Homeಕರ್ನಾಟಕಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ...

ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

- Advertisement -
- Advertisement -

ಸೆಪ್ಟೆಂಬರ್ 6ರಂದು ಗದಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಅದು ನಿವೃತ್ತ ಶಾಲಾ ಶಿಕ್ಷಕರೊಬ್ಬರ ಸಾವಿಗೆ ಗೌರವ ಸಲ್ಲಿಸಲು ಜಿಲ್ಲಾಡಳಿತ ತೆಗೆದುಕೊಂಡ ಸಜ್ಜನಿಕೆಯ ಕ್ರಮವಾಗಿತ್ತು.

‘ಅಣ್ಣಿಗೇರಿ ಮಾಸ್ತರು’ ಎಂದೇ ಗದಗಿನಲ್ಲಿ ಜನಪ್ರಿಯರಾಗಿದ್ದ ಮತ್ತು ಗೌರವಯುತರಾಗಿದ್ದ ಬಸಪ್ಪ ಗುರಪ್ಪ ಅಣ್ಣಿಗೇರಿಯವರು ಸೆಪ್ಟೆಂಬರ್ 5ರಂದು ಶಿಕ್ಷಕ ದಿನಾಚರಣೆಯಂದೇ ನಿಧನರಾಗಿದ್ದು ಕಾಕತಾಳೀಯವೇ ಇರಬಹುದು. ಆದರೆ, ಗದಗಿನಲ್ಲಿ ಅವರೆಂದೂ ಮರೆಯದ ‘ಶಿಕ್ಷಣ ಸಂತ’ ಎಂಬ ಹೆಸರಿನಿಂದ ಸದಾ ಜೀವಂತವಾಗಿರಲಿದ್ದಾರೆ.

ಅವರು ಇಲ್ಲಿ ಸರ್ಕಾರಿ ಶಾಲೆಯ ಮಾಸ್ಟರ್ ಆಗಿದ್ದಾಗ ಆರಂಭಿಸಿದ ಉಚಿತ ಟ್ಯೂಷನ್ ತರಗತಿಗಳನ್ನು ತಮ್ಮ ಕೊನೆಯ ದಿನದವರೆಗೂ ನಡೆಸಿಕೊಂಡು ಬಂದರು. ಅವರ ವಿಶೇಷಾಸಕ್ತಿಯಿಂದ ಪಠ್ಯ ಮತ್ತು ಬದುಕಿನ ಅರಿವು ಪಡೆದ ಸಾವಿರಾರು ಶಿಷ್ಯರು ಇವತ್ತು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಗದಗ ಜಿಲ್ಲೆ ರೋಣ ತಾಲೂಕಿನ ಮುದೇನಗುಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಮಾಸ್ತರರು ಬಡತನದಲ್ಲೇ ಶಿಕ್ಷಣ ಪಡೆದು, ನಂತರ ಧಾರವಾಡದ ಮುರುಘಾಮಠದ ಹಾಸ್ಟೇಲ್ ಸೌಲಭ್ಯದ ಕಾರಣಕ್ಕಾಗಿ ಬಿ.ಎ ಪದವಿ ಮತ್ತು ಶಿಕ್ಷಕ ತರಬೇತಿ ವಿಷಯದಲ್ಲಿ ಪಾಸಾಗುತ್ತಾರೆ. ಗದಗಿನ ಮಾಡೆಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು, ತಮ್ಮ ಸಂಬಳದ ಹಣ ಉಳಿಸಿ ಮುಂಜಾನೆ ಮತ್ತು ಸಂಜೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತ ಬಂದರು. ಸಾಯುವವರೆಗೂ ಈ ಕಾಯಕ ಮುಂದುವರೆದೇ ಇತ್ತು.

‘ಅವ್ರ ಬಗ್ಗೆ ಏನ್ ಹೇಳೋದ್ ಬಿಡಿ. ಒಂಥರಾ ನಮಗೆಲ್ಲ ಅವ್ರು ದೇವರೇ’ ಎನ್ನುತ್ತಾರೆ ಅವರ ಬಳಿ ಗಣಿತ, ಇಂಗ್ಲಿಷ್ ಪಾಠಗಳನ್ನು ಕಲಿತ ಪಾಲಿಟೆಕ್ನಿಕ್ ಉಪನ್ಯಾಸಕ ವಕ್ಕಲದ. ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಫೀಕ್ ಕೆರೂರ್ ಹೇಳುತ್ತಾರೆ: ‘ಅವರು ಟ್ಯೂಷನ್ ಹೇಳ್ತಿದ್ದ ವಕಾರ ಜಾಗ ನಮ್ಮ ಮನೆಗೆ ದೂರ ಇದ್ದುದರಿಂದ ನಾನು ಕೇವಲ ಒಂದು ತಿಂಗಳು ಮಾತ್ರ ಅವರ ಹತ್ತಿರ ಮ್ಯಾಥ್ಸ್ ಕಲಿಯಲು ಸಾಧ್ಯವಾಯಿತು. ಆದರೆ, ಗದಗಿನ ಎರಡು-ಮೂರು ತಲೆಮಾರುಗಳ ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತ ಮತ್ತು ಇಂಗ್ಲಿಷ್ ಜ್ಞಾನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ….’

