Homeಕರ್ನಾಟಕಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ: ಕೃಷ್ಣಮೂರ್ತಿ ಹನೂರು

ಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ: ಕೃಷ್ಣಮೂರ್ತಿ ಹನೂರು

ಆರ್‌.ಸಂತೋಷ್‌ ನಾಯಕ್‌ ಅನುವಾದಿಸಿರುವ ಮುಕುಂದ ರಾವ್ ಅವರ ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಕೃತಿಯನ್ನು ಗೌರಿ ಮೀಡಿಯಾ ಟ್ರಸ್ಟ್‌ ವತಿಯಿಂದ ಮೈಸೂರಿನ ಸುರುಚಿ ರಂಗಮನೆಯಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

- Advertisement -
- Advertisement -

ಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ; ಯಾವುದರಿಂದಲೋ ಪಡೆದುಕೊಳ್ಳುವಂತಹದ್ದೂ ಅಲ್ಲ. ಅದು ನಾವೇ ಕಂಡುಕೊಳ್ಳಬೇಕಾದ ಅನುಭವ ಎಂದು ಜಾನಪದ ವಿದ್ವಾಂಸರಾದ ಡಾ.ಕೃಷ್ಣಮೂರ್ತಿ ಹನೂರು ಹೇಳಿದರು.

ಗೌರಿ ಮೀಡಿಯಾ ಟ್ರಸ್ಟ್‌ ವತಿಯಿಂದ ಮೈಸೂರಿನ ಸುರುಚಿ ರಂಗಮನೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರ್‌.ಸಂತೋಷ್‌ ನಾಯಕ್‌ ಅನುವಾದಿಸಿರುವ ಮುಕುಂದ ರಾವ್ ಅವರ ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃತಿ ಲೋಕಾರ್ಪಣೆ ಮಾಡಿದ ಅವರು, ಅಧ್ಯಾತ್ಮ ಕ್ಷೇತ್ರದ ಆಳ ಅಗಲಗಳ ಕುರಿತು ವಿವರಿಸಿದರು. ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಜಾನಪದ ಪರಂಪರೆಯಲ್ಲಿ ಅಡಗಿರುವ ಆಧ್ಯಾತ್ಮಿಕ ಸೆಲೆಗಳ ಕುರಿತು ಚರ್ಚಿಸಿದರು.

ವಚನಕಾರ್ತಿ ಅಕ್ಕ ಮಹಾದೇವಿ ‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕರೆಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು. ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು’ ಎಂದಿರುವುದನ್ನು ಉಲ್ಲೇಖಿಸಿದ ಅವರು, ಅಕ್ಕ ಮಹಾದೇವಿಯವರು ಇಹಲೋಕದ ಬಗ್ಗೆ ಮಾತನಾಡುತ್ತಿರುವುದನ್ನು ಸ್ಮರಿಸಿದರು.

ಶಿರವಷ್ಟೇ ಅಲ್ಲ, ಪಾದವೂ ಮುಖ್ಯ ಎಂದು ಜನಪದರು ಸಾರಿದ್ದಾರೆ. ಹೀಗಾಗಿ ‘ನಿನ್ನ ಪಾದಕ್ಕರುವಾಗಲಪ್ಪ’ ಎಂದು ಹಾಡಿದ್ದಾರೆ. ಆದಿ ಜ್ಯೋತಿ, ಬೀದಿ ಜ್ಯೋತಿ, ಎಲ್ಲೆಲ್ಲೂ ಜ್ಯೋತಿಯನ್ನು ಕಂಡ ಜನಪದರು, ತಿಪ್ಪೆಯ ಮೇಲೆ ಪರಂಜ್ಯೋತಿಯನ್ನು ಕಂಡಿದ್ದು ಬಹುದೊಡ್ಡ ಸಂದೇಶ ಎಂದು ಬಣ್ಣಿಸಿದರು.

