Homeಮುಖಪುಟಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು.

- Advertisement -
- Advertisement -

ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಮುಸ್ಲಿಮರ ಭಾವನೆಗಳನ್ನು ನೋಯಿಸಿದ ಆರೋಪದ ನಂತರ ಅಪರೂಪಕ್ಕೆ ಬೇಷರತ್‌ ಕ್ಷಮೆಯಾಚಿಸಿದೆ. ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿಯಾದ ಸುದ್ದಿ ಪ್ರಸಾರ ಮಾಡಿ ಸಿಕ್ಕಿಬಿದ್ದ ನಂತರ ಅರ್ನಬ್‌ ಗೋಸ್ವಾಮಿಯ ಚಾನೆಲ್‌ನ ಅಸಾಧಾರಣ ಕ್ಷಮೆಯಾಚನೆಯು ಹೊರಬಿದ್ದಿದೆ.

ರಿಪಬ್ಲಿಕ್‌ ಟಿವಿಯಲ್ಲಿ ಜಮಾತ್-ಇ-ಇಸ್ಲಾಮಿ ಭಾರತದ ಮುಖ್ಯಸ್ಥ ಮೌಲಾನಾ ಜಲಾಲುದ್ದೀನ್ ಉಮ್ರಿ ಭಯೋತ್ಪಾದಕ ಎಂದು ಸುಳ್ಳು ಆರೋಪವನ್ನು ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದ ನಂತರ ರಿಪಬ್ಲಿಕ್ ಟಿವಿಯು ಕ್ಷಮೆಯಾಚಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವಾರು ಮುಸ್ಲಿಂ ಗುಂಪುಗಳು ರಿಪಬ್ಲಿಕ್‌ ಮತ್ತು ಸಿಎನ್‌ಎನ್-ನ್ಯೂಸ್ 18 ಚಾನೆಲ್‌‌ಗಳ ಸುಳ್ಳು ಸುದ್ದಿ ಹರಡುವ ಕೃತ್ಯವನ್ನು ಖಂಡಿಸಿ ಪತ್ರವೊಂದನ್ನು ಬರೆದಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ. ಎಐಎಂಪಿಎಲ್‌ಬಿಯ ಪತ್ರದಲ್ಲಿ “ಸಿಎನ್‌ಎನ್-ನ್ಯೂಸ್ 18 ಚಾನೆಲ್‌ ಮುಸ್ಲಿಮರಿಗೆ ಪವಿತ್ರವಾದ ಮೂರು ತಾಣಗಳನ್ನು ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ‘ಭಯೋತ್ಪಾದಕ ಕಾರ್ಖಾನೆ’ಗೆ ಸಂಬಂಧಿಸಿವೆ ಎಂದು ತೋರಿಸುವ ಮೂಲಕ ಧರ್ಮನಿಂದನೆ ಮಾಡಿದ್ದನ್ನು ಖಂಡಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಕುರಿತು ಟ್ವಿಟ್ಟರ್‌ನಲ್ಲಿ “ಎಐಎಂಪಿಎಲ್‌ಬಿಯ ಉಪಾಧ್ಯಕ್ಷ ಎಂ.ಎಲ್.ಜಲಾಲುದ್ದೀನ್ ಉಮ್ರಿಯವರನ್ನು ರಿಪಬ್ಲಿಕ್‌ ಟಿವಿಯು ಭಯೋತ್ಪಾದಕನೆಂದು ಸುಳ್ಳು ಆರೋಪಿಸಿದ್ದಕ್ಕಾಗಿ ತೀವ್ರವಾಗಿ ಖಂಡಿಸುತ್ತೇವೆ. ಮೆಕ್ಕಾ, ಮದೀನಾ ಮತ್ತು ಕುಡ್ಸ್‌ನ ಕುರಿತು ಧರ್ಮನಿಂದನೆ ಮಾಡಿದ್ದಕ್ಕೆ CNNnews18 ನ ಕ್ರಮವನ್ನು ಖಂಡಿಸುತ್ತೇವೆ. ಈ ಕುರಿತು ಸಾರ್ವಜನಿಕವಾಗಿ ಎರಡು ಚಾನೆಲ್‌ಗಳು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು. ಅದರ ಟ್ವೀಟ್‌ನಲ್ಲಿ, “ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವನ್ನು ತಪ್ಪಾಗಿ ಪ್ರಸಾರ ಮಾಡಿದ್ದಕ್ಕಾಗಿ ಸ್ಪಷ್ಟೀಕರಣ ಮತ್ತು ಕ್ಷಮೆಯಾಚನೆಯನ್ನು ರಿಪಬ್ಲಿಕ್ ಟಿವಿಯಲ್ಲಿ ಸಂಜೆ 4:03 ಕ್ಕೆ ಪ್ರಸಾರ ಮಾಡಲಾಯಿತು. ಇದು ಅಜಾಗರೂಕ ದೋಷವಾಗಿದ್ದು, ಸಂಬಂಧಪಟ್ಟ ವೀಡಿಯೊದಲ್ಲಿ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವು ನಮ್ಮ ತಪ್ಪಾಗಿ ಪ್ರಸಾರವಾಯಿತು ಮತ್ತು ತಕ್ಷಣ ಸರಿಪಡಿಸಲಾಗಿದೆ”

