Homeಕರ್ನಾಟಕಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ...!!

ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ…!!

ಬಿ.ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

“ಕರೊನಾದಿಂದ ಏಟು ಜನ ಸತ್ರಲಾ ಉಗ್ರಿ” ಎಂದಳು ಜುಮ್ಮಿ.

“ವಾಟಿಸ್ಸೆ ಬಂದ ಅವುನ್ನೆ ಕೇಳು” ಎಂದ.

“ಲೆ ವಾಟಿಸ್ಸೆ ಏಟು ಜನ ಸತ್ರಲಾ.”

“ನೀನು ತಿಳಕಂಡಂಗೆ ಜನ ಸಾಯ್ತಯಿಲ್ಲ ಕಣ್ಣಕ್ಕ.”

“ಯಾಕ್ಲ.”

“ನಮ್ಮ ಜನಗಳ ಪರ‍್ರಂಗದೆ. ಕರೋನಾನೂ ಫೇಸ್ ಮಾಡ್ತ ಅವುರೆ, ಅಂತ ಯೇಡ್ಸನೆ ತಡಕಂಡ್ರು ಇದ್ಯಾವ ಲ್ಯಕ್ಕ.”

“ಏಡಿಸಿಗಿಂತ್ಲೂ ದ್ಲಡ್ಡ ಕಾಯಲವೆ ಇದು.”

“ಊ ಕಣ್ಣಕ್ಕ, ಏಡಸಾದೋನು ಸತ್ತೇ ಸಾಯ್ತನೆ. ಆದ್ರೆ ಕೊರೋನಾ ಬಂದೋರು ರಿಕವರಿ ಆಯ್ತ ಅವುರೆ ಇದಕೇನೇಳ್ತೀ.”

“ಮತ್ತೆ ಪಾರಿನ್ನಲ್ಲಿ ಭಾಳ ಜನ ಸತ್ರಂತೆ.”

“ಆ ನನ್‌ಮಕ್ಕಳು ಡೆಲಿಕೇಟು ಕಣಕ್ಕ. ಅದ್ಕೆ ಉದಿರೋದ್ರು.”

“ಡೇಲ್ಲಿಕೇಟು ಅಂದ್ರೇನ್ಲ.”

“ಡೆಲಿಕೇಟ್ ಅಂದ್ರೆ. ಯಾವಾಗ್ಲೂ ಕೈಯಿ ಬಾಯಿ ತ್ವಳಕಳದು ದಿನ ಸ್ನಾನ ಮಾಡದು. ಮೈನ್ಯಲ್ಲ ವರಿಸಿಗಳದು. ಸೆಂಟಾಕದು ಇಂತ ವಿಪರೀತ ಮಾಡಿ ಮೈಲಿಗೆ ಮಾಡಿದ್ರೆ ಮನುಸುನ ಬಾಡಿ ಡೆಲಿಕೇಟಾಯ್ತದೆ. ಅಂತಾ ನನ್‌ಮಕ್ಕಳು ಕಾಯ್ಲೆ ತಡಕಳ್ಳದಿಲ್ಲ.”

“ಅಂಗರೆ ಕಿಲೀನಾಗಿರಬಾರ್ದು ಅನ್ನು.”

“ಎಷ್ಟು ಬೇಕೊ ಅಷ್ಟಿರಬೇಕು.”

“ಊ ಯಾವ್ದು ಅತಿಯಾಗಬಾರ್ದು ಅಂತ ಅತಿ ಮಾಡಕ್ಕೋದ ಪಾರಿನ್ನರು ಕರೋನಾ ತಡಿಯಕ್ಕಾಗದೆ ಗ್ವಾತ ವಡಿತಾ ಅವುರೆ ಅದೇ ನಮ್ಮೊರು ನೋಡು ರಿಕವರಿ ಆಯ್ತಾ ಅವುರೆ.”

“ಯಣ್ಣೆ ಸಿಕ್ಕತೇನೊ ನಿನಗೆ” ಎಂದ ಉಗ್ರಿ.

“ಸಿಕ್ತು ಕಣೊ ಉಗ್ರಿ, ಆದ್ರೆ ಒಂದೂವರೆ ತಿಂಗಳು ಅದ ಮುಟ್ಟದಂಗಿದ್ದೆ ನೋಡು, ಅದ್ಕೊ ಏನೊ ವರಕು ಮಾಡಲಿಲ್ಲ ಅದು.”

“ಹಳೆ ಸ್ಟಾಕಿರಬೇಕೇನೊ.”

“ಹಳೆ ಸ್ಟಾಕೆ ಅಲವೆ ಕಿಕ್ ಕೊಡದು. ಎಲ್ಲೊ ಡೂಪ್ಲಿಕೇಟು ಅಂತ ಡವುಟು ಬತ್ತು.”

“ಅಂತೂ ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ.”

“ಅವುನೆಲ್ಲಿ ತಗದ್ನೊ, ಮೋದಿ ತಗಿರಿ ಅತ್ತಗೆ ಅಂದ ಇವುನು ತಗದ ಅವುರಿಗೇನು ಸರಕಾರಕೆ ಆದಾಯ ಬತ್ತು.”

“ಮೋದಿ ಏನು ಮಾಡಿದುನ್ಲ ಕರೋನ ಕಾಯಿಲಕೆ.”

