Homeಚಳವಳಿಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎನ್ನುತ್ತಾರೆ ಲಕ್ಷ್ಮಿ ಅಗರವಾಲ್‌..

- Advertisement -
- Advertisement -

ಕಳೆದ ವಾರ ಹೈದರಾಬಾದ್‌ನ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲ್ಲಲಾಯಿತು. ಅದಾದ ಒಂದೇ ವಾರಕ್ಕೆ ಉತ್ತರಪ್ರದೇಶ ಉನ್ನಾವ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರದ ಆರೋಪಿಗಳೆ ಪೆಟ್ರೊಲ್ ಸುರಿದು ದಹಿಸಿಬಿಟ್ಟರು. ಈ ರೀತಿಯ ಹೆಣ್ಣಮಕ್ಕಳ ಮೇಲಿನ ಅಮಾನವೀಯ ದಾಳಿಗಳ ಸಂದರ್ಭದಲ್ಲಿ ಅಂತಹುದೇ ನೊಂದ ಹೆಣ್ಣು ಮಗಳು ಹೋರಾಡಿ ಮುಂದೆ ಬರುವ ಕಥೆಯುಳ್ಳ ಸಿನಿಮಾ ’ಚಪಾಕ್‌’ ಬಾಲಿವುಡ್‌ನಲ್ಲಿ ತಯಾರಾಗಿದೆ.

ಚಪಾಕ್‌ ಹಿಂದೆ ಯಾರಿದ್ದಾರೆ?

ಜನಪ್ರಿಯ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಫಾಕ್ಸ್‌ ಸ್ಟಾರ್‌ ಸ್ಟುಡಿಯೋ ಜೊತೆ ಈ ಸೇರಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಜನವರಿ 10ರಂದು ಬಿಡುಗಡೆಯಾಗಲಿರುವ ಚಪಾಕ್‌ ಸಿನಿಮಾ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಈ ಸಿನೆಮಾಗೆ ಗೋವಿಂದ್‌ ಸಿಂಗ್‌ ಸಂಧು ಮತ್ತು ಮೇಘನ ಗುಲ್ಜಾರ್‌ ಸಹ ಹಣ ಹೂಡಿದ್ದಾರೆ.

ಅಷ್ಟೇ ಅಲ್ಲದೇ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ದಾಖಲೆಗಳನ್ನು ಮಾಡುತ್ತಿದೆ. ಅವುಗಳೆಂದರೆ ’ಚಪಾಕ್‌’ ಟ್ರೇಲರ್‌ ಬಿಡುಗಡೆಯಾದ ಎರಡು ದಿನದಲ್ಲೇ ಎರಡು ಕೋಟಿಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಅಷ್ಟು ಮಾತ್ರವಲ್ಲ ಯೂಟ್ಯೂಬ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿ ಟ್ರೆಂಡಿಂಗ್‌ ಆಗಿರುವ ಆ ಟ್ರೇಲರ್‌ ಅನ್ನು ಸುಮಾರು 9.2 ಲಕ್ಷ ಜನರು ಅದನ್ನು ಇಷ್ಟಪಟ್ಟು ಲೈಕ್‌ ಮಾಡಿದ್ದಾರೆ.

ಟ್ರೇಲರ್‌ ನೋಡಿ.

ಏನಿದರ ಕಥಾಹಂದರ?

2005ರಲ್ಲಿ ಆಸಿಡ್‌ ದಾಳಿಗೊಳಗಾದ ಲಕ್ಷ್ಮಿ ಅಗರ್‌ವಾಲ್‌ರವರ ಜೀವನ ಕಥನದ ನೈಜ ಘಟನೆಗಳನ್ನು ಆಧರಿಸಿ ಚಪಾಕ್‌ ಸಿನೆಮಾ ಮಾಡಲಾಗಿದೆ. 1990ರಲ್ಲಿ ದೆಹಲಿಯಲ್ಲಿ ಹುಟ್ಟಿದ ಲಕ್ಷ್ಮಿ ಅಗರ್‌ವಾಲ್‌ ಎಲ್ಲರಂತೆ ಬದುಕಿನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಹುಡುಗಿ. ಆದರೆ ಬಡತನದ ಕಾರಣಕ್ಕೆ ಚಿಕ್ಕ ವಯಸ್ಸಿಗೆ ಕೆಲಸಕ್ಕೆ ಸೇರಬೇಕಾದ ಅನಿವಾರ್ಯತೆಗೆ ಬಿದ್ದ ಆಕೆ ಪುಸ್ತಕದಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