ಅದರ ನಂತರದ ಟ್ವೀಟ್‌ನಲ್ಲಿ, “ರಿಪಬ್ಲಿಕ್ ಟಿವಿ ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತದೆ” ಎಂದು ಬರೆದಿದೆ.

ರಿಪಬ್ಲಿಕ್ ಟಿವಿ ತನ್ನ ವೆಬ್‌ಸೈಟ್‌ನಿಂದ ವಿವಾದಾತ್ಮಕ ವೀಡಿಯೊವನ್ನು ತೆಗೆದುಹಾಕಿರುವಂತೆ ತೋರುತ್ತಿದೆ ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ವಿರುದ್ಧ ಸರಕಾರದ ದಬ್ಬಾಳಿಕೆಯ ಕುರಿತಾದ ತನ್ನ ವರದಿಯನ್ನು ನವೀಕರಿಸಿದೆ. ಕಣಿವೆಯ ಜಮಾತೆ-ಇ-ಇಸ್ಲಾಮಿ ಭಾರತದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಸಿಎನ್ಎನ್-ನ್ಯೂಸ್ 18 ಚಾನೆಲ್‌ನ ಅವಾಂತರಗಳು

ಮತ್ತೊಂದೆಡೆ, ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಒಡೆತನದ ಚಾನೆಲ್ ಸಿಎನ್ಎನ್-ನ್ಯೂಸ್ 18 ಚಾನೆಲ್‌ ಇನ್ನಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಚಾನೆಲ್‌ ವಿಶ್ವದಾದ್ಯಂತ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಎಐಎಂಪಿಎಲ್‌ಬಿಯು ಆರೋಪಿಸಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ವ್ಯಕ್ತಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ಆಸ್ತಿ ವಿವರಗಳನ್ನು ಚಾನೆಲ್ ಶನಿವಾರ ತನ್ನ ಪ್ರಸಾರದಲ್ಲಿ ತಿಳಿಸಿದೆ. ಆಗ ಅದು ‘ಬಹವಾಲ್‌ಪುರದ ಜೆಎಂ ಭಯೋತ್ಪಾದಕ ಕಾರ್ಖಾನೆ’ ಎಂಬ ಮುಖ್ಯಾಂಶಗಳನ್ನು ಪ್ರಸಾರ ಮಾಡುತ್ತಿರುವಾಗ, ಮೆಕ್ಕಾದ ಬೃಹತ್‌ ಮಸೀದಿಯ ಫೋಟೋಗಳನ್ನು ತೋರಿಸಿದೆ. ಮದೀನಾದ ಮಸೀದಿ ಮತ್ತು ಅಲ್-ಅಕ್ಸಾವನ್ನು ಕೂಡ ಅಜರ್‌ನ ಭಯೋತ್ಪಾದಕ ಕಾರ್ಖಾನೆಯ ಭಾಗವೆಂದು ಪ್ರಸಾರ ಮಾಡಿದೆ. ಈ ಮಸೀದಿಗಳನ್ನು ವಿಶ್ವದಾದ್ಯಂತ ಮುಸ್ಲಿಮರಿಗೆ ಮೂರು ಅತ್ಯಂತ ಪವಿತ್ರ ತಾಣವೆಂದು ಪರಿಗಣಿಸಲಾಗಿದೆ.

