Homeಪ್ರಪಂಚಮತ್ತಷ್ಟು ಜೈವಿಕ ಸಂಗತಿಗಳು

ಮತ್ತಷ್ಟು ಜೈವಿಕ ಸಂಗತಿಗಳು

- Advertisement -
- Advertisement -

ಎಕ್ಸ್-ವಾಯ್ ಮಕ್ಕಳು ಟೆಸ್ಟೊಸ್ಟೆರಾನ್ ಉತ್ಪತ್ತಿ ಮಾಡಿದರೂ ಟೆಸ್ಟೊಸ್ಟೆರಾನ್‌ಗೆ ಸ್ಪಂದಿಸುವ ಅಣುಗಳನ್ನು ಸಂಪೂರ್ಣವಾಗಿ  ಅಥವಾ ಭಾಗಶಃವಾಗಿ  ಹೊಂದದೇ ಇರಬಹುದು. ಇದರಿಂದ ಗಂಡಿನ ಲಕ್ಷಣಗಳ ಬೆಳವಣಿಗೆಯಲ್ಲಿ ಅನೇಕ ವಿಧದ ಬದಲಾವಣೆಗಳಾಗಬಹುದು. ಕೆಲವರು ಗರ್ಭಾಶಯದಲ್ಲಿದ್ದಾಗ ಟೆಸ್ಟೊಸ್ಟೆರಾನ್ ಹಾರ್ಮೋನಿಗೆ ಒಂದು ತರಹ ಪ್ರತಿಕ್ರಿಯಿಸಿ, ಹದಿವಯಸ್ಸಿನಲ್ಲಿ ಇನ್ನೊಂದು ತರಹ ಪ್ರತಿಕ್ರಿಯಿಸಬಹುದು. ಜನ್ಮದ ಸಮಯದಲ್ಲಿ ಅವರ ದೇಹ ವೈದ್ಯರಿಗೆ ಹೆಣ್ಣಾಗಿ ಕಂಡರೂ ಪ್ರೌಢಾವಸ್ಥೆಯ ನಂತರ ‘ಗಂಡಿನಂತೆ’ ಬದಲಾವಣೆಯಾಗಬಹುದು. ಅದರಂತೆಯೇ ಎಕ್ಸ್ಎಕ್ಸ್ ಮಕ್ಕಳು ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟೊÃಸ್ಟೆರಾನ್ (ಪ್ರೊಜೆಸ್ಟೆರಾನ್ ಎನ್ನುವ ಸ್ತಿçà ಹಾರ್ಮೋನಿಂದ ಉತ್ಪತ್ತಿಯಾದ) ಉತ್ಪತ್ತಿ ಮಾಡಿದಲ್ಲಿ ಜನನಾಂಗಗಳು ವಿವಿಧ ಸ್ತರಗಳಲ್ಲಿ ಗಂಡಿನಂತೆ ಅಭಿವೃದ್ಧಿ ಹೊಂದಬಹುದು ಹಾಗೂ ಶಿಶ್ನದಂತೆ ಕಾಣುವ ಅಂಗದೊಂದಿಗೆ ಹುಟ್ಟಬಹುದು. ಹಾಗಾಗಿ, ಗಂಡು ಮತ್ತು ಹೆಣ್ಣು ಎನ್ನುವ ಸರಳ ವರ್ಗೀಕರಣದಿಂದ ಅನೇಕ ವಿಧಗಳಲ್ಲಿ ಇಂಟರ್‌ಸೆಕ್ಸ್ ಮಕ್ಕಳು ಬೇರೆಯಾಗಿರಬಹುದಾಗಿದೆ. ಜನಿಸಿದ 2000 ಮಕ್ಕಳಲ್ಲಿ 1 ಮಗುವಿನ ದೇಹದಲ್ಲಿ ಅಸ್ಪಷ್ಟವಾದ ಜನನಾಂಗಗಳು ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಅವರನ್ನು ಇಂಟರ್‌ಸೆಕ್ಸ್ ಎಂದು ವರ್ಗೀಕರಿಸಲಾಗುತ್ತದೆ. ಆದರೆ ನಾವು ನೋಡಿದಂತೆ, ಹಲವಾರು ಇಂಟರ್‌ಸೆಕ್ಸ್ ವಿಧಗಳಲ್ಲಿ ಜನನಾಂಗಗಳು ಸ್ಪಷ್ಟವಾಗಿ ಗಂಡು ಅಥವಾ ಹೆಣ್ಣಿನಂತೆ ತೋರಬಹುದು, ಆದರೆ ಇದು ಅವರ ಅನುವಂಶಿಕ ರಚನೆಯಿಂದ ಬೇರೆಯಾಗಿರಬಹದು. ಆನ್ ಫಾಸ್ಟೊà ಸ್ಟರ್ಲಿಂಗ್‌ನಂತಹ ವಿಜ್ಞಾನಿಗಳು ಸೂಚಿಸುವುದೇನೆಂದರೆ, ಒಟ್ಟಾರೆ ಜನಸಂಖ್ಯೆಯ ಶೇಕಡಾ ಎರಡರಷ್ಟು ಜನರು ಎದ್ದುಕಾಣದ, ಗೌಣವಾಗಿರುವ ಇಂಟರ್‌ಸೆಕ್ಸ್ ವಿಧಗಳನ್ನು ಹೊಂದಿರಬಹುದು.
ಇವೆಲ್ಲದಕ್ಕೂ ಮತ್ತು ಟ್ರಾನ್ಸ್ಜೆಂಡರ್ (ಅಂತರಲಿಂಗಿ) ಆಗಿರುವುದಕ್ಕೂ ಸಂಬಂಧವೇನು? ಮೆದುಳು. ಗಂಡು ಹಾರ್ಮೋನ್ ಆದ ಟೆಸ್ಟೊÃಸ್ಟೆರಾನ್ ಮತ್ತು ಹೆಣ್ಣು ಹಾರ್ಮೋನ್ ಈಸ್ಟೊçÃಜೆನ್‌ಗಳಿಗೆ ಸ್ಪಂದಿಸುವುದಕ್ಕಾಗಿ ಮೆದುಳಿನಲ್ಲಿ ಕೆಲವು ಕ್ಷೆÃತ್ರಗಳಿವೆ ಹಾಗೂ ಈ ಹಾರ್ಮೋನುಗಳು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಕೆಲವು ವಂಶವಾಹಿ (ಜೀನ್)ಗಳ ಮೇಲೆ ಅವಲಂಬಿಸಿರುತ್ತೆ. ಆದುದರಿಂದ ಟ್ರಾನ್ಸ್ಜೆಂಡರ್ ಗುರುತು ಇದಕ್ಕೆ ಸಂಬಂಧಿಸಿರುತ್ತೆ. ಹಾಗಾಗಿ, ಹುಟ್ಟಿನ ಸಮಯದಲ್ಲಿ ವೈದ್ಯರು ಗಂಡು ಅಥವಾ ಹೆಣ್ಣು ಎಂದು ವರ್ಗೀಕರಿಸಿದರೂ, ಅವರು ಬೆಳೆಯುತ್ತ ಹೋದಂತೆ ಅವರ ಮಿದುಳಿನ ಮೇಲೆ ಅವರ ಜೈವಿಕ ಲಿಂಗಕ್ಕೆ ವಿರುದ್ಧವಾದ ಹಾರ್ಮೋನ್ ಪ್ರಭಾವ ಬೀರಬಹದು. ಎಕ್ಸ್ ಎಕ್ಸ್ ಮಕ್ಕಳಲ್ಲಿ ಅವರ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಗಂಡಿನ ಹಾರ್ಮೋನುಗಳು ಪ್ರಭಾವ ಬೀರಿದಾಗ (ತಾಯಿಯ ಗರ್ಭದಿಂದ ಅಥವಾ ಮಗುವಿನ ತನ್ನದೇ ಕೋಶಗಳಿಂದ) ಎಕ್ಸ್ವೈ ಮಕ್ಕಳಿಗೆ ಹೋಲುವ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಅದರಂತೆ, ಎಕ್ಸ್ವೈ ಮಕ್ಕಳಲ್ಲಿ ಹೆಣ್ಣಿನ ಹಾರ್ಮೋನುಗಳು