Homeಪುಸ್ತಕ ವಿಮರ್ಶೆ'ಹಿಂಡೆಕುಳ್ಳು' ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

ಅಮರೇಶರ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಈ ಕಥಾಸಂಕಲದನದಲ್ಲಿ ಅರ್ಥವಾಗುತ್ತದೆ ಎನ್ನುತ್ತಾರೆ ಖ್ಯಾತ ವಿಮರ್ಶಕರಾದ ನರೇಂದ್ರ ಪೈರವರು.

- Advertisement -
- Advertisement -

ಅಮರೇಶ ಗಿಣಿವಾರ ಅವರ ಚೊಚ್ಚಲ ಕಥಾಸಂಕಲನ ‘ಹಿಂಡೆಕುಳ್ಳು’ ಓದಿದ ಮೇಲೆ, ಕತೆಗಾರನಿಂದ ಕಥನ ಶೈಲಿಯ ಕೆಲವು ವಿಶಿಷ್ಟ ಮತ್ತು ಹೊಸತನದ ವಿಧಾನಗಳನ್ನು ಕಲಿತೆ ಎನ್ನಬಹುದು. ಬಹುಶಃ ಅವು ಮುಂದಿನ ಕತೆಗಳಲ್ಲಿ ಹೆಚ್ಚು ವಿಕಾಸಗೊಂಡು, ಹೆಚ್ಚು ಸ್ಪಷ್ಟವಾದ ಚೌಕಟ್ಟನ್ನು ಕಂಡುಕೊಳ್ಳಬಹುದು ಅನಿಸುತ್ತದೆ. ಆ ಬಗ್ಗೆ ಎರಡು ಮಾತು.

‘ಹಿಂಡೆಕುಳ್ಳು’ ಸಂಕಲನದಲ್ಲಿ ಸಿದ್ಧಮಾದರಿಯ ಕತೆಗಳಲ್ಲಿ ಕಂಡುಬರುವಂಥ ಪೂರ್ಣಮಟ್ಟದ ಕತೆ ಎನ್ನುವುದಿಲ್ಲ. ಆದರೆ, ನಿರೂಪಣೆಯಲ್ಲಿ ಬರದೇ ಇರುವ, ಕಥಾನಕದ ಹಿಂದಿನ ಮತ್ತು ಕೆಲವೊಮ್ಮೆ ಮುಂದಿನ ಕತೆಗಳ ಹೊಳಹುಗಳನ್ನು ಸ್ಪಷ್ಟವಾಗಿ ಕಾಣಿಸುತ್ತವೆ. ಹಾಗೆ ಕಾಣಿಸುವುದರ ಮೂಲಕವೇ ಪೂರ್ಣಮಟ್ಟವನ್ನು ತಲುಪಿವೆ ಎನ್ನುವ ಭಾವ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದು, ಭಾಷೆ ಮತ್ತು ವಿವರಗಳು ಸಶಕ್ತವಾಗಿವೆ ಹಾಗು ಅಚ್ಚರಿ ಹುಟ್ಟಿಸುವಷ್ಟು ಆಕರ್ಷಕವಾಗಿವೆ. ಹೀಗೆ, ಅಮರೇಶರ ಕತೆಗಳಲ್ಲಿ ಒಂದು ನಿರ್ದಿಷ್ಟ ಚಿತ್ರವಷ್ಟೇ ಇದೆ. ಇದು ನನಗೆ ಒಂದು ಸ್ಥಿರಚಿತ್ರ, ಅದನ್ನು ನೋಡುವ ವೀಕ್ಷಕನಲ್ಲಿ ಮೂಡಿಸುವ ಹಿಂದು-ಮುಂದಿನ ಕಥನದ ಪ್ರತಿಮಾವಿಧಾನವನ್ನು ಸಶಕ್ತವಾಗಿ ಬಳಸಿಕೊಳ್ಳುವ ಕಥನಕ್ರಮದಂತೆ ಕಂಡಿದೆ. ಇದು ಕನ್ನಡಕ್ಕೆ ಹೊಸದು ಮತ್ತು ಕತೆಗಾರನ ಸಾಮರ್ಥ್ಯಕ್ಕೆ ನಿಜವಾದ ಒರೆಗಲ್ಲು ಕೂಡಾ. ಅದರಲ್ಲಿ ಕಥೆಗಾರ ಗೆದ್ದಿದ್ದಾರೆ.