ಎಐಎಂಪಿಎಲ್‌ಬಿಯ ಪತ್ರವು ಸಿಎನ್ಎನ್-ನ್ಯೂಸ್ 18 ರ ನ್ಯೂಸ್ ಫ್ಲ್ಯಾಷ್ ಅನ್ನು ಚೇಷ್ಟೆಯೆಂದು, ಇಸ್ಲಾಂ ಧರ್ಮವನ್ನು ಕೆಣಕಲು ಮತ್ತು ಮುಸ್ಲಿಮರನ್ನು ಕೆರಳಿಸಲು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದೆ. ಜಗತ್ತಿನಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಂಬಲಾಗದಷ್ಟು ಕೋಮುಪ್ರಚೋದನೆಯ ಪ್ರಸಾರಕ್ಕಾಗಿ ಚಾನೆಲ್ ಇನ್ನೂ ಕ್ಷಮೆಯಾಚಿಸಿಲ್ಲ. ಇಸ್ಲಾಂ ಧರ್ಮದ ಮೂರು ಪವಿತ್ರ ತಾಣಗಳ ಚಿತ್ರಗಳನ್ನು ‘ಜೆಎಂ ಭಯೋತ್ಪಾದಕ ಅಂಶ’ ಎಂಬ ಶೀರ್ಷಿಕೆಯೊಂದಿಗೆ ಪ್ರಸಾರ ಮಾಡುವ ಮೂಲಕ, ಚಾನೆಲ್ ಮುಸ್ಲಿಮರನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲು ಪ್ರಯತ್ನಿಸಿದೆ.

ಒಟ್ಟಿನಲ್ಲಿ ಭಾರತದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಸುದ್ದಿ ಹರಡುವಲ್ಲಿ ನಿರತವಾಗಿವೆ. ಆ ಮೂಲಕ ಪತ್ರಿಕೋದ್ಯಮದ ಮೂಲ ಆಶಯಗಳನ್ನು ಮಣ್ಣು ಮಾಡುತ್ತಿವೆ. ಆದರೆ ಇದರ ವಿರುದ್ಧ ದೂರು ನೀಡುವ, ಸುಳ್ಳುಗಳನ್ನು ಬಯಲು ಮಾಡುವ ಕೆಲಸವೂ ಕೂಡ ನಡೆಯುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.

ಕೃಪೆ: ಜನತಕಾರಿಪೋರ್ಟರ್‌

(ಈ ಲೇಖನ 2019ರ ಮಾರ್ಚ್‌ 3 ರಂದು ಜನತಕಾರಿಪೋರ್ಟರ್‌ನಲ್ಲಿ ಪ್ರಕಟವಾಗಿದ್ದು. ಮಾಧ್ಯಮಗಳು ಹೇಗೆ ಸುಳ್ಳು ಹಬ್ಬಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿದ್ದರಿಂದ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ)


ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್‌ ಕಾರ್ಡ್‌ ಕನ್ನಡ: ಕ್ರಮ ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಭಾರತದ ದೇಶದಲ್ಲಿನ ಮಾಧ್ಯಮದ ಸೂ……ಮಕ್ಕಳು ಹೀಗೆ ಸುಮ್ಮನೆ ಸುಳ್ಳಿನ ಸುದ್ದಿ ಹರಡಿ ಭಾರತದ ದೇಶವನ್ನು ಛಿದ್ರ ಛಿದ್ರ ಛಿದ್ರವಾಗಿ ಮಾಡಿದರೆ……ಇದಕ್ಕೆ ಮೂಲ ಪುರುಷನೇ ನರೇಂದ್ರ ಮೋದಿ ಅವನು ಗೆಲ್ಲಲು ಮುಖ್ಯ ಕಾರಣ 2 ಜಿ ಸ್ಪ್ರೆಕ್ಟ್ರಂ ಅದು ನಮಗೆ ಮಹಾನಾಯಕ ಸುಳ್ಳು ಎಂದೂ ಅಂದೇ ಅದರ ಬಗ್ಗೆ ಲೇಖನವೇ ಬರೆದಿದ್ದೇ, ಒಬ್ಬ ಸಾಮಾನ್ಯ ದಲಿತ ನಾಯಕನು ಅಷ್ಟು ದೊಡ್ಡ ಹಗರಣವನ್ನು ಮಾಡಲು 1,76,000 ಲಕ್ಷ ಕೋಟಿ ರೂ ಹಗರಣವನ್ನು ಸಾಧ್ಯವಿಲ್ಲವೆಂದು, ಆ ಹಣವನ್ನು ಇಡಲೂ ಸಹ ದಾರಿ ಅರಿಯಲು ಸಾಧ್ಯವಿಲ್ಲವೆಂದು. ಜೊತೆಗೆ ಆತ ಹೊಸಬ ಬಡತನದಿಂದಲೀ ಕುಗ್ರಾಮದಿಂದಲೀ ಬಂದವನು. ಜೊತೆಗೆ ಹಾಗೆಯೇ ಕದ್ದದ್ದು ನಿಜವೇ ಆದರೇ, ತನ್ನ ಗ್ರಾಮದಲ್ಲಿ ಜಮೀನನ್ನು ಕೆಲವೇ ಕೆಲವರು ಬೆರಳೆಣಿಕೆಯಷ್ಟು ಆಸ್ತಿ ಮಾಡಲೇ ಬೇಕಿತ್ತು. ಹೋಗಲೀ ಅವನದು ಜೀವನ ಬಾಳ್ವೇ ಐದು ಪೈಸೆಯಾದರು ಬದಲಾಗಲೇಬೇಕಿತ್ತು. ಜೊತೆಗೆ ಅಗಾಧವಾದ ಜ್ಞಾನವು ಚತುರತೆಯೂ ಮೋಸವು ಗೊತ್ತಿರಬೇಕಿತ್ತು. ಹೋಗಲೀ ಮನ ಮೋಹನ್ ಸಿಂಗ್ ರವರನ್ನು ಹೆದರಿಯಿರಬೇಕಿತ್ತು. ಆದರೇ, ಪ್ರಧಾನಿಗೇ ಗೌರವಿಸದ ಅಹಂ ಇರಬೇಕಾದರೇ ಅದರಲ್ಲಿ ಸತ್ಯ ನ್ಯಾಯ ಧರ್ಮ ನೀತಿ ನಿಯಮ ಇತ್ತು. ಅದಕ್ಕೆ ಮೊದಲು ಸ್ವಾಭಿಮಾನ ಸ್ವಂತಿಕೆಯೇ ತುಂಬಿದ್ದೇ ಕಂಡಿದ್ದೇವು.

    ಬರೆಯಲು ಬಹಳಷ್ಟು ಇದೇ ಸದ್ಯಕ್ಕೆ ಬೇಡ ನಿಲ್ಲಿಸುವೇ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...