Homeಕರ್ನಾಟಕಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ: ಕೃಷ್ಣಮೂರ್ತಿ ಹನೂರು

ಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ: ಕೃಷ್ಣಮೂರ್ತಿ ಹನೂರು

ಆರ್‌.ಸಂತೋಷ್‌ ನಾಯಕ್‌ ಅನುವಾದಿಸಿರುವ ಮುಕುಂದ ರಾವ್ ಅವರ ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಕೃತಿಯನ್ನು ಗೌರಿ ಮೀಡಿಯಾ ಟ್ರಸ್ಟ್‌ ವತಿಯಿಂದ ಮೈಸೂರಿನ ಸುರುಚಿ ರಂಗಮನೆಯಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

- Advertisement -
- Advertisement -

ಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ; ಯಾವುದರಿಂದಲೋ ಪಡೆದುಕೊಳ್ಳುವಂತಹದ್ದೂ ಅಲ್ಲ. ಅದು ನಾವೇ ಕಂಡುಕೊಳ್ಳಬೇಕಾದ ಅನುಭವ ಎಂದು ಜಾನಪದ ವಿದ್ವಾಂಸರಾದ ಡಾ.ಕೃಷ್ಣಮೂರ್ತಿ ಹನೂರು ಹೇಳಿದರು.

ಗೌರಿ ಮೀಡಿಯಾ ಟ್ರಸ್ಟ್‌ ವತಿಯಿಂದ ಮೈಸೂರಿನ ಸುರುಚಿ ರಂಗಮನೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರ್‌.ಸಂತೋಷ್‌ ನಾಯಕ್‌ ಅನುವಾದಿಸಿರುವ ಮುಕುಂದ ರಾವ್ ಅವರ ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃತಿ ಲೋಕಾರ್ಪಣೆ ಮಾಡಿದ ಅವರು, ಅಧ್ಯಾತ್ಮ ಕ್ಷೇತ್ರದ ಆಳ ಅಗಲಗಳ ಕುರಿತು ವಿವರಿಸಿದರು. ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಜಾನಪದ ಪರಂಪರೆಯಲ್ಲಿ ಅಡಗಿರುವ ಆಧ್ಯಾತ್ಮಿಕ ಸೆಲೆಗಳ ಕುರಿತು ಚರ್ಚಿಸಿದರು.

ವಚನಕಾರ್ತಿ ಅಕ್ಕ ಮಹಾದೇವಿ ‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕರೆಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು. ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು’ ಎಂದಿರುವುದನ್ನು ಉಲ್ಲೇಖಿಸಿದ ಅವರು, ಅಕ್ಕ ಮಹಾದೇವಿಯವರು ಇಹಲೋಕದ ಬಗ್ಗೆ ಮಾತನಾಡುತ್ತಿರುವುದನ್ನು ಸ್ಮರಿಸಿದರು.

ಶಿರವಷ್ಟೇ ಅಲ್ಲ, ಪಾದವೂ ಮುಖ್ಯ ಎಂದು ಜನಪದರು ಸಾರಿದ್ದಾರೆ. ಹೀಗಾಗಿ ‘ನಿನ್ನ ಪಾದಕ್ಕರುವಾಗಲಪ್ಪ’ ಎಂದು ಹಾಡಿದ್ದಾರೆ. ಆದಿ ಜ್ಯೋತಿ, ಬೀದಿ ಜ್ಯೋತಿ, ಎಲ್ಲೆಲ್ಲೂ ಜ್ಯೋತಿಯನ್ನು ಕಂಡ ಜನಪದರು, ತಿಪ್ಪೆಯ ಮೇಲೆ ಪರಂಜ್ಯೋತಿಯನ್ನು ಕಂಡಿದ್ದು ಬಹುದೊಡ್ಡ ಸಂದೇಶ ಎಂದು ಬಣ್ಣಿಸಿದರು.