’ಶಿವನ ಕುದುರೆ’ ಕತೆಯನ್ನು ಗಮನಿಸಿದರೆ, ಇದು ತಂದೆಯನ್ನು ಮೀರಲು ಹೊರಟ ಮಗನ ಕತೆಯಂತೆ ಭಾಸವಾಗುವುದು. ಇಂಥ ಅನೇಕ ಕನ್ನಡ ಕತೆಗಳು ಪ್ರಕಟವಾಗಿವೆ. ಉದಾಹರಣೆಗೆ, ಜಯಂತ ಕಾಯ್ಕಿಣಿಯವರ ’ತೆರೆದಷ್ಟೇ ಬಾಗಿಲು’, ಅಶೋಕ ಹೆಗಡೆಯವರ ’ಉಳಿದದ್ದೆ ದಾರಿ’, ’ಹೊಳೆದದ್ದೆ ತಾರೆ’, ವಿ ಆರ್ ಕಾರ್ಪೆಂಟರ್ ಅವರ ’ನನ್ನ ಅಪ್ಪನ ಪ್ರೇಯಸಿ’, ಪದ್ಮನಾಭ ಭಟ್ ಶೇವ್ಕಾರ ಅವರ ’ಕತೆ’ ಇತ್ಯಾದಿ ಹಲವಾರು ಕತೆಗಳು ತಂದೆ ಮಗನ ನಡುವಿನ ಒಂದು ’ಲವ್-ಹೇಟ್ ಸಂಬಂಧದ ನೆಲೆಗಟ್ಟನ್ನು ಹೊಂದಿರುವ ಕತೆಗಳೇ. ಆದರೆ ಅಮರೇಶ ಅದನ್ನು ಇಷ್ಟೊಂದು ಸಂಕ್ಷಿಪ್ತವಾಗಿ ಮತ್ತು ಸಾಕಷ್ಟು ಸಂಕೀರ್ಣವಾಗಿ ಕೂಡ ಕಟ್ಟಿಕೊಟ್ಟಿರುವುದು ಮೆಚ್ಚುಗೆಯ ಸಂಗತಿ.

’ನರಿಮಳೆ’ ಕತೆ ತೀರ ಸಾಮಾನ್ಯ ಎಳೆಯನ್ನು ಹೊಂದಿರುವ ಕತೆ. ಆದರೆ ಅದರ ದೈನಂದಿನಗಳ ವಿವರಗಳಲ್ಲಿ ಸಾಕಷ್ಟು ಹೊಸತನವಿದೆ. ಕನ್ನಡ ಕಥಾಸಾಹಿತ್ಯದಲ್ಲಿ ಇದುವರೆಗೂ ಬಂದಿರದ ಒಂದು ಬದುಕು ಇಲ್ಲಿ ಅನಾವರಣಗೊಳ್ಳುತ್ತಿದೆ ಎನ್ನುವುದರಿಂದ ಈ ಕಥೆಯ ಓದು ಖುಷಿ ಕೊಡುತ್ತದೆ.

’ಹಿಂಡೆಕುಳ್ಳು ಕಥಾನಕ ಕೂಡ ’ನರಿಮಳೆ’ ಕತೆಯದೇ ಇನ್ನೊಂದು ಮಗ್ಗುಲನ್ನು ತೋರಿಸುತ್ತಿದೆಯಾದರೂ ಇಲ್ಲಿ ನೇರವಾಗಿ ಗಂಡನ ಸಾವು – ಬದುಕುಳಿವ ಹೆಂಡತಿ, ಮಕ್ಕಳ ಬದುಕಿಗೆ ಲಿಬರೇಟಿಂಗ್ ಆಗಿಬಿಡುವುದೇ ಬಹಳ ಮುಖ್ಯವಾದ ಸಂಗತಿ ಅನಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ ಎನ್ನುವ ಕಾರಣಕ್ಕೆ ಸತ್ಯ ಸುಳ್ಳಾಗುವುದಿಲ್ಲ. ಈ ಕತೆ ಹೆಚ್ಚು ವಾಸ್ತವಿಕ ನೆಲೆಗಟ್ಟಿನಿಂದ, ಮಗುವಿನ ಮೂಲಕ ಸತ್ಯ ಹೇಳಿಸುವ ತಂತ್ರದ ಮೂಲಕವೂ ಗಮನ ಸೆಳೆಯುತ್ತದೆ.

