Homeಚಳವಳಿಭಗತ್ ಸಿಂಗ್, ಗೌರಿ ಲಂಕೇಶ್ ವಿಚಾರಗಳು ಚಿರಂತನವಾಗಿರುತ್ತವೆ. : ಪ್ರೊ. ಜಗಮೋಹನ್ ಸಿಂಗ್

ಭಗತ್ ಸಿಂಗ್, ಗೌರಿ ಲಂಕೇಶ್ ವಿಚಾರಗಳು ಚಿರಂತನವಾಗಿರುತ್ತವೆ. : ಪ್ರೊ. ಜಗಮೋಹನ್ ಸಿಂಗ್

- Advertisement -
- Advertisement -

ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಜಗಮೋಹನ್ ಸಿಂಗ್, ಹುತಾತ್ಮ ಭಗತ್‍ಸಿಂಗ್‍ರ ಕುಟುಂಬಕ್ಕೆ ಸೇರಿದವರು. ಭಗತ್‍ಸಿಂಗರ ಚಿಂತನೆಗಳ ಪ್ರಸಾರಕ್ಕೆ ಬದ್ಧರಾಗಿದ್ದು, ಅವರ ಬಹುತೇಕ ಬರಹಗಳನ್ನು ಡಿಜಿಟೈಸ್ ಮಾಡಿದ್ದಾರೆ. ಪಂಜಾಬಿನ ಜಮೂರಿ ಅಧಿಕಾರಿ ಸಭಾ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು. ಜನಪರ ಚಳವಳಿಗಳ ಸಕ್ರಿಯ ಸಂಗಾತಿ ಪ್ರೊ.ಜಗಮೋಹನ್ ಸಿಂಗ್. ಈ ಲೇಖನವನ್ನು ಕನ್ನಡಕ್ಕೆ ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ.

ನಮಗಿಂದು ಅತ್ಯಂತ ಸವಾಲಿನ ಕಾಲ ಎದುರಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬರ್ಬರ ಬಲಪ್ರಯೋಗವೇ ಅತ್ಯಂತ ಮುಖ್ಯ ಎನಿಸಿರುವ ಕಾಲವಿದು – ಸರಕಾರಿ ವ್ಯವಸ್ಥೆಯಲ್ಲಿ ಇರುವವರಿಗೂ, ಭಕ್ತರಿಗೂ. ಆದರೆ, ಇದು ಹೊಸದಾಗಿ ಚಿಂತಿಸಿ, ಹೊಸ ಚಿಂತನೆಗಳ ಜೊತೆಯಲ್ಲಿ ಧೈರ್ಯದಿಂದ ನಿಲ್ಲುವ ಅವಕಾಶ ಮತ್ತು ಶಕ್ತಿ ನೀಡುವಂತಹ ಸವಾಲು ಕೂಡಾ ಹೌದು. ಆದರೆ, ನಮಗೆ ರಾಷ್ಟ್ರವಾದ ಮತ್ತು ದೇಶಪ್ರೇಮದ ನಡುವಿನ ವ್ಯತ್ಯಾಸ ತಿಳಿಯುವ ಮೂಲಭೂತ ವಿಷಯದ ಬಗ್ಗೆ ಸ್ಪಷ್ಟತೆ ಬೇಕು.

ಈಗ ಬೋಧಿಸಲಾಗುತ್ತಿರುವ ರಾಷ್ಟ್ರವಾದವು ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಪಶ್ಚಿಮದಿಂದ ಎರವಲು ಪಡೆದದ್ದಾಗಿದೆ. ಈ ಪರಿಕಲ್ಪನೆಯನ್ನು ಜಪಾನ್, ಸ್ಪೇನ್, ಇಟಲಿ ಮತ್ತು ಜರ್ಮನಿಯಲ್ಲಿ ಅಧಿಕಾರ ಕಬಳಿಕೆಯ ಉದ್ದೇಶದಿಂದ ಹರಡಲಾಗಿತ್ತು. ಆದುದರಿಂದ, ಅಧಿಕಾರವೇ ಅದರ ಮೂಲ ಉದ್ದೇಶ. ಅದಕ್ಕೆ ತನ್ನೆಲ್ಲಾ ವೈಫಲ್ಯ ಮತ್ತು ಕೆಡುಕಿಗೆ ಹೊಣೆಮಾಡಲು ಒಂದು ಶತ್ರುವನ್ನು ಹುಟ್ಟುಹಾಕುವ ಅಗತ್ಯವಿರುತ್ತದೆ. ಅದೇ ಹೊತ್ತಿಗೆ ದೇಶಪ್ರೇಮ ಎಂಬುದು ಸಾಮಾನ್ಯವಾಗಿ ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸುವುದರ ಮೇಲೆ ಕೇಂದ್ರಿತವಾಗಿದೆ. ರಾಷ್ಟ್ರವಾದದ ಪ್ರೇರಕಶಕ್ತಿ ಎಂದರೆ ದ್ವೇಷ ಮತ್ತು ದೇಶಪ್ರೇಮದ ಪ್ರೇರಕಶಕ್ತಿ ಪ್ರೇಮ.

