Homeಮುಖಪುಟ‘ಮೂಕನಾಯಕ - 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

‘ಮೂಕನಾಯಕ – 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

1920ರಲ್ಲಿ ತಮ್ಮ ಮೊದಲ ಪತ್ರಿಕಾ ಪ್ರಯೋಗವಾಗಿ ಅಂಬೇಡ್ಕರ್‌ ಅವರು ಆರಂಭಿಸಿದ್ದ ’ಮೂಕನಾಯಕ’ ಪತ್ರಿಕೆಗೆ ಇಲ್ಲಿಗೆ ನೂರು ವರ್ಷ ತುಂಬಿದೆ. ಆ ನೆನಪಿನಲ್ಲಿ...

- Advertisement -
- Advertisement -

ಡಾ ಅಂಬೇಡ್ಕರ್ ಅವರು 100 ವರ್ಷಗಳ ಹಿಂದೆ ಆರಂಭಿಸಿದ್ದ ‘ಮೂಕನಾಯಕ’ ಮರಾಠಿ ಪತ್ರಿಕೆಯ ಶತಮಾನೋತ್ಸವದ ಸಂದರ್ಭದಲ್ಲಿ, ಅದರ ಉದ್ಘಾಟನಾ ಸಂಚಿಕೆಯಲ್ಲಿ ಡಾ. ಅಂಬೇಡ್ಕರ್ ಅವರು ಬರೆದಿದ್ದ ಲೇಖನದ ಸಂಕ್ಷಿಪ್ತ ಅನುವಾದ ಇಲ್ಲಿದೆ. ಈ ಬರಹದಲ್ಲಿ, ಬಾಬಾಸಾಹೇಬರು ಜಾತಿ ತಾರತಮ್ಯದ ವಿರುದ್ಧ ನೇರವಾಗಿ ದಾಳಿ ನಡೆಸಿದ್ದಾರೆ.

‘ಮೂಕನಾಯಕ’ ವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊದಲ ಪತ್ರಿಕಾ ಪ್ರಯೋಗ. ಈ ಪಾಕ್ಷಿಕ ಪತ್ರಿಕೆಯನ್ನು ಅವರು ತಮ್ಮ ಮಾರ್ಗದರ್ಶಕರಾದ ಶಾಹೂಜಿ ಮಹಾರಾಜ್ ಅವರ ನೆರವಿನಿಂದ 1920ರಲ್ಲಿ ಆರಂಭಿಸಿದರು. ಇದನ್ನು ಆರಂಭಿಸುವುದರ ಹಿಂದೆ ಅಂಬೇಡ್ಕರ್ ಅವರಿಗಿದ್ದ ಉದ್ದೇಶ, ಈವರೆಗೆ ಮುಖ್ಯವಾಹಿನಿಯ ಹಿಂದಿ ಪತ್ರಿಕೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿದ್ದ ತನ್ನ ಅನಿಸಿಕೆಗಳನ್ನು ಮುಂದಿಡುವುದಾಗಿತ್ತು. ಈ ಅನಿಸಿಕೆಗಳು ಸ್ವರಾಜ್ಯ, ‘ಅಸ್ಪೃಶ್ಯ’ರ ಶಿಕ್ಷಣ, ಅಸ್ಪೃಶ್ಯತೆಯ ಕೇಡು- ಇವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದವುಗಳಾಗಿದ್ದವು.

ಮೂಕನಾಯಕ ಪತ್ರಿಕೆ ಮೂರು ವರ್ಷ ಚಾಲ್ತಿಯಲ್ಲಿತ್ತು. ಈ ಬರಹವು, 1920ರ ಜನವರಿ 31ರಂದು ಪ್ರಕಟವಾದ ಮೂಕನಾಯಕದ ಮೊಟ್ಟಮೊದಲ ಸಂಚಿಕೆಯ ಸಂಪಾದಕೀಯದ ಸಂಕ್ಷಿಪ್ತ ಅನುವಾದ.

