Homeಮುಖಪುಟಆತ್ಮಹತ್ಯೆಯೊಂದರ ಅನಾಥ ಕಥನ!

ಆತ್ಮಹತ್ಯೆಯೊಂದರ ಅನಾಥ ಕಥನ!

- Advertisement -
- Advertisement -

ಅವತ್ತು ಮಾರ‍್ನಾಮಿ ಹಬ್ಬ. ಹಟ್ಟಿಯೆಲ್ಲಾ ದಸರಾ ನೋಡಲು ಖಾಲಿಯಾಗಿತ್ತು. ಅವ್ವ ಮಾತ್ರ ಮನೆಯಲ್ಲಿದ್ದಳು. ಸೂರ್ಯ ಮುಳುಗಿ ಜೋಪಡಿಯ ಮೋಟು ಗೋಡೆಯ ಮೇಲೆ ಚಿಮಣಿ ಬುಡ್ಡಿ ಈಗಲೂ.. ಆಗಲೂ….. ಎಂಬಂತೆ ಉಸಿರು ಉಯ್ಯುತ್ತಿತ್ತು. ಒಲೆ ಊದುತ್ತಾ ಉಸಿರುಗಟ್ಟಿಕೊಂಡೆ ಮಡಿಕೆಯಲ್ಲಿ ಮುದ್ದೆ ತಿರುವುತ್ತಿದ್ದ ಅವ್ವನ ಮುಖದಲ್ಲಿ ಕಣ್ಣೀರು,ಬೆವರು ಒಂದಾಗಿ ಉಕ್ಕುತ್ತಿದ್ದವು. ಮತ್ತೆ ಮತ್ತೆ ಸೆರಗಿಗೆ ಕಣ್ಣೀರು,ಬೆವರ ಕುಡಿಸುತ್ತಾ ಒಲೆಯ ಉರಿಯಲ್ಲಿ ಬೇಯುತ್ತಿದ್ದಳು.

ತಿನ್ನೋ ..ಉಣ್ಣೊ ಐದು ಮಕ್ಕಳ ಮನೆ ಅದು. ಗಂಡ-ಹೆಂಡ್ತಿ ಇಬ್ರೂ ಕೂಲಿ- ನಾಲಿ ದುಡಿದ್ರೂ ಸಾಲ ತೀರೋದಿರ‍್ಲಿ. ಮಕ್ಕಳಿಗೆ ಮೂರು ಹೊತ್ತು ಮುದ್ದೆ ಉಣ್ಸೋಕೂ ಆಗ್ತಿರ‍್ಲಿಲ್ಲ. ಇನ್ನೂ ಮಕ್ಕಳ ಓದು, ಬಟ್ಟೆ-ಬರೆ ….ಇವೆಕ್ಕೆಲ್ಲಾ …..ಎಲ್ಲಿಂದ ಹೊಂಚೋದೊ. ಮನೆ ಬಾಗಿಲು ತುಳಿದು ತುಳಿದು ಹೋಗಿದ್ದ ಸಾಲಗಾರ ಗಡುವು ಕೊಟ್ಟಿದ್ದ. ದಣಿವರಿಯದೆ ದುಡಿವ ಅಪ್ಪ ಸಾಲಕ್ಕೆ ಕುಗ್ಗಿ ಹೋಗಿದ್ದ.

