Homeಅಂಕಣಗಳುಗೌರಿ ಕಾರ್ನರ್: “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ”

ಗೌರಿ ಕಾರ್ನರ್: “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ”

- Advertisement -
- Advertisement -

ಗೌರಿ ಮೇಡಂ ಜೊತೆಗಿನ ನನ್ನ ಒಡನಾಟಕ್ಕೆ ಈ ವರ್ಷಕ್ಕೆ 20 ತುಂಬುತ್ತದೆ. ಅದರಲ್ಲಿ ಅವರು ಜೊತೆಗಿಲ್ಲದೇ ಕಳೆದ 3 ವರ್ಷಗಳನ್ನೂ ಸೇರಿಸಿದ್ದೇನೆ, ಏಕೆಂದರೆ ಅವರ ಸಾವಿನ ನಂತರ ಅವರ ವಿಚಾರ, ಆಶಯ, ಗುರಿ ಅವನ್ನು ಮುಟ್ಟಬಹುದಾದ ದಾರಿ ಇವುಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬೆಸೆದುಕೊಂಡಿದ್ದೇನೆ. ಇಂಥದೇ ವಿಚಾರಗಳಿಂದ ಕೂಡಿದ ಒಂದಿಡೀ ಉತ್ಸಾಹಿ ತಂಡದೊಂದಿಗೆ ಗುರುತಿಸಿಕೊಂಡಾಗಿನಿಂದ ಜೀವನ ಹೆಚ್ಚು ಪ್ರಸ್ತುತವೆನಿಸುತ್ತದೆ.

ಗೌರಿ ಮೇಡಂ, ಪತ್ರಕರ್ತೆಯಿಂದ ಆಕ್ಟಿವಿಸ್ಟ್ ಆಗಿ ಬೆಳೆದ ಅವರ ಪ್ರಯಾಣದ ಎಲ್ಲ ಹಂತದಲ್ಲಿ ಅವರ ಜೊತೆ ಇದ್ದು ಅವರು ಆ ಬೆಳವಣಿಗೆಯ ಆಳ-ಅಗಲ ಅರ್ಥವಾಗುವಷ್ಟರಲ್ಲಿ ಅವರನ್ನು ಕಳೆದುಕೊಂಡಾಗ, ನನ್ನದೇ ವ್ಯಕ್ತಿತ್ವದ ಒಂದು ಭಾಗ ಕಿತ್ತುಹೋದಂತಾಯ್ತು.