ನಮ್ಮ ದೇಶವನ್ನು ರೂಪಿಸಿರುವ ಎಲ್ಲ ಅಂಶಗಳ-ಮನುಷ್ಯ ಮೂಲದ್ದು ಮತ್ತು ಮನುಷ್ಯೇತರ ಮೂಲದ್ದು, ಎಲ್ಲದರ-ಒಟ್ಟು ಮೊತ್ತವನ್ನು ಯಾರಾದರೂ ಲೆಕ್ಕ ಹಾಕಿದ್ದೇ ಆದರೆ, ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಕಂಡುಬರುವುದೇನೆಂದರೆ, ಭಾರತದ ರಚನೆಯನ್ನು ರೂಪಿಸುವ ಅನೇಕ ಬಗೆಯ ಅಸಮಾನತೆಗಳಿಂದಲೇ ಅದು ಗುರುತಿಸಲ್ಪಡುತ್ತದೆ ಎಂಬುದು. ಅಂತಹ ಎಲ್ಲ ಅಸಮಾನತೆಗಳಲ್ಲಿ, ಬದುಕಿನ ಭೌತಿಕ ಮಟ್ಟದಲ್ಲೇ ಕಂಡುಬರುವ ತೀವ್ರರೂಪದ ಅಸಮಾನತೆಯು ಅತ್ಯಂತ ನಾಚಿಕೆಗೇಡಿನದ್ದು.

ಭಾರತೀಯರು ಹಲವು ಬಗೆಯ ಭೇಧಗಳಿಂದಾಗಿ ವಿಭಾಗಿಸಲ್ಪಟ್ಟಿದ್ದರೂ, ಧಾರ್ಮಿಕ ಸಹಭಾಗಿತ್ವದ ಕಾರಣಕ್ಕೆ ಉಂಟಾಗುವ ವಿಭಜನೆಯು ಅವುಗಳಲ್ಲೆಲ್ಲ ಅತ್ಯಂತ ಅಪಾಯಕರ ಸ್ವರೂಪದ್ದು. ಇದು ದೈಹಿಕ ಅಥವಾ ಬೌದ್ಧಿಕ ಕಾರಣಗಳಿಂದ ಉಂಟಾಗುವ ಬೇಧಗಳಿಗಿಂತ ಅತಿಹೆಚ್ಚು ಅಪಾಯಕರ. ಅನೇಕ ಸಲ, ಈ ಧಾರ್ಮಿಕ ನೆಲೆಯಿಂದುಂಟಾಗುವ ಬೇಧಗಳು ಎಂತಹ ವಿಪರೀತದ ವರ್ತನೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆಂದರೆ, ಅವೇ ರಕ್ತಪಾತದ ಮೂಲಗಳಾಗಿರುತ್ತವೆ. ಹಿಂದೂಗಳು, ಪಾರ್ಸಿಗಳು, ಯಹೂದೀಯರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು- ಇವರುಗಳ ನಡುವೆ ಹಾಗೂ ಇನ್ನೂ ಅನೇಕ ಧಾರ್ಮಿಕ ಪಂಥಗಳ ನಡುವೆ ಇರುವ ಭಿನ್ನತೆಗಳು ಹಲವು ರೂಪಗಳನ್ನು ಪಡೆದುಕೊಂಡಿವೆ. ಆದರೆ, ಹಿಂದೂಗಳಲ್ಲೇ ಇರುವ ಬೇರೆ ಬೇರೆ ಸ್ತರಗಳನ್ನು ಹತ್ತಿರದಿಂದ ಪರಿಶೀಲಿಸಿದಾಗ ಕಂಡುಬರುವ ಸಂಪೂರ್ಣ ಪ್ರತ್ಯೇಕತೆ ನಿಜಕ್ಕೂ ಖಂಡನೀಯ ಮತ್ತು ನಂಬಲಸಾಧ್ಯ!

ಒಬ್ಬ ಯುರೋಪಿಯನನ್ನು ನೀನು ಯಾರೇಂದು ಪ್ರಶ್ನಿಸಿದರೆ, ತನ್ನ ರಾಷ್ಟ್ರೀಯತೆಯನ್ನು ಗುರುತಿಸಿ ಆತ ನೀಡುವ ಉತ್ತರ-ಇಂಗ್ಲೀಷ್, ಜರ್ಮನ್, ಫ್ರೆಂಚ್ ಅಥವಾ ಇಟಾಲಿಯನ್ ಎಂಬುದು-ಅದು ಯಾವುದೇ ಆಗಿದ್ದರೂ ಸಮಸ್ಯೆಯನ್ನು ಪರಿಹರಿಸಲು ಸಾಕಾಗುತ್ತದೆ. ಇದೇ ಸಂಗತಿಯನ್ನು ಹೀಗೆಯೇ ಹಿಂದೂ ಧರ್ಮದ ಬೇರೆ ಬೇರೆ ಸ್ತರಗಳಿಗೆ ಸೇರಿದ ಜನರ ಬಗ್ಗೆ ಹೇಳಲು ಸಾಧ್ಯವಿಲ್ಲ. ‘ನಾನೊಬ್ಬ ಹಿಂದೂ’ ಎಂಬ ಉತ್ತರದಿಂದ ಯಾರೋಬ್ಬರಿಗೂ ಸಮಾಧಾನ ದೊರೆಯಲಾರದು. ಒಬ್ಬ ಹಿಂದೂ ತನ್ನ ನಿರ್ದಿಷ್ಟ ಗುರುತನ್ನು ಹೇಳಿಕೊಳ್ಳಬೇಕಾದರೆ, ತನ್ನ ಜಾತಿಯನ್ನು ಗುರುತಿಸಿ ಹೇಳುವುದು ಅತ್ಯಗತ್ಯವಾಗಿರುತ್ತದೆ.