ಜಾರ್ಜ್ ಆರ್ವೆಲ್ ಗುರುತಿಸಿರುವಂತೆ, “ಋಣಾತ್ಮಕ ರಾಷ್ಟ್ರವಾದಿಯು ಇತಿಹಾಸವನ್ನು ಮಹಾನ್ ಶಕ್ತಿ ಘಟಕಗಳ ಕೊನೆಯಿಲ್ಲದ ಉನ್ನತಿ ಮತ್ತು ಅವನತಿಯನ್ನಾಗಿ ನೋಡುತ್ತಾನೆ ಮತ್ತು ಪ್ರತಿಯೊಂದು ಘಟನೆಯು ಅವನಿಗೆ ತನ್ನ ಪಕ್ಷವು ಉತ್ಕೃಷ್ಟ ಮತ್ತು ಎದುರಾಳಿಯು ನಿಕೃಷ್ಟ ಎಂದು ತೋರಿಸುತ್ತದೆ… ತನ್ನ ಪಕ್ಷವನ್ನು ಆಯ್ಕೆ ಮಾಡಿದ ಬಳಿಕ ಅವನು ಅದುವೇ ಬಲಶಾಲಿ ಎಂದು ತನಗೆ ತಾನೇ ಮನವರಿಕೆ ಮಾಡಿಕೊಳ್ಳುತ್ತಾನೆ. ರಾಷ್ಟ್ರವಾದವು ಆತ್ಮವಂಚನೆಯಿಂದ ಬಲಗೊಂಡಂತಹ ಅಧಿಕಾರದಾಹವಾಗಿರುತ್ತದೆ. ರಾಷ್ಟ್ರವಾದಿಯು ವಾಸ್ತವಕ್ಕೆ ಕುರುಡಾಗಿರುತ್ತಾನೆ. ಆತ ತನ್ನ ಪಕ್ಷವು ನಡೆಸಿದ ದೌರ್ಜನ್ಯವನ್ನು ನಿರಾಕರಿಸುತ್ತಾನೆ ಮತ್ತು ಅದರ ಕುರಿತು ಏನನ್ನೂ ಕೇಳಿಸಿಕೊಳ್ಳದೆ ಕಿವುಡಾಗಿರುವಂತಹ ಅಸಾಧಾರಣ ಸಾಮರ್ಥ್ಯವನ್ನೂ ಹೊಂದಿರುತ್ತಾನೆ. ಗತಕಾಲದಲ್ಲಿ ನಡೆದಿರುವುದನ್ನು ಬದಲಿಸಬಹುದು ಎಂಬ ನಂಬಿಕೆ ಅಥವಾ ಭ್ರಮೆಯಿಂದ ಆತ ಪೀಡಿತನಾಗಿರುತ್ತಾನೆ. ಘಟನೆಗಳು ಅವು ನಡೆಯಬೇಕಾದ ರೀತಿಯಲ್ಲಿಯೇ ನಡೆಯುವ ಭ್ರಮಾಲೋಕದಲ್ಲಿ ಆತ ಬದುಕುತ್ತಿರುತ್ತಾನೆ.” ಇಂದಿನ ಇಂಥಾ ಪರಿಸ್ಥಿತಿಯು ಎಂತಹ ಸವಾಲುಗಳನ್ನು ನಮ್ಮ ಮುಂದೆ ಒಡ್ಡುತ್ತಿದೆ ಎಂಬುದನ್ನು ನಮಗೆ ಸ್ಪಷ್ಟಪಡಿಸುವಂತಹ ಕೆಲವು ರೋಗಲಕ್ಷಣಗಳಿವು.

ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ನೂರನೆಯ ವರ್ಷದಲ್ಲಿ ನಾವು ಕೆಲವು ವಿಷಯಗಳನ್ನು ಮರೆಯದಿರೋಣ. ಅವೆಂದರೆ, ಮೈಕೆಲ್ ಓ’ಡ್ವಾಯರ್ ಮತ್ತು ಜನರಲ್ ಡಯರ್ ಬ್ರಿಟಿಷ್ ರಾಷ್ಟ್ರವಾದಿಗಳಾಗಿ ಕಾರ್ಯಾಚರಿಸಿದ್ದರೆ, ಭಾರತೀಯ ದೇಶಪ್ರೇಮಿಗಳು ಎಲ್ಲಾ ಜಾತಿ, ಧರ್ಮಗಳವರಿಗೆ ತೆರೆದಿರುವಂತಹ ಸಾರ್ವಜನಿಕ ಅಡುಗೆಮನೆ (ಲಂಗರ್)ಯನ್ನು ನಡೆಸಿ, ಆಹಾರ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಯನ್ನು ನಿವಾರಿಸುವ ಮೂಲಕ ದೇಶಪ್ರೇಮವನ್ನು ಗಟ್ಟಿಗೊಳಿಸಲು ಯತ್ನಿಸಿದ್ದರು. ಆ ಮೂಲಕ ಹಿಂದೂ ಮುಸ್ಲಿಂ ಏಕತೆಯನ್ನು ಸಾಧಿಸಿದ್ದರು – ಎಲ್ಲಿಯತನಕ ಎಂದರೆ, ಏಪ್ರಿಲ್ 9ರಂದು ಬಂದಿದ್ದ ರಾಮನವಮಿಯನ್ನು ಹಿಂದೂ-ಮುಸ್ಲಿಮರು ಜೊತೆಯಲ್ಲಿ ಆಚರಿಸಿದ್ದರು. ರಾಮನವಮಿ ಮೆರವಣಿಗೆಯ ನೇತೃತ್ವ ವಹಿಸಿದ್ದವರು ಡಾ. ಬಶೀರ್. ಈ ರೀತಿಯ ಒಗ್ಗಟ್ಟು ಬ್ರಿಟಿಷ್ ಆಡಳಿತಗಾರರಿಗೆ 1857ನ್ನು ನೆನಪಿಸಿತ್ತು ಮತ್ತು ಅದಕ್ಕಾಗಿಯೇ ಅವರು ಅಷ್ಟೊಂದು ಕ್ರೂರವಾಗಿ ವರ್ತಿಸಿದರು.

ಶಹೀದ್ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತರು 1929ರ ಡಿಸೆಂಬರ್‍ನಲ್ಲಿ ‘ಮಾಡರ್ನ್ ರಿವ್ಯೂ’ ಪತ್ರಿಕಾ ಸಂಪಾದಕರಿಗೆ ಬರೆದ ಪತ್ರದಲ್ಲಿ ಏನು ಹೇಳಿದ್ದರೆಂದು ನೆನಪಿಸಿಕೊಳ್ಳೋಣ.

