Homeಮುಖಪುಟಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು.

- Advertisement -
- Advertisement -

ಗುಡ್ ಲೈಫ್ ಬಾಸುಮತಿ ಅಕ್ಕಿ ಬಳಸಿ, ಹೆಲ್ದಿ ಲೈಫ್ ತುಪ್ಪ, ಬೆಸ್ಟ್ ಫಾರ್ಮ್ಸ್ ಮಸಾಲಾ, ಡಿಲೈಟ್ ಮಾಂಸ ಹಾಕಿ ಬಿರಿಯಾನಿ ಮಾಡಿ ಊಟ ಮಾಡಿ, ಎನ್ಸೋಮಾಟಿಕ್ ಸೋಪಿನಲ್ಲಿ ಕೈತಟ್ಟೆ ತೊಳೆದುಕೊಂಡೆವು ಎಂದುಕೊಳ್ಳೋಣ. ಈ ಎಲ್ಲಾ ಆಹಾರ ಪದಾರ್ಥಗಳನ್ನೂ ಯಾವುದೋ ಗುಡಿ ಕೈಗಾರಿಕೆಯಲ್ಲೇ ತಯಾರಾಗಲ್ಪಟ್ಟದ್ದು ಎಂದರೂ ಮತ್ತು ಈ ದವಸ ಧಾನ್ಯಗಳನ್ನು ಯಾವುದೋ ಸಣ್ಣ ರೈತರ ಹೊಲದಲ್ಲೇ ಬೆಳೆದದ್ದಾದರೂ ರಿಲಾಯನ್ಸ್ ಕಂಪನಿಯ ಅಂಬಾನಿಗೆ ಸಂಬಂಧ ಹೆಣೆಯುವುದು ಹೇಗೆ ಎಂದು ಅಮಾಯಕ ಗ್ರಾಹಕನೊಬ್ಬ ಕೇಳಬಹುದು. ಮಾರುಕಟ್ಟೆಯ ಮರ್ಮ ಬಲ್ಲವರಿಗೆ ನಾವು ಬಳಸಿದ ದವಸಧಾನ್ಯಗಳೆಲ್ಲವೂ ರಿಲಾಯನ್ಸ್ ಕಂಪನಿಯ ಖಾಸಗೀ ಲೇಬಲ್‌ಗಳಾಗಿವೆ (ಪ್ರೈವೇಟ್ ಲೇಬಲ್) ಎಂಬುದು, ದೈತ್ಯ ರೀಟೇಲ್ ವ್ಯಾಪಾರವನ್ನು ಡೀಟೇಲಾಗಿ ಅಧ್ಯಯನ ಮಾಡಿದರೆ ತಿಳಿದುಬರುವ ವಿಷಯ.

ಬ್ರಾಂಡ್ ಅವರದ್ದೇ ಆದರೂ ಅದನ್ನು ಅವರು ತಯಾರು ಮಾಡುವುದಿಲ್ಲ ಅಥವಾ ಅದನ್ನು ಬೆಳೆಯುವುದಿಲ್ಲ. ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು. ರೈತರ ಹೊಲದಲ್ಲಿ ರೈತ ಕುಟುಂಬವನ್ನೇ ಕೂಲಿ ಕಾರ್ಮಿಕರಾಗಿ ದುಡಿಸಿಕೊಂಡು ನಮಗೆ ಬೇಕಾದ ಬೆಳೆಯನ್ನು ಬೆಳೆದು ಅವನಿಗೆ ಕೇಜಿಗೆ ಒಂದೋ ಎರಡೋ ರುಪಾಯಿ ಕೊಟ್ಟು ಪಡೆದುಕೊಳ್ಳುವುದಕ್ಕೆ ಈಗ ಹೊಸದಾಗಿ ಬಂದಿರುವ ಕಾಂಟ್ರಾಕ್ಟ್ ಕೃಷಿ ಸಂಪೂರ್ಣವಾಗಿ ಸಹಾಯಮಾಡುತ್ತದೆ.

