Homeಕರ್ನಾಟಕಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ...!!

ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ…!!

ಬಿ.ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

“ಕರೊನಾದಿಂದ ಏಟು ಜನ ಸತ್ರಲಾ ಉಗ್ರಿ” ಎಂದಳು ಜುಮ್ಮಿ.

“ವಾಟಿಸ್ಸೆ ಬಂದ ಅವುನ್ನೆ ಕೇಳು” ಎಂದ.

“ಲೆ ವಾಟಿಸ್ಸೆ ಏಟು ಜನ ಸತ್ರಲಾ.”

“ನೀನು ತಿಳಕಂಡಂಗೆ ಜನ ಸಾಯ್ತಯಿಲ್ಲ ಕಣ್ಣಕ್ಕ.”

“ಯಾಕ್ಲ.”

“ನಮ್ಮ ಜನಗಳ ಪರ‍್ರಂಗದೆ. ಕರೋನಾನೂ ಫೇಸ್ ಮಾಡ್ತ ಅವುರೆ, ಅಂತ ಯೇಡ್ಸನೆ ತಡಕಂಡ್ರು ಇದ್ಯಾವ ಲ್ಯಕ್ಕ.”

“ಏಡಿಸಿಗಿಂತ್ಲೂ ದ್ಲಡ್ಡ ಕಾಯಲವೆ ಇದು.”

“ಊ ಕಣ್ಣಕ್ಕ, ಏಡಸಾದೋನು ಸತ್ತೇ ಸಾಯ್ತನೆ. ಆದ್ರೆ ಕೊರೋನಾ ಬಂದೋರು ರಿಕವರಿ ಆಯ್ತ ಅವುರೆ ಇದಕೇನೇಳ್ತೀ.”

“ಮತ್ತೆ ಪಾರಿನ್ನಲ್ಲಿ ಭಾಳ ಜನ ಸತ್ರಂತೆ.”

“ಆ ನನ್‌ಮಕ್ಕಳು ಡೆಲಿಕೇಟು ಕಣಕ್ಕ. ಅದ್ಕೆ ಉದಿರೋದ್ರು.”

“ಡೇಲ್ಲಿಕೇಟು ಅಂದ್ರೇನ್ಲ.”

“ಡೆಲಿಕೇಟ್ ಅಂದ್ರೆ. ಯಾವಾಗ್ಲೂ ಕೈಯಿ ಬಾಯಿ ತ್ವಳಕಳದು ದಿನ ಸ್ನಾನ ಮಾಡದು. ಮೈನ್ಯಲ್ಲ ವರಿಸಿಗಳದು. ಸೆಂಟಾಕದು ಇಂತ ವಿಪರೀತ ಮಾಡಿ ಮೈಲಿಗೆ ಮಾಡಿದ್ರೆ ಮನುಸುನ ಬಾಡಿ ಡೆಲಿಕೇಟಾಯ್ತದೆ. ಅಂತಾ ನನ್‌ಮಕ್ಕಳು ಕಾಯ್ಲೆ ತಡಕಳ್ಳದಿಲ್ಲ.”

“ಅಂಗರೆ ಕಿಲೀನಾಗಿರಬಾರ್ದು ಅನ್ನು.”

“ಎಷ್ಟು ಬೇಕೊ ಅಷ್ಟಿರಬೇಕು.”

“ಊ ಯಾವ್ದು ಅತಿಯಾಗಬಾರ್ದು ಅಂತ ಅತಿ ಮಾಡಕ್ಕೋದ ಪಾರಿನ್ನರು ಕರೋನಾ ತಡಿಯಕ್ಕಾಗದೆ ಗ್ವಾತ ವಡಿತಾ ಅವುರೆ ಅದೇ ನಮ್ಮೊರು ನೋಡು ರಿಕವರಿ ಆಯ್ತಾ ಅವುರೆ.”

“ಯಣ್ಣೆ ಸಿಕ್ಕತೇನೊ ನಿನಗೆ” ಎಂದ ಉಗ್ರಿ.

“ಸಿಕ್ತು ಕಣೊ ಉಗ್ರಿ, ಆದ್ರೆ ಒಂದೂವರೆ ತಿಂಗಳು ಅದ ಮುಟ್ಟದಂಗಿದ್ದೆ ನೋಡು, ಅದ್ಕೊ ಏನೊ ವರಕು ಮಾಡಲಿಲ್ಲ ಅದು.”

“ಹಳೆ ಸ್ಟಾಕಿರಬೇಕೇನೊ.”

“ಹಳೆ ಸ್ಟಾಕೆ ಅಲವೆ ಕಿಕ್ ಕೊಡದು. ಎಲ್ಲೊ ಡೂಪ್ಲಿಕೇಟು ಅಂತ ಡವುಟು ಬತ್ತು.”

“ಅಂತೂ ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ.”

“ಅವುನೆಲ್ಲಿ ತಗದ್ನೊ, ಮೋದಿ ತಗಿರಿ ಅತ್ತಗೆ ಅಂದ ಇವುನು ತಗದ ಅವುರಿಗೇನು ಸರಕಾರಕೆ ಆದಾಯ ಬತ್ತು.”

“ಮೋದಿ ಏನು ಮಾಡಿದುನ್ಲ ಕರೋನ ಕಾಯಿಲಕೆ.”

