Homeಕರ್ನಾಟಕಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

ಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

- Advertisement -
- Advertisement -

ಕಾರವಾರದ ವಾಣಿಜ್ಯ ಬಂದರು ವಿಸ್ತರಿಸುವ “ಸಂಕಷ್ಟ ಮಾಲಾ” ಯೋಜನೆ ತಮ್ಮ ಬದುಕನ್ನೇ ಬರ್ಬಾದ್ ಮಾಡಿಬಿಡುತ್ತದೆಂಬ ಆತಂಕದಲ್ಲಿ ಸ್ಥಳೀಯರೆಲ್ಲಾ ಒಂದಾಗಿ ಬೀದಿಗಿಳಿದಿದ್ದಾರೆ! ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಹೆಸರಿನ ಚಂದದ ಕಡಲ ತೀರ, ಬಡ ಬೆಸ್ತರ ತುತ್ತಿನಾಧಾರವಾಗಿದ್ದ ಕಸಬು ಮತ್ತು ಕಾರವಾರದ ನೆಮ್ಮದಿ-ಸ್ವಾಸ್ಥ್ಯ ಎಲ್ಲವನ್ನು ಒಂದೇ ಬಾರಿಗೆ ಆಪೋಷನ ಪಡೆಯುವ ಈ ಯೋಜನೆ ಬೇಡವೇ ಬೇಡವೆಂದು ಆಗ್ರಹಿಸಿ ಮೊನ್ನೆ (16-01-2020) ಹತ್ತಾರು ಸಾವಿರ ಮಂದಿ ಸೇರಿ ಕಾರವಾರ ಬಂದ್ ಮಾಡಿ ಆಳುವ ಖೂಳರಿಗೆ “ಸಣ್ಣ” ಎಚ್ಚರಿಕೆ ರವಾನಿಸಿದ್ದಾರೆ!! ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಶೋ ಮ್ಯಾಮ್ ಶಾಸಕಿ ರೂಪಾಲಿ ನಾಯ್ಕ್ ಒಣ ಪ್ರತಿಷ್ಠೆಯ ಸದ್ರಿ ಕಾಮಗಾರಿ ಕಾರವಾರ ತಾಲ್ಲೂಕಿನ ಅಷ್ಟೂ ಮೀನುಗಾರರನ್ನು ಜೀವನ್ಮರಣದ ಜಂಜಾಟವಾಗಿ ಕಾಡುತ್ತಿದೆ…

ಬರೋಬ್ಬರಿ 125 ಕೋಟಿ ರೂಪಾಯಿಗಳ ಈ ಪ್ರಾಜೆಕ್ಟ್ ಮೋದಿ ಮಾಮ ತನ್ನ ಪರಮಾಪ್ತ ಬಂದರು ದಂಧೆದಾರ ಆದಾನಿಗಾಗಿಯೇ ಕೈಗೆತ್ತಿಕೊಂಡಿರುವ “ಅಭಿವೃದ್ಧಿ” ಕಾಮಗಾರಿ. ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕಾರವಾರ ಬಂದರು ವಿಸ್ತರಣೆಗೆ ಅಡಿಗಲ್ಲು ಹಾಕಿಸಿದ್ದು ಅಂದಿನ ಕಾಂಗ್ರೆಸ್ ಎಮ್ಮೆಲ್ಲೆ ಸತೀಶ್ ಸೈಲ್, ಪಕ್ಕಾ ಪಾಯ್ದೆಕೋರ ಉದ್ಯಮಿಯಾದ ಈ ಅದಿರು ಕಳ್ಳಸಾಗಾಣಿಕೆದಾರ ಅಂದು ಅದ್ಯಾವ ಕನಸು ಕಂಡಿದ್ದನೋ ಏನೋ? ಬಂದರು ಕಾಮಗಾರಿಯ ಅಲೆ ತಡೆಗೋಡೆಗೆ ಬೇಕಾದ ದೊಡ್ಡಗಾತ್ರದ ಶಿಲೆಕಲ್ಲು ಪೂರೈಕೆಯ ರಹಸ್ಯ ಬೇನಾಮಿ ಒಪ್ಪಂದ ಸೈಲ್ ಮಾಡಿಕೊಂಡಿದ್ದ. ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್‍ಸ್ ಪ್ರೈ.ಲಿ. ಕೆಲಸ ಶುರುಹಚ್ಚಿಕೊಂಡ ಎರಡೇ ದಿನದಲ್ಲಿ ನೂರಾರು ಲೋಡ್ ಕಲ್ಲು ಬೀಚ್‍ಗೆ ಬಂದು ಬಿದ್ದಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆರಂಭಿಸಿದ ಕಾಮಗಾರಿ ಹೇಗಿತ್ತೆಂದರೆ, ಮೀನುಗಾರರು ಶಾಶ್ವತವಾಗಿ ಹೊಟ್ಟೆಪಾಡಿನ ಸಮುದ್ರ ಕೃಷಿ ಮಾಡಲಾಗದಂತಿತ್ತು!!