ನಾನು ಲಂಕೇಶ್ ಪತ್ರಿಕೆ ಆಫೀಸ್ ಪಕ್ಕದಲ್ಲಿಯೇ ಇದ್ದ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ‘ಲಂಕೇಶ್’ ಸತ್ತ ಸುದ್ದಿ ಹೇಳಿದರು. ಬೆಂಗಳೂರಿಗೆ ಬಂದಾಗಿನಿಂದ ದಿನಾಲು ಲಂಕೇಶ್ ಪತ್ರಿಕೆ ಆಫೀಸ್ ನೋಡುತ್ತಿದ್ದೆನಾದರೂ ಒಳಗೆ ಹೋಗಿರಲಿಲ್ಲ. ಆದರೆ ಲಂಕೇಶ್ ಸಾವು, ಪತ್ರಿಕೆಯ ಭವಿಷ್ಯ ಇವುಗಳ ಬಗ್ಗೆ ಸ್ನೇಹಿತರೊಂದಿಗೆ ಮಾತಾಡುವಾಗ ತಡೆಯಲಾಗದೆ ಒಂದು ದಿನ ಕಾರಣವಿಲ್ಲದೇ ‘ಲಂಕೇಶ್ ಪತ್ರಿಕೆ’ ಆಫೀಸಿಗೆ ಹೋದೆ. ಪತ್ರಿಕೆ ಆಫೀಸಿನ ಮೆಟ್ಟಿಲುಗಳೇರಿದಾಗ ಎದುರಿಗೇ ಇರುವ ಒಂದು ಸಣ್ಣ ರೂಮಿನಲ್ಲಿ ಗೌರಿ ಹಣೆಗೆ ಕೈಹಚ್ಚಿ ಕುಳಿತಿದ್ದರು. ಒಳಗೆ ಹೋಗಿ ನನ್ನ ಪರಿಚಯ ಮಾಡಿಕೊಂಡೆ. ಅಂದಿನ ನನ್ನ ಸಣಕಲ ದೇಹ, ಶಾರ್ಟ್ ಹೇರ್‍ಕಟ್ ನೋಡಿ ಅವರಿಗೆ ಅದೇನನ್ನಿಸಿತೋ “ಕೂಡು ಮರಿ” ಅಂದರು. ನಂತರ ನನ್ನೂರು, ಕಾಲೇಜು ಎಲ್ಲದರ ಬಗ್ಗೆ ಮಾತಾಡಿದರು. ಆಗ ನಾನು ಕಾಲೇಜಲ್ಲಿದ್ದಾಗಲೇ ಬೆಳಗಿನ ಹೊತ್ತು “ಸಂಜೆವಾಣಿ” ಪತ್ರಿಕೆಯಲ್ಲಿ ಉಪ ಸಂಪಾದಕಳಾಗಿ ಕೆಲಸ ಮಾಡುತ್ತಿದ್ದೆ ಮತ್ತು ಕೆಲವು ಸಣ್ಣ ಕಥೆ, ಲೇಖನ ಎಲ್ಲಾ ಬರೆದಿದ್ದೆ. ನನ್ನ ಬ್ಯಾಗಿನಲ್ಲಿ ಕೆಲವೊಂದನ್ನು ಅಂದು ತೋರಿಸಿದೆ. ಅವರು ಒಂದುಕ್ಷಣ ಬಹಳ ಖುಷಿ ಪಟ್ಟು ಒಳಗಡೆ ಇದ್ದ ಚಂದ್ರೇಗೌಡರನ್ನ ಕರೆದು ತೋರಿಸಿದರು. ಗೌಡರೂ ಓದಿ ‘ಚಂದ ಬರಿದೀಯವ್ವಾ’ ಅಂದಾಗ ಗೌರಿ “ಇದನ್ನ ನೋಡಿದರೆ ಹೈಸ್ಕೂಲ್ ಹುಡುಗಿ ಹಂಗ ಕಾಣ್ತದ ಅಂತ ನಕ್ಕು” ನಮ್ಮೂರ ಕಡೆ ಪ್ರೀತಿಯಿಂದ ಚಿಕ್ಕವರನ್ನು ಅದು ಇದು ಅಂತ ಕರೀತಾರ ಬೇಜಾರ ಮಾಡ್ಕೋ ಬ್ಯಾಡರಿ ಅಂದರು. ಅವತ್ತಿನ ನಮ್ಮ ಮೊದಲ ಭೇಟಿ ಸುಮಾರು ಒಂದೂವರೆ ಗಂಟೆ ನಡೆಯಿತು. ಒಂದೆರಡು ಸಣ್ಣಕತೆ ಬರೆದುಕೊಂಡು ಬಾ ಎಂದು ಗೌರಿ ಹೇಳಿದಾಗ ಅತೀ ಸಂಭ್ರಮದಿಂದ ಅಲ್ಲಿಂದ ಬಂದಿದ್ದೆ. ಅದ್ಯಾವತ್ತೂ ಮೊದಲ ಭೇಟಿ ಅನಿಸಲೇ ಇಲ್ಲ. ಅಷ್ಟೊಂದು ಆತ್ಮೀಯತೆ, ಸ್ನೇಹ ಅವರಲ್ಲಿತ್ತು.