’ಗೋಡೆಗಳ ಸೇಡು’ ಕತೆ ದಾಯಾದಿ ಕಲಹದ ಸಾಮಾನ್ಯ ವಸ್ತುವನ್ನೇ ಹೊಂದಿದೆಯಾದರೂ ಅದನ್ನು ವಿವರವಿವರವಾಗಿ ತೆರೆದಿಟ್ಟಿರುವ ರೀತಿ ಮತ್ತು ಕ್ರಿಯೆಯಲ್ಲಿ ಕಾಣಿಸದ ಅದರ ಕ್ರೌರ್ಯವನ್ನು, ಅದೂ ಹೆಣ್ಣಿನ ಮನಸ್ಸಿನ ನಂಜಿನ ಮೂಲಕವೇ ಕಾಣಿಸಿರುವ ರೀತಿ ಮೆಚ್ಚುಗೆಗೆ ಕಾರಣವಾಗುತ್ತದೆ.

’ಮಾಯಮ್ಮ ಕತೆ ಸಣ್ಣಪುಟ್ಟ ಸಂತೋಷಗಳಿಗೂ ಎರವಾಗುವ ಬಾಲ್ಯದ ಕುರಿತಾಗಿದ್ದರೂ ಇಲ್ಲಿ ಕೆಲಸ ಮಾಡುವ ಪ್ರಜ್ಞೆ ಬೆಳೆದವರದ್ದೇ. ಮತ್ತು ಅದಕ್ಕೆ ’ದೊಡ್ಡವರಾಗುವ’ ಒಂದು ಹಂತವನ್ನೇ ಆರಿಸಿಕೊಂಡಿರುವುದು ಹೆಚ್ಚು ಸಮಂಜಸವಾಗಿದೆ. ಪ್ರಬುದ್ಧರ, ಹಿರಿಯರ ಬದುಕಿನ ಅತ್ಯಂತ ದೊಡ್ಡ ನೋವು ಕೂಡ ಇಂಥ ಬಾಲ್ಯದ ಸಣ್ಣಪುಟ್ಟ ಖುಷಿಗಳಿಗೆ ಎರವಾಗಿ ಬೆಳೆದ ಹಂತದೊಂದಿಗೆ ತಳುಕು ಹಾಕಿಕೊಂಡಿರುತ್ತದೆ ಎನ್ನುವುದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ ತುಂಬ ಮಹತ್ವದ ಕತೆಯಿದು.

’ಪಾತ್ರಧಾರಿ’ ಕತೆಯ ನಿರೂಪಣೆಯಲ್ಲಿ ಹೆಚ್ಚು ಲಘುವಾದ ಮನೋಧರ್ಮವೊಂದು ಕೆಲಸ ಮಾಡಿದೆ. ಗಂಭೀರವಾದ ದೈನಂದಿನವನ್ನು ಕೂಡ ತಮಾಷೆಯಾಗಿ ಗಮನಿಸುತ್ತ ಅದರ ಗಹನತೆಯನ್ನು ಮನಗಾಣಿಸುವಲ್ಲಿ ಕತೆ ಯಶಸ್ವಿಯಾಗಿದೆ.

’ರಂಗೋಲಿ ಹಾಕಿದರೆ ಗಂಗೂಲಿ ಬರೋದಿಲ್ಲಾ,
ರಂಗೋಲಿ ಯಾಕ ನಮ್ಮನಿಗಿ,
ರಂಗೋಲಿಯಾಕ ನಮ್ಮನಿಗಿ ನಾಗೇಂದ್ರ,
ಅಂಗೈಲಿ ಒಂದು ಮರಿ ಬೇಕು’

– ಎಂಬ ಜಾನಪದ ಹಾಡಿನ ಸೊಲ್ಲಿನಲ್ಲಿ ಎಷ್ಟೆಲ್ಲಾ ಸತ್ಯವಡಗಿದೆ ಮತ್ತು ಅದೇ ಕಾಲಕ್ಕೆ ಅದೆಷ್ಟು ತಮಾಷೆಯಾಗಿಯೂ ಇದೆ ಎನ್ನುವುದನ್ನು ಕಂಡುಕೊಂಡರೆ, ಅಮರೇಶರ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಅರ್ಥವಾಗುತ್ತದೆ ಅನಿಸುತ್ತದೆ. ಇದು ಮುಂದೆ ಅಮರೇಶರಲ್ಲಿ ಹೇಗೆ ಹೊಸ ಬಗೆಯ ವಸ್ತು, ನಿರೂಪಣೆ ಮತ್ತು ತಂತ್ರಗಳಿಗೆ ನೀರೆರೆದು ಪೋಷಿಸಬಹುದು ಎಂಬುದು ತುಂಬ ಕುತೂಹಲಕರವಾಗಿ ಕಾಣುತ್ತದೆ.