“ಕ್ರಾಂತಿ…ಒಂದು ಚೈತನ್ಯ, ಒಳ್ಳೆಯದರತ್ತ ಬದಲಾವಣೆಯ ತುಡಿತ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಂಡುಬಿಡುತ್ತಾರೆ ಮತ್ತು ಬದಲಾವಣೆಯ ಕಲ್ಪನೆ ಮಾತ್ರಕ್ಕೇ ನಡುಗಲಾರಂಭಿಸುತ್ತಾರೆ. ಈ ಜಡಚೇತನವನ್ನೇ ಕ್ರಾಂತಿಕಾರಿ ಚೈತನ್ಯದಿಂದ ಬದಲಿಸಬೇಕಾಗಿರುವುದು. ಇಲ್ಲವಾದಲ್ಲಿ ಈ ಅವನತಿಯು ಮೇಲುಗೈ ಪಡೆಯುತ್ತದೆ ಮತ್ತು ಇಡೀ ಮಾನವೀಯತೆಯನ್ನೇ ಪ್ರತಿಗಾಮಿ ಶಕ್ತಿಗಳು ಅಡ್ಡದಾರಿಗೆಳೆಯುತ್ತವೆ. ಇಂತಹ ಪರಿಸ್ಥಿತಿಯು ಸ್ಥಗಿತತೆಗೆ ದಾರಿಮಾಡಿಕೊಟ್ಟು, ಮಾನವ ಪ್ರಗತಿಗೇ ಲಕ್ವಾ ಹೊಡೆದಂತಾಗುತ್ತದೆ. ಕ್ರಾಂತಿಕಾರಿ ಚೈತನ್ಯವು ಯಾವತ್ತೂ ಮಾನವೀಯ ಆತ್ಮವನ್ನು ಉನ್ನತಿಗೊಳಿಸಬೇಕು. ಈ ನಿರಂತರ ಚೈತನ್ಯ ಯಾತ್ರೆಯನ್ನು ತಡೆಯಲಿಕ್ಕಾಗಿ ಪ್ರತಿಗಾಮಿ ಶಕ್ತಿಗಳು ತಮ್ಮ ಶಕ್ತಿ ಸಂಚಯ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಹಳೆಯ ವ್ಯವಸ್ಥೆ ಯಾವತ್ತೂ ನಿರಂತರವಾಗಿ ಬದಲಾಗುತ್ತಾ ಹೊಸದಕ್ಕೆ ಜಾಗಮಾಡಿಕೊಡಬೇಕು. ಒಂದು ‘ಒಳ್ಳೆಯ’ ವ್ಯವಸ್ಥೆ ಪ್ರಪಂಚವನ್ನು ಭ್ರಷ್ಟಗೊಳಿಸದಂತೆ ತಡೆಯಲು ಈ ಚೈತನ್ಯ ಅತ್ಯಗತ್ಯ. ಈ ದೃಷ್ಟಿಯಿಂದಲೇ ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಹಾಕುತ್ತೇವೆ.

ಈ ಚೈತನ್ಯವನ್ನೇ ನಮ್ಮ ಪ್ರೀತಿಯ ಗೌರಿ ಲಂಕೇಶ್ ಪ್ರೇರೇಪಿಸುತ್ತಿದ್ದುದು. ಭಗತ್ ಸಿಂಗ್ ಹೇಳಿದಂತೆ, ಅವರು ವ್ಯಕ್ತಿಯನ್ನು ಕೊಲ್ಲಬಹುದು; ಆದರೆ ವಿಚಾರಗಳು ಚಿರಂತನವಾಗಿರುತ್ತವೆ.

ಕ್ರಾಂತಿಕಾರಿ ವಿಚಾರಗಳ ಮೂಲಕ ಯುವಜನರು ಮತ್ತು ಜನಸಾಮಾನ್ಯರನ್ನು ಸಶಕ್ತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭಗತ್ ಸಿಂಗ್ ಅವರ ಈ ಮಾತುಗಳು ನಮಗೆ ದಾರಿ ತೋರಿಸಲಿ.

“ನಾಯಕರು ಲೋಕೋಪಕಾರಿ ಕಾರ್ಯಗಳನ್ನು ಮಾಡಬಹುದು. ಆದರೆ, ಅದು ಸಾಮಾಜಿಕ ಬದಲಾವಣೆಯನ್ನು ತರುವುದಿಲ್ಲ. ಸಾಮಾಜಿಕ ಬದಲಾವಣೆಗೆ ವೈಜ್ಞಾನಿಕತೆ ಕೇಂದ್ರಿತವಾದ, ಸಾಮಾಜಿಕವಾಗಿ ಚಲನಶೀಲವಾದ ಶಕ್ತಿಯನ್ನು ಹುಟ್ಟುಹಾಕುವ ಅಗತ್ಯವಿದೆ”. ಇದು ನಮ್ಮ ಮುಂದಿರುವ ಹಾದಿ. ಒಂದು ಚಾರಿತ್ರಿಕ ಕಾಲಘಟ್ಟದ ಜನರ ಅಗತ್ಯಗಳಿಗೆ ಪೂರಕವಾದ ಮಾನವ ಪ್ರಗತಿಯನ್ನು ವಿಚ್ಛಿದ್ರಕಾರಿ ಶಕ್ತಿಗಳು ವಿಳಂಬಿಸಬಹುದು; ಆದರೆ, ಮಾನವ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದುದರಿಂದ ನಾವು ದೃಢವಾಗಿ ಮುಂದುವರಿಯೋಣ ಮತ್ತು ನಮ್ಮ ವಿಚಾರಗಳಲ್ಲಿ ಸ್ಪಷ್ಟತೆ ತಂದುಕೊಳ್ಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...