ಕಾರವಾರದಲ್ಲಿ ಮೀನುಗಾರ ಸಂಕುಲ ರಾಜಕೀಯವಾಗಿ ನಿರ್ಣಾಯಕ. ಎಡವಟ್ಟು ಕಾಮಗಾರಿ ಕಂಡದ್ದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಸ್ತರೆಲ್ಲಾ ಅಹೋರಾತ್ರಿ ಪ್ರತಿಭಟನೆ ನಡೆಸತೊಡಗಿದರು. ಪೇಚಿಗೆ ಸಿಲುಕಿದ ಮಾಜಿ ಶಾಸಕ ಸೈಲ್ ತಕ್ಷಣ ಬಣ್ಣ ಬದಲಿಸಿಬಿಟ್ಟ. ಊರವರ ಹಿತೈಷಿ ಎಂಬಂತೆ ಪೋಸು ಕೊಡುತ್ತಾ ಬಂದರು ಕಾಮಗಾರಿ ವಿರುದ್ಧ ಹೇಳಿಕೆ ಒಗಾಯಿಸತೊಡಗಿದೆ. ಪ್ರತಿಭಟನಾಕಾರರ ಮಧ್ಯೆ ಸಾವಕಾಶವಾಗಿ ತೂರಿಕೊಂಡು ಬೀಚನ್ನು ಬೆಳಗ್ಗೆಯ ವಾಕಿಂಗ್, ಸಂಜೆಯ ವಿಹಾರ, ನೆಮ್ಮದಿಗಾಗಿ ಬಳಸುತ್ತಿದ್ದ ಜನರೂ ಮೀನುಗಾರರ ಜತೆ ಸೇರಿಕೊಂಡು ಪ್ರತಿಭಟನೆ ಬಿರುಸುಗೊಳಿಸಿದರು. ಬಂದರು ವಿರೋಧಿ ಹೋರಾಟಗಾರರ ಆಕ್ರೋಶ ತಮ್ಮ ನೋವಿಗೆ ಸ್ಪಂದಿಸದ ಸಂಸದ ಅನಂತ್ಮಾಣಿ ಮತ್ತು ಶಾಸಕಿ ರೂಪಾಲಿ ಮೇಲೆ ಕೇಂದ್ರೀಕೃತವಾಗಿತ್ತು. ಈ ಇಬ್ಬರು ನಾಲಾಯಕ್ ಜನಪ್ರತಿನಿಧಿಗಳ ಫೋಟೋಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಾರಹಾಕಿ, ಸಗಣಿ ಮೆತ್ತಿ ಸಹಜ ಸಿಟ್ಟು ವ್ಯಕ್ತಡಿಸಿದ್ದರು.