ಅಂದವಾಗಿದ್ದ 15 ವರ್ಷದ ಈ ಬಾಲೆಯ ಹಿಂದೆ 32 ವರ್ಷದ ಗುಡ್ಡು ಎಂಬ ವ್ಯಕ್ತಿ ಬೀಳುತ್ತಾನೆ. ಸಹಜವಾಗಿಯೇ ಆತನ ಪ್ರೀತಿಯನ್ನು ಲಕ್ಷ್ಮಿ ನಿರಾಕರಿಸಿದ ಏಕೈಕ ಕಾರಣಕ್ಕಾಗಿ ಆ ದುಷ್ಟನಿಂದ ಆಸಿಡ್‌ ದಾಳಿಗೊಳಗಾಗುತ್ತಾಳೆ. ಅವಳ ಬಹುತೇಕ ಮುಖ ತೀವ್ರ ಹಾನಿಗೊಳಗಾಗುತ್ತದೆ.

ಆದರೆ ಕುಗ್ಗದ ಲಕ್ಷ್ಮಿ ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುತ್ತಾಳೆ ಮತ್ತು ದಿಟ್ಟವಾಗಿ ಹೋರಾಡಿ ಅದರಲ್ಲಿ ಜಯಸಾಧಿಸುತ್ತಾಳೆ. ಆರೋಪಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಆದರೆ ಅಷ್ಟಕ್ಕೆ ಲಕ್ಷ್ಮಿ ಸುಮ್ಮನಾಗುವುದಿಲ್ಲ. ತನ್ನ ಮುಖವನ್ನು ಘಾಸಿಗೊಳಿಸಿದ್ದು ಸಾಕು ಮತ್ಯಾರ ಮುಖವೂ ಹಾಳಾಗಬಾರದೆಂಬ ದಿಟ್ಟ ತೀರ್ಮಾನಕ್ಕೆ ಬರುತ್ತಾಳೆ. ಅದಕ್ಕಾಗಿ ದೇಶಾದ್ಯಂತ ಆಸಿಡ್‌ ಮಾರಾಟ ನೀಷೇಧಿಸುವ ಆಂದೋಲಕ್ಕೆ ಕರೆ ನೀಡುತ್ತಾಳೆ.

ಲಕ್ಷ್ಮಿ ಅಗರ್‌ವಾಲ್

ನ್ಯಾಯಾಲಯದಲ್ಲಿಯೂ ಈ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಇವಳು ಜನಾಭಿಪ್ರಾಯ ಮೂಡಿಸಲು ಮುಂದಾಗುತ್ತಾಳೆ. ಕೊನೆಗೂ ನ್ಯಾಯಾಲಯ 2013ರಲ್ಲಿ ಆಸಿಡ್‌ ಮಾರಾಟದ ಕುರಿತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಆದೇಶಿಸಿದೆ. ಅದರಲ್ಲಿ ಗೆದ್ದ ಆಕೆ ಹಿಂತಿರುಗಿ ನೋಡಲೇ ಇಲ್ಲ. ಆಸಿಡ್‌ ದಾಳಿ ನಿಲ್ಲಿಸಿ ಎಂಬ ಆಂದೋಲನದ ಗಟ್ಟಿ ಕೂಗಾಗುತ್ತಾಳೆ.

ಆದರೆ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಟಿಬಿಯಿಂದ ತಮ್ಮ ಕೊನೆಯುಸಿರೆಳೆದರೆ ಆಕೆಯ ತಂದೆಯೂ ಸಹ ಹೃದಯಾಘಾತದಿಂದ ಮರಣಹೊಂದುತ್ತಾರೆ. ಛಲ ಬಿಡದ ಗಟ್ಟಿಗಿತ್ತಿ ಲಕ್ಷ್ಮಿ ತನ್ನ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ.

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎಂದು ಹಲವು ಸಂದರ್ಶನಗಳಲ್ಲಿ ಆಕೆ ದಿಟ್ಟವಾಗಿ ಹೇಳಿದ್ದಾಳೆ. ಇದನ್ನು ನಾವು ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೂ ಅನ್ವಯಿಸಬೇಕಾಗಿದೆ. ಸಂತ್ರಸ್ತರ ತಲೆಯೆತ್ತಿ ನಡೆಯಬೇಕು. ಆರೋಪಿಗಳು ತಲೆತಗ್ಗಿಸಬೇಕು ಎಂಬ ಮನೋಭಾವವನ್ನು ಎಲ್ಲೆಡೆ ಮೂಡಿಸಬೇಕು ಎನ್ನುವುದು ಆಕೆಯ ಮನದಾಳದ ಮಾತು.

