Homeರಾಜಕೀಯಅಪಾಯಕಾರಿ ಆಟಕ್ಕೆ ಕೈಹಾಕಿದರೂ, ಬಿಜೆಪಿಯೊಳಗೆ ಅಜ್ಞಾತರಾಗುತ್ತಾ ಬಂದರು ಈ ಕುಮಾರ

ಅಪಾಯಕಾರಿ ಆಟಕ್ಕೆ ಕೈಹಾಕಿದರೂ, ಬಿಜೆಪಿಯೊಳಗೆ ಅಜ್ಞಾತರಾಗುತ್ತಾ ಬಂದರು ಈ ಕುಮಾರ

- Advertisement -
- Advertisement -

ಇತ್ತಿÃಚಿನ ವರ್ಷಗಳಲ್ಲಿ, ಕರ್ನಾಟಕದ ಮುಖ್ಮಮಂತ್ರಿ ಆಗಬೇಕೆಂಬ ಮಹಾತ್ವಾಕಾಂಕ್ಷೆ ಈಡೇರುವುದು ಅಸಾಧ್ಯ ಎಂಬ ಸತ್ಯ ಅರಿತಿದ್ದ ಅಡ್ವಾಣಿಯವರ ಶಿಷ್ಯ ಅನಂತಕುಮಾರ ವಿಧಿವಶರಾಗಿದ್ದಾರೆ. ಕೇಂದ್ರ ಸಚಿವರಾಗಿದ್ದು ಅದ್ವಾನಿಯವರಂತೆ ಅನಂತ್ ಕೂಡ ಮೋದಿ ಟೀಮ್‌ನಿಂದ ದೂರವೇ ಇಟ್ಟಲ್ಪಟ್ಟಿದ್ದರು.
ಹುಬ್ಬಳ್ಳಿಯಲ್ಲಿ ರಾಜಕೀಯ ದೀಕ್ಷೆ ಪಡೆದ ಅಂತಕುಮಾರ, ತೆಲುಗು ಮನೆಭಾಷೆಯಾಗಿರುವ ಮೂಲ್ಕನಾಡು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಹುಬ್ಬಳ್ಳಿಯಲ್ಲಿ ಪ್ರಚಂಡ ಭಾಷಣಗಳಿಗೆ ಹೆಸರಾಗಿದ್ದ ಜನಸಂಘದ ಜಗನ್ನಾಥರಾವ್ ಜೋಶಿ ಪ್ರಭಾವಕ್ಕೆ ಒಳಗಾಗಿ ಅನಂತಕುಮಾರ, ಪ್ರಹ್ಲಾದ್ ಜೋಶಿ ಸಂಘ ಪರಿವಾರದ ಅಂಗಸಂಸ್ಥೆ ಎಬಿವಿಪಿ ಸೇರಿದ್ದರು. ರೈಲ್ವೆ ನೌಕರರಾಗಿದ್ದ ಇವರಿಬ್ಬರ ತಂದೆಯಂದಿರು ಹುಬ್ಬಳ್ಳಿಯ ರೈಲ್ವೆÃ ಕ್ವಾರ್ಟರ್ಸ್ನಲ್ಲಿ ತಮ್ಮ ಮಧ್ಯಮ ವರ್ಗದ ಕುಟುಂಬಗಳನ್ನು ಸಾಗಿಸುತ್ತಿದ್ದರು.
ಮೊದಲಿಂದಲೂ ವೈದಿಕಶಾಹಿಯ ‘ಶ್ರೆÃಷ್ಠತೆ’ಯ ಆರಾಧಕರಾಗಿದ್ದ ಅನಂತಕುಮಾರ ಕುಟುಂಬ 80ರ ದಶಕದಾರಂಭದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು. ಅನಂತ್ ತಾಯಿ ಗಿರಿಜಾ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸದಸ್ಯರೂ ಆಗಿದ್ದರು.