“ಅವುನು ರಾಮಾಯ್ಣ ದಾರವಾಯಿ ನೋಡ್ತ ಕುಂತವುನೆ.”

“ಅದ್ಯಾಕ್ಲ.”

“ಅಷ್ಟೆ ಅಲವೇನಕ್ಕ ಅವುನ ಕೈಲಾಗದು. ಅವುನೇನು ಕರೋನಾ ಡಾಗುಟ್ರೊ ಅಥವ ಮುಂದಾಲೋಚನೆಯಿರೊ ನಾಯಕನೋ ಇಲ್ಲ ಬುಡಬಗ್ಗರು ಸ್ಥಿತಿ ಗೊತ್ತಿರೊ ಮನುಸನೊ ಯಾವುದೂ ಅಲ್ಲ ಕಣಕ್ಕ ಅದ್ಕೆ ದೇಸವ ಅದರ ಪಾಡಿಗೆ ಬುಟ್ಟು ಅಗಾಗ್ಗೆ ಏನೇನೂ ಆಜ್ಞೆ ವರುಡುಸ್ತನೆ ಅವೂ ಅವನ ಸ್ವಂತ ತೀರಮಾನ ಅಲ್ಲ ಆರೆಸೆಸ್ ಮುಖಂಡ್ರು ಹೇಳಿದವು.”

“ನಮ್ಮ ಎಡೂರಪ್ಪನೆ ವಾಸಿ ಅಲವೇನೊ.”

“ಅದ್ಯಂಗೊ ಉಗ್ರಿ.”

“ಅವುನು ಉಗಾದಿ ಹಬ್ಬದ ಹಿಂದಿನ ದಿನ ಊರಿಗೋಗಿ ಬರೋರು ಬನ್ನಿ ಅಂದೆ ಇದ್ರೆ, ನಮ್ಮೂರರ‍್ಯಲ್ಲ ಬೆಂಗಳೂರಲೇ ಸಾಯಬೇಕಾಗಿತ್ತು.”

“ಅದೇನೊ ನಿಜಕಣೊ ಉಗ್ರಿ, ನೋಡು ಎಡೂರಪ್ಪಾಗ್ಲಿ ಮೋದಿ ಆಗ್ಲಿ ಕರೋನಾ ಸಮಸ್ಯೆಗೆ ಇವುರತ್ರ ಇರೊ ಸಲ್ಯೂಷನ್ ಏನದೆ ಗೊತ್ತೇನೊ.”

“ಅದಯಾವುದಪ್ಪ ಸಲೂಶನ್ನು.”

“ಮನೆಯಿಂದ ಯಾರು ವರಗೆ ಬರಬ್ಯಾಡಿ, ಬಾಯಿಗೆ ಬಟ್ಟೆ ಕಟಿಗಂಡಿರಿ, ದೂರ ನಿಂತಗಂಡು ಯವಾರ ಮಾಡಿ, ದೀಪಹಚ್ಚಿ ಜಾಗಟೆ ಬಾರಿಸಿ, ಅನ್ನದು ಬುಟ್ರೆ ಇನ್ನೆನುಯಿಲ್ಲ.”

“ಅಷ್ಟೆ ಅಂತಿಯಾ.”

“ಅಷ್ಟೆ ಅಂತಿಯಾ ಅಂತ ಕೇಳತಿಯಲ್ಲಾ ಈಗನುಭವುಸ್ತಯಿರದು ಅದೇ ಅಲವೇನೊ ನೀವಿಂಗಿರಿ ನಾವಿಂಗೆ ಮಾಡ್ತಿವಿ ದವಸ ಧಾನ್ಯ ಕೊಡ್ತೀವಿ ಸಾರಿಗೆ ಯವಸ್ಥೆ ಮಾಡ್ತಿವಿ ಊರಿಗೋಗಿ ಹೆದರಬ್ಯಾಡಿ ಅನ್ನೊ ಮಾತು ಅವುರ ಬಾಯಿಲಿ ಬರಲಿಲ್ಲಲ್ವೊ.”

“ಅದ್ಕೆ ಏನೊ ಕಂಡ್ಳ ಸೋನಿಯಗಾಂಧಿ ಊರಿಗೋಗೊ ಜನಕ್ಯಲ್ಲ ಗಾಡಿ ಚಾರ್ಜು ಕೊಡ್ತಿನಿ ಅಂದವುಳೆ.”

“ಆಗ್ಲೆ ಕಣಕ್ಕ ಬಿಜೆಪಿಗಳ ಬಾಯಿಗೆ ಬೀಗ ಬಿದ್ದಿದ್ದು. ಇವುಕೆ ಮಾನ ಮರಿಯಾದಿ ಇದ್ರೆ ಆ ಹೆಣ್ಣೆಂಗಸು ಹತ್ತುವರಸ ದೇಸ ಯಂಗೆ ಮಡಗಿದ್ಲು ಅಂತ ತಿಳಕಬೇಕು ಕಣಕ್ಕ ಆಗ್ಲಾರ ದೇಸ ಯಂಗಾಳಬೇಕು ಅನ್ನದು ವಳಿತದೆ.”

“ನಿಜ ಕಂಡ್ಳ ನೀನೇಳಿದ್ದು.”


ಇದನ್ನೂ ಓದಿ: ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...