’ಮನೆ ನಂಬರ್ 84’ ಕೂಡ ಮೇಲಿನ ಮಾತುಗಳಿಗೆ ಪುಷ್ಟಿಕೊಡುವಂಥದೇ ಕತೆ. ಇಲ್ಲಿ ಸಂಘಟನೆಯಿದೆ, ಕಾರ್ಮಿಕರಿದ್ದಾರೆ ವರ್ಗ ಸಂಘರ್ಷವಿದೆ ಓಸಿ ಮತ್ತು ಭ್ರಷ್ಟ್ಟಾಚಾರವೂ ಇದೆ. ಎಲ್ಲವೂ ಎಲ್ಲರಲ್ಲೂ ಇದೆ ಎನ್ನುವುದು ಹೆಚ್ಚು ವಿಶೇಷವಾದದ್ದು ಆದರೆ ಕತೆಯಲ್ಲಿ ಎಲ್ಲಿಯೂ ಇದನ್ನೆಲ್ಲ ಅರಿತು, ಪ್ರಜ್ಞಾಪೂರ್ವಕವಾಗಿ ಕಾಣಿಸಲು ಹೊರಟಿದ್ದೇನೆ ಎಂಬ ಧಾಟಿ ಇಲ್ಲ. ಇದನ್ನು ನಿಭಾಯಿಸಿರುವ ರೀತಿ ಅಮರೇಶರನ್ನು ಪ್ರಬುದ್ಧ ಕತೆಗಾರರ ಸಾಲಿನಲ್ಲಿ ನಿಲ್ಲಿಸುತ್ತದೆ.

’ನಶಿಪುಡಿ’ ಕತೆಯಲ್ಲಿ ಮತ್ತೆ ಮೇಲಿನ ಸಂಗತಿಗಳೇ ಬೇರೊಂದು ನೆಲೆಯಲ್ಲಿ ಮರುಕಳಿಸುತ್ತವೆ. ಇಲ್ಲಿ ನಕ್ಸಲೈಟ್ ಚಳವಳಿ, ಸರಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದೆ ಎಂದು ತೋರಿಸಿಕೊಳ್ಳುವುದಕ್ಕೆಂದೇ ಲೆಕ್ಕ ಕೊಡುವ ಅಭಿವೃದ್ಧಿ ಕಾರ್ಯಕ್ರಮದ ಲಕ್ಷಾಂತರ ರೂಪಾಯಿಗಳ ಬಿಡುಗಡೆ, ಅದನ್ನು ನುಂಗಿ ನೀರು ಕುಡಿಯಲು ಕಾದಿರುವ ಹಲವು ಹಂತದ ಆಡಳಿತ ವ್ಯವಸ್ಥೆಯ ಮೆಟ್ಟಿಲುಗಳು ಮತ್ತು ತೀರ ತಳಮಟ್ಟದಲ್ಲಿ ನಕ್ಸಲೈಟ್ ಎಂದು ಉಚ್ಚರಿಸಲು ಕೂಡ ಬಾರದ ದರಿದ್ರ ಮಂದಿ ಎಲ್ಲರೂ ಇದ್ದಾರೆ. ಆದರೆ ಎಲ್ಲಿಯೂ ಯಾವುದನ್ನೂ ಹೆಚ್ಚು ತಿದ್ದಿ ದಪ್ಪಕ್ಷರಗಳಲ್ಲಿ ಕಾಣಿಸುವ ಯತ್ನವಿಲ್ಲ. ಗಾತ್ರದಲ್ಲಿ ಯಾವ ಕತೆಯೂ ಐದಾರು ಪುಟ ಮೀರುವುದಿಲ್ಲ.