ಹಿಂದೂ ಎಂಬ ಈ ಧರ್ಮವನ್ನು ರೂಪಿಸುವ ಜಾತಿಗಳು ಏಣಿಶ್ರೇಣಿಯ ರೂಪದಲ್ಲಿ ಶ್ರೇಣೀಕೃತವಾಗಿ ಜೋಡಿಸಲ್ಪಟ್ಟಿವೆ. ಹಿಂದೂ ಸಮುದಾಯವೆಂಬುದು ಒಂದು ಗೋಪುರ ಇದ್ದಂತೆ-ಅದರಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ಮಹಡಿಯನ್ನು ಕೊಡಲಾಗಿರುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಈ ಗೋಪುರದ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಮೆಟ್ಟಿಲುಗಳಿರುವುದಿಲ್ಲ ಅಥವಾ ಏಣಿ ಇರುವುದಿಲ್ಲ, ಆದ್ದರಿಂದ ಒಂದು ಮಹಡಿಯಲ್ಲಿರುವ ಯಾರೂ ಕೂಡಾ ಮೇಲಿನ ಮಹಡಿಗೆ ಹತ್ತುವ ಅಥವಾ ಕೆಳಗಿನ ಮಹಡಿಗೆ ಇಳಿಯುವ ಸಾಧ್ಯತೆ ಇರುವುದಿಲ್ಲ. ಯಾವ ಮಹಡಿಯಲ್ಲಿ ಯಾರು ಹುಟ್ಟಿದ್ದಾರೋ, ಅವರು ಅಲ್ಲಿಯೇ ಸಾಯುತ್ತಾರೆ. ಕೆಳಗಿನ ಮಹಡಿಯಲ್ಲಿ ಹುಟ್ಟಿರುವ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ, ಆತ ಮೇಲಿನ ಮಹಡಿಗೆ ಹತ್ತುವ ಯಾವುದೇ ಮಾರ್ಗ ಇರುವುದಿಲ್ಲ. ಅದೇ ರೀತಿ, ಒಬ್ಬ ವ್ಯಕ್ತಿ ಯಾವುದೇ ಬಗೆಯ ಪ್ರತಿಭೆ ಅಥವಾ ಜ್ಞಾನವನ್ನೂ ಹೊಂದಿದವನಲ್ಲದಿದ್ದರೂ, ತಾನು ಹುಟ್ಟಿರುವ ಮತ್ತು ತನಗೆ ವಹಿಸಲ್ಪಟ್ಟಿರುವ ಮಹಡಿಯಿಂದ ಕೆಳಗಿನ ಮಹಡಿಗೆ ಆತನನ್ನು ಇಳಿಸುವ ಯಾವ ಸಾಧ್ಯತೆಯೂ ಇರುವುದಿಲ್ಲ.

ಜಾತಿಗಳ ನಡುವಿನ ಅಂತರ್ ಸಂಬಂಧವು, ಮನುಷ್ಯನ ನಿಜವಾದ ಅರ್ಹತೆ ಅಥವಾ ಸತ್ವದೊಂದಿಗೆ ಯಾವುದೇ ತಾರ್ಕಿಕ ಸಂಬಂಧ ಹೊಂದಿರುವುದಿಲ್ಲ. ಒಬ್ಬ ಮೇಲ್ಜಾತಿಯ ವ್ಯಕ್ತಿಯು ಎಷ್ಟೇ ಅನರ್ಹನೂ ನಿಷ್ಪ್ರಯೋಜಕನೂ ಆದರೂ, ಆತ ಹುಟ್ಟಿದ ಜಾತಿಯು ಏಣಿಶ್ರೇಣಿಯಲ್ಲಿ ಮೇಲುಗಡೆಯಿರುವುದೇ ಆದಲ್ಲಿ, ಆತನ ಸಾಮಾಜಿಕ ಸ್ಥಾನಮಾನ ಯಾವಾಗಲೂ ಮೇಲಿನದ್ದಾಗಿಯೇ ಇರುತ್ತದೆ. ಅದೇ ರೀತಿ, ಒಬ್ಬ ಅರ್ಹನಾದ ಕೆಳಜಾತಿಯ ವ್ಯಕ್ತಿಯು ತನ್ನ ‘ಕೆಳ’ತನವನ್ನು ಕಳೆದುಕೊಳ್ಳಲು ಸಾಧ್ಯವಿರುವುದಿಲ್ಲ. ಕೆಳಜಾತಿ ಮತ್ತು ಮೇಲುಜಾತಿಯ ಜನರ ನಡುವೆ ಸಹಭೋಜನ ಮತ್ತು ಅಂತರ್‌ಜಾತಿ ವಿವಾಹಗಳ ಮೇಲೆ ವಿಧಿಸಲಾಗಿರುವ ಅತ್ಯಂತ ಕಟ್ಟುನಿಟ್ಟಿನ ನಿಷೇಧಗಳ ಕಾರಣಕ್ಕೆ, ಈ ಜಾತಿ ಸಂರಚನೆಗಳು ಸದಾ ಇತರ ಜಾತಿಗಳಿಂದ ಪ್ರತ್ಯೇಕಿತವಾಗಿಯೇ ಇರುತ್ತವೆ. ಒಂದು ವೇಳೆ ಆತ್ಮೀಯತೆಯ ಕೆಲವು ಸಂಬಂಧಗಳು, ಜಾತಿಯ ಪರಿಗಣನೆ ಅಥವಾ ಚೌಕಟ್ಟಿನ್ನು ಹೊರಗಡೆ ಇಟ್ಟು, ಅವುಗಳಿಂದ ಮುಕ್ತವಾಗಿ ರೂಪುಗೊಂಡಿದ್ದರೂ, ಆ ಸಂಬಂಧಗಳ ಮೇಲೆ ಕಠಿಣ ನಿಗರಾನಿ ಇಟ್ಟಿರಲಾಗುತ್ತದೆ. ಆ ಸಂಬಂಧಗಳು ಎಲ್ಲೂ ಜಾತಿಯ ಕಟ್ಟಳೆಗಳನ್ನು ಮುರಿದು ಮುಂದುವರೆಯದಂತೆ ಗಮನಿಸಲಾಗುತ್ತದೆ. ಕೆಲವೊಮ್ಮೆ, ಕೆಲವು ಜಾತಿಗಳಿಗೆ, ಈ ಜಾತಿ ಶ್ರೇಣೀಕರಣದ ಚೌಕಟ್ಟಿನೊಳಗಡೆಯೇ ಒಂದು ಸೀಮಿತವಾದ ‘ಚಲನೆ’ಗೆ ಅವಕಾಶ ನೀಡಲಾಗಿರಬಹುದು. ಆದರೆ, ‘ಅಪವಿತ್ರ’ ಎಂದು ಹಣೆಪಟ್ಟಿ ಕಟ್ಟಲಾದ ಅನೇಕ ಜಾತಿಗಳಿಗೆ, ಆ ಸಣ್ಣ ಪ್ರಮಾಣದ ಚಲನೆಯ ಸ್ವಾತಂತ್ರ್ಯವೂ ಇಲ್ಲದೆ, ಅವೆಲ್ಲವನ್ನೂ ಕಟ್ಟುನಿಟ್ಟಾಗಿ ನಿರಾಕರಿಸಲಾಗಿರುತ್ತದೆ. ಇವುಗಳು ‘ಅಸ್ಪೃಶ್ಯ’ ಜಾತಿಗಳು; ಇವುಗಳ ಜೊತೆಗಿನ ಸಂಪರ್ಕ ‘ಜಾತಿ ಹಿಂದೂಗಳ’ನ್ನು ಅಪವಿತ್ರಗೊಳಿಸುವ ಆತಂಕ ಉಂಟು ಮಾಡುವಂಥದ್ದಾಗಿರುತ್ತದೆ.

ಈ ಜಾತಿ ಶ್ರೇಣೀಕರಣದ ತುತ್ತ ತುದಿಯಲ್ಲಿ ಬ್ರಾಹ್ಮಣ ಜಾತಿಗಳವರಿದ್ದಾರೆ. ಅವರು ತಮ್ಮನ್ನು ತಾವು ಭೂಲೋಕದ ಮೇಲಿನ ದೇವರುಗಳೆಂದು ಪರಿಗಣಿಸಿಕೊಳ್ಳುತ್ತಾರೆ. ಇನ್ನಿತರ ಎಲ್ಲ ಗಂಡು ಹೆಣ್ಣುಗಳೂ ಅವರ ಸೇವೆ ಮಾಡಲು ಹುಟ್ಟಿದವರಾಗಿದ್ದಾರೆ; ಅಥವಾ ಹಾಗೆಂದು ಬ್ರಾಹ್ಮಣರು ನಂಬುತ್ತಾರೆ. ಆದ್ದರಿಂದ ಅವರು, ಈ ತಮ್ಮ ‘ಸೇವಕ’ರ ಸಂಪೂರ್ಣ ಭಕ್ತಿ ಮತ್ತು ನಿಷ್ಠೆಯನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದೇವೆಂದು ಭಾವಿಸಿಕೊಂಡಿದ್ದಾರೆ. ತಾವು ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಹಿಂದೂ ಧರ್ಮಗ್ರಂಥಗಳನ್ನು ರಚಿಸಿರುವ ತಮ್ಮ ಶ್ರೇಷ್ಠತೆ ಕಾರಣವೆಂದು ಬ್ರಾಹ್ಮಣರು ನಂಬಿದ್ದಾರೆ-ಆ ಪವಿತ್ರ ಹಿಂದೂ ಧರ್ಮಗ್ರಂಥಗಳು ಎಂತಹ ಕಟ್ಟುನಿಟ್ಟಿನ ಪಾಠಗಳನ್ನು ಬೋಧಿಸಿದರೂ ಕೂಡಾ.

ಇನ್ನೊಂದೆಡೆ ಅಬ್ರಾಹ್ಮಣರು ಸಾಕಷ್ಟು ಪ್ರಮಾಣದ ಆಸ್ತಿ ಮತ್ತು ಶಿಕ್ಷಣದ ಮೇಲಿನ ಅಧಿಕಾರವಿಲ್ಲದ ಕಾರಣದಿಂದಾಗಿ ಹಿಂದುಳಿದವರಾಗಿಯೇ ಇದ್ದಾರೆ. ಅವರು ಹಿಂದುಳಿದಿದ್ದಾರೆ ಎಂಬುದು ನಿಜ. ಆದರೆ ಆ ಹಿಂದುಳಿದಿರುವಿಕೆಯು ಸಂಪೂರ್ಣ ಇಲ್ಲದಿರುವಿಕೆಯಿಂದ ಉಂಟಾಗುವಂತಹ ಸಂಕಟವನ್ನು ಉಂಟುಮಾಡಲೇಬೇಕೆಂದೇನಿಲ್ಲ. ಏಕೆಂದರೆ, ಹಿಂದೂ ಅಬ್ರಾಹ್ಮಣರಿಗೆ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಕೃಷಿಯ ಉತ್ಪನ್ನಗಳು, ಕೈಗಾರಿಕೆಗಳ ಉದ್ಯೋಗಗಳು, ವ್ಯಾಪಾರ ಮತ್ತು ವಾಣಿಜ್ಯ, ಕುಲಕಸುಬುಗಳು ಇವೇ ಮೊದಲಾದ ಜೀವನೋಪಾಯದ ಮಾರ್ಗಗಳು ಅವರಿಗೆ ತೆರೆದಿರುತ್ತವೆ. ಎಲ್ಲಕ್ಕಿಂತ ಕೆಟ್ಟರೀತಿಯಲ್ಲಿ ಜಾತಿ ವ್ಯವಸ್ಥೆಗೆ ಬಲಿಪಶುಗಳಾಗಿರುವವರು ‘ಬಹಿಷ್ಕೃತ’ರು. ಅವರು ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ದುರ್ಬಲ ಸ್ಥಾನಗಳಲ್ಲಿರುವಂತೆ ಅಂದುಕೊಳ್ಳುವಂತಹ ಸ್ಥಿತಿ ಇರುತ್ತದೆ-ಆತ್ಮಸಮ್ಮಾನ ಮತ್ತು ಭೌತಿಕ ಬದುಕಿನಲ್ಲಿ ಕೊರತೆಯುಳ್ಳವರಾಗಿ, ದುರ್ಬಲರಾಗಿ ಮತ್ತು ಕಡಿಮೆ ದರ್ಜೆಯವರಾಗಿ ಪಡಿಗಣಿಸಿಕೊಳ್ಳುತ್ತಾರೆ. ಅವರ ಈ ದುಸ್ಥಿತಿಯು ಪ್ರಜ್ಞಾಪೂರ್ವಕವಾಗಿ ಎತ್ತಿತೋರಿಸಲೇ ಬೇಕಾಗಿರುವಂಥದ್ದು. ಅವರ ಮುಕ್ತಿಯ ಏಕೈಕ ಸಾಧ್ಯತೆ ಇರುವುದು ಅವರ ಸ್ವಯಂ ಸಬಲೀಕರಣದಲ್ಲಿ. ಸಂತೋಷದ ಸಂಗತಿಯೆಂದರೆ, ಈ ಬೆಳವಣಿಗೆ ಈಗ ಆರಂಭವಾಗಿದೆ.

ಆದರೆ ಅವರ ಸಮಸ್ಯೆಗಳು ಇನ್ನೂ ಸಾಕಷ್ಟಿವೆ. ದುರದೃಷ್ಟದ ಸಂಗತಿಯೆಂದರೆ, ಬಹಿಷ್ಕೃತರನ್ನು ಕಾಡುತ್ತಿರುವ ಅನೇಕಾನೇಕ ಸಮಸ್ಯೆಗಳನ್ನು ನೇರವಾಗಿ ಮತ್ತು ನಿರ್ಭೀತವಾಗಿ ಮುನ್ನೆಲೆಗೆ ತರಲು ಸಿದ್ಧವಾಗಿರುವ ಸಾಂಸ್ಥಿಕ ವೇದಿಕೆಗಳು ಅಥವಾ ಸಂವಹನ ಮಾಧ್ಯಮಗಳು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ‘ಕೆಳಜಾತಿ’ಗಳೆಂದು ಕರೆಯಲ್ಪಟ್ಟಿರುವ ಸಮುದಾಯಗಳಿಗೆ ಸೇರಿದ ಜನರ ಸಮಸ್ಯೆಗಳನ್ನು ಪಡಿಹರಿಸಬೇಕಾದ ಅಗತ್ಯವನ್ನು ಒತ್ತಿಹೇಳುವಂತಹ ವಿಷಯಗಳಿಗೆ ಸಂಬಂಧಪಟ್ಟ ಸಂಗತಿಗಳನ್ನು ಬರೆಯುವ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಯಾವ ಪತ್ರಿಕೆಗಳು ಕೂಡಾ ‘ಅಸ್ಪೃಶ್ಯರ’ ಹಕ್ಕುಗಳಿಗೆ ಸಂಬಂದಿಸಿದ ವಿಚಾರಗಳಿಗೆ ಪ್ರತ್ಯೇಕವಾದ ಗಮನ ಕೊಡುವುದಿಲ್ಲ. ಈ ನಿರ್ವಾತವನ್ನು ತುಂಬಬೇಕೆಂಬ ಉದ್ದೇಶದಿಂದಲೇ, ‘ಮೂಕನಾಯಕ’ ಎಂಬ ನಿಯತಕಾಲಿಕವನ್ನು ಆರಂಭಿಸುವ ಯೋಜನೆ ರೂಪಿಸಲಾಯಿತು ಮತ್ತು ಪತ್ರಿಕೆಯ ವಿತರಣೆಗೆ ಚಾಲನೆ ನೀಡಲಾಯಿತು.

· ಮರಾಠಿಯಿಂದ ಹಿಂದಿ ಅನುವಾದ: ಪ್ರೊ.ಶಿಯೋರಾಜ್ ಸಿಂಗ್ ಬೇಚೈನ್, ಹಿಂದಿ ವಿಭಾಗ, ದೆಹಲಿ ವಿಶ್ವವಿದ್ಯಾಲಯ.

· ಹಿಂದಿಯಿಂದ ಇಂಗ್ಲೀಷಿಗೆ ಅನುವಾದ: ಪ್ರೊ. ತಪನ್ ಬಸು, ಇಂಗ್ಲೀಷ್ ವಿಭಾಗ ದೆಹಲಿ ವಿಶ್ವವಿದ್ಯಾಲಯ

· ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ: ಮಲ್ಲಿಗೆ ಸಿರಿಮನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...