Homeಮುಖಪುಟಆತ್ಮಹತ್ಯೆಯೊಂದರ ಅನಾಥ ಕಥನ!

ಆತ್ಮಹತ್ಯೆಯೊಂದರ ಅನಾಥ ಕಥನ!

- Advertisement -
- Advertisement -

ಅವತ್ತು ಮಾರ‍್ನಾಮಿ ಹಬ್ಬ. ಹಟ್ಟಿಯೆಲ್ಲಾ ದಸರಾ ನೋಡಲು ಖಾಲಿಯಾಗಿತ್ತು. ಅವ್ವ ಮಾತ್ರ ಮನೆಯಲ್ಲಿದ್ದಳು. ಸೂರ್ಯ ಮುಳುಗಿ ಜೋಪಡಿಯ ಮೋಟು ಗೋಡೆಯ ಮೇಲೆ ಚಿಮಣಿ ಬುಡ್ಡಿ ಈಗಲೂ.. ಆಗಲೂ….. ಎಂಬಂತೆ ಉಸಿರು ಉಯ್ಯುತ್ತಿತ್ತು. ಒಲೆ ಊದುತ್ತಾ ಉಸಿರುಗಟ್ಟಿಕೊಂಡೆ ಮಡಿಕೆಯಲ್ಲಿ ಮುದ್ದೆ ತಿರುವುತ್ತಿದ್ದ ಅವ್ವನ ಮುಖದಲ್ಲಿ ಕಣ್ಣೀರು,ಬೆವರು ಒಂದಾಗಿ ಉಕ್ಕುತ್ತಿದ್ದವು. ಮತ್ತೆ ಮತ್ತೆ ಸೆರಗಿಗೆ ಕಣ್ಣೀರು,ಬೆವರ ಕುಡಿಸುತ್ತಾ ಒಲೆಯ ಉರಿಯಲ್ಲಿ ಬೇಯುತ್ತಿದ್ದಳು.

ತಿನ್ನೋ ..ಉಣ್ಣೊ ಐದು ಮಕ್ಕಳ ಮನೆ ಅದು. ಗಂಡ-ಹೆಂಡ್ತಿ ಇಬ್ರೂ ಕೂಲಿ- ನಾಲಿ ದುಡಿದ್ರೂ ಸಾಲ ತೀರೋದಿರ‍್ಲಿ. ಮಕ್ಕಳಿಗೆ ಮೂರು ಹೊತ್ತು ಮುದ್ದೆ ಉಣ್ಸೋಕೂ ಆಗ್ತಿರ‍್ಲಿಲ್ಲ. ಇನ್ನೂ ಮಕ್ಕಳ ಓದು, ಬಟ್ಟೆ-ಬರೆ ….ಇವೆಕ್ಕೆಲ್ಲಾ …..ಎಲ್ಲಿಂದ ಹೊಂಚೋದೊ. ಮನೆ ಬಾಗಿಲು ತುಳಿದು ತುಳಿದು ಹೋಗಿದ್ದ ಸಾಲಗಾರ ಗಡುವು ಕೊಟ್ಟಿದ್ದ. ದಣಿವರಿಯದೆ ದುಡಿವ ಅಪ್ಪ ಸಾಲಕ್ಕೆ ಕುಗ್ಗಿ ಹೋಗಿದ್ದ.