ಇದನ್ನೂ ಓದಿರಿ: ಬುದ್ಧನ ಹೆಜ್ಜೆ ಗುರುತುಗಳು; ತಿಚ್ ನ್ಹಾತ್ ಹಾನ್ ಬರಹದ ಅನುವಾದ

ತಮ್ಮ ಕ್ಷೇತ್ರ ಕಾರ್ಯವನ್ನು ಮೆಲುಕು ಹಾಕಿದ ಅವರು, “ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿ ಪಕ್ಕದಲ್ಲಿ ಅಲ್ಲಮನ ಗದ್ದುಗೆ ಇದೆ ಎಂದು ಜನರು ತೋರಿಸಿದರು. ಅಲ್ಲಿ ಏನೂ ಇರಲಿಲ್ಲ. ಎರಡು ಪಾದ ಮಾತ್ರ ಇತ್ತು. ಮತ್ತೊಂದು ಕಡೆ ಕನಕದಾಸರು ಬಂದಿದ್ದ ಸ್ಥಳವೆಂದು ತೋರಿಸಿದ್ದರು. ಅಲ್ಲಿ ಖಾಲಿ ಕೋಣೆ ಮಾತ್ರ ಇತ್ತು. ಅಂದರೆ ಶೂನ್ಯ ಕೋಣೆ. ಅಧ್ಯಾತ್ಮದ ತುದಿ ಇದೆಯಲ್ಲ ಅದು ಘನ ನೀಲಿ. ನಮ್ಮಂಥ ನಿಮ್ಮಂಥವರಿಗೆ ಸಾಧ್ಯವಾಗದ ತುದಿಯದು. ಸಾಧ್ಯವಾದರೆ ಸಂತೋಷ” ಎಂದು ತಿಳಿಸಿದರು.

ಹಗಲು ನಮ್ಮ ಕಣ್ಣಿಗೆ ಕಾಣಿಸದೆ ಹೋಗಬಹುದು. ಆದರೆ ರಾತ್ರಿ ಇದೆಯಲ್ಲ, ಹೊಳೆಯುವ ಬೆಳಗನ್ನು ತೋರಿಸಬಹುದು. ಆದರೆ ನಾವು ಇದಕ್ಕೆ ವಿರುದ್ಧವಾಗಿ ತಿಳಿದುಕೊಂಡಿದ್ದೇವೆ. ಭ್ರಮೆ ಮತ್ತು ವಾಸ್ತವ ಕೃತಿಯಲ್ಲಿ ಇದ್ದದ್ದನ್ನು ಇದ್ದಂತೆ ಹೇಳಲಾಗಿದೆ. ಇಂಥದ್ದೇ ಅಧ್ಯಾತ್ಮ ಎಂದೂ ಬೊಟ್ಟು ಮಾಡುವುದಿಲ್ಲ ಎಂದು ವಿವರಿಸಿದರು.

ರಮಣ ಮಹರ್ಷಿಯವರು ಕ್ಯಾನ್ಸರ್‌ ಬಗ್ಗೆ ಮಾತನಾಡುತ್ತಾ, ಅದರ ಪಾಡಿಗೆ ಅದು ಬಂದರೆ ನಾವೇಕೆ ವಿಚಲಿತರಾಗಬೇಕು ಎಂದಿದ್ದರು. ಕಳ್ಳರು ಆಶ್ರಮಕ್ಕೆ ಬಂದಿದ್ದಾರೆ ಎಂದಾಗ ರಮಣ ಮಹರ್ಷಿಯವರು, ಅವರು ಬಂದಿದ್ದಾರೆ ತಮ್ಮ ಕೆಲಸ ಮುಗಿಸಿಕೊಂಡು ಹೋಗ್ತಾರೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದರು. ಬಹಳ ಒಳ್ಳೆಯ ಕಳ್ಳತನ, ಬಹಳ ಒಳ್ಳೆಯ ಭ್ರಷ್ಟಾಚಾರ ಇವೆಲ್ಲವೂ ಇದೆ. ಆ ರೀತಿಯಲ್ಲಿ ಮುಕುಂದ್‌ರಾವ್ ಮಾತನಾಡುತ್ತಾರೆ. ಅವರು ಅಧ್ಯಾತ್ಮದ ಪರ ವಹಿಸಿಯೂ ಅದನ್ನು ವಿರೋಧಿಸಿಯೂ ಮಾತನಾಡಲ್ಲ. ಈ ಕಾರಣಕ್ಕೆ ಈ ಕೃತಿ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂತರ ಅನುಯಾಯಿಗಳಿಗೆ ನಿಷ್ಠುರ ಪ್ರಜ್ಞೆ ಮುಖ್ಯ: ಡಾ.ರಂಗನಾಥ್‌