ಆಕೆಯ ಈ ಧೈರ್ಯ ಮತ್ತು ದಿಟ್ಟತನವನ್ನು ಮೆಚ್ಚಿದ ಪರ್ತಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಅಲೋಕ್‌ ದೀಕ್ಷಿತ್‌ ಆಕೆಯ ಜೊತೆಗಾರನಾಗಿದ್ದಾನೆ. ಸಾಂಪ್ರಾದಾಯಿಕ ಮದುವೆ ಪದ್ಧತಿಯಲ್ಲಿ ನಂಬಿಕೆಯಿರದ ಅವರು ಜೊತೆಗೂಡಿ ಪ್ರೀತಿಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಂದು ಮಗು ಸಹ ಇದೆ.

ಚಾವ್‌ ಫೌಂಡೇಶನ್‌ ತೆರದಿರುವ ಅವರಿಬ್ಬರೂ ಆಸಿಡ್‌ ದಾಳಿಯ ವಿರುದ್ಧ ಪ್ರಚಾರಾಂದೋಲನ ಮತ್ತು ದಾಳಿಗೊಳಗಾದವರಿಗೆ ರಕ್ಷಣೆ, ಪರಿಹಾರ ಇನ್ನಿತರ ವಿಚಾರಗಳಲ್ಲಿ ತೊಡಗಿಸಿಕೊಂಡಿದೆ. ಸಾಕಷ್ಟು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಲಕ್ಷ್ಮಿ 2016ರಲ್ಲಿ ಲಂಡನ್‌ನಲ್ಲಿ ನಡೆದ ಫ್ಯಾಷನ್‌ ವೀಕ್‌ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮ ಪತ್ನಿ ಮಿಶೆಲ್‌ ಲಕ್ಷ್ಮಿಯನ್ನು ಗುರುತಿಸಿ ಧೈರ್‍ಯವಂತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಒಟ್ಟಿನಲ್ಲಿ ನಮಗೆ ಬರುವ ಕಷ್ಟಗಳು, ಸವಾಲುಗಳನ್ನೇ ದಾರಿಯಾಗಿ ಮಾಡಿಕೊಂಡು ಸಾಧನೆಗೈಯ್ಯಬೇಕು ಮತ್ತು ನೊಂದವರಿಗೆ ಸಹಾಯ ಮಾಡಬೇಕು ಎಂಬುದನ್ನು ನಾವು ಲಕ್ಷ್ಮಿಯಿಂದ ಕಲಿಯಬೇಕಾಗಿದೆ. ಈಕೆಯ ಇಷ್ಟೆಲ್ಲಾ ಸಾಧನೆ ನೋಡಿಯೇ ಚಪಾಕ್‌ ಸಿನಿಮಾ ರಚನೆಗೊಂಡಿದೆ.

ಮೇಘನ ಗುಲ್ಜಾರ್‌

ಇನ್ನು ಮಹತ್ವದ ಈ ಸಿನಿಮಾಗೆ ರಾಝಿ ಮತ್ತು ತಲ್ವಾರ್‌ ನಂತಹ ಹಿಟ್‌ ಸಿನಿಮಾಗಳನ್ನು ಕೊಟ್ಟ ಖ್ಯಾತ ನಿರ್ದೇಶಕಿ ಮೇಘನ ಗುಲ್ಜಾರ್‌ರವರು ಆಕ್ಷಮ್‌ ಕಟ್‌ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಬಗ್ಗೆ ಒಂದಿಷ್ಟು…

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಸಿನಿಮಾಗಷ್ಟೇ ಸೀಮಿತವಾಗಿಲ್ಲ. ಅವರು ಮಾನಸಿಕ ಖಿನ್ನತೆಯ ವಿರುದ್ಧ ಅರಿವು ಮೂಡಿಸಲು ದಿ ಲೈವ್‌ ಲವ್‌ ಲಾಫ್‌ ಫೌಂಡೇಶನ್‌ ಆರಂಭಿಸಿದ್ದಾರೆ. ಚಿಕ್ಕಂದಿನಲ್ಲಿ ಮತ್ತು ಸಿನೆಮಾ ತಾರೆಯಾದ ನಂತರವೂ ಸ್ವತಃ ಖಿನ್ನತೆಯಿಂದ ಬಳಲಿದ ದೀಪಿಕಾ ತನಗಾದ ನೋವು ಮತ್ಯಾರಿಗೂ ಆಗಬಾರದೆಂದು ಖಿನ್ನತೆಯ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಬಂದು ಈ ಕುರಿತು ಅರಿವು ಮೂಡಿಸುತ್ತಿರುವ ಅವರು ಮಾನಸಿಕ ಖಿನ್ನತೆಯಿಂದ ಉಂಟಾಗುವ  ಆತ್ಮಹತ್ಯೆಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೇ ಮಾದರಿಯ ಚಿತ್ರ ಉಯರೆ..