ಅಲ್ಲೆ ಎಲ್ಲೋ ಓಣಿಯೊಳಗೆ ಮಕ್ಳೆಲ್ಲಾ ಆಡೋಕೋಗಿದ್ದೋ. ಬೆಳಗ್ಗೆ ಎದ್ದು ಹೋದ ಅಪ್ಪನ ದಾರಿಯನ್ನೆ ಅವ್ವ ಕಾಯುತ್ತಿದ್ದಳು. ಕತ್ತಲು ಗಾಢವಾಗಿ ಕವಿಯುತ್ತಲೆ ಇತ್ತು. ನಡುಮನೆಯಲ್ಲಿ ಕುಳಿತರೆ ಅವ್ವನ ಅಡುಗೆ ಮನೆಗೆ ಕಾಲು ಚಾಚುತ್ತವೆ. ಇಂತಹ ನಡುಮನೆಗೆ ಅಪ್ಪ ಬಂದದ್ದು ಅವ್ವನಿಗೆ ಸುಳಿವೆ ಸಿಕ್ಕಲಿಲ್ಲ. ಮೋಟು ಬೀಡಿಯ ನಾತವಾದರೂ ಬರಬೇಕಿತ್ತು. ಅದೂ ಇಲ್ಲ; ಅವಳಿನ್ನೂ ಮುದ್ದೆ ತಿರುವುತ್ತಾ ಒಲೆ ಮುಂದೆ ಬೇಯುತ್ತಲೆ ಇದ್ದಳು. ದಬ್ಬೆ ಗೋಡೆಯ ಮೂಲೆಗೊರಗಿದ್ದ ಅಪ್ಪನ ಕಣ್ಣ ಮುಂದೆ ದಾರಿಗಳೆಲ್ಲಾ ಕತ್ತಲು ಕವಿದು ಕಾಣದಂತಾಗಿದ್ದವು. ಅವನಾಗಲೇ ಹತಾಶೆಗೆ ಜಾರಿಬಿಟ್ಟಿದ್ದ. ಅದೆಲ್ಲಿ ಸಂಪಾದಿಸಿ ತಂದಿದ್ದನೊ..?ಏನೋ…..? ಹತ್ತಿ ಗಿಡಕ್ಕೆ ಹೊಡೆಯೋ ಔಸತಿ. ಸದ್ದಿಲ್ಲದೆ ಕುಡಿದು ಕೆಮ್ಮಿ ಹೊರಳಾಡಿದಾಗಲೆ ಅವ್ವ ಎಚ್ರವಾದ್ಳು.

ಎದೆ ಎದೆ ಬಡಿದುಕೊಂಡು ಬಾರಾಡಿದಳು ಅಪ್ಪನನ್ನು ತಬ್ಬಿಕೊಂಡು. ಮೆಗ್ಗಾನ್ ಆಸ್ಪತ್ರೆಗೆ ಹೊತ್ತೊಯ್ದು ಕೂಡಿದಳು. ಡಾಕ್ಟ್ರು, ನರ್ಸುಗಳಿಗೆಲ್ಲಾ ಕಾಲಿಡಿದು ಕಾಡಾಡಿಬಿಟ್ಟಳು. ಎದೆಮೂಳೆ ಚಕ್ಕಳ ಬಿಟ್ಟುಕೊಂಡು ಒಣಗಿದ ಬಿದಿರು ದಬ್ಬೆಯಂತಿದ್ದ ಅಪ್ಪ ಸಾವಿನ ಜೊತೆ ವೀರಕಲಿಯಂತೆ ರಣಯುದ್ಧವನ್ನೆ ಮಾಡುತ್ತಿದ್ದ. ಏಳೆಂಟು ವರ್ಷದ ನಾನು ಕಿಟಕಿಗೆ ಆತುಕೊಂಡು ನಿಂತು ಅಪ್ಪನ ಪರದಾಟವನ್ನು ದೃಷ್ಟಿ ಕದಲಿಸದಂತೆ ನೋಡುತ್ತಲೆ ಇದ್ದೆ.

