Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

ಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

- Advertisement -
- Advertisement -

ಒಲಿಂಪಿಕ್ ಶುರು ಆಗಲಿಕ್ಕೆ ಬಂದವು. ಅದಕ್ಕ ಸಂಬಂಧಪಟ್ಟ ಒಂದು ಕತಿ ಕೇಳೋಣ. ಒಂದಾನೊಂದು ಕಾಲದಾಗ, ಏಟೊಂದು ಮುದ ಇದ್ದ ಕಾಲದಾಗ ಗ್ರೀಕ್ ದೇಶದೊಳಗ ಒಬ್ಬವ ರಾಜಾ ಇದ್ದ. ಅವನ ಹೆಸರು ಪೊಸಯಿಡೋನ. ಆತ ಸಮುದ್ರ, ಭೂಕಂಪನ ಹಾಗೂ ಕುದುರೆಗಳ ದೇವರು. ಅವನ ಕೈಯಾಗ ಒಂದು ತ್ರಿಶೂಲ ಇತ್ತು. ತನ್ನ ತ್ರಿಶೂಲದಿಂದ ಭೂಮಿಮ್ಯಾಲೆ ಗೆರೆ ಹೊಡದು ನೀರಿನ ಝರಿಗಳನ್ನು ಆತ ಸೃಷ್ಟಿ ಮಾಡುತ್ತಿದ್ದ. ಇಡೀ ವಿಶ್ವವನ್ನೇ ಅಲುಗಾಡಿಸಬಲ್ಲ ಶಕ್ತಿ ಉಳ್ಳವನು ಅಂತ ಅವನಿಗೆ ‘ಭೂಕಂಪನಾಧೀಶ’ ಅಂತ ಹೆಸರು ಇತ್ತು. ಆತ ಹುಚ್ಚು ಕುದುರೆಗಳನ್ನು ಹತೋಟಿಗೆ ತರುವ ಕುಶಲತೆ ಇದ್ದವನು ಅನ್ನುವುದು ಅವನ ಹೆಗ್ಗಳಿಕೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಒಲಿಂಪಿಕ್ ಆಟಗಾರ.

ಅಣ್ಣಾ ತಮ್ಮಂದಿರ ನಡುವೆ ಆಸ್ತಿ ಬಟವಾಡೆ ಆದ ನಂತರ ತನ್ನ ಪಾಲಿಗೆ ಬಂದ ಸಮುದ್ರವನ್ನ ಇಟಗೊಂಡು ತಮ್ಮ ಪೊಸಯಿಡೋನ ತಣ್ಣಗೆ ಕೂತವನು. ದೇವ ಸಹಜ ಆಸೆ-ಆಕಾಂಕ್ಷೆಗಳಿಂದ ಬಳಲಿದವನು. ಒಂದುನೂರಕ್ಕಿಂತ ಹೆಚ್ಚು ಪತ್ನಿ-ಉಪ ಪತ್ನಿಯರ ಕಟ್ಟಿಕೊಂಡು ಸುಮಾರು ಮೂರುನೂರು ಜನ ಮಕ್ಕಳಿಗೆ ಜನ್ಮ ಕೊಟ್ಟವನು.

ಅವನ ಹೆಂಡತಿ ಮೆಡುಸ್ಸಾ. ಅಕಿನ್ನ ಯಾರಾದರೂ ಕಣ್ಣಿನೊಳಗ ಕಣ್ಣು ಇಟ್ಟು ನೋಡಿದರ ಅವರು ಕಲ್ಲಾಗಿಬಿಡತಿದ್ದರು. ಅಕಿ ತಲಿಮ್ಯಾಲೆ ಕೂದಲು ಇರಲಿಲ್ಲ. ಅದರ ಬದಲಿಗೆ ಸಣ್ಣ ಸಣ್ಣ ಹಾವು ಇದ್ದವು. ಆ ಹಾವುಗಳನ್ನ ಅಕಿ ತನ್ನ ಸೇವಕರ ತರಹ ಉಪಯೋಗ ಮಾಡತಿದ್ದಳು. ಅಕಿಗೆ ಅಣಿಮಾ-ಗರಿಮಾ ಶಕ್ತಿಗಳು ಸಿದ್ಧಿಸಿಬಿಟ್ಟಿದ್ದವು. ತಾನು ಬಯಸಿದಲ್ಲಿ ಪ್ರವಾಸ ಮಾಡುವ ಶಕ್ತಿ ಇತ್ತು.

ಕೊನೆಗೆ ಅವಳ ಸಂಹಾರ ಮಾಡಿದವ ಯಾರು ಅಂದರ ಗ್ರೀಕ್ ದೇವತೆ ಪರ್ಸಿಯಸ್. ಆತ ತನ್ನ ಕಣ್ಣು ಕಟ್ಟಿಕೊಂಡು ಅವಳ ರುಂಡ ಕತ್ತರಿಸಿಬಿಟ್ಟ. ಆ ರುಂಡವನ್ನು ತನ್ನ ಈಟಿಗೆ ಚುಚ್ಚಿಕೊಂಡು ತಿರುಗಾಡುತ್ತಿದ್ದ. ಮೆಡುಸ್ಸಾ ಸತ್ತ ಮೇಲೆ ಸಹಿತ ಅವಳ ಶಾಪ ಕೊಡುವ ಶಕ್ತಿ ಹೋಗಲಿಲ್ಲ. ಇದನ್ನು ಅರಿತ ಪರ್ಸಿಯಸ್ ಅವಳ ತಲೆಯನ್ನ ಒಂದು ಆಯುಧದ ರೀತಿ ಬಳಸಿ ತನ್ನ ವೈರಿಗಳನ್ನು ಕೊಂದ.

ಇಷ್ಟೆಲ್ಲಾ ಆತಲ್ಲಾ, ಈಗ ನೋಡ್ರಿ. ಇಲ್ಲೇ ಐತಿ ಮಜಾ. ಮೆಡುಸ್ಸಾನ ಹತ್ಯೆ ಮಾಡುವಾಗ ಪರ್ಸಿಯಸ್ ಒಂದು ಚಮತ್ಕಾರಿ ವಾಹನ ಬಳಸಿದ್ದ. ಅದು ಯಾವುದು ಅಂದರ ಆಕಾಶದಲ್ಲಿ ಹಾರಾಡಬಲ್ಲ ಬಿಳಿಯ ಕುದುರೆ. ತನ್ನ ಎರಡೂ ಕಡೆಗಳಲ್ಲಿ ಇದ್ದ ರೆಕ್ಕೆಗಳನ್ನು ಬಳಸಿ ಅದು ಹಾರಬಹುದಿತ್ತು. ಮೂರುಲೋಕ ಸಂಚಾರ ಮಾಡಬಹುದಿತ್ತು.

ಆ ಶ್ವೇತಾಶ್ವದ ಹೆಸರು ಪೆಗಸಸ್. ಈ ದೈವಿ ಕುದುರೆಯ ತಾಯಿ ತಂದೆಗಳು ಯಾರು ಅಂದರ ಮೆಡುಸ್ಸಾ ಮತ್ತು ಪೊಸಯಿಡೋನ. ತನ್ನ ತಾಯಿಯ ಕೊಲೆಗಾರ ತನ್ನನ್ನು ವಾಹನವನ್ನಾಗಿ ಬಳಸಲಿಕ್ಕೆ ಹತ್ತಿಬಿಟ್ಟಾನು ಅಂತ ಅದಕ್ಕ ಗೊತ್ತಿತ್ತೋ ಇಲ್ಲೋ, ಒಟ್ಟಿನಲ್ಲಿ ತನ್ನ ಹೆತ್ತ ತಾಯಿಯ ಕೊಲೆಗೆ ಅದು ಭಾಗಿ ಆತು. ಹಿಂಗ ಮಾತೃ ಹತ್ಯೆ ಪಾಪದ ಲೇಪ ಅಂಟಿದ ಈ ಕುದುರೆ ಒಂದು ದಿನ ತನ್ನ ಮೇಲೆ ಏರಿದ ಸವಾರನನ್ನು ಕೆಳಗೆ ಕೆಡವಿ ಕೊಂದುಬಿಟ್ಟಿತು.

ಈ ಪೆಗಸಸ್ ಬುದ್ಧಿವಂತರ ದೇಶ ಅಂತ ಹೆಸರು ಪಡೆದ ಇಸ್ರೇಲ್‌ನ ಅತಿ ಬುದ್ಧಿವಂತರು ಸೃಷ್ಟಿಸಿದ ತಂತ್ರಾಂಶ. ಇದನ್ನು ಎನ್‌ಎಸ್‌ಒ ಅನ್ನೋ ಕಂಪನಿಯವರು ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡತಾರೆ. ಅದನ್ನು ಭಯೋತ್ಪಾದಕರು, ರಾಷ್ಟ್ರ ವಿರೋಧಿ ಶಕ್ತಿಗಳು ಮುಂತಾದವರ ವಿರುದ್ಧ ಗೂಢಚಾರಿಕೆ ಮಾಡಲಿಕ್ಕೆ ಉಪಯೋಗ ಮಾಡತಾರ.

ಭಾರತದ ಘನ ಸರಕಾರ ತೆರಿಗೆದಾರರು ಬೆವರು-ರಕ್ತ ಸುರಿಸಿ ಕಟ್ಟಿದ ಸುಂಕದ ಹಣವನ್ನು ತೊಗೊಂಡು ಈ ಬಿಳಿ ಕುದುರೆಯ ಬಲಕ್ಕೆ ಕಟ್ಟಿಬಿಟ್ಟೆದ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಇರೋ ದೇಶ ಸರ್ವಾಧಿಕಾರಿ ದೇಶಗಳು ಮತ್ತು ಅರೆ ಪ್ರಜಾಪ್ರಭುತ್ವವಾದಿ ದೇಶಗಳ ಸಾಲಿನಲ್ಲಿ ಸೇರಿಕೊಂಡುಬಿಟ್ಟದ.

ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ, ಮುಂತಾದ ದೇಶಗಳ ಜೊತೆಗೆ ಸ್ಪರ್ಧೆಗೆ ಬಿದ್ದಂಗ ಮಾಡಿ ಎರಡು ವರ್ಷದಲ್ಲಿ ಕನಿಷ್ಟ 600 ಕೋಟಿ ರೂಪಾಯಿ ಲಪಟಾಯಿಸಿಬಿಟ್ಟದ. ಸುಮಾರು ಮೂರು ನೂರು ಜನರ ಮ್ಯಾಲೆ ಎರಡು ವರ್ಷಗಟ್ಟಲೆ ಗೂಢಚಾರಿಕೆ ಮಾಡಿ ಅವರ ಖಾಸಗಿ ಮಾಹಿತಿ ಎಲ್ಲ ಸಂಗ್ರಹ ಮಾಡೆದ.

ಬರೆ ಇಷ್ಟ ಇದ್ದರ ಇದು ಸುದ್ದಿ ಆಗ್ತಾ ಇರಲಿಲ್ಲ. ಈ ಬಿಳಿ ರೆಕ್ಕೆಯ ಕುದುರೆಯಿಂದ ಯಾರದಾದರೂ ಫೋನುಗಳನ್ನು ಅದರ ಮಾಲೀಕರಿಗೆ ಗೊತ್ತಿಲ್ಲದೆ ಚಾಲೂ-ಬಂದ್ ಮಾಡಬಹುದು. ಅವರ ಫೋನು ಕ್ಯಾಮರಾದಿಂದ ಫೋಟೋ ತೆಗಿಬಹುದು, ವಿಡಿಯೋ ತೆಗಿಬಹುದು. ಅವರ ಮೆಸೇಜು, ವಾಟ್ಸಪ್ಪು, ಈಮೇಲೂ, ಇತ್ಯಾದಿಗಳ ಕಾಪಿ ಮಾಡಬಹುದು. ಅವರ ಬ್ಯಾಂಕ್ ವಹಿವಾಟಿನ ಮಾಹಿತಿ ಪಡೆಯಬಹುದು. ಅವರ ಆರೋಗ್ಯದ ಎಲ್ಲ ಮಾಹಿತಿ-ಉದಾಹರಣೆಗೆ ಅವರಿಗೆ ಇರುವ ಕಾಯಿಲೆ, ಅವರು ಆಪರೇಷನ್ ಮಾಡಿಸಿಕೊಂಡ ಮಾಹಿತಿ, ತೊಗೊಳ್ಳುವ ಔಷಧಿ, ಅವರ ವೈದ್ಯರ ನಂಬರ್ ಎಲ್ಲ ಸಂಗ್ರಹ ಮಾಡಬಹುದು.

ಇನ್ನೊಂದು ಖತರನಾಕ ವಿಚಾರ ಏನು ಅಂದರ ಎಲ್ಲೋ ದೂರ ಇಸ್ರೇಲ್-ಅಮೆರಿಕ ದೆಹಲಿಯೊಳಗ ಕುಳಿತುಕೊಂಡ ಇಂಜಿನಿಯರ್‌ಗಳು ಅಥವಾ ಪೊಲೀಸರು ನಿಮ್ಮ ಫೋನಿನ ಒಳಗ ನಿಮ್ಮನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವಂತಹ ಮಾಹಿತಿ ಕಳಿಸಬಹುದು. ಅದು ನಿಮಗೆ ಗೊತ್ತಿರಲಾರದೆ ನಿಮ್ಮ ಫೋನಿನ ಒಳಗೆ ಬಂದು ಕೂತುಬಿಡುತ್ತದೆ. ನೀವು ಫೋನು ಬದಲು ಮಾಡಿದರೂ ಹೋಗೋದಿಲ್ಲ.

ನೀವು ನಿಮ್ಮ ಸ್ನೇಹಿತರಿಗೆ “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಮಂಡಕ್ಕಿ ಮಿರ್ಚಿ ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಹಾಲು, ಎರಡು ನೂರು ಗ್ರಾಂ ಚಹಾಪುಡಿ ತೊಗೊಂಡು ಬರ್ರಿ” ಅಂತ ಸಂದೇಶ ಕಳಿಸಿದರಿ ಅಂತ ತಿಳಕೋರಿ. ನಿಮ್ಮ ವಿರೋಧಿಗಳು “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಟೈಮ್ ಬಾಂಬ್ ತಯಾರು ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಸೋಡಿಯಂ ನೈಟ್ರೇಟ್ ದ್ರಾವಣ, ಎರಡು ನೂರು ಗ್ರಾ ಆರ್‌ಡಿ ಎಕ್ಸ್ ತೊಗೊಂಡು ಬರ್ರಿ” ಅಂತ ಬದಲು ಮಾಡಬಹುದು.

ಅದರ ಆಧಾರದ ಮೇಲೆ ನಿಮ್ಮನ್ನ ದೇಶದ್ರೋಹದ ಕಾನೂನು ಅಡಿಯಲ್ಲಿ ಒದ್ದು ಒಳಗಹಾಕಬಹುದು.

ಹಿಂದಿ ಪಿಕ್ಚರ್‌ದಾಗ ಪೊಲೀಸ್ ಇನ್ಸ್ಪೆಕ್ಟರ್ ಅಮರೀಷ ಪುರಿ ’ಅಬೇ ಸಾಲೇ, ನಿನ್ನ ಮನಿಯೊಳಗ ಗಾಂಜಾ ಪೊಟ್ಟಣ ಇಟ್ಟು ಬಿಡತೆನಿ. ನಿನ್ನನ್ನ ಜೈಲಿಗೆ ಹಾಕತೆನಿ’ ಅಂತ ಧಮಕಿ ಕೊಡತನಲ್ಲ, ಅದಕ್ಕೂ ಇದಕ್ಕೂ ಏನು ವ್ಯತ್ಯಾಸ ಇಲ್ಲ. ಹಿಂಗ ಆಗಬಹುದು ಅಂತ ಅಲ್ಲ. ಆಗಿ ಹೊಗೇದ.

“ಇದೇನು ಹೊಸದಲ್ಲ. ಹಿಂದಿನ ಎಲ್ಲ ಸರಕಾರಗಳು ಗೂಢಚಾರಿಕೆ ಮಾಡಿದವರೇ” ಅಂತ ಹೇಳಿ ನಮ್ಮ ಡೋಂಟ್ ಕೇರ್ ಕುಮಾರಣ್ಣ ಅವರು ಹೇಳಿಕೆ ಕೊಟ್ಟಾರ. ಹಿಂದಿನವರು ಗೂಢಚಾರಿಕೆ ಮಾಡಿರಬಹುದು. ಅದರ ಅಮರೀಷ ಪುರಿ ತಂತ್ರ ಉಪಯೋಗಿಸಿ ನಿಮ್ಮ ಫೋನ್‌ದಾಗ ಬಾಂಬ್ ತಯಾರಿಸುವ ಸಂದೇಶ ಕಳಿಸಿಲ್ಲ. ಹಂಗ ಮಾಡಲಿಕ್ಕೆ ಆವಾಗ ತಂತ್ರಜ್ಞಾನನೂ ಇರಲಿಲ್ಲ, ಅಂತ ತಿಳಿರಿ.

ಈಗ ಸದ್ಯ ಟಿವಿ ಎರಡು ದೊಡ್ಡ ಸುದ್ದಿ ತೋರಸಲಿಕ್ಕೆ ಹತ್ತಿದಾವು. ಒಂದು ಈ ಗ್ರೀಕ್ ಪುರಾಣದ ಕತಿ. ಇನ್ನೊಂದು ನಮ್ಮ ಕುಡ್ಲದ ಹುಡುಗಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಪುರಾಣದ ಕತಿ. ಸುಮ್ಮನೇ ಕುಂದರಲಾರದೆ ಕುಂದ್ರಾ ಅವರು ತಯಾರಿಸಿದರು ಎನ್ನಲಾದ ಅಶ್ಲೀಲ ಚಿತ್ರದ ಬಿಸಿ ಬಿಸಿ ಸುದ್ದಿ. ನೀವು ಯಾವುದನ್ನು ನೋಡತಿರಿ ಅನ್ನೋದರ ಮ್ಯಾಲೆ ನಿಮ್ಮ ಮತ್ತು ಈ ದೇಶದ ಭವಿಷ್ಯ ನಿರ್ಭರ ಆಗತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಮುಂದೆ ಪೆಗಾಸಸ್ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...