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯ ಹಿರಿಯ ಉದ್ಯೋಗಿ ಸತೀಶ್ ಕುರಿ, ಹುಬ್ಬಳ್ಳಿಯಲ್ಲಿ ವೈದ್ಯ ವೃತ್ತಿ ಮಾಡುವ ಪರಶುರಾಮ ಕಾಂಬಳೆ…. ಹೀಗೆ ಎಲ್ಲರೂ ಅವರು ಕಲಿಸಿದ ವಿಷಯ ಮತ್ತು ಅದಕ್ಕಿಂತ ಮುಖ್ಯವಾಗಿ ಬದುಕಿನ ಪಾಠಗಳನ್ನು ನೆನೆದು ಗದ್ಗದಿತರಾಗುತ್ತಾರೆ….

ಸಾಮಾನ್ಯ ಶಿಕ್ಷಕರೊಬ್ಬರು ಸಹಜ ಪಾಠ ಮತ್ತು ಜೀವನದ ಮೌಲ್ಯಗಳನ್ನು ನಿರಂತರವಾಗಿ ಕಲಿಸುವ ಮೂಲಕ ಅಸಾಮಾನ್ಯ ಬದುಕನ್ನು ಇಲ್ಲಿ ಸವೆಸಿ ಹೋಗಿದ್ದಾರೆ. ಹಿಂದಿನ ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ಅವರಂತೂ ಬಿ.ಜಿ. ಅಣ್ಣಿಗೇರಿಯವರನ್ನು ‘ಶಿಕ್ಷಣ ಸಂತ’ ಎಂದೇ ಕರೆಯುತ್ತಿದ್ದರು. ಮುಂದೆ ಅದೇ ಟೈಟಲ್ಲಿನಲ್ಲಿ ಅಣ್ಣಿಗೇರಿ ಅವರ ಶಿಷ್ಯವೃಂದ ಒಂದು ಅಭಿನಂದನಾ ಗ್ರಂಥವನ್ನು ಪ್ರಕಟಿಸಿತ್ತು. ಅಣ್ಣಿಗೇರಿ ಮಾಸ್ತರು ಹೆಸರಲ್ಲೇ ಅವರ ಕುರಿತಾಗಿಯೇ ಇನ್ನೂ ಮೂರು ಕೃತಿಗಳು ಬಂದಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಸಮಾಜ ಕಲಿಸುತ್ತಿದ್ದ ಅಣ್ಣಿಗೇರಿ ಮಾಸ್ತರು ಕ್ರಮೇಣ ಗಣಿತ ವಿಷಯ ಬೋಧನೆಗಾಗಿಯೇ ಗದಗಿನಲ್ಲಿ ಪ್ರಸಿದ್ಧರಾದುದದರ ಹಿಂದೆ ಒಂದು ರೋಚಕ ಅಂಶ ಇದೆ. ಅವರ ಶಿಷ್ಯನೊಬ್ಬ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಆತನಿಂದ ಹಲವು ತಿಂಗಳು ಕಾಲ ಸರಳ ಗಣಿತ ಕಲಿಕೆಯ ಬಗ್ಗೆ ಪಾಠ ಕಲಿತ ಅವರು, ಕ್ರಮೇಣ ಗದಿನಲ್ಲಿ ಜನಪ್ರಿಯ ಗಣಿತ ಶಿಕ್ಷಕರೆನಿಸಿದರು.
ವಕಾರು ಸಾಲಿನಲ್ಲಿ ಅವರು ಮೂರು ದಶಕಗಳಿಂದ ನಡೆಸುತ್ತ ಬಂದಿರುವ ಶಿಕ್ಷಣ ಆಶ್ರಮಕ್ಕೆ ‘ಗದಗಿನ ಶಾಂತಿನಿಕೇತನ’ ಎಂದೂ ಅವರ ಶಿಷ್ಯರು ಕರೆಯುತ್ತಾರೆ.

ಅವರ ಆಶ್ರಮ ಶಾಲೆಯ ಗೋಡೆಗಳ ಮೇಲಿರುವ ಕೆಲವು ಸಾಲುಗಳು:
‘ಸ್ವಾರ್ಥದಿಂದ ಕೂಡಿದುದು ಅನೈತಿಕ, ಸ್ವಾರ್ಥಶೂನ್ಯವಾದುದು ನೈತಿಕ…’
‘ಪೂರ್ಣತ್ಯಾಗವೇ ಪರಮಾದರ್ಶ, ನಿಸ್ವಾರ್ಥತೆಯೇ ದೇವರು….’
‘ಶಕ್ತಿಯೇ ಜೀವನ, ದುರ್ಬಲತೆಯೇ ಮರಣ…’

ಸಾವೇ ಇಲ್ಲದ ಇಂತಹ ‘ಮಾಸ್ತರು’ಗಳಿಗೆ ನಮ್ಮ ಕಡೆಯಿಂದ ಇದೊಂದು ಶ್ರದ್ಧಾಂಜಲಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...