ಅಂದಿನಿಂದ ಶುರುವಾದ ಗೌರಿ ಜೊತೆಗಿನ ಒಡನಾಟ ನಿರಂತರವಾಗಿದೆ. ಇಂಗ್ಲಿಷ್ ಜರ್ನಲಿಸಂದಿಂದ ಕನ್ನಡಕ್ಕೆ ಒಗ್ಗಿಕೊಳ್ಳುವಲ್ಲಿ ಅವರು ಪಡುತ್ತಿದ್ದ ಪ್ರಯತ್ನಕ್ಕೆ, ಪತ್ರಿಕೆ ನಿರ್ವಹಿಸಲು ಹಣಕಾಸಿಗಾಗಿ ಗೌರಿ ಪಡುತ್ತಿದ್ದ ಕಷ್ಟ ನೋಡಿದ ಮೇಲೂ, ನಾವೊಂದಿಷ್ಟು ಜನ ಪತ್ರಿಕೆ ಮಾಡುವ ಸಾಹಸಕ್ಕೆ ಕೈಹಾಕಿ ಮೇಡಂ ಸಲಹೆ ಕೇಳಲು ಆಫೀಸಿಗೆ ಹೋಗಿ ಹಗುರಾಗಿ ಬೈಸಿಕೊಂಡು ಬಂದಿದ್ದೆವು. “ನನ್ನಪ್ಪನ ಹೆಸರು ಇದ್ದೂ, ರೆಡಿಮೇಡ್ ಆಫೀಸೂ ಇದ್ದು ನಾನೇ ಒದ್ದಾಡ್ತಾ ಇದ್ದಿನಿ, ಈಗ ತಾನೆ ಡಿಗ್ರಿ ಮುಗಿಸೀರಿ ನಿಮಗ್ಯಾಕೆ ಈ ಉಸಾಬರಿ” ಅಂದರೂ ಕೇಳುವ ವಯಸ್ಸಲ್ಲವಲ್ಲ. ಸ್ನೇಹಿತನ ಪತ್ರಿಕೆಯ ಹುಮ್ಮಸ್ಸಿಗೆ ನಾವೆಲ್ಲ ಭರವಸೆಯ ಮಳೆ ಸುರಿಸಿ ಹಂಗೂಹಿಂಗೂ ಒಂದುವರ್ಷ ಬಹಳ ಚೆನ್ನಾಗಿ ಪತ್ರಿಕೆ ನಡೆಸಿ, ಹಣಕಾಸಿನಲ್ಲಿ ಕೈಸುಟ್ಟ ಮೇಲೆ ಅದನ್ನು ನಿಲ್ಲಿಸಿ, ನಿಯತ್ತಿನಿಂದ ವೃತ್ತಿ ಜೀವನ ಶುರುಮಾಡಿಕೊಂಡಿವಿ. ಗೌರಿ ಮೇಡಂ ಜೊತೆ ಪ್ರತಿಯೊಂದು ಧರಣಿ, ಸತ್ಯಾಗ್ರಹ, ಎಲ್ಲ ಕಡೆ ಹೋಗುವುದು ಮಾತ್ರ ಹಾಗೇ ಮುಂದುವರೆದು ಅವರ ಲಂಕೇಶ್ ಪತ್ರಿಕೆ ಪ್ರಯಾಣ ಮುಗಿದು “ಗೌರಿ ಲಂಕೇಶ್” ಶುರುವಾದಾಗ ಉದ್ಘಾಟನಾ ಸಮಾರಂಭದಲ್ಲಿ ನಮ್ಮದೇ ಪತ್ರಿಕೆ ಶುರುವಾದಂಥ ಸಂಭ್ರಮದಲ್ಲಿ ಓಡಾಡಿದ್ದೆವು. ಅಲ್ಲಿಂದ ಮುಂದಿನ ಪ್ರಯಾಣ ಮಾತ್ರ ಬಹಳ ಜವಾಬ್ದಾರಿಯಿಂದ ಕೂಡಿದ್ದಾಗಿತ್ತು.