80ರ ದಶಕದ ಆರಂಭದ ವರ್ಷಗಳಲ್ಲಿ ಎಬಿವಿಪಿ ಕಾರ್ಯಕ್ರಮಗಳ ಸುದ್ದಿಗಳನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸುತ್ತಿದ್ದ ಅನಂತಕುಮಾರ್ ಪತ್ರಕರ್ತರೊಂದಿಗೆ ಆತ್ಮಿÃಯರಾಗಿದ್ದರು. ಆಗಿನ್ನೂ ಅವರಿಗೆ ಉಗ್ರ ಹಿಂದೂತ್ವದ ನಶೆ ತಗುಲಿರಲಿಲ್ಲ. ವಿದ್ಯಾರ್ಥಿ ಸಂಘಟನೆಯಷ್ಟನ್ನೆÃ ತಲೆಗೆ ಹಚ್ಚಿಕೊಂಡಿದ್ದ ಅವರು ಎಬಿವಿಪಿಯೇತರ ಕಾರ್ಯಕ್ರಮಗಳಿಗೂ ಹಾಜರಾಗುವ ಉದಾರಮನಸ್ಕರಾಗಿದ್ದರು. ಹೀಗಾಗಿಯೇ 1982ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಹುಬ್ಬಳ್ಳಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಂತಕುಮಾರ್ ಸಭಿಕರಾಗಿ ಭಾಗವಹಿಸಿದ್ದರು. ಆ ಸಭೆಯ ಆಕರ್ಷಣೆಯಾಗಿದ್ದ ಪಿ.ಲಂಕೇಶರ ಭಾಷಣವನ್ನು ತನ್ಮಯತೆಯಿಂದ ಆಲಿಸಿದ್ದರು. ರೈಲ್ವೆ ಕ್ವಾರ್ಟರ್ಸ್ನಲ್ಲಿದ್ದ ಕಾರಣಕ್ಕೆÃನೋ ಎಡಪಂಥಿಯ ಕಾರ್ಮಿಕ ನಾಯಕರ ಬಗ್ಗೆ ಗೌರವ ಹೊಂದಿದ್ದರು.
ಇದು ಅಲ್ಪಕಾಲದ ಕತೆಯಷ್ಟೆÃ. ಮುಂದೆ ಅವರು ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ, 1985ರ ಹೊತ್ತಿಗೆ ರಾಷ್ಟç ಕಾರ್ಯದರ್ಶಿಯಾಗಿ ಹಿಂದುತ್ವ ರಾಷ್ಟಿçÃಯತೆಯ ಪ್ರತಿಪಾದನೆಯ ಕಾಲಾಳುಗಳ ಗುಂಪಿಗೆ ಸೇರಿದರು. 80ರ ದಶಕದ ಅಂತ್ಯದಲ್ಲಿ ಆರೆಸ್ಸೆಸ್ ಅವರನ್ನು ಬಿಜೆಪಿಗೆ ಡೆಪ್ಯೂಟ್ ಮಾಡಿ, ಯಡಿಯೂರಪ್ಪ ನಂತರದ ನಾಯಕನ್ನಾಗಿ ಬೆಳೆಸಲು ಆರಂಭಿಸಿತು.
ಮುಂದೆ ಅವರು ಬೆಂಗಳೂರು ದಕ್ಷಿಣದ ಸಂಸದರಾದರು. ಅಲ್ಲಿನ ಬಹುಸಂಖ್ಯಾತ ಬ್ರಾಹ್ಮಣರು ಅನಂತರ ಕಾಯಂ ಮತಬ್ಯಾಂಕ್ ಆದರು. ಕಾಂಗ್ರೆಸ್-ಜೆಡಿಎಸ್‌ಗಳ ದುರ್ಬಲ ಅಭ್ಯರ್ಥಿಗಳು, ಅವರ ನಡುವಿನ ಮತ ಹಂಚಿಕೆಯೂ ಅನಂತರ ಸತತ ಗೆಲುವಿಗೆ ಸಹಕರಿಸಿತು. ವೆಂಕಯ್ಯನಾಯ್ಡು, ಪಿಇಎಸ್ ದೊರೆಸ್ವಾಮಿ ಕಾರಣದಿಂದ ತೆಲುಗರ ಮತಗಳು ದಕ್ಕುತ್ತ ಬಂದವು. ಕೇಂದ್ರ ಸರ್ಕಾರಿ ನೌಕರರೂ ಅನಂತ್‌ರ ಪರವೇ ಇದ್ದರು.