ಅಪ್ಪನ ಕೊರಳಿಗೆ ಪಾಶ ಬಿಗಿದಿದ್ದ ಯಮನೊಂದಿಗೆ‌ ನನ್ನವ್ವ ರಣಚಂಡಿಯಂತೆ ಜಗಳಕ್ಕಿಳಿದು ಬಿಟ್ಟಿದ್ದಳು. ಹಗಲೂ ರಾತ್ರಿ …..ಕಾದಾಡಿದಳು. ಕೊನೆಗೂ ಗೆದ್ದಳು. ಯಮನಿಂದ ಸತ್ಯವಾನನ್ನು ಉಳಿಸಿಕೊಂಡ ಸಾವಿತ್ರಿಯಂತೆ. ಅಪ್ಪನಿಗೆ ಇನ್ನೆಂದೂ ಡಿಪ್ರೆಷನ್ ಹತ್ತಿರ ಸುಳಿಯದಂತೆ ಕಾದಳು. ಅಪ್ಪ ಹತ್ತಾರು ವರ್ಷ ಬದುಕಿದ. ಆತ್ಮಹತ್ಯೆ ಯ ಮಾತಾಡುವವರನ್ನು ಗದರಿಸಿ ಧೈರ್ಯ ತುಂಬುತ್ತಿದ್ದ. ದುಡಿದ, ಸಾಲ ತೀರಿಸಿದ. ಮಕ್ಕಳೆಲ್ಲಾ ಕೈಗೆ ಬಂದು ಸುಖ ಕಾಣುವ ಹೊತ್ತಿಗೆ ಚಿರನಿದ್ರೆಗೆ ಜಾರಿಬಿಟ್ಟ.

**********

ಉದಯೋನ್ಮುಖ ನಟ ಸುಶಾಂತ್ ರಜಪೂತ್‌‌ನ ಆತ್ಮಹತ್ಯೆಯೊಂದು sensation issue ಆಗಿ ಎಲ್ಲರೂ ಮಿಡಿಯುವಾಗ 35 ವರ್ಷಗಳ ಹಿಂದೆ ಅಜ್ಞಾತವಾಗಿದ್ದ ನನ್ನಪ್ಪನ ಆತ್ಮಹತ್ಯೆ ಯತ್ನದ ಅನಾಥ ಕತೆಯೊಂದು ನೆನಪಾಯಿತು.

ಈ ದೇಶದಲ್ಲಿ ಪ್ರತಿ 24 ಗಂಟೆಗೆ 28 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2018 ರ NCR ವರದಿಪ್ರಕಾರ
2018 ರಲ್ಲಿ 1.3 ಲಕ್ಷ ಜನ ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ಗಂಟೆಗೆ ಒಬ್ಬ ನಿರುದ್ಯೋಗಿ ಆತ್ಮಹತ್ಯೆಯ ಹಾದಿ ತುಳಿದು ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಸುತ್ತಾನೆ.

ಪ್ರೀತಿ, ಪ್ರೇಮ, ಕೌಟುಂಬಿಕ ಕಲಹದಂತಹ, ಕೇವಲ ವೈಯುಕ್ತಿಕ ಕಾರಣಗಳಷ್ಟೇ ಆತ್ಮಹತ್ಯೆ ಮಾಡಲು ಕಾರಣವಲ್ಲ. ಈ ದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳೂ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿವೆ. ಇಂತಹ ಕಾರಣಗಳು ಸೃಷ್ಟಿಸುವ Depression ಅಪಾಯಕಾರಿಯಾದದ್ದು.

ವಿಪರ್ಯಾಸವೆಂದರೆ ಇವ್ಯಾವು ಬೆಳಕಿಗೆ, ಚರ್ಚೆಗೆ, ಮರುಕಕ್ಕೆ, ಧಾರುಣ ದುಃಖಕ್ಕೆ ದಕ್ಕುವುದೇ ಇಲ್ಲ…… ಈ ಹೊತ್ತಿನ ಮಾಧ್ಯಮಗಳು ಅಭಿಪ್ರಾಯ ಉತ್ಪಾದಿಸುವಲ್ಲಿ (manufacturing consent) ಸದಾ choice ನ ರೇಸ್‌ನಲ್ಲಿರುತ್ತವೆ.

Any way, ಸುಶಾಂತ್ ನಿನ್ನದು ಸಾಯುವ ವಯಸ್ಸಲ್ಲ. ನಿನ್ನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಕೃತಿ ಕರುಣಿಸಲಿ.


ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರವನ್ನು ‘ಡಿಲೀಟ್’ ಮಾಡಿ: ಮಹಾರಾಷ್ಟ್ರ ಪೋಲಿಸರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನಾಸಿಕ್‌ನ...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...