ಹಾಗೆಯೇ ದೇಶದ 1.3 ಕೋಟಿ ಕಿರಾಣಿ ಅಂಗಡಿಗಳನ್ನು ದೈತ್ಯ ರೀಟೇಲ್ ಬ್ರಾಂಡ್‌ಗಳ ಅಡಿಯಲ್ಲಿ ದುಡಿಸಿಕೊಳ್ಳುವುದು ಮತ್ತು ಅವರ ಮೂಲಕ ರಿಲಾಯನ್ಸ್ ಅಂತ ಕಂಪನಿಗಳ ಬ್ರಾಂಡುಗಳನ್ನೇ ಮಾರಾಟ ಮಾಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುತ್ತಿದೆ. ಫೇಸ್ಬುಕ್ ಮೂಲಕ ಆರ್ಡರ್ ಮಾಡಿ ವಾಟ್ಸಾಪ್ ಮೂಲಕ ಹಣ ಕೊಟ್ಟು, ಚಿಲ್ಲರೆ ವ್ಯಾಪಾರಿಗಳಿಗೆ ಮೊದಮೊದಲು ಸಾಲ ಕೊಟ್ಟು, ಹೆಚ್ಚು ಮಾರ್ಜಿನ್ ಹಣ ಬಿಟ್ಟುಕೊಟ್ಟು ತಮಗೆ ದುಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಫೇಸ್ಬುಕ್, ವಾಟ್ಸಾಪ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳು ಚಿಲ್ಲರೆ ವ್ಯಾಪಾರಕ್ಕಿಳಿದಿರುವ ರಿಲಾಯನ್ಸ್ ಕಂಪನಿಗೆ ಹಣ ಹೂಡಿರುವುದು. ಇದರ ಜೊತೆಗೆ ಖಾಸಗಿ ಕಂಪನಿಯವರು ಬ್ಯಾಂಕ್ ಕೂಡಾ ಮಾಡಬಹುದೆಂದು ಆರ್‌ಬಿಐ ವರದಿ ಹೇಳುತ್ತದೆ. ಹಿಂದೆ ಬರ್ಟೋಲ್ಟ್ ಬ್ರೆಕ್ಟ್ ಹೀಗೆಂದಿದ್ದ: ’ಬ್ಯಾಂಕಿಗೆ ಕನ್ನಾ ಹಾಕುವುದು ಬೇಡ, ಬ್ಯಾಂಕನ್ನೇ ಶುರು ಮಾಡುವುದು ಒಳ್ಳೆಯದು’ ಎಂದು. ಆಗ ಜನರೇ ಸಾಲಾಗಿ ನಿಂತು ಹಣಹಾಕಿ ಹೋಗುತ್ತಾರೆ. ಅದನ್ನು ನಮ್ಮ ವ್ಯಾಪಾರಕ್ಕೆ ತಕ್ಕಂತೆ ಬಳಸಿ ಏಕಸ್ವಾಮ್ಯತೆಯನ್ನು ಸ್ಥಾಪಿಸಬಹುದು.

ನಮ್ಮಲ್ಲಿ ಸುಮಾರು 14 ಕೋಟಿ ರೈತ ಕುಟುಂಬ, ಸುಮಾರು 12 ಕೋಟಿ ಕೃಷಿ ಅವಲಂಬಿತ ಕೂಲಿಕಾರ್ಮಿಕರು, 6.3 ಕೋಟಿ ಗುಡಿ ಕೈಗಾರಿಕೆಗಳು, 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಇದ್ದಾರೆ. ಈ ರೀತಿ ಈ ದೇಶದ ಶೇ. 90ರಷ್ಟು ಜನ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಅಲ್ಲದೇ ತಮ್ಮದೇ ಆದ ರೀತಿಯಲ್ಲಿ ಸ್ವತಂತ್ರರೂ, ಸಾರ್ವಭೌಮರೂ ಆಗಿದ್ದಾರೆ. ಅವರಿಗೆ ಕಷ್ಟಗಳಿಲ್ಲವೆಂದಲ್ಲ. ಆದರೆ ತನ್ನ ಹೊಲದಲ್ಲಿ ತನಗೇನು ಬೆಳೆಯಬೇಕೆಂಬುದು ಗೊತ್ತು. ತನ್ನ ಆಹಾರ ಸಂಸ್ಕೃತಿಗೆ ತಕ್ಕಂತೆ ಬೆಳೆದು ತಮ್ಮ ಜೀವನಶೈಲಿಯಂತೆ ಕೃಷಿಮಾಡುವವರು ಬಹುಪಾಲು. ಅಲ್ಲಿ, ಕಂಪನಿಯ ಬೀಜ ಕೊಟ್ಟು, ಕಂಪನಿಯ ಗೊಬ್ಬರ, ಕೀಟನಾಶಕಗಳನ್ನು ಕೊಟ್ಟು, ತಮಗೆ ಬೇಕಾದುದನ್ನೇ ಬೆಳೆದುಕೊಳ್ಳಲು ದೈತ್ಯ ಕಂಪನಿಗೆಳಿಗೆ ಅವಕಾಶ ಕೊಟ್ಟಾಗ ಆಹಾರ ವೈವಿಧ್ಯತೆ ಉಳಿಸಿಕೊಳ್ಳಲು ಅಸಾಧ್ಯ. ಆಲೂಗಡ್ಡೆಯಲ್ಲಿ ಸಾವಿರಾರು ರೀತಿಯ, ಹಲವು ಬಣ್ಣದ, ಹಲವು ಗಾತ್ರದ ವಿನ್ಯಾಸದ ತಳಿಗಳಿವೆ. ಆದರೆ ಪೆಪ್ಸಿ ಕಂಪನಿಗೆ ಒಪ್ಪಂದ ಮಾಡಿಕೊಂಡಾಗ ಆ ಕಂಪನಿಯ ಚಿಪ್ಸಿಗೆ ಬೇಕಾದ ಒಂದೇ ಗಾತ್ರದ ಆಲೂಗಡ್ಡೆಯನ್ನು ಬೆಳೆಯುವಂತಾಗುತ್ತದೆ.

