Homeಪುಸ್ತಕ ವಿಮರ್ಶೆ'ಹಿಂಡೆಕುಳ್ಳು' ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

ಅಮರೇಶರ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಈ ಕಥಾಸಂಕಲದನದಲ್ಲಿ ಅರ್ಥವಾಗುತ್ತದೆ ಎನ್ನುತ್ತಾರೆ ಖ್ಯಾತ ವಿಮರ್ಶಕರಾದ ನರೇಂದ್ರ ಪೈರವರು.

- Advertisement -
- Advertisement -

ಅಮರೇಶ ಗಿಣಿವಾರ ಅವರ ಚೊಚ್ಚಲ ಕಥಾಸಂಕಲನ ‘ಹಿಂಡೆಕುಳ್ಳು’ ಓದಿದ ಮೇಲೆ, ಕತೆಗಾರನಿಂದ ಕಥನ ಶೈಲಿಯ ಕೆಲವು ವಿಶಿಷ್ಟ ಮತ್ತು ಹೊಸತನದ ವಿಧಾನಗಳನ್ನು ಕಲಿತೆ ಎನ್ನಬಹುದು. ಬಹುಶಃ ಅವು ಮುಂದಿನ ಕತೆಗಳಲ್ಲಿ ಹೆಚ್ಚು ವಿಕಾಸಗೊಂಡು, ಹೆಚ್ಚು ಸ್ಪಷ್ಟವಾದ ಚೌಕಟ್ಟನ್ನು ಕಂಡುಕೊಳ್ಳಬಹುದು ಅನಿಸುತ್ತದೆ. ಆ ಬಗ್ಗೆ ಎರಡು ಮಾತು.

‘ಹಿಂಡೆಕುಳ್ಳು’ ಸಂಕಲನದಲ್ಲಿ ಸಿದ್ಧಮಾದರಿಯ ಕತೆಗಳಲ್ಲಿ ಕಂಡುಬರುವಂಥ ಪೂರ್ಣಮಟ್ಟದ ಕತೆ ಎನ್ನುವುದಿಲ್ಲ. ಆದರೆ, ನಿರೂಪಣೆಯಲ್ಲಿ ಬರದೇ ಇರುವ, ಕಥಾನಕದ ಹಿಂದಿನ ಮತ್ತು ಕೆಲವೊಮ್ಮೆ ಮುಂದಿನ ಕತೆಗಳ ಹೊಳಹುಗಳನ್ನು ಸ್ಪಷ್ಟವಾಗಿ ಕಾಣಿಸುತ್ತವೆ. ಹಾಗೆ ಕಾಣಿಸುವುದರ ಮೂಲಕವೇ ಪೂರ್ಣಮಟ್ಟವನ್ನು ತಲುಪಿವೆ ಎನ್ನುವ ಭಾವ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದು, ಭಾಷೆ ಮತ್ತು ವಿವರಗಳು ಸಶಕ್ತವಾಗಿವೆ ಹಾಗು ಅಚ್ಚರಿ ಹುಟ್ಟಿಸುವಷ್ಟು ಆಕರ್ಷಕವಾಗಿವೆ. ಹೀಗೆ, ಅಮರೇಶರ ಕತೆಗಳಲ್ಲಿ ಒಂದು ನಿರ್ದಿಷ್ಟ ಚಿತ್ರವಷ್ಟೇ ಇದೆ. ಇದು ನನಗೆ ಒಂದು ಸ್ಥಿರಚಿತ್ರ, ಅದನ್ನು ನೋಡುವ ವೀಕ್ಷಕನಲ್ಲಿ ಮೂಡಿಸುವ ಹಿಂದು-ಮುಂದಿನ ಕಥನದ ಪ್ರತಿಮಾವಿಧಾನವನ್ನು ಸಶಕ್ತವಾಗಿ ಬಳಸಿಕೊಳ್ಳುವ ಕಥನಕ್ರಮದಂತೆ ಕಂಡಿದೆ. ಇದು ಕನ್ನಡಕ್ಕೆ ಹೊಸದು ಮತ್ತು ಕತೆಗಾರನ ಸಾಮರ್ಥ್ಯಕ್ಕೆ ನಿಜವಾದ ಒರೆಗಲ್ಲು ಕೂಡಾ. ಅದರಲ್ಲಿ ಕಥೆಗಾರ ಗೆದ್ದಿದ್ದಾರೆ.

’ಶಿವನ ಕುದುರೆ’ ಕತೆಯನ್ನು ಗಮನಿಸಿದರೆ, ಇದು ತಂದೆಯನ್ನು ಮೀರಲು ಹೊರಟ ಮಗನ ಕತೆಯಂತೆ ಭಾಸವಾಗುವುದು. ಇಂಥ ಅನೇಕ ಕನ್ನಡ ಕತೆಗಳು ಪ್ರಕಟವಾಗಿವೆ. ಉದಾಹರಣೆಗೆ, ಜಯಂತ ಕಾಯ್ಕಿಣಿಯವರ ’ತೆರೆದಷ್ಟೇ ಬಾಗಿಲು’, ಅಶೋಕ ಹೆಗಡೆಯವರ ’ಉಳಿದದ್ದೆ ದಾರಿ’, ’ಹೊಳೆದದ್ದೆ ತಾರೆ’, ವಿ ಆರ್ ಕಾರ್ಪೆಂಟರ್ ಅವರ ’ನನ್ನ ಅಪ್ಪನ ಪ್ರೇಯಸಿ’, ಪದ್ಮನಾಭ ಭಟ್ ಶೇವ್ಕಾರ ಅವರ ’ಕತೆ’ ಇತ್ಯಾದಿ ಹಲವಾರು ಕತೆಗಳು ತಂದೆ ಮಗನ ನಡುವಿನ ಒಂದು ’ಲವ್-ಹೇಟ್ ಸಂಬಂಧದ ನೆಲೆಗಟ್ಟನ್ನು ಹೊಂದಿರುವ ಕತೆಗಳೇ. ಆದರೆ ಅಮರೇಶ ಅದನ್ನು ಇಷ್ಟೊಂದು ಸಂಕ್ಷಿಪ್ತವಾಗಿ ಮತ್ತು ಸಾಕಷ್ಟು ಸಂಕೀರ್ಣವಾಗಿ ಕೂಡ ಕಟ್ಟಿಕೊಟ್ಟಿರುವುದು ಮೆಚ್ಚುಗೆಯ ಸಂಗತಿ.

’ನರಿಮಳೆ’ ಕತೆ ತೀರ ಸಾಮಾನ್ಯ ಎಳೆಯನ್ನು ಹೊಂದಿರುವ ಕತೆ. ಆದರೆ ಅದರ ದೈನಂದಿನಗಳ ವಿವರಗಳಲ್ಲಿ ಸಾಕಷ್ಟು ಹೊಸತನವಿದೆ. ಕನ್ನಡ ಕಥಾಸಾಹಿತ್ಯದಲ್ಲಿ ಇದುವರೆಗೂ ಬಂದಿರದ ಒಂದು ಬದುಕು ಇಲ್ಲಿ ಅನಾವರಣಗೊಳ್ಳುತ್ತಿದೆ ಎನ್ನುವುದರಿಂದ ಈ ಕಥೆಯ ಓದು ಖುಷಿ ಕೊಡುತ್ತದೆ.

’ಹಿಂಡೆಕುಳ್ಳು ಕಥಾನಕ ಕೂಡ ’ನರಿಮಳೆ’ ಕತೆಯದೇ ಇನ್ನೊಂದು ಮಗ್ಗುಲನ್ನು ತೋರಿಸುತ್ತಿದೆಯಾದರೂ ಇಲ್ಲಿ ನೇರವಾಗಿ ಗಂಡನ ಸಾವು – ಬದುಕುಳಿವ ಹೆಂಡತಿ, ಮಕ್ಕಳ ಬದುಕಿಗೆ ಲಿಬರೇಟಿಂಗ್ ಆಗಿಬಿಡುವುದೇ ಬಹಳ ಮುಖ್ಯವಾದ ಸಂಗತಿ ಅನಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ ಎನ್ನುವ ಕಾರಣಕ್ಕೆ ಸತ್ಯ ಸುಳ್ಳಾಗುವುದಿಲ್ಲ. ಈ ಕತೆ ಹೆಚ್ಚು ವಾಸ್ತವಿಕ ನೆಲೆಗಟ್ಟಿನಿಂದ, ಮಗುವಿನ ಮೂಲಕ ಸತ್ಯ ಹೇಳಿಸುವ ತಂತ್ರದ ಮೂಲಕವೂ ಗಮನ ಸೆಳೆಯುತ್ತದೆ.

’ಗೋಡೆಗಳ ಸೇಡು’ ಕತೆ ದಾಯಾದಿ ಕಲಹದ ಸಾಮಾನ್ಯ ವಸ್ತುವನ್ನೇ ಹೊಂದಿದೆಯಾದರೂ ಅದನ್ನು ವಿವರವಿವರವಾಗಿ ತೆರೆದಿಟ್ಟಿರುವ ರೀತಿ ಮತ್ತು ಕ್ರಿಯೆಯಲ್ಲಿ ಕಾಣಿಸದ ಅದರ ಕ್ರೌರ್ಯವನ್ನು, ಅದೂ ಹೆಣ್ಣಿನ ಮನಸ್ಸಿನ ನಂಜಿನ ಮೂಲಕವೇ ಕಾಣಿಸಿರುವ ರೀತಿ ಮೆಚ್ಚುಗೆಗೆ ಕಾರಣವಾಗುತ್ತದೆ.

’ಮಾಯಮ್ಮ ಕತೆ ಸಣ್ಣಪುಟ್ಟ ಸಂತೋಷಗಳಿಗೂ ಎರವಾಗುವ ಬಾಲ್ಯದ ಕುರಿತಾಗಿದ್ದರೂ ಇಲ್ಲಿ ಕೆಲಸ ಮಾಡುವ ಪ್ರಜ್ಞೆ ಬೆಳೆದವರದ್ದೇ. ಮತ್ತು ಅದಕ್ಕೆ ’ದೊಡ್ಡವರಾಗುವ’ ಒಂದು ಹಂತವನ್ನೇ ಆರಿಸಿಕೊಂಡಿರುವುದು ಹೆಚ್ಚು ಸಮಂಜಸವಾಗಿದೆ. ಪ್ರಬುದ್ಧರ, ಹಿರಿಯರ ಬದುಕಿನ ಅತ್ಯಂತ ದೊಡ್ಡ ನೋವು ಕೂಡ ಇಂಥ ಬಾಲ್ಯದ ಸಣ್ಣಪುಟ್ಟ ಖುಷಿಗಳಿಗೆ ಎರವಾಗಿ ಬೆಳೆದ ಹಂತದೊಂದಿಗೆ ತಳುಕು ಹಾಕಿಕೊಂಡಿರುತ್ತದೆ ಎನ್ನುವುದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ ತುಂಬ ಮಹತ್ವದ ಕತೆಯಿದು.

’ಪಾತ್ರಧಾರಿ’ ಕತೆಯ ನಿರೂಪಣೆಯಲ್ಲಿ ಹೆಚ್ಚು ಲಘುವಾದ ಮನೋಧರ್ಮವೊಂದು ಕೆಲಸ ಮಾಡಿದೆ. ಗಂಭೀರವಾದ ದೈನಂದಿನವನ್ನು ಕೂಡ ತಮಾಷೆಯಾಗಿ ಗಮನಿಸುತ್ತ ಅದರ ಗಹನತೆಯನ್ನು ಮನಗಾಣಿಸುವಲ್ಲಿ ಕತೆ ಯಶಸ್ವಿಯಾಗಿದೆ.

’ರಂಗೋಲಿ ಹಾಕಿದರೆ ಗಂಗೂಲಿ ಬರೋದಿಲ್ಲಾ,
ರಂಗೋಲಿ ಯಾಕ ನಮ್ಮನಿಗಿ,
ರಂಗೋಲಿಯಾಕ ನಮ್ಮನಿಗಿ ನಾಗೇಂದ್ರ,
ಅಂಗೈಲಿ ಒಂದು ಮರಿ ಬೇಕು’

– ಎಂಬ ಜಾನಪದ ಹಾಡಿನ ಸೊಲ್ಲಿನಲ್ಲಿ ಎಷ್ಟೆಲ್ಲಾ ಸತ್ಯವಡಗಿದೆ ಮತ್ತು ಅದೇ ಕಾಲಕ್ಕೆ ಅದೆಷ್ಟು ತಮಾಷೆಯಾಗಿಯೂ ಇದೆ ಎನ್ನುವುದನ್ನು ಕಂಡುಕೊಂಡರೆ, ಅಮರೇಶರ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಅರ್ಥವಾಗುತ್ತದೆ ಅನಿಸುತ್ತದೆ. ಇದು ಮುಂದೆ ಅಮರೇಶರಲ್ಲಿ ಹೇಗೆ ಹೊಸ ಬಗೆಯ ವಸ್ತು, ನಿರೂಪಣೆ ಮತ್ತು ತಂತ್ರಗಳಿಗೆ ನೀರೆರೆದು ಪೋಷಿಸಬಹುದು ಎಂಬುದು ತುಂಬ ಕುತೂಹಲಕರವಾಗಿ ಕಾಣುತ್ತದೆ.

’ಮನೆ ನಂಬರ್ 84’ ಕೂಡ ಮೇಲಿನ ಮಾತುಗಳಿಗೆ ಪುಷ್ಟಿಕೊಡುವಂಥದೇ ಕತೆ. ಇಲ್ಲಿ ಸಂಘಟನೆಯಿದೆ, ಕಾರ್ಮಿಕರಿದ್ದಾರೆ ವರ್ಗ ಸಂಘರ್ಷವಿದೆ ಓಸಿ ಮತ್ತು ಭ್ರಷ್ಟ್ಟಾಚಾರವೂ ಇದೆ. ಎಲ್ಲವೂ ಎಲ್ಲರಲ್ಲೂ ಇದೆ ಎನ್ನುವುದು ಹೆಚ್ಚು ವಿಶೇಷವಾದದ್ದು ಆದರೆ ಕತೆಯಲ್ಲಿ ಎಲ್ಲಿಯೂ ಇದನ್ನೆಲ್ಲ ಅರಿತು, ಪ್ರಜ್ಞಾಪೂರ್ವಕವಾಗಿ ಕಾಣಿಸಲು ಹೊರಟಿದ್ದೇನೆ ಎಂಬ ಧಾಟಿ ಇಲ್ಲ. ಇದನ್ನು ನಿಭಾಯಿಸಿರುವ ರೀತಿ ಅಮರೇಶರನ್ನು ಪ್ರಬುದ್ಧ ಕತೆಗಾರರ ಸಾಲಿನಲ್ಲಿ ನಿಲ್ಲಿಸುತ್ತದೆ.

’ನಶಿಪುಡಿ’ ಕತೆಯಲ್ಲಿ ಮತ್ತೆ ಮೇಲಿನ ಸಂಗತಿಗಳೇ ಬೇರೊಂದು ನೆಲೆಯಲ್ಲಿ ಮರುಕಳಿಸುತ್ತವೆ. ಇಲ್ಲಿ ನಕ್ಸಲೈಟ್ ಚಳವಳಿ, ಸರಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದೆ ಎಂದು ತೋರಿಸಿಕೊಳ್ಳುವುದಕ್ಕೆಂದೇ ಲೆಕ್ಕ ಕೊಡುವ ಅಭಿವೃದ್ಧಿ ಕಾರ್ಯಕ್ರಮದ ಲಕ್ಷಾಂತರ ರೂಪಾಯಿಗಳ ಬಿಡುಗಡೆ, ಅದನ್ನು ನುಂಗಿ ನೀರು ಕುಡಿಯಲು ಕಾದಿರುವ ಹಲವು ಹಂತದ ಆಡಳಿತ ವ್ಯವಸ್ಥೆಯ ಮೆಟ್ಟಿಲುಗಳು ಮತ್ತು ತೀರ ತಳಮಟ್ಟದಲ್ಲಿ ನಕ್ಸಲೈಟ್ ಎಂದು ಉಚ್ಚರಿಸಲು ಕೂಡ ಬಾರದ ದರಿದ್ರ ಮಂದಿ ಎಲ್ಲರೂ ಇದ್ದಾರೆ. ಆದರೆ ಎಲ್ಲಿಯೂ ಯಾವುದನ್ನೂ ಹೆಚ್ಚು ತಿದ್ದಿ ದಪ್ಪಕ್ಷರಗಳಲ್ಲಿ ಕಾಣಿಸುವ ಯತ್ನವಿಲ್ಲ. ಗಾತ್ರದಲ್ಲಿ ಯಾವ ಕತೆಯೂ ಐದಾರು ಪುಟ ಮೀರುವುದಿಲ್ಲ.

’ವಾಪಾಸು ಬಂದ ಪತ್ರ ಕತೆ ತಂತ್ರಗಾರಿಕೆಯನ್ನು ಕಾಣಿಸುವ ಒಂದು ಸಾಮಾನ್ಯ ಪ್ರೇಮಕತೆ ಅನಿಸಿದರೂ ಇಲ್ಲಿ ಇರುವುದು ಒಂದು ಸರಳ ಪ್ರೇಮದ ಕತೆಯಲ್ಲ ಎನ್ನುವುದು ಯಾರಿಗೂ ಅರ್ಥವಾಗುವಂಥದ್ದೇ. ಅದರ ಒಟ್ಟಾರೆ ಚಂದ ಇರುವುದೇ ಅದು ಯಾಕೆ ವಾಪಾಸು ಮರಳಿತು ಎನ್ನುವುದರಲ್ಲೇ ಎನ್ನುವುದು ನಿಜವಾದರೂ ಅದು ಮರಳಿ ಬರಬಹುದಾದ ಹಲವು ಸಾಧ್ಯತೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವುದು, ಪತ್ರವನ್ನು ಓದುತ್ತಿದ್ದಂತೆ ಓದುಗನಿಗೂ ಅದು ಅರಿವಾಗುವುದರಲ್ಲೇ ಅದರ ಗುರುತ್ವ ಇದೆ. ಹಾಗಾಗಿ ಅಂತ್ಯದ ಆಕರ್ಷಕ ಅಂಶದ ಹೊರತಾಗಿಯೂ, ಒಂದು ತೆಳ್ಳನೆಯ ಕತೆಯಾಗಬಹುದಾಗಿದ್ದ ಇದು ಹೆಚ್ಚು ಸಾಂದ್ರವಾಗಿ ಮನಸ್ಸಿನಲ್ಲಿ ಉಳಿಯುವಂತಾಗಿದೆ.

’ಹಳ್ಳ ತೋರಿಸಿದರು’ ಕತೆಯಲ್ಲಿಯೂ ನನಗೆ ’ನರಿಮಳೆ’, ’ಪಾತ್ರಧಾರಿ’ ಮತ್ತು ’ಹಿಂಡೆಕುಳ್ಳು ಕತೆಗಳ ಅಸಮ ದಾಂಪತ್ಯದ ನೆರಳು ಕಾಣಿಸಿದೆ. ಆದರೆ ಅಂಥ ಬದುಕಿನ ಇನ್ನೊಂದು ಮಗ್ಗಲನ್ನು ಇದು ಕಾಣಿಸುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಕ್ಷಿಪ್ತವಾಗಿ ಅಮರೇಶ ಕಟ್ಟಿಕೊಡುವ ಕಥಾನಕದ ನಡುವಿನ ಒಂದು ’ಆಯ್ದ ಚಿತ್ರ ಏನಿದೆ, ಅದು ಮಾತ್ರ ನಮಗೆ ಈ ಕತೆಗಳಲ್ಲಿ ಸಿಗುತ್ತಿದೆ. ಕತೆಯ ಇಡೀ ಮೈ ಇಲ್ಲಿ ಇಲ್ಲ ಅನಿಸುತ್ತದೆ. ಆದರೆ ಇಡೀ ಮೈ ಇಲ್ಲದೇನೆ ಅದನ್ನು ಹೊಳಹುಗಳಲ್ಲಿ ಮರುಕಲ್ಪಿಸಬಹುದು ಎಂಬ ಅಮರೇಶರ ನಂಬುಗೆ ನನಗೆ ತುಂಬ ಇಷ್ಟವಾದ ಸಂಗತಿ. ಇದು ಬಹುಶಃ ಇವತ್ತಿನ ಕಥನದ ಅಗತ್ಯ ಕೂಡ. ಹಾಗೆಯೇ ಇದನ್ನು ಸಾಧಿಸಲು ಕೇವಲ ನಂಬುಗೆ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಅದಕ್ಕೆಲ್ಲ ಒಂದು ಸಶಕ್ತ ಭಾಷೆ, ಜಾಣ್ಮೆಯಿಂದ ಆಯ್ದ ವಿವರಗಳು ಮತ್ತು ಅಭಿವ್ಯಕ್ತಿಯಲ್ಲಿ ಚುರುಕು ಮುಟ್ಟಿಸಬಲ್ಲ ಅನುಭವದ ಕಸು ಅಗತ್ಯ ಎಂಬ ಅರಿವೂ ಕತೆಗಾರನಿಗೆ ಇದ್ದೇ ಇದೆ. ಹಾಗಾಗಿಯೇ ಎಲ್ಲ ಕತೆಗಳೂ ಇಲ್ಲಿ ಯಶಸ್ವಿಯಾಗಿವೆ.

ಹಿಂಡೆಕುಳ್ಳು
ಕಥಾ ಸಂಕಲನ
ಪ್ರಕಾಶನ: ವೈಷ್ಣವಿ ಪ್ರಕಾಶನ ರಾಯಚೂರು

ಸಂಪರ್ಕ: 9620170027


  • ನರೇಂದ್ರ ಪೈ

ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು- ಬರಹಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಎರಡು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಈ ಸಲುವಾಗಿ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್ ಬರೆಯುತ್ತಿದ್ದಾರೆ.


ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...