Homeಮುಖಪುಟಆತ್ಮಹತ್ಯೆಯೊಂದರ ಅನಾಥ ಕಥನ!

ಆತ್ಮಹತ್ಯೆಯೊಂದರ ಅನಾಥ ಕಥನ!

- Advertisement -
- Advertisement -

ಅವತ್ತು ಮಾರ‍್ನಾಮಿ ಹಬ್ಬ. ಹಟ್ಟಿಯೆಲ್ಲಾ ದಸರಾ ನೋಡಲು ಖಾಲಿಯಾಗಿತ್ತು. ಅವ್ವ ಮಾತ್ರ ಮನೆಯಲ್ಲಿದ್ದಳು. ಸೂರ್ಯ ಮುಳುಗಿ ಜೋಪಡಿಯ ಮೋಟು ಗೋಡೆಯ ಮೇಲೆ ಚಿಮಣಿ ಬುಡ್ಡಿ ಈಗಲೂ.. ಆಗಲೂ….. ಎಂಬಂತೆ ಉಸಿರು ಉಯ್ಯುತ್ತಿತ್ತು. ಒಲೆ ಊದುತ್ತಾ ಉಸಿರುಗಟ್ಟಿಕೊಂಡೆ ಮಡಿಕೆಯಲ್ಲಿ ಮುದ್ದೆ ತಿರುವುತ್ತಿದ್ದ ಅವ್ವನ ಮುಖದಲ್ಲಿ ಕಣ್ಣೀರು,ಬೆವರು ಒಂದಾಗಿ ಉಕ್ಕುತ್ತಿದ್ದವು. ಮತ್ತೆ ಮತ್ತೆ ಸೆರಗಿಗೆ ಕಣ್ಣೀರು,ಬೆವರ ಕುಡಿಸುತ್ತಾ ಒಲೆಯ ಉರಿಯಲ್ಲಿ ಬೇಯುತ್ತಿದ್ದಳು.

ತಿನ್ನೋ ..ಉಣ್ಣೊ ಐದು ಮಕ್ಕಳ ಮನೆ ಅದು. ಗಂಡ-ಹೆಂಡ್ತಿ ಇಬ್ರೂ ಕೂಲಿ- ನಾಲಿ ದುಡಿದ್ರೂ ಸಾಲ ತೀರೋದಿರ‍್ಲಿ. ಮಕ್ಕಳಿಗೆ ಮೂರು ಹೊತ್ತು ಮುದ್ದೆ ಉಣ್ಸೋಕೂ ಆಗ್ತಿರ‍್ಲಿಲ್ಲ. ಇನ್ನೂ ಮಕ್ಕಳ ಓದು, ಬಟ್ಟೆ-ಬರೆ ….ಇವೆಕ್ಕೆಲ್ಲಾ …..ಎಲ್ಲಿಂದ ಹೊಂಚೋದೊ. ಮನೆ ಬಾಗಿಲು ತುಳಿದು ತುಳಿದು ಹೋಗಿದ್ದ ಸಾಲಗಾರ ಗಡುವು ಕೊಟ್ಟಿದ್ದ. ದಣಿವರಿಯದೆ ದುಡಿವ ಅಪ್ಪ ಸಾಲಕ್ಕೆ ಕುಗ್ಗಿ ಹೋಗಿದ್ದ.

