Homeಮುಖಪುಟನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

- Advertisement -
- Advertisement -

ಜೀವನ ಕಲೆಗಳು ಅಂಕಣ: 8  ಅನುಭೂತಿ (Empathy) -2

ಅನುಭೂತಿ ಎನ್ನುವುದು ಕೇವಲದುಃಖ ಅಥವಾ ಸಂತೋಷದ ಕ್ಷಣಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಷ್ಟೇ ಅಲ್ಲ, ಇದು ದೈನಂದಿನ ಕಲೆ. ಇದು ಮನೆ, ಶಾಲೆ/ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಯಾವಾಗಲೂ ಕಾಣುವಂತಾಗಬೇಕು. ನಿಮ್ಮ ಕೆಲಸ/ಕಲಿಕೆಯ ಸ್ಥಳದಲ್ಲಿ ಅನುಭೂತಿ ಕಾಣುತ್ತಿದೆಯೇ? ಅನುಭೂತಿಯ ವಾತಾವರಣದ ಕೊರತೆಯಿಂದಾಗಿ ಇರುವ ಜನರು ದೂರವಾಗುತ್ತಿದ್ದಾರೆಯೇ? ಶಾಲೆ/ಕಾಲೇಜು/ಕಚೇರಿಯಲ್ಲಿ ಒಬ್ಬರನ್ನೊಬ್ಬರು ಅವರ ಮೊದಲನೇ ಹೆಸರಿನಿಂದ ಸಂಬೋಧಿಸುತ್ತಾರೋ, ಅಡ್ಡನಾಮದಿಂದಲೋ, ಅವರ ಹುದ್ದೆಯಿಂದ ಕರೆಯುತ್ತಾರೋ, ಅವರಿಗೆ ಸ್ವಭಾವಕ್ಕನುಗುಣವಾಗಿ ಇಟ್ಟಿರುವ ಅನ್ವರ್ಥನಾಮದಿಂದಲೋ, ಯೋಚಿಸಿ ನೋಡಿ.

ಶಾಲೆ/ಕಾಲೇಜು/ಕಚೇರಿಗಳಲ್ಲಿ ಅನುಭೂತಿಯನ್ನು ವ್ಯವಸ್ಥಾಪಕ ಮಂಡಳಿಯ ಆದೇಶದಿಂದಾಗಲೀ, ಸರಕಾರದ ಒಂದು ಸುತ್ತೋಲೆಯಿಂದಾಗಲೀ ಸೃಷ್ಟಿಸಲಾಗುವುದಿಲ್ಲ. ಅನುಭೂತಿ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಬರುವುದಿಲ್ಲ. ಇದನ್ನು ಅಲ್ಲಿಯ ಸಹಪಾಠಿ/ಸಹೋದ್ಯೋಗಿಗಳೇ ಸೇರಿ ನಿರ್ಮಿಸಬೇಕು. ಪ್ರತಿಯೋರ್ವರೂ ವೈಯುಕ್ತಿಕ ಮಟ್ಟದಲ್ಲಿ ಅನುಭೂತಿಯನ್ನು ತೋರಿಸಿದ್ದೇ ಆದರೆ ಕೆಲಸದ ವಾತಾವರಣ ಮಾರನೆಯ ದಿನದಿಂದಲೇ ಬದಲಾಗಲು ಪ್ರಾರಂಭವಾಗುತ್ತದೆ.

“ಬಿಸಿನೆಸ್ ಸಾಲ್ವರ್ಸ್” 2017ರ ವರದಿಯ ಪ್ರಕಾರ ಅನುಭೂತಿ ಕೆಲಸಗಾರರ ಉತ್ಪಾದನಾ ಸಾಮರ್ಥ್ಯ, ಕರ್ತವ್ಯ ಹಾಗೂ ಕಂಪನಿಯ ಪರವಾಗಿ ಅವರ ನಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದೆ. ವರದಿಯ ಪ್ರಕಾರ:

ಅನುಭೂತಿಯ ವಾತಾವರಣ ಇರುವಂತಹ ಕಚೇರಿಯಲ್ಲಿ 77% ಕೆಲಸಗಾರರು ಹಣದ ಆಮಿಶ (ಓವರ್ ಟೈಂ) ಇಲ್ಲದೆ ಹೆಚ್ಚಿನ ಸಮಯ ಕೆಲಸಕ್ಕೆ ನೀಡಲು ಸಿದ್ಧರಾಗಿದ್ದರು. 60% ಕೆಲಸಗಾರರು ಕಂಪನಿಯ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದಲ್ಲಿ ಸಂಬಳ ಕಡಿತಕ್ಕೂ ಸಿದ್ಧರಾಗಿದ್ದರು. ಸಂದರ್ಶಿಸಿದ 92% ಮಾನವ ಸಂಪನ್ಮೂಲ ಅಧಿಕಾರಿಗಳು ಅನುಭೂತಿಯ ವಾತಾವರಣ ತಮ್ಮ ಕಂಪನಿಯ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ದೊಡ್ಡ ಕಾರಣ ಎಂದರು. 1980ರಿಂದ 1995ರವರೆಗೆ ಹುಟ್ಟಿದ 80% ಯುವಕರು ತಮ್ಮ ಕಚೇರಿಯಲ್ಲಿ ಅನುಭೂತಿಯ ವಾತಾವರಣವಿಲ್ಲದಿದ್ದರೆ ಕೆಲಸ ಬಿಡುವುದಾಗಿ ಹೇಳಿದರು. ನಿವೃತ್ತಿಯ ಅಂಚಿನಲ್ಲಿರುವ 66% ಜನರೂ ಕೂಡ ಇದೇ ಪ್ರತಿಕ್ರಿಯೆ ನೀಡಿದರು.

ಕಚೇರಿಯಲ್ಲಿ ಅನುಭೂತಿ ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅನುಭೂತಿಯ ವಾತಾವರಣವನ್ನು ಅಳೆಯಲು ಸುಲಭವಾದ ಮಾಪಕಯಂತ್ರಗಳಿಲ್ಲ. ಸರ್ವೇಕ್ಷಣೆ ಅಥವಾ ಮಾನವ ಸಂಪನ್ಮೂಲ ವಿಭಾಗದ ಕಾರ್ಯಾಗಾರ/ಪ್ರಶ್ನೆಪತ್ರಿಕೆಗಳಿಂದ ಸ್ವಲ್ಪ ಮಾಹಿತಿ ಸಿಗಬಹುದು ಆದರೆ ಹಲವು ಮುಖ್ಯ ಅಂಶಗಳು ಅಳೆಯಲು ಕೈಗೆ ಸಿಗುವುದಿಲ್ಲ.

ಕೆಳಗಿನ ಕಲೆಗಳು ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ನಡುವಣ ಸಂಬಂಧ ಹೆಚ್ಚಿಸಲು ಸಹಾಯಕವಾಗಬಹುದು.

1. ಕೇಳಿಸಿಕೊಳ್ಳುವ ಕಲೆಯನ್ನು ಬಲಪಡಿಸಿಕೊಳ್ಳಿ: ನಿಮ್ಮ ಸಹೋದ್ಯೋಗಿ/ಸಹಪಾಠಿ ಏನಾದರೂ ಹೇಳಲು ಬಯಸಿದಲ್ಲಿ ನೀವು ನಿಜವಾಗಿಯೂ ಅವರು ಹೇಳಿದ್ದನ್ನು ಕೇವಲ ಆಲಿಸುತ್ತಿದ್ದೀರೋ ಅಥವಾ ಗಮನವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದೀರೋ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇದು ಕೇವಲ ಆಡುವ ಮಾತಿಗೆ/ದೂರಧ್ವನಿ ಸಂಭಾಷಣೆಗೆ ಸೀಮಿತವಾಗಿಲ್ಲ, ಕಚೇರಿಯ ಎಸ್.ಎಂ.ಎಸ್./ಎ-ಮೇಲ್, ವಾಟ್ಸಾಪ್ ವೈಯುಕ್ತಿಕ/ಗುಂಪು ಸಂದೇಶಗಳೂ ಇದರಲ್ಲಿ ಸೇರಿವೆ.