ಇನ್ನು ಈ ವರ್ಷ ತೆರೆಕಂಡ ಮಲೆಯಾಳಂ ಸಿನೆಮಾ ಕೂಡ ಆಸಿಡ್‌ ದಾಳಿಗೊಳಗಾದ ಸಂತ್ರಸ್ತೆಯ ದಿಟ್ಟ ಹೋರಾಟವನ್ನು ಬಿಚ್ಚಿಡುತ್ತದೆ. ಪೈಲೆಟ್‌ ಆಗಿ ಆಕಾಸದಲ್ಲಿ ಹಕ್ಕಿಯ ರೀತಿ ಹಾರಬೇಕೆಂದು ಚಿಕ್ಕಂದಿನಿಂದ ಕನಸು ಕಾಣುವ ಹುಡುಗಿಗೆ ಆತನ ಪ್ರಿಯತಮೆನೆ ಕಲ್ಲು ಗುಂಡಿನ ಹಾಗೆ ಆಕೆಯ ಕಾಲಿಗೆ ಗಂಟು ಬಿದ್ದಿರುತ್ತಾನೆ.

ಪೈಲೆಟ್‌ ತರಬೇತಿಗಾಗಿ ಮುಂಬೈ ಸೇರುವ ಹುಡುಗಿ, ಆಕೆಯ ಬಗ್ಗೆ ಅನುಮಾನಿಸವು ಪ್ರಿಯತಮೆ, ಜೀವಕ್ಕಿಂತ ಹೆಚ್ಚು ಮಗಳನ್ನು ಪ್ರೀತಿಸುವ ಆಕೆಯ ತಂದೆ.. ಇವಿಷ್ಟರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಯತಮೆನೇ ಆಕೆಯ ಮೇಲೆ ಆಸಿಡ್‌ ಎರಚುತ್ತಾನೆ. ಆ ಮೂಲಕ ಆಕೆಯ ಕನಸುಗಳನ್ನು ಭಗ್ನಗೊಳಿಸಲು ಯತ್ನಿಸುತ್ತಾನೆ.

ಛಲಬಿಡದ ಆಕೆ ಪೈಲೆಟ್‌ ಆಗದಿದ್ದರೂ ಕೊನೆಗೆ ಗಗನಸಖಿಯಾಗುತ್ತಾಳೆ. ಆದರೆ ಆರೋಪಿ ಮಾತ್ರ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡದೇ ಆಕೆಗೆ ಮತ್ತೆ ತೊಂದರೆ ಕೊಟ್ಟು ಆ ಕೆಲಸದಿಂದಲೂ ಆಕೆಯನ್ನು ಬಿಡಿಸುತ್ತಾನೆ. ಅಲ್ಲಿಂದ ಹೋರಾಟ ಮುಂದುವರೆಸುವ ಆಕೆ ನ್ಯಾಯಾಲಯದಲ್ಲಿಯೂ ಗೆಲ್ಲುವುದು ಮತ್ತು ಸಂಕಷ್ಟದಲ್ಲಿ ಪೈಲೆಟ್‌ ಆಗಿ ಜನರನ್ನು ರಕ್ಷಿಸುವ ಮೂಲಕ ಜನಮನವನ್ನು ಗೆಲ್ಲುತ್ತಾಳೆ.

ಪಾರ್ವತಿ, ತೊವಿನೊ ಥಾಮಸ್‌, ಆಸಿಫ್‌ ಅಲಿ ಅಭಿನಯದ ಈ ಚಿತ್ರ ಅತ್ಯುತ್ತಮ ಸಂದೇಶ ಬೀರುವ ಚಿತ್ರವಾಗಿ ಎಲ್ಲರ ಮನಗೆದ್ದಿದೆ. ಅಲ್ಲಿನ ಹಾಡುಗಳು ಸಹ ಸ್ಪೂರ್ತಿಯುತವಾಗಿದೆ.

ಒಟ್ಟಿನಲ್ಲಿ ಈ ರೀತಿಯ ಸಮಾಜಮುಖಿ ಮತ್ತಷ್ಟು ಬರಲಿ. ಇದನ್ನು ನೋಡಿದ ಜನ ಅಲ್ಲಿನ ಸಂದೇಶಗಳನ್ನು ಅಳವಡಿಸಿಕೊಳ್ಳಲ್ಲಿ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ನಿಲ್ಲಲ್ಲಿ ಎಂಬುದು ನಮ್ಮ ಕಾಳಜಿ. ಆ ನಿಟ್ಟಿನಲ್ಲಿ ಚಿತ್ರತಂಡಕ್ಕೆ ಶುಭಕೋರೋಣ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...