Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

ಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

- Advertisement -
- Advertisement -

ಒಲಿಂಪಿಕ್ ಶುರು ಆಗಲಿಕ್ಕೆ ಬಂದವು. ಅದಕ್ಕ ಸಂಬಂಧಪಟ್ಟ ಒಂದು ಕತಿ ಕೇಳೋಣ. ಒಂದಾನೊಂದು ಕಾಲದಾಗ, ಏಟೊಂದು ಮುದ ಇದ್ದ ಕಾಲದಾಗ ಗ್ರೀಕ್ ದೇಶದೊಳಗ ಒಬ್ಬವ ರಾಜಾ ಇದ್ದ. ಅವನ ಹೆಸರು ಪೊಸಯಿಡೋನ. ಆತ ಸಮುದ್ರ, ಭೂಕಂಪನ ಹಾಗೂ ಕುದುರೆಗಳ ದೇವರು. ಅವನ ಕೈಯಾಗ ಒಂದು ತ್ರಿಶೂಲ ಇತ್ತು. ತನ್ನ ತ್ರಿಶೂಲದಿಂದ ಭೂಮಿಮ್ಯಾಲೆ ಗೆರೆ ಹೊಡದು ನೀರಿನ ಝರಿಗಳನ್ನು ಆತ ಸೃಷ್ಟಿ ಮಾಡುತ್ತಿದ್ದ. ಇಡೀ ವಿಶ್ವವನ್ನೇ ಅಲುಗಾಡಿಸಬಲ್ಲ ಶಕ್ತಿ ಉಳ್ಳವನು ಅಂತ ಅವನಿಗೆ ‘ಭೂಕಂಪನಾಧೀಶ’ ಅಂತ ಹೆಸರು ಇತ್ತು. ಆತ ಹುಚ್ಚು ಕುದುರೆಗಳನ್ನು ಹತೋಟಿಗೆ ತರುವ ಕುಶಲತೆ ಇದ್ದವನು ಅನ್ನುವುದು ಅವನ ಹೆಗ್ಗಳಿಕೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಒಲಿಂಪಿಕ್ ಆಟಗಾರ.

ಅಣ್ಣಾ ತಮ್ಮಂದಿರ ನಡುವೆ ಆಸ್ತಿ ಬಟವಾಡೆ ಆದ ನಂತರ ತನ್ನ ಪಾಲಿಗೆ ಬಂದ ಸಮುದ್ರವನ್ನ ಇಟಗೊಂಡು ತಮ್ಮ ಪೊಸಯಿಡೋನ ತಣ್ಣಗೆ ಕೂತವನು. ದೇವ ಸಹಜ ಆಸೆ-ಆಕಾಂಕ್ಷೆಗಳಿಂದ ಬಳಲಿದವನು. ಒಂದುನೂರಕ್ಕಿಂತ ಹೆಚ್ಚು ಪತ್ನಿ-ಉಪ ಪತ್ನಿಯರ ಕಟ್ಟಿಕೊಂಡು ಸುಮಾರು ಮೂರುನೂರು ಜನ ಮಕ್ಕಳಿಗೆ ಜನ್ಮ ಕೊಟ್ಟವನು.

ಅವನ ಹೆಂಡತಿ ಮೆಡುಸ್ಸಾ. ಅಕಿನ್ನ ಯಾರಾದರೂ ಕಣ್ಣಿನೊಳಗ ಕಣ್ಣು ಇಟ್ಟು ನೋಡಿದರ ಅವರು ಕಲ್ಲಾಗಿಬಿಡತಿದ್ದರು. ಅಕಿ ತಲಿಮ್ಯಾಲೆ ಕೂದಲು ಇರಲಿಲ್ಲ. ಅದರ ಬದಲಿಗೆ ಸಣ್ಣ ಸಣ್ಣ ಹಾವು ಇದ್ದವು. ಆ ಹಾವುಗಳನ್ನ ಅಕಿ ತನ್ನ ಸೇವಕರ ತರಹ ಉಪಯೋಗ ಮಾಡತಿದ್ದಳು. ಅಕಿಗೆ ಅಣಿಮಾ-ಗರಿಮಾ ಶಕ್ತಿಗಳು ಸಿದ್ಧಿಸಿಬಿಟ್ಟಿದ್ದವು. ತಾನು ಬಯಸಿದಲ್ಲಿ ಪ್ರವಾಸ ಮಾಡುವ ಶಕ್ತಿ ಇತ್ತು.

ಕೊನೆಗೆ ಅವಳ ಸಂಹಾರ ಮಾಡಿದವ ಯಾರು ಅಂದರ ಗ್ರೀಕ್ ದೇವತೆ ಪರ್ಸಿಯಸ್. ಆತ ತನ್ನ ಕಣ್ಣು ಕಟ್ಟಿಕೊಂಡು ಅವಳ ರುಂಡ ಕತ್ತರಿಸಿಬಿಟ್ಟ. ಆ ರುಂಡವನ್ನು ತನ್ನ ಈಟಿಗೆ ಚುಚ್ಚಿಕೊಂಡು ತಿರುಗಾಡುತ್ತಿದ್ದ. ಮೆಡುಸ್ಸಾ ಸತ್ತ ಮೇಲೆ ಸಹಿತ ಅವಳ ಶಾಪ ಕೊಡುವ ಶಕ್ತಿ ಹೋಗಲಿಲ್ಲ. ಇದನ್ನು ಅರಿತ ಪರ್ಸಿಯಸ್ ಅವಳ ತಲೆಯನ್ನ ಒಂದು ಆಯುಧದ ರೀತಿ ಬಳಸಿ ತನ್ನ ವೈರಿಗಳನ್ನು ಕೊಂದ.

ಇಷ್ಟೆಲ್ಲಾ ಆತಲ್ಲಾ, ಈಗ ನೋಡ್ರಿ. ಇಲ್ಲೇ ಐತಿ ಮಜಾ. ಮೆಡುಸ್ಸಾನ ಹತ್ಯೆ ಮಾಡುವಾಗ ಪರ್ಸಿಯಸ್ ಒಂದು ಚಮತ್ಕಾರಿ ವಾಹನ ಬಳಸಿದ್ದ. ಅದು ಯಾವುದು ಅಂದರ ಆಕಾಶದಲ್ಲಿ ಹಾರಾಡಬಲ್ಲ ಬಿಳಿಯ ಕುದುರೆ. ತನ್ನ ಎರಡೂ ಕಡೆಗಳಲ್ಲಿ ಇದ್ದ ರೆಕ್ಕೆಗಳನ್ನು ಬಳಸಿ ಅದು ಹಾರಬಹುದಿತ್ತು. ಮೂರುಲೋಕ ಸಂಚಾರ ಮಾಡಬಹುದಿತ್ತು.

ಆ ಶ್ವೇತಾಶ್ವದ ಹೆಸರು ಪೆಗಸಸ್. ಈ ದೈವಿ ಕುದುರೆಯ ತಾಯಿ ತಂದೆಗಳು ಯಾರು ಅಂದರ ಮೆಡುಸ್ಸಾ ಮತ್ತು ಪೊಸಯಿಡೋನ. ತನ್ನ ತಾಯಿಯ ಕೊಲೆಗಾರ ತನ್ನನ್ನು ವಾಹನವನ್ನಾಗಿ ಬಳಸಲಿಕ್ಕೆ ಹತ್ತಿಬಿಟ್ಟಾನು ಅಂತ ಅದಕ್ಕ ಗೊತ್ತಿತ್ತೋ ಇಲ್ಲೋ, ಒಟ್ಟಿನಲ್ಲಿ ತನ್ನ ಹೆತ್ತ ತಾಯಿಯ ಕೊಲೆಗೆ ಅದು ಭಾಗಿ ಆತು. ಹಿಂಗ ಮಾತೃ ಹತ್ಯೆ ಪಾಪದ ಲೇಪ ಅಂಟಿದ ಈ ಕುದುರೆ ಒಂದು ದಿನ ತನ್ನ ಮೇಲೆ ಏರಿದ ಸವಾರನನ್ನು ಕೆಳಗೆ ಕೆಡವಿ ಕೊಂದುಬಿಟ್ಟಿತು.

ಈ ಪೆಗಸಸ್ ಬುದ್ಧಿವಂತರ ದೇಶ ಅಂತ ಹೆಸರು ಪಡೆದ ಇಸ್ರೇಲ್‌ನ ಅತಿ ಬುದ್ಧಿವಂತರು ಸೃಷ್ಟಿಸಿದ ತಂತ್ರಾಂಶ. ಇದನ್ನು ಎನ್‌ಎಸ್‌ಒ ಅನ್ನೋ ಕಂಪನಿಯವರು ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡತಾರೆ. ಅದನ್ನು ಭಯೋತ್ಪಾದಕರು, ರಾಷ್ಟ್ರ ವಿರೋಧಿ ಶಕ್ತಿಗಳು ಮುಂತಾದವರ ವಿರುದ್ಧ ಗೂಢಚಾರಿಕೆ ಮಾಡಲಿಕ್ಕೆ ಉಪಯೋಗ ಮಾಡತಾರ.

ಭಾರತದ ಘನ ಸರಕಾರ ತೆರಿಗೆದಾರರು ಬೆವರು-ರಕ್ತ ಸುರಿಸಿ ಕಟ್ಟಿದ ಸುಂಕದ ಹಣವನ್ನು ತೊಗೊಂಡು ಈ ಬಿಳಿ ಕುದುರೆಯ ಬಲಕ್ಕೆ ಕಟ್ಟಿಬಿಟ್ಟೆದ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಇರೋ ದೇಶ ಸರ್ವಾಧಿಕಾರಿ ದೇಶಗಳು ಮತ್ತು ಅರೆ ಪ್ರಜಾಪ್ರಭುತ್ವವಾದಿ ದೇಶಗಳ ಸಾಲಿನಲ್ಲಿ ಸೇರಿಕೊಂಡುಬಿಟ್ಟದ.

ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ, ಮುಂತಾದ ದೇಶಗಳ ಜೊತೆಗೆ ಸ್ಪರ್ಧೆಗೆ ಬಿದ್ದಂಗ ಮಾಡಿ ಎರಡು ವರ್ಷದಲ್ಲಿ ಕನಿಷ್ಟ 600 ಕೋಟಿ ರೂಪಾಯಿ ಲಪಟಾಯಿಸಿಬಿಟ್ಟದ. ಸುಮಾರು ಮೂರು ನೂರು ಜನರ ಮ್ಯಾಲೆ ಎರಡು ವರ್ಷಗಟ್ಟಲೆ ಗೂಢಚಾರಿಕೆ ಮಾಡಿ ಅವರ ಖಾಸಗಿ ಮಾಹಿತಿ ಎಲ್ಲ ಸಂಗ್ರಹ ಮಾಡೆದ.

ಬರೆ ಇಷ್ಟ ಇದ್ದರ ಇದು ಸುದ್ದಿ ಆಗ್ತಾ ಇರಲಿಲ್ಲ. ಈ ಬಿಳಿ ರೆಕ್ಕೆಯ ಕುದುರೆಯಿಂದ ಯಾರದಾದರೂ ಫೋನುಗಳನ್ನು ಅದರ ಮಾಲೀಕರಿಗೆ ಗೊತ್ತಿಲ್ಲದೆ ಚಾಲೂ-ಬಂದ್ ಮಾಡಬಹುದು. ಅವರ ಫೋನು ಕ್ಯಾಮರಾದಿಂದ ಫೋಟೋ ತೆಗಿಬಹುದು, ವಿಡಿಯೋ ತೆಗಿಬಹುದು. ಅವರ ಮೆಸೇಜು, ವಾಟ್ಸಪ್ಪು, ಈಮೇಲೂ, ಇತ್ಯಾದಿಗಳ ಕಾಪಿ ಮಾಡಬಹುದು. ಅವರ ಬ್ಯಾಂಕ್ ವಹಿವಾಟಿನ ಮಾಹಿತಿ ಪಡೆಯಬಹುದು. ಅವರ ಆರೋಗ್ಯದ ಎಲ್ಲ ಮಾಹಿತಿ-ಉದಾಹರಣೆಗೆ ಅವರಿಗೆ ಇರುವ ಕಾಯಿಲೆ, ಅವರು ಆಪರೇಷನ್ ಮಾಡಿಸಿಕೊಂಡ ಮಾಹಿತಿ, ತೊಗೊಳ್ಳುವ ಔಷಧಿ, ಅವರ ವೈದ್ಯರ ನಂಬರ್ ಎಲ್ಲ ಸಂಗ್ರಹ ಮಾಡಬಹುದು.

ಇನ್ನೊಂದು ಖತರನಾಕ ವಿಚಾರ ಏನು ಅಂದರ ಎಲ್ಲೋ ದೂರ ಇಸ್ರೇಲ್-ಅಮೆರಿಕ ದೆಹಲಿಯೊಳಗ ಕುಳಿತುಕೊಂಡ ಇಂಜಿನಿಯರ್‌ಗಳು ಅಥವಾ ಪೊಲೀಸರು ನಿಮ್ಮ ಫೋನಿನ ಒಳಗ ನಿಮ್ಮನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವಂತಹ ಮಾಹಿತಿ ಕಳಿಸಬಹುದು. ಅದು ನಿಮಗೆ ಗೊತ್ತಿರಲಾರದೆ ನಿಮ್ಮ ಫೋನಿನ ಒಳಗೆ ಬಂದು ಕೂತುಬಿಡುತ್ತದೆ. ನೀವು ಫೋನು ಬದಲು ಮಾಡಿದರೂ ಹೋಗೋದಿಲ್ಲ.

ನೀವು ನಿಮ್ಮ ಸ್ನೇಹಿತರಿಗೆ “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಮಂಡಕ್ಕಿ ಮಿರ್ಚಿ ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಹಾಲು, ಎರಡು ನೂರು ಗ್ರಾಂ ಚಹಾಪುಡಿ ತೊಗೊಂಡು ಬರ್ರಿ” ಅಂತ ಸಂದೇಶ ಕಳಿಸಿದರಿ ಅಂತ ತಿಳಕೋರಿ. ನಿಮ್ಮ ವಿರೋಧಿಗಳು “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಟೈಮ್ ಬಾಂಬ್ ತಯಾರು ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಸೋಡಿಯಂ ನೈಟ್ರೇಟ್ ದ್ರಾವಣ, ಎರಡು ನೂರು ಗ್ರಾ ಆರ್‌ಡಿ ಎಕ್ಸ್ ತೊಗೊಂಡು ಬರ್ರಿ” ಅಂತ ಬದಲು ಮಾಡಬಹುದು.

ಅದರ ಆಧಾರದ ಮೇಲೆ ನಿಮ್ಮನ್ನ ದೇಶದ್ರೋಹದ ಕಾನೂನು ಅಡಿಯಲ್ಲಿ ಒದ್ದು ಒಳಗಹಾಕಬಹುದು.

ಹಿಂದಿ ಪಿಕ್ಚರ್‌ದಾಗ ಪೊಲೀಸ್ ಇನ್ಸ್ಪೆಕ್ಟರ್ ಅಮರೀಷ ಪುರಿ ’ಅಬೇ ಸಾಲೇ, ನಿನ್ನ ಮನಿಯೊಳಗ ಗಾಂಜಾ ಪೊಟ್ಟಣ ಇಟ್ಟು ಬಿಡತೆನಿ. ನಿನ್ನನ್ನ ಜೈಲಿಗೆ ಹಾಕತೆನಿ’ ಅಂತ ಧಮಕಿ ಕೊಡತನಲ್ಲ, ಅದಕ್ಕೂ ಇದಕ್ಕೂ ಏನು ವ್ಯತ್ಯಾಸ ಇಲ್ಲ. ಹಿಂಗ ಆಗಬಹುದು ಅಂತ ಅಲ್ಲ. ಆಗಿ ಹೊಗೇದ.

“ಇದೇನು ಹೊಸದಲ್ಲ. ಹಿಂದಿನ ಎಲ್ಲ ಸರಕಾರಗಳು ಗೂಢಚಾರಿಕೆ ಮಾಡಿದವರೇ” ಅಂತ ಹೇಳಿ ನಮ್ಮ ಡೋಂಟ್ ಕೇರ್ ಕುಮಾರಣ್ಣ ಅವರು ಹೇಳಿಕೆ ಕೊಟ್ಟಾರ. ಹಿಂದಿನವರು ಗೂಢಚಾರಿಕೆ ಮಾಡಿರಬಹುದು. ಅದರ ಅಮರೀಷ ಪುರಿ ತಂತ್ರ ಉಪಯೋಗಿಸಿ ನಿಮ್ಮ ಫೋನ್‌ದಾಗ ಬಾಂಬ್ ತಯಾರಿಸುವ ಸಂದೇಶ ಕಳಿಸಿಲ್ಲ. ಹಂಗ ಮಾಡಲಿಕ್ಕೆ ಆವಾಗ ತಂತ್ರಜ್ಞಾನನೂ ಇರಲಿಲ್ಲ, ಅಂತ ತಿಳಿರಿ.

ಈಗ ಸದ್ಯ ಟಿವಿ ಎರಡು ದೊಡ್ಡ ಸುದ್ದಿ ತೋರಸಲಿಕ್ಕೆ ಹತ್ತಿದಾವು. ಒಂದು ಈ ಗ್ರೀಕ್ ಪುರಾಣದ ಕತಿ. ಇನ್ನೊಂದು ನಮ್ಮ ಕುಡ್ಲದ ಹುಡುಗಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಪುರಾಣದ ಕತಿ. ಸುಮ್ಮನೇ ಕುಂದರಲಾರದೆ ಕುಂದ್ರಾ ಅವರು ತಯಾರಿಸಿದರು ಎನ್ನಲಾದ ಅಶ್ಲೀಲ ಚಿತ್ರದ ಬಿಸಿ ಬಿಸಿ ಸುದ್ದಿ. ನೀವು ಯಾವುದನ್ನು ನೋಡತಿರಿ ಅನ್ನೋದರ ಮ್ಯಾಲೆ ನಿಮ್ಮ ಮತ್ತು ಈ ದೇಶದ ಭವಿಷ್ಯ ನಿರ್ಭರ ಆಗತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಮುಂದೆ ಪೆಗಾಸಸ್ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...