ಅಲ್ಲೆ ಎಲ್ಲೋ ಓಣಿಯೊಳಗೆ ಮಕ್ಳೆಲ್ಲಾ ಆಡೋಕೋಗಿದ್ದೋ. ಬೆಳಗ್ಗೆ ಎದ್ದು ಹೋದ ಅಪ್ಪನ ದಾರಿಯನ್ನೆ ಅವ್ವ ಕಾಯುತ್ತಿದ್ದಳು. ಕತ್ತಲು ಗಾಢವಾಗಿ ಕವಿಯುತ್ತಲೆ ಇತ್ತು. ನಡುಮನೆಯಲ್ಲಿ ಕುಳಿತರೆ ಅವ್ವನ ಅಡುಗೆ ಮನೆಗೆ ಕಾಲು ಚಾಚುತ್ತವೆ. ಇಂತಹ ನಡುಮನೆಗೆ ಅಪ್ಪ ಬಂದದ್ದು ಅವ್ವನಿಗೆ ಸುಳಿವೆ ಸಿಕ್ಕಲಿಲ್ಲ. ಮೋಟು ಬೀಡಿಯ ನಾತವಾದರೂ ಬರಬೇಕಿತ್ತು. ಅದೂ ಇಲ್ಲ; ಅವಳಿನ್ನೂ ಮುದ್ದೆ ತಿರುವುತ್ತಾ ಒಲೆ ಮುಂದೆ ಬೇಯುತ್ತಲೆ ಇದ್ದಳು. ದಬ್ಬೆ ಗೋಡೆಯ ಮೂಲೆಗೊರಗಿದ್ದ ಅಪ್ಪನ ಕಣ್ಣ ಮುಂದೆ ದಾರಿಗಳೆಲ್ಲಾ ಕತ್ತಲು ಕವಿದು ಕಾಣದಂತಾಗಿದ್ದವು. ಅವನಾಗಲೇ ಹತಾಶೆಗೆ ಜಾರಿಬಿಟ್ಟಿದ್ದ. ಅದೆಲ್ಲಿ ಸಂಪಾದಿಸಿ ತಂದಿದ್ದನೊ..?ಏನೋ…..? ಹತ್ತಿ ಗಿಡಕ್ಕೆ ಹೊಡೆಯೋ ಔಸತಿ. ಸದ್ದಿಲ್ಲದೆ ಕುಡಿದು ಕೆಮ್ಮಿ ಹೊರಳಾಡಿದಾಗಲೆ ಅವ್ವ ಎಚ್ರವಾದ್ಳು.

ಎದೆ ಎದೆ ಬಡಿದುಕೊಂಡು ಬಾರಾಡಿದಳು ಅಪ್ಪನನ್ನು ತಬ್ಬಿಕೊಂಡು. ಮೆಗ್ಗಾನ್ ಆಸ್ಪತ್ರೆಗೆ ಹೊತ್ತೊಯ್ದು ಕೂಡಿದಳು. ಡಾಕ್ಟ್ರು, ನರ್ಸುಗಳಿಗೆಲ್ಲಾ ಕಾಲಿಡಿದು ಕಾಡಾಡಿಬಿಟ್ಟಳು. ಎದೆಮೂಳೆ ಚಕ್ಕಳ ಬಿಟ್ಟುಕೊಂಡು ಒಣಗಿದ ಬಿದಿರು ದಬ್ಬೆಯಂತಿದ್ದ ಅಪ್ಪ ಸಾವಿನ ಜೊತೆ ವೀರಕಲಿಯಂತೆ ರಣಯುದ್ಧವನ್ನೆ ಮಾಡುತ್ತಿದ್ದ. ಏಳೆಂಟು ವರ್ಷದ ನಾನು ಕಿಟಕಿಗೆ ಆತುಕೊಂಡು ನಿಂತು ಅಪ್ಪನ ಪರದಾಟವನ್ನು ದೃಷ್ಟಿ ಕದಲಿಸದಂತೆ ನೋಡುತ್ತಲೆ ಇದ್ದೆ.