ಇದನ್ನೂ ಓದಿರಿ: ಬುದ್ಧನ ಹೆಜ್ಜೆ ಗುರುತುಗಳು; ತಿಚ್ ನ್ಹಾತ್ ಹಾನ್ ಬರಹದ ಅನುವಾದ

ತಮ್ಮ ಕ್ಷೇತ್ರ ಕಾರ್ಯವನ್ನು ಮೆಲುಕು ಹಾಕಿದ ಅವರು, “ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿ ಪಕ್ಕದಲ್ಲಿ ಅಲ್ಲಮನ ಗದ್ದುಗೆ ಇದೆ ಎಂದು ಜನರು ತೋರಿಸಿದರು. ಅಲ್ಲಿ ಏನೂ ಇರಲಿಲ್ಲ. ಎರಡು ಪಾದ ಮಾತ್ರ ಇತ್ತು. ಮತ್ತೊಂದು ಕಡೆ ಕನಕದಾಸರು ಬಂದಿದ್ದ ಸ್ಥಳವೆಂದು ತೋರಿಸಿದ್ದರು. ಅಲ್ಲಿ ಖಾಲಿ ಕೋಣೆ ಮಾತ್ರ ಇತ್ತು. ಅಂದರೆ ಶೂನ್ಯ ಕೋಣೆ. ಅಧ್ಯಾತ್ಮದ ತುದಿ ಇದೆಯಲ್ಲ ಅದು ಘನ ನೀಲಿ. ನಮ್ಮಂಥ ನಿಮ್ಮಂಥವರಿಗೆ ಸಾಧ್ಯವಾಗದ ತುದಿಯದು. ಸಾಧ್ಯವಾದರೆ ಸಂತೋಷ” ಎಂದು ತಿಳಿಸಿದರು.

ಹಗಲು ನಮ್ಮ ಕಣ್ಣಿಗೆ ಕಾಣಿಸದೆ ಹೋಗಬಹುದು. ಆದರೆ ರಾತ್ರಿ ಇದೆಯಲ್ಲ, ಹೊಳೆಯುವ ಬೆಳಗನ್ನು ತೋರಿಸಬಹುದು. ಆದರೆ ನಾವು ಇದಕ್ಕೆ ವಿರುದ್ಧವಾಗಿ ತಿಳಿದುಕೊಂಡಿದ್ದೇವೆ. ಭ್ರಮೆ ಮತ್ತು ವಾಸ್ತವ ಕೃತಿಯಲ್ಲಿ ಇದ್ದದ್ದನ್ನು ಇದ್ದಂತೆ ಹೇಳಲಾಗಿದೆ. ಇಂಥದ್ದೇ ಅಧ್ಯಾತ್ಮ ಎಂದೂ ಬೊಟ್ಟು ಮಾಡುವುದಿಲ್ಲ ಎಂದು ವಿವರಿಸಿದರು.

ರಮಣ ಮಹರ್ಷಿಯವರು ಕ್ಯಾನ್ಸರ್‌ ಬಗ್ಗೆ ಮಾತನಾಡುತ್ತಾ, ಅದರ ಪಾಡಿಗೆ ಅದು ಬಂದರೆ ನಾವೇಕೆ ವಿಚಲಿತರಾಗಬೇಕು ಎಂದಿದ್ದರು. ಕಳ್ಳರು ಆಶ್ರಮಕ್ಕೆ ಬಂದಿದ್ದಾರೆ ಎಂದಾಗ ರಮಣ ಮಹರ್ಷಿಯವರು, ಅವರು ಬಂದಿದ್ದಾರೆ ತಮ್ಮ ಕೆಲಸ ಮುಗಿಸಿಕೊಂಡು ಹೋಗ್ತಾರೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದರು. ಬಹಳ ಒಳ್ಳೆಯ ಕಳ್ಳತನ, ಬಹಳ ಒಳ್ಳೆಯ ಭ್ರಷ್ಟಾಚಾರ ಇವೆಲ್ಲವೂ ಇದೆ. ಆ ರೀತಿಯಲ್ಲಿ ಮುಕುಂದ್‌ರಾವ್ ಮಾತನಾಡುತ್ತಾರೆ. ಅವರು ಅಧ್ಯಾತ್ಮದ ಪರ ವಹಿಸಿಯೂ ಅದನ್ನು ವಿರೋಧಿಸಿಯೂ ಮಾತನಾಡಲ್ಲ. ಈ ಕಾರಣಕ್ಕೆ ಈ ಕೃತಿ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂತರ ಅನುಯಾಯಿಗಳಿಗೆ ನಿಷ್ಠುರ ಪ್ರಜ್ಞೆ ಮುಖ್ಯ: ಡಾ.ರಂಗನಾಥ್‌