ಕೋಮು ಸೌಹಾರ್ದ, ಅಲ್ಪಸಂಖ್ಯಾತ ಮತ್ತು ಲೈಂಗಿಕ ಶೋಷಿತರ ಹಕ್ಕುಗಳು, ಬಲಪಂಥ ವಿರೋಧ ಹೀಗೆ ಹಲವು ಹೋರಾಟಗಳಲ್ಲಿ ಭಾಗಿಯಾಗಿ, ಗೌರಿ ಅವರಲ್ಲಿ ಒಬ್ಬರಾಗಿ ಬೆರೆಯುತ್ತಾ ಹೋದೆವು. ಎಲ್ಲ ದಮನಿತರು ಒಂದೇ ಸೂತ್ರದಲ್ಲಿ ಸೇರಿಕೊಂಡವರು ಎಂಬ ಸೂಕ್ಷ್ಮ ಅಂಶವನ್ನು ಅರಿತಿದ್ದ ಗೌರಿ ಆ ಸೂತ್ರಗಳಲ್ಲಿ ಹಾದು ಹೊಕ್ಕರು. ಟೌನ್‍ಹಾಲ್ ಮೆಟ್ಟಿಲಮೇಲೆ ಕೂಡುವಷ್ಟೇ ಸಹಜವಾಗಿ ಕಂಡ ಹಳ್ಳಿಹಳ್ಳಿಗೆ ಹೋಗಿ ಬಂದರು. ಶೃಂಗೇರಿಯಲ್ಲೊಮ್ಮೆ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೋದಾಗ ಮಳೆಗಾಲದ ಮಲೆನಾಡನ್ನು ನೋಡಿ ನನಗೆ ವಿಚಿತ್ರವಾದ ಅನುಭವ. ಒಂದು ಕಡೆ ಜೀಪ್ ನಿಲ್ಲಿಸಿ ಗುಡ್ಡದಲ್ಲಿ ಹೋಗುವಾಗ ಗೌರಿ ಮೇಡಂ ಮತ್ತು ಇತರರ ಮಾತುಗಳನ್ನೇ ಕೇಳುತ್ತಾ ಹೋದ ಅನುಭವ ಮಾತ್ರ ಮರೆಯಲು ಸಾಧ್ಯವಿಲ್ಲ. ವಾಪಸ್ಸು ಬಂದು ನಿಂತಾಗ ಗೌರಿ ಮೇಡಂ ತಮಗೆ ಅಂಟಿಕೊಂಡು ರಕ್ತ ಹೀರುತ್ತಿದ್ದ ಜಿಗಣೆಗಳನ್ನು ಕಿತ್ತಲು ಹೇಳಿದಾಗ ನನ್ನ ಕೈ ನಡುಗುತಿತ್ತು. ಕಿತ್ತಿದಾಗ ಹರಿದ ರಕ್ತ ನೋಡಿ ಹೌಹಾರಿದ್ದೆ. ಗೌರಿ ನಕ್ಕು ಎಲ್ಲರಿಗೂ ಹೇಳಿದ್ದರು “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ” ಅಂತ.

ಜರ್ನಲಿಸ್ಟ್ ಗೌರಿ ಆಕ್ಟಿವಿಸ್ಟ್ ಆಗುವಷ್ಟರಲ್ಲಿ ಅವರ ಜೊತೆ ನಾನೂ ವಿದ್ಯಾರ್ಥಿ ದೆಸೆಯಿಂದ ಬೆಳೆದು ವಕೀಲಳಾಗಿ ಮುಂದೆ ಅವರದೇ ಪತ್ರಿಕೆಯಲ್ಲಿ ಅಂಕಣಕಾರಳಾಗಿ, ಕಾನೂನು ವಿಷಯಗಳಲ್ಲಿ ಅವರಿಗೆ ಆಗಾಗ ಸಲಹೆ ನೀಡುತ್ತ, ಅದೇ ಸಲುಗೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಕಾಮೆಂಟ್, ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿದಾಗ ಬೈಯುತ್ತಿದ್ದೆ. ಅದೊಂದು ನೆನಪುಗಳ ಸರಮಾಲೆ.

ಗೌರಿಯನ್ನು ಕೊಂದು ಅವರ ವಿಚಾರಗಳನ್ನು ನಾಶ ಮಾಡುತ್ತೇವೆ ಎಂದುಕೊಂಡವರಿಗೆ ಇಂದು ಆ ಹೆಸರಿನ ಹಿಂದೆ ಇರುವ ಸಮಾನ ಮನಸ್ಕರ ದಂಡು ನೋಡಿ ಗಾಬರಿ ಆಗಬೇಕು. ಗೌರಿ ಮುಗಿದಿಲ್ಲ, ಅವರಿನ್ನೂ ಬೆಳೆಯುತ್ತಾರೆ, ನಾವೂ ಬೆಳೆಯುತ್ತೇವೆ. ಜೊತೆಜೊತೆಯಾಗಿ.


ಇದನ್ನೂ ಓದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...