ಇದ್ದರೆ ಅಥವಾ ಗಂಡಿನ ಹಾರ್ಮೋನುಗಳಿಗೆ ಮೆದುಳು ಸ್ಪಂದಿಸದೇ ಇದ್ದರೆ ಆ ಎಕ್ಸ್ವೈ ಮಕ್ಕಳು ಹೆಣ್ಣಿನ ಸ್ವರೂಪವನ್ನು ಬೆಳೆಸಿಕೊಳ್ಳಬಹುದು. ಇವರುಗಳ ಮೆದುಳು ಎಕ್ಸ್ಎಕ್ಸ್ ಹೆಣ್ಣುಗಳ ಮೆದುಳಿನÀ ಹಾಗೆಯೇ ಬದಲಾವಣೆ ಹೊಂದಬಹುದು. ಮೆದುಳಿನ ಈ ಕ್ಷೆÃತ್ರಗಳ ಬಗ್ಗೆ ಹಾಗು ಟ್ರಾನ್ಸ್ಜೆಂಡರ್ ಮಕ್ಕಳು ಮತ್ತು ವಯಸ್ಕರು ತಮ್ಮ ದೇಹದ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೇಗೆ ಹೊಂದಿರುತ್ತಾರೆ ಎನ್ನುವುದರ ಬಗ್ಗೆ ನಂತರ ವಿವರಿಸುವೆ. ಆದರೆ, ಸದ್ಯಕ್ಕೆ ಒಂದೇ ಒಂದು ಜೈವಿಕ ಲಿಂಗವನ್ನು ಹೊಂದದೇ ಇರುವುದಕ್ಕೆ ಅನೇಕ ಕಾರಣಗಳು ಮತ್ತು ಸಾಧ್ಯತೆಗಳಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೊÃಣ.
ನಮ್ಮ ಕ್ರೊÃಮೊಸೋಮ್‌ಗಳು, ವೃಷಣ/ಅಂಡಾಶಯಗಳ ರಚನೆ, ಜನ್ಮದ ಸಮಯದಲ್ಲಿ ಹಾರ್ಮೋನುಗಳು, ಜನನಾಂಗಗಳು ಮತ್ತು ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳು, ಇವೆಲ್ಲವುಗಳೂ ನಮ್ಮ ದೇಹ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ಪರಿಣಾಮ ಬೀರುತ್ತವೆ. ಒಂದು ವೇಳೆ ಇವುಗಳು ಅಸ್ಪಷ್ಟ ಜನನಾಂಗಗಳನ್ನು ಅಥವಾ ಅಸ್ಪಷ್ಟ ಲೈಂಗಿಕ ಲಕ್ಷಣಗಳನ್ನು ಸೃಷ್ಟಿಸಲು ಕಾರಣವಾದರೆ ಹಾಗೂ ಇವಗಳನ್ನು ವೈದ್ಯರು ಗುರುತಿಸಿದರೆ ಆ ಮಕ್ಕಳನ್ನು ಇಂಟರ್‌ಸೆಕ್ಸ್ ಎಂದು ಕರೆಯಲಾಗುತ್ತದೆ; ಆದರೆ, ನಮ್ಮಲ್ಲಿ ಅನೇಕರು ವೈದ್ಯಕೀಯವಾಗಿ ಇಂಟರ್‌ಸೆಕ್ಸ್ ಆಗಿದ್ದರೂ ಆ ವಾಸ್ತವದ ಅರಿವು ಇಲ್ಲದೇ ಇರಬಹುದು.

– ಕಾರ್ತಿಕ್ ಬಿಟ್ಟು
ಅನುವಾದ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...