2. ಸರಿಯಾದ ಪ್ರಶ್ನೆ ಕೇಳುವ ಕಲೆ ವೃದ್ಧಿಸಿಕೊಳ್ಳಿ: ಇದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಯ ನಿಜವಾದ ಸಮಸ್ಯೆ ಏನು ಎಂಬುದು ತಿಳಿಯುತ್ತದೆ. ನೀಡಿದ ಉತ್ತರ ಅಥವಾ ಅವರು ಕೇಳಿದ ಪ್ರಶ್ನೆ ನಿಮಗೆ ಅರ್ಥವಾಗದಿದ್ದಲ್ಲಿ ಅದನ್ನು ಬಿಡಿಸಿ ಹೇಳುವಂತೆ ತಿಳಿಸಿ.

3. ಅವರ ಸ್ಥಳದಲ್ಲಿ ನೀವಿದ್ದರೆ ನಿಮಗೆ ಏನನಿಸುತ್ತಿತ್ತು ಯೋಚಿಸಿ: ಇನ್ನೊಬ್ಬರ ಕಷ್ಟ ಅರಿತುಕೊಳ್ಳುವ ಪ್ರಯತ್ನ ನೀವು ಮಾಡಿತ್ತಿದ್ದೀರೆಂಬ ಸಂದೇಶ ಅವರಿಗೆ ಕೂಡಲೇ ರವಾನಿಸಿ. ಅವರನ್ನು ನೇರ ಮಾತುಕತೆಗೆ ಕರೆಯಿರಿ, ಸಮಯ ಸ್ಥಳ ನಿರ್ಧರಿಸಿ. ಮುಖಾಮುಖಿಯಾಗುವುದರಿಂದ ಹಲವು ಪ್ರಶ್ನೆಗಳು ತಾವಾಗಿಯೇ ಉತ್ತರಿಸಲ್ಪಡುತ್ತವೆ.

4. ಸಹೋದ್ಯೋಗಿ/ಸಹಪಾಠಿಗಳ ಬಗ್ಗೆ ಒಮ್ಮೆಲೇ ನಿಮ್ಮ ಉಹಾಪೋಹದ ನಿರ್ಧಾರಕ್ಕೆ ಬರಬೇಡಿ: ಹೇಳಿದ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ತಿಳಿದಾಗ ಅವರಿಗೆ ಇನ್ಯಾವ ತೊಂದರೆ ಇದೆ ತಿಳಿದುಕೊಳ್ಳಲು ಪ್ರಯತ್ನಿಸಿ.

5. ಸಮಸ್ಯೆಗಳನ್ನು ಬಗೆಹರಿಸುವಾಗ ಆದ್ಯತೆಯ ಮೇಲೆ ಗಮನ ಕೊಡಿ: ಎಲ್ಲಾ ಸಮಸ್ಯೆಗಳಿಗೂ ಒಂದೇ ಸಮನಾದ ತುರ್ತು ಇರುವುದಿಲ್ಲ. ಮೊದಲು ಬಂದ ಸಮಸ್ಯೆಗೆ ಮೊದಲು ಪರಿಹಾರ ಎನ್ನುವುದೂ ಸರಿಯಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ಅದರ ಪರಿಹಾರಕ್ಕೆ ಗಮನ/ಸಮಯ ನೀಡಿ.

6. ನಿಮ್ಮ ಸಹೋದ್ಯೋಗಿ/ಸಹಪಾಠಿಗಳನ್ನು ದೂರವಿಡಬೇಡಿ: ಆದರೆ ತೀರಾ ಸನಿಹತೆಯ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ವೈಯುಕ್ತಿಕ, ಕುಟುಂಬದ ಮಾಹಿತಿ ಇರಲಿ ಆದರೆ ನೀವು ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದೀರಿಎಂಬ ಭಾವನೆ ಅವರಿಗೆ ಬರದಿರಲಿ. ಅವರ ಇ-ಮೇಲ್ ಸಂದೇಶಕ್ಕೆ ಉತ್ತರಿಸುವಾಗ ಅವರ ಹೆಸರನ್ನು ಬಳಸಿ, ಅವರ ವಿಭಾಗದ ಹೆಸರಿಗೆ ಉತ್ತರಿಸಬೇಡಿ. ಕಚೇರಿಯಲ್ಲೂ ವೈಯುಕ್ತಿಕ ಮತ್ತು ಸಾಂಸ್ಥಿಕ ವಿಷಯಗಳನ್ನು ಬೆರೆಸಬೇಡಿ.