ವಿಮರ್ಶಕರಾದ ಡಾ.ರಂಗನಾಥ್ ಕಂತನಕುಂಟೆ ಮಾತನಾಡಿ, “ಈ ಕೃತಿಯು ಅಧ್ಯಾತ್ಮದ ಪ್ರವಾಸ ಕಥನದ ಹಾಗೆ ಇದೆ. ಅಧ್ಯಾತ್ಮದ ಅನುಭವದ ಹುಡುಕಾಟದಲ್ಲಿ ಆಸಕ್ತಿ ಇರುವವರ ನಿಜದ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂಬುದು ಇಲ್ಲಿ ವ್ಯಕ್ತವಾಗಿದೆ” ಎಂದು ತಿಳಿಸಿದರು.

“ಅನುಭಾವ ಎಂಬುವುದು ಸಾಹಿತ್ಯದ ವಿದ್ಯಾರ್ಥಿಗಳಾದ ನಮಗೆ ಕಾಣಿಸುವ ಬಗೆ ಬೇರೆ. ಆದರೆ ಲೋಕರೂಢಿಯಾಗಿ, ಬಹಳ ಜನಪ್ರಿಯವಾಗಿ ಬೆಳೆದಿರುವ ಗುರುಗಳು, ಸದ್ಗುರುಗಳು ಅಧ್ಯಾತ್ಮವನ್ನು ಮಾರುಕಟ್ಟೆ ಮಾಡಿಕೊಂಡು ಬಹುರಾಷ್ಟ್ರೀಯ ಕಂಪನಿಗಳಂತೆ ಆಶ್ರಮಗಳನ್ನು, ಮಠಗಳನ್ನು ಬೆಳೆಸಿಕೊಂಡಿದ್ದಾರೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಓಶೋ ಕಂಡಂತೆ ವಿವೇಕಾನಂದರು

ನಾವು ಸಾಗುತ್ತಿರುವ ಹಾದಿಯಲ್ಲಿ ಯಾರನ್ನು ನಾವು ಗುರುಗಳೆಂದು ಭಾವಿಸಿರುತ್ತೇವೋ ಅವರ ಅಂತರಂಗ ಬಹಿರಂಗಳನ್ನು ಅರಿತುಕೊಂಡು ಟೊಳ್ಳುತನವನ್ನು ಬಯಲು ಮಾಡುವುದು ಮುಖ್ಯ. ಇಂದು ಸಂತರೆಂದು ಬಿಂಬಿಸಿಕೊಳ್ಳುತ್ತಿರುವವರ ಅನುಯಾಯಿಗಳು ನಿಷ್ಠುರ ಪ್ರಜ್ಞೆಯನ್ನೂ ಉಳಿಸಿಕೊಳ್ಳದೆ ಸಂಪೂರ್ಣವಾಗಿ ಕುರುಡಾಗಿ ಕಾಲಿಗೆ ಬೀಳುತ್ತಿದ್ದಾರೆ. ಯಾಕೆಂದರೆ ಅವರಿಗೆ ಅಧಾತ್ಮದ ತಿಳಿವಳಿಕೆಯ ಕೊರತೆ ಇದೆ ಎಂದರು.

