ಐಷಾರಾಮಿ ಕಾರಿನ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ಮುಂಬೈನಲ್ಲಿ ದಾಖಲಾಗಿದ್ದು, ನಿನ್ನೆ ತಡರಾತ್ರಿ ಥಾಣೆಯಲ್ಲಿ ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ, 21 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಕಾರಿನ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ, ಅಪಘಾತವೆಸಗಿದ ಐಶಾರಾಮಿ ಕಾರು ಪಾರ್ಕಿಂಗ್ ಲಾಟ್ನಲ್ಲಿ ಕಂಡುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ.
ವೇಗವಾಗಿ ಬಂದ ಮರ್ಸಿಡಿಸ್ ಅನ್ನು ಥಾರ್ ಎಸ್ಯುವಿ ಹಿಂಬಾಲಿಸಿದ್ದು, ಅಪಘಾತ ಸಂಭವಿಸಿದಾಗ ಎರಡು ವಾಹನಗಳು ಮುಂಬೈ ಕಡೆಗೆ ವೇಗವಾಗಿ ಹೋಗುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಶೈಲೇಶ್ ಸಾಲ್ವಿ ಮಾತನಾಡಿ, ದರ್ಶನ್ ಹೆಗ್ಡೆ ಅವರು ರಾತ್ರಿ 1.50 ರ ಸುಮಾರಿಗೆ ನಿತಿನ್ ಕಂಪನಿ ಜಂಕ್ಷನ್ ಪ್ರದೇಶವನ್ನು ದಾಟುತ್ತಿದ್ದಾಗ ಮರ್ಸಿಡಿಸ್ ಬೆಂಜ್ ಕಾರು, ಅವರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಾವು ನುವಾಪಾದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದೇವೆ. ಎರಡು ತಂಡಗಳು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿವೆ ಮತ್ತು ಆರೋಪಿಗಳನ್ನು ಗುರುತಿಸಲು ಆರ್ಟಿಒ ವಿವರಗಳನ್ನು ಪರಿಶೀಲಿಸುತ್ತಿವೆ ಎಂದು ಹೇಳಿದರು.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ಗಳ ಅಡಿಯಲ್ಲಿ ಅಪಾಯಕಾರಿ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣ, ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಯೊಬ್ಬರು, “ನಮಗೆ 2 ಗಂಟೆಯ ಸುಮಾರಿಗೆ ದೊಡ್ಡ ಅಪಘಾತದ ಸದ್ದು ಕೇಳಿಸಿತು. ದ್ವಿಚಕ್ರ ವಾಹನಕ್ಕೆ ಮರ್ಸಿಡಿಸ್ ಡಿಕ್ಕಿ ಹೊಡೆದಿರುವುದನ್ನು ನಾವು ನೋಡಿದೆವು. ನಾನು ಅವರನ್ನು (ದರ್ಶನ್) ಆಟೋ ರಿಕ್ಷಾಕ್ಕೆ ಹಾಕಿ ಆಸ್ಪತ್ರೆಗೆ ಸೇರಿಸಿದೆ. ಅವರು ಸುಮಾರು 15 ವರ್ಷಗಳ ಕಾಲ ಬದುಕಿದ್ದರು. ನಂತರ ಅವನು ಸಾವನ್ನಪ್ಪಿದ” ಎಂದರು. ಮರ್ಸಿಡಿಸ್ ಮತ್ತು ಅದನ್ನು ಹಿಂಬಾಲಿಸುವ ಥಾರ್ ಅಪಘಾತದ ನಂತರ ನಿಂತಿದೆಯೇ ಎಂದು ಕೇಳಿದಾಗ, ಅವರು ಇಲ್ಲ ಉತ್ತರಿಸಿದರು. “ಅವರು ಒಂದು ಸೆಕೆಂಡ್ ಕೂಡ ನಿಲ್ಲಿಸಲಿಲ್ಲ, ಅವರು ತುಂಬಾ ವೇಗವಾಗಿ ಕಾರು ಓಡಿಸಿದರು” ಎಂದು ಘಟನೆ ಕುರಿತು ವಿವರಿಸಿದರು.
ಹಿಟ್ ಅಂಡ್ ರನ್ ಪ್ರಕರಣವು ಮಹಾರಾಷ್ಟ್ರದಲ್ಲಿ ಅತಿರೇಕದ ಚಾಲನೆಯಿಂದ ಜೀವಗಳನ್ನು ಬಲಿತೆಗೆದುಕೊಂಡ ಘಟನೆಗಳ ಸರಣಿಯಲ್ಲಿ ಇದು ಇತ್ತೀಚಿನದು.
ಮೇ ತಿಂಗಳಲ್ಲಿ, ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಪೋರ್ಷೆ ಕಾರು ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಯುವ ಇಂಜಿನಿಯರ್ಗಳು ಸಾವನ್ನಪ್ಪಿದ್ದು, ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಜುಲೈನಲ್ಲಿ ಮುಂಬೈನ ವರ್ಲಿಯಲ್ಲಿ ಬಿಎಂಡಬ್ಲ್ಯು ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಮಹಿಳಾ ಹಿಂಬದಿ ಸವಾರೆಯನ್ನು ಸುಮಾರು 100 ಮೀಟರ್ ಎಳೆದೊಯ್ದಿದ್ದರಿಂದ ಅವರು ಸಾವನ್ನಪ್ಪಿದ್ದರು.
ಇದನ್ನೂ ಓದಿ; ವಕ್ಫ್ ಮಸೂದೆ ಜಂಟಿ ಸಮಿತಿ ಸಭೆಯಲ್ಲಿ ವಾಕ್ಸಮರ; ಮಾತಿನ ಚಕಮಕಿಯಲ್ಲಿ ಗಾಜಿನ ಬಾಟಲಿ ಒಡೆದ ಕಲ್ಯಾಣ್ ಬ್ಯಾನರ್ಜಿ