7. ವ್ಯಕ್ತಿಗಳಿಗೆ ಭಾವನೆಗಳಿರುತ್ತವೆ: ಕಂಪನಿಯ ಟಾರ್ಗೆಟ್, ಡೆಡ್ಲೈನ್, ಲಾಭ-ನಷ್ಟದ ಒತ್ತಡದಲ್ಲಿ ಮುಖ್ಯವಾಗಿ ತಂಡದ ಜನರಿಗೆ ಭಾವನೆಗಳಿರುತ್ತವೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ಮೇಲಿನ ಕಟು ಟಿಪ್ಪಣಿಗಳನ್ನು ಮೃದುವಾಗಿರಿಸಿ.

8. ಕೆಲವೊಮ್ಮೆ ತಲೆಯ ಬದಲಿಗೆ ಹೃದಯ ಉಪಯೋಗಿಸಿ: ಇಂಗ್ಲಿಷಿನಲ್ಲಿ ಇದನ್ನು “ಥಿಂಕ್ ವಿತ್ ಯುವರ್ ಹಾರ್ಟ್” ಎನ್ನುತ್ತಾರೆ.

9. ನಿಮ್ಮ ಸ್ವಂತ ಪೂರ್ವಾಗ್ರಹ: ನಿಮ್ಮ ಸಾಂಸ್ಕೃತಿಕ ಪಕ್ಷಪಾತವೇನಾದರೂ ಅನುಭೂತಿಗೆ ಅಡ್ಡ ಬರುತ್ತಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ಸಹೋದ್ಯೋಗಿಗಳಿಂದ ಪ್ರತ್ಯಾದಾನ: ಫೀಡ್-ಬ್ಯಾಕ್ ಸ್ವೀಕರಿಸಿ. ಕೆಲವು ನೇರವಾಗಿ ಬರದಿರಬಹುದು, ಅಪ್ರತ್ಯಕ್ಷವಾಗಿ ಬಂದ ಟೀಕೆ ಟಿಪ್ಪಣಿಗಳನ್ನೂ ಗುರುತುಹಾಕಿಕೊಳ್ಳಿ. ಅದೇ ರೀತಿ ನೀವು ನೀಡಿದ ಫೀಡ್-ಬ್ಯಾಕ್/ಟೀಕೆ/ಟಿಪ್ಪಣಿ ಹೇಗೆ ಕೆಲಸ ಮಾಡುತ್ತಿದೆ ಅದನ್ನೂ ತಿಳಿದುಕೊಳ್ಳಿ

11. ಸ್ಥಳ ಬದಲಾಯಿಸಿ: ಸಹೋದ್ಯೋಗಿ/ಸಹಪಾಠಿಗಳೊಂದಿಗೆ ಕಚೇರಿಯಿಂದ ಹೊರಗೆ ಪ್ರವಾಸಕ್ಕೆ ಹೋಗಿ. ಅವರನ್ನು ಅರಿತುಕೊಳ್ಳಲು ಸಮಯ ಮತ್ತು ಅವಕಾಶ ದೊರೆಯುತ್ತದೆ.

12. ಅನುಭೂತಿ ಒಂದು ರಾತ್ರಿಯಲ್ಲಿ ಆಗುವ ಬದಲಾವಣೆ ಅಲ್ಲ: ಇದು ನೂರಡಿಯ ವೇಗದ ಓಟವಲ್ಲ, 26 ಮೈಲಿಯ ಮ್ಯಾರಥಾನ್. ಒಬ್ಬ ವ್ಯಕ್ತಿ ಅಥವಾ ಒಂದು ಪರಿಸ್ಥಿತಿಯಲ್ಲಿ ಆದ ಕಹಿ ನೆನಪಿನಿಂದ ನಿಮ್ಮ ಮುಂದಿನ ಕೆಲಸ ಕೆಡದಂತೆ ಜಾಗೃತೆ ವಹಿಸಿ.

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...