ಅಲ್ಲೆ ಎಲ್ಲೋ ಓಣಿಯೊಳಗೆ ಮಕ್ಳೆಲ್ಲಾ ಆಡೋಕೋಗಿದ್ದೋ. ಬೆಳಗ್ಗೆ ಎದ್ದು ಹೋದ ಅಪ್ಪನ ದಾರಿಯನ್ನೆ ಅವ್ವ ಕಾಯುತ್ತಿದ್ದಳು. ಕತ್ತಲು ಗಾಢವಾಗಿ ಕವಿಯುತ್ತಲೆ ಇತ್ತು. ನಡುಮನೆಯಲ್ಲಿ ಕುಳಿತರೆ ಅವ್ವನ ಅಡುಗೆ ಮನೆಗೆ ಕಾಲು ಚಾಚುತ್ತವೆ. ಇಂತಹ ನಡುಮನೆಗೆ ಅಪ್ಪ ಬಂದದ್ದು ಅವ್ವನಿಗೆ ಸುಳಿವೆ ಸಿಕ್ಕಲಿಲ್ಲ. ಮೋಟು ಬೀಡಿಯ ನಾತವಾದರೂ ಬರಬೇಕಿತ್ತು. ಅದೂ ಇಲ್ಲ; ಅವಳಿನ್ನೂ ಮುದ್ದೆ ತಿರುವುತ್ತಾ ಒಲೆ ಮುಂದೆ ಬೇಯುತ್ತಲೆ ಇದ್ದಳು. ದಬ್ಬೆ ಗೋಡೆಯ ಮೂಲೆಗೊರಗಿದ್ದ ಅಪ್ಪನ ಕಣ್ಣ ಮುಂದೆ ದಾರಿಗಳೆಲ್ಲಾ ಕತ್ತಲು ಕವಿದು ಕಾಣದಂತಾಗಿದ್ದವು. ಅವನಾಗಲೇ ಹತಾಶೆಗೆ ಜಾರಿಬಿಟ್ಟಿದ್ದ. ಅದೆಲ್ಲಿ ಸಂಪಾದಿಸಿ ತಂದಿದ್ದನೊ..?ಏನೋ…..? ಹತ್ತಿ ಗಿಡಕ್ಕೆ ಹೊಡೆಯೋ ಔಸತಿ. ಸದ್ದಿಲ್ಲದೆ ಕುಡಿದು ಕೆಮ್ಮಿ ಹೊರಳಾಡಿದಾಗಲೆ ಅವ್ವ ಎಚ್ರವಾದ್ಳು.

ಎದೆ ಎದೆ ಬಡಿದುಕೊಂಡು ಬಾರಾಡಿದಳು ಅಪ್ಪನನ್ನು ತಬ್ಬಿಕೊಂಡು. ಮೆಗ್ಗಾನ್ ಆಸ್ಪತ್ರೆಗೆ ಹೊತ್ತೊಯ್ದು ಕೂಡಿದಳು. ಡಾಕ್ಟ್ರು, ನರ್ಸುಗಳಿಗೆಲ್ಲಾ ಕಾಲಿಡಿದು ಕಾಡಾಡಿಬಿಟ್ಟಳು. ಎದೆಮೂಳೆ ಚಕ್ಕಳ ಬಿಟ್ಟುಕೊಂಡು ಒಣಗಿದ ಬಿದಿರು ದಬ್ಬೆಯಂತಿದ್ದ ಅಪ್ಪ ಸಾವಿನ ಜೊತೆ ವೀರಕಲಿಯಂತೆ ರಣಯುದ್ಧವನ್ನೆ ಮಾಡುತ್ತಿದ್ದ. ಏಳೆಂಟು ವರ್ಷದ ನಾನು ಕಿಟಕಿಗೆ ಆತುಕೊಂಡು ನಿಂತು ಅಪ್ಪನ ಪರದಾಟವನ್ನು ದೃಷ್ಟಿ ಕದಲಿಸದಂತೆ ನೋಡುತ್ತಲೆ ಇದ್ದೆ.