ಅಪ್ಪನ ಕೊರಳಿಗೆ ಪಾಶ ಬಿಗಿದಿದ್ದ ಯಮನೊಂದಿಗೆ‌ ನನ್ನವ್ವ ರಣಚಂಡಿಯಂತೆ ಜಗಳಕ್ಕಿಳಿದು ಬಿಟ್ಟಿದ್ದಳು. ಹಗಲೂ ರಾತ್ರಿ …..ಕಾದಾಡಿದಳು. ಕೊನೆಗೂ ಗೆದ್ದಳು. ಯಮನಿಂದ ಸತ್ಯವಾನನ್ನು ಉಳಿಸಿಕೊಂಡ ಸಾವಿತ್ರಿಯಂತೆ. ಅಪ್ಪನಿಗೆ ಇನ್ನೆಂದೂ ಡಿಪ್ರೆಷನ್ ಹತ್ತಿರ ಸುಳಿಯದಂತೆ ಕಾದಳು. ಅಪ್ಪ ಹತ್ತಾರು ವರ್ಷ ಬದುಕಿದ. ಆತ್ಮಹತ್ಯೆ ಯ ಮಾತಾಡುವವರನ್ನು ಗದರಿಸಿ ಧೈರ್ಯ ತುಂಬುತ್ತಿದ್ದ. ದುಡಿದ, ಸಾಲ ತೀರಿಸಿದ. ಮಕ್ಕಳೆಲ್ಲಾ ಕೈಗೆ ಬಂದು ಸುಖ ಕಾಣುವ ಹೊತ್ತಿಗೆ ಚಿರನಿದ್ರೆಗೆ ಜಾರಿಬಿಟ್ಟ.

**********

ಉದಯೋನ್ಮುಖ ನಟ ಸುಶಾಂತ್ ರಜಪೂತ್‌‌ನ ಆತ್ಮಹತ್ಯೆಯೊಂದು sensation issue ಆಗಿ ಎಲ್ಲರೂ ಮಿಡಿಯುವಾಗ 35 ವರ್ಷಗಳ ಹಿಂದೆ ಅಜ್ಞಾತವಾಗಿದ್ದ ನನ್ನಪ್ಪನ ಆತ್ಮಹತ್ಯೆ ಯತ್ನದ ಅನಾಥ ಕತೆಯೊಂದು ನೆನಪಾಯಿತು.

ಈ ದೇಶದಲ್ಲಿ ಪ್ರತಿ 24 ಗಂಟೆಗೆ 28 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2018 ರ NCR ವರದಿಪ್ರಕಾರ
2018 ರಲ್ಲಿ 1.3 ಲಕ್ಷ ಜನ ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ಗಂಟೆಗೆ ಒಬ್ಬ ನಿರುದ್ಯೋಗಿ ಆತ್ಮಹತ್ಯೆಯ ಹಾದಿ ತುಳಿದು ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಸುತ್ತಾನೆ.

ಪ್ರೀತಿ, ಪ್ರೇಮ, ಕೌಟುಂಬಿಕ ಕಲಹದಂತಹ, ಕೇವಲ ವೈಯುಕ್ತಿಕ ಕಾರಣಗಳಷ್ಟೇ ಆತ್ಮಹತ್ಯೆ ಮಾಡಲು ಕಾರಣವಲ್ಲ. ಈ ದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳೂ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿವೆ. ಇಂತಹ ಕಾರಣಗಳು ಸೃಷ್ಟಿಸುವ Depression ಅಪಾಯಕಾರಿಯಾದದ್ದು.

ವಿಪರ್ಯಾಸವೆಂದರೆ ಇವ್ಯಾವು ಬೆಳಕಿಗೆ, ಚರ್ಚೆಗೆ, ಮರುಕಕ್ಕೆ, ಧಾರುಣ ದುಃಖಕ್ಕೆ ದಕ್ಕುವುದೇ ಇಲ್ಲ…… ಈ ಹೊತ್ತಿನ ಮಾಧ್ಯಮಗಳು ಅಭಿಪ್ರಾಯ ಉತ್ಪಾದಿಸುವಲ್ಲಿ (manufacturing consent) ಸದಾ choice ನ ರೇಸ್‌ನಲ್ಲಿರುತ್ತವೆ.

Any way, ಸುಶಾಂತ್ ನಿನ್ನದು ಸಾಯುವ ವಯಸ್ಸಲ್ಲ. ನಿನ್ನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಕೃತಿ ಕರುಣಿಸಲಿ.


ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರವನ್ನು ‘ಡಿಲೀಟ್’ ಮಾಡಿ: ಮಹಾರಾಷ್ಟ್ರ ಪೋಲಿಸರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...