ಮೀನುಗಾರರ ಹುಡುಗ-ಹೊನ್ನಾವರದ ಪರೇಶ್ ಮೇಸ್ತನ ಸಂಶಯಾಸ್ಪದ ಸಾವನ್ನು ಸಾಬರಿಂದಾದ ಕೊಲೆ ಎಂದು ಬಿಂಬಿಸಿದ ಬಿಜೆಪಿಯ ಕೋಮು ರಾಜಕಾರಣದ ಫಲಾನುಭವಿಯಾದ ರೂಪಾಲಿಗೆ ಮೀನುಗಾರರ ತಿರುಗಿಬಿದ್ದದ್ದು ನಿದ್ದೆಗೆಡಿಸಿಬಿಟ್ಟಿತ್ತು. ಕಾರವಾರ ಬಂದ್ ದಿನ ರೂಪಾಲಿಗೆ ಕ್ಷೇತ್ರದಲ್ಲಿರುವ ಧೈರ್ಯವೇ ಇರಲಿಲ್ಲ. ಹಾಗಾಗಿ ಆಕೆ ರಾತ್ರೋರಾತ್ರಿ ಬೆಂಗಳೂರಿಗೆ ಓಡಿದ್ದಾರೆ. ಇತ್ತ ಜನರು ಪ್ರತಿಭಟನಾ ರ್ಯಾಲಿ ಹೊರಟಿದ್ದರೆ, ಅತ್ತ ಬೆಂಗಳೂರಲ್ಲಿ ರೂಪಾಲಿ ಮೇಡಮ್ಮು ಮೀನುಗಾರರ ಮಂತ್ರಿ ಶ್ರೀನಿವಾಸ ಪೂಜಾರಿ ಜತೆ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಬಂದರ ವಿಸ್ತರಣೆಯಿಂದ ಮೀನುಗಾರರಿಗೆ ತೊಂದರೆ ಆಗುವುದಿಲ್ಲ, ಬೀಚ್ ಬಂದರಿಗೆ ಬಳಕೆಯಾಗುವುದಿಲ್ಲ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರಾದ ಸೈಲ್ ಮತ್ತ ಅಸ್ನೋಟಿಕರ್ ದಾರಿ ತಪ್ಪಿಸುತ್ತಿದ್ದಾರೆಂದು ಪೂಜಾರಿ-ರೂಪಾಲಿ ಒಂದೇ ಸ್ವರದಲ್ಲಿ ಯುಗಳ ಆಲಾಪ ಮಾಡಿದ್ದಾರೆ. ಸುಳ್ಳು ಹೇಳಿ ತಮ್ಮ ಜನದ್ರೋಹ ಮುಚ್ಚಿಡಲು ಹವಣಿಸಿದ್ದಾರೆ.

ವಾಸ್ತವವೆಂದರೆ, ಬಂದರು ವಿರೋಧಿಗಳು ಸೈಲ್-ಅಸ್ನೋಟಿಕರ್‍ನನ್ನೂ ನಂಬುತ್ತಿಲ್ಲ. ಈ ಇಬ್ಬರು ಸಮಯಸಾಧಕರನ್ನು ಹೊರಗಿಟ್ಟೇ ಜನರು ಕಟ್ಟಿದ ಅಖಂಡ ಹೋರಾಟವಿದು. ಸೈಲ್-ಅಸ್ನೋಟಿಕರ್ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಷ್ಟೇ. ಆದರೆ ಜನರು ಮಾತ್ರ ಈ ಮಾಜಿದ್ವಯರಿಗೆ ಸಭೆಗಳಲ್ಲಿ ಭಾಷಣ ಮಾಡಲಿಕ್ಕೂ ಬಿಡುತ್ತಿಲ್ಲ. ಕಾರವಾರಕ್ಕೆ ಬಂದು ಜನರಿಗೆ ಮುಖ ತೋರಿಸುವ ನೈತಿಕ ಧೈರ್ಯವೂ ಇಲ್ಲದೆ ಚಡಪಡಿಸುತ್ತಿರುವ ಶಾಸಕಿಯಮ್ಮ ಒಂದೆಡೆಯಾದರೆ, ಮತ್ತೊಂದೆಡೆ ಹಲ್ಲೆಕೋರ ಮನಸ್ಥಿತಿಯ ಸಂಸದ ಅನಂತ್ಮಾಣಿ ಬಂದರು ವಿರೋಧಿಗಳನ್ನು ಆರಂಭಿದಲ್ಲೇ ಹೊಸಕಿ ಹಾಕಬೇಕು….. ನಂಗೆ ಮತ್ತೆ ಎಂಪಿ ಆಗೋ ಆಸೆಯಿಲ್ಲ….. ಬಂದರು ಕಟ್ಟಿಯೇ ತೀರುತ್ತೇನೆ….” ಎಂದೆಲ್ಲಾ ಅಭಿವೃದ್ಧಿ ಆಟಾಟೋಪ ಪ್ರದರ್ಶಿಸುತ್ತಿದ್ದಾನೆ.

