Homeಪ್ರಪಂಚಮತ್ತಷ್ಟು ಜೈವಿಕ ಸಂಗತಿಗಳು

ಮತ್ತಷ್ಟು ಜೈವಿಕ ಸಂಗತಿಗಳು

- Advertisement -
- Advertisement -

ಎಕ್ಸ್-ವಾಯ್ ಮಕ್ಕಳು ಟೆಸ್ಟೊಸ್ಟೆರಾನ್ ಉತ್ಪತ್ತಿ ಮಾಡಿದರೂ ಟೆಸ್ಟೊಸ್ಟೆರಾನ್‌ಗೆ ಸ್ಪಂದಿಸುವ ಅಣುಗಳನ್ನು ಸಂಪೂರ್ಣವಾಗಿ  ಅಥವಾ ಭಾಗಶಃವಾಗಿ  ಹೊಂದದೇ ಇರಬಹುದು. ಇದರಿಂದ ಗಂಡಿನ ಲಕ್ಷಣಗಳ ಬೆಳವಣಿಗೆಯಲ್ಲಿ ಅನೇಕ ವಿಧದ ಬದಲಾವಣೆಗಳಾಗಬಹುದು. ಕೆಲವರು ಗರ್ಭಾಶಯದಲ್ಲಿದ್ದಾಗ ಟೆಸ್ಟೊಸ್ಟೆರಾನ್ ಹಾರ್ಮೋನಿಗೆ ಒಂದು ತರಹ ಪ್ರತಿಕ್ರಿಯಿಸಿ, ಹದಿವಯಸ್ಸಿನಲ್ಲಿ ಇನ್ನೊಂದು ತರಹ ಪ್ರತಿಕ್ರಿಯಿಸಬಹುದು. ಜನ್ಮದ ಸಮಯದಲ್ಲಿ ಅವರ ದೇಹ ವೈದ್ಯರಿಗೆ ಹೆಣ್ಣಾಗಿ ಕಂಡರೂ ಪ್ರೌಢಾವಸ್ಥೆಯ ನಂತರ ‘ಗಂಡಿನಂತೆ’ ಬದಲಾವಣೆಯಾಗಬಹುದು. ಅದರಂತೆಯೇ ಎಕ್ಸ್ಎಕ್ಸ್ ಮಕ್ಕಳು ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟೊÃಸ್ಟೆರಾನ್ (ಪ್ರೊಜೆಸ್ಟೆರಾನ್ ಎನ್ನುವ ಸ್ತಿçà ಹಾರ್ಮೋನಿಂದ ಉತ್ಪತ್ತಿಯಾದ) ಉತ್ಪತ್ತಿ ಮಾಡಿದಲ್ಲಿ ಜನನಾಂಗಗಳು ವಿವಿಧ ಸ್ತರಗಳಲ್ಲಿ ಗಂಡಿನಂತೆ ಅಭಿವೃದ್ಧಿ ಹೊಂದಬಹುದು ಹಾಗೂ ಶಿಶ್ನದಂತೆ ಕಾಣುವ ಅಂಗದೊಂದಿಗೆ ಹುಟ್ಟಬಹುದು. ಹಾಗಾಗಿ, ಗಂಡು ಮತ್ತು ಹೆಣ್ಣು ಎನ್ನುವ ಸರಳ ವರ್ಗೀಕರಣದಿಂದ ಅನೇಕ ವಿಧಗಳಲ್ಲಿ ಇಂಟರ್‌ಸೆಕ್ಸ್ ಮಕ್ಕಳು ಬೇರೆಯಾಗಿರಬಹುದಾಗಿದೆ. ಜನಿಸಿದ 2000 ಮಕ್ಕಳಲ್ಲಿ 1 ಮಗುವಿನ ದೇಹದಲ್ಲಿ ಅಸ್ಪಷ್ಟವಾದ ಜನನಾಂಗಗಳು ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಅವರನ್ನು ಇಂಟರ್‌ಸೆಕ್ಸ್ ಎಂದು ವರ್ಗೀಕರಿಸಲಾಗುತ್ತದೆ. ಆದರೆ ನಾವು ನೋಡಿದಂತೆ, ಹಲವಾರು ಇಂಟರ್‌ಸೆಕ್ಸ್ ವಿಧಗಳಲ್ಲಿ ಜನನಾಂಗಗಳು ಸ್ಪಷ್ಟವಾಗಿ ಗಂಡು ಅಥವಾ ಹೆಣ್ಣಿನಂತೆ ತೋರಬಹುದು, ಆದರೆ ಇದು ಅವರ ಅನುವಂಶಿಕ ರಚನೆಯಿಂದ ಬೇರೆಯಾಗಿರಬಹದು. ಆನ್ ಫಾಸ್ಟೊà ಸ್ಟರ್ಲಿಂಗ್‌ನಂತಹ ವಿಜ್ಞಾನಿಗಳು ಸೂಚಿಸುವುದೇನೆಂದರೆ, ಒಟ್ಟಾರೆ ಜನಸಂಖ್ಯೆಯ ಶೇಕಡಾ ಎರಡರಷ್ಟು ಜನರು ಎದ್ದುಕಾಣದ, ಗೌಣವಾಗಿರುವ ಇಂಟರ್‌ಸೆಕ್ಸ್ ವಿಧಗಳನ್ನು ಹೊಂದಿರಬಹುದು.
ಇವೆಲ್ಲದಕ್ಕೂ ಮತ್ತು ಟ್ರಾನ್ಸ್ಜೆಂಡರ್ (ಅಂತರಲಿಂಗಿ) ಆಗಿರುವುದಕ್ಕೂ ಸಂಬಂಧವೇನು? ಮೆದುಳು. ಗಂಡು ಹಾರ್ಮೋನ್ ಆದ ಟೆಸ್ಟೊÃಸ್ಟೆರಾನ್ ಮತ್ತು ಹೆಣ್ಣು ಹಾರ್ಮೋನ್ ಈಸ್ಟೊçÃಜೆನ್‌ಗಳಿಗೆ ಸ್ಪಂದಿಸುವುದಕ್ಕಾಗಿ ಮೆದುಳಿನಲ್ಲಿ ಕೆಲವು ಕ್ಷೆÃತ್ರಗಳಿವೆ ಹಾಗೂ ಈ ಹಾರ್ಮೋನುಗಳು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಕೆಲವು ವಂಶವಾಹಿ (ಜೀನ್)ಗಳ ಮೇಲೆ ಅವಲಂಬಿಸಿರುತ್ತೆ. ಆದುದರಿಂದ ಟ್ರಾನ್ಸ್ಜೆಂಡರ್ ಗುರುತು ಇದಕ್ಕೆ ಸಂಬಂಧಿಸಿರುತ್ತೆ. ಹಾಗಾಗಿ, ಹುಟ್ಟಿನ ಸಮಯದಲ್ಲಿ ವೈದ್ಯರು ಗಂಡು ಅಥವಾ ಹೆಣ್ಣು ಎಂದು ವರ್ಗೀಕರಿಸಿದರೂ, ಅವರು ಬೆಳೆಯುತ್ತ ಹೋದಂತೆ ಅವರ ಮಿದುಳಿನ ಮೇಲೆ ಅವರ ಜೈವಿಕ ಲಿಂಗಕ್ಕೆ ವಿರುದ್ಧವಾದ ಹಾರ್ಮೋನ್ ಪ್ರಭಾವ ಬೀರಬಹದು. ಎಕ್ಸ್ ಎಕ್ಸ್ ಮಕ್ಕಳಲ್ಲಿ ಅವರ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಗಂಡಿನ ಹಾರ್ಮೋನುಗಳು ಪ್ರಭಾವ ಬೀರಿದಾಗ (ತಾಯಿಯ ಗರ್ಭದಿಂದ ಅಥವಾ ಮಗುವಿನ ತನ್ನದೇ ಕೋಶಗಳಿಂದ) ಎಕ್ಸ್ವೈ ಮಕ್ಕಳಿಗೆ ಹೋಲುವ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಅದರಂತೆ, ಎಕ್ಸ್ವೈ ಮಕ್ಕಳಲ್ಲಿ ಹೆಣ್ಣಿನ ಹಾರ್ಮೋನುಗಳು