಗಳು ಒಂದು ಗುಪ್ತ ಜಾಲ ರಚಿಸಿ ಮೋದಿ ಸರ್ಕಾರದ ವಿರುದ್ಧ ‘ನರೇಟಿವ್ ವಾರ್’ ನಡೆಸುತ್ತಿದ್ದಾರೆ ಮತ್ತು ಭಾರತದಲ್ಲಿ ‘ರೆಜೀಮ್ ಚೇಂಜ್’ (ಸರ್ಕಾರ ಉರುಳಿಸುವ ಯೋಜನೆ) ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಪೂರ್ತಿ ಕುಮ್ಮಕ್ಕು ಸಿದ್ಧಾಂತಗಳನ್ನು ಹರಡಿದೆ. ಈ ಲೇಖನಗಳು ಪ್ರಕಟವಾದ ತಕ್ಷಣ ಯೋಜಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ, ಬೆದರಿಕೆ ಮತ್ತು ಆನ್‌ಲೈನ್ ದೌರ್ಜನ್ಯದ ಬೃಹತ್ ಅಲೆಗಳು ಆ ಪತ್ರಕರ್ತರ ಮೇಲೆ ಬೀಳುವಂತೆ ಮಾಡಿದೆ. ಈ ಎಲ್ಲಾ ಕೃತ್ಯಗಳ ಮೂಲಕ ಸ್ವತಂತ್ರ ಪತ್ರಿಕೋದ್ಯಮವನ್ನು ಭಯಭೀತಿಗೊಳಿಸುವ ಮತ್ತು ಮೌನಗೊಳಿಸುವ ಉದ್ದೇಶ ಹೊಂದಿವೆ ಎಂಬುದು ಆರ್‌ಎಸ್‌ಎಫ್‌ ವರದಿಯ ಮುಖ್ಯ ಆತಂಕವಾಗಿದೆ.

ಸ್ವತಂತ್ರ ಮಾಧ್ಯಮ ಸಂಸ್ಥೆ ದಿ ನ್ಯೂಸ್ ಮಿನಿಟ್‌ನ ಸಹ-ಸಂಸ್ಥಾಪಕಿ ಮತ್ತು ಸಂಪಾದಕಿ ಧನ್ಯಾ ರಾಜೇಂದ್ರನ್ ಅವರನ್ನು ಪ್ರೈಝ್ ಫಾರ್ ಇಂಪ್ಯಾಕ್ಟ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಾನು ಘೋಷಿಸಿದ ನಂತರ, ಅಕ್ಟೋಬರ್ 23ರಂದು ಒಪ್‌ಇಂಡಿಯಾದಲ್ಲಿ ಅವರು ಮಾನಹಾನಿಕರ ವಿಷಯಕ್ಕೆ ಗುರಿಯಾಗಿದ್ದರು ಎಂದು ಆರ್‌ಎಸ್‌ಎಫ್‌ ತಿಳಿಸಿದೆ.

ಆರ್‌ಎಸ್‌ಎಫ್‌ ವರದಿಯನ್ನು ಇಲ್ಲಿ ನೋಡಬಹುದು

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯ (ಎಂಜಿಎನ್‌ಆರ್‌ಇಜಿಎ) ಹೆಸರು ಮತ್ತು ನಿಬಂಧನಗೆಳನ್ನು ಬದಲಿಸುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್),2025 (ವಿಬಿ-ಜಿ ರಾಮ್‌ ಜಿ) ಮಸೂದೆಗೆ...

ಪ್ರೀತಿಸಿ ಮದುವೆಯಾಗಿ ಕೇವಲ 8 ತಿಂಗಳು : ವರದಕ್ಷಿಣೆಗಾಗಿ ಹೆಂಡತಿಯನ್ನು ಹೊಡೆದು ಕೊಂದ ಗಂಡ!

ಮದುವೆಯಾಗಿ ಎಂಟು ತಿಂಗಳಿಗೆ ಗಂಡ ಹೆಂಡತಿಯನ್ನು ಮನೆ ಅಂಗಳದಲ್ಲೇ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ತಂಡೂರ್‌ನಲ್ಲಿ ನಡೆದಿದೆ. ಅನುಷಾ (22) ಕೊಲೆಯಾದ ಹೆಣ್ಣು ಮಗಳು. ಗಂಡ ಪರಮೇಶ್ (28) ವಿರುದ್ದ...

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ

ಢಾಕಾ: ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ...

ತೀವ್ರ ವಿರೋಧಗಳ ನಡುವೆ ಗಣರಾಜ್ಯೋತ್ಸವ ಆಚರಣೆಯಲ್ಲಿ ‘ವಂದೇ ಮಾತರಂ’ ಹಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ 

ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ವಂದೇ ಮಾತರಂ' ಗೀತೆಯನ್ನು ಪ್ರಧಾನವಾಗಿ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುವ...

ಅಣು ವಿದ್ಯುತ್ ಯೋಜನೆ ಕುರಿತು ಯುಪಿ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಮಾತುಕತೆ: ವರದಿ

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿದೆ. ಈ ಬೆನ್ನಲ್ಲೇ...

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...