ಮೀನುಗಾರರು ವಾರದಿಂದ ಮೀನುಗಾರಿಕೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ಹೂಡುತ್ತಲೇ ಇದ್ದಾರೆ. ಶಾಸಕಿ ರೂಪಾಲಿ, ಸಂಸದ ಮಾಣಿಯ ಮಳ್ಳು ಮಾತುಗಾರಿಕೆಗೆ ನಗುತ್ತಿದ್ದಾರೆ. ಹೋರಾಟಗಾರರ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದ ಮಂತ್ರಿ, ಸಂಸದ, ಶಾಸಕಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಬಂದರು ಅಧಿಕಾರಿಗಳು ಜನರ ಮುಂದೆ ಹೇಳೋದೇ ಒಂದು ಮಾಡೋದು ಮಾತ್ರ ಮತ್ತೊಂದು. ಬಂದರು ಅಧಿಕಾರಿಗಳು ತಾತ್ಕಾಲಿಕ ಮೀನು ಮಾರುಕಟ್ಟೆ ಹಿಂದಿನಿಂದ ಕಾಮಗಾರಿ ಮಾಡಲಾಗುತ್ತದೆ ಎಂದಿದ್ದರು. ಆದರೆ ಕೆಲಸ ಆಗುತ್ತಿರುವುದು ಬೀಚ್‍ನ ದಕ್ಷಿಣಕ್ಕಿರುವ ಪ್ಯಾರಾಗೋಲಾದ ಕಡೆಯಿಂದ. ಉತ್ತರ ಬದಿಯನ್ನು ಹೊಟೇಲು, ಗಾರ್ಡನ್ ಎಂದೆಲ್ಲಾ ಹಂಚಲಾಗಿದೆ. ಹೀಗಾಗಿ ಉಳಿದಿರುವುದು ಬರೀ 1 ಕಿ.ಮೀ ಬೀಚಷ್ಟೇ. ಇದರಲ್ಲಿ ಅರ್ಧ ಅಡೆಗೋಡೆಗೆ ಬಳಿಸಿದರೆ ಬಡ ಬೆಸ್ತರಿಗೆ ಮೀನುಗಾರಿಕೆಗೆ ಅವಕಾಶವಿಲ್ಲ; ವಾಕಿಂಗ್, ವಿಹಾರ ಸಾಧ್ಯವೂ ಇಲ್ಲ.