“ಅವುನು ರಾಮಾಯ್ಣ ದಾರವಾಯಿ ನೋಡ್ತ ಕುಂತವುನೆ.”

“ಅದ್ಯಾಕ್ಲ.”

“ಅಷ್ಟೆ ಅಲವೇನಕ್ಕ ಅವುನ ಕೈಲಾಗದು. ಅವುನೇನು ಕರೋನಾ ಡಾಗುಟ್ರೊ ಅಥವ ಮುಂದಾಲೋಚನೆಯಿರೊ ನಾಯಕನೋ ಇಲ್ಲ ಬುಡಬಗ್ಗರು ಸ್ಥಿತಿ ಗೊತ್ತಿರೊ ಮನುಸನೊ ಯಾವುದೂ ಅಲ್ಲ ಕಣಕ್ಕ ಅದ್ಕೆ ದೇಸವ ಅದರ ಪಾಡಿಗೆ ಬುಟ್ಟು ಅಗಾಗ್ಗೆ ಏನೇನೂ ಆಜ್ಞೆ ವರುಡುಸ್ತನೆ ಅವೂ ಅವನ ಸ್ವಂತ ತೀರಮಾನ ಅಲ್ಲ ಆರೆಸೆಸ್ ಮುಖಂಡ್ರು ಹೇಳಿದವು.”

“ನಮ್ಮ ಎಡೂರಪ್ಪನೆ ವಾಸಿ ಅಲವೇನೊ.”

“ಅದ್ಯಂಗೊ ಉಗ್ರಿ.”

“ಅವುನು ಉಗಾದಿ ಹಬ್ಬದ ಹಿಂದಿನ ದಿನ ಊರಿಗೋಗಿ ಬರೋರು ಬನ್ನಿ ಅಂದೆ ಇದ್ರೆ, ನಮ್ಮೂರರ‍್ಯಲ್ಲ ಬೆಂಗಳೂರಲೇ ಸಾಯಬೇಕಾಗಿತ್ತು.”

“ಅದೇನೊ ನಿಜಕಣೊ ಉಗ್ರಿ, ನೋಡು ಎಡೂರಪ್ಪಾಗ್ಲಿ ಮೋದಿ ಆಗ್ಲಿ ಕರೋನಾ ಸಮಸ್ಯೆಗೆ ಇವುರತ್ರ ಇರೊ ಸಲ್ಯೂಷನ್ ಏನದೆ ಗೊತ್ತೇನೊ.”

“ಅದಯಾವುದಪ್ಪ ಸಲೂಶನ್ನು.”

“ಮನೆಯಿಂದ ಯಾರು ವರಗೆ ಬರಬ್ಯಾಡಿ, ಬಾಯಿಗೆ ಬಟ್ಟೆ ಕಟಿಗಂಡಿರಿ, ದೂರ ನಿಂತಗಂಡು ಯವಾರ ಮಾಡಿ, ದೀಪಹಚ್ಚಿ ಜಾಗಟೆ ಬಾರಿಸಿ, ಅನ್ನದು ಬುಟ್ರೆ ಇನ್ನೆನುಯಿಲ್ಲ.”

“ಅಷ್ಟೆ ಅಂತಿಯಾ.”

“ಅಷ್ಟೆ ಅಂತಿಯಾ ಅಂತ ಕೇಳತಿಯಲ್ಲಾ ಈಗನುಭವುಸ್ತಯಿರದು ಅದೇ ಅಲವೇನೊ ನೀವಿಂಗಿರಿ ನಾವಿಂಗೆ ಮಾಡ್ತಿವಿ ದವಸ ಧಾನ್ಯ ಕೊಡ್ತೀವಿ ಸಾರಿಗೆ ಯವಸ್ಥೆ ಮಾಡ್ತಿವಿ ಊರಿಗೋಗಿ ಹೆದರಬ್ಯಾಡಿ ಅನ್ನೊ ಮಾತು ಅವುರ ಬಾಯಿಲಿ ಬರಲಿಲ್ಲಲ್ವೊ.”

“ಅದ್ಕೆ ಏನೊ ಕಂಡ್ಳ ಸೋನಿಯಗಾಂಧಿ ಊರಿಗೋಗೊ ಜನಕ್ಯಲ್ಲ ಗಾಡಿ ಚಾರ್ಜು ಕೊಡ್ತಿನಿ ಅಂದವುಳೆ.”

“ಆಗ್ಲೆ ಕಣಕ್ಕ ಬಿಜೆಪಿಗಳ ಬಾಯಿಗೆ ಬೀಗ ಬಿದ್ದಿದ್ದು. ಇವುಕೆ ಮಾನ ಮರಿಯಾದಿ ಇದ್ರೆ ಆ ಹೆಣ್ಣೆಂಗಸು ಹತ್ತುವರಸ ದೇಸ ಯಂಗೆ ಮಡಗಿದ್ಲು ಅಂತ ತಿಳಕಬೇಕು ಕಣಕ್ಕ ಆಗ್ಲಾರ ದೇಸ ಯಂಗಾಳಬೇಕು ಅನ್ನದು ವಳಿತದೆ.”

“ನಿಜ ಕಂಡ್ಳ ನೀನೇಳಿದ್ದು.”


ಇದನ್ನೂ ಓದಿ: ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...