ಕರ್ನಾಟಕದ ಸಿಎಂ ಆಗಬೇಕೆಂದು ಬಯಸಿದ್ದ ಅನಂತರಿಗೆ ಅಂತಹ ಪೂರಕ ವಾತಾವರಣವೂ ಲಭ್ಯವಾಗಲಿಲ್ಲ. ದೆಹಲಿಯ ಅಧಿಕಾರ ರಾಜಕಾರಣಕ್ಕೆ ಸೀಮಿತರಾದ ಅವರು ಬೆಂಗಳೂರಿನ ಕಾಸ್ಮೊಪಾಲ್ಟಿಯನ್ ರಾಜಕಾರಣಿಯಾದರಷ್ಟೆÃ. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ, ಅದ್ವಾನಿ ಬಳಗಲ್ಲಿದ್ದ ಅನಂತ್‌ಗೆ ಪ್ರಾಧಾನ್ಯತೆ ಸಿಗಲಿಲ್ಲ. ಆರ್‌ಎಸ್‌ಎಸ್ ಕಾರಣದಿಂದ ರಾಸಾಯನಿಕ ಗೊಬ್ಬರ ಖಾತೆಯ ಸಚಿವರಾದರಷ್ಟೆÃ.
ಲಿಂಗಾಯತ ಯಡಿಯೂರಪ್ಪ ಮಾಸ್ ಲೀಡರ್ ಕೂಡ ಆಗಿದ್ದರಿಂದ, ಕನ್ನಡಿಗರ ತಳಮಟ್ಟದ ಸಂಪರ್ಕವೇ ಇಲ್ಲದಿದ್ದ ಬ್ರಾಹ್ಮಣ ಅನಂತಕುಮಾರರಿಗೆ ಸಿಎಂ ಪಟ್ಟ ಮರೀಚಿಕೆಯೇ ಆಯಿತು. ಆರ್‌ಎಸ್‌ಎಸ್ ಪ್ರಭಾವವಷ್ಟನ್ನೆÃ ನೆಚ್ಚಿಕೊಂಡು ಸಿಎಂ ಹುದ್ದೆಯ ಕನಸು ಕಂಡಿದ್ದು ಅನಂತರ ಸ್ವಯಂಕೃತಾಪರಾಧವಾಗಿತ್ತು.
ಸೈದ್ಧಾಂತಿಕವಾಗಿ ಅನಂತಕುಮಾರ ಹೆಗಡೆಯಂತೆಯೇ ಇದ್ದ ಅವರು, ಹೆಗಡೆಯಂತೆ ಬಾಹ್ಯವಾಗಿ ಅದನ್ನು ಕ್ಷÄಲ್ಲಕ ಭಾಷೆಯಲ್ಲಿ ಬಳಸಲಿಲ್ಲ. ರಾಜ್ಯಕ್ಕೆ ಅನಂತರ ಕೊಡುಗೆ ಏನೆಂದು ನೋಡಿದರೆ ಹೇಳಿಕೊಳ್ಳುವಂತದ್ದೆÃನೂ ಇಲ್ಲ. ಭೌಗೋಳಿಕ ಮತ್ತು ಆಡಳಿತಾತ್ಮಕ ಕಾರಣದಿಂದ ಸಹಜವಾಗಿ ಹುಬ್ಬಳ್ಳಿಗೆ ಮಂಜೂರಾಗಿದ್ದ ನೈರುತ್ಯವಲಯ ಕಚೇರಿ ಕೈಜಾರದಂತೆ ಅನಂತ್ ಶ್ರಮಿಸಿದರು. ಆಗಿನ ಪ್ರಧಾನಿ ವಾಜಪೇಯಿ ಇದಕ್ಕೆ ನೆರವಾದರು.
