Homeಮುಖಪುಟ‘ಮೂಕನಾಯಕ - 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

‘ಮೂಕನಾಯಕ – 100’ : ತಮ್ಮ ಪತ್ರಿಕೆಗೆ ಬಾಬಾ ಸಾಹೇಬರು ಬರೆದ ಮೊದಲ ಸಂಪಾದಕೀಯ..

1920ರಲ್ಲಿ ತಮ್ಮ ಮೊದಲ ಪತ್ರಿಕಾ ಪ್ರಯೋಗವಾಗಿ ಅಂಬೇಡ್ಕರ್‌ ಅವರು ಆರಂಭಿಸಿದ್ದ ’ಮೂಕನಾಯಕ’ ಪತ್ರಿಕೆಗೆ ಇಲ್ಲಿಗೆ ನೂರು ವರ್ಷ ತುಂಬಿದೆ. ಆ ನೆನಪಿನಲ್ಲಿ...

- Advertisement -
- Advertisement -

ಡಾ ಅಂಬೇಡ್ಕರ್ ಅವರು 100 ವರ್ಷಗಳ ಹಿಂದೆ ಆರಂಭಿಸಿದ್ದ ‘ಮೂಕನಾಯಕ’ ಮರಾಠಿ ಪತ್ರಿಕೆಯ ಶತಮಾನೋತ್ಸವದ ಸಂದರ್ಭದಲ್ಲಿ, ಅದರ ಉದ್ಘಾಟನಾ ಸಂಚಿಕೆಯಲ್ಲಿ ಡಾ. ಅಂಬೇಡ್ಕರ್ ಅವರು ಬರೆದಿದ್ದ ಲೇಖನದ ಸಂಕ್ಷಿಪ್ತ ಅನುವಾದ ಇಲ್ಲಿದೆ. ಈ ಬರಹದಲ್ಲಿ, ಬಾಬಾಸಾಹೇಬರು ಜಾತಿ ತಾರತಮ್ಯದ ವಿರುದ್ಧ ನೇರವಾಗಿ ದಾಳಿ ನಡೆಸಿದ್ದಾರೆ.

‘ಮೂಕನಾಯಕ’ ವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊದಲ ಪತ್ರಿಕಾ ಪ್ರಯೋಗ. ಈ ಪಾಕ್ಷಿಕ ಪತ್ರಿಕೆಯನ್ನು ಅವರು ತಮ್ಮ ಮಾರ್ಗದರ್ಶಕರಾದ ಶಾಹೂಜಿ ಮಹಾರಾಜ್ ಅವರ ನೆರವಿನಿಂದ 1920ರಲ್ಲಿ ಆರಂಭಿಸಿದರು. ಇದನ್ನು ಆರಂಭಿಸುವುದರ ಹಿಂದೆ ಅಂಬೇಡ್ಕರ್ ಅವರಿಗಿದ್ದ ಉದ್ದೇಶ, ಈವರೆಗೆ ಮುಖ್ಯವಾಹಿನಿಯ ಹಿಂದಿ ಪತ್ರಿಕೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿದ್ದ ತನ್ನ ಅನಿಸಿಕೆಗಳನ್ನು ಮುಂದಿಡುವುದಾಗಿತ್ತು. ಈ ಅನಿಸಿಕೆಗಳು ಸ್ವರಾಜ್ಯ, ‘ಅಸ್ಪೃಶ್ಯ’ರ ಶಿಕ್ಷಣ, ಅಸ್ಪೃಶ್ಯತೆಯ ಕೇಡು- ಇವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದವುಗಳಾಗಿದ್ದವು.

ಮೂಕನಾಯಕ ಪತ್ರಿಕೆ ಮೂರು ವರ್ಷ ಚಾಲ್ತಿಯಲ್ಲಿತ್ತು. ಈ ಬರಹವು, 1920ರ ಜನವರಿ 31ರಂದು ಪ್ರಕಟವಾದ ಮೂಕನಾಯಕದ ಮೊಟ್ಟಮೊದಲ ಸಂಚಿಕೆಯ ಸಂಪಾದಕೀಯದ ಸಂಕ್ಷಿಪ್ತ ಅನುವಾದ.

ನಮ್ಮ ದೇಶವನ್ನು ರೂಪಿಸಿರುವ ಎಲ್ಲ ಅಂಶಗಳ-ಮನುಷ್ಯ ಮೂಲದ್ದು ಮತ್ತು ಮನುಷ್ಯೇತರ ಮೂಲದ್ದು, ಎಲ್ಲದರ-ಒಟ್ಟು ಮೊತ್ತವನ್ನು ಯಾರಾದರೂ ಲೆಕ್ಕ ಹಾಕಿದ್ದೇ ಆದರೆ, ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಕಂಡುಬರುವುದೇನೆಂದರೆ, ಭಾರತದ ರಚನೆಯನ್ನು ರೂಪಿಸುವ ಅನೇಕ ಬಗೆಯ ಅಸಮಾನತೆಗಳಿಂದಲೇ ಅದು ಗುರುತಿಸಲ್ಪಡುತ್ತದೆ ಎಂಬುದು. ಅಂತಹ ಎಲ್ಲ ಅಸಮಾನತೆಗಳಲ್ಲಿ, ಬದುಕಿನ ಭೌತಿಕ ಮಟ್ಟದಲ್ಲೇ ಕಂಡುಬರುವ ತೀವ್ರರೂಪದ ಅಸಮಾನತೆಯು ಅತ್ಯಂತ ನಾಚಿಕೆಗೇಡಿನದ್ದು.

ಭಾರತೀಯರು ಹಲವು ಬಗೆಯ ಭೇಧಗಳಿಂದಾಗಿ ವಿಭಾಗಿಸಲ್ಪಟ್ಟಿದ್ದರೂ, ಧಾರ್ಮಿಕ ಸಹಭಾಗಿತ್ವದ ಕಾರಣಕ್ಕೆ ಉಂಟಾಗುವ ವಿಭಜನೆಯು ಅವುಗಳಲ್ಲೆಲ್ಲ ಅತ್ಯಂತ ಅಪಾಯಕರ ಸ್ವರೂಪದ್ದು. ಇದು ದೈಹಿಕ ಅಥವಾ ಬೌದ್ಧಿಕ ಕಾರಣಗಳಿಂದ ಉಂಟಾಗುವ ಬೇಧಗಳಿಗಿಂತ ಅತಿಹೆಚ್ಚು ಅಪಾಯಕರ. ಅನೇಕ ಸಲ, ಈ ಧಾರ್ಮಿಕ ನೆಲೆಯಿಂದುಂಟಾಗುವ ಬೇಧಗಳು ಎಂತಹ ವಿಪರೀತದ ವರ್ತನೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆಂದರೆ, ಅವೇ ರಕ್ತಪಾತದ ಮೂಲಗಳಾಗಿರುತ್ತವೆ. ಹಿಂದೂಗಳು, ಪಾರ್ಸಿಗಳು, ಯಹೂದೀಯರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು- ಇವರುಗಳ ನಡುವೆ ಹಾಗೂ ಇನ್ನೂ ಅನೇಕ ಧಾರ್ಮಿಕ ಪಂಥಗಳ ನಡುವೆ ಇರುವ ಭಿನ್ನತೆಗಳು ಹಲವು ರೂಪಗಳನ್ನು ಪಡೆದುಕೊಂಡಿವೆ. ಆದರೆ, ಹಿಂದೂಗಳಲ್ಲೇ ಇರುವ ಬೇರೆ ಬೇರೆ ಸ್ತರಗಳನ್ನು ಹತ್ತಿರದಿಂದ ಪರಿಶೀಲಿಸಿದಾಗ ಕಂಡುಬರುವ ಸಂಪೂರ್ಣ ಪ್ರತ್ಯೇಕತೆ ನಿಜಕ್ಕೂ ಖಂಡನೀಯ ಮತ್ತು ನಂಬಲಸಾಧ್ಯ!

ಒಬ್ಬ ಯುರೋಪಿಯನನ್ನು ನೀನು ಯಾರೇಂದು ಪ್ರಶ್ನಿಸಿದರೆ, ತನ್ನ ರಾಷ್ಟ್ರೀಯತೆಯನ್ನು ಗುರುತಿಸಿ ಆತ ನೀಡುವ ಉತ್ತರ-ಇಂಗ್ಲೀಷ್, ಜರ್ಮನ್, ಫ್ರೆಂಚ್ ಅಥವಾ ಇಟಾಲಿಯನ್ ಎಂಬುದು-ಅದು ಯಾವುದೇ ಆಗಿದ್ದರೂ ಸಮಸ್ಯೆಯನ್ನು ಪರಿಹರಿಸಲು ಸಾಕಾಗುತ್ತದೆ. ಇದೇ ಸಂಗತಿಯನ್ನು ಹೀಗೆಯೇ ಹಿಂದೂ ಧರ್ಮದ ಬೇರೆ ಬೇರೆ ಸ್ತರಗಳಿಗೆ ಸೇರಿದ ಜನರ ಬಗ್ಗೆ ಹೇಳಲು ಸಾಧ್ಯವಿಲ್ಲ. ‘ನಾನೊಬ್ಬ ಹಿಂದೂ’ ಎಂಬ ಉತ್ತರದಿಂದ ಯಾರೋಬ್ಬರಿಗೂ ಸಮಾಧಾನ ದೊರೆಯಲಾರದು. ಒಬ್ಬ ಹಿಂದೂ ತನ್ನ ನಿರ್ದಿಷ್ಟ ಗುರುತನ್ನು ಹೇಳಿಕೊಳ್ಳಬೇಕಾದರೆ, ತನ್ನ ಜಾತಿಯನ್ನು ಗುರುತಿಸಿ ಹೇಳುವುದು ಅತ್ಯಗತ್ಯವಾಗಿರುತ್ತದೆ.

ಹಿಂದೂ ಎಂಬ ಈ ಧರ್ಮವನ್ನು ರೂಪಿಸುವ ಜಾತಿಗಳು ಏಣಿಶ್ರೇಣಿಯ ರೂಪದಲ್ಲಿ ಶ್ರೇಣೀಕೃತವಾಗಿ ಜೋಡಿಸಲ್ಪಟ್ಟಿವೆ. ಹಿಂದೂ ಸಮುದಾಯವೆಂಬುದು ಒಂದು ಗೋಪುರ ಇದ್ದಂತೆ-ಅದರಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ಮಹಡಿಯನ್ನು ಕೊಡಲಾಗಿರುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಈ ಗೋಪುರದ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಮೆಟ್ಟಿಲುಗಳಿರುವುದಿಲ್ಲ ಅಥವಾ ಏಣಿ ಇರುವುದಿಲ್ಲ, ಆದ್ದರಿಂದ ಒಂದು ಮಹಡಿಯಲ್ಲಿರುವ ಯಾರೂ ಕೂಡಾ ಮೇಲಿನ ಮಹಡಿಗೆ ಹತ್ತುವ ಅಥವಾ ಕೆಳಗಿನ ಮಹಡಿಗೆ ಇಳಿಯುವ ಸಾಧ್ಯತೆ ಇರುವುದಿಲ್ಲ. ಯಾವ ಮಹಡಿಯಲ್ಲಿ ಯಾರು ಹುಟ್ಟಿದ್ದಾರೋ, ಅವರು ಅಲ್ಲಿಯೇ ಸಾಯುತ್ತಾರೆ. ಕೆಳಗಿನ ಮಹಡಿಯಲ್ಲಿ ಹುಟ್ಟಿರುವ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ, ಆತ ಮೇಲಿನ ಮಹಡಿಗೆ ಹತ್ತುವ ಯಾವುದೇ ಮಾರ್ಗ ಇರುವುದಿಲ್ಲ. ಅದೇ ರೀತಿ, ಒಬ್ಬ ವ್ಯಕ್ತಿ ಯಾವುದೇ ಬಗೆಯ ಪ್ರತಿಭೆ ಅಥವಾ ಜ್ಞಾನವನ್ನೂ ಹೊಂದಿದವನಲ್ಲದಿದ್ದರೂ, ತಾನು ಹುಟ್ಟಿರುವ ಮತ್ತು ತನಗೆ ವಹಿಸಲ್ಪಟ್ಟಿರುವ ಮಹಡಿಯಿಂದ ಕೆಳಗಿನ ಮಹಡಿಗೆ ಆತನನ್ನು ಇಳಿಸುವ ಯಾವ ಸಾಧ್ಯತೆಯೂ ಇರುವುದಿಲ್ಲ.

ಜಾತಿಗಳ ನಡುವಿನ ಅಂತರ್ ಸಂಬಂಧವು, ಮನುಷ್ಯನ ನಿಜವಾದ ಅರ್ಹತೆ ಅಥವಾ ಸತ್ವದೊಂದಿಗೆ ಯಾವುದೇ ತಾರ್ಕಿಕ ಸಂಬಂಧ ಹೊಂದಿರುವುದಿಲ್ಲ. ಒಬ್ಬ ಮೇಲ್ಜಾತಿಯ ವ್ಯಕ್ತಿಯು ಎಷ್ಟೇ ಅನರ್ಹನೂ ನಿಷ್ಪ್ರಯೋಜಕನೂ ಆದರೂ, ಆತ ಹುಟ್ಟಿದ ಜಾತಿಯು ಏಣಿಶ್ರೇಣಿಯಲ್ಲಿ ಮೇಲುಗಡೆಯಿರುವುದೇ ಆದಲ್ಲಿ, ಆತನ ಸಾಮಾಜಿಕ ಸ್ಥಾನಮಾನ ಯಾವಾಗಲೂ ಮೇಲಿನದ್ದಾಗಿಯೇ ಇರುತ್ತದೆ. ಅದೇ ರೀತಿ, ಒಬ್ಬ ಅರ್ಹನಾದ ಕೆಳಜಾತಿಯ ವ್ಯಕ್ತಿಯು ತನ್ನ ‘ಕೆಳ’ತನವನ್ನು ಕಳೆದುಕೊಳ್ಳಲು ಸಾಧ್ಯವಿರುವುದಿಲ್ಲ. ಕೆಳಜಾತಿ ಮತ್ತು ಮೇಲುಜಾತಿಯ ಜನರ ನಡುವೆ ಸಹಭೋಜನ ಮತ್ತು ಅಂತರ್‌ಜಾತಿ ವಿವಾಹಗಳ ಮೇಲೆ ವಿಧಿಸಲಾಗಿರುವ ಅತ್ಯಂತ ಕಟ್ಟುನಿಟ್ಟಿನ ನಿಷೇಧಗಳ ಕಾರಣಕ್ಕೆ, ಈ ಜಾತಿ ಸಂರಚನೆಗಳು ಸದಾ ಇತರ ಜಾತಿಗಳಿಂದ ಪ್ರತ್ಯೇಕಿತವಾಗಿಯೇ ಇರುತ್ತವೆ. ಒಂದು ವೇಳೆ ಆತ್ಮೀಯತೆಯ ಕೆಲವು ಸಂಬಂಧಗಳು, ಜಾತಿಯ ಪರಿಗಣನೆ ಅಥವಾ ಚೌಕಟ್ಟಿನ್ನು ಹೊರಗಡೆ ಇಟ್ಟು, ಅವುಗಳಿಂದ ಮುಕ್ತವಾಗಿ ರೂಪುಗೊಂಡಿದ್ದರೂ, ಆ ಸಂಬಂಧಗಳ ಮೇಲೆ ಕಠಿಣ ನಿಗರಾನಿ ಇಟ್ಟಿರಲಾಗುತ್ತದೆ. ಆ ಸಂಬಂಧಗಳು ಎಲ್ಲೂ ಜಾತಿಯ ಕಟ್ಟಳೆಗಳನ್ನು ಮುರಿದು ಮುಂದುವರೆಯದಂತೆ ಗಮನಿಸಲಾಗುತ್ತದೆ. ಕೆಲವೊಮ್ಮೆ, ಕೆಲವು ಜಾತಿಗಳಿಗೆ, ಈ ಜಾತಿ ಶ್ರೇಣೀಕರಣದ ಚೌಕಟ್ಟಿನೊಳಗಡೆಯೇ ಒಂದು ಸೀಮಿತವಾದ ‘ಚಲನೆ’ಗೆ ಅವಕಾಶ ನೀಡಲಾಗಿರಬಹುದು. ಆದರೆ, ‘ಅಪವಿತ್ರ’ ಎಂದು ಹಣೆಪಟ್ಟಿ ಕಟ್ಟಲಾದ ಅನೇಕ ಜಾತಿಗಳಿಗೆ, ಆ ಸಣ್ಣ ಪ್ರಮಾಣದ ಚಲನೆಯ ಸ್ವಾತಂತ್ರ್ಯವೂ ಇಲ್ಲದೆ, ಅವೆಲ್ಲವನ್ನೂ ಕಟ್ಟುನಿಟ್ಟಾಗಿ ನಿರಾಕರಿಸಲಾಗಿರುತ್ತದೆ. ಇವುಗಳು ‘ಅಸ್ಪೃಶ್ಯ’ ಜಾತಿಗಳು; ಇವುಗಳ ಜೊತೆಗಿನ ಸಂಪರ್ಕ ‘ಜಾತಿ ಹಿಂದೂಗಳ’ನ್ನು ಅಪವಿತ್ರಗೊಳಿಸುವ ಆತಂಕ ಉಂಟು ಮಾಡುವಂಥದ್ದಾಗಿರುತ್ತದೆ.

ಈ ಜಾತಿ ಶ್ರೇಣೀಕರಣದ ತುತ್ತ ತುದಿಯಲ್ಲಿ ಬ್ರಾಹ್ಮಣ ಜಾತಿಗಳವರಿದ್ದಾರೆ. ಅವರು ತಮ್ಮನ್ನು ತಾವು ಭೂಲೋಕದ ಮೇಲಿನ ದೇವರುಗಳೆಂದು ಪರಿಗಣಿಸಿಕೊಳ್ಳುತ್ತಾರೆ. ಇನ್ನಿತರ ಎಲ್ಲ ಗಂಡು ಹೆಣ್ಣುಗಳೂ ಅವರ ಸೇವೆ ಮಾಡಲು ಹುಟ್ಟಿದವರಾಗಿದ್ದಾರೆ; ಅಥವಾ ಹಾಗೆಂದು ಬ್ರಾಹ್ಮಣರು ನಂಬುತ್ತಾರೆ. ಆದ್ದರಿಂದ ಅವರು, ಈ ತಮ್ಮ ‘ಸೇವಕ’ರ ಸಂಪೂರ್ಣ ಭಕ್ತಿ ಮತ್ತು ನಿಷ್ಠೆಯನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದೇವೆಂದು ಭಾವಿಸಿಕೊಂಡಿದ್ದಾರೆ. ತಾವು ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಹಿಂದೂ ಧರ್ಮಗ್ರಂಥಗಳನ್ನು ರಚಿಸಿರುವ ತಮ್ಮ ಶ್ರೇಷ್ಠತೆ ಕಾರಣವೆಂದು ಬ್ರಾಹ್ಮಣರು ನಂಬಿದ್ದಾರೆ-ಆ ಪವಿತ್ರ ಹಿಂದೂ ಧರ್ಮಗ್ರಂಥಗಳು ಎಂತಹ ಕಟ್ಟುನಿಟ್ಟಿನ ಪಾಠಗಳನ್ನು ಬೋಧಿಸಿದರೂ ಕೂಡಾ.

ಇನ್ನೊಂದೆಡೆ ಅಬ್ರಾಹ್ಮಣರು ಸಾಕಷ್ಟು ಪ್ರಮಾಣದ ಆಸ್ತಿ ಮತ್ತು ಶಿಕ್ಷಣದ ಮೇಲಿನ ಅಧಿಕಾರವಿಲ್ಲದ ಕಾರಣದಿಂದಾಗಿ ಹಿಂದುಳಿದವರಾಗಿಯೇ ಇದ್ದಾರೆ. ಅವರು ಹಿಂದುಳಿದಿದ್ದಾರೆ ಎಂಬುದು ನಿಜ. ಆದರೆ ಆ ಹಿಂದುಳಿದಿರುವಿಕೆಯು ಸಂಪೂರ್ಣ ಇಲ್ಲದಿರುವಿಕೆಯಿಂದ ಉಂಟಾಗುವಂತಹ ಸಂಕಟವನ್ನು ಉಂಟುಮಾಡಲೇಬೇಕೆಂದೇನಿಲ್ಲ. ಏಕೆಂದರೆ, ಹಿಂದೂ ಅಬ್ರಾಹ್ಮಣರಿಗೆ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಕೃಷಿಯ ಉತ್ಪನ್ನಗಳು, ಕೈಗಾರಿಕೆಗಳ ಉದ್ಯೋಗಗಳು, ವ್ಯಾಪಾರ ಮತ್ತು ವಾಣಿಜ್ಯ, ಕುಲಕಸುಬುಗಳು ಇವೇ ಮೊದಲಾದ ಜೀವನೋಪಾಯದ ಮಾರ್ಗಗಳು ಅವರಿಗೆ ತೆರೆದಿರುತ್ತವೆ. ಎಲ್ಲಕ್ಕಿಂತ ಕೆಟ್ಟರೀತಿಯಲ್ಲಿ ಜಾತಿ ವ್ಯವಸ್ಥೆಗೆ ಬಲಿಪಶುಗಳಾಗಿರುವವರು ‘ಬಹಿಷ್ಕೃತ’ರು. ಅವರು ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ದುರ್ಬಲ ಸ್ಥಾನಗಳಲ್ಲಿರುವಂತೆ ಅಂದುಕೊಳ್ಳುವಂತಹ ಸ್ಥಿತಿ ಇರುತ್ತದೆ-ಆತ್ಮಸಮ್ಮಾನ ಮತ್ತು ಭೌತಿಕ ಬದುಕಿನಲ್ಲಿ ಕೊರತೆಯುಳ್ಳವರಾಗಿ, ದುರ್ಬಲರಾಗಿ ಮತ್ತು ಕಡಿಮೆ ದರ್ಜೆಯವರಾಗಿ ಪಡಿಗಣಿಸಿಕೊಳ್ಳುತ್ತಾರೆ. ಅವರ ಈ ದುಸ್ಥಿತಿಯು ಪ್ರಜ್ಞಾಪೂರ್ವಕವಾಗಿ ಎತ್ತಿತೋರಿಸಲೇ ಬೇಕಾಗಿರುವಂಥದ್ದು. ಅವರ ಮುಕ್ತಿಯ ಏಕೈಕ ಸಾಧ್ಯತೆ ಇರುವುದು ಅವರ ಸ್ವಯಂ ಸಬಲೀಕರಣದಲ್ಲಿ. ಸಂತೋಷದ ಸಂಗತಿಯೆಂದರೆ, ಈ ಬೆಳವಣಿಗೆ ಈಗ ಆರಂಭವಾಗಿದೆ.

ಆದರೆ ಅವರ ಸಮಸ್ಯೆಗಳು ಇನ್ನೂ ಸಾಕಷ್ಟಿವೆ. ದುರದೃಷ್ಟದ ಸಂಗತಿಯೆಂದರೆ, ಬಹಿಷ್ಕೃತರನ್ನು ಕಾಡುತ್ತಿರುವ ಅನೇಕಾನೇಕ ಸಮಸ್ಯೆಗಳನ್ನು ನೇರವಾಗಿ ಮತ್ತು ನಿರ್ಭೀತವಾಗಿ ಮುನ್ನೆಲೆಗೆ ತರಲು ಸಿದ್ಧವಾಗಿರುವ ಸಾಂಸ್ಥಿಕ ವೇದಿಕೆಗಳು ಅಥವಾ ಸಂವಹನ ಮಾಧ್ಯಮಗಳು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ‘ಕೆಳಜಾತಿ’ಗಳೆಂದು ಕರೆಯಲ್ಪಟ್ಟಿರುವ ಸಮುದಾಯಗಳಿಗೆ ಸೇರಿದ ಜನರ ಸಮಸ್ಯೆಗಳನ್ನು ಪಡಿಹರಿಸಬೇಕಾದ ಅಗತ್ಯವನ್ನು ಒತ್ತಿಹೇಳುವಂತಹ ವಿಷಯಗಳಿಗೆ ಸಂಬಂಧಪಟ್ಟ ಸಂಗತಿಗಳನ್ನು ಬರೆಯುವ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಯಾವ ಪತ್ರಿಕೆಗಳು ಕೂಡಾ ‘ಅಸ್ಪೃಶ್ಯರ’ ಹಕ್ಕುಗಳಿಗೆ ಸಂಬಂದಿಸಿದ ವಿಚಾರಗಳಿಗೆ ಪ್ರತ್ಯೇಕವಾದ ಗಮನ ಕೊಡುವುದಿಲ್ಲ. ಈ ನಿರ್ವಾತವನ್ನು ತುಂಬಬೇಕೆಂಬ ಉದ್ದೇಶದಿಂದಲೇ, ‘ಮೂಕನಾಯಕ’ ಎಂಬ ನಿಯತಕಾಲಿಕವನ್ನು ಆರಂಭಿಸುವ ಯೋಜನೆ ರೂಪಿಸಲಾಯಿತು ಮತ್ತು ಪತ್ರಿಕೆಯ ವಿತರಣೆಗೆ ಚಾಲನೆ ನೀಡಲಾಯಿತು.

· ಮರಾಠಿಯಿಂದ ಹಿಂದಿ ಅನುವಾದ: ಪ್ರೊ.ಶಿಯೋರಾಜ್ ಸಿಂಗ್ ಬೇಚೈನ್, ಹಿಂದಿ ವಿಭಾಗ, ದೆಹಲಿ ವಿಶ್ವವಿದ್ಯಾಲಯ.

· ಹಿಂದಿಯಿಂದ ಇಂಗ್ಲೀಷಿಗೆ ಅನುವಾದ: ಪ್ರೊ. ತಪನ್ ಬಸು, ಇಂಗ್ಲೀಷ್ ವಿಭಾಗ ದೆಹಲಿ ವಿಶ್ವವಿದ್ಯಾಲಯ

· ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ: ಮಲ್ಲಿಗೆ ಸಿರಿಮನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರಿನ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...

ಕಾವೇರಿ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ಹೇಳಿಕೆ : ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉದಯನಿಧಿ ಬಂಧನಕ್ಕೂ...

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...