ವಿಮರ್ಶಕರಾದ ಡಾ.ರಂಗನಾಥ್ ಕಂತನಕುಂಟೆ ಮಾತನಾಡಿ, “ಈ ಕೃತಿಯು ಅಧ್ಯಾತ್ಮದ ಪ್ರವಾಸ ಕಥನದ ಹಾಗೆ ಇದೆ. ಅಧ್ಯಾತ್ಮದ ಅನುಭವದ ಹುಡುಕಾಟದಲ್ಲಿ ಆಸಕ್ತಿ ಇರುವವರ ನಿಜದ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂಬುದು ಇಲ್ಲಿ ವ್ಯಕ್ತವಾಗಿದೆ” ಎಂದು ತಿಳಿಸಿದರು.

“ಅನುಭಾವ ಎಂಬುವುದು ಸಾಹಿತ್ಯದ ವಿದ್ಯಾರ್ಥಿಗಳಾದ ನಮಗೆ ಕಾಣಿಸುವ ಬಗೆ ಬೇರೆ. ಆದರೆ ಲೋಕರೂಢಿಯಾಗಿ, ಬಹಳ ಜನಪ್ರಿಯವಾಗಿ ಬೆಳೆದಿರುವ ಗುರುಗಳು, ಸದ್ಗುರುಗಳು ಅಧ್ಯಾತ್ಮವನ್ನು ಮಾರುಕಟ್ಟೆ ಮಾಡಿಕೊಂಡು ಬಹುರಾಷ್ಟ್ರೀಯ ಕಂಪನಿಗಳಂತೆ ಆಶ್ರಮಗಳನ್ನು, ಮಠಗಳನ್ನು ಬೆಳೆಸಿಕೊಂಡಿದ್ದಾರೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಓಶೋ ಕಂಡಂತೆ ವಿವೇಕಾನಂದರು

ನಾವು ಸಾಗುತ್ತಿರುವ ಹಾದಿಯಲ್ಲಿ ಯಾರನ್ನು ನಾವು ಗುರುಗಳೆಂದು ಭಾವಿಸಿರುತ್ತೇವೋ ಅವರ ಅಂತರಂಗ ಬಹಿರಂಗಳನ್ನು ಅರಿತುಕೊಂಡು ಟೊಳ್ಳುತನವನ್ನು ಬಯಲು ಮಾಡುವುದು ಮುಖ್ಯ. ಇಂದು ಸಂತರೆಂದು ಬಿಂಬಿಸಿಕೊಳ್ಳುತ್ತಿರುವವರ ಅನುಯಾಯಿಗಳು ನಿಷ್ಠುರ ಪ್ರಜ್ಞೆಯನ್ನೂ ಉಳಿಸಿಕೊಳ್ಳದೆ ಸಂಪೂರ್ಣವಾಗಿ ಕುರುಡಾಗಿ ಕಾಲಿಗೆ ಬೀಳುತ್ತಿದ್ದಾರೆ. ಯಾಕೆಂದರೆ ಅವರಿಗೆ ಅಧಾತ್ಮದ ತಿಳಿವಳಿಕೆಯ ಕೊರತೆ ಇದೆ ಎಂದರು.