ಬಂದರು ಕಾಮಕಾರಿ ಏಕಪಕ್ಷೀಯವಾಗಿ ದಾದಾಗಿರಿಯಿಂದ ಆಡಳಿತಗಾರರು ನಡೆಸಿದ್ದಾರೆ. ಬಂದರಿನಿಂದಾಗುವ ಅರ್ಥಿಕ, ಸಾಮಾಜಿಕ ಪರಿಸರ ಪರಿಣಾಮಗಳ ಅಧ್ಯಯನವೇ ನಡೆಸಲಾಗಿಲ್ಲ. ಸಾರ್ವಜನಿಕರಿಗೆ ಉದ್ದೇಶಿತ ಬಂದರಿನ ಮಾಹಿತಿ ನೀಡಲಾಗುತ್ತಿಲ್ಲ. ಮಹತ್ವದ ಸಂಗತಿಯೆಂದರೆ, ಈ ಯೋಜನೆಗೆ ಸಿಆರ್‍ಜೆಡ್ ಸಮಿತಿಯ ಅನುಮತಿಯೇ ಸಿಕ್ಕಿಲ್ಲ. ಮರುಪರಿಶೀಲನೆಗೆ ಸಮಿತಿ ಬಂದರು ಇಲಾಖೆಗೆ ಸೂಚಿಸಿತ್ತು. ಬಂದರು ವಿಸ್ತರಣೆ ಎಂದರೆ, ದೇಶ-ವಿದೇಶದ ಬೃಹತ್ ಸರಕು ಸಾಗಾಣಿಕಾ ಹಡಗುಗಳು ಬಂದು-ಹೋಗುವ ತಾಣ. ಇಂಥ ವಾಣಿಜ್ಯ ಬಂದರಿನ ಮಗ್ಗುಲಲ್ಲಿ ಮೀನುಗಾರಿಕರ ಜೆಟ್ಟಿ ಇರಲು ಸಾಧ್ಯವೇ ಇಲ್ಲ. ವಾಣಿಜ್ಯ ಬಂದರಿನ ಸುತ್ತ ಮಜಬೂತಾದ ಆವರಣ ಗೋಡೆ, ಅದರ ಮೇಲೆ ತಂತಿ ಮುಳ್ಳಿನ ಬೇಲಿ ಹಾಕಲಾಗುತ್ತದೆ. ಸಾರ್ವಜನಿಕರ ಚಲನವಲನ. ಮೀನುಗಾರಿಕೆ ಸುತ್ತಲಿನ ಪ್ರದೇಶದಲ್ಲಿ ನಿಶೇಧಿಸಲಾಗುತ್ತದೆ. ಕಾರವಾರದ ಬಂದರು ವಿಸ್ತರಣೆಯಾದರೆ, ಬೈತ್ಕೋಲ್ ಮೀನುಗಾರಿಕಾ ಬಂದರಿಗೆ ಗಂಡಾಂತರ ಖಂಡಿತಾ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಕಾರವಾರದ 43 ಕಿ.ಮೀ ಉದ್ದದ ಕಡಲತೀರದಲ್ಲಿ ನಿರ್ಧಿಷ್ಟ ಭಾಗಗಳಷ್ಟೇ ಮೀನುಗಾರಿಕೆ ಮತ್ತು ಮೀನುಗಾರಿಕ ವಾಸ್ತವ್ಯಕ್ಕೆ ಯೋಗ್ಯವಾದವುಗಳು. ಇದರಲ್ಲಿ 33 ಕಿ.ಮೀ ತೀರಪ್ರದೇಶ ನೌಕಾನೆಲೆಗೆ ಕೊಡುವಾಗ ಮೀನುಗಾರರನ್ನು ಒಕ್ಕಲೆಬ್ಬಿಸಲಾಗಿದೆ. ಈಗಿರುವ ವಾಣಿಜ್ಯ ಬಂದರಿಗಾಗಿ 1.5 ಕಿ.ಮೀ ಕಳೆದುಕೊಳ್ಳಲಾಗಿದೆ. ಇನ್ನೊಂದು ಕಿ.