ಜಗದ್ಗುರುಗಳಿಗೆ ಬಲಿಯಾಗುತ್ತಿರುವವರು ಅನಕ್ಷರಸ್ಥರಲ್ಲ. ಅವರೆಲ್ಲರೂ ಪದವೀಧರರು, ಸಾಧಕರು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸದಲ್ಲಿರುವವರು. ಜಗದ್ಗುರುಗಳ, ಸದ್ಗುರುಗಳ ಪಾದದಲ್ಲಿ ಬಿದ್ದು ಹೊರಳಾಡುವ ಗುಲಾಮಗಿರಿಯನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ. ನಿಷ್ಠುರವಾದ ಮಾತುಗಳನ್ನು ಅಧ್ಯಾತ್ಮಿಕ ಗುರುಗಳ ಕುರಿತು ಈ ಕೃತಿಯಲ್ಲಿ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಅನುವಾದದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಅನೇಕರು ಇಂಗ್ಲಿಷ್‌ ಅನುವಾದ ಮಾಡುವಾಗ ಕನ್ನಡದ ಜಾಯಮಾನಕ್ಕೆ ಹೊಂದದ ಪದಗಳನ್ನು ಬಳಸಿಬಿಡುತ್ತಾರೆ. ಅದು ಅನುವಾದ ಎನಿಸುವುದೇ ಇಲ್ಲ. ಆದರೆ ‘ಬಿಟ್ವಿನ್ ದ ಸಸ್ಟೆಂಟ್ ಅಂಡ್ ದ ರೋಪ್’ ಕೃತಿಯನ್ನು ಕನ್ನಡ ಜಾಯಮಾನ‌ಕ್ಕೆ ಒಗ್ಗುವಂತೆ ಸಂತೋಷ್‌ ನಾಯಕ್ ಅನುವಾದ ಮಾಡಿದ್ದಾರೆ” ಎಂದರು.

ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ಮಾತನಾಡಿ, “ಭ್ರಮೆಗಳನ್ನು ತುಂಬಿಕೊಂಡಾಗ ನಾವು ವಾಸ್ತವದಲ್ಲಿ ಬದುಕಲು ಆಗಲ್ಲ. ಇಡೀ ಕೃತಿಯುದ್ದಕ್ಕೂ ಮುಕುಂದರಾವ್ ಅವರ ಆಧ್ಯಾತ್ಮಿಕ ಪಯಣ ಢಾಳಾಗಿ ಚಿತ್ರಿತವಾಗಿದೆ. ಬಾಲ್ಯದಿಂದಲೂ ಅವರು ಆಧ್ಯಾತ್ಮಿಕದ ಪಯಣ ಮಾಡಿರುವುದನ್ನು ಇಲ್ಲಿ ಕಾಣಬಹುದು” ಎಂದು ತಿಳಿಸಿದರು.

‘ವಿಜಯವಾಣಿ’ ದಿನಪತ್ರಿಕೆಯ ಹಿರಿಯ ಉಪಸಂಪಾದಕ ಮುಳ್ಳೂರು ರಾಜು ಮಾತನಾಡಿ, “ನಾವೆಲ್ಲರೂ ಭ್ರಮೆ ಹಾಗೂ ವಾಸ್ತವಗಳ ನಡುವೆ ಬದುಕುತ್ತಲೇ ಇದ್ದೇವೆ. ಭ್ರಮೆ ಹಾಗೂ ವಾಸ್ತವ ಯಾವುದು ಎಂದು ಈ ಕೃತಿಯಿಂದ ತಿಳಿಯುತ್ತದೆ. ಭ್ರಮೆಗಳ ಕುರಿತು ತಿಳಿಯದಿದ್ದರೆ ಮತ್ತೊಬ್ಬರು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿರುತ್ತಾರೆ” ಎಂದು ಎಚ್ಚರಿಸಿದರು.

ಗೌರಿ ಮೀಡಿಯಾ ಟ್ರಸ್ಟ್‌ ಅಧ್ಯಕ್ಷರಾದ ನಗರಗೆರೆ ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಕರ್ತೃ ಮುಕುಂದ ರಾವ್‌, ಅನುವಾದಕ ಆರ್‌.ಸಂತೋಷ್‌ ನಾಯಕ್‌, ಅರಿವು ಶಾಲೆ ಶಿಕ್ಷಕಿ ಜೆ.ರಜನಿ, ಪ್ರಗತಿಪರ ಹೋರಾಟಗಾರರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ‘ನ್ಯಾಯಪಥ’ ವಾರಪತ್ರಿಕೆಯ ಸಂಪಾದಕರಾದ ಡಿ.ಎನ್‌.ಗುರುಪ್ರಸಾದ್ ಹಾಜರಿದ್ದರು. ಅರಿವು ಶಾಲೆಯ ಮನೋಹರ್‌ ಕಾರ್ಯಕ್ರಮ ನಿರೂಪಿಸಿದರು.


ಇದನ್ನೂ ಓದಿರಿ: ವಿಪರೀತದ ಬೆಳಗು ಫುಲೆ ಮಾರ್ಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...