ಜಗದ್ಗುರುಗಳಿಗೆ ಬಲಿಯಾಗುತ್ತಿರುವವರು ಅನಕ್ಷರಸ್ಥರಲ್ಲ. ಅವರೆಲ್ಲರೂ ಪದವೀಧರರು, ಸಾಧಕರು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸದಲ್ಲಿರುವವರು. ಜಗದ್ಗುರುಗಳ, ಸದ್ಗುರುಗಳ ಪಾದದಲ್ಲಿ ಬಿದ್ದು ಹೊರಳಾಡುವ ಗುಲಾಮಗಿರಿಯನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ. ನಿಷ್ಠುರವಾದ ಮಾತುಗಳನ್ನು ಅಧ್ಯಾತ್ಮಿಕ ಗುರುಗಳ ಕುರಿತು ಈ ಕೃತಿಯಲ್ಲಿ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಅನುವಾದದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಅನೇಕರು ಇಂಗ್ಲಿಷ್‌ ಅನುವಾದ ಮಾಡುವಾಗ ಕನ್ನಡದ ಜಾಯಮಾನಕ್ಕೆ ಹೊಂದದ ಪದಗಳನ್ನು ಬಳಸಿಬಿಡುತ್ತಾರೆ. ಅದು ಅನುವಾದ ಎನಿಸುವುದೇ ಇಲ್ಲ. ಆದರೆ ‘ಬಿಟ್ವಿನ್ ದ ಸಸ್ಟೆಂಟ್ ಅಂಡ್ ದ ರೋಪ್’ ಕೃತಿಯನ್ನು ಕನ್ನಡ ಜಾಯಮಾನ‌ಕ್ಕೆ ಒಗ್ಗುವಂತೆ ಸಂತೋಷ್‌ ನಾಯಕ್ ಅನುವಾದ ಮಾಡಿದ್ದಾರೆ” ಎಂದರು.

ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ಮಾತನಾಡಿ, “ಭ್ರಮೆಗಳನ್ನು ತುಂಬಿಕೊಂಡಾಗ ನಾವು ವಾಸ್ತವದಲ್ಲಿ ಬದುಕಲು ಆಗಲ್ಲ. ಇಡೀ ಕೃತಿಯುದ್ದಕ್ಕೂ ಮುಕುಂದರಾವ್ ಅವರ ಆಧ್ಯಾತ್ಮಿಕ ಪಯಣ ಢಾಳಾಗಿ ಚಿತ್ರಿತವಾಗಿದೆ. ಬಾಲ್ಯದಿಂದಲೂ ಅವರು ಆಧ್ಯಾತ್ಮಿಕದ ಪಯಣ ಮಾಡಿರುವುದನ್ನು ಇಲ್ಲಿ ಕಾಣಬಹುದು” ಎಂದು ತಿಳಿಸಿದರು.

‘ವಿಜಯವಾಣಿ’ ದಿನಪತ್ರಿಕೆಯ ಹಿರಿಯ ಉಪಸಂಪಾದಕ ಮುಳ್ಳೂರು ರಾಜು ಮಾತನಾಡಿ, “ನಾವೆಲ್ಲರೂ ಭ್ರಮೆ ಹಾಗೂ ವಾಸ್ತವಗಳ ನಡುವೆ ಬದುಕುತ್ತಲೇ ಇದ್ದೇವೆ. ಭ್ರಮೆ ಹಾಗೂ ವಾಸ್ತವ ಯಾವುದು ಎಂದು ಈ ಕೃತಿಯಿಂದ ತಿಳಿಯುತ್ತದೆ. ಭ್ರಮೆಗಳ ಕುರಿತು ತಿಳಿಯದಿದ್ದರೆ ಮತ್ತೊಬ್ಬರು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿರುತ್ತಾರೆ” ಎಂದು ಎಚ್ಚರಿಸಿದರು.

ಗೌರಿ ಮೀಡಿಯಾ ಟ್ರಸ್ಟ್‌ ಅಧ್ಯಕ್ಷರಾದ ನಗರಗೆರೆ ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಕರ್ತೃ ಮುಕುಂದ ರಾವ್‌, ಅನುವಾದಕ ಆರ್‌.ಸಂತೋಷ್‌ ನಾಯಕ್‌, ಅರಿವು ಶಾಲೆ ಶಿಕ್ಷಕಿ ಜೆ.ರಜನಿ, ಪ್ರಗತಿಪರ ಹೋರಾಟಗಾರರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ‘ನ್ಯಾಯಪಥ’ ವಾರಪತ್ರಿಕೆಯ ಸಂಪಾದಕರಾದ ಡಿ.ಎನ್‌.ಗುರುಪ್ರಸಾದ್ ಹಾಜರಿದ್ದರು. ಅರಿವು ಶಾಲೆಯ ಮನೋಹರ್‌ ಕಾರ್ಯಕ್ರಮ ನಿರೂಪಿಸಿದರು.


ಇದನ್ನೂ ಓದಿರಿ: ವಿಪರೀತದ ಬೆಳಗು ಫುಲೆ ಮಾರ್ಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...