ಉಳಿದಂತೆ ತಮಗೆ ರಾಜಕೀಯ ದೀಕ್ಷೆ ನೀಡಿದ ಹುಬ್ಬಳ್ಳಿ ಭಾಗವನ್ನು ಅವರು ನಿರ್ಲಕ್ಷಿಸುತ್ತಲೇ ಬಂದರು. ಈದ್ಗಾ ಮೈದಾನದಲ್ಲಿ ಉಮಾಭಾರತಿ ಧ್ವಜ ಹಾರಿಸಲು ಬಂದಾಗಷ್ಟೆÃ ಅವರು ಗಳಿಗೆ ಹೊತ್ತು ಇಲ್ಲಿ ಕ್ರಿಯಾಶೀಲರಾಗಿದ್ದರು. ಈ ಭಾಗದ ಜೀವನ್ಮರಣದ ಹೋರಾಟ ಎನಿಸಿದ ಮಹದಾಯಿ ಹೋರಾಟವನ್ನೂ ಅವರು ನಿರ್ಲಕ್ಷಿಸಿದರು. ನರಗುಂದದ ಹೋರಾಟ ವೇದಿಕೆಯ ಮೇಲೆ ಔಪಚಾರಿಕವಾಗಿಯಾದರೂ ಕಾಣಿಸಿಕೊಳ್ಳುವಷ್ಟು ನೈತಿಕತೆಯನ್ನು ಅವರು ಕಳೆÀದುಕೊಂಡಿದ್ದರು.
ಮಹದಾಯಿ ನೀರಿಗಾಗಿ ಸರ್ವಪಕ್ಷ ನಿಯೋಗ ಪ್ರಧಾನಿ ಭೇಟಿಯಾದಾಗ ಅನಂತ್ ಮೌನವಾಗಿದ್ದರು. ಪ್ರಧಾನಿ ಕಚೇರಿಯ ಸರ್ವಾಡಳಿತದಿಂದ ಬಹುಪಾಲು ಕೇಂದ್ರ ಸಚಿವರಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದರು.
ಬಾಬಾ ಬುಡನ್‌ಗಿರಿ ವಿವಾದ ರಾಜ್ಯವ್ಯಾಪಿಯಾದರೆ ಸಿಎಂ ಆಗಬಹುದು ಎಂದು ಲೆಕ್ಕಿಸಿದ್ದ ಅವರು, ‘ಬಾಬಾಬುಡನ್‌ಗಿರಿಯನ್ನು ಕರ್ನಾಟಕದ ಅಂiÉÆÃಧ್ಯೆಯನ್ನಾಗಿ ಮಾಡುತ್ತೆÃವೆ’ ಎಂಬ ಅಪಾಯಕಾರಿ ಆಟಕ್ಕೂ ಕೈ ಹಾಕಿದ್ದರು. ಕೋಮು ಸೌಹಾರ್ದ ವೇದಿಕೆಯ ಹೋರಾಟದಿಂದ ಮೂಡಿದ ಜನಜಾಗೃತಿಯ ಎದುರು ನಿಲ್ಲದೇ ಹೋದರು.
ಅನಂತ್ ನಿಧನ ಎಂಬ ಸುದ್ದಿಯನ್ನು ಕೇಳಿದ ಕ್ಷಣದಲ್ಲಿ ಈ ಭಾಗದ ಜನಸಾಮಾನ್ಯರಿರಲಿ, ಹೊಸ ತಲೆಮಾರಿನ ಬಿಜೆಪಿ ಭಕ್ತರ ಕಣ್ಣಮುಂದೆ ಬಂದಿದ್ದು ಅನಂತಕುಮಾರ್ ಹೆಗಡೆಯ ಚಿತ್ರವೇ ಹೊರತು ಅನಂತಕುಮಾರರದ್ದಲ್ಲ ಎಂಬ ವಿದ್ಯಮಾನ, ಬಿಜೆಪಿಯಲ್ಲೆÃ ಅನಂತಕುಮಾರ್ ಅಜ್ಞಾತರಾಗಿದ್ದರು ಎಂಬುದಕ್ಕೆ ಸಂಕೇತದಂತಿದೆ. ಅದು ಮೋದಿ ಬಿಜೆಪಿಯ ಪರಿಸ್ಥಿತಿ ಕೂಡ ಆಗಿದೆ!

– ಪಿ.ಕೆ. ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...