ಮೀ ಕಬಳಿಸಲು ಹೊಸ ಯೋಜನೆ ಬಾಯ್ತೆರೆದು ನಿಂತಿದೆ. ಪ್ರವಾಸೋದ್ಯಮದ ನೆಪದಲ್ಲಿ ಮುನ್ಸಿಪಾಲಿಟಿ ಗಾರ್ಡನ್, ರಾಕ್-ಗಾರ್ಡನ್, ಸಾಲುಮರದ ತಿಮ್ಮಕ್ಕ ಗಾರ್ಡನ್, ದೇವಭಾಗ ಜಂಗಲ್ ರೆಸಾರ್ಟ್, ತಿಳಮಾತಿ ಬೀಚ್, ಹೋಟೆಲ್, ರೆಸಾರ್ಟ್ ಲಾಬಿಗೆ ಹಂಚಿ ಮೀನುಗಾರರ ಆಶ್ರಯ-ಕಸಬು ತಪ್ಪಿಸಲಾಗಿದೆ. ಉಳಿದಿರುವ 3.5 ಕಿ.ಮೀ ತೀರ ಪ್ರದೇಶವನ್ನು 14,500 ಮೀನುಗಾರರ ಕುಟುಂಬಗಳು ಹಂಚಿಕೊಳ್ಳಬೇಕಿದೆ. ಅಲಿಗದ್ದಾ ತೀರದಲ್ಲಿ ದೋಣಿಗಳಿಡಲಿಕ್ಕೆ ಜಾಗವಿಲ್ಲ. ಭಾರತೀಯ ಕೋಸ್ಟ್ ಗಾರ್ಡ್, ಇಂಡಿಯನ್ ಆಯಿಲ್ ಕಂಪನಿಗಳು ಕಾರವಾರ ತೀರಕ್ಕೆ ಬರುವ ಯೋಜನೆಗಳ ಸರದಿಯಲ್ಲಿವೆ. ಬೆಸ್ತರ ಪಾಲಿಗೆ ಆಪದ್ಬಾಂಧವನಂತಿದ್ದ ಕಾರವಾರ ತೀರ ಪ್ರದೇಶವನ್ನೂ ವಾಣಿಜ್ಯ ಬಂದರು ವಿಸ್ತರಣೆಗೆ ಬಲಿಗೊಟ್ಟರೆ ಸ್ಥಳೀಯ ಮೀನುಗಾರರ ಪಾಡೇನು?

ಇದೆಲ್ಲ ಶಾಸಕಿ ರೂಪಾಲಿಯಮ್ಮ, ಅನಂತ್ಮಾಣಿಯ ಮತಾಂಧ ತಲೆಬುರುಡೆಗೆ ಅರ್ಥವಾಗುತ್ತಲ್ಲ. ಅಗತ್ಯವಿರುವ ಯಾವ ಸರ್ಕಾರಿ ಏಜೆನ್ಸಿಗಳ ಅನುಮತಿಯೂ ಇಲ್ಲದೆ ಅವಸರದಲ್ಲಿ ಶುರುವಾಗಿರುವ ಬಂದರು ಯೋಜನೆಯಿಂದ ಕಾರವಾರಿಗರಿಗೆ ಯಾವ ಲಾಭವೂ ಇಲ್ಲ. ಬಿಜೆಪಿಯ ಅಭಿವೃದ್ಧಿ ಪಂಡಿತರು ಉದ್ಯೋಗಾವಕಾಶವಿದೆ ಎಂದು ಬೊಂಬಾಡಾ ಬಜಾಯಿಸುತ್ತಿದ್ದಾರೆ. ಎಷ್ಟು ಉದ್ಯೋಗ? ಯಾವ ಉದ್ಯೋಗ? ಇದಕ್ಕೆಲ್ಲ ಉತ್ತರವಿಲ್ಲ. ಅಬ್ಬಬ್ಬಾ ಎಂದರೆ ಅಮಾಯಕರನ್ನು ಶೋಷಿಸುವ ಕೂಲಿ ಕೆಲಸ ಸಿಗಬಹುದು. ಬೃಹತ್ ಬಂದರಿನಲ್ಲಿ ಮಂಗಳೂರು-ಮುಂಬೈ ಬಂದರಿನಲ್ಲಾಗುವಂಥ ಭೂಗತ ಬಾನ್ಗಡಿ ಆಗಬಹುದು. ಸಣ್ಣ ಬಂದರಿರುವಾಗಲೇ ಅಂದಿನ ಶಾಸಕ ವಸಂತ ಅಸ್ನೋಟಿಕರ್ ಮತ್ತು ಭೂಗತ ದೊರೆ ದಿಲೀಪ್ ನಾಯ್ಕ್ ಆಮದನಿಗಾಗಿ ಹೊಡೆದಾಡಿ ಹತ್ಯೆಯಾಗಿದ್ದು ನೆನಪಿದೆಯಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...