ಇದ್ದರೆ ಅಥವಾ ಗಂಡಿನ ಹಾರ್ಮೋನುಗಳಿಗೆ ಮೆದುಳು ಸ್ಪಂದಿಸದೇ ಇದ್ದರೆ ಆ ಎಕ್ಸ್ವೈ ಮಕ್ಕಳು ಹೆಣ್ಣಿನ ಸ್ವರೂಪವನ್ನು ಬೆಳೆಸಿಕೊಳ್ಳಬಹುದು. ಇವರುಗಳ ಮೆದುಳು ಎಕ್ಸ್ಎಕ್ಸ್ ಹೆಣ್ಣುಗಳ ಮೆದುಳಿನÀ ಹಾಗೆಯೇ ಬದಲಾವಣೆ ಹೊಂದಬಹುದು. ಮೆದುಳಿನ ಈ ಕ್ಷೆÃತ್ರಗಳ ಬಗ್ಗೆ ಹಾಗು ಟ್ರಾನ್ಸ್ಜೆಂಡರ್ ಮಕ್ಕಳು ಮತ್ತು ವಯಸ್ಕರು ತಮ್ಮ ದೇಹದ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೇಗೆ ಹೊಂದಿರುತ್ತಾರೆ ಎನ್ನುವುದರ ಬಗ್ಗೆ ನಂತರ ವಿವರಿಸುವೆ. ಆದರೆ, ಸದ್ಯಕ್ಕೆ ಒಂದೇ ಒಂದು ಜೈವಿಕ ಲಿಂಗವನ್ನು ಹೊಂದದೇ ಇರುವುದಕ್ಕೆ ಅನೇಕ ಕಾರಣಗಳು ಮತ್ತು ಸಾಧ್ಯತೆಗಳಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೊÃಣ.
ನಮ್ಮ ಕ್ರೊÃಮೊಸೋಮ್‌ಗಳು, ವೃಷಣ/ಅಂಡಾಶಯಗಳ ರಚನೆ, ಜನ್ಮದ ಸಮಯದಲ್ಲಿ ಹಾರ್ಮೋನುಗಳು, ಜನನಾಂಗಗಳು ಮತ್ತು ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳು, ಇವೆಲ್ಲವುಗಳೂ ನಮ್ಮ ದೇಹ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ಪರಿಣಾಮ ಬೀರುತ್ತವೆ. ಒಂದು ವೇಳೆ ಇವುಗಳು ಅಸ್ಪಷ್ಟ ಜನನಾಂಗಗಳನ್ನು ಅಥವಾ ಅಸ್ಪಷ್ಟ ಲೈಂಗಿಕ ಲಕ್ಷಣಗಳನ್ನು ಸೃಷ್ಟಿಸಲು ಕಾರಣವಾದರೆ ಹಾಗೂ ಇವಗಳನ್ನು ವೈದ್ಯರು ಗುರುತಿಸಿದರೆ ಆ ಮಕ್ಕಳನ್ನು ಇಂಟರ್‌ಸೆಕ್ಸ್ ಎಂದು ಕರೆಯಲಾಗುತ್ತದೆ; ಆದರೆ, ನಮ್ಮಲ್ಲಿ ಅನೇಕರು ವೈದ್ಯಕೀಯವಾಗಿ ಇಂಟರ್‌ಸೆಕ್ಸ್ ಆಗಿದ್ದರೂ ಆ ವಾಸ್ತವದ ಅರಿವು ಇಲ್ಲದೇ ಇರಬಹುದು.

– ಕಾರ್ತಿಕ್ ಬಿಟ್ಟು
ಅನುವಾದ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...