ಇತ್ತೀಚೆಗೆ ಬಂದ ಇನ್ನೆರಡು ಕೃಷಿ ಕಾನೂನುಗಳಲ್ಲಿ ಎಪಿಎಂಸಿ ಮಾರುಕಟ್ಟೆಯ ನಿಯಮಗಳನ್ನು ಮಾರ್ಪಾಟು ಮಾಡಿ ರೈತರು ಮುಕ್ತವಾಗಿ ತಮ್ಮ ಬೆಳೆಯನ್ನು ದೇಶದಲ್ಲಿ ಎಲ್ಲಿ ಯಾರಿಗೆ ಬೇಕಾದರೂ ಮಾರಬಹುದು ಎಂದು ಹೇಳಲಾಗುವ ಕಾನೂನು ಒಂದಾದರೆ, ಇನ್ನೊಂದು ವ್ಯಾಪಾರಿಗಳು ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಇತಿಮಿತಿ ತೆಗೆದುಹಾಕಿರುವುದಾಗಿದೆ.

ಇತಿಮಿತಿ ಇಲ್ಲದೇ ಅತ್ಯಂತ ಹೆಚ್ಚು ಆಹಾರ ಧಾನ್ಯವನ್ನು ಗೋದಾಮಿನಲ್ಲಿಟ್ಟುಕೊಳ್ಳುವುದನ್ನು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿರುವುದು ವಿಪರ್ಯಾಸ. ಸುಮಾರು 50 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಸರ್ಕಾರ ತಾನೇ ನಿಗದಿ ಮಾಡಿಕೊಂಡಿರುವ ನಿಯಮಾವಳಿಗಿಂತ ಹೆಚ್ಚು ಶೇಖರಿಸಿ, ಇಲಿ ಹೆಗ್ಗಣಗಳಿಗೆ ಉಣಬಡಿಸಿ ಸುಮಾರು ಒಂದು ಲಕ್ಷ ಕೋಟಿ ಹಣ ಪೋಲು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿದೆ. ಅಲ್ಲದೇ ಈ ಆಹಾರ ಧಾನ್ಯವನ್ನು ಏನು ಮಾಡಲೆಂದು ತೋಚದೇ ಸ್ಯಾನಿಟೈಸರ್ ಮಾಡೋಣ, ಸಾರಾಯಿ ಮಾಡಿ ಪೆಟ್ರೋಲಿಗೆ ಸೇರಿಸೋಣ ಎಂದೆಲ್ಲಾ ಆಲೋಚಿಸುತ್ತಿದೆ. ತಾವು ಮಾಡಿದ ತಪ್ಪನ್ನೇ ಖಾಸಗಿಯವರಿಗೂ ಅವಕಾಶ ಕೊಟ್ಟಾಗ ಸಮಾನತೆ ಉಂಟಾಗಬಹುದೆನ್ನುವ ಆಲೋಚನೆ ಇರಬಹುದು.

ಈ ಎರಡು ಕಾನೂನುಗಳ ನಡುವೆ ಸರ್ಕಾರ 23 ಬೆಳೆಗೆ ನಿಗದಿಪಡಿಸುವ ಕನಿಷ್ಟ ಬೆಲೆ ದಕ್ಕದಂತಾಗಬಹುದು ಎನ್ನುವುದು ರೈತಾಪಿ ವರ್ಗದ ಆತಂಕ.

ಹೌದು, ದೇಶದ ಸುಮಾರು 700 ಮಿಲಿಯನ್ ಟನ್ ಒಟ್ಟು ಆಹಾರ ಉತ್ಪಾದನೆಯಲ್ಲಿ ಶೇ. 10ಕ್ಕಿಂತ ಕಮ್ಮಿ ದವಸ ಧಾನ್ಯಗಳನ್ನು ಅದರಲ್ಲೂ ಅಕ್ಕಿ ಮತ್ತು ಗೋಧಿಯನ್ನು, ಪಂಜಾಬ್ ಮತ್ತು ಹರಿಯಾಣಗಳಿಂದ ತಾನು ಘೋಷಿಸಿದ ಕನಿಷ್ಟ ಬೆಲೆಯನ್ನು ಕೊಟ್ಟು ಸರ್ಕಾರ ಕೊಂಡುಕೊಳ್ಳುತ್ತದೆ.

ಉಳಿದ ಶೇ. 90ರಷ್ಟು ಆಹಾರ ಬೆಳೆಗೆ ಘೋಷಿಸಿದ ಬೆಲೆ ಸಿಗುತ್ತಿಲ್ಲ. ಶೇ. 80ರಷ್ಟು ರೈತರಿಗೆ ಈ ಘೋಷಣೆ ಮಾಡಿದ 23 ಬೆಳೆಗಳಿಗೆ ಕನಿಷ್ಟ ಬೆಲೆ ಎಂಬುವುದೊಂದಿದೆ ಎನ್ನುವುದೇ ಗೊತ್ತಿಲ್ಲ.

ಸರ್ಕಾರದ ನಿಯಮಾವಳಿಗಳ ಪ್ರಕಾರ 80 ಚದರ ಕಿ.ಮೀ.ಗೊಂದು ಎಪಿಎಂಸಿ ಇರಬೇಕಾಗಿತ್ತು. ಆದರೆ 500 ಚದರ ಕಿ.ಮೀಗೊಂದು ಎಪಿಎಂಸಿ ಯಾರ್ಡ್ ಇರುವುದ ಈಗಿನ ವಾಸ್ತವ. ನಿಜವಾಗಿಯೂ ಮೊದಲು ಸರ್ಕಾರ ಮಾಡಬೇಕಾಗಿದ್ದುದು ರೈತ ನೂರಾರು ಕಿ.ಮೀವರೆಗೆ ತನ್ನ ಬೆಳೆಯನ್ನು ಸಾಗಿಸಿ ಮಾರಾಟ ಮಾಡುವ ದುರ್ವ್ಯವಸ್ಥೆಯನ್ನು ಮೊಟಕುಗೊಳಿಸಲು ತಾನೇ ಹಾಕಿದ ನಿಯಮಾವಳಿಯಂತೆ 5 ಕಿ.ಮೀ ಒಳಗೆ ಎಪಿಎಂಸಿ ಇದ್ದಲ್ಲಿ ಮತ್ತು ಕನಿಷ್ಟ ಬೆಲೆ ಪಾಲನೆಯಾದಲ್ಲಿ ರೈತರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ಇದನ್ನು ಬಿಟ್ಟು ಇನ್ನೂ ಕಟ್ಟಬೇಕಾಗಿದ್ದ ವ್ಯವಸ್ಥೆಯನ್ನೇ ಅರ್ಧಕ್ಕೇ ಕೆಡವಿದರೆ ಹೇಗೆ?

ಅಲ್ಲದೇ, ಅದಾನಿ ಆಹಾರ ದಾಸ್ತಾನು ಮಾಡಿರುವ ಸೈಲೋಸ್‌ಗಳನ್ನೇ ವ್ಯಾಪಾರೀ ಸ್ಥಳವೆಂದು ಪರಿಗಣಿಸಿ ಖಾಸಗಿ ಮಂಡಿಗಳಿಗೆ ತೆರಿಗೆ ಇಲ್ಲ, ಆದರೆ ಸರ್ಕಾರಿ ಮಂಡಿಗಳಿಗೆ ತೆರಿಗೆಯುಂಟು ಎಂದು ನಿಯಮ ತಂದರೆ ತೆರಿಗೆ ಹಾಕುವ ಮಂಡಿಗಳಿಗೆ ಬರುವವರು ಉಂಟೇ? ಸರ್ಕಾರ ಘೋಷಿಸಿದ ಕನಿಷ್ಟ ಬೆಲೆಗೆ ಕೂಡಾ ಡಾ. ಎಂ. ಎಸ್. ಸ್ವಾಮಿನಾಥನ್ ಅವರು ಹೇಳಿದ ಸಿ2+50% ಆಧಾರವಾಗಿಸದೆ ಎ2+ಎಫ್‌ಎಲ್ ಎನ್ನುವ ಬೇರೆಯದ್ದೇ ಸೂತ್ರ ಬಳಸಿರುವುದು ರೈತರಿಗೆ ಮಾಡಿರುವ ಅನ್ಯಾಯವೇ. ಸ್ವಾಮಿನಾಥನ್ ಹೇಳಿದ್ದ ಸೂತ್ರಕ್ಕೂ ಇಂದು ಅಳವಡಿಸಿದ್ದ ಸೂತ್ರಕ್ಕೂ ಶೇ. 25ರಷ್ಟು ವ್ಯತ್ಯಾಸವಿದೆ.

ಇಕ್ರಿಯಾರ್ ಸಂಸ್ಥೆಯ ಅಧ್ಯಯನದಂತೆ ಭಾರತದ ರೈತರೂ ಪ್ರತಿವರ್ಷ 3 ಲಕ್ಷ ಕೋಟಿ ತಮ್ಮ ಬೆವರಿಗೆ ದಕ್ಕಬೇಕಾದ ಹಣವನ್ನು ದಕ್ಕಿಸಿಕೊಳ್ಳುತ್ತಿಲ್ಲ ಎನ್ನುತ್ತದೆ. ಅಲ್ಲದೇ ನ್ಯಾಷನಲ್ ಸ್ಯಾಂಪಲ್ ಸರ್ವೆ ಪ್ರಕಾರ ತಿಂಗಳ ರೈತರ ಆದಾಯ ಸುಮಾರು 6000 ರುಪಾಯಿ ಎನ್ನುವುದು ಸರ್ಕಾರಿ ಗುಮಾಸ್ತನ ಸಂಬಳಕ್ಕಿಂತ ನಾಲಕ್ನೇ ಒಂದಕ್ಕಿಂತ ಕಮ್ಮಿ ಇರುವುದು ಕಂಡುಬರುತ್ತದೆ.

ಹೊರನೋಟಕ್ಕೆ ಈ ಕಾನೂನುಗಳು ರೈತಪರ ಎಂದು ಕಂಡುಬಂದರೂ ದೇಶದ ಒಟ್ಟು 1.2 ಹೆಕ್ಟೇರ್ ತಲಾವಾರು ಭೂಮಿ ಒಡೆತನದ 14 ಕೋಟಿ ರೈತಕುಟುಂಬ ಹಾಗೆಯೇ 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು 6.3 ಕೋಟಿ ಗುಡಿಕೈಗಾರಿಕೆ ಅಲ್ಲದೇ ಸುಮಾರು 12 ಕೋಟಿ ಕೃಷಿ ಅವಲಂಭಿತ ಕೂಲಿ ಕಾರ್ಮಿಕರನ್ನು ಒಂದೋ ಎರಡೋ ದೈತ್ಯ ಕಂಪನಿಗೆ ಮಾರಿಬಿಡುವಂತೆ ಕಂಡುಬರುತ್ತದೆ. ಫ್ರಾನ್ಸ್ ಅನಟೋಲಿ ಒಂದು ಕಡೆ ಸರ್ಕಾರದ ಕಾನೂನನ್ನು ವ್ಯಂಗ್ಯವಾಗಿ ಹೀಗೆ ಉಲ್ಲೇಖಿಸುತ್ತಾನೆ: ’ಸರ್ಕಾರ ಕಾನೂನೊಂದನ್ನು ಮಾಡಿ, ಬಡವನಿರಬಹುದು ಬಲ್ಲಿದನಿರಬಹುದು, ಬೀದಿ ಬದಿಯಲ್ಲಿ ಯಾರೂ ಮಲಗಬಾರದು, ಭಿಕ್ಷೆ ಯಾರೂ ಬೇಡಬಾರದು ಎಂದರೆ ಅದು ನಿಷ್ಪಕ್ಷಪಾತವಾದ ಭೇದ-ಭಾವವಿಲ್ಲದ ಕಾನೂನೆಂದು ಹೊರನೋಟಕ್ಕೆ ಕಂಡುಬಂದರೂ ನಿಜವಾಗಿಯೂ ಅದರ ಪರಿಣಾಮ ನಿರ್ಗತಿಕರ ಮೇಲೆ ಬೀಳುವಂತದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ’.


  • ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು. ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ರೈತರ ಹಕ್ಕೊತ್ತಾಯ ಬಗೆಹರಿಸುವ ಸ್ವತಂತ್ರ ಸಮಿತಿಯಲ್ಲಿ ಪಿ.ಸಾಯಿನಾಥ್, ಬಿಕೆಯು ಪ್ರತಿನಿಧಿಗಳು ಇರಲಿ: ಸುಪ್ರೀಂ ಕೋರ್ಟ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...