ಅಪ್ಪನ ಕೊರಳಿಗೆ ಪಾಶ ಬಿಗಿದಿದ್ದ ಯಮನೊಂದಿಗೆ‌ ನನ್ನವ್ವ ರಣಚಂಡಿಯಂತೆ ಜಗಳಕ್ಕಿಳಿದು ಬಿಟ್ಟಿದ್ದಳು. ಹಗಲೂ ರಾತ್ರಿ …..ಕಾದಾಡಿದಳು. ಕೊನೆಗೂ ಗೆದ್ದಳು. ಯಮನಿಂದ ಸತ್ಯವಾನನ್ನು ಉಳಿಸಿಕೊಂಡ ಸಾವಿತ್ರಿಯಂತೆ. ಅಪ್ಪನಿಗೆ ಇನ್ನೆಂದೂ ಡಿಪ್ರೆಷನ್ ಹತ್ತಿರ ಸುಳಿಯದಂತೆ ಕಾದಳು. ಅಪ್ಪ ಹತ್ತಾರು ವರ್ಷ ಬದುಕಿದ. ಆತ್ಮಹತ್ಯೆ ಯ ಮಾತಾಡುವವರನ್ನು ಗದರಿಸಿ ಧೈರ್ಯ ತುಂಬುತ್ತಿದ್ದ. ದುಡಿದ, ಸಾಲ ತೀರಿಸಿದ. ಮಕ್ಕಳೆಲ್ಲಾ ಕೈಗೆ ಬಂದು ಸುಖ ಕಾಣುವ ಹೊತ್ತಿಗೆ ಚಿರನಿದ್ರೆಗೆ ಜಾರಿಬಿಟ್ಟ.

**********

ಉದಯೋನ್ಮುಖ ನಟ ಸುಶಾಂತ್ ರಜಪೂತ್‌‌ನ ಆತ್ಮಹತ್ಯೆಯೊಂದು sensation issue ಆಗಿ ಎಲ್ಲರೂ ಮಿಡಿಯುವಾಗ 35 ವರ್ಷಗಳ ಹಿಂದೆ ಅಜ್ಞಾತವಾಗಿದ್ದ ನನ್ನಪ್ಪನ ಆತ್ಮಹತ್ಯೆ ಯತ್ನದ ಅನಾಥ ಕತೆಯೊಂದು ನೆನಪಾಯಿತು.

ಈ ದೇಶದಲ್ಲಿ ಪ್ರತಿ 24 ಗಂಟೆಗೆ 28 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2018 ರ NCR ವರದಿಪ್ರಕಾರ
2018 ರಲ್ಲಿ 1.3 ಲಕ್ಷ ಜನ ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ಗಂಟೆಗೆ ಒಬ್ಬ ನಿರುದ್ಯೋಗಿ ಆತ್ಮಹತ್ಯೆಯ ಹಾದಿ ತುಳಿದು ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಸುತ್ತಾನೆ.

ಪ್ರೀತಿ, ಪ್ರೇಮ, ಕೌಟುಂಬಿಕ ಕಲಹದಂತಹ, ಕೇವಲ ವೈಯುಕ್ತಿಕ ಕಾರಣಗಳಷ್ಟೇ ಆತ್ಮಹತ್ಯೆ ಮಾಡಲು ಕಾರಣವಲ್ಲ. ಈ ದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳೂ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿವೆ. ಇಂತಹ ಕಾರಣಗಳು ಸೃಷ್ಟಿಸುವ Depression ಅಪಾಯಕಾರಿಯಾದದ್ದು.

ವಿಪರ್ಯಾಸವೆಂದರೆ ಇವ್ಯಾವು ಬೆಳಕಿಗೆ, ಚರ್ಚೆಗೆ, ಮರುಕಕ್ಕೆ, ಧಾರುಣ ದುಃಖಕ್ಕೆ ದಕ್ಕುವುದೇ ಇಲ್ಲ…… ಈ ಹೊತ್ತಿನ ಮಾಧ್ಯಮಗಳು ಅಭಿಪ್ರಾಯ ಉತ್ಪಾದಿಸುವಲ್ಲಿ (manufacturing consent) ಸದಾ choice ನ ರೇಸ್‌ನಲ್ಲಿರುತ್ತವೆ.

Any way, ಸುಶಾಂತ್ ನಿನ್ನದು ಸಾಯುವ ವಯಸ್ಸಲ್ಲ. ನಿನ್ನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಕೃತಿ ಕರುಣಿಸಲಿ.


ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರವನ್ನು ‘ಡಿಲೀಟ್’ ಮಾಡಿ: ಮಹಾರಾಷ್ಟ್ರ ಪೋಲಿಸರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...