’ವಾಪಾಸು ಬಂದ ಪತ್ರ ಕತೆ ತಂತ್ರಗಾರಿಕೆಯನ್ನು ಕಾಣಿಸುವ ಒಂದು ಸಾಮಾನ್ಯ ಪ್ರೇಮಕತೆ ಅನಿಸಿದರೂ ಇಲ್ಲಿ ಇರುವುದು ಒಂದು ಸರಳ ಪ್ರೇಮದ ಕತೆಯಲ್ಲ ಎನ್ನುವುದು ಯಾರಿಗೂ ಅರ್ಥವಾಗುವಂಥದ್ದೇ. ಅದರ ಒಟ್ಟಾರೆ ಚಂದ ಇರುವುದೇ ಅದು ಯಾಕೆ ವಾಪಾಸು ಮರಳಿತು ಎನ್ನುವುದರಲ್ಲೇ ಎನ್ನುವುದು ನಿಜವಾದರೂ ಅದು ಮರಳಿ ಬರಬಹುದಾದ ಹಲವು ಸಾಧ್ಯತೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವುದು, ಪತ್ರವನ್ನು ಓದುತ್ತಿದ್ದಂತೆ ಓದುಗನಿಗೂ ಅದು ಅರಿವಾಗುವುದರಲ್ಲೇ ಅದರ ಗುರುತ್ವ ಇದೆ. ಹಾಗಾಗಿ ಅಂತ್ಯದ ಆಕರ್ಷಕ ಅಂಶದ ಹೊರತಾಗಿಯೂ, ಒಂದು ತೆಳ್ಳನೆಯ ಕತೆಯಾಗಬಹುದಾಗಿದ್ದ ಇದು ಹೆಚ್ಚು ಸಾಂದ್ರವಾಗಿ ಮನಸ್ಸಿನಲ್ಲಿ ಉಳಿಯುವಂತಾಗಿದೆ.

’ಹಳ್ಳ ತೋರಿಸಿದರು’ ಕತೆಯಲ್ಲಿಯೂ ನನಗೆ ’ನರಿಮಳೆ’, ’ಪಾತ್ರಧಾರಿ’ ಮತ್ತು ’ಹಿಂಡೆಕುಳ್ಳು ಕತೆಗಳ ಅಸಮ ದಾಂಪತ್ಯದ ನೆರಳು ಕಾಣಿಸಿದೆ. ಆದರೆ ಅಂಥ ಬದುಕಿನ ಇನ್ನೊಂದು ಮಗ್ಗಲನ್ನು ಇದು ಕಾಣಿಸುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಕ್ಷಿಪ್ತವಾಗಿ ಅಮರೇಶ ಕಟ್ಟಿಕೊಡುವ ಕಥಾನಕದ ನಡುವಿನ ಒಂದು ’ಆಯ್ದ ಚಿತ್ರ ಏನಿದೆ, ಅದು ಮಾತ್ರ ನಮಗೆ ಈ ಕತೆಗಳಲ್ಲಿ ಸಿಗುತ್ತಿದೆ. ಕತೆಯ ಇಡೀ ಮೈ ಇಲ್ಲಿ ಇಲ್ಲ ಅನಿಸುತ್ತದೆ. ಆದರೆ ಇಡೀ ಮೈ ಇಲ್ಲದೇನೆ ಅದನ್ನು ಹೊಳಹುಗಳಲ್ಲಿ ಮರುಕಲ್ಪಿಸಬಹುದು ಎಂಬ ಅಮರೇಶರ ನಂಬುಗೆ ನನಗೆ ತುಂಬ ಇಷ್ಟವಾದ ಸಂಗತಿ. ಇದು ಬಹುಶಃ ಇವತ್ತಿನ ಕಥನದ ಅಗತ್ಯ ಕೂಡ. ಹಾಗೆಯೇ ಇದನ್ನು ಸಾಧಿಸಲು ಕೇವಲ ನಂಬುಗೆ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಅದಕ್ಕೆಲ್ಲ ಒಂದು ಸಶಕ್ತ ಭಾಷೆ, ಜಾಣ್ಮೆಯಿಂದ ಆಯ್ದ ವಿವರಗಳು ಮತ್ತು ಅಭಿವ್ಯಕ್ತಿಯಲ್ಲಿ ಚುರುಕು ಮುಟ್ಟಿಸಬಲ್ಲ ಅನುಭವದ ಕಸು ಅಗತ್ಯ ಎಂಬ ಅರಿವೂ ಕತೆಗಾರನಿಗೆ ಇದ್ದೇ ಇದೆ. ಹಾಗಾಗಿಯೇ ಎಲ್ಲ ಕತೆಗಳೂ ಇಲ್ಲಿ ಯಶಸ್ವಿಯಾಗಿವೆ.

ಹಿಂಡೆಕುಳ್ಳು
ಕಥಾ ಸಂಕಲನ
ಪ್ರಕಾಶನ: ವೈಷ್ಣವಿ ಪ್ರಕಾಶನ ರಾಯಚೂರು

ಸಂಪರ್ಕ: 9620170027


  • ನರೇಂದ್ರ ಪೈ

ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು- ಬರಹಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಎರಡು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಈ ಸಲುವಾಗಿ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್ ಬರೆಯುತ